ವಿಪರ್ಯಾಸ
ಕವಿತೆ ವಿಪರ್ಯಾಸ ಸಂಗಮೇಶ್ವರ ಶಿ.ಕುಲಕರ್ಣಿ ಜಗವ ಗೆಲ್ಲಲು ದಾಳಿಯಿಟ್ಟುನೆರೆಯ ರಾಜ್ಯದಲಿ ನೆತ್ತರದ ನದಿಹರಿಸುವ ಚಕ್ರವರ್ತಿಯಸಾಮ್ರಾಜ್ಯದ ನಡುನಾಡ ಜನರುಹಸಿವಿನಿಂದ ಸಾಯುವರು! ನೆಲಕೇ ಗೊತ್ತಾಗದಂತೆ ನೇಗಿಲಸರಿಸಿ, ಮ್ಯಾರಿ ಹಿಗ್ಗಿಸಿಮತ್ತೊಬ್ಬನ ಹೊಲ ಆಕ್ರಮಿಸುವರೈತನೊಬ್ಬನ ನಡುಹೊಲವೆಬೀಳುಬಿದ್ದು ಬೋಳಾಗುವುದು! ಕಚ್ಚೆ ಬಿಚ್ಚಿದ ಹುಂಬನಂತೆಕಂಡ ಹೆಣ್ಣುಗಳ ಕಾಮಿಸುವಚಪಲ ಗಂಡಸಿನ ಮನೆಗೆಅವನಿಗೇ ತಿಳಿಯದೆ ಅದೆಷ್ಟೋಗಂಡಸರು ರಾತ್ರಿ ದಾಳಿಯಿಡುವರು! ತೂಕದಲ್ಲಿ, ಲೆಕ್ಕದಲ್ಲಿ ಮತ್ಯಾವುದೊಮೋಸದ ಹಾದಿಯಲ್ಲಿ ಕೋಟಿ ಗಳಿಸಿಮಹಲು ಕಟ್ಟಿ ಮೆರೆದ ಶೇಟುಬೀಪಿ, ಶುಗರಿಗೆ ಬಂಧುವಾಗಿ, ಇದ್ದೊಬ್ಬಇಪ್ಪತ್ತೊಂದರ ಮಗನ ಸಾವು ನೋಡುವನು! ನಿನ್ನದಲ್ಲದ ದೇಹದ ದಾಹಕೆಮನ ಬಯಸುವ ಮೋಹಕೆ ಸೋತುಮಾನವ ನೀನು ರಕ್ಕಸನಾಗಬೇಡವೆಂದುಬೋಧಿಸಿದ ಸನ್ಯಾಸಿ ಇಪ್ಪತ್ತು ಲಕ್ಷದ ಕಾರುಕೊಂಡು, ಸುಂದರ ಶಿಷ್ಯೆಯ ಕುಳ್ಳಿರಿಸುವನು! ನುಡಿವ ಮಾತೊಂದುನಡೆವ ಹಾದಿ ಮತ್ತೊಂದು,ತಾನೇ ಹೆಣೆದಮರಾಮೋಸದ ಮಾಯಾಜಾಲದಲಿಬಿದ್ದವರು ಯಾರೋ…ಗೆದ್ದವರು ಯಾರೋ… ತಮ್ಮ ಬೆನ್ನು ತಾವುಕಾಣದವರ ಹುಣ್ಣು ****





