ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನನ್ನ ಸಖಿಯರಿಗೆ…

ಕವಿತೆ ನನ್ನ ಸಖಿಯರಿಗೆ… ಸುರೇಖಾ. ಜಿ.ರಾಠೋಡ. ರಾವಣನನ್ನು ಪ್ರೀತಿಸಲೇ,ಇಲ್ಲಾ ರಾಮನನ್ನು ದ್ವೇಷಿಸಲೇ? ರಾವಣನು ಸೀತೆಯಒಪ್ಪಿಗೆಯಿಲ್ಲದೆ ಅವಳನ್ನುಮುಟ್ಟದಿರವ ಹಠ ತೊಟ್ಟನೋ? ರಾಮನು ಸೀತೆಯನ್ನುಒಪ್ಪಿಕೊಳ್ಳಲು ಅವಳನ್ನುಅಗ್ನಿ ಪರೀಕ್ಷೆಗೆ ಒಳಪಡಿಸಲು ಹಠ ತೊಟ್ಟನೋ? ಹಠ ತೊಟ್ಟ ಈರ್ವರುರಾಜರಲ್ಲಿ ಯಾರನ್ನು ನಾಯುಗ ಪುರುಷ,ಆದರ್ಶಪುರುಷನೆಂದು ಹೇಳಲಿ??ನನ್ನ ಸಖಿಯರಿಗೆ…..! ರಾಮ ಲಕ್ಷ್ಮಣರ ಮುಂದೆಶೂರ್ಪನಖೀಯು ತನ್ನಪ್ರೇಮ ನಿವೇದನೆಯನ್ನುಇಟ್ಟಾಗ, ಪ್ರೇಮದ ಬದಲಿಗೆದಂಡಿಸುವ ರೂಪದಲ್ಲಿಅವಳ ಮೂಗನ್ನು ಕತ್ತರಿಸಿದರು..! ತಮ್ಮ ಪೌರಷತ್ವವನ್ನುತೋರಿಸಿ, ಹೆಣ್ಣನ್ನುಅವಮಾನ, ಅಪಮಾನಗೊಳಿಸಿದಇವರನ್ನು ವೀರರೆಂದು ಕಥೆಹೇಳಲೇ ನನ್ನ ಸಖಿಯರಿಗೆ…!**************************************************

ನನ್ನ ಸಖಿಯರಿಗೆ… Read Post »

ಕಾವ್ಯಯಾನ

ನಿನ್ನೊಲವು

ಕವಿತೆ ನಿನ್ನೊಲವು ಭಾರತಿ ರವೀಂದ್ರ ಒಂದೇ ಒಂದು ಸಾರಿನೀ ತಿರುಗಿ ನೋಡಬಾರದೇ…… ದೂರ ನೀ ಹೋದರೂನು ಕಾಯುತಿಹೆ ನಾ ನಿನಗಾಗಿಯೇದೇಹ ನಾನಾದ್ರೂ ಪ್ರಾಣ ನೀನುಎಂದೆಂದೂ ಪ್ರಾಣಸಖ ನೀನು ಕತ್ತಲೆ ತುಂಬಿದ ನನ್ನ ಬದುಕಿಗೆ ನಿನ್ನೊಲವೇ ತಂಬೆಳಕಾಗಿದೆಆ ಹುಣ್ಣಿಮೆಯ ಚಂದಿರನು ನೀನುನಿನಗಾಗಿ ಅರಳೋ ತಾವರೆಯು ನಾನು ಈ ಬಾಳ ಏಕಾಂಗಿ ಪಯಣದಿಕೈಯ ಹಿಡಿದು ಜೊತೆಯಾದೆಜನುಮ ಜನುಮದಿ ಜೊತೆಯುನೀನುನಿನ್ನನಗಲಿದರೆ ಉಳಿಯೇನು ನಾನು ನನ್ನ ನಿನ್ನೆ ಇಂದು ನಾಳೆಗಳಲ್ಲೂಬರೀ ನಿನದೇ ನೆನಪ ಹಾವಳಿನೆಪ ಮಾಡಿ ಬರುವ ನೆನಪು ನೀನುನೆನಪಿಗೋಸ್ಕರವಿರೋ ನೆಪವು ನಾನು *************************************

ನಿನ್ನೊಲವು Read Post »

ನಿಮ್ಮೊಂದಿಗೆ

ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು!

ಸಂಪಾದಕೀಯ ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು! ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಸ್ಥಾನದ  ಅಭ್ಯರ್ಥಿಗ ಳಿಗೊಂದಿಷ್ಟು ಪ್ರಶ್ನೆಗಳು!              ಇನ್ನು ಕೆಲವೆ ತಿಂಗಳುಗಳಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ  ಅದ್ಯಕ್ಷ ಸ್ಥಾನಕ್ಕೆ ತಾವುಗಳು ಆಕಾಂಕ್ಷಿಗಳಾಗಿದ್ದು, ಖಾಸಗಿಯಾಗಿ ತಮ್ಮ ಆಪ್ತವಲಯದ ಮೂಲಕ ಸದ್ದಿರದೆ ಪ್ರಚಾರ ಕಾರ್ಯವನ್ನೂ ಶುರು ಮಾಡಿರುತ್ತೀರಿ. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ  ಈ ನೆಲದಲ್ಲಿ ಇಂತಹ ಆಕಾಂಕ್ಷೆಗಳು- ಸಂಬಂಧಿಸಿದ ಪೂರ್ವ ಸಿದ್ದತೆಗಳು ಸಹಜವೇ ಸರಿ! ಈ ಬಗ್ಗೆ ನಮ್ಮ ತಕರಾರೆನಿಲ್ಲ. ಆದರೆ ಹಲವು ವರ್ಷಗಳಿಂದ ಈ ಚುನಾವಣೆಗಳು ಹೇಗೆ ನಡೆಯುತ್ತವೆ ಅಥವಾ ನಡೆಸಲ್ಪಡುತ್ತವೆ ಎಂಬುದನ್ನು ಕಂಡಿರುವ ನಮ್ಮಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿದ್ದು ತಾವು ಸದರಿ ಪ್ರಶ್ನೆಗಳಿಗೆ ಉತ್ತರಿಸುತ್ತೀರೆಂದು ನಂಬುತ್ತೇನೆ.ಕಸಾಪದ ಮತದಾರನಾಗಿ ಈ ಪ್ರಶ್ನೆಗಳನ್ನು ಕೇಳುವುದು ನಮ್ಮ ಹಕ್ಕಾಗಿದ್ದು-ಉತ್ತರಿಸುವುದು ನಿಮ್ಮ ಕರ್ತವ್ಯವೆಂದು ನಾನಂತೂ ನಂಬಿದ್ದೇನೆ 1.ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ವೆಚ್ಚ ಮಾಡುವ ಹಣದ ಮಿತಿಯೇನಾದರು ಇದೆಯೇ? 2.ಹೋಗಲಿ ನಾಮಪತ್ರ ಹಾಕುವ ಮುಂಚೆ ರಾಜಕಾರಣಿಗಳಂತೆ ತಮ್ಮ  ಸ್ಥಿರ-ಚರಾಸ್ತಿಗಳನ್ನು ತಾವುಗಳು ಘೋಷಿಸಿಕೊಳ್ಳಬೇಕೆಂಬ ನಿಯಮವಿದೆಯೇ? 3. ಹಾಗೊಂದು ನಿಯಮವಿರದಿದ್ದ ಪಕ್ಷದಲ್ಲಿ ತಾವು ಸ್ವಯಂಪ್ರೇರಿತರಾಗಿ ಘೋಷಿಸುವ ಮೂಲಕ  ಪಾರದರ್ಶಕತೆ ಮರೆಯಲು ಸಿದ್ದರಿದ್ದೀರಾ? 4. ಗೆದ್ದಮೇಲೆ ಲೋಕಾಯುಕ್ತಕ್ಕೂ ಆಸ್ತಿವಿವರ ಸಲ್ಲಿಸಬೇಕೇ? 5.ಇವ್ಯಾವು ಇಲ್ಲವೆಂದಾದರೆ ತಾವುಗಳು ಈ ವಿಚಾರದಲ್ಲಿ ಯಾರಿಗೆ ಹೊಣೆಗಾರರಾಗಿರುತ್ತೀರಿ? 6.ಇನ್ನು ಮತದಾರರ ಸಂಖ್ಯೆ ಕನಿಷ್ಠ ಒಂದು ಲಕ್ಷವಿದೆ ಎಂದುಕೊಂಡರೂ,ನೀವು ಅವರಿಗೆ ಪತ್ರ ಬರೆಯಲೇ ಸುಮಾರು ೫ ಲಕ್ಷ ರೂಪಾಯಿ ಬೇಕಾಗುತ್ತದೆ. ಅಷ್ಟು ಹಣವನ್ನು ಎಲ್ಲಿಂದ ತರುತ್ತೀರಿ? 7. ಪ್ರತಿತಾಲೂಕಿಗೂ ನಿಮ್ಮ ಕಾರಲ್ಲಿ ಬೇಟಿಕೊಡುವುದೇ ಆದಲ್ಲಿ ಕನಿಷ್ಠ  ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಬೇಕಾಗುತ್ತದೆ. ಈ ದುಡ್ಡಿಗೇನು ಮಾಡುತ್ತೀರಿ? 8.ಹೋಗಲಿ ಚುನಾವಣೆ ಖರ್ಚಿಗೆಂದು ನೀವುಗಳೇನಾದರು ಪಾರ್ಟಿಫಂಡ್ ರೀತಿಯಲ್ಲಿ ಹಣ ಸಂಗ್ರಹಿಸುತ್ತೀರಾ? 9.ಹಾಗೆ ಸಂಗ್ರಹಿಸಿದರೆ ಕೊಟ್ಟವರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತೀರಾ? 10.ಯಾವುದಾದರು ರಾಜಕೀಯ ಪಕ್ಷಗಳ ಬೆಂಬಲ ನಿಮಗೆ ಇದೆಯಾ? ಇದ್ದರೆ ಯಾವ ಪಕ್ಷ (ಯಾವ ಕಾರಣ) ವಿವರಿಸುತ್ತೀರಾ? 11.ಚುನಾವಣಾ ಪ್ರಚಾರದ ಸಮಯದಲ್ಲಿ ಯಾವುದೇ ಜಾತಿ-ಧರ್ಮದ ಮಠ,ಮಂದಿರ,ಮಸೀಧಿ, ಚರ್ಚುಗಳಿಗೆ  ಹೋಗಿ ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳುವುದಿಲ್ಲವೆಂದು ಬಹಿರಂಗವಾಗಿ ಹೇಳಲು ನಿಮಗೆ ಸಾದ್ಯವಿದೆಯೆ? 12.ಇಷ್ಟು ವರ್ಷಗಳ ಕಾಲ ಪುರುಷ ಪುಂಗವರೇ ಕಸಾಪದ ಅದ್ಯಕ್ಷರಾಗಿದ್ದು ಸಾಕು, ಈಗಲಾದರು ಮಹಿಳೆಯೊಬ್ಬರು ಆ ಸ್ಥಾನಕ್ಕೇರಲೆಂದು ನಿಮಗೀವರೆಗೂ ಅನಿಸಲಿಲ್ಲವಾ?ಅನಿಸಿದ್ದರೆ ಈ ದಿಸೆಯಲ್ಲಿ ನೀವೇನಾದರು ದನಿಯೆತ್ತಿದ್ದೀರಾ? 13. ಇಷ್ಟೆಲ್ಲಾ ಖರ್ಚು ಮಾಡಿ ಗೆದ್ದ ಮೇಲೆ ಕಳೆದುಕೊಂಡ ಹಣವನ್ನು ಮರಳಿ ಗಳಿಸಲು ಏನೆಲ್ಲಾ ಮಾಡುತ್ತೀರಿ?  ಕೊನೆಯ ಪ್ರಶ್ನೆಗೆ ಕ್ಷಮೆಯಿರಲಿ: ಯಾಕೆಂದರೆ ನೀವು ಚುನಾವಣೆಗೆ ಖರ್ಚು ಮಾಡುತ್ತಿರುವು ಕಡಲೆಬೀಜಗಳಲ್ಲ ಲಕ್ಷಲಕ್ಷ ರೂಪಾಯಿಗಳು! ಉತ್ತರ ಕೊಡಲೇ ಬೇಕೆಂಬ ಕಡ್ಡಾಯವೇನಿಲ್ಲ.  ಇಂತಹ ಪ್ರಶ್ನೆಗಳನ್ನು ರಾಜಕಾರಣಿಗಳಿಗೆ ಕೇಳಿಕೇಳಿ ನಮಗೆ ಅಭ್ಯಾಸವಾಗಿ ಹೋಗಿದೆ……..ಆದರೆ ಕನ್ನಡ ಸಾಹಿತ್ಯ ಪರಿಷತ್ತಿನಂತಹ  ಸಂಸ್ಥೆಗೆ ಕಾಲಿಡಲು ಹೊರಟಿರುವ ತಮಗೆ  ಈ ಪ್ರಸ್ನೆಗಳ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಕೊಳ್ಳುವ ಸೂಕ್ಷ್ಮತೆ ಇದೆಯೆಂದು ನಾವಂತೂ ನಂಬಿದ್ದೇವೆ ಇವೆಲ್ಲದರ ನಡುವೆಯೂ ಕನ್ನಡದ ಸೇವೆ ಮಾಡುವ  ತಮ್ಮ  ಉದ್ದೇಶಕ್ಕೆ ಶರಣು-ಶರಣು! ತಮ್ಮ ವಿಶ್ವಾಸಿಯಾದ ಕಸಾಪ ಮತದಾರ ******************************************** ಕು.ಸ.ಮಧುಸೂದನರಂಗೇನಹಳ್ಳಿ

ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು! Read Post »

ಕಾವ್ಯಯಾನ

ಗಜ಼ಲ್

ಗಜ಼ಲ್ ಎ . ಹೇಮಗಂಗಾ ‘ನಾನು , ನನ್ನದೆಂ’ದು ಎಷ್ಟು ಬಡಿದಾಡಿದರೂ ಸೇರಲೇಬೇಕು ಗೋರಿಯನ್ನು‘ನಾನೇ ಎಲ್ಲವೆಂ’ದು ಎಷ್ಟು ಸೆಣಸಾಡಿದರೂ ಸೇರಲೇಬೇಕು ಗೋರಿಯನ್ನು ನಿಲ್ಲದೇ ನಡೆದಿಹ ಬಾಳ ನಾಟಕದಿ ನೀನೂ ಬರಿಯ ಪಾತ್ರಧಾರಿಯಷ್ಟೆನಿರ್ಗಮಿಸುವ ಕ್ಷಣದಿ ಇರಬೇಕೆಂದರೂ ಸೇರಲೇಬೇಕು ಗೋರಿಯನ್ನು ಎಲ್ಲರನೂ ತನ್ನೊಳಗೆ ಮಣ್ಣಾಗಿಸುವ ಮಣ್ಣಿಗೆ ಭೇದ ಭಾವವೆಲ್ಲಿದೆಅಂತಕನಿಗೆ ಮಣಿದು ಅರಸನಾದರೂ ಸೇರಲೇಬೇಕು ಗೋರಿಯನ್ನು ಹಣ, ಪ್ರತಿಷ್ಠೆ ಯಾವುದೂ ಬರದು ನಿನ್ನೊಡನೆ ಮಸಣದಿ ಮಲಗಿರಲುಕೋಟೆ ಕಟ್ಟಿ ಅಧಿಕಾರದಿ ಮೆರೆದರೂ ಸೇರಲೇಬೇಕು ಗೋರಿಯನ್ನು ಮೂರು ದಿನದ ಬಾಳಿನಾಟದಿ ಎಲ್ಲಕೂ ಕೊನೆಯೊಂದಿದೆ ಹೇಮಚಿರಂಜೀವಿ ನೀನೆಂದು ಭ್ರಮಿಸಿದರೂ ಸೇರಲೇಬೇಕು ಗೋರಿಯನ್ನು *******************************************

ಗಜ಼ಲ್ Read Post »

ಕಾವ್ಯಯಾನ

ಹೆಜ್ಜೆಗಳ ಸದ್ದು

ಕವಿತೆ ಹೆಜ್ಜೆಗಳ ಸದ್ದು ವೀಣಾ ರಮೇಶ್ ನೀಬರುವ ದಾರಿಯಲಿ ಹೆಜ್ಜೆಗಳ ಸದ್ದುನನ್ನೆದೆಯ ರಂಗಮಂದಿರದಲ್ಲಿಗೆಜ್ಜೆ ಕಾಲ್ಗಳ ಸದ್ದು ಕುಣಿದು ಬಿಡು ಇನ್ನಷ್ಟುನನ್ನ ಭಾವನೆಗಳುಹುಚ್ಚೆದ್ದು ಕುಣಿಯಲಿಸಾಲು ಸಾಲು ಗೆಜ್ಜೆಗಳಲಿಸಾಲು ಸಾಲು ನೆನಪುಗಳು ನೀ ಇಡುವ ಗಗ್ಗರದಲಿಗಿರಕಿಯಾಡುವ ನನ್ನ ಕನಸುಗಳುಗುಂಗುರುಗಳ ನಡುವೆಉಂಗುರ ಅಪ್ಪಿದತುಂಟ ಬೆರಳುಗಳು,ತಪ್ಪಿದ ತಾಳಗಳು ನನ್ನೆದೆಯ ರಂಗ ವೇದಿಕೆಯಲಿನೀ ಬರೆದು ಗೀಚಿದ ಸರಸದಪಿಸುಮಾತುಗಳು ತಪ್ಪು ಹೆಜ್ಜೆಗಳಲಿಕುಣಿಯುತ್ತಿದೆಉನ್ಮಾದ,ಉದ್ವೇಗಗಳುನಾದ, ನೀನಾದಗಳುನೂಪುರದಗಲ್ ಗಲ್ ತಾಳದಲಿನೀ ತರುವ ಹೆಜ್ಜೆಗಳು ****************

ಹೆಜ್ಜೆಗಳ ಸದ್ದು Read Post »

ಇತರೆ, ದಾರಾವಾಹಿ

ದಾರಾವಾಹಿ- ಅದ್ಯಾಯ-02 ಗೋಪಾಲ ಮೂಲತಃ ಈಶ್ವರಪುರ ಜಿಲ್ಲೆಯ ಅಶೋಕ ನಗರದವನು. ಅವನ ಹೆಂಡತಿ ರಾಧಾ ಕಾರ್ನಾಡಿನವಳು. ‘ಗಜವದನ’ ಬಸ್ಸು ಕಂಪನಿಯಲ್ಲಿ ಹಿರಿಯ ಚಾಲಕರಾಗಿದ್ದ ಸಂಜೀವಣ್ಣನ ಮೂರು ಗಂಡು, ಎರಡು ಹೆಣ್ಣು ಮಕ್ಕಳಲ್ಲಿ ಗೋಪಾಲ ಕೊನೆಯವನು. ಸಂಜೀವಣ್ಣ ತಮ್ಮ ಪ್ರಾಮಾಣಿಕ ದುಡಿಮೆಯಲ್ಲಿ ಆಸ್ತಪಾಸ್ತಿಯನ್ನೇನೂ ಮಾಡಿರಲಿಲ್ಲ. ಆದರೆ ಮಕ್ಕಳು ಓದುವಷ್ಟು ವಿದ್ಯೆಯನ್ನೂ, ತನ್ನ ಸಂಸಾರ ಸ್ವತಂತ್ರರಾಗಿರಲೊಂದು ಹಂಚಿನ ಮನೆಯನ್ನೂ ಕಟ್ಟಿಸಿ, ಒಂದಷ್ಟು ಸಾಲಸೋಲ ಮಾಡಿ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಆ ಸಾಲ ತೀರುವ ಹೊತ್ತಿಗೆ ಹಿರಿಯ ಗಂಡು ಮಕ್ಕಳಿಬ್ಬರ ಮದುವೆಯೂ ನಡೆಯಿತು. ಆದರೆ ಗೋಪಾಲ ಅಪ್ಪ ಅಮ್ಮನ ಮುದ್ದಿನ ಕಣ್ಮಣಿಯಾಗಿದ್ದವನು. ಹಾಗಾಗಿ ಅವನು ಏಳನೆಯ ತರಗತಿಯವರೆಗೆ ಮಾತ್ರವೇ ಓದಿ ಮತ್ತೆ ಯಾರ ಒತ್ತಾಯಕ್ಕೂ ಮಣಿಯದೆ ಶಾಲೆಬಿಟ್ಟು ಉಂಡಾಡಿ ಗುಂಡನಂತೆ ಬೆಳೆಯತೊಡಗಿದ. ಕುಡಿಮೀಸೆ ಚಿಗುರಿ, ಐದಾರು ಮಳೆಗಾಲ ಕಳೆಯುತ್ತಲೇ ಮನೆ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವ ಕೆಲಸಕ್ಕೆ ಸೇರಿಕೊಂಡ. ಬಹಳ ಬೇಗನೇ ಆ ಕೆಲಸವನ್ನು ಕಲಿತ. ತನ್ನದೇ ತಂಡವೊಂದನ್ನು ಕಟ್ಟಿಕೊಂಡು ಸ್ವತಃ ವಹಿಸಿಕೊಂಡು ದುಡಿಯುತ್ತ ಸಂಪಾದಿಸತೊಡಗಿದ. ತಮ್ಮ ಮಗ ವಿದ್ಯೆಯ ವಿಷಯದಲ್ಲಿ ಹಿಂದೆಬಿದ್ದರೂ ದುಡಿಮೆಯಲ್ಲಿ ಮೆಲುಗೈ ಸಾಧಿಸಿದ ಹಾಗೂ ಅವನು ತನ್ನ ಕೈಕೆಳಗೆ ಹತ್ತಾರು ಮಂದಿಯನ್ನು ದುಡಿಸತೊಡಗಿದ್ದನ್ನು ಕಂಡು ಹೆಮ್ಮೆಪಟ್ಟುಕೊಂಡ ಹೆತ್ತವರು ಅವನಿಗೂ ಮದುವೆ ಮಾಡಲು ಹೊರಟರು. ಹೆಣ್ಣಿನ ಕಡೆಯವರೂ ಗಂಡಿನ ಪ್ರಸ್ತುತ ದುಡಿಮೆಯ ಆಧಾರದ ಮೇಲೆಯೇ ಹೆಣ್ಣು ಕೊಟ್ಟರು. ಅದ್ಧೂರಿಯ ಮದುವೆಯೂ ನಡೆಯಿತು. ಗೋಪಾಲನ ಸಂಗಾತಿಯಾಗಿ ರಾಧಾ ಮನೆಗೆ ಬಂದಳು. ಇಷ್ಟಾಗುವ ಹೊತ್ತಿಗೆ ಸಂಜೀವಣ್ಣನಿಗೂ ವೃದ್ಧಾಪ್ಯ ಸಮೀಪಿಸಿತು. ಚಾಲಕವೃತ್ತಿಯಿಂದ ನಿವೃತ್ತರಾದರು. ಆನಂತರದ ಕೆಲವು ವರ್ಷಗಳ ಕಾಲ ಮಕ್ಕಳೊಂದಿಗೆ ನೆಮ್ಮದಿಯ ಬಾಳು ಕಂಡರಾದರೂ ಕೆಲವು ವರ್ಷ ಸಂಧಿವಾತ, ಸಕ್ಕರೆ ಕಾಯಿಲೆಗಳಿಂದ ನರಳುತ್ತ ತೀರಿಕೊಂಡರು.    ಸಂಜೀವಣ್ಣ ಗತಿಸುವ ಕೆಲವು ತಿಂಗಳ ಹಿಂದಷ್ಟೇ ಅವರ ಎರಡನೆಯ ಮಗ ಕೇಶವ ಮಲೆವೂರಿನಲ್ಲಿ ತನ್ನ ಟೈಲರ್ ಶಾಪಿನ ಪಕ್ಕದಲ್ಲಿ ಖಾಲಿಯಿದ್ದ ಬಾಡಿಗೆ ಮನೆಯನ್ನು ಗೊತ್ತುಪಡಿಸಿ ತನ್ನ ಸಂಸಾರವನ್ನು ಕರೆದುಕೊಂಡು ಹೋಗಿ ನೆಲೆಸಿದ್ದ. ಇನ್ನೊಬ್ಬ ಸಹೋದರ ದಿನೇಶ, ಸೈಕಲ್ ಶಾಪ್ ಹೊಂದಿದ್ದವನು ಬೇರೆ ಮನೆ ಕಟ್ಟಿಕೊಂಡು ಕುಟುಂಬದೊಂದಿಗೆ ವಾಸಿಸುತ್ತಿದ್ದ. ಆದ್ದರಿಂದ ಹಿರಿಯ ಮಗ ಮಾಧವನೇ ಮನೆಯ ಜವಾಬ್ದಾರಿಯನ್ನು ಹೊರಬೇಕಾಯಿತು. ಅವನು ಅಪ್ಪನಿಂದ ಬಸ್ಸು ಚಾಲನೆ ಕಲಿತಿದ್ದವನು ಬಾಡಿಗೆ ಟೆಂಪೋ ಚಾಲಕನಾಗಿ ದುಡಿಯುತ್ತಿದ್ದ. ಅಪ್ಪನ ನಂತರ ಅವರ ಉದ್ಯೋಗ ಮಾಧವನಿಗೆ ಸಿಕ್ಕಿತು. ಹೊಸ ಬಸ್ಸಿನ ಚಾಲಕನಾಗಿ ದುಡಿಮೆಯಾರಂಭಿಸಿದ. ತಾಯಿಯನ್ನೂ ಅವಳ ಕೊನೆಗಾಲದಲ್ಲಿ ಪ್ರೀತಿಯಿಂದ ನೋಡಿಕೊಂಡ. ಹಾಗಾಗಿ ಅವಳು ತೀರಿದ ನಂತರ ಅವಳ ಇಚ್ಛೆಯಂತೆ ಮನೆಯು ಮಾಧವನ ಹೆಸರಿಗೆ ವರ್ಗವಾಯಿತು. ಹೆತ್ತವರ ಮುದ್ದಿನ ಪುತ್ತಳಿಯಂತೆ ಬೆಳೆದಿದ್ದ ಗೋಪಾಲ ಅವರು ಗತಿಸಿದ ನಂತರ ಕೆಲವು ಕಾಲ ಅನಾಥಪ್ರಜ್ಞೆಯಿಂದ ನರಳಿದ. ಆದರೆ ಚೆಲುವೆಯಾದ ಹೆಂಡತಿಯಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ರಾಧಾ ಮತ್ತು ಅಣ್ಣ, ಅತ್ತಿಗೆಯರ ಒಡನಾಟದಿಂದ ಮರಳಿ ಸುಖವಾಗಿ ಸಂಸಾರ ಮಾಡತೊಡಗಿದ. ಆದರೆ ಬರಬರುತ್ತ ಅಣ್ಣನ ಹೆಂಡತಿ ಶ್ಯಾಮಲಾಳಿಗೆ ಮೈದುನನ ಅನ್ಯೋನ್ಯ ದಾಂಪತ್ಯವನ್ನು ಕಂಡು ಮತ್ಸರ ಹುಟ್ಟತೊಡಗಿ, ಕ್ರಮೇಣ ಅವಳ ಅಸಲಿ ಮುಖ ಮುನ್ನೆಲೆಗೆ ಬರಲಾರಂಭಿಸಿತು.    ಅವಳ  ಅಂಥ ನಡವಳಿಕೆಯಲ್ಲಿ ಬೇರೊಂದು ಉದ್ದೇಶವೂ ಅಡಗಿತ್ತು. ‘ಮಾವನನ್ನೂ, ಅತ್ತೆಯನ್ನೂ ತಾವೇ ಗಂಡ ಹೆಂಡತಿ ಕಷ್ಟಪಟ್ಟು ನೋಡಿಕೊಂಡಿದ್ದು. ಅದರ ಫಲವಾಗಿಯೇ ನಮಗೆ ಈ ಮನೆ ದಕ್ಕಿದ್ದು. ಹೀಗಿರುವಾಗ ಇಬ್ಬರು ಮೈದುನರು ಪಿತ್ರಾರ್ಜಿತ ಪಾಲು ಗೀಲು ಅಂತ ತಕರಾರೆತ್ತದೆ ಬೇರೆ ಸಂಸಾರ ಹೂಡಿದ್ದಾರೆ. ಆದರೆ ಈ ಗೋಪಾಲನ ಕುಟುಂಬ ಮಾತ್ರ ತಮಗೂ ಈ ಮನೆಯಲ್ಲಿ ಹಕ್ಕಿದೆ ಎಂಬಂತೆ ಠಿಕಾಣಿ ಹೂಡಿರುವುದು ಎಷ್ಟು ಸರಿ? ಇವರನ್ನು ಹೀಗೆಯೇ ಬಿಟ್ಟರೆ ನಾಳೆ ಅಪ್ಪ ಅಮ್ಮನ ಆಸ್ತಿಯಲ್ಲಿ ತಮಗೂ ಪಾಲಿದೆ. ಅಣ್ಣ, ಅತ್ತಿಗೆ ಹೆತ್ತವರನ್ನು ವಂಚಿಸಿ ಮನೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ!’ ಎಂದು ಇಬ್ಬರೂ ಆಡಿಕೊಂಡರೆ ಅಥವಾ ಪೊಲೀಸರಿಗೆ ದೂರುಕೊಟ್ಟರೆ ನನ್ನ ಸಂಸಾರದ ಗತಿಯೇನಾದೀತು? ಇಲ್ಲ ಇವರನ್ನು ಇಲ್ಲಿರಲು ಬಿಡಬಾರದು. ಆದಷ್ಟು ಬೇಗ ಓಡಿಸಬೇಕು!’ ಎಂಬದು ಅವಳ ದೂರಾಲೋಚನೆಯಾಗಿತ್ತು. ಅಂದಿನಿಂದ ವಿನಾಕಾರಣ ಗೋಪಾಲನನ್ನು ಚುಚ್ಚಿ, ಹೀಯಾಳಿಸಿ ಮಾತಾಡುವುದು, ಅದಕ್ಕೆ ತಕ್ಕಂತೆ ವರ್ತಿಸುವುದನ್ನು ಆರಂಭಿಸಿದಳು. ಅವನು ಕೆಲಸಕ್ಕೆ ಹೊರಟು ಹೋದ ಮೇಲೆ ರಾಧಾಳನ್ನು ಹಿಡಿದು ಪೀಡಿಸತೊಡಗಿದಳು. ಅವಳಿಗೆ ವಿಶ್ರಾಂತಿ ಕೊಡದೆ ದುಡಿಸತೊಡಗಿದಳು. ‘ಗತಿಯಿಲ್ಲದವರು. ಸ್ವತಂತ್ರವಾಗಿ ಬದುಕಲು ಯೋಗ್ಯತೆ ಇಲ್ಲದವರು!’ ಎಂಬಂಥ ವ್ಯಂಗ್ಯ, ತುಚ್ಛ ಮಾತುಗಳಿಂದ ಗಂಡ ಹೆಂಡತಿಯ ನೆಮ್ಮದಿಯನ್ನು ಎಷ್ಟು ಸಾಧ್ಯವೋ ಅಷ್ಟು ಬಗೆಯಲ್ಲಿ ಕೆಡಿಸಲಾರಂಭಿಸಿದಳು.    ರಾಧಾ  ಮುಗ್ಧೆ ಮತ್ತು ಸಹನಶೀಲೆ ಹೆಣ್ಣು. ಪತಿಯೇ ಪರದೈವ. ಅವನ ಕುಟುಂಬವೂ ತನಗೆ ಅಷ್ಟೇ ಪೂಜ್ಯವಾದುದು. ಆದ್ದರಿಂದ ತನ್ನಿಂದ ಅವರಿಗೆ ಯಾವುದೇ ರೀತಿಯ ಅಪಚಾರವಾಗದಂತೆ ಅನುಸರಿಸಿಕೊಂಡು ಬಾಳಬೇಕು. ಅದುವೇ ತನಗೂ ತನ್ನ ಕುಟುಂಬಕ್ಕೂ ಶ್ರೇಯಸ್ಸು! ಎಂಬ ತನ್ನಮ್ಮನ ಗುಣ ಸ್ವಭಾವಗಳನ್ನು ತಾನೂ ಮೈಗೂಡಿಸಿಕೊಂಡು ಬಂದಿದ್ದಳು. ಆದ್ದರಿಂದ ಅಕ್ಕ ಅದೇನೇ ಅಂದರೂ ಎಂಥ ಕಿರುಕುಳ ಕೊಟ್ಟರೂ ತುಟಿ ಪಿಟಿಕ್ ಎನ್ನದೆ ಸಹಿಸಿಕೊಳ್ಳುತ್ತಿದ್ದಳೇ ಹೊರತು ಗಂಡನೊಡನೆ ದೂರು ಹೇಳಿ ದುಃಖಿಸುವುದಾಗಲೀ ಬೇರೆ ಮನೆ ಮಾಡುವಂತೆ  ಒತ್ತಾಯಿಸುವುದಾಗಲೀ ಮಾಡಿದವಳಲ್ಲ. ಅಂಥ ಆಲೋಚನೆ ಅವಳಲ್ಲಿ ಕೆಲವು ಬಾರಿ ಸುಳಿದಾಡಿದ್ದೂ ಉಂಟು. ಆದರೆ ತಾನು ದುಡುಕಿ ಹಾಗೇನಾದರೂ ಮಾಡಿಬಿಟ್ಟರೆ ಒಡಹುಟ್ಟಿದವರನ್ನು ಅಗಲಿಸಿದ ಶಾಪ ತನಗೆ ತಟ್ಟುವುದು ಖಚಿತ ಎಂದು ಯೋಚಿಸಿ ಭಯದಿಂದ ಸುಮ್ಮನಾಗುತ್ತಿದ್ದಳು.   ಗೋಪಾಲನಿಗೂ ಅಣ್ಣ ಅತ್ತಿಗೆಯೆಂದರೆ ಬಹಳ ಆತ್ಮೀಯತೆಯಿತ್ತು. ಮದುವೆಯಾಗಿ ಬಂದ ಆರಂಭದಲ್ಲಿ ಅತ್ತಿಗೆ ಅವನನ್ನು ಮಗನಷ್ಟೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಹಾಗಾಗಿ ಅವನಿಗೂ ಅವಳೊಡನೆ ಮಧುರ ಬಾಂಧವ್ಯವಿತ್ತು. ಆದರೆ ತನ್ನ ಅಪ್ಪ ಅಮ್ಮ ತೀರಿಕೊಂಡ ಮೇಲೆ ಅವಳಲ್ಲಾದ ಬದಲಾವಣೆ ಅವನನ್ನು ಅಚ್ಚರಿಗೊಳಿಸಿತ್ತು. ಆ ಕುರಿತು ಕೆಲವು ಬಾರಿ ಯೋಚಿಸಿ ತಳಮಳಗೊಂಡಿದ್ದ. ಆದರೆ ಅವಳು ತಮ್ಮನ್ನು ಮನೆಯಿಂದ ತೊಲಗಿಸಲೆಂದೇ ಹಾಗೆಲ್ಲಾ ವರ್ತಿಸುತ್ತಿದ್ದಾಳೆ ಎಂಬ ಸತ್ಯ ಅವನ ಪೆದ್ದು ಮನಸ್ಸಿಗೆ ಹೊಳೆಯಲಿಲ್ಲ. ಆದ್ದರಿಂದ ಅತ್ತಿಗೆ ತನ್ನ ತಲೆ ಕಂಡ ಕೂಡಲೇ ಏನಾದರೊಂದು ಚುಚ್ಚಿ ಮಾತಾಡಿ ನೋಯಿಸುವುದು, ಅಸಡ್ಡೆ ತೋರಿಸುವುದರ ಬಗ್ಗೆ ಅವನು ದಿವ್ಯ ಮೌನ ತಳೆಯುತ್ತಿದ್ದ. ಆದರೆ ರಾಧಾಳಲ್ಲಿ ಈಗೀಗ ಹಿಂದಿನ ಲವಲವಿಕೆಯಿಲ್ಲದೆ, ದಿನೇದಿನೇ ಅವಳು ಸೊರಗುತ್ತಿದ್ದುದನ್ನು ಕಾಣುತ್ತ ಬಂದವನು ಚಿಂತೆಗೊಳಗಾದ. ಆವತ್ತೊಂದು ದಿನ ಬೆಳಿಗ್ಗೆ ಕೆಲಸಗಾರರನ್ನು ಕೆಲಸಕ್ಕೆ ಹಚ್ಚಿ ಬೇಗನೇ ಮನೆಗೆ ಹಿಂದಿರುಗಿದ. ‘ರಾಧಾ, ದೇವಸ್ಥಾನಕ್ಕೆ ಹೋಗದೆ ಕೆಲವು ವಾರಗಳು ಕಳೆದವಲ್ಲ ಮಾರಾಯ್ತೀ. ಇವತ್ತು ಸ್ವಲ್ಪ ಪುರುಸೋತ್ತು ಮಾಡಿಕೊಂಡು ಬಂದಿದ್ದೇನೆ. ನಡೆ ಹೋಗಿ ಬರುವ’ ಎಂದ. ಕೆಲವು ತಿಂಗಳಿನಿಂದ ಹೊರಗೆಲ್ಲೂ ಹೋಗದೆ ಗಂಡನ ಮನೆಯಲ್ಲಿ ಜೀತದಾಳಿನಂತೆ ದುಡಿಯುತ್ತ ಸೋತುಹೋಗಿದ್ದ ರಾಧಾಳಿಗೆ ಗಂಡ ಇಂದು ತನ್ನ ಇಷ್ಟದೇವತೆ ಮಹಾಕಾಳಿಯಮ್ಮನ ಸನ್ನಿಧಿಗೆ ಕರೆದೊಯ್ಯುತ್ತೇನೆಂದುದು ಬಹಳ ಸಂತೋಷವಾಯಿತು. ‘ಆಯ್ತುರೀ, ಈಗಲೇ ಹೊರಟೆ!’ ಎಂದವಳು ತರಾತುರಿಯಲ್ಲಿ ಸ್ನಾನ ಮಾಡಿ ತನ್ನ ಮದುವೆಯಲ್ಲಿ ತವರಿನಿಂದ ಉಡುಗೊರೆ ಬಂದಿದ್ದ ಹೊಸ ಕಾಟನ್ ಸೀರೆಯೊಂದನ್ನು ಉಟ್ಟು ಸರಳವಾಗಿ ಸಿಂಗರಿಸಿಕೊಂಡು ಹೊರಟಳು.     ದೇವಸ್ಥಾನಕ್ಕೆ ಹೋಗಿ ಗಂಡನ ಹೆಸರಿನಲ್ಲಿ ಅಮ್ಮನವರಿಗೆ ಮಂಗಳಾರತಿ ಸೇವೆಯನ್ನು ನೀಡಿ, ಹಣ್ಣುಕಾಯಿ ಮಾಡಿಸಿದಳು. ಗಂಡ ಹೆಂಡತಿ ಇಬ್ಬರೂ ಮಹಾಕಾಳಿಯಮ್ಮನೊಡನೆ ಭಕ್ತಿಯಿಂದ ತಮ್ಮ ಮನೋಭಿಲಾಷೆಗಳನ್ನು ನಿವೇದಿಸಿಕೊಂಡು ಸಾಂಷ್ಟಾಂಗ ನಮಸ್ಕರಿಸಿದ ನಂತರ ಅಮ್ಮನವರಿಂದ ಅಭಯ ದೊರಕಿದಂಥ ಪ್ರಸನ್ನತೆ ಇಬ್ಬರಲ್ಲೂ ಮೂಡಿತು. ಅರ್ಚಕರಿಂದ ಪ್ರಸಾದ ಪಡೆದು ಗರ್ಭಗುಡಿಯೆದುರಿನ ಸಂಪಿಗೆ ವನದೊಳಗೆ ಹೋಗಿ ಕುಳಿತರು. ಗೋಪಾಲನೇ ಮೌನ ಮುರಿದ. ‘ಯಾಕೆ ರಾಧಾ ಏನಾಗಿದೆ ನಿನಗೆ? ಮನೆಯಲ್ಲಿ ನೀನು ಮುಂಚಿನಂತೆ ನಗುನಗುತ್ತ ಓಡಾಡದೆ ಎಷ್ಟು ದಿನಗಳಾದವು? ಹೊಟ್ಟೆಗಾದರೂ ಸರಿಯಾಗಿ ತಿಂತಿಯೋ ಇಲ್ವೋ? ಎಷ್ಟೊಂದು ಸೊರಗಿ ಹೋಗಿದ್ದಿ ನೋಡು. ಹುಷಾರಿಲ್ವಾ ಅಥವಾ ಬೇರೇನಾದರೂ ಚಿಂತೆ ಮಾಡುತ್ತಿದ್ದೀಯಾ, ಏನಾಯ್ತೆಂದು ನನ್ನ ಹತ್ತಿರವಾದರೂ ಹೇಳಬೇಕಲ್ವಾ ನೀನು?’ ಎಂದು ಆಕ್ಷೇಪಿಸಿದ. ರಾಧಾಳಿಗೆ ದುಃಖ ಒತ್ತರಿಸಿ ಬಂತು. ಮುಖವನ್ನು ಬೇರೆಡೆ ತಿರುಗಿಸಿಕೊಂಡು, ‘ಛೇ! ಹಾಗೇನಿಲ್ಲರೀ. ಚೆನ್ನಾಗಿಯೇ ಇದ್ದೇನಲ್ಲ. ನೀವು ಸುಮ್ಮನೆ ಏನೇನೋ ಯೋಚಿಸುತ್ತಿದ್ದೀರಷ್ಟೇ’ ಎಂದು ಬಲವಂತದ ನಗು ತಂದುಕೊಳ್ಳುತ್ತ ಅಂದಳು.    ಗೋಪಾಲ ಅವಳ ಕಣ್ಣುಗಳು ಒದ್ದೆಯಾದುದನ್ನು ನೋಡಿದ. ಅವನ ಮನಸ್ಸು ಹಿಂಡಿತು. ‘ನೋಡು ರಾಧಾ, ನಾವು ದೇವಿಯ ಸನ್ನಿಧಿಯಲ್ಲಿ ಕುಳಿತಿದ್ದೇವೆ. ಸುಳ್ಳು ಹೇಳಬೇಡ. ನಿನ್ನ ಕಣ್ಣೀರೇ ಹೇಳುತ್ತದೆ, ನೀನು ನನ್ನೊಡನೆ ಏನನ್ನೋ ಮುಚ್ಚಿಡುತ್ತಿದ್ದಿ ಅಂತ. ಹೆದರ ಬೇಡ. ಸತ್ಯ ಹೇಳು!’ ಎಂದು ಮೃದುವಾಗಿ ಕೇಳಿದ. ರಾಧಾ ಮೊದಲಿಗೆ ವಿಷಯ ಹೇಳಲು ಹಿಂಜರಿದಳು. ಆದರೆ ಗಂಡನ ಒತ್ತಾಯ ಅವಳಿಂದ ಸತ್ಯವನ್ನು ಹೊರಡಿಸಿತು. ಆದ್ದರಿಂದ ಅತ್ತಿಗೆಯ ಚುಚ್ಚು ಮಾತುಗಳನ್ನೂ ಅವಳು ದಿನವಿಡೀ ನೀಡುತ್ತಿದ್ದ ಕಿರುಕುಳವನ್ನೂ ಒಂದೊಂದಾಗಿ ವಿವರಿಸುತ್ತ ಅತ್ತಳು. ಗೋಪಾಲ ಅವಕ್ಕಾದ. ತನ್ನ ಅತ್ತಿಗೆ ತುಂಬಾ ಒಳ್ಳೆಯವಳು. ಹಾಗಾಗಿ ಅವಳೆಂದೂ ತನ್ನ ಹೆಂಡತಿಯನ್ನು ಹಿಂಸಿಸುವ, ಶೋಷಿಸುವ ಮಟ್ಟಕ್ಕಿಳಿಯುವವಳಲ್ಲ ಎಂದೇ ಅವನು ಭಾವಿಸಿದ್ದ. ಆದರೆ ಕೇವಲ ಆರು ಕೋಣೆಯ ಒಂದು ಮನೆಯೂ ಐದು ಸೆಂಟ್ಸಿನಷ್ಟು ಜಾಗವೂ ಯಾವ ಸಂಬಂಧವನ್ನೂ ಹರಿದು ಚಿಂದಿ ಮಾಡಬಲ್ಲದು ಎಂಬ ಸತ್ಯವು ಅವನಿಗೆ ತಿಳಿಯಲೇ ಇಲ್ಲ! ಹಾಗಾಗಿ ಅಣ್ಣ ಅತ್ತಿಗೆಯ ಮೇಲೆ ಅವನಿಗೆ ಜಿಗುಪ್ಸೆ ಹುಟ್ಟಿತು. ‘ನನ್ನನ್ನು ಕ್ಷಮಿಸು ರಾಧಾ. ಇಷ್ಟೆಲ್ಲ ನನ್ನ ಗಮನಕ್ಕೆ ಬರಲೇ ಇಲ್ಲ ನೋಡು! ಅಣ್ಣ, ಅತ್ತಿಗೆಯ ಮೇಲೆ ನಾನು ಇಟ್ಟುಕೊಂಡಿದ್ದ ಕುರುಡು ನಂಬಿಕೆ, ಪ್ರೀತಿಯೇ ಇಷ್ಟಕ್ಕೆಲ್ಲ ಕಾರಣವಾಯಿತೇನೋ. ನನ್ನನ್ನೇ ನಂಬಿ ಬಂದವಳು ನೀನು. ನಿನಗೆ ಸುಖವಿಲ್ಲದ ಆ ಮನೆಯಿನ್ನು ನನಗೂ ಬೇಡ, ಅವರ ಸಂಬಂಧವೂ ಬೇಡ. ನಿನ್ನ ದುಃಖಕ್ಕೆ ಇನ್ನು ಮುಂದೆ ನಾನು ಅವಕಾಶ ಕೊಡುವುದಿಲ್ಲ. ಆದಷ್ಟು ಬೇಗ ಬೇರೆ ಮನೆ ಮಾಡುತ್ತೇನೆ. ಹೊರಟು ಹೋಗುವ’ ಎಂದು ಹೆಂಡತಿಯನ್ನು ಸಂತೈಸಿದ. ಆದರೆ ರಾಧಾಳಿಗೆ ಅವನ ನಿರ್ಧಾರ ಕೇಳಿ ಆತಂಕವಾಯಿತು. ‘ಅಯ್ಯಯ್ಯೋ, ಮನೆ ಬಿಟ್ಟು ಹೋಗುವುದೆಲ್ಲ ಬೇಡ ಮಾರಾಯ್ರೇ. ಯಾವುದೋ ಚಿಂತೆ, ಬೇಸರದಿಂದ ಅವರು ಹಾಗೆಲ್ಲಾ ನಡೆದುಕೊಳ್ಳುತ್ತಿರಬಹುದು. ಅದನ್ನೆಲ್ಲ ನಾವು ತಲೆಗೆ ಹಚ್ಚಿಕೊಳ್ಳದಿದ್ದರಾಯ್ತು. ಇವತ್ತಲ್ಲ ನಾಳೆ ಸರಿ ಹೋದಾರು!’ ಎಂದಳು ದುಗುಡದಿಂದ. ತನ್ನ ಹೆಂಡತಿಯ ಒಳ್ಳೆಯ ಮನಸ್ಸನ್ನು ಕಂಡು ಗೋಪಾಲನಿಗೆ ಹೆಮ್ಮೆಯೆನಿಸಿತು. ಆದರೆ ಅವನು ಪ್ರತ್ಯೇಕ ಸಂಸಾರ ಹೂಡಲು ನಿರ್ಧರಿಸಿಯಾಗಿತ್ತು. ಆದ್ದರಿಂದ, ‘ನಿನ್ನ ಆತಂಕ ನನಗೂ ಅರ್ಥವಾಗುತ್ತದೆ ರಾಧಾ. ಅಂಥದ್ದೇನೂ ಆಗುವುದಿಲ್ಲ. ಏನೇನೋ ಯೋಚಿಸಬೇಡ. ಮನೆಬಿಟ್ಟು ಹೋಗುವಾಗ ಅಣ್ಣ, ಅತ್ತಿಗೆಯೊಂದಿಗೆ ನಿಷ್ಠೂರ ಕಟ್ಟಿಕೊಂಡು ಹೋಗದಿದ್ದರಾಯ್ತು. ಸ್ವಲ್ಪ ಕಾಲವಷ್ಟೆ. ನಂತರ ಅವರಿಗೂ ತಮ್ಮ ತಪ್ಪಿನರಿವಾಗಬಹುದು. ಅಣ್ಣ ಒಳ್ಳೆಯವನು. ಅವನಿಗೆ ಬೇಸರವಾದರೂ ಹೋಗುವುದು ಅನಿವಾರ್ಯ. ಹಳಸಿಹೋದ ಸಂಬಂಧಗಳೊಡನೆ ಬದುಕುವುದು ಬಹಳ ಕಷ್ಟ!’ ಎಂದು ಅವಳನ್ನು ಸಮಾಧಾನಿಸಿದ. ಗಂಡನ ಮಾತು ರಾಧಾಳಿಗೂ ಸರಿಯೆನಿಸಿತು. ಮೌನವಾಗಿ ಸಮ್ಮತಿಸಿದಳು. ಗೋಪಾಲ ಅಂದುಕೊಂಡಂತೆಯೇ ಒಂದು ವಾರದೊಳಗೆ ಅಣ್ಣ, ಅತ್ತಿಗೆಯೊಡನೆ ಗೌರವದಿಂದ ಬೀಳ್ಗೊಂಡ. ತಮ್ಮನ ನಿರ್ಧಾರದಿಂದ ಅಣ್ಣ ಮೊದಲಿಗೆ ಅವಕ್ಕಾದಂತೆ ತೋರಿದ. ಗೋಪಾಲ ಹೊರಟುವ ಹೊತ್ತಲ್ಲಿ ಅವನ ಕಣ್ಣಾಲಿಗಳು ತುಂಬಿದವು. ಆದರೆ ಅವನು ಅವರನ್ನು ತಡೆಯುವ ಮನಸ್ಸು ಮಾಡಲಿಲ್ಲ. ಏಕೆಂದರೆ ಅವನ ಹೆಂಡತಿ ಹಿಂದಿನ ದಿನವೇ, ‘ನೋಡಿ ಮಾರಾಯ್ರೇ, ಅವರು ಬೇರೆ ಹೋಗುವ ವಿಷಯದಲ್ಲಿ ನೀವೇನಾದರೂ ತಕರಾರೆತ್ತಿದಿರೋ ಜಾಗ್ರತೆ! ನಿಮ್ಮ ಈಗಿನ ಗತಿಗೋತ್ರವಿಲ್ಲದ ಸಂಪಾದನೆಯಿಂದ ಮುಂದೆ ನಿಮ್ಮ ಹೆಂಡತಿ ಮಕ್ಕಳು ಗೆರಟೆ ಹಿಡಿದು ಭಿಕ್ಷೆ ಬೇಡಬೇಕಾದೀತು. ಎಚ್ಚರವಿಟ್ಟುಕೊಳ್ಳಿ!’ ಎಂದು ಆ ಸಂಬಂಧದ ಚಿಗುರನ್ನಲ್ಲೇ ಚಿವುಟಿ ಬಿಟ್ಟಿದ್ದಳು. ಆದ್ದರಿಂದ ತಮ್ಮನ ಸಂಸಾರವು ಹೊಸ್ತಿಲು

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಕೇಡಿಲ್ಲದ ಪದ ದೊರಕೊಂಬುದು ಕಿನ್ನರಿ ಬೊಮ್ಮಯ್ಯ ವಚನಕಾರರಲ್ಲಿಯೇ ಒಂದಷ್ಟು ಸಿಟ್ಟು ಸೆಡವುಗಳುಳ್ಳ ಮನುಷ್ಯ. ನೇರ ನಡೆ – ನುಡಿಗೆ ಹೆಸರಾದಂತೆ, ಪರೀಕ್ಷಿಸಿಯೇ ಎಲ್ಲವನ್ನೂ ಎಲ್ಲರನ್ನೂ ಒಪ್ಪುವವನು. ಇದಕ್ಕೆ ಸಾಕ್ಷಿಯಾಗಿ ಶೂನ್ಯಸಂಪಾದನೆಗಳಲ್ಲಿ ಬಂದಿರುವ ಅಕ್ಕನನ್ನು ಪರೀಕ್ಷಿಸುವ ಸಂದರ್ಭವನ್ನೊಮ್ಮೆ ನೋಡಿ. ಅವಳನ್ನು ಪರೀಕ್ಷಿಸಿ ‘ಹುಲಿನೆಕ್ಕಿ ಬದುಕಿದೆನು’೧ ಎಂದು ಅಕ್ಕನ‌ನ್ನು ಹುಲಿಯೆಂದು ಕರೆದು ಗೌರವಿಸಿ ಅವಳು ಕೊಡುವ ಉತ್ತರಕ್ಕೆ ಭಯದಿಂದಲೇ ಮಾತನಾಡುತ್ತಾನೆ. ಈ ಸಂದರ್ಭವು ಶೂನ್ಯಸಂಪಾದನೆಗಳಲ್ಲಿ ಬಹುಮಹತ್ವದ ಭಾಗ. ವಚನಚಳುವಳಿಯ ಕೊನೆಯ ಹಂತದಲ್ಲಿನ ಕ್ರಾಂತಿಕಲ್ಯಾಣವಾದ ಸಂದರ್ಭದಲ್ಲಿ ನಡೆದ ಯುದ್ಧವನ್ನು ಮಾಡಿದವನು ಇವನು ಎಂಬ ಪ್ರತೀತಿಯೂ ಇದೆ. ಕಿನ್ಮರಿ ಬೊಮ್ಮಯ್ಯ ಆಂಧ್ರಪ್ರದಶದ ಪೂದೂರ (ಊಡೂರು) ಎಂಬಲ್ಲಿಯವನು. ಅಕ್ಕಸಾಲಿಗ ವೃತ್ತಿಯನ್ನು ಮಾಡಿ ಬದುಕುತ್ತಿದ್ದವನು. ತನ್ನ ಗುರುವು ವೃತ್ತಿ, ಕಾಯಕ‌ ನಿಷ್ಠೆ, ವೃತ್ತಿಧರ್ಮ ಮತ್ತು ಸತ್ಯಗಳನ್ನು ಅನುಮಾನಿಸಲಾಗಿ ಅಲ್ಲಿಂದ ಹೊರನಡೆದು ಕಲ್ಯಾಣ ಪಟ್ಟಣಕ್ಕೆ ಬಂದು ತನ್ನ ಕಾಯಕದಲ್ಲಿ ನಿರತನಾದವನು.೨ ದಿನವೂ ತನ್ನ ಕರಸ್ಥಳದಲ್ಲಿದ್ದ ಲಿಂಗದ ಮುಂದೆ ಕಿನ್ನರಿ ನುಡಿಸಿ, ಒಂದು ಹೊನ್ನು, ಒಂದು ಹಣ, ಒಂದು ಹಾಗವನ್ನು ಕೇಳುಗರಿಂದ ಪಡೆದು ಅದರಿಂದ ಜಂಗಮಾರ್ಚನೆ, ದಾಸೋಹ ಮಾಡುತ್ತಿದ್ದವನು.೩ ಬಹಳ ಮುಖ್ಯವಾಗಿ ಬಸವಣ್ಣನವರ ಸಮಕಾಲೀನ ಇವನು. ಬಸವಣ್ಣನನ್ನೇ ಬದಲಾಯಿಸಿದ, ಬಸವಣ್ಣನಿಗೆ ತಾಳುವಿಕೆಯನ್ನು ಕಲಿಸಿದ ಶಿವಶರಣನೀತ. ಈತ ತನ್ನ ಕೊನೆಯ ಕಾಲವನ್ನು ಯುದ್ಧಮಾಡುತ್ತಲೇ ಕಳೆದು ಯುದ್ಧದಲ್ಲೇ ಸತ್ತವನು.೪ ‌ಯುದ್ಧವನ್ನು ತಡೆಯಲು ಒಂದು ನದಿಯನ್ನೇ ತಿರುಗಿಸಿದನೆಂಬ ಪ್ರತೀತಿಯೂ ಇವನ ಬಗೆಗಿದೆ.೫  ಇವನ ವಚನಗಳ ಅಂಕಿತ “ಮಹಾಲಿಂಗ ತ್ರಿಪುರಾಂತಕ ದೇವ”. ಇವನ ಒಂದು ವಚನವನ್ನು ಕವಿಚರಿತಕಾರರು ಹೆಸರಿಸಿದ್ದು, ಉಳಿದಂತೆ ಶೂನ್ಯಸಂಪಾದನೆ, ಬಸವಯುಗದ ವಚನ ಸಂಪುಟಗಳಲ್ಲಿ ಬಹಳಷ್ಟು ವಚನಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಅವನದೊಂದು ವಚನ ಹೀಗಿದೆ ————————— ನಿನ್ನ ಹರೆಯದ ರೂಹಿನ ಚೆಲುವಿನ ನುಡಿಯ ಜಾಣಿನ ಸಿರಿಯ ಸಂತೋಷದ ಕರಿ ತುರಗ ರಥ ಪದಾತಿಯ ನೆರವಿಯ ಸತಿ ಸುತರ ಬಂಧುಗಳ ಸಮೂಹದ ನಿನ್ನ ಕುಲದಭಿಮಾನದ ಗರ್ವವ ಬಿಡು, ಮರುಳಾಗದಿರು. ಅಕಟಕಟಾ ರೋಮಜನಿಂದ ಹಿರಿಯನೆ ? ಮದನನಿಂ ಚೆಲುವನೆ ? ಸುರಪತಿಯಿಂದ ಸಂಪನ್ನನೆ ? ವಾಮದೇವ ವಶಿಷ್ಠರಿಂದ ಕುಲಜನೆ ? ಅಂತಕನ ದೂತರು ಬಂದು ಕೈಬಿಡಿದೆಳೆದೊಯ್ಯುವಾಗ ನುಡಿ ತಡವಿಲ್ಲ ಕೇಳೋ ನರನೆ ! ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ೬ ಮನುಷ್ಯನ ಸಮಸ್ಯೆ, ಅವಗುಣವೆಂದರೆ ಎಂದರೆ ತನ್ನ ಜನ, ಹುಟ್ಟಿನಿಂದ ಬಂದ ಶ್ರೀಮಂತಿಕೆ ಮತ್ತು ಸುತ್ತಮುತ್ತಲಿನ ಜನ ಸಹಾಯ, ಸಹಕಾರ ಇವುಗಳಿಂದ ಗರ್ವಿತನಾಗುವುದು. ಅದೇ ಹುಟ್ಟಿನಿಂದ ಬೆನ್ನ ಹಿಂದೆಯೇ ಅಂಟಿ ಬಂದಿರುವ ಸಾವಿನ ಬಗೆಗೆ ಯೋಚನೆ ಮಾಡದೆ ಇರುವುದು. ಈ‌ ವಚನವು ಎರಡೂ ಮುಖ್ಯ ನೆಲೆಗಳಾದ ಸಾವು ಮತ್ತು ಬದುಕುಗಳಲ್ಲಿ ಯಾವುದು ದೊಡ್ಡದು ? ಮತ್ತು ಏಕೆ ದೊಡ್ಡದು ? ಎಂಬ ವಿಷಯವಾಗಿ ಮಾತನಾಡುತ್ತದೆ. ಅದರೊಡನೆಯೇ ಎರಡರ ನಡುವೆ ಬದುಕು ಹೇಗಿರಬೇಕೆಂದು ಹೇಳುತ್ತದೆ. ಬಸವಣ್ಣನವರ ಒಂದು ವಚನವೂ ಇದೇ ರೀತಿಯ ಆಯಸ್ಸು ಕಡಿಮೆಯಾಗುವುದರ ಕಡೆಗೆ ಮತ್ತು ಮಾಡಬೇಕಾದ ಕಾರ್ಯದ ಕಡೆಗೆ ಗಮನ ಸೆಳೆಯುತ್ತದೆ.೭ ಆ ವಚನದ ಪ್ರಭಾವವೂ ಬೊಮ್ಮಯ್ಯನ ಪ್ರಕೃತ ವಚನದ ಮೇಲೆ ಆಗಿರಬಹುದು. ಪ್ರಕೃತ ವಚನದ ಬೆಳವಣಿಗೆಯ ಕ್ರಮವನ್ನು ಗಮನಿಸಿ. ದೇಹದ ಹೊರ ರೂಪದಿಂದ ಆರಂಭಗೊಂಡು ಭವವನ್ನು ಮೀರಿ ಗಳಿಸಬೇಕಾದ ಅಮೂರ್ತ ಪದವಿಯ ಆಶಯವನ್ನು ಹೊತ್ತು ಸಾಗುತ್ತಿದೆ. ಆದರೆ ಅದೆಲ್ಲವೂ  ಹೇಳುತ್ತಿರುವುದು ಹರೆಯದ ರೂಪ, ಆ ರೂಪಕ್ಕೆ ಕಾರಣವಾದ ಚೆಲುವು, ಸಿರಿಯಿಂದುಂಟಾಗುವ ಸಂತೋಷ ಕೇಡುಗಳನ್ನೇ ಕುರಿತು ಮೊದಲ ಹಂತದ್ದು. ಅದನ್ನು ಒಪ್ಪಿ ಅಪ್ಪಿದ ನಂತರ ಎರಡನೆಯ ಮೆಟ್ಟಿಲು ಆರಂಭವಾಗುತ್ತದೆ. ಕರಿ, ತುರಗ, ರಥ, ಪದಾತಿಗಳ ಸಮೂಹ ಸೃಷ್ಟಿಸುವ ಪ್ರಭುತ್ವದ ಸ್ಥಿತಿ. ಏಕಕಾಲದಲ್ಲಿ ಹಣ, ಹಣದಿಂದ ಉಂಟಾಗುವ ಅಧಿಕಾರದ‌ ಮದವನ್ನು ಕುರಿತು ನಂತರದ ಸಾಲುಗಳಲ್ಲಿ ಮಾತನಾಡುತ್ತಾನೆ. ಕುಟುಂಬ, ಮಕ್ಕಳು, ಹೆಂಡತಿ, ಕುಲದ ಅಭಿಮಾನ‌ ಇವುಗಳಿಂದ ಮುಕ್ತನಾಗುವುದರ ಕಡೆಗೆ ಗಮನ ಸೆಳೆಯುತ್ತಾನೆ. ಮಾತು ಜಾಣತನದಿಂದ ಕೂಡಿರಬೇಕಾದ ಅಗತ್ಯವಿಲ್ಲ, ವಚನಕಾರರಲ್ಲಿ ಚಮತ್ಕಾರೀ ಮಾತಿಗಿಂತ ಆತ್ಮಸಾಕ್ಷಿಯಿಂದಿದ್ದರೆ ಒಳಿತೆಂಬುದು ಅಭಿಪ್ರಾಯ. ವಚನ ಎಂಬುದೇ ಭಾಷೆಯ ಕೊಡುವುದನ್ನು ತಿಳಿಸುವಾಗ ಅದರ ಮೂಲಕವೇ ಅಮೂರ್ತ ಪದವಿಯ ಆಸೆಯಿಂದ, ಭವದಲ್ಲಿ ಬದುಕುವ ಆಶಯವನ್ನು ಹೊಂದಿದ್ದು ಭವದಿಂದ ಬಿಡುಗಡೆಯಾಗಿಯೂ ಯಶಸ್ಸನ್ನು ಗಳಿಸಬೇಕಾದ ಕಡೆಗೆ ಆಸೆಯನ್ನು ಹೊತ್ತು ಈ ವಚನ ಬಂದಿದೆ. ಮೂರು ವಿಧದ ಸಂಬಂಧಗಳನ್ನು ವಚನದ ರಚನಾ ವಿನ್ಯಾಸದಲ್ಲಿ ಮೆಟ್ಟಿಲುಗಳಾಗಿ ಅನುಕ್ರಮದಲ್ಲಿ ಇಡಲಾಗಿದೆ. ದೇಹದಿಂದ ಮೊದಲ್ಗೊಂಡು ಮತ್ತೆ ದೇಹದ ಕಡೆಗೆ ಬರುವ ಕ್ರಮವದು. ೧. ದೇಹ ಸಂಬಂಧ – ಹರೆಯ, ರೂಪು, ಚೆಲುವು, ನುಡಿ, ಜಾಣತನ, ಸಂತೋಷ ೨. ಸಮೂಹ ಸಂಬಂಧ – ಕರಿ, ತುರಗ, ರಥ, ಪದಾತಿ ಇವುಗಳ ನೆರವಿ ( ಗುಂಪು ) ೩. ಕುಟುಂಬ ಸಂಬಂಧ – ಸತಿ, ಸುತರ, ಬಂಧು, ಸಮೂಹ, ಕುಲದಭಿಮಾನ ಹೀಗೆ ವಚನ ಬೆಳೆಯುತ್ತಾ ಸಾಗುತ್ತದೆ. ನಂತರದಲ್ಲಿ ನೇರವಾಗಿಯೇ ಈ ಮೂರು ಸಂಬಂಧಗಳಿಂದ ಉಂಟಾಗುವ “ಗರ್ವವ ಬಿಡು” ಎನ್ನುತ್ತಾನೆ. ಮೇಲಿನ ಮೂರು ಅನುಕ್ರಮಗಳೊಡನೆ ಸಾಧಿಸುವ ಸಂಬಂಧ ಮತ್ತು ನಂತರದಲ್ಲಿ ಬರುವ ಪುರಾಣಪ್ರತೀಕಗಳ ಜೊತೆಗೆ ಸಾಧಿಸುವ ಸಂಬಂಧವನ್ನೂ ಗಮನಿಸಿ. ಸಾಮಾನ್ಯವಾಗಿಯೇ ಆರಂಭವಾದ ವಚನವು ಕೊನೆಗೆ ಪುರಾಣಪ್ರತೀಕಗಳನ್ನು ದೃಷ್ಟಾಂತವಾಗಿ ಬಳಸಿಕೊಂಡು ಗರ್ವವನ್ನು ಬಿಡುವುದಕ್ಕೆ ಮಾರ್ಗವನ್ನು ಮಾಡುತ್ತದೆ. ರೋಮಜನಿಂದ ಹಿರಿಯನೆ ? (ಹನುಂತನ ರೋಮಗಳಿಂದ ಹುಟ್ಟಿದ ಲಿಂಗಗಳಿಗಿಂತ ದೊಡ್ಡವನೆ ) ಮನ್ಮಥನಿಂತ ಚೆಲುವನಾ ? ಇಂದ್ರನಿಗಿಂತ ಸಂಪತ್ತನ್ನು ಹೊಂದಿರುವವನೇ ? ವಾಮದೇವ ಮತ್ತು ವಶಿಷ್ಠರಿಗಿಂತ ಕುಲದಲ್ಲಿ ದೊಡ್ಡವನಾ ? ಹೀಗೆ ಬೇರೆ ಬೇರೆ ಪುರಾಣ ಕಥೆಗಳನ್ನು ತಂದು ಪ್ರಶ್ನಿಸುತ್ತಾನೆ. ಇಲ್ಲಿಯೂ ಲಿಂಗದಿಂದ/ ದೇವರಿಂದ ಆರಂಭವಾಗಿ ಮನುಷ್ಯರಲ್ಲೇ ಉತ್ತಮರಾದ, ಸಾಧನೆಯಿಂದ ದೊಡ್ಡವರಾದ ಋಷಿಗಳ ಕಡೆಗೆ ಬರುತ್ತದೆ. ಮೇಲೆ ಉನ್ನತವಾಗಿರುವ ದೃಷ್ಟಾಂತಗಳನ್ನೇ ಕೊಡುತ್ತಾನೆ. ಕೊನೆಗೆ ಮೂಲ ಉದ್ದೇಶವಾದ ಪದವಿಯನ್ನು ಗಳಿಸಬೇಕಾದರೆ “ಮಹಾಲಿಂಗ ತ್ರಿಪುರಾಂತಕದೇವರ ಪುಜಿಸಿದರೆ” “ಕೇಡಿಲ್ಲದ ಪದವಿ” ಯ “ಕೊಡುವ” ಎಂಬ ನಂಬಿಕೆಯಲ್ಲಿ,  ಅದೂ “ಕಾಲನ ದೂತರು ಬಂದು ಕೈ ಹಿಡಿದೆಳೆವಾಗ” ಎಂದು “ಪರಮಪದವಿ” ಯ ಕುರಿತು ಮಾತನಾಡಿ “ನುಡಿ ತಡವಲ್ಲ” ಎಂದು ಎಚ್ಚರಿಸುತ್ತಾನೆ. ಈ‌ ವಚನ ರಚನೆಗೆ ಕಾರಣವಾದ ಬಸವಣ್ಣನವರ “ನೆರೆ ಕೆನ್ನೆಗೆ ತೆರೆ ಗಲ್ಲಕೆ” ವಚನವನ್ನು ಇಟ್ಟು ನೋಡಬಹುದು. ಹಾಗೆಯೇ ವಚನ ಚಳಿವಳಿಯ ಅನಂತರದ ದಾಸ ಪರಂಪರೆಯಲ್ಲಿಯೂ ಇದೇ ಅಂಶಗಳು ಸ್ವಲ್ಪ ಮಾರ್ಪಾಟುಗೊಂಡು ಗೇಯತೆಯನ್ನು ಸಾಧಿಸಿಕೊಂಡು ಬಂದಿದೆ. ಪುರಂದರದಾಸರ “ಮಾನವ ಜನ್ಮ ದೊಡ್ಡದು ಇದ / ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ” ಎಂಬ ಪ್ರಖ್ಯಾತ ಕೀರ್ತನೆಯ ರಚನೆಯ ಮೇಲೆ ಪ್ರಭಾವ ಮತ್ತು ಪ್ರೇರಣೆಯಾಗಿದೆ.೮ ಅಂತಕನ ದೂತರು ಬಂದು ಕೈವಿಡಿದೆಳೆವಾಗ ನುಡಿ ತಡವಲ್ಲ ಕೇಳೋ ನರನೆ ! ಎಂದು ಕಿನ್ನರಿ ಬೊಮ್ಮಯ್ಯ ಹೇಳುವ ಈ ಸಾಲುಗಳ ಪಕ್ಕದಲ್ಲಿ ಕಾಲನ ದೂತರು ಕಾಲ್ ಪಿಡಿದೆಳೆವಾಗ ತಾಳುತಾಳೆಂದರೆ ತಾಳುವರೆ ಎಂಬ ಪುರಂದರದಾಸರ ಸಾಲುಗಳನ್ನಿಟ್ಟು ಒಮ್ಮೆ ನೋಡಿ. ಎರಡರ ನಡೆಯೂ ಒಂದೇ ಇದೆ. ವಚನದಲ್ಲಿ “ಅಂತಕನ ದೂತರು ಕೈವಿಡಿದು” ಎಂದಿದ್ದರೆ, ಪುರಂದರರಲ್ಲಿ  “ಕಾಲನ ದೂತರು ಕಾಲ್ ಪಿಡಿದೆಳೆವಾಗ” ಎಂದು ಬಂದಿದೆ. ದಾಸ ಸಾಹಿತ್ಯದಲ್ಲಿ ಲಯದ ಸಾಧ್ಯತೆಯಲ್ಲಿ ಈ ಮಾತುಗಳು ಬಹಳ ಪರಿಣಾಮಕಾರಿ ಯಶಸ್ಸಯನ್ನು ಸಾಧಿಸಿಬಿಡುತ್ತದೆ. “ಕಾಲ” “ಕಾಲ್ ಪಿಡಿದು” ಈ ಪದಗಳು ಸಾವು ಸಂಭವಿಸಿದ ನಂತರ ದೇಹವನ್ನು ಎಳೆದುಕೊಂಡು ಹೊಗುವ ಚಿತ್ರವನ್ನು ಕಣ್ಣಮುಂದೆ ಕಟ್ಟಿ ಬಿಡುತ್ತವೆ. ಬೊಮ್ಮಯ್ಯನ ವಚನದಲ್ಲಿ ಮೂಲ ಆಶಯವು ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ ಎಂದು ಬಂದಿದ್ದರೆ, ಪುರಂದರರಲ್ಲಿ ಎನು ಕಾರಣ ಯದುಪತಿಯ ಮರೆತಿರಿ ಧನಧಾನ್ಯ ಸತಿಸುತರು ಕಾಯುವರೆ ಇನ್ನಾದರೂ ಏಕೋಭಾವದಿ ಭಜಿಸಿರೋ ಚೆನ್ನ ಶ್ರೀ ಪುರಂದರವಿಠಲರಾಯನ ಎಂದು ಬಂದಿದೆ. “ಮರುಳೆ” ಎಂಬ ಬೊಮ್ಮೆಯ್ಯನು ಎದುರಿನವರೊಂದಿಗೆ ಸಾಧಿಸುವ ಸಂಬಂಧದ ವಿಧಾನಕ್ಕೂ, ಪುರಂದರರು “ಹುಚ್ಚಪ್ಪಗಳಿರಾ” ಎನ್ನುವಾಗ ಸಾಧಿಸುವ ಸಂಬಂಧಕ್ಕೂ ಬಹಳ ಹೋಲಿಕೆಯಿದೆ. ಈ ವಿಧಾನಗಳೂ ಇಲ್ಲಿ ಬಹುಮುಖ್ಯವಾದದ್ದು ನೇರವಾಗಿ ಎದುರಿರುವವರನ್ನು “ಮರುಳರು” ಎಂದು ಭಾವಿಸಿರುವುದು ತಿಳಿಯುತ್ತದೆ. ಒಟ್ಟಾರೆಯಾಗಿ ಕಿನ್ನರಿ ಬೊಮ್ಮಯ್ಯನ ವಚನವೊಂದು ಯಾವ ಆಸೆಯನ್ನು ಹೊತ್ತು ಕಾಲವನ್ನು ಕ್ರಮಿಸಿತೋ, ಅನಂತರದ ದಾಸ ಸಾಹಿತ್ಯದ ಕಾಲವೂ ಅದೇ ಆಶಯವನ್ನು ಹೊತ್ತು ನಡೆದಿದೆ. ಈ ಆಶಯಗಳು ಇಂದಿಗೂ ಮನುಷ್ಯ ತನ್ನ ಗರ್ವವನ್ನು ಬಿಟ್ಟು ಸಾಧಿಸಿಕೊಳ್ಳಬೇಕಾದುದರ ಹಂಬಲವನ್ನು ಸಾರುತ್ತಿದೆ. ————————————— ಅಡಿಟಿಪ್ಪಣಿಗಳು ೧. ಶರಣಾರ್ಥಿ ಶರಣಾರ್ಥಿ ಎಲೆ ತಾಯೆ ಎಮ್ಮವ್ವಾ ‌     ಶರಣಾರ್ಥಿ ಶರಣಾರ್ಥಿ ಕರುಣಾಸಾಗರನಿಧಿಯೆ      ದಯಾಮೂರ್ತಿ ಕಾಯೆ ಶರಣಾರ್ಥಿ ಶರಣಾರ್ಥಿ      ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕ ನೀವು ಬಿಡಿಸಿದಿರಿ      ನಿಮ್ಮ ದಯದಿಂದ ನಾನು ಹುಲಿನೆಕ್ಕಿ ಬದುಕಿದೆನು      ಶರಣಾರ್ಥಿ ಶರಣಾರ್ಥಿ ತಾಯೆ ಹಲಗೆಯಾರ್ಯನ ಶೂನ್ಯಸಂಪಾದನೆ. ಸಂ. ಪ್ರೊ. ಎಸ್. ವಿದ್ಯಾಶಂಕರ್ ಮತ್ತು ಪ್ರೊ. ಜಿ.‌ಎಸ್. ಸಿದ್ದಲಿಂಗಯ್ಯ. ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು. ವ. ಸಂ. ೧೦೨೦. ಪು ೪೪೯ ( ೨೦೦೮ ) ೨. ಶಿವಶರಣ ಕಥಾರತ್ನಕೋಶ. ತ. ಸು. ಶಾಮರಾಯ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಪುಟ ೮೬ ( ೧೯೬೭ ) ೩. ಪೂರ್ವೋಕ್ತ ೪. ಪೂರ್ವೋಕ್ತ ೫. ಪೂರ್ವೋಕ್ತ ೬. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ.‌ ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು. ವ.ಸಂ – ೧೧. ಪು ೧೨೦೪ ( ೨೦೧೬ ) ೭. .ನೆರೆ ಕೆನ್ನೆಗೆ ತೆರೆ ಗಲ್ಲಕೆ ಶರೀರ ಗೂಡುವೋಗದ ಮುನ್ನ       ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ       ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ       ಮುಪ್ಪಿಂದೊಪ್ಪವಳಿಯದ ಮುನ್ನ       ಮೃತ್ಯುಮುಟ್ಡದ ಮುನ್ನ         ಪೂಜಿಸು ನಮ್ಮ ಕೂಡಲಸಂಗಮದೇವನ ವಚನ ಸಾಹಿತ್ಯ ಸಂಗ್ರಹ. ಸಂ. ಸಂ ಶಿ ಭೂಸನೂರು ಮಠ. ವ. ಸಂ ೮೦. ಪು ೪೯ ( ೧೯೬೫ ) ೮. ಮಾನವಜನ್ಮ ದೊಡ್ಡದು ಇದ      ಹಾನಿಮಾಡಲಿ ಬೇಡಿ ಹುಚ್ಚಪ್ಪಗಳಿರಾ ( ಪ )      ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ      ಮಣ್ಣುಮುಕ್ಕಿ ಮರುಳಾಗುವರೆ      ಹೆಣ್ಣುಮಣ್ಣಿಗಾಗಿ ಹರಿಯ ನಾಮಾಮೃತ      ಉಣ್ಣದೆ ಉಪವಾಸ ಇರುವರೆ ಖೋಡಿ ( ೧ )     ಕಾಲನ ದೂತರು ಕಾಲ್ಪಿಡಿದೆಳೆವಾಗ     ತಾಳುತಾಳೆಂದರೆ ತಾಳುವರೆ     ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ     ಸುಳ್ಳಿನ ಸಂಸಾರಸುಳಿಗೆ ಸಿಕ್ಕಲುಬೇಡಿ ( ೨ )     ಏನು ಕಾರಣ ಯದುಪತಿಯ ಮರೆತಿರಿ     ಧನಧಾನ್ಯ ಸತಿಸುತರು ಕಾಯುವರೆ     ಇನ್ನಾದರು ಏಕೋಭಾವದಿ ಭಜಿಸಿರೊ     ಚೆನ್ನ ಶ್ರೀ ಪುರಂದರವಿಠಲರಾಯನ ( ೩ ) ಹರಿದಾಸರ ಜನಪ್ರಿಯ ಹಾಡುಗಳು. ಸಂ. ಡಾ. ಟಿ. ಎಸ್. ನಾಗರತ್ನ ಮತ್ತು ಡಾ. ಮಂದಾಕಿನಿ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು. ಪು ೨೦೯ ***************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ

Read Post »

ಕಾವ್ಯಯಾನ

ಹೀಗೆ

ಕವಿತೆ ಹೀಗೆ ಗೋನವಾರ ಕಿಶನ್ ರಾವ್ ಹೆಣ್ಣೆಂದರೆ,ಪೂಜೆ-ಅಸಡ್ಡೆಉಭಯನೀತಿ,ಕೀಳು,ಅವಮಾನ- ಅತ್ಯಾಚಾರ, ಭರತವರ್ಷೇ,ಭರತಖಂಡೇ ಜಂಬೂ ದ್ವೀಪದಿ,ಗಂಡುಕಾಮಿಗಳ,ಹೀನಾಯ, ನಡೆ,ಪುರುಷಗಣಗಳಿಗೆಲ್ಲಚುಕ್ಕೆಬೊಟ್ಟು ನೆನಪು.ತವರು ಮನೆಗೆ ಬಂದ ಹೆಣ್ಣುವರುಷದಲಿ , ಹುಟ್ಟಿದ ಕೋಣೆತೋರಿಸಲು ತವರಿಗೆಮತ್ತೆ ಹುಟ್ಟಿ ಬೆಳೆದ ಮನೆಯನೇನೋಡುವ ಮತ್ತೆ ಮತ್ತೆ ನೋಡುವಕಹಿ ಚಪಲ, ಮನೆ-ಮನವ ಮುರಿದಿರುವಕ್ರೂರ ಜಗದ ಈ ಕೆಟ್ಟಗಂಡುಗಳ ಸಂತೆ ನಿರ್ಭಯದ ಅಂಗಡಿಯಲಿಸಾವು ಕೊಳ್ಳುವ ಅ ದಂಡುಪಾಠ ಕಲಿಯದೆ ಮತ್ತೆಹತರಾಸ್!! ಕಲಿತದ್ದು ರಾವಣನಿಂದ ?ಕೀಚಕನಿಂದ ?ಅವರು ಮಣ್ಣಾದರೂಇವರು, ಗಲ್ಲಾ ದರೂ……… ಹೀಗಾದರೆ ? ಹೇಗೆ ? ತಡವಾಗಿ ಬಂದ ಉತ್ತರವಿರದಪ್ರಶ್ನೆ,! ಶೇಷ ಪ್ರಶ್ನೆ ?? *****************************************************

ಹೀಗೆ Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-11 ಆತ್ಮಾನುಸಂಧಾನ ಕೇರಿ — ಕೊಪ್ಪಗಳ ನಡುವೆ…. ಬನವಾಸಿಯಿಂದ ಅಪ್ಪನಿಗೆ ಅಂಕೋಲಾ ತಾಲೂಕಿನ ಮಂಜಗುಣಿ ಎಂಬ ಊರಿನ ಶಾಲೆಗೆ ವರ್ಗವಾಯಿತು. ನಮ್ಮ ಪರಿವಾರ ನಾಡುಮಾಸ್ಕೇರಿಯಲ್ಲಿ ಮತ್ತೆ ನೆಲೆಸುವ ಅವಕಾಶ ಪಡೆಯಿತು. ಅಪ್ಪ ದಿನವೂ ಗಂಗಾವಳಿ ನದಿ ದಾಟಿ ಮಂಜಗುಣೆಯ ಶಾಲೆಗೆ ಹೋಗಿ ಬರುತ್ತಿದ್ದರೆ ನಾನು ಸಮೀಪದ ಜೋಗಣೆ ಗುಡ್ಡ’ ಎಂಬ ಭಾಗದಲ್ಲಿರುವ ಪೂರ್ಣ ಪ್ರಾಥಮಿಕ ಶಾಲೆಗೆ ಏಳನೆಯ ತರಗತಿಯ ಪ್ರವೇಶ ಪಡೆದುಕೊಂಡಿದ್ದೆ. ತಮ್ಮ, ತಂಗಿಯರು ಮನೆಯ ಸಮೀಪವೇ ಇರುವ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಕೊಂಡರು.             ನಾಡುಮಾಸ್ಕೇರಿಯ ವಾಸ್ತವ್ಯದ ಈ ಕಾಲಾವಧಿ ನನಗೆ ಕಲಿಸಿದ ಪಾಠ, ನೀಡಿದ ಅನುಭವ ಬಹಳ ಅಮೂಲ್ಯವಾದದ್ದು. ಇಲ್ಲಿ ಬಾಲ್ಯದ ಎಲ್ಲ ಸಂತಸದ ಅನುಭವಗಳೊಡನೆಯೇ ಅನೇಕ ಕಹಿ ಸಂದರ್ಭಗಳಿಗೂ ಮುಖಾಮುಖಿಯಾಗುವ ಅವಕಾಶ ಒದಗಿ ಬಂತು. ಜೀವ ವಿಕಾಸದ ಅನೇಕ ನಿಗೂಢತೆಗಳಿಗೆ ಮನಸ್ಸು ತೆರೆದುಕೊಂಡದ್ದೂ ಈ ಮಾಸ್ಕೇರಿಯಲ್ಲಿಯೇ.             ೬೨-೬೩ ರ ನೆರೆ ಹಾವಳಿ ನಮ್ಮ ಊರಿನಲ್ಲೂ ಅನೇಕ ಅವಾಂತರಗಳನ್ನು ಸೃಷ್ಠಿಸಿತ್ತು. ನಮ್ಮ ಜಾತಿಯ ಹಲವಾರು ಕುಟುಂಬಗಳು ತಮ್ಮ ಸ್ವಂತದ್ದಲ್ಲದ ಒಡೆಯರ ತುಂಡು ಭೂಮಿಯಲ್ಲಿ ಅಲ್ಲಿ ಇಲ್ಲಿ ಗುಡಿಸಲು ಹಾಕಿಕೊಂಡು ಬಾಳುವೆ ನಡೆಸುತ್ತಿದ್ದರು. ಅವುಗಳೆಲ್ಲಾ ನೆರೆಹಾವಳಿಯಲ್ಲಿ ನಾಶವಾಗಿ ನೆಲೆ ಕಳೆದುಕೊಂಡಿದ್ದರು. ಪರಿಸ್ಥಿತಿಯನ್ನು ಅರಿತ ನಮ್ಮ ತಂದೆಯವರು ಓದು ಬರಹ ಬಲ್ಲವರಾದ್ದರಿಂದ ಬನವಾಸಿಯಲ್ಲಿ ಇರುವಾಗಲೇ ನಮ್ಮವರ ಕಷ್ಟಗಳು ಸರಕಾರಕ್ಕೆ ಮನವರಿಕೆಯಾಗುವಂತೆ ಅರ್ಜಿ ಬರೆದು ಎಲ್ಲರಿಗೂ ಜಮೀನು ಮತ್ತು ಮನೆ ಮಂಜೂರಿಯಾಗುವಂತೆ ಮಾಡಿದ್ದರು. ನಾವು ಮರಳಿ ನಾಡುಮಾಸ್ಕೇರಿಗೆ ಬಂದು ನೆಲೆಸುವ ಹೊತ್ತಿಗೆ ಎಲ್ಲ ನಿರಾಶ್ರಿತ ಕುಟುಂಬಗಳಿಗೆ ತಲಾ ಐದು ಗುಂಟೆ ಭೂಮಿ ಮತ್ತು ಜನತಾ ಮನೆಗಳು ಮಂಜೂರಿಯಾಗಿ ಮನೆ ಕಟ್ಟುವ ಕೆಲಸ ಆರಂಭವಾಗಿತ್ತು.             ನಾಡು ಮಾಸ್ಕೇರಿಯ ನಾಡವರ ಕೊಪ್ಪದಿಂದ ಹಾರು ಮಾಸ್ಕೇರಿಯ ಬ್ರಾಹ್ಮಣರ ಮನೆಯವರೆಗೆ ವಿಶಾಲವಾದ ಬಯಲು ಪ್ರದೇಶವಿತ್ತು. ದನ-ಕರು ಸಾಕಿಕೊಂಡವರಿಗೆಲ್ಲ ಅದು ಗೋಮಾಳ’ದಂತೆ ದನ ಮೇಯಿಸುವ ಸ್ಥಳವಾಗಿತ್ತು. ಅದರ ಒಂದು ಭಾಗದಲ್ಲಿ ಆಗೇರರಿಗೆಲ್ಲಾ ಜಮೀನು ಹಂಚಿಕೆಯಾಗಿತ್ತು. ಉಳಿದ ಭಾಗವನ್ನು ಗೋಮಾಳವೆಂದೂ, ಆಟದ ಬಯಲು ಎಂದೂ ಬಿಟ್ಟಿದ್ದರು. ಹೀಗೆ ಊರಿನಲ್ಲಿ ಅಲ್ಲಿ ಇಲ್ಲಿ ಅನ್ಯರ ನೆಲದಲ್ಲಿ ಆಶ್ರಯ ಪಡೆದ ಆಗೇರರು ಒಂದು ನಿರ್ದಿಷ್ಟ ಸ್ಥಳದಲ್ಲಿ ಜನತಾ ಮನೆಗಳನ್ನು ಕಟ್ಟಿಕೊಂಡು ನೆಲೆಸುತ್ತಾ ಆಗೇರಕೇರಿ’ಯೊಂದು ನಿರ್ಮಾಣವಾಯಿತು.             ಗೋಮಾಳದ ಬಯಲು ದಾಟಿದ ಬಳಿಕ ಒತ್ತಾಗಿ ಇರುವ ನಾಡವರ ಮನೆಗಳು ಮತ್ತು ಮನೆಯ ಸುತ್ತ ಸೊಂಪಾಗಿ ಬೆಳೆದು ನಿಂತ ತೆಂಗು, ಅಡಿಕೆ, ಬಾಳೆ ಮತ್ತಿತರ ಗಿಡಮರಗಳ ಕಾರಣದಿಂದ ಬಹುಶಃ ನಾಡವರ ಕೇರಿಯನ್ನು ಕೇರಿ’ ಎನ್ನದೆ ನಾಡವರ ಕೊಪ್ಪ’ ಎಂದು ಕರೆಯುತ್ತಿರಬೇಕು. ಕೇರಿಯ ಬಹುತೇಕ ಎಲ್ಲರೂ ಕೊಪ್ಪದ ಹಂಗಿನಲ್ಲೇ ಬಾಳಬೇಕಾದ ಅನಿವಾರ್ಯತೆ ಇದ್ದವರು. ನಾಡವರ ಕೃಷಿ ಭೂಮಿಯ ಕೆಲಸಗಳು, ಮನೆಯ ಕಸ ಮುಸುರೆ ಇತ್ಯಾದಿ ಕಾಯಕದಿಂದ ಆಗೇರರ ಬಹಳಷ್ಟು ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಹಾಗಾಗಿ ಕೇರಿ-ಕೊಪ್ಪಗಳ ನಡುವೆ ಸಹಜವಾಗಿಯೇ ವ್ಯವಹಾರಿಕ ಸಂಬಂಧ ಬೆಸೆದುಕೊಂಡಿತ್ತು. ನಮ್ಮ ಕೇರಿಯ ಬಹಳಷ್ಟು ಜನ ತಮ್ಮ ಮದುವೆಗಾಗಿ ಜಮೀನ್ದಾರರಾಗಿದ್ದ ನಾಡವರಿಂದ ಸಾಲಪಡೆದು ಗಂಡ ಹೆಂಡತಿ ಇಬ್ಬರೂ ಜೀತದ ಆಳುಗಳಾಗಿ ದುಡಿಯುತ್ತಿದ್ದರು. ಮುಂದೆ ಈ ದಂಪತಿಗಳಿಗೆ ಹುಟ್ಟಿದ ಮಕ್ಕಳು ಕೂಡಾ ಇದೇ ಒಡೆಯನ ಮನೆಯ ಆಳಾಗಿ ದುಡಿಯುತ್ತ ಅಗತ್ಯವಾದರೆ ತಮ್ಮ ಮದುವೆಗೂ ಒಡೆಯನಿಂದ ಸಾಲ ಪಡೆಯುತ್ತ ಜೀತ ಪರಂಪರೆಯನ್ನು ಬಹುತೇಕ ಮುಂದುವರಿಸುತ್ತಿದ್ದರು. ಸಾಲ ಪಡೆಯದೆ ಜೀತದಿಂದ ಹೊರಗಿದ್ದವರೂ ಕೂಡ ದೈನಂದಿನ ಅನ್ನ ಸಂಪಾದನೆಗಾಗಿ ಇದೇ ಒಡೆಯರ ಮನೆಗಳಲ್ಲಿ, ಹೊಲಗಳಲ್ಲಿ ಚಾಕರಿ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದ್ದರು. ನಾಡವರ ಮನೆಗಳ ಕಸ-ಮುಸುರೆ, ತೋಟದ ಕೆಲಸ, ಬೆಸಾಯದ ಭೂಮಿಯಲ್ಲಿ ದುಡಿಮೆ ಇತ್ಯಾದಿಗಳನ್ನು ಮಾಡುತ್ತ ಕೇರಿಯ ಜನ ಕೊಪ್ಪದ ಯಜಮಾನರುಗಳೊಂದಿಗೆ ಅನ್ಯೋನ್ಯವಾಗಿಯೇ ಹೊಂದಿಕೊಂಡಿದ್ದರು. ಹಬ್ಬ-ಹುಣ್ಣಿಮೆ, ಯಜಮಾನರ ಮನೆಯ ಮದುವೆ, ಹರಿದಿನ ಮೊದಲಾದ ಸಮಾರಂಭಗಳಲ್ಲಿ ನಮ್ಮ ಕೇರಿಯ ಜನ ಪಾತ್ರೆಗಳನ್ನೊಯ್ದು ಒಡೆಯರ ಮನೆಗಳಿಂದ ಅನ್ನ, ಪಾಯಸ ಇತ್ಯಾದಿಗಳನ್ನು ಬಡಸಿಕೊಂಡು’ ಬಂದು ಮನೆ ಮಂದಿಯೆಲ್ಲ ಹಂಚಿಕೊಂಡು ಉಣ್ಣುತ್ತಿದ್ದರು. ದೀಪಾವಳಿ, ಯುಗಾದಿ, ಚೌತಿ, ತುಳಸಿ ಹಬ್ಬ ಮುಂತಾದ ವಿಶೇಷ ಹಬ್ಬಗಳ ದಿನ ಸಂಜೆಯ ಹೊತ್ತು ಕೇರಿಯ ಹೆಂಗಸರು ಮಕ್ಕಳೆಲ್ಲ ಒಂದೊಂದು ಹಚ್ಚಿಗೆ’ (ಬಿದಿರಿನ ಬುಟ್ಟಿ) ಅಥವಾ ಕೈಚೀಲ ಹಿಡಿದು ಕೊಪ್ಪದ ಮನೆಮನೆಯ ಮುಂದೆ ನಿಂತು ರೊಟ್ಟಿ ಬೇಡುವ’ ಅನಿಷ್ಟ ಪದ್ಧತಿಯೂ ಆಗ ಚಾಲ್ತಿಯಲ್ಲಿತ್ತು. ಇದು ಅತ್ಯಂತ ದೈನೇಸಿ ಕ್ರಮವೆಂಬ ಅರಿವಿಲ್ಲದೆ, ನನ್ನ ವಯಸ್ಸಿನ ಹುಡುಗರೂ ನಾಡವರ ಮನೆಗಳಿಂದ ಬೇಡಿ ತರುತ್ತಿದ್ದ ಬಿಳಿ ಬಿಳಿಯಾದ ರೊಟ್ಟಿಯ ಹೋಳುಗಳಿಗೆ ಆಸೆಪಟ್ಟು ನಾನೂ ಒಮ್ಮೆ ನಮ್ಮ ಗೆಳೆಯರ ತಂಡದಲ್ಲಿ ಸೇರಿಕೊಂಡು ರೊಟ್ಟಿ ಬೇಡಲು ಹೋಗಿ ಬಂದಿದ್ದೆ. ಕೆಲವು ಮನೆಗಳವರು ನನ್ನನ್ನು ಇಂಥವರ ಮಗ’ ಎಂದು ಗುರುತಿಸಿ ನನ್ನ ಕೈಚೀಲಕ್ಕೆ ಸ್ವಲ್ಪ ಹೆಚ್ಚಿನ ರೊಟ್ಟಿ ಹೋಳುಗಳನ್ನೇ ಅನುಗ್ರಹಿಸಿದ್ದರು! ನನಗೆ ಖುಷಿಯಾಗಿತ್ತು. ಆದರೆ ಮನೆಯಲ್ಲಿ ವಿಷಯ ತಿಳಿದಾಗ ದೊಡ್ಡ ರಂಪವೇ ಆಯಿತು. ಹೇಳಿ ಕೇಳಿ ನಾನೊಬ್ಬ ಸರಕಾರಿ ಸಂಬಳ ಪಡೆಯುವ ಮಾಸ್ತರನ ಮಗ. ನನ್ನಂಥವನು ಬೇಡಲು ನಿಂತದ್ದು ನನಗೂ, ನನ್ನ ತಾಯಿ, ತಂದೆಯರಿಗೂ ಅವಮಾನಕರ ಸಂಗತಿಯೇ. ಅಷ್ಟೆಲ್ಲಾ ಗಂಭೀರವಾಗಿ ಯೋಚಿಸುವ ತಿಳುವಳಿಕೆಯಾದರೂ ಎಲ್ಲಿತ್ತು? ಬರಿಯ ಬಾಯಿ ಚಪಲ ಮತ್ತು ಬೇಡುವುದೂ ಒಂದು ಆಟವೆಂಬಂತೆ ಗೆಳೆಯರೊಡನೆ ಹೊರಟುಬಿಟ್ಟಿದ್ದೆ. ಮನೆಯ ಮಾನ ಕಳೆದನೆಂದು ಅವ್ವ ಅಟ್ಟಾಡಿಸಿ ಹೊಡೆದಳು, ಅಪ್ಪ ಚೆನ್ನಾಗಿ ಬೈದಿದ್ದು, ಅಜ್ಜ ಕಣ್ಣೀರು ಹಾಕಿದ್ದ.             ಆದರೆ ಅಂದು ನಮ್ಮ ಕೇರಿಯ ಜನಕ್ಕೆ ಬೇಡಿಕೆ’ ಎಂಬುದು ಹಸಿವಿನ ಅನಿವಾರ್ಯತೆಯಾಗಿತ್ತು. ಸರಿಯಾಗಿ ಅಕ್ಕಿಯ ಗಂಜಿ ಬೇಯಿಸಿ ತಿಂದರೆ ಅದೇ ಮೃಷ್ಟಾನ್ನ! ಬಹುತೇಕ ಅಕ್ಕಿಯ ನುಚ್ಚಿನ ಗಂಜಿ ಇಲ್ಲವೆ ಅಂಬಲಿ ಕುದಿಸಿ ಕುಡಿದು ದಿನಕಳೆಯುವ ಕೇರಿಯ ಜನಕ್ಕೆ ಮನೆಯಲ್ಲಿ ಒಂದು ದೋಸೆ ಮಾಡಿ ತಿನ್ನುವುದಕ್ಕೂ ಹಬ್ಬದ ದಿನಕ್ಕಾಗಿಯೇ ಕಾಯಬೇಕಿತ್ತು. ಅಂಥವರಿಗೆ ತಾವೇ ದುಡಿಯುತ್ತಿರುವ ಒಡೆಯರ ಮನೆಗಳಲ್ಲಿ ಬೇಡಿ ತಿನ್ನಲು ಯಾವ ಸಂಕೋಚವೂ ಆಗದಿರುವುದು ಸಹಜವೇ ಆಗಿತ್ತು. ಅಲ್ಲದೆ ಊರಿನ ಗ್ರಾಮದೇವತೆ ಮತ್ತು ಮನೆದೇವತೆಗಳ ಪೂಜಾ ದಿನಗಳಲ್ಲಿ ಆಗೇರರು ತಮ್ಮಲ್ಲಿರುವ ಹಲಗೆ ವಾದ್ಯ, ಪಂಚವಾದ್ಯಗಳನ್ನು ಬಾರಿಸುವ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೆ ದೇವರ ಪ್ರಸಾದವಲ್ಲದೆ ಬೇರೆ ಸಂಭಾವನೆ ನೀಡುತ್ತಿರಲಿಲ್ಲ. ಬಹುಶಃ ಇದೇ ಕಾರಣದಿಂದ ಸಂಕ್ರಾಂತಿ, ಯುಗಾದಿ, ಸುಗ್ಗಿ ಹಬ್ಬದ ದಿನಗಳಲ್ಲಿ ಆಗೇರರು ಬೇರೆ ಬೇರೆ ತಂಡಗಳಲ್ಲಿ ಪಂಚವಾದ್ಯ, ಹಲಗೆವಾದ್ಯಗಳನ್ನು ಮನೆ ಮನೆಯ ಮುಂದೆ ಬಾರಿಸಿ ದುಡ್ಡು, ಭತ್ತ ಅಥವಾ ಅಕ್ಕಿಯನ್ನೇ ಬೇಡಿ ಪಡೆದು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಇದನ್ನು ಬೇಡಿಕೆ’ ಎಂದು ಕರೆದು ಸಾಂಪ್ರದಾಯಿಕ ಆಚರಣೆಯಂತೆಯೇ ನಡೆಸುತ್ತಿದ್ದರು. ಇದಕ್ಕೆ ಸಾಮಾಜಿಕವಾಗಿ ಗೌರವವೂ ಇತ್ತು ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಕಾಲಮಾನದ ತೀವೃ ಬದಲಾವಣೆಗೆ ನನ್ನ ಕೇರಿಯೂ ಹೊರತಾಗಲಿಲ್ಲ. ಅಲ್ಲಿ ಶಿಕ್ಷಣ, ರಾಜಕೀಯ, ಸಾಮಾಜಿಕ ಜೀವನ ಕ್ರಮ ಎಲ್ಲದರಲ್ಲಿಯೂ ಬದಲಾವಣೆಗಳಾಗಿವೆ. ಆದರೆ ಕೇರಿಯ ಹಲಗೆವಾದ್ಯ’, ಪಂಚವಾದ್ಯ’ ತಂಡಗಳು ತಮ್ಮ ಅಂದಿನ ಬೇಡಿಕೆ’ಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡೇ ನಡೆದಿವೆ. ************************************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಮುಗಿಲ ಪ್ರೇಮದಿ ಕಳೆಗಟ್ಟಿತು ಇಳೆ ನನ್ನ ಅರಳಿದ ಬೊಗಸೆಯೊಳಗೆ ಅವಳು ಸುರಿದ ಹಣದಲ್ಲಿ  ಮಡಚಿದ ಹತ್ತು, ಐದು, ಎರಡು, ಒಂದರ ‌ನೋಟುಗಳು. ಅಘ್ರಾಣಿಸಿದರೆ ಅವಳ ಬೆವರು ಹಾಗೂ ಹಸುಗಳ ಉಸಿರನ ಪರಿಮಳ ಬೆರೆತುಬಂದಂತೆ. ಆ ದಿನ ಬೆಳಗ್ಗೆ ನನ್ನಜ್ಜಿ ನನ್ನನ್ನು ಹತ್ತಿರ ಕರೆದು ಕೂರಿಸಿಕೊಂಡಳು “ಬಾಳೀ, ನಿನ್ನ ಶಾಲೆಯಲ್ಲಿ ಇವತ್ತು ಗಮ್ಮತ್ತು ಅಲ್ವಾ. ನೀನು ಕಲಾವಿದೆ. ತಗೋ 100 ರೂಪಾಯಿ. ಇವತ್ತು ಹೊಸ ದಿರಿಸು ತಗೋ. ನಿನ್ನಿಷ್ಟದ್ದು. ಅದನ್ನು ಹಾಕಿಕೊಂಡು ಹೋಗು. ನೋಡು,ನಿನ್ನ ಖುಷಿ  ಮತ್ತಷ್ಟು ಜಾಸ್ತಿಯಾಗಲಿ.” ಆಗೆಲ್ಲ ಹೊಸ ವಸ್ತ್ರ ಬರುವುದು ವರ್ಷಕ್ಕೊಮ್ಮೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ. ಈಗ ಸಿಕ್ಕಿದ್ದು ಬೋನಸ್. ಅದು ನನ್ನಜ್ಜಿ ಹಾಲು ಮಾರಿ ಬಂದ ಹಣದಲ್ಲಿ ಉಳಿತಾಯ ಮಾಡಿದ ಕಾಸು. ಅವಳ ಕಣ್ಣಲ್ಲಿ ನನಗಾಗಿ ಬೆಳಗುವ ದೀಪಾವಳಿ. ಅಮ್ರಪಾಲಿ ನಾಟಕದ ಗುಂಗಿನಲ್ಲಿ ನನ್ನ ಶಾಲಾ ದಿನಗಳು ಚಿಗುರುತ್ತಲೇ ಇದ್ದವು. ಶಾಲೆಯ ಪಕ್ಕದಲ್ಲಿ ಕೆರೆ- ದಡ ಆಟಕ್ಕೆ ಮಕ್ಕಳು ಕೈಕೈ ಬೆಸೆದು ನಿಂತಂತೆ ,ರೈಲಿನ ಬೋಗಿಗಳ ಕೊಂಡಿ ಹೆಣೆದಂತೆ ಒಂದೇ ಬಣ್ಣ ಬಳಿದುಕೊಂಡ ಉದ್ದನೆಯ ಸಾಲು ಸಾಕು ಮನೆಗಳು. ಕೊಂಡಿ ಸಿಕ್ಕಿಸಿದಂತೆ ನಡುನಡುವೆ ಹದಿಹರೆಯದ ಪೇರಳೆ ಗಿಡಗಳು. ಒಂದೊಂದು ಮನೆಯ ಕಿಟಕಿ, ಬಾಗಿಲಿಗೆ ಮನಸ್ಸು ಆನಿಸಿದರೆ‌ ಮೆಲ್ಲಮೆಲ್ಲನೆ ಒಂದೊಂದು ಬಗೆಯ, ರುಚಿಯ ಕಥೆಗಳು ಆಕಳಿಕೆ ಮುರಿದು ತೆರೆದುಕೊಳ್ಳುತ್ತವೆ. ಅಲ್ಲಿ ರಂಗಿನೊಡನೆ ಸ್ಪರ್ಧಿಸುವ ಹೂವುಗಳು,  ಹೂಗಳನ್ನು ನೇವರಿಸುವ ಹುಡುಗಿಯರು. ಸಂಜೆಯ ಹೊತ್ತು ಮನೆಗಳ ಹಿಂದೆ ಇರುವ ಖಾಲಿ ಜಾಗದಲ್ಲಿ  ಹುಡುಗರು, ಗಂಡಸರು ವಾಲಿಬಾಲ್ ಆಟ ಆಡಿದರೆ ಹುಡುಗಿಯರು ಸೇರಿಕೊಂಡು ಕಾಲೇಜಿನಲ್ಲಿ ನಡೆದ ಪ್ರಸಂಗಗಳು, ಹುಡುಗರ ಕೀಟಲೆ, ತಮ್ಮ ಪ್ರತಿಕ್ರಿಯೆ, ಹೀಗೆ ರಾಶಿ ಮಾತುಗಳನ್ನು ಪೇರಿಸಿ ಕೆನ್ನೆ ಕೆಂಪಾಗಿಸಿ ಮನಸ್ಸಿಗೆ ಯಾವು ಯಾವುದೋ ಹೊಸ ಹೊಸ ಕುಡಿಮೀಸೆಯ ಮುಖಗಳನ್ನು ತೂಗು ಹಾಕುತ್ತಿದ್ದರು. ಒಂದು ವಾರ ಬಿಟ್ಟು ನೋಡಿದರೆ ಆ ಮಾತಿನ ಒಂದಿಷ್ಟೂ ಗುರುತು ಸಿಗದಂತೆ ನವನವೀನ ಪ್ರಸಂಗಗಳು, ಜುಳುಜುಳು ನಗೆ, ಗಲಗಲ ಮಾತು ಹರಿಯುತ್ತಿತ್ತು.  ಅದೆಷ್ಟು ಹುಡುಗಿಯರು ಮಂಜುಳ, ಕವಿತಾ, ಮೀನಾ,ಸರೋಜ,ಮಲ್ಲಮ್ಮ ಎಲ್ಲರೂ ಆ ಸರಕಾರಿ ವಸತಿಗೃಹಗಳ ಜೀವ ಕುಸುಮಗಳು. ಅವರ ಅಣ್ಣ, ಅಪ್ಪ, ಚಿಕ್ಕಪ್ಪ, ಮಾವ ಹೀಗೆ ಮನೆಯ ಸದಸ್ಯರೊಬ್ಬರು ಸರಕಾರಿ ಹುದ್ದೆಯಲ್ಲಿದ್ದ ಕಾರಣ ಆ ಸರಪಳಿ ಸಿಕ್ಕಿಸಿ ನಿಂತ ಮನೆಗಳಲ್ಲಿ ಇವರಿದ್ದಾರೆ.  ನಮ್ಮೂರು ಅವರಿಗೆ ಸಾಕುತಾಯಿ.  ಅಲ್ಲೇ ಆ ದೊಡ್ಡ ಬೇಲಿಯ ಗಡಿ ದಾಟಿ‌ರಸ್ತೆಗೆ ಬಂದು ನಿಂತರೆ ಆಗಷ್ಟೆ ಸಣ್ಣ ಹಾಡಿಯಂತಿದ್ದ ಜಾಗ ಸಮತಟ್ಟಾಗಿ ಗೆರೆಮೂಡಿಸಿ ಮೂರು ಮನೆಗಳು ತಲೆಎತ್ತಿ ಕೂತಿದೆ. ಅದರಲ್ಲೊಂದು‌ ನಮ್ಮ‌ಮನೆ. ಹತ್ತರ ಪಬ್ಲಿಕ್ ಪರೀಕ್ಷೆಯ ಗೇಟು ದಾಟಿ ಬಾಲ್ಯದ ಭಾವಗಳನ್ನು ಕಳಚಿ ಪೀಚಲು ಕನಸಿನ ಜೋಳಿಗೆ ಬಗಲಲ್ಲಿಟ್ಟು ಕಿರಿಯ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಕಣ್ಣಿಗೆ ಕಾಣುವ ಬಣ್ಣಗಳಿಗೆ ನೂರೆಂಟು ತಡೆಗೋಡೆಗಳು. ಆದರೂ ಮೂಲೆ ಮೂಲೆಯ ಕಚಗುಳಿ ಮುಚ್ಚಟೆಯಾಗಿ ಎದೆಗಾನಿಸಿ ಸುಳ್ಳುಪೊಳ್ಳು ನಗೆಯಿಂದ ರಂಗೋಲಿ ಅರಳುತ್ತಿತ್ತು. ಚುಕ್ಕಿಚುಕ್ಕಿಗಳ ಸೇರ್ಪಡೆಯಿಂದ ವಿಸ್ತರಿಸುತ್ತಿತ್ತು. ಈ ಚುಕ್ಕಿಗಳದ್ದೇ ರಾಜ್ಯ ಅಲ್ಲಿ. ಆ ಸಮವಸ್ತ್ರತೊಟ್ಟ ಮನೆಗಳ ಸಾಲಿನಲ್ಲಿತ್ತು. ಅಲ್ಲಿಗೆ ಸಂಜೆಯ ಸಮಯ ಮೆಲ್ಲಡಿಯಿಡುತ್ತ ಹೋಗುವುದು. ಸುಮ್ಮಸುಮ್ಮನೆ ಹೋಗುತ್ತಿರಲಿಲ್ಲ. ಹಾಗೆ ಹೋಗುವುದಕ್ಕೂ ಬಲವಾದ ಕಾರಣ ವೂ ಇತ್ತು. ಆ ಸಮಯ ನನ್ನಜ್ಜ ಅಜ್ಜಿ ಒಂದಷ್ಟು ದನಗಳನ್ನು ಸಾಕುತ್ತಿದ್ದರು. ಆ ದನಗಳು ನಮ್ಮ‌ಮನೆಯ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದವು. ಸಂಜೆ ಕಾಲೇಜಿನಿಂದ ಬಂದ‌ ನನಗೆ ಈ ಬೇಲಿಯೊಳಗಿನ ಮನೆಮನೆಗಳಿಗೆ ಹಾಲು ಸರಬರಾಜು ಮಾಡುವ ಕೆಲಸ.  ಇದು ಎರಡು ಮೂರು ಟ್ರಿಪ್ ಆಗುವುದೂ ಇದೆ. ಎರಡೂ ಕೈಗಳಲ್ಲಿ ಹಾಲು ತುಂಬಿದ ತಂಬಿಗೆಯ ಬಾಯಿಗೆ ನನ್ನ ಬೆರಳುಗಳ ಮುಚ್ಚಳ ಸೇರಿಸಿ ಹೋಗುತ್ತಿದ್ದೆ. ಮನೆ ಮನೆಯ ಬಾಗಿಲಲ್ಲಿ ನಿಂತು ” ಹಾಲೂ..” ಎಂದು ಮನೆಯವರನ್ನು ಕೂಗುವುದು. ಅಮ್ಮನಂತವರು,ಅಕ್ಕನಂತವರು ಮಾತ್ರವಲ್ಲ ಅಪರೂಪಕ್ಕೆ ಹುಲಿಕಣ್ಣಿನ ಗಂಡುಗಳೂ ಆ ಮನೆಯ ಗುಹೆಗಳಲ್ಲಿ ಕಂಡಿದ್ದೂ ಇದೆ. ಇಲ್ಲಿಯೇ ಬಿಳೀ ಬಣ್ಣದ ದಪ್ಪ ದೇಹದ ನಳಿನಿ ಆಂಟಿ ನನಗೆ ಬದುಕಿನ ಮೊದಲ ವ್ಯಾನಿಟಿ ಬ್ಯಾಗ್ ಕೊಟ್ಟು ನಕ್ಕಿದ್ದರು. ಎಂತಹ ಖುಷಿಯದು. ಗಾಢ ನೀಲಿ ಬಣ್ಣದ ಜಂಭದ ಚೀಲ. ಅದುವರೆಗೆ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಅದನ್ನು ಎದೆಗಾನಿಸಿಕೊಂಡು ಹೋಗುತ್ತಿದ್ದೆ. ಈಗ ಪುಸ್ತಕಗಳಿಗೂ ವಿಶ್ರಾಂತಿಗೆ, ಪಯಣಕ್ಕೊಂದು ಗೂಡು. ಚಲಿಸುವ ಮನೆ ಸಿಕ್ಕಿತು.  ಈ ಬಾಗಿಲು ತಟ್ಟುವ ಕಾಯಕ  ಮುಗಿಸಿದ ನಂತರ ಸ್ವಲ್ಪ ಹೊತ್ತು ಹೆಣ್ಮಕ್ಕಳ ಮೀಟಿಂಗ್. ನನಗಿಂತ ಒಂದು, ಎರಡು ವರ್ಷ ಕಿರಿಯರು, ಹಿರಿಯರು ಪಾಲ್ಗೊಳ್ಳುವ ಸಭೆಯದು. ಪ್ರತಿಯೊಂದು ಕುಸುಮ ಕುಸುಮಿಸುವ ಪರಿ ಭಿನ್ನ. ಇಳೆ ಒರತೆ ತುಂಬಿಕೊಳ್ಳುವ ಕಾಲ. ನಮ್ಮ ಶಾಲೆ ಕಾಲೇಜುಗಳೂ ಬೇರೆಬೇರೆ. ನಾವು ಈ ಹುಡುಗರು ವಾಲಿಬಾಲ್ ಆಡುವ ಜಾಗದ ಒಂದು ಮೂಲೆಯಿಂದ ಆಚೀಚೆ ಹೋಗುವ ಪ್ರಸಂಗಗಳೂ ಇದ್ದವು. ಆಗೆಲ್ಲ ಅವ್ಯಕ್ತ ಕಂಪನಕ್ಕೆ ಕಳೆಗಟ್ಟುವ ಎಳೆ ಮನಗಳು ನಮ್ಮವು. ತಲೆಎತ್ತಿ ಅಲ್ಲಿರುವ ಗಂಡುಹುಡುಗರಿಗೆ ದೃಷ್ಟಿ ಕೂಡಿಸುವ ದಾರ್ಷ್ಟ್ಯವು  ಆ ನಾಜೂಕು ಹುಡುಗಿಯರಿಗೆ ಇರಲಿಲ್ಲ. ಆ ಹುಡುಗರೂ ಜೋರಾಗಿ ದೂರು ಕೊಡುವ ಮಟ್ಟದ ಕೀಟಲೆ ಮಾಡಿದ್ದೂ ಇಲ್ಲ.  ಈ ನಮ್ಮಹುಡುಗಿಯರ ಬೈಠಕ್ ನಲ್ಲಿ ಒಂದು ವಿಶೇಷತೆಯಿತ್ತು. ನಮ್ಮ ಜೊತೆ ಬಿಂದು ಎಂಬ ಒಬ್ಬ ಹುಡುಗನಿದ್ದ.  ರಂಗಕ್ಕೆ ಎಳೆದೊಯ್ದರೆ ಕೃಷ್ಣನ ಪಾತ್ರಕ್ಕೆ ಹೊಂದುವಂತಹ ಮುಖ. ನಸುಗಪ್ಪು ಬಣ್ಣ. ನಗುತುಂಬಿದ ಕಣ್ಣುಗಳು.  ನಮ್ಮೆಲ್ಲರಿಗೂ ಆತ್ಮೀಯ ಸ್ನೇಹಿತ. ನಮ್ಮ ಹೆಚ್ಚಿನ ಮಾತುಗಳಿಗೆ ನಮ್ಮ ಭಾವ ತುಡಿತಗಳೊಂದಿಗೆ ಒಂದಾಗುವ, ಸಲಹೆ ನೀಡುವ ಗೆಳೆಯ. ಬಲು ಚಿಕ್ಕವನಿರುವಾಗ ಪೋಲಿಯೊದಿಂದ ಒಂದು ಕಾಲು ತುಸು ಎಳೆದಂತೆ ನಡೆದಾಡುತ್ತಿದ್ದ. ಹುಡುಗರ ಆಟಕ್ಕೆ ಅವನು ನಿಷೇದಿಸಲ್ಪಟ್ಟಿದ್ದ.   ಆ ಸಮಯದಲ್ಲಿ ನಾನು ಗುಂಪಿನ ಒಳ್ಳೆಯ ಕೇಳುಗಳು. ಜೊತೆಗೆ ಉಳಿದವರಿಗಿಂತ ಚೂರು ಕಮ್ಮಿ ಕಥೆಗಳು ನನ್ನಲ್ಲಿ ಶೇಖರಿಸಲ್ಪಟ್ಡಿದ್ದವು. ಅಲ್ಲದೆ ಕಥೆಯ ಅಂಚಿಗೆ ಬಂದು ಕೂರುವ ಭಾವಗಳೂ ಎದೆಕಡಲಿನಿಂದ ನೆಗೆದು ಹೊರಬರಲು ಹವಣಿಸಿದರೂ ತುಟಿಗಳಿಗೆ ಅದೃಶ್ಯ ಹೊಲಿಗೆ ಹಾಕಿದಂತಾಗಿ ಮೌನದ ನಾದಕ್ಕೆ ಮನ ಜೋಡಿಸಿಕೊಂಡಿದ್ದೆ. ಭಾವನ ತಮ್ಮನೊಂದಿಗಿನ ಒಲವಿನ ಮಾತು, ಕದ್ದು ಕೊಟ್ಟ ಮುತ್ತು, ಸಿಹಿ ಮಾತನಾಡಿ ಬೇರೆ ಹೆಣ್ಣಿನ ಚಿತ್ರ ತೋರಿಸಿದ ಅತ್ತಿಗೆಯ ತಮ್ಮ,  ಕಾಲೇಜಿಗೆ ಬಂದ ವಿದೇಶಿ ವಿದ್ಯಾರ್ಥಿ ಅವನೊಂದಿಗೆ ಬದಲಾಯಿಸಿಕೊಂಡ ಪುಸ್ತಕ, ಚಾಕಲೇಟು, ಬಸ್ ನಿಲ್ದಾಣದವರೆಗಿನ ಜೊತೆ ಹೆಜ್ಜೆಗಳು ಹೀಗೇ  ಏನೇನೋ ಹಂಚಿಕೆಗಳು ಮಾತಿಗೆ ಕಂಪು ಬೆರೆಸುತ್ತಿದ್ದವು.  ಮೊದಲ ವರ್ಷದ ಪಿ.ಯು.ಸಿ ಇರುವಾಗ ಮತ್ತೆ ಬಂದಿತು ವಾರ್ಷಿಕೋತ್ಸವ. ಸಂಭ್ರಮವೋ ಸಂಭ್ರಮ. ನಾನೀಗ ಹಿರಿಯ ವಿದ್ಯಾರ್ಥಿನಿಯರ ಪಟ್ಡಿಯಲ್ಲಿದ್ದೆ.  “ಸ್ಕೂಲ್ ಡೇ” ಅಂದರೆ ನಾಟಕವಿದೆ. ನಾಟಕ ಇದ್ದ ಮೇಲೆ ನಾನೂ ಇರಲೇಬೇಕು. ಮನಸ್ಸು ತಕತಕ ಕುಣಿಯುತ್ತಿತ್ತು.  “ಬೌಮಾಸುರ” ಎಂಬ ನಾಟಕ. ಬೌಮಾಸುರ ದ್ವಿತೀಯ ಪಿ.ಯು. ವಿದ್ಯಾರ್ಥಿನಿ. ಎತ್ತರಕ್ಕಿದ್ದಳು. ಅವಳ ಸ್ವರವೇ ತುಸು ಗಡಸು. ನನಗೆ ಪ್ರಥ್ವೀದೇವಿ ಪಾತ್ರ. ಸೌಮ್ಯ ಪಾತ್ರ, ಪುಟ್ಟ ದೇಹದ ನಾನು ಭೂತಾಯಿ. ಬೌಮಾಸುರನ ಮಾತೆ.  ರಿಹರ್ಸಲ್ ಗಳು ಆರಂಭವಾದವು. ಮೇಘರಾಜನಿಗೆ ಪ್ರಥ್ವೀದೇವಿಯಲ್ಲಿ ಪ್ರೀತಿ ಅಂಕುರಿಸಿ ಜಲಲ ಝಲಲ ಜಲಧಾರೆ. ನೆಲ.ಮುಗಿಲಿನ ಸಂಗಮಕೆ ಜನಿಸಿದ ಅಸುರ ಭೌಮಾಸುರ. ಆಗೆಲ್ಲ ಕಾಲೇಜಿನ ಕಾರಿಡಾರ್ ನಲ್ಲಿ ನಾನು ನಡೆಯುತ್ತಿದ್ದರೆ ನನ್ನ ನಡೆಯ ಶೈಲಿಯೇ ಬದಲಾದಂತೆ ಮನಸ್ಸಿಗೆ ಅನಿಸುತ್ತಿತ್ತು. ನಾನು ಬೇ..ರೆಯೇ, ಇವರೆಲ್ಲರಿಗಿಂತ ಭಿನ್ನ, ನಾನು ಪ್ರಥ್ವೀದೇವಿ. ಕನಸಿನಲ್ಲೇ ನನ್ನ ಇರುವಿಕೆ. ಊಟ, ತಿಂಡಿ, ಓದು ಎಲ್ಲವೂ. ಒಂದು ಸುಂದರ ರಾಗ, ಪಾತ್ರಾನುರಾಗ ನನ್ನ ಜೀವವನ್ನು ತೊನೆದಾಡಿಸುತ್ತಿತ್ತು. ವಾರ್ಷಿಕೋತ್ಸವದ ದಿನ ನಮಗೆ‌ ಸಂಜೆ ಆರುಗಂಟೆಗೆ ಬರುವಂತೆ ಸೂಚನೆ ನೀಡಲಾಗಿತ್ತು.  ಹಗಲಲ್ಲೂ ಸಣ್ಣ ಹೆದರಿಕೆಯ ಜೊತೆ ಬೆಸೆದುಕೊಂಡ ದೊಡ್ಡ ಸಂತಸದಲ್ಲಿ ಆಡುತ್ತಿದ್ದೆ. ಮನೆಯಲ್ಲಿ ಯಾರಾದರೂ ಕುಡಿಯಲು ನೀರು ತರಲು ಹೇಳಿದರೂ ಹೋದವಳು ಅಲ್ಲಲ್ಲೇ ಸ್ತಬ್ದಳಾಗಿ ಮನಸ್ಸಿನಲ್ಲಿ ಪ್ರಥ್ವಿದೇವಿಯ ಮಾತುಗಳೇ ಕುಣಿದು, ಮುಖ, ಕಣ್ಣಿನಲ್ಲಿ ಅದರ ಪ್ರತಿಫಲನ. ಮನೆಯವರು ಹತ್ತಿರ ಬಂದು ಎಚ್ಚರಿಸಬೇಕು.  ಈ ಸಂದರ್ಭದಲ್ಲಿಯೇ, ನನ್ನ ಉಡುಪಿಗಾಗಿ, ಅಜ್ಜಿ ಮಡಿಲು ಬಸಿದು ಕೊಟ್ಟದ್ದು ನೂರು ರುಪಾಯಿ. ಅದುವರೆಗೂ ನಾನು ಅಂಗಡಿಗೆ ಹೋಗಿ ಡ್ರೆಸ್ ತಗೊಂಡವಳಲ್ಲ. ಏನಿದ್ದರೂ ಮನೆಯಲ್ಲಿ ತಂದದ್ದು, ಇಲ್ಲವಾದರೆ ಬಾಬಣ್ಣನ ಅಂಗಡಿಯಲ್ಲಿ ಮಾವನವರ ಹಳೆಯ ಪ್ಯಾಂಟ್ ಕೊಟ್ಟು ಅದರಲ್ಲಿ ಸ್ಕರ್ಟ್ ಅವರ ಷರ್ಟ್ ನಲ್ಲಿ ಬ್ಲೌಸ್ ಹೊಲಿಸುವುದು ವಾಡಿಕೆ.  ” ಅಮ್ಮಾ ಯಾರು ತಂದು ಕೊಡ್ತಾರೆ..”ಅಂತ ನಾನಂದರೆ,”ನೀನೇ ಪ್ರಭಾವತಿ ಒಟ್ಟಿಗೆ ಹೋಗಿ ತಾ”ಎಂದಳು. ನಮ್ಮ ಮನೆಯ ಹಿಂದೆ ಗೆಳತಿ ಪ್ರಭಾ ಮನೆ. ಓಡಿದೆ. ಅವಳು ಅವಳಮ್ಮನ ಹತ್ತಿರ ಒಪ್ಪಿಗೆ ಪಡೆದು ಇಬ್ಬರೂ ಸೇರಿ ರೆಡೆಮೇಡ್ ಬಟ್ಟೆ ಅಂಗಡಿಗೆ ಹೋದೆವು. ರಾಶಿ ಹಾಕಿದ ಡ್ರೆಸ್ಸಗಳ ನಡುವೆ ಆರಿಸುವುದು ಹೇಗೆ? ಆಗೆಲ್ಲ ಟ್ರಾಯಲ್ ರೂಮ್ ಗೆ ಹೋಗಿ ದಿರಿಸಿನ ಅಳತೆ ಸರಿಯಾಗಿದೆಯೇ ಎಂದು ಪರೀಕ್ಷೆ ಮಾಡಿ ಕೊಳ್ಳಲು ಸಾಧ್ಯ ಎಂಬುದು ನಮ್ಮ ಅರಿವಿನ ಸರಹದ್ದಿಗಿಂತಲೂ ಬಹಳ ದೂರದ ಮಾತು.  ಒಟ್ಟಾರೆ ಗೊಂದಲ. ಕೊನೆಗೂ ಕಡುಕೆಂಪು ಬಣ್ಣದ ಚೂಡೀದಾರ ಆರಿಸಿ  ಬಹಳ ಸಂಭ್ರಮದಿಂದ ಮನೆಗೆ ಬಂದೆವು. ಮನೆಗೆ ಬಂದು ಹಾಕಿದರೆ ನಾನು, ಪ್ರಭಾವತಿ ಇಬ್ಬರೂ ಅದರ ಬಸಿರಲ್ಲಿ ಆಶ್ರಯ ಪಡೆಯಬಹುದು. ಅಷ್ಟು ಅಗಲದ ಕುರ್ತಾ, ಕೆಳಗೆ ದೊಗಳೆ ಪ್ಯಾಂಟ್. ಬೆರ್ಚಪ್ಪನಿಗೆ ಅಂಗಿ ತೊಡಿಸಿದಂತೆ ಕಾಣುತ್ತಿದ್ದೆ. ಆದರೇನು ಮಾಡುವುದು ಸಂಜೆಯಾಗಿದೆ. ಒಳಲೋಕದಲ್ಲಿ ಪ್ರಥ್ವೀದೇವಿಯ ಗಲಾಟೆ ನಡೆಯುತ್ತಲೇ ಇದೆ. ಗೆಳತಿಯರಿಗೆಲ್ಲ ಬರಲು ಒತ್ತಾಯಿಸಿ ಆಗಿದೆ. “ಬಿಂದು” ನನ್ನ ಜೊತೆಗೆ ನನ್ನ ನಾಟಕದ ಕೆಲವುಸಾಮಾಗ್ರಿಗಳ ಚೀಲ ಹಿಡಿದು ತಯಾರಾದ. ಅವನಿಗೆ ನನಗಿಂತ ಹೆಚ್ಚಿನ ಉತ್ಸಾಹ, ತಳಮಳ.  ಗಳಿಗೆ ಗಳಿಗೆಗೆ ನೆನಪಿಸುತ್ತಿದ್ದ. ಚೆಂದ ಮಾಡು ಮಾರಾಯ್ತೀ, ಚೆಂದ ಮಾಡು. ಎಲ್ಲರಿಗಿಂತ ನಿನ್ನ ಆಕ್ಟ್‌ ಚೆಂದ ಆಗಬೇಕು. ಅಜ್ಜಿಯ ಕಾಲಿಗೆ ವಂದಿಸಿ ನಾವು ಹೊರಟೆವು. ಮಂದ ಕತ್ತಲು ಇಳಿಯುತ್ತಿತ್ತು. ಹೊಸ ಚೂಡೀದಾರದ ಪರಿಮಳ ಹೊಸತನದ ನಶೆ ಬೀರುತ್ತಿತ್ತು. “ತಡವಾಯಿತು.. ಬೇಗ ಬಿಂದೂ”ಎಂದು ವೇಗದ ಹೆಜ್ಜೆ ಹಾಕುತ್ತಿದ್ದೆ.  ಮುಖ್ಯರಸ್ತೆಗೆ ಇನ್ನೇನು ತಲುಪಿದೆವು ಅನ್ನುವಾಗ ” ಫಟ್” ಎಂದಿತು. ನಾನು ಥಟ್ಟನೆ ನಿಂತೆ. ಪಾದಗಳು ಒಂದಕ್ಕೊಂದು ಜೋಡಿಸಿದಂತೆ ಇಟ್ಟಿದ್ದೆ. ದೀನಳಾಗಿ ಸ್ನೇಹಿತನ ಮುಖ ನೋಡಿದೆ. ಅವನಿಗೇನೂ ಅರ್ಥವಾಗ ” ಎಂತಾಯ್ತು, ಹೋಗುವ ಮಾರಾಯ್ತಿ” ಎನ್ನುತ್ತಾನೆ. ಎಲ್ಲಿಗೆ ಹೋಗುವುದು. ಹೆಜ್ಜೆ ಮುಂದಿಡುವುದು ಸಾಧ್ಯವೇ ಇಲ್ಲ. ಚೂಡಿದಾರದ ಪ್ಯಾಂಟಿನ ಲಾಡಿ ಒಳಗೇ ತುಂಡಾಗಿ ಬಿಟ್ಟಿದೆ. ಹಾಗೇ ನಿಲ್ಲುವ ಹಾಗಿಲ್ಲ. ಮುಂದೆ ಹೋಗುವ ಹಾಗೂ ಇಲ್ಲ.ಪ್ಯಾಂಟ್ ಕೆಳಗೆ ಬೀಳುವ ಹೆದರಿಕೆ. ವಿಪರೀತ ಭಯದಲ್ಲಿ ಕಣ್ಣು ತುಂಬಿತ್ತು.  ” ಬಿಂದೂ..” ಏನು ಹೇಳುವುದು..ಸರಿಯಾಗಿ ಹೇಳಲೂ ಆಗದೇ “ಪ್ಯಾಂಟ್ ತುಂಡಾಯಿತು”  “ಬೇಗ ಬೇಗ ನಡೀ ಕಾಲೇಜಿಗೆ ಎಂದ. ನನ್ನ ಸಂಕಟ ಹೆಚ್ಚುತ್ತಿತ್ತು. ಹೊಟ್ಟೆ ನೋವಿನಿಂದ ನರಳುವವರ ಹಾಗೆ ಪ್ಯಾಂಟ್ ಬೀಳದಂತೆ ಹೊಟ್ಟೆ ಹಿಡಿದುಕೊಂಡೆ. ಆದರೆ ನಡೆಯುವುದು ಕಷ್ಟ. ಊರೆಲ್ಲ ನನ್ನನ್ನೇ ನೋಡುವುದು ಎಂಬ ಭಾವದಿಂದ ನಾಚಿಕೆ,ಅವಮಾನದ ಸಂಕಟದಿಂದ ಬಿಕ್ಕಳಿಸತೊಡಗಿದೆ. “ಎಂತಾಯ್ತ..ಎಂತಾಯ್ತಾ” ಕೇಳುತ್ತಿದ್ “ನಡೆಯಲು ಆಗುವುದಿಲ್ಲ” ಎಂದೆ. ಸುತ್ತ ನೋಡಿದ. ಅಲ್ಲಿ ಮೂಲೆಯಲ್ಲಿ ಪಾಳು ಬಿದ್ದ ಚಿಕ್ಕ ಅಂಗಡಿಯಂತಹ ಮನೆಯಿತ್ತು. ಆದರೆ ಅದು ಮುಖ್ಯರಸ್ತೆಯ ಬಳಿಯಲ್ಲೇ.” ಬಾರಾ..ಅಲ್ಲಿ ನಾನು ಅಡ್ಡ ನಿಲ್ತೇನೆ. ನೀನು ಏನಾದರೂ ಸರಿ ಮಾಡು”. ಎಂದ. ಅರೆ ಜಾರಿದ ಡ್ರೆಸ್ ಕುರ್ತಾದ ಮೇಲಿನಿಂದ ಮುಷ್ಠಿಯಲ್ಲಿ ಹಿಡಿದಂತೆ ಹಿಡಿದು

Read Post »

You cannot copy content of this page

Scroll to Top