ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕುರ್ಚಿಗಳು ಅಂಗಿ ತೊಟ್ಟು..

ಕವಿತೆ ನೂತನ ದೋಶೆಟ್ಟಿ ಈ ಅಂಗಿಯ ದರ ಸಾವಿರದ ಐದು ನೂರುಕೇಳಿ ನೀನು ಕಣ್ಣರಳಿಸುತ್ತಿಬೆಲೆಯಿಂದೇನಾಗಬೇಕುತೊಟ್ಟವನು ನೀನಲ್ಲವೇ?ಕುರ್ಚಿಯ ಲೆಕ್ಕಾಚಾರ ಅದಲ್ಲ.ನಿನ್ನ ಓಡಾಟದ ಚುರುಕುಮುಟ್ಟಿರುತ್ತದೆ ಆ ಅಂಗಿಗೆಹಕ್ಕನ್ನು ಕೊಡಲಾರೆನಡೆ ನಿಧಾನವಿರಲಿಕುರ್ಚಿಯ ಡೊಳ್ಳು ಹೊಟ್ಟೆ ಕನಲುತ್ತದೆ.ನಿನ್ನದೋ ಯೋಗನಡೆದೀರ್ಘ ಉಸಿರೆಳೆದುತುಂಬಿಕೊಂಡ ಕಸರನ್ನುಹೊರಹಾಕುತ್ತ ನಿಶ್ವಾಸದಲಿಹಗುರವಾಗುವುದ ಕಲಿತಿದ್ದಿ.ಕುರ್ಚಿಗೆ ಧಗೆ ಹತ್ತಿದೆ.ಕುಂತಲ್ಲಿ ಇರುವ ಕುರ್ಚಿಯಬತ್ತಳಿಕೆಯ ತುಂಬಹಸಿರು ಶರಾದ ಬಾಣಗಳುನಿನ್ನೆಡೆಗೆ ತೂರಿ ಬಿಡಲುಕುರ್ಚಿಯೀಗ ಪಣ ತೊಟ್ಟಿದೆ.ಮತ್ತೀಗ ಉಚ್ಛ್ವಾಸದಲಿಎದೆಯ ಹುರಿ ಮಾಡುತ್ತಿನಾಟುವುದು ಅಲ್ಲಿಗೇ ತಾನೇ?ಜಯದ ಬೆನ್ನು ಹತ್ತಿದರೆಅಪಜಯದ ಭಯಕುರ್ಚಿಗೇನು ಗೊತ್ತು ನಿನಗೆ ಸೋಲಿಲ್ಲ.ತಳವೂರಿ ನಿಂತು ಜಯದ ಅಹಂಕಾರತನ್ನ ಸೋಲಿನ ಭಯಕುರ್ಚಿಯ ಉರುಟು ಮೈ ತುಂಬಹೊಳಪ ಲೇಪನಬಿಂಬ ಕಾಣಿಸುವಷ್ಟು ನೀನು ದೂರವಾಗುತ್ತಿನಿನಗೆ ಹತ್ತಿರವಾಗುತ್ತಿನಿನ್ನ ಸಾಂತ್ವನಕ್ಕೆಕುರ್ಚಿ ಗುಡುಗುತ್ತದೆ. ನೀನು ಬಾಗಬೇಕು, ಬೀಗುವುದಲ್ಲನಿನ್ನ ಜಾಗ ಅಲ್ಲಿನೆಲದ ಹಾಸಿರುವಲ್ಲಿ ನಿನಗೋ ಜಾಗದ ಗರಜಿಲ್ಲನಿನ್ನದು ಬಾನವಿಸ್ತಾರದ ಹಾದಿಪಚ್ಚೆ, ಪೈರುಗಳ ದಾರಿಜಲಪಾತದ ನಡೆಕಾಡತೊರೆಯ ನಿರುಮ್ಮಳತೆ ಕುರ್ಚಿಗಳೇ ಅಂಗಿ ತೊಟ್ಟುಎತ್ತರದ ಪೀಠದಲ್ಲಿರಿನಡೆದಷ್ಟೂ ಇರುವ ದಾರಿ ನನಗಿರಲಿಹಸಿರ ಕೈಯಾಡಿಸುತ್ತಹೂವ ಆಘ್ರಾಣಿಸುತ್ತಬದುಕ ಆಸ್ವಾದಿಸುತ್ತೇನೆನಿಮ್ಮ ಚೌಕಾಸಿನನಗೆ ಒಗ್ಗುವುದಿಲ್ಲ. **********

ಕುರ್ಚಿಗಳು ಅಂಗಿ ತೊಟ್ಟು.. Read Post »

ಕಾವ್ಯಯಾನ

ಆಹ್ಲಾದಕರ ಭಾವನೆಯಲಿ ನಾವು

ಕವಿತೆ ರಾಘವೇಂದ್ರ ದೇಶಪಾಂಡೆ ಗುನುಗುತಿದೆ ಹೆಸರೊಂದು ಹೃದಯ ಶಹನಾಯಿಯೊಳಗೆಬೆಸೆದಾಗಿದೆ ಆ ಹೆಸರಲ್ಲಿ ನನ್ನ ಬಾಳಉಸಿರುರೂಪಿಸಿಹನು ಭಗವಂತ ಪ್ರೀತಿ ಭರಿತ ಸಂಬಂಧವನುಒಳಗೊಂಡಿದೆ ನಮ್ಮೀ ಸಂಬಂಧವುಸೃಷ್ಟಿಕರ್ತನ ಫಲದೊಳಗೆ… ಹೇಳಿಕೊಳ್ಳಲಾಗದ ಏಕಾಂಗಿತನವಿದೆ ಪ್ರೀತಿ ತಿರುವಿನಲಿಒಂಟಿಯಾಗುವೆ…ಕೆಲವೊಮ್ಮೆ ನಾನು ಒಂಟಿತನದಲಿಇಚ್ಛೆಪಟ್ಟಿರುವನೊ ಕರ್ತೃ ಹೀಗೆಯೇ ಇರಬೇಕೆಂದುಆಗುವುದೊಮ್ಮೆ ನಿರ್ಜನ…ಮತ್ತೊಮ್ಮೆ ಸ್ವರ್ಗಲೋಕಆಳವಾದ ಪ್ರೀತಿ ಇದೆಯೆನೋ… ದುಖಃದಲಿ ದುಖಿಃಯಾಗಿರುವೆ ಸುಖಃದಲಿ ಸುಖಿಃನೀಗಿಸಿಕೊಂಡಿರುವೆ ಸಂತಸದ ಹಸಿವನು ನಿನ್ನ ಹಸನ್ಮುಖತೆಯಲಿಎದೆಬಡಿತ ನಿಲ್ಲುವುದು ವ್ಯಾಕುಲತೆಯಲಿ ನೀನಿರುವಾಗಹಂಚಿಕೊಳ್ಳುವ ಪ್ರಣಯಾಮೃತವನು ಜುಮ್ಮೆನ್ನುವ ಮಿಂಚಿನಲಿದಾಂಪತ್ಯ ದೀವಿಗೆಯ ಬೆಳಕಿನಲಿ… ಸುವರ್ಣ ಲೇಖನಗಳಾಗಿವೆ ಚೈತನ್ಯಭರಿತ ಹೆಜ್ಜೆಗಳುಕಥೆಯಾಗಿರುವೆವು ಬದುಕೆಂಬ ಲೇಖನದ ಹೊಳಪಿನಲಿವಿರಹಿಸೋಣ ಭರವಸೆಯ ಭಾವಲೋಕದಲಿಸಾಗೋಣ ಒಲವಿನ ಅಲೆಯಲಿ ನಾಳೆಂಬ ನಿರೀಕ್ಷೆಯಲಿಚುಂಬಿಸೋಣ ಆಗಸವ ಸ್ವಚ್ಛಂದದಿ ಹಾರಾಡುವ ಹಕ್ಕಿಗಳಾಗಿ ಹೆಸರೊಂದು ಕೊರೆದಾಗಿದೆ ಹೃದಯಾಂತರಾಳದಲಿತಳುಕುಹಾಕಿಕೊಂಡಿದೆ ಮೈ ಮನಸುಗಳಲಿ ನನ್ನ ಹೆಸರುಸೃಷ್ಟಿಯಾಗಿದೆ ಸಂಬಂಧವೊಂದು ಅದ್ಭುತ ಪರಿಕಲ್ಪನೆಯಲಿಜೊತೆಯಾಗಿರೋಣ ಜೀವಂತಿಕೆಯ ಕಾಲಚಕ್ರದೊಳಗೆಸಾಧಿಸಿ ತೋರಿಸೋಣ ಹೌದೆನ್ನುವ ಹಾಗೆ… **************

ಆಹ್ಲಾದಕರ ಭಾವನೆಯಲಿ ನಾವು Read Post »

ಕಾವ್ಯಯಾನ

ಕರುಣಾಮಯಿ

ಕವಿತೆ ಪೂಜಾ ನಾರಾಯಣ ನಾಯಕ ಆಸುಪಾಸಿನ ಬೇಲಿಯಲಿದ್ದಕಾಷ್ಟದ ತುಂಡಾಯ್ದುಕಲಬೆರಕೆ ಅಕ್ಕಿಯಲಿ ಬೆರೆತಿರುವ ಕಲ್ಲಾಯ್ದುಹೊಲದಲ್ಲಿ ಬೆಳೆದ ಕಾಯಿಪಲ್ಲೆಯ ಕೊಯ್ದುಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳುಕರುಣಾಮಯಿ ನನ್ನಮ್ಮ… ಕಡು ಬಡತನದ ಸಂಕಟದಲ್ಲೂಆಶಾ-ಭರವಸೆಯ ನುಡಿಯಾಡಿಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆತಾನೊಬ್ಬಳೇ ಹೋರಾಡಿಹರಿದಿರುವ ಹರುಕು ಅಂಗಿಯ ತುಂಡಿಗೂಮೊಂಡಾದ ಸೂಜಿಗೂಮಧುರವಾದ ಬಾಂಧವ್ಯ ಬೆಸೆದವಳುಕರುಣಾಮಯಿ ನನ್ನಮ್ಮ.. ನಾ ಸೋತು ಕೂತಾಗಕರುಳಬಳ್ಳಿಯ ಅಳಲು ತಾ ಮನದಲ್ಲೆ ಅರಿತುನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿನನ್ನ ಸಾವಿರ ಕನಸುಗಳನ್ನುನನಸು ಮಾಡಲು ಹೊರಟು ನಿಂತವಳುಕರುಣಾಮಯಿ ನನ್ನಮ್ಮ.. ಕೂಡಿಟ್ಟ ಕಾಸಿನಲಿಶಾಲೆಗೆ ಪೀಜು ತುಂಬಿತನ್ನ ಹರುಕು ಸೀರೆಯ ಲೆಕ್ಕಿಸದೆನನಗೊಂದು ಹೊಸ ಅಂಗಿಯ ಕೊಡಿಸಿದೊಡ್ಡ ಅಧಿಕಾರಿಯ ಸ್ಥಾನದಲಿತಾ ಕೂಸ ನೋಡಬೇಕೆಂದುಆಸೆಯಿಂದ ಕಾಯುತ್ತ ಕುಳಿತವಳುಕರುಣಾಮಯಿ ನನ್ನಮ್ಮ…. ತನ್ನ ಜೀವದ ಕೊನೆಯ ಉಸಿರಿನ ತನಕತನ್ನ ಮಗುವಿನ ಸುಖಕ್ಕಾಗಿ, ಉದ್ಧಾರಕ್ಕಾಗಿ ದುಡಿಯುವಆ ತಾಯಿಯ ಪ್ರೀತಿಗೆ ಎಣೆ ಎಂಬುದಿಹುದೇನು?….ಅವಳ ಋಣ ತೀರಿಸಲು ಸಾಧ್ಯವಿಹುದೇನು?…ಅವಳ ಸ್ಥಾನವನ್ನು ಬೇರೆಯವರು ತುಂಬಲು ಅರ್ಹರೇನು?…ಅವಳಿಲ್ಲದ ಒಂದು ಕ್ಷಣ ಈ ಭೂವಿಯು ಬರೀ ಶೂನ್ಯವಲ್ಲವೇನು?…. ******

ಕರುಣಾಮಯಿ Read Post »

ಕಾವ್ಯಯಾನ

ಒಮ್ಮೆ ಪೌರ್ಣಿಮೆಯಾಗಬೇಕಿದೆ ನನಗೆ

ಕವಿತೆ ವಿದ್ಯಾ ಕುಂದರಗಿ ನಿರ್ಬಂಧಗಳ ಜಡಿದು ಬಂಧಿಸಲಾಗಿದೆ ಇಲ್ಲಿರೆಕ್ಕೆ ಬಡಿದು ಬಾನಿಗೆ ಹಾರಬೇಕಿದೆ ನನಗೆ ಕಣ್ಕಟ್ಟಿದ ಖುರಪುಟಕೆ ಒಂದೇ ಗುರಿಯುದೆಸೆದೆಸೆಗೆ ಕಣ್ಣಗಲಿಸಿ ನೋಡಬೇಕಿದೆ ನನಗೆ ಗೊರಕೆಯ ಸದ್ದಿಗೆ ಗೋಡೆಯಾಗುತ್ತಿದೆ ಪಟಲಗಾಳಿಪಟವಾಗಿ ಆಕಾಶ ಚುಂಬಿಸಬೇಕಿದೆ ನನಗೆ ರಾತ್ರಿಕನಸು, ಭಾವಗಳಿಗೆ ಕೊಡಲಾಗದ ಕಾವುಸಂಜೆ ಮುಂಜಾವಿಗೆ ಚಿಂವ್‌ಗುಟ್ಟಬೇಕಿದೆ ನನಗೆ ಚಿವುಟಿ ಚಿಮ್ಮಿದರೂ ಟಿಸಿಲೊಡೆಯುವ ಪಸೆಹಬ್ಬಿ ಆಕಾಶದೆತ್ತರಕೆ ಕೈ ಚಾಚಬೇಕಿದೆ ನನಗೆ ‘ಸಖಿ’ ನಿಸ್ಸಂಗವಾಗಿ ಕಳೆದ ಮಾಸಗಳೇಷ್ಟೋಒಮ್ಮೆ ಚಿತ್ತಪೌರ್ಣಿಮೆ ಆಗಬೇಕಿದೆ ನನಗೆ *******************

ಒಮ್ಮೆ ಪೌರ್ಣಿಮೆಯಾಗಬೇಕಿದೆ ನನಗೆ Read Post »

ಇತರೆ

ಗಝಲ ಧರ್ಮ..

ಗಝಲ ಗಳಲ್ಲಿ ಬಳಸುವ ಪಾರಂಪರಿಕ ಪಾರಿಭಾಷಿಕ ಪದಗಳು ಹಾಗೂ ಅವುಗಳ ಅರ್ಥ ಗಝಲ…. ಒಂದೇ ಪದ ಬಳಕೆಯ ಸಮ ಅಂತ್ಯವುಳ್ಳ ರದೀಫ್ ಮತ್ತು ಅನುಪ್ರಾಸ ದಿಂದ ಕೂಡಿದ ಕ಼ವಾಫಿ಼ ಯುಳ್ಳ ಒಂದೇ ವಜ಼್ನ ಅಥವಾ ಬಹರ್ ನಲ್ಲಿ ಬರೆದ ಅಶಾಅರ(ಶೇರ್ ನ ಬಹುವಚನ)ಗಳ ಸಮೂಹ. ಶಾಯಿರ್/ಸುಖನವರ…ಕವಿಶಾಯಿರಿ…. ಕಾವ್ಯಗಜ಼ಲ ಗೋ…ಗಝಲ್ ಗಾರಗಜ಼ಲ್ ಗೋಯೀ… ಗಝಲ್ ಬರೆಯುವ ಕ್ರಮ ಶೇರ… ಸಮಾನ ರದೀಪ್ ಮತ್ತು ವಿಭಿನ್ನ ಕ಼ವಾಫಿ಼ಯಿಂದ ಒಂದೇ ವಜ಼್ನ ಅಥವಾ ಬಹರ್ ಬಳಸಿ ಬರೆದ ದ್ವಿಪದಿಗಳು… ಅಶಆರ್….ಶೇರ್ ನ ಬಹುವಚನ ಫ಼ರ್ದ್… ಒಂದು ಶೇರ್ ಮಿಸ್ರಾ…. ಶೇರ್ ನ ಪ್ರತಿ ಸಾಲನ್ನು ಮಿಸ್ರಾ ಅನ್ನುತ್ತಾರೆ ಪ್ರತಿ ಶೇರ್ ಎರಡು ಮಿಸ್ರಾಗಳಿಂದ ಕೂಡಿರುತ್ತದೆ. ಮಿಸ್ರಾ-ಎ-ಊಲಾ….ಶೇರ ನ ಮೊದಲ ಸಾಲು..ಊಲಾ ಇದರ ಶಬ್ದಶಃ ಅರ್ಥ ಮೊದಲು ಮಿಸ್ರಾ-ಎ-ಸಾನಿ….ಶೇರ ನ ಎರಡನೆ ಸಾಲು.ಸಾನಿ ಇದರ ಶಬ್ದಶಃ ಅರ್ಥ ಎರಡನೆಯದು ಮಿಸರೈನ್… ಮಿಸ್ರಾದ ಬಹುವಚನರದೀಫ್… ಅನುಪ್ರಾಸವುಳ್ಳ ಮತ್ಲಾದ ಎರಡು ಮಿಸ್ರಾ(ಸಾಲು)ಗಳ ಕೊನೆಗೆ ಬರುವ ಹಾಗೂ ಗಝಲ್ ನ ಅನ್ಯ ಶೇರ ಗಳಲ್ಲಿ ಬರುವ ಸಮನಾಂತ ಪದ. ಇದು ಪೂರ್ತಿ ಗಝಲ್ ನಲ್ಲಿ ಪದ ಬದಲಾಗುವದಿಲ್ಲ… ಕಾಫಿಯಾ… ರದೀಫ್ ನ ಹಿಂದೆ ಬರುವ ಅಂತ್ಯಪ್ರಾಸ ವುಳ್ಳ ಪ್ರತಿ ಶೇರ್ ನ ಮಿಸ್ರಾ-ಏ-ಸಾನಿಯಲ್ಲಿ ಬರುವ ಬದಲಾಗುವ ಅಂತ್ಯಪ್ರಾಸವುಳ್ಳ ಪದ. ಒಟ್ಟಾರೆ ಒಂದು ಶೇರ್ ನ ಆಕರ್ಷಣೆ ಕಾಫಿಯಾ. ಇದರ ಸುಂದರ ಹೆಣಿಗೆ ಗಝಲ ನ್ನು ಪ್ರಭಾವಶಾಲಿಯನ್ನಾಗಿಸುತ್ತದೆ.ಇದು ಗಝಲ್ ನ ಬೆನ್ನೆಲುಬು. ಮತ್ಲಾ… ಗಝಲ ನ ಮೊದಲ ಎರಡು ಮಿಸ್ರಾಗಳು (ಸಾಲು).ಎರಡೂ ಸಾಲು ಕಾಫಿಯಾ ರದೀಫ್ ದಿಂದ ಕೂಡಿರುತ್ತವೆ. ಹುಸ್ನ -ಏ -ಮತ್ಲಾ… ಗಝಲ ನಲ್ಲಿ ಮತ್ಲಾದ ನಂತರ ಇನ್ನೊಂದು ಮತ್ಲಾ ಇದ್ದರೆ… ಅಂದರೆ ಒಂದು ಗಝಲ್ ಎರಡು ಮತ್ಲಾ ಗಳಿಂದ ಕೂಡಿದ್ದರೆ… ಆ ಎರಡನೆಯ ಮತ್ಲಾ ವನ್ನು ಹುಸ್ನ -ಏ -ಮತ್ಲಾ ಅನ್ನುತ್ತಾರೆ. ತಕಲ್ಲುಸ್…. ಕಾವ್ಯನಾಮ… ಅಂಕಿತನಾಮ. ಮಕ್ತಾ… ಗಝಲ ನ ಕೊನೆಯ ಶೇರ. ಇಲ್ಲಿ ಗಝಲ ಗಾರ ತನ್ನ ತಕಲ್ಲುಸ್ ಅನ್ನು ಮೊದಲ ಸಾಲು ಅಥವಾ ಕೊನೆಯ ಸಾಲಿನಲ್ಲಿ ಬಳಸಬಹುದಾಗಿದೆ. ಇದು ಒಂದು ಸುಂದರ ಶಾಬ್ದಿಕ ಅರ್ಥ ಬರುವಂತೆ ಬಳಸುವದು ಆತನ ಪ್ರತಿಭೆಯ ಅನಾವರಣ. ರಬ್ತ… ಅಂತಃಸಂಬಂಧಲಾಮ… ಲಘುಗಾಫ…. ಗುರುವಜ಼್ನ… ಮಾತ್ರೆಗಳ ಕ್ರಮರುಕ್ನ…. ಗಣ ಗಜಲ್ ನಾನು ಈ ನೆಲದ ಹಂಗು ಹರಿದುಕೊಂಡು ಹೋಗುತ್ತೇನೆ ಒಂದು ದಿನನೀನೂ ಇಲ್ಲಿ ಇರುವುದಿಲ್ಲ ಬಂಧದ ಎಳೆ ಕಳಚಿಕೊಂಡು ಹೊರಡುತ್ತೇನೆ ಒಂದು ದಿನ ಇರುವವರೆಗೂ ಅಷ್ಟಮದಗಳಿಂದ ಮೆರೆದಾಡಿ ನನ್ನತನವನ್ನು ಮರೆತಿದ್ದೇನೆನನ್ನದೆನ್ನುವ ಈ ಎಲ್ಲವನ್ನೂ ಇಲ್ಲಿಯೇ ಬಿಟ್ಟು ನಡೆಯುತ್ತೇನೆ ಒಂದು ದಿನ ತುತ್ತು ಅನ್ನಕ್ಕಾಗಿ ಹೈರಾಣಾಗುವವರ ಹೊಟ್ಟೆಯ ಮೇಲೆ ಹೊಡೆದಿದ್ದೇನೆಶಾಶ್ವತವಲ್ಲದ ಈ ಬದುಕಿಗಾಗಿ ಹೊಡೆದಾಡಿ ಬರಿಗೈಯಲ್ಲಿ ಸಾಗುತ್ತೇನೆ ಒಂದು ದಿನ ಬೇಕು ಬೇಕು ಎನ್ನುವ ದುರಾಸೆಯಲ್ಲಿ ಮಾನವ ಪ್ರೀತಿಯನ್ನು ಮರೆತಿದ್ದೇನೆಇಲ್ಲಿ ಸ್ವರ್ಗ ನಿರ್ಮಿಸಲಾಗದೆ ಗೋಡೆಗಳನ್ನು ಕಟ್ಟಿಕೊಂಡು ಪಯಣಿಸುತ್ತೇನೆ ಒಂದು ದಿನ ರಾಜ ಮಹಾರಾಜ ಸಂತ ಫಕೀರ್ ಯಾರೂ ಇಲ್ಲಿ ಉಳಿಯಲಿಕ್ಕಾಗಲಿಲ್ಲಸಾವಿನಲ್ಲೂ ಸಾರ್ಥಕತೆ ಪಡೆಯದೆ ಅರುಣಾ ಮಣ್ಣಲ್ಲಿ ಮಣ್ಣಾಗಿ ಬಿಡುತ್ತೇನೆ ಒಂದು ದಿನ…. ಅರುಣಾ ನರೇಂದ್ರ ಅವರ ಗಝಲ್ ಉದಾಹರಣೆಗೆ ನಾನು ಈ ನೆಲದ ಹಂಗು ಹರಿದುಕೊಂಡು ಹೋಗುತ್ತೇನೆ ಒಂದು ದಿನ…..ಇದು ಮಿಸ್ರಾ ಹಾಗೂ ಮಿಸ್ರಾ-ಏ-ಊಲಾ ನೀನೂ ಇಲ್ಲಿ ಇರುವುದಿಲ್ಲ ಬಂಧದ ಎಳೆ ಕಳಚಿಕೊಂಡು ಹೊರಡುತ್ತೇನೆ ಒಂದು ದಿನ…ಇದು ಎರಡನೆಯ ಮಿಸ್ರಾಮಿಸ್ರಾ-ಏ-ಸಾನಿ… ಗಝಲ್ ನ ಈ ಎರಡೂ ಮಿಸ್ರಾಗಳು ಸೇರಿ ಶೇರ ಆದವು ಗಝಲ ನ ಮೊದಲ ಶೇರ ನ್ನು ಮತ್ಲಾ ಅಂತ ಕರೆಯುತ್ತೇವೆಐದು ಅಶಅರ ಗಳುಳ್ಳ ಗಝಲ್ ಇದು… ರದೀಫ್… ಒಂದು ದಿನಕಾಫಿಯಾ…. ಹೋಗುತ್ತೇನೆ, ಹೊರಡುತ್ತೇನೆ, ನಡೆಯುತ್ತೇನೆ,ಸಾಗುತ್ತೇನೆ,ಪಯಣಿಸುತ್ತೇನೆ,ಮಣ್ಣಾಗಿಬಿಡುತ್ತೇನೆ. ತಖಲ್ಲುಸ್… ಅರುಣಾ ಮಕ್ತಾ… ರಾಜ ಮಹರಾಜ ಸಂತ ಫಕೀರ್ ಯಾರೂ ಇಲ್ಲಿ ಉಳಿಯಲಿಕ್ಕಾಗಲಿಲ್ಲ…ಸಾವಿನಲ್ಲೂ ಸಾರ್ಥಕತೆ ಪಡೆಯದೆ ಅರುಣಾ ಮಣ್ಣಲ್ಲಿ ಮಣ್ಣಾಗಿ ಬಿಡುತ್ತೇನೆ ಒಂದು ದಿನ…********************** ಮೆಹಬೂಬ್ ಬೀ

ಗಝಲ ಧರ್ಮ.. Read Post »

ಕಾವ್ಯಯಾನ

ಆಯ್ಕೆ

ಕವಿತೆ ಮಾಲತಿಹೆಗಡೆ ಹೆತ್ತವರ ಹುಟ್ಟೂರವ್ಯಾಮೋಹ ಬಿಟ್ಟವರು..ಕತ್ತರಿಸಿ ನೆಟ್ಟ ಗಿಡದಂಥವರುನಗರವಾಸಿಗಳಿಗೊಲಿದವರುಹೋದೆಡೆಯೆಲ್ಲ ಚಿಗುರುವಹಟದಲ್ಲಿ ಬೇರು ಬೆಳೆಸಿಕೊಂಡವರಲ್ಲವೇ ನಾವು ? ಅಂಗೈ ಗೆರೆ ಮಾಸುವಷ್ಟುಪಾತ್ರೆ ಬಟ್ಟೆ ಉಜ್ಜಿ ಉಜ್ಜಿಮುಂಬಾಗಿಲು ತೊಳೆದುರಂಗೋಲಿಯಿಕ್ಕಿಕಟ್ಟಡವನ್ನುಮನೆಯಾಗಿಸಿಯೂತವರು ಮನೆ ಯಾವೂರು?ಗಂಡನ ಮನಿ ಯಾವೂರು?ಪ್ರಶ್ನೆ ಎದುರಿಸುತ್ತಅಡುಗೆಮನೆ ಸಾಮ್ರಾಜ್ಯದಲಿಹೊಗೆಯಾಡುವ ಮನಕ್ಕೆತಣ್ಣೀರೆರೆಚಿ ಹೂನಗೆ ಬೀರುವವರಲ್ಲವೇನಾವು? ತೊಟ್ಟಿಲು ತೂಗಿ,ಹೆಮ್ಮೆಯಲಿ ಬೀಗಿವಿರಮಿಸಲೂ ಬಿಡುವಿರದೇಸಂಸಾರ ಸಾವರಿಸಿಹೀಗೆಯೇ ಸಾಗುವುದುಹಣೆಬರಹ ಎನ್ನುತ್ತಬದುಕುವ‌ ನಗರವಾಸಿ ನಾರಿಯರಲ್ಲವೇ ನಾವು? *************

ಆಯ್ಕೆ Read Post »

ಇತರೆ, ಲಹರಿ

ಶ್ರಾವಣಕ್ಕೊಂದು ತೋರಣ

ಲಹರಿ ಪ್ರಜ್ಞಾ ಮತ್ತಿಹಳ್ಳಿ ಭರ‍್ರೋ…. ಎಂದು ಬೀಸುತ್ತಿದೆ ಗಾಳಿ. ಅನಾದಿ ಸೇಡೊಂದು ಹೂಂಕರಿಸಿ ಬಂದಂತೆ ಉರುಳಿ ಬೀಳುತ್ತಿವೆ ಹಳೆ ಮರದ ಗೆಲ್ಲುಗಳು. ನಡುಹಗಲೆ ಕತ್ತಲಾಗಿದೆ ಕರೆಂಟಿಲ್ಲದ ಒಳಮನೆಯಲ್ಲಿ. ತೌರಿಗೆ ಹೋದ ಹೊಸ ಸೊಸೆಯ ಕೋಣೆಯಲ್ಲಿ ಕಪಾಟಿನೊಳಖಾನೆಯಲ್ಲಿ ಮಡಿಸಿಟ್ಟ ರೇಷ್ಮೆ ಸೀರೆ ಅಸಹನೆಯಿಂದ ಮೈ ಕೊಡವಿ ಕೇಳುತ್ತಿದೆ ಎಂದು ಬರುತ್ತಾಳೆ? ಒಮ್ಮಲೆ ರಪರಪ ರಾಚಲಾರಂಭಿಸುತ್ತದೆ ಮಳೆ ಎಲ್ಲವನ್ನೂ ನೆನಪಿಸುವಂತೆ ಮತ್ತೆ ಎಲ್ಲವನ್ನೂ ಮರೆಸುವಂತೆ. ಕನ್ನಡಿಗಂಟಿಸಿದ ಬಿಂದಿಯೊಂದು ಗೋಡೆಯ ಕ್ಯಾಲಂಡರಿನತ್ತ ನೋಡಿ ಸಣ್ಣಗೆ ಕಣ್ಣು ಅರಳಿಸುತ್ತದೆ. ಸೋಮವಾರವೇ ಅಮಾವಾಸ್ಯೆ. ಅಂದರೆ ಇನ್ನು ತಡವಿಲ್ಲ. ಅಪ್ಪ ಕೊಡಿಸಿದ ಹೊಸ ಸೀರೆಯುಟ್ಟು ಅಮ್ಮ ನೀರೆರೆದು ಬೆಳೆಸಿದ ಜಾಜಿ ದಂಡೆ ಮುಡಿದು ಬಂದು ಬಿಡುತ್ತಾಳೆ. ಆಷಾಡ ತಿಂಗಳಿಡೀ ಈ ಕೋಣೆಯಲ್ಲಿ ಹೆಪ್ಪುಗಟ್ಟಿದ ವಿರಹದುರಿಯ ಅಸಹನೆಯೊಂದು ಹೇಳ ಹೆಸರಿಲ್ಲದೆ ಓಡಿ ಹೋಗುತ್ತದೆ. ಹೊಸ ಸೊಸೆಯೆದುರು ತನ್ನ ಕ್ರಮ ಪದ್ಧತಿಗಳ್ಯಾವುವೂ ಕಡಿಮೆಯಿಲ್ಲವೆಂದು ನಿರೂಪಿಸಲಿಕ್ಕೆ ಹಳೆಯ ರೂಢಿಗಳನ್ನೆಲ್ಲ ನೆನಪು ಮಾಡಿಕೊಂಡು ಪ್ರತಿ ಮಂಗಳವಾರವೂ ಗೌರಿಪೂಜೆ, ಶುಕ್ರವಾರ ಲಕ್ಷ್ಮಿಪೂಜೆ ಅಂತೆಲ್ಲ ಮಾಡಿಸಬೇಕೆಂದು ಹಂಬಲಿಸುತ್ತ ಸರಭರ ಓಡಾಡುತ್ತಿದ್ದಾಳೆ ಅತ್ತೆ. ಇಷ್ಟು ದಿವಸ ಮಂಡಿ ನೋವು ಅಂತ ನರಳುತ್ತಿದ್ದವಳಲ್ಲೆ ಆವಾಹಿಸಲ್ಪಟ್ಟ ಹೊಸ ಉಮೇದು ನೋಡಿ ಖುಷಿಯಾದ ಮಾವ ಅವಳ ಟ್ರಂಕಿನ ಅಡಿಯಿಂದ ಹೊರ ಬರುವ ಒಂದೊಂದೇ ರೇಶ್ಮೆ ಸೀರೆಗಳ ನೋಡುತ್ತ ತನ್ನ ಆಷಾಢದ ವಿರಹ ನೆನಪಿಸಿಕೊಳ್ಳುತ್ತಿದ್ದಾನೆ.  ಇನ್ನೇನು ಪಾದವೂರಲಿದೆ ಶ್ರಾವಣ. ಜ್ಯೇಷ್ಠ, ಆಷಾಢಗಳಲ್ಲಿ ಬಿಡುವಿಲ್ಲದೆ ಸುರಿದ ಮಳೆ ಶ್ರಾವಣದಲ್ಲಿ ತನ್ನ ಧಾರಾಗತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತದೆ. ಒಂದುಕ್ಷಣ ಹನಿಯುದುರಿಸುವ ಮೋಡಗಳು ಮುಂದೋಡಿದ ಕೂಡಲೆ ಎಳೆ ಬಿಸಿಲು ಬೆನ್ನಟ್ಟಿ ಬರುತ್ತದೆ. ಅದಕ್ಕಾಗಿಯೇ ಬೇಂದ್ರೆಯವರು ಹೇಳಿದ್ದು “ಅಳಲು ನಗಲು ತಡವೆ ಇಲ್ಲ, ಇದುವೆ ನಿನಗೆ ಆಟವೆಲ್ಲ ಬಾರೋ ದಿವ್ಯ ಚಾರಣಾ ತುಂಟ ಹುಡುಗ ಶ್ರಾವಣಾ” ಹಾಗೆ ಹೇಳದೇ ಕೇಳದೇ ರಜಾ ಹಾಕಿ ಹೋದ ಸೂರ್ಯ ಮತ್ತೆ ಆಗೀಗ ಕಾಣಿಸಿಕೊಳ್ಳತೊಡಗಿದ್ದೇ ಗಿಡಗಳ ಚೈತನ್ಯ ಪರಿಧಿ ಹಿಗ್ಗತೊಡಗುತ್ತದೆ.ಹೆಂಚಿನ ಮೇಲೆ ಜರ‍್ರೆನ್ನುವ ಮಳೆಯ ಅನಾಹತ ನಾದ ಕೇಳಿ ಕೇಳಿ ಸಾಕಾದ ಕಂಬಗಳು ಬಾಗಿಲಾಚೆಗಿನ ಪಾಗಾರದತ್ತ ನೋಟ ಹರಿಸುತ್ತಿವೆ. ಕೆಂಪು ಕಲ್ಲಿನ ಅದರ ಮೈ ತುಂಬ ಹಚ್ಚ ಹಸಿರಿನ ಪಾಚಿಯ ಅಂಗಿ ಬೆಳೆಯುತ್ತಿದೆ. ಬಿರುಬಿಸಿಲ ತಾಪಕ್ಕೆ ನೆಲದೊಳಗೆ ಗೆಡ್ಡೆರೂಪದಲ್ಲಿ ತಲೆ ಮರೆಸಿಕೊಂಡಿದ್ದ ಭೂಚಕ್ರ ಕೆಂಪನೆಯ ಬೆಂಕಿ ಚೆಂಡಾಗಿ ಅರಳಲು ಮೊಗ್ಗೊಡೆದು ತಯಾರಾಗಿದೆ. ಸರಸರನೆ ಚಿಗಿತುಕೊಂಡ ಡೇರೆ ಹಿಳ್ಳೆ, ಶ್ಯಾವಂತಿಗೆಗಳು ಹೊಸ ಸೊಸೆಯಷ್ಟೇ ಚೆಂದಗೆ ಸಿಂಗರಿಸಿಕೊಂಡು ನಗುತ್ತಿವೆ. ಅಂಗಳದ ತುಂಬ ಹೆಸರೇ ಗೊತ್ತಿಲ್ಲದ ಕಳೆಗಿಡಗಳು ಪುಟುಪುಟು ಎದ್ದು ನಿಂತುಬಿಟ್ಟಿವೆ. ಯಾರೂ ನೆಡದಿದ್ದರೂ ಎಲ್ಲಿಯದೊ ನೆಲದ ಬೀಜಗಳು ಗಾಳಿ ಸವಾರಿ ಮಾಡಿಕೊಂಡು ಇಷ್ಟು ದೂರ ಬಂದು ಈ ಮಣ್ಣ ಮೈಯಲ್ಲಿ ಮುಖ ಒತ್ತಿ ಕಾಯುವುದೆಂದರೆ, ಆಮೇಲೆ ಯಾವಾಗಲೊ ಬೀಳುವ ಮಳೆಹನಿಯ ಕರೆಗೆ ಓಗೊಟ್ಟು ಚಿಗಿತು ಕುಡಿಯೊಡೆಯುವುದೆಂದರೆ ಅದೆಂತಹ ಪ್ರೀತಿಯ ಋಣಾನುಬಂಧ ಇರಬಹುದು! ಅದಿನ್ನೆಂತಹ ಜೀವದುನ್ಮಾದ ಛಲವಿರಬಹುದು! ಎಲ್ಲಿ ನೋಡಿದರಲ್ಲಿ ಹಸುರಿನ ಹೊಸ ಗಾನ ವಿತಾನ. ಬೇಂದ್ರೆಯವರು ಉದ್ಘರಿಸಿದಂತೆ  “ಬೇಲಿಗೂ ಹೂ ಅರಳಿದೆ ನೆಲಕೆ ಹರೆಯವು ಮರಳಿದೆ ಭೂಮಿ ತಾಯ್ ಒಡಮುರಿದು ಎದ್ದಳೋ ಶ್ರಾವಣದ ಸಿರಿ ಬರಲಿದೆ ಮಣ್ಣಹುಡಿಯ ಕಣಕಣವೂ ಕಣ್ಣಾಗಿ ಪಡೆದು ಬಣ್ಣಗಳ ಜಾತ್ರೆ ಶುರುವಾಗುತ್ತದೆ. ಅಂಗಳದ ತುಂಬ ಮಲ್ಲಿಗೆ, ಅಬ್ಬಲ್ಲಿಗೆ, ಗೆಂಟಿಗೆ, ದಾಸಾಳ, ಶ್ಯಾವಂತಿಗೆ, ಗುಲಾಬಿ, ಶಂಖಪುಷ್ಪ ಒಂದೇ ಎರಡೇ ನೂರಾರು ಹೂಗಳ ಸಂತೆ ನೆರೆಯಲಿದೆ. ಈ ಸೊಬಗು ನೋಡಲು ಮುಗಿಲಂಚಿನಲ್ಲಿ ಮೋಡ ಬಾಗಿ ನಿಲ್ಲುತ್ತದೆ. ಯಾವ ಹೂವಿನಂಗಡಿಗೆ ನುಗ್ಗಬೇಕೊ ತಿಳಿಯದ ಗೊಂದಲದಲ್ಲಿ ಪಾತರಗಿತ್ತಿಗಳು ಗಲಿಬಿಲಿಯಿಂದ ಕುಪ್ಪಳಿಸಬೇಕಾಗುತ್ತದೆ. ಮಸುಕು ಹರಿದು ಪಕ್ಕ ತೆರೆದು ಮುಕ್ತಿ ಪಡೆಯುವ ಚಿಟ್ಟೆಗಳು ಅಪ್ಸರೆಯರೇ ಅಂಗಳಕ್ಕಿಳಿದ ಭಾಸ ಮೂಡಿಸುತ್ತವೆ. ಮನೆ ಬಿಟ್ಟು ಹೊರಗೆ ಬರಲಾರದಂತೆ ಸುರಿದ ಮಳೆಯೊಮ್ಮೆ ಬಿಡುವು ಕೊಟ್ಟರೆ ಬಾಗಿಲಾಚೆಗೆ ಗೇಟು ದಾಟಿ ಬಯಲಿಗಿಳಿಯಬಹುದು. ಹಿಂಡು ಮೋಡಗಳು ದಂಡೆತ್ತಿ ಹೊರಟಂತೆ ಓಡುವುದ ನೋಡಬಹುದು. ತುಂಬಿ ಹರಿವ ಕೆರೆಯ ಕೆನ್ನೆ ಮೇಲೆ ಮುತ್ತಿಡುವ ತುಟಿಯಂತೆ ಕೂತ ಕೆನ್ನೈದಿಲೆಗೆ ಕೈ ಬೀಸಬಹುದು. ಅರೆರೆ ಇದೇನಾಶ್ಚರ್ಯ ಕೊಳವು ನೀಲಿ ಮುಗಿಲಂತೆ ಕಾಣುತ್ತಿದೆ, ಮುಗಿಲು ನೀರಕೊಳದಂತೆ ಕಾಣುತ್ತಿದೆ. ಬೇಂದ್ರೆ ಕವನದ ಸಾಲು ಹೇಳುವಂತೆ ಕೃಷ್ಣವರ್ಣದ ವಾಸುದೇವ ಬೀರಿದ ಬೆಳಕು ಘನ ನೀಲ ಗಗನದಲಿ ಸೋಸಿ ಬಂದಂತೆ ನೀಲ ಘನ ವೃಷ್ಟಿಯನ್ನುಂಡಾ ವಸುಂಧರೆಯು ಹಸಿರಿನಲಿ ಕಾಮನನೆ ಹಡೆದು ತಂದಂತೆ. ಹಸಿರುಡುಗೆಯುಟ್ಟು ಹೂ ಮುಡಿದುಕೊಳ್ಳುವ ಶ್ರಾವಣದಲ್ಲಿ ಸಾಲುಸಾಲು ಹಬ್ಬಗಳು. ಪ್ರತಿ ದಿನವೂ ಒಂದೊಂದು ವೃತ, ಸಡಗರ. ನಾಗಪ್ಪನಿಗೆ ತನಿ ಎರೆಯುವ ಚೌತಿ, ಅರಳು-ಎಳ್ಳು-ಶೆಂಗಾ-ಸೇವಿನುಂಡೆಗಳ ಪಂಚಮಿ. ಎತ್ತೆತ್ತರದ ಮರದ ಗೆಲ್ಲುಗಳಲಿ ಜೀಕುವ ಜೋಕಾಲಿ. ಹೊಸ ಜನಿವಾರ ಧರಿಸುವ ನೂಲು ಹುಣ್ಣಿಮೆ, ಅಣ್ಣ-ತಮ್ಮಂದಿರ ಪ್ರೀತಿ-ವಾತ್ಸಲ್ಯಗಳ ನವೀಕರಣಕ್ಕೆ ರಕ್ಷಾ ಬಂಧನ. ಎರಡನೆ ಶುಕ್ರವಾರದ ವರಮಹಾಲಕ್ಷ್ಮಿ ಕೃಷ್ಣ ಪಕ್ಷದ ಅಷ್ಟಮಿಯಂದು ಗೋಕುಲಾಷ್ಟಮಿ. ಮತ್ತೆ ಹತ್ತು ದಿನ ಕಳೆಯುತ್ತಿದ್ದಂತೆ ಭಾದ್ರಪದದ ಸ್ವರ್ಣಗೌರಿ ವೃತ. ಮರುದಿನ ಬರುತ್ತಾನೆ ಗಣೇಶ. ಐದು ದಿನದ ಪೆಂಡಾಲುಗಳು, ಬೀದಿಗಳಲ್ಲಿ ಮೆರವಣಿಗೆ ಎಳೆಯಷ್ಟಮಿ, ಅನಂತನ ಚತುರ್ದಶಿ, ಪಿತೃಪಕ್ಷದ ಶ್ರಾದ್ಧಗಳು, ಮಹಾಲಯ ಅಮಾವಾಸ್ಯೆ.  ಓಹ್ ಇನ್ನು ಅಡಿಗೆ ಮನೆಗೆ ಬಿಡುವೇ ಇಲ್ಲ. ಸಣ್ಣಗೆ ಬೆಂಕಿಯುರಿ ಮಾಡಿಕೊಂಡು ಒಂದೊAದೇ ಕಾಳುಗಳನ್ನು ಹುರಿದುಕೊಳ್ಳಬೇಕು. ಆಚೀಚೆ ಮನೆಯವರಿಗೆ ಘಂ ಎಂಬ ವಾಸನೆ ತಲುಪಿ ಯಾವ ಉಂಡೆಗಳ ತಯಾರಿ ನಡೆದಿದೆ ಎಂಬ ಸುದ್ದಿ ತಲುಪಿಯೇ ಬಿಡುತ್ತದೆ. ಹೆಸರು, ಕಡಲೆ, ಪುಟಾಣಿಗಳೆಲ್ಲ ಹುರಿದು ಕೆಂಪಾಗಿ ಡಬ್ಬಿಯಲ್ಲಿ ಕೂತು ಗಿರಣಿಗೆ ಹೋಗುತ್ತವೆ. ಪಂಚಮಿ ಇದಿರಿರುವಾಗ ಎಷ್ಟೇ ಮಳೆಯಿದ್ದರೂ ಕರೆಂಟಿದ್ದಷ್ಟೂ ಹೊತ್ತು ಗಿರಣಿ ತೆರೆದುಕೊಂಡು ಕೂಡುತ್ತಾನೆ ಆತ. ಹಿಟ್ಟು ಬೀಸಿಕೊಂಡು ಬಂದೊಡನೆ ಶುರುವಾಗುತ್ತದೆ ಬಿಡುವಿಲ್ಲದ ಕೆಲಸ. ಕರದಂಟಿನುಂಡೆ, ಸೇವಿನುಂಡೆ, ಲಡ್ಡಕಿಯುಂಡೆ, ತಂಬಿಟ್ಟು, ರವೆಲಾಡು, ಬೇಸನ್ ಲಾಡು ಪ್ರತಿ ಮನೆಯಲ್ಲೂ ಕಡೇ ಪಕ್ಷ ಐದು ಬಗೆ ಉಂಡೆಗಳನ್ನು ಮನೆಯ ಹೆಣ್ಣು ಮಕ್ಕಳಿಗೆ ಉಡಿ ತುಂಬಬೇಕು. ಆಚೀಚೆಯವರು ತಾಟಿನಲ್ಲಿ ಬಗೆಬಗೆಯ ಉಂಡಿಗಳನ್ನಿಟ್ಟು ಕೊಟ್ಟಾಗ ತಿರುಗಿ ನಮ್ಮ ಮನೆಯ ಉಂಡಿಗಳನ್ನು ತುಂಬಿ ಕೊಡಬೇಕಲ್ಲ! ಸಿಹಿಯ ಜೊತೆಗೆ ಖಾರದ ತಿನಿಸಿರದಿದ್ದರೆ ನಡೆಯುತ್ತದೆಯೆ? ಚಕ್ಕುಲಿ, ಕೋಡಬಳಿ, ಖಾರದವಲಕ್ಕಿ, ಶಂಕರಪಾಳಿ ಇಷ್ಟಾದರೂ ಆಗಲೇಬೇಕಲ್ಲ! ಹಬ್ಬಕ್ಕೆ ಮಗಳು ತವರಿಗೆ ಬರಲೇಬೇಕು. ಉಡಿ ತುಂಬಲಿಕ್ಕೆ ಹೊಸ ಸೀರೆ ತರಬೇಕು. ಒಂದು ಕೊಳ್ಳಲು ಹೋದಾಗಲೇ ನಾಕು ಚೆಂದ ಕಾಣುತ್ತವೆ. ಯಾವುದು ಕೊಳ್ಳುವುದು ಯಾವುದು ಬಿಡುವುದು ಗೊಂದಲವುಂಟಾಗಿ ಎರಡಾದರೂ ಕೊಳ್ಳೋಣ ಎನಿಸಿಬಿಡುತ್ತದೆ. ಮಗಳಿಗೆ ಕೊಡುವಾಗ ತನಗೂ ಒಂದು ಇದ್ದರೆ ಹೇಗೆ ಅಂತ ಪ್ರಶ್ನೆ ಹುಟ್ಟುತ್ತದೆ. ಈ ಮಾದರಿಯದು ತನ್ನ ಬಳಿ ಇಲ್ಲವಲ್ಲ ಅಂತ ಸಮಜಾಯಶಿ ಸಿಗುತ್ತದೆ. ಅದು ನಾರಿಗೂ ಸೀರೆಗೂ ಇರುವ ಜನ್ಮ ಜನ್ಮದ ಅನುಬಂಧ! ಕೊಂಡಷ್ಟೂ ತೀರದ ವ್ಯಾಮೋಹ. ಅದಕ್ಕಾಗಿಯೇ ಜಡಿಮಳೆಯಲ್ಲೂ ಗಿಜಿಗಿಜಿ ವ್ಯಾಪಾರ ನಡೆಸಿವೆ ಸೀರೆಯಂಗಡಿಗಳು. ಪೇಟೆ ಬೀದಿ ಹೊಕ್ಕ ಮೇಲೆ ಕೇಳಬೇಕೆ. ಗಿಳಿಹಸಿರು ಬಣ್ಣದಲ್ಲಿ ಚೆಂದಗೆ ನಗುತ್ತಿರುವ ಪೇರಲ ಕಾಯಿಗಳು, ಕೆಂಪಗೆ ಹಲ್ಲುಕಿಸಿದು ಕೂತಿರುವ ದಾಳಿಂಬೆಗಳು, ದಪ್ಪಗೆ ಮುಖ ಊದಿಸಿಕೊಂಡು ಬಡಿವಾರದಲ್ಲಿ ಎತ್ತರದ ಹಲಗೆ ಹತ್ತಿರುವ ಸೇಬುಗಳು. ಹಣ್ಣು ನೈವೇದ್ಯಕ್ಕಿಡದಿದ್ದರೆ ಅದೆಂಥಹ ಹಬ್ಬವಾದೀತು. ಹೂವಿನ ರಾಶಿ ಹಾಕಿಕೊಂಡು ಕೂತವಳ ಎದುರಿಗೆ ಬಂದಾಗಲೇ ಹೌಹಾರುವಂತಹ ಸ್ಥಿತಿ ಬರುವುದು. ಅಬ್ಬಾ ಮಲ್ಲಿಗೆ ಮಾರೊಂದಕ್ಕೆ ಎಷ್ಟು ಹೇಳುತ್ತಿದ್ದಾಳೆ! ಕೇಳಿದರೆ ಎಲ್ಲೂ ಮಾಲೇ ಇಲ್ಲ ಅಮ್ಮಾ ನನಗೆ ಬುಟ್ಟಿಗೆ ಇಷ್ಟು ಬಿದ್ದಿದೆ ಅಂತ ಇಷ್ಟುದ್ದ ಕತೆ ಹೇಳುತ್ತಾಳೆ. ಅದ್ಯಾಕೆ ಮಹಾಲಕ್ಷ್ಮಿಗೂ ರೇಟೇರಿಸಿಕೊಳ್ಳುವ ಹೂಮಾಲೆಗೂ ಸಂಬಂಧ ಹೀಗೆ ಕುದುರಿಕೊಂಡಿದೆಯೊ ಗೊತ್ತಿಲ್ಲ. ಪೂಜೆಗೆ ಬರುವ ಮುತ್ತೈದೆಯರಿಗೆ ಅರಿಶಿಣ ಕುಂಕುಮದ ಜೊತೆ ಎಲೆ-ಅಡಿಕೆ ಇಟ್ಟು ಹೂಮಾಲೆಯ ತುಂಡು ಕೊಡಲೇಬೇಕಲ್ಲ. ಅಂತೂ ಚೌಕಾಶಿ ಮಾಡಿ ಗೊಣಗೊಣ ಎಂದು ಅಲವತ್ತುಕೊಳ್ಳುತ್ತಲೇ ಖರೀದಿಸಬೇಕು. ಉಡಿ ತುಂಬುವ ವಸ್ತುಗಳೆಲ್ಲ ಒಂದೇ ಅಂಗಡಿಯಲ್ಲಿ ಸಿಕ್ಕಿಬಿಡುವುದರಿಂದ ತಾಪತ್ರಯವಿಲ್ಲ. ಖಣದ ಬಟ್ಟೆ, ಹಣಿಗೆ, ಬಳೆಗಳು, ಕರಿಮಣಿ, ಕೊಳ್ ನೂಲು(ಕೆಂಪುದಾರ) ಜೊತೆಗೆ ಪಿಳಿಪಿಳಿ ಕನ್ನು ಮಿಟುಕಿಸುತ್ತ ಇಣುಕಿ ನೋಡುತ್ತಿದೆ ಪುಟಾಣಿ ಕನ್ನಡಿ. ಯಾರೂ ಹೊಲಿಸಿಕೊಳ್ಳಲು ಸಾಧ್ಯವಿಲ್ಲದ ರವಿಕೆ ಬಟ್ಟೆಗಳನ್ನು ಕೊಡುವ ಬದಲಿಗೆ ಈಗೀಗ ಪುಟ್ಟ ಸ್ಟೀಲು ತಟ್ಟೆಗಳನ್ನು, ಡಬ್ಬಿಗಳನ್ನು ಅಥವಾ ಪರ್ಸುಗಳನ್ನು ಕೊಡುತ್ತಿದ್ದಾರೆ. ಆಚೀಚೆ ಮನೆಯವರನ್ನೇನೋ ಹೋಗಿ ಕರೆಯಬಹುದು ಆದರೆ ಉಳಿದ ಗೆಳತಿಯರನ್ನು ಕರೆಯಲಿಕ್ಕೆ ಫೋನೇ ಗತಿ. ಮೊದಲ ಮಂಗಳವಾರ ಬಂದವರನ್ನು ಇನ್ನುಳಿದ ವಾರಗಳಂದು ನೀವೇ ಬಂದುಬಿಡಿ ಮತ್ತೆ ಫೋನು ಮಾಡಲಿಕ್ಕೆ ನನಗೆ ಸಮಯ ಸಿಕ್ಕುವುದಿಲ್ಲ ಎಂದು ಪುಸಿ ಹೊಡೆದಿಟ್ಟುಕೊಂಡರೆ ಸಾಕು. ಅಯ್ಯೊ ಅರಿಶಿಣ ಕುಂಕುಮಕ್ಕೆ ಇಲ್ಲವೆನ್ನಲಿಕ್ಕೆ ಸಾಧ್ಯವಿದೆಯೆ ಎಂದು ಬರಲೊಪ್ಪುತ್ತಾರೆ. ನಸುಕಿಗೇ ಎದ್ದು ಮನೆಯೆದುರು ದೊಡ್ಡ ದೊಡ್ಡ ರಂಗೋಲಿ ಹಾಕಿ ಬಾಗಿಲಿಗೆ ತೋರಣ ಕಟ್ಟಿ ಹೋಳಿಗೆ ಅಂಬೋಡೆ ಕೋಸಂಬರಿ ಪಾಯಸಗಳ ಅಡುಗೆ ಮಾಡಿ ಆಮೇಲೆ ದೇವರ ಎದುರಿಗೆ ಕಲಶವಿರಿಸಿ ತೆಂಗಿನಕಾಯಿಗೆ ದೇವಿಯ ಮುಖವಾಡವಿಟ್ಟು ಹೊಸ ಸೀರೆಯುಡಿಸಿ, ಬಗೆಬಗೆಯ ಆಭರಣ ತೊಡಿಸಿ ಅಲಂಕರಿಸಿ ಪೂಜೆ ಮುಗಿಸುವಷ್ಟರಲ್ಲಿ ಮೂರೋ-ನಾಕೋ ಗಂಟೆಯಾಗಿಬಿಡುತ್ತದೆ. ಬೆಳಗಿಂದ ಉಪವಾಸವಿದ್ದದ್ದಕ್ಕೆ ಊಟವೂ ಸೇರುವುದಿಲ್ಲ. ಅಷ್ಟರಲ್ಲಿ ನೆನಪಾಗುತ್ತದೆ ಒಹೋ ಮುತ್ತೈದೆಯರು ಅರಿಶಿಣ-ಕುಂಕುಮಕ್ಕೆ ಬರುವ ಸಮಯವಾಯಿತು. ಈಗ ಮಾತ್ರ ಅವಸರ ಮಾಡುವಂತಿಲ್ಲ. ಸಾಧ್ಯವಾದಷ್ಟು ಚೆನ್ನಾಗಿ ಅಲಂಕರಿಸಿಕೊಳ್ಳಬೇಕು. ಏಕೆಂದರೆ ಹದ್ದಿನ ಕಣ್ಣಿನಿಂದ ಉಟ್ಟ ಸೀರೆಯ ಬಣ್ಣ-ಬುಟ್ಟಾ-ಸೆರಗು ನೋಡುತ್ತ  ತೊಟ್ಟ ಆಭರಣದ ತೂಕವನ್ನು ಅಳೆದು ಬಿಡುತ್ತಾರೆ. ಪರಸ್ಪರರ ಮೇಲೆ ನೋಟದ ಸರ್ಚ ಲೈಟ್ ಓಡಾಡಿದ ಕೂಡಲೇ ಪ್ರಶ್ನೆಗಳ ಬಾಣದ ಮಳೆ ಶುರುವಾಗುತ್ತವೆ. ಎಲ್ಲಿ ತಗೊಂಡ್ರಿ, ಎಷ್ಟು ಕೊಟ್ರಿ, ಎಷ್ಟು ಡಿಸ್ಕೌಂಟು ಬಿಟ್ರು ಅಂತ. ಉಡುಪು-ತೊಡಪುಗಳನ್ನೆಲ್ಲ ಅಳೆದಾದ ನಂತರ ಸರ್ಚಲೈಟ್ ನಾರಿಮಣಿಯರ ದೇಹದಾಕಾರವನ್ನು ಅಳೆಯಲು ಶುರು ಮಾಡುತ್ತದೆ. ತೆಳ್ಗೆ ಕಾಣ್ತಿದೀರಲ್ಲ ಏನು ಮಾಡಿದ್ರಿ?  ಯಾಕೊ ಸ್ವಲ್ಪ ದಪ್ಪಗಾಗೀದೀರಲ್ಲ ವಾಕಿಂಗ್ ಬಿಟ್ಟಿದೀರಾ? ಕಣ್ಣ ಕೆಳಗೆ ಕಪ್ಪು ಕಾಣ್ತಿದೆಯಲ್ಲ ಹುಶಾರಿಲ್ವಾ? ಹೀಗೆ ಉಭಯ ಕುಶಲೋಪರಿ ಸಾಂಪ್ರತ ನಡೆಸುತ್ತ ಲಕಲಕ ಹೊಳೆಯುವ ಲಲನೆಯರ ಹಿಂಡು ತನ್ನ ಕಡೆಗೆ ನೋಡುವುದೇ ಇಲ್ಲವಲ್ಲ ಎಂದು ಪೆಚ್ಚಾಗುವ ಮಹಾಲಕ್ಷಿಗೆ ಪಿಸುಧ್ವನಿಯಲ್ಲಿ ಸಾಂತ್ವನ ಹೇಳುತ್ತಿದೆ ಅವಳ ಕೊರಳ ಕಾಸಿನ ಸರ- ಇದೂ ಒಂಥರ ಲೌಕಿಕದ ಸಹಸ್ರನಾಮಾವಳಿ ಕಣಮ್ಮ ದೇವಿ. ಪ್ರತಿ ವಾರ ಗಿಲಿಗಿಲಿ ಎನ್ನುವ ಲಕ್ಷ್ಮಿಯನ್ನು ನೋಡುತ್ತ ತನ್ನ ಸೀರೆಯ ಪದರ ಬಿಡಿಸಿ ಕೊಡವಿ ತಯಾರಾಗುತ್ತಿದ್ದಾಳೆ ಸ್ವರ್ಣಗೌರಿ. ಅಮ್ಮಾ ನಾನೊಂದಿನ ತಡವಾಗಿ ಯಾಕೆ ಬರಬೇಕು ನಿನ್ನ ಜೊತೆಗೆ ಬಂದು ಬಿಡಲಾ? ಎನ್ನುವುದು ಗಣಪನ ಪ್ರಶ್ನೆ. ಏಯ್ ಒಂದು ದಿವಸವಾದರೂ ಗಂಡ-ಮಕ್ಕಳ ಕಾಟವಿಲ್ಲದೇ ಹಾಯಾಗಿ ಹೋಗಿ ಬರ್ತೀನಿ ನೀನು ನಿಮ್ಮಪ್ಪನ ಜೊತೆಗಿರು ಎಂದು ಸಿಡುಕುತ್ತಿದ್ದಾಳೆ ಶ್ರೀಗೌರಿ. ಆಹಾ ಇನ್ನೂ ಏನೆಲ್ಲ ನಡೆಯಲಿದೆ ನೋಡೋಣ ಬನ್ನಿ ಎಂದು ಓಡೋಡಿ ಬಂದ ಮೋಡಗಳು ಢಿಕ್ಕಿಯಾಟ ನಡೆಸಿವೆ. ಅರೆರೆ ಇದೆಲ್ಲ ಪ್ರತಿ ವರ್ಷದ ಕತೆಯಾಯಿತು. ಈ ವರ್ಷ ಹಾಗಿಲ್ಲವಲ್ಲ. ಯಾರನ್ನೂ ಕರೆಯುವಂತಿಲ್ಲ. ಬಂದವರನ್ನು ಕಳಿಸುವಂತಿಲ್ಲ. ಅರಿಶಿನ ಹಚ್ಚುವ ಜಾಗದಲ್ಲಿ ಕೂತಿದೆ ಮಾಸ್ಕ್. ಮಂಗಳಗೌರಿ ಭೂಮಿಗೆ ಬರಬೇಕೆಂದರೂ ಮಾಸ್ಕ್ ಕಡ್ಡಾಯ. ಸ್ಯಾನಿಟೈಸರ್ ಬೊಗಸೆಗಳಿಗೆ ಮಹಾಲಕ್ಷ್ಮಿ ಕೃಪೆ ಮಾಡುತ್ತಾಳೆಯೆ? ********

ಶ್ರಾವಣಕ್ಕೊಂದು ತೋರಣ Read Post »

ಕಾವ್ಯಯಾನ

ಹೇಳಲೇನಿದೆ

ಕವಿತೆ ಡಾ.ಗೋವಿಂದಹೆಗಡೆ ಇಲ್ಲ, ನಿಮ್ಮೆದುರು ಏನನ್ನೂಹೇಳುವುದಿಲ್ಲ ಹೇಳಿದಷ್ಟೂ ಬೆತ್ತಲಾಗುತ್ತೇನೆಮತ್ತೆ ಬಿತ್ತಿಕೊಳ್ಳಲು ಏನುಉಳಿಯುತ್ತದೆಹೇಳಿದಷ್ಟು ಜೊಳ್ಳಾಗುತ್ತೇನೆಮೊಳೆಯಲು ಮತ್ತೆಉಳಿಯುವುದೇನು ಖರೇ ಅಂದರೆನಿಮಗೆ ಏನನ್ನೂ ಹೇಳುವಅಗತ್ಯವೇ ಇಲ್ಲ ಕಣ್ಣುಗಳಲ್ಲೇ ಸೆರೆಹಿಡಿದುದೋಷಾರೋಪಪಟ್ಟಿ ಸಲ್ಲಿಸಿಯಾವ ಪಾಟೀಸವಾಲೂಇಲ್ಲದೇಶಿಕ್ಷೆ ವಿಧಿಸಿ… ಹೇಳಲೇನಿದೆ? ***********

ಹೇಳಲೇನಿದೆ Read Post »

ಕಥಾಗುಚ್ಛ

ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. …..

ಕಥೆ ನಂದಿನಿ ವಿಶ್ವನಾಥ ಹೆದ್ದುರ್ಗ. “ನಾಡಿದ್ದು ಒಂದು ಇಂಟರವ್ಯೂ ಮಾಡೋಕಿದೆ.ಅವರ ಫೋನ್ ನಂಬರ್ ಜೊತೆಗೆ ಉಳಿದ ಡೀಟೈಲ್ಸ್ ಕಳಿಸ್ತಿನಿ.ಪ್ಲಾಂಟೇಷನ್ ನಲ್ಲಿ ಅವರು ಮಾಡಿರೋ ಸಾಧನೆಯ ಸಣ್ಣ ವಿವರವನ್ನೂ ಕಳಿಸ್ತೀನಿ.ಡೇಟ್ ನೆನಪಿರ್ಲಿ” ಅಂತ ಒಂದೇ ಉಸುರಿಗೆ ಹೇಳಬೇಕಾದ್ದನ್ನೆಲ್ಲಾ ಹೇಳಿ ಮುಗಿಸಿದ. ಅವನ ಸಮಯ ಅವನಿಗೆ ಬಹಳ ಮಹತ್ವದಂತೆ.ಹಾಗಂತ  ಪದೇಪದೇ ಹೇಳ್ತಾನೆ ಇರ್ತಾನೆ. ಅದೂ ಇತ್ತೀಚಿಗೆ. ಅವನ ಜೊತೆಗೆ  ಮಾತಾಡುವಾಗ ಸ್ವರ ಆದಷ್ಟೂ ಸಹಜವಾಗಿರೋದಿಕ್ಕೆ ಪ್ರಯತ್ನಿಸ್ತೀನಿ. ಅವನಿಗೆ ಕಾಲ್ ಮಾಡಿ ಆ ಕಡೆಯಿಂದ ಬರುವ ಮೊದಲ ಹಲೋಗೆ ಎದೆ ಮೂರು ಪಟ್ಟು ಮಿಡಿತ ಏರಿಸಿಕೊಂಡು ಕುಡಿದ ಕುದುರೆ ಥರ ಆಡೋದನ್ನ ಮುಚ್ಚಿಡ್ಲಿಕ್ಕೆ ಮಾಡೋ ಹರಸಾಹಸಕ್ಕೆ ಒಂದೊಂದು ಸರಿ ಬೇಸತ್ತು ಹೋಗಿ ಬಿಡುತ್ತೆ . ‘Okay.ಯೂ ಕ್ಯಾರಿ ಆನ್.ಇಫ್ ಯು ವಾಂಟ್ ವೆಹಿಕಲ್ ,ಐ ವಿಲ್ ಅರೆಂಜ್  ಫಾ ಇಟ್”ಅಂದ ತೀರ ಗಂಭೀರವಾಗಿ. ಅವನ ಪತ್ರಿಕೆಗಾಗಿ ಕೆಲಸ ಮಾಡೋ ಯಾರೋ ಹತ್ತರಲ್ಲೊಬ್ಬ ವರದಿಗಾರ್ತಿಯ ಜೊತೆ ಮಾತಾಡುವಂತೆ. ಎದುರಿಗಿದ್ದಿದ್ದರೆ ನನ್ನ ಉಗುರು ಅವನ ಕುತ್ತಿಗೆಯ ಮೇಲೆ ಮೂಡಿರ್ತಿದ್ವು.ಫೋನ್ ತೆಗೆದು ಬಿಸಾಡುವಷ್ಟು ಅಸಹನೆ ಅನಿಸ್ತು. ನನ್ನ ಹುಡುಗ…! ನನಗಾಗಿಯೇ ಇದ್ದವನು. ಆ ದಿನಗಳಲ್ಲಿ ನನ್ನ ಜೊತೆಗೆ ಕಳೆಯೋ ಹತ್ತೇ ಹತ್ತು ನಿಮಿಷಕ್ಕಾಗಿ ಅವನ ಆ ಹಾತೊರೆಯುವಿಕೆ, ನನ್ನ ಕಂಡೊಡನೆ ಬೆಳಕು ಚೆಲ್ಲುತ್ತಿದ ಅವನ ನೋಟದ ಪರಿ,ಅವನ ಇಡೀ ದೇಹ ನನ್ನ ಭೇಟಿಯನ್ನು ಸಂಭ್ರಮಿಸುತ್ತಿದ್ದದ್ದನ್ನ ನೋಡಿದಾಗೆಲ್ಲಾ ನನಗೆ ನನ್ನ ಬಗ್ಗೆ ಹೆಮ್ಮೆ ಅನಿಸ್ತಿತ್ತು. ಅವನ ಆ ಒಲವು,ಕಾವು ,ನನಗಾಗಿ ‌ಮೀಸಲಿಡುತ್ತಿದ್ದ ಸಮಯ ಎಲ್ಲವೂ ನನ್ನೊಳಗೆ ಉದ್ದೀಪಿಸುತ್ತಿದ್ದ ಆತ್ಮವಿಶ್ವಾಸವನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ.? ಅಂತಹ ಅವನು..?? ಹೀಗೆ…ಹೇಗೆ ಸಾಧ್ಯ.? ಇದೇನಾಯಿತು‌ ನಮ್ಮಿಬ್ಬರ ನಡುವೆ.? ಎಷ್ಟು ಯೋಚಿಸಿದರೂ ಒಂದೇ ಒಂದು ಬಿರುಕು ಮೂಡುವಂತ ಘಟನೆ ನೆನಪಿಗೆ ಬರತಿಲ್ಲ. ಅಥವಾ ನಡೆಯಲೂ ಇಲ್ಲ. ಎರಡು ವರ್ಷಗಳ ಕಾಲ ನಿತ್ಯದ ಸಂಜೆಗಳನ್ನ ನನಗಾಗಿಯೇ ಮೀಸಲಿಡುತ್ತಿದ್ದ ಅವ ನಿಧಾನವಾಗಿ ಕಾಲದ ಮಹತ್ವದ ಕುರಿತು ಭಾಷಣ ಶುರು‌ಮಾಡಿದ. ಮೊದಮೊದಲು ನನಗಿದಾವುದೂ ತಿಳಿಯಲೇ ಇಲ್ಲ. ಬರುಬರುತ್ತಾ  ನಿತ್ಯದ ಫೋನುಗಳು ಮೂರುದಿನಕ್ಕೋ,ವಾರಕ್ಕೋ ಬದಲಾಯಿಸಿಕೊಂಡಾಗ ನನ್ನ ದಿನಚರಿಯ ಭಾಗವೇ ಆಗಿಹೋಗಿದ್ದ ಸಂಭ್ರಮದ ಸಂಜೆಗಳಿಲ್ಲದೆ ದಿಗಿಲೆದ್ದು ಹೀಗೇಕೆ ಎಂದು ಗಾಬರಿ ಬಿದ್ದದ್ದು,ಮನೆಯಲ್ಲೇನಾದರೂ ಸಮಸ್ಯೆಯಾ ಅಂತ ದೇವರಿಗೆ ಮುಡುಪಿಟ್ಟದ್ದೆಲ್ಲ ಮುಗಿದು ನಾನೇ ಮಾತಾನಾಡಿಸುವ ಎಂದರೆ ಅವನ ಫೋನ್ ಲಾಂಗ್ ಟೈಮ್ ಎಂಗೇಜು. ಇಂಪಾರ್ಟೆಂಟ್ ಕೆಲಸ ಇತ್ತು,ಡೆಲಿಗೇಟ್ಸ್ ಇದ್ರು,ಕಾನ್ ಕಾಲ್ ಇತ್ತು ಅಂತ ಅವ ಹೇಳುವಾಗ  ‘ಛೆ.ಇದೇನು ಸಂಪಾದಕನ ಕೆಲಸ ಬಿಟ್ಟು ಯಾವುದಾದರೂ ಬಿಸಿನೆಸ್ ಶುರು ಮಾಡಿದ್ನಾ ಅಂತ ಅನುಮಾನವಾಗಿ ಕೇಳಿದ್ರೆ ”ಹಾ ಒಂದು ಪೆಯಿಂಟ್ ಏಜೆನ್ಸಿ ತಗೊಂಡಿದೀನಿ..ಶಾಪ್ ಮೊನ್ನೆ ಓಪನ್ ಆಯ್ತು..ಇಲ್ಲೇ ಥಿಯೆಟರ್ ಪ್ರಿಮಿಸಿಸ್ ನಲ್ಲೆ” ಅಂದ..ಶಾಕ್ ಆಯ್ತು…ಫೋಟೊ ಕಳಿಸಲಿಲ್ಲ,ಕರೀಲಿಲ್ಲ ಎಂದೆ. ತಕ್ಷಣ ಹತ್ತಿಪ್ಪತ್ತು ಫೋಟೋ ಬಂದ್ವು.  ಕಳಿಸಿದ ಫೋಟೊದಲ್ಲಿ  ದೂರದವರು ಅಂದುಕೊಂಡವರೆಲ್ಲ ಇದಾರೆ. ನಾನಿಲ್ಲ. ಹಾಗೆ ನೋಡಿದ್ರೆ ಅವರ ತಂದೆಗೆ ನನ್ನ ಕಂಡರೆ ಅಚ್ಚುಮೆಚ್ಚು. ನನ್ನ ಸೊಸೆ ಅಂತ ರೇಗಿಸ್ತಾನೆ ಇರ್ತಾರೆ. ಹಾಗಾದ್ರೆ ಇಲ್ಲೇನೋ ನಡೀತಿದೆ. ಪರಿಹರಿಸಿಕೊಳ್ಳಣಾಂದ್ರೆ ಅವ‌ ಮಾತಿಗೆ ಸಿಗೋದೇ ಇಲ್ಲ.. ಸಿಕ್ಕರೂ ಫಾರ್ಮಾಲಿಟೀಸ್ ಮಾತಿನಿಂದ ಮುಂದಕ್ಕೆ ಸಂಭಾಷಣೆ ಮುಂದುವರಿಯಲೇ ಇಲ್ಲ. “ರವೀಂದ್ರ,ದಯವಿಟ್ಟು ಕಟ್ ಮಾಡಬೇಡ ಕಾಲ್ .ಸರಿಯಾಗಿ ಕೇಳಿಸ್ಕೊ.ನಾನು ಈ ಇಂಟರ್ ವ್ಯೂ ಮಣ್ಣು ,ಮಸಿ ಅಂತ ಎಲ್ಲ ಮಾಡ್ತಿರೋದು ಹಣಕ್ಕಾಗಿ ಹೆಸರಿಗಾಗಿ ಅಲ್ಲ .ನಿನ್ನ ಜೊತೆ ಒಂದಷ್ಟು ಸಮಯ ಕಳೆಯಬಹುದಲ್ಲಾ ಅಂತ.as usual ಒಂದಷ್ಟು ರಫ್ ಪ್ತಶ್ನೆಗಳನ್ನ ತಯಾರಿ ಮಾಡಿದ್ದೀನಿ.ಅದನ್ನ ಫೈನ್ ಮಾಡಿಕೊಂಡು ನಾಡಿದ್ದು ನನ್ನನ್ನ ಮನೆಯಿಂದ ಪಿಕ್ ಮಾಡು.ನಿನ್ನ ವೃತ ಭಂಗ ಮಾಡೋದಿಲ್ಲೋ ಮಾರಾಯಾ ಜೊತೆಗಿರಬೇಕು ಅನ್ನೋದಷ್ಟೆ ನನ್ನಾಸೆ..ಏನು.?” ಅಂದೆ. ಮೊದಲಾದರೆ’ಆಹಾ ನಿನ್ನ ಸ್ವರವೇ!’ ಅಂತ ಮುದ್ದುಗರೆಯುತ್ತಿದ್ದವ ‘ಸರಿ’ ಎಂದಷ್ಟೇ ಹೇಳಿದಾಗ ಪಿಚ್ಚೆನಿಸಿತು. ಎಷ್ಟೋ ದಿನಗಳ ನಂತರ ಅವನ ಬೇಟಿ. ಸಂದರ್ಶನದ ದಿನ ಸಮಯಕ್ಕೂ ಮೊದಲೇ ತಯಾರಾಗಿ ಅವನಿಗಿಷ್ಟದ ನೀಲಿ ಬಿಂದಿಯಿಟ್ಟು ಕಾಯುತ್ತಿದ್ದವಳ ಕಣ್ಣಿಗೆ ಬಿದ್ದದ್ದು ಆಫೀಸಿನ ‌ಕಾರು. ತಲೆಸುತ್ತಿ ಬಂದ ಹಾಗಾಯ್ತು. ಹಾಗೆಲ್ಲ ನಾನು ಯೋಚಿಸಿದ ಹಾಗೆ ಇರಲಾರದು. ಅದು ಅವನೇ ಇರಬೇಕು. ಆಫೀಸ್ ಕಾರು ಅವನು ಬಳಸಬಾರದು ಅಂತೇನೂ ಇಲ್ಲವಲ್ಲ ಅಂತ ಮನಸಿಗೆ ಸಮಜಾಯಿಷಿ ಹೇಳಿಕ್ಕೊಳ್ಳುವಾಗಲೇ ಡ್ರೈವರ್ ಬಂದು’ಸರ್ ಹೇಳಿದ್ರು..ಅವರಿಗೆ ಬರೋದಿಕ್ಕೆ ಆಗಲ್ವಂತೆ.ನಿಮ್ ಫೋನು ಕನೆಕ್ಟ್ ಆಗ್ತಿಲ್ವಂತೆ..ತೋಟದ ಮಾಲೀಕರಿಗೆ ಫೋನ್ ಮಾಡಿದಾರೆ.ಬನ್ನಿ‌ಮೇಡಮ್ ‘ಅಂದ. ಇದೇನಾಗ್ತಿದೆ ನನ್ನ ಜೀವನದಲ್ಲಿ.! ನನ್ನ ಹುಚ್ಚು ಹತ್ತಿಸಿಕೊಂಡು ಕಾದುಕಾದು ಕರಗಿ ಹೋಗ್ತಿದ್ದವ ನನ್ನನ್ನುಅವಾಯ್ಡ್ ಮಾಡ್ತಿದ್ದಾನೆ.! ಕಾರಣ..?? ಇವತ್ತೇ.ಇದೇ ಕೊನೆ.ಮತ್ತೆಂದೂ‌ ಫೋನ್ ಅಥವಾ ಮೆಸೇಜ್ ಮಾಡಲಾರೆ ಅವನಿಗೆ. ಆದರೆ.? ಹೀಗಂತ ಎಷ್ಟು ದಿವಸ ಅಂದುಕೊಂಡಿಲ್ಲ ನಾನು.? ಬೆಳಗಾಗುವಷ್ಟರಲ್ಲಿ ನಿರ್ಧಾರ ಬದಲಾಗಿ ಇನ್ನೊಮ್ಮೆ.. ಒಮ್ಮೆ.. ಪ್ರಯತ್ನಿಸಬಹುದಲ್ಲಾ ಅನಿಸಿ ಮರಳಿ ಯತ್ನವ ಮಾಡಿದಾಗೆಲ್ಲಾ ಮತ್ತದೆ ಉಡಾಫೆ ಉತ್ತರ. ಅದೂ ಗಂಟೆ ಕಳೆದ ಮೇಲೆ. ” ಹಿ ಈಸ್ ಆನ್ಲೈನ್.ಬಟ್ ನಾಟ್ ಫಾರ್ ಯೂ”  ಅಂತ ಬೇರೆ ಸ್ಟೇಟಸ್ ಹಾಕಿದಾನೆ.. ನಾ ಈ ಮಟ್ಟಿಗೆ ಹಚ್ಚಿಕೊಳ್ಳೊ ಮುನ್ನ ಯೋಚಿಸಬೇಕಿತ್ತಾ..? ಆದರೆ ಅಳೆದು ಸುರಿದು ಮುಂದುವರೆಯಲು ಇದು ಭಾವಕೋಶದ ಮಾತು . ಯಾಕೆ ಅವನಿಗಾಗಿ ಅಳ್ತಿದ್ದೀನಿ ನಾನು.? ಅದೂ ಈ‌ ಮಟ್ಟಿಗೆ.? ಒಲಿಯುವವರೆಗೆ ನಡುರಾತ್ರಿ ತನಕ ನೋವು ಪ್ರಲಾಪಗಳ ಕವಿತೆ ಹಾಡಿದ್ದೇ ಹಾಡಿದ್ದು. ಛೀ ಅನಿಸುತ್ತೆ ಈಗ ಯೋಚಿಸಿದ್ರೆ. ಅತ್ತು‌ಮುಗಿದ ಮೇಲೆ  ಯೋಚಿಸುತ್ತೇನೆ.? ಯೋಗ್ಯತೆ ಇಲ್ಲದವನಿಗಾಗಿ ನನ್ನ ಕಣ್ಣೀರೇ.? ಈಗಿಂದೀಗಲೇ ಅವನನ್ನು ನನ್ನ ಮನಸಿಂದ ತೆಗೆದು ಹಾಕ್ತೀನಿ. ಹೀಗಂತ ಪದೇಪದೇ ಹೇಳಿಕೊಂಡಿದ್ದೂ ಆಯ್ತು. ಚಕ್ಕಳಮಕ್ಕಳ ಹಾಕಿ ಕೂತುಬಿಟ್ಟಿದ್ದಾನೆ. ಇಲ್ಲಿ.. ಈ ಎದೆಯೊಳಗೆ. ಹೊರಗೆ ಕಳಿಸೋದು ಅಷ್ಟು ಸುಲಭವಲ್ಲ. ‘ರವೀ…ನಿನ್ನ ಹೆಸರಿಗೆ ಅಂಟಿರುವ ಇಂದ್ರನ ಕುರಿತು ‌ನಂಗೆ ಮೊದಲಿಂದಲೂ ಅನುಮಾನ ಇದೆ’. ಅಂತಿದ್ದೆ ನಾನು ಆಗಾಗ. ಹಾಗಂದಾಗೆಲ್ಲಾ  ‘ ನನ್ನ ಪ್ರೇಮಕ್ಕೆ ,ಪಟ್ಟಕ್ಕೆ ಚಾರುದೇವಿಯೊಬ್ಬರೆ  ರಾಣಿ ‘ ಅಂದ‌ಮಾತಿಗೆ ಆಕಾಶಕ್ಕೆ ತಲೆ ಹೊಡಿಸಿಕೊಂಡು ಪೆಟ್ಟಾದ ಹಾಗೆ. ಮತ್ತೆ ಹಳೆ ನೆನಪುಗಳೆ. ಇವತ್ತು..ಇವತ್ತೇ ಕೊನೆ ಬಾರಿ. ಇನ್ನೆಂದೂ ನಿನಗೆ ಫೋನ್ ಮಾಡಲಿಕ್ಕೆ  ಮೆಸೇಜಿಗೆ ಪ್ರಯತ್ನಿಸೊಲ್ಲ.ಇದೊಂದು ಪರೀಕ್ಷೆ ನಡೆದೇ ಹೋಗಲಿ. “ರವಿ.ಮುಂದಿನ ಭಾನುವಾರ ಮಂಡ್ಯಕ್ಕೆ ಹೋಗ್ತಿದ್ದೀನಿ. ಮೈಸೂರಿನಿಂದ ಗೆಳತಿ ಪಿಕ್ ಮಾಡ್ತಾಳೆ. ಲಗೇಜಿದೆ.ಬಸ್ಸು ಪ್ರಯಾಣ “ ಅಂತ ಟೈಪಿಸಿ ಸೆಂಡ್ಒತ್ತಿದೆ. ಬಿದ್ದೇ ಹೋಗುವ ಎದೆಯ ಹಿಡಿದು ಅರ್ದ ಗಂಟೆ ಕಾಯ್ದ ಮೇಲೆ ಓಕೆ ಅಂತ ಮೆಸೇಜು ಬಂತು. ಇಷ್ಟೇನಾ..? ದೂರ ಹೋಗುವಾಗ ಹೇಳು. ಒಟ್ಟಿಗೆ ಪ್ರಯಾಣ ಮಾಡೋಣ. ನಿನ್ನ ಪ್ರಭಾವಳಿಯೊಳಗೆ ಸ್ವಲ್ಪ ಹೊತ್ತು ಇದ್ದ ಖುಷಿ ನನದಾಗುವ ಸಂಭ್ರಮವನ್ನು ಕೊಡೆ ಅಂತ ಗೋಗರೆಯುತ್ತಿದ್ದವ ಇವನೇನಾ.? ಇಲ್ಲ.. ಏನೋ ವ್ಯತ್ಯಾಸ ಆಗ್ತಿದೆ.ಅವನು ಮಾಡಿರಲಾರ ಮೆಸೇಜು.. ಒಪ್ಪಲಿಲ್ಲ ವಾಸ್ತವವನ್ನು ಮನಸ್ಸು. ಅನುಮಾನ, ಬೇರೆಯವರ ಬಳಿಯಲ್ಲಿ ಫೋನಿದ್ದರೆ..? ಕಾಲ್ ಒತ್ತಿದೆ..ಅವನದ್ದೇ ಧ್ವನಿ.ಕೇಳಿದೊಡನೆ ಕುಣಿಯೋ ನವಿಲಾಗೋ ಈ ಹಾಳು ಜನ್ಮ ಸಾಕು ಇನ್ನು. ಘನ ಗಂಭೀರವಾಗಿ ‘ಬಿಡುವಿದೆಯಾ’.ಎಂದೆ. ‘ಹಾ ಹೇಳು.’ ‘ಮಂಡ್ಯಕ್ಕೆ ಹೊರಟಿದ್ದೀನಿ’ ಮುಗಿದೇ ಇಲ್ಲ ಮಾತು. ‘ಸರಿಯಾಗಿ ಒಂಬತ್ತೂ ಕಾಲಿಗೆ ಮಾಡ್ತೀನಿ. ಪ್ಲೀಸ್ ಬಿಟ್ ಬ್ಯುಸಿ’ ಕರೆ ಕತ್ತರಿಸಿದ ಫೋನು ಹಿಡಿದವಳ ಮನಸಿಗೆ ಅವನ ಧ್ವನಿಯಲ್ಲಿ ಪ್ರಾಮಾಣಿಕತೆ ಇದೆ ಅನಿಸಿತೊ ಅಥವಾ ಈ ಸಂದರ್ಭಕ್ಕೆ ನಂಗೆ ಹಾಗೆ ಅನಿಸ್ತಿದೆಯಾ  ತಿಳಿಲಿಲ್ಲ. ಒಂಬತ್ತು ಮುಗಿದ ಮೇಲಿನ ಒಂದೊಂದು ನಿಮಿಷವೂ ಆ ಮಟ್ಟಿಗೆ ದೀರ್ಘ ಎನಿಸಿದ್ದು ಅದೇ ಮೊದಲು.. ಗಡಿಯಾರದ ಶೆಲ್ ಸರಿಗಿದೆಯಾ…ಚೆಕ್ ಮಾಡಬೇಕಿತ್ತು.. ಛೆ..ಫೋನ್  ನೆಟ್ವರ್ಕ್ ಲಿ ಇದೆಯಾ ಇಲ್ಲವೇ ಅಂತ ಚೆಕ್ ಮಾಡಿ… 9.15ಆಯ್ತು.ಓ ಮೈ ಗಾಡ್. ಇವನು…!! ಇವನು ಅವಾಯ್ಡ್ ಮಾಡ್ತಿದ್ದಾನೆ ನನ್ನ.! ಆನ್ ಲೈನ್‌ ಚೆಕ್ ಮಾಡಿದ್ರೆ ಮುಕ್ಕಾಲು ಗಂಟೆ ಹಿಂದೆ ಲಾಸ್ಟ್ ಸೀನ್ ಇದೆ. ‘ಹೈ ‘ಕಳಿಸಿದೆ. ಸಿಂಗಲ್  ರೈಟುಮಾರ್ಕು. ಅಂದರೆ. ಅಂದರೆ ಬೇರೆಯವರ ಜೊತೆಗೆ ಸಂಭಾಷಣೆ ನಡೀತಿದೆ.ಮಾತಾಡುವಾಗ ಅವ ನೆಟ್ ಆಫ್ ಇಡೋದು ಗೊತ್ತಿರೊ ವಿಚಾರವೇ. ಹೀಗೇಕಾಯ್ತು. ಸಂಬಂಧದಲ್ಲಿ ಏನೊಂದು  ಇಲ್ಲದೆ ಹೀಗೆ ದೂರಾಗಲು ಸಾಧ್ಯವೇ? ನನ್ನ ಪ್ರೀತಿಯಲ್ಲಿ ಇದ್ದ ಕೊರತೆಯಾದರೂ ಏನು? ಛೆ.ಅಲ್ಲದ್ದನ್ನೇ ಯೋಚಿಸ್ತೀನಿ. ಅಂತವನಲ್ಲ ಅವ. ಕ್ಷಣ ನಿರಾಳವಾದರೂ ಮತ್ತೆ ಎದೆಯೊಳಗೆ ಅನಂತವಾಗುತ್ತಿದ್ದ ನೋವು. ರಾತ್ರಿ ಹನ್ನೊಂದು ಕಾಲಿಗೆ ಸರಿಯಾಗಿ ಅವನಿಂದ ಮೆಸೇಜು ಬಂತು. ಜೊತೆಗೆ ಅನ್ಲೈನಿಗೂ ಬಂದ  ‘ಸಾರಿ..ಆಗಲಿಲ್ಲ.ಕಾಲ್ ಮಾಡೋದಿಕ್ಕೆ. ಫಾರ್ ಮಂಡ್ಯ, ಯೂ ಪ್ಲೀಸ್ ಕ್ಯಾರಿ ಆನ್. ಹ್ಯಾವ್ ಎ ನೈಸ್ ಟೈಮ್.ಬೈ.’ ಗಳಗಳನೆ ಅಳಬಹುದಾದ ಮಾತುಗಳು. ಆದರೆ…ಹೇಗೋ ಈ ಎದೆ ಗಟ್ಟಿಯಾಗಿದೆ.! ಒಂದೇ ಒಂದು ತೊಟ್ಟು ಕಣ್ಣೀರು ಬರಲಿಲ್ಲ . ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನೆಲ್ಲಾ ತುಸು ಹೊತ್ತು ಧ್ಯಾನಿಸಿ ಆವಾಹಿಸಿಕೊಂಡೆ. ಮತ್ತೆಂದೂ. ಎಂದೆಂದೂ ಅವನಿಗಾಗಿ ಕಾಯಲಾರೆ. ತಿರುಗಿ ಬಂದರೆ ಸ್ವೀಕರಿಸಲಾರೆ. ಮುಂದೆ ಯಾರಿಗಾಗಿಯೂ ಕಾಯಲಾರೆ.! ಕನ್ನಡಿ ನೋಡಿಕೊಂಡೆ. ಹಣೆಯ  ನೆರಿಗೆಗಳೆಲ್ಲ ಸಡಿಲಾಗಿ ಮುಖ ಪ್ರಸನ್ನವಾಗಿತ್ತು. ನೆಮ್ಮದಿಯ ಒಂದು ಕಿರುನಗು ತುಟಿಯ ಮೇಲೆ. ಎಂದೂ ನಿದ್ರಿಸದ ರೀತಿಯಲ್ಲಿ ಆ ರಾತ್ರಿ ಮಲಗಿ ನಿದ್ರಿಸಿದೆ. —– ಸುದೀರ್ಘವಾದ ನಿಟ್ಟುಸಿರಿನೊಂದಿಗೆ  ಮಾತು ಮುಗಿಸಿ ಅವಳು ನನ್ನ ಮುಖ ನೋಡಿದಳು. ಯಾಕೋ ಅಪ್ಪಿಕೊಳ್ಳಬೇಕು ಅನಿಸಿತು. ಸಮಾನ ದುಃಖಿಗಳು. ಇದೇ ಕಥೆ ನನ್ನ ಜೀವನದಲ್ಲಿ. ಎರಡು ವರ್ಷ ಮೊದಲು. ಆಗ ನನ್ನ ತಪ್ಪಿಸಿ ಮಾತಿಗೆ ತೊಡಗಿದ್ದು ಅವ ಇವಳ ಜೊತೆ.. ಈಗ …!!! ಹೆಸರು ಗೊತ್ತಿಲ್ಲ.. ಯಾವುದೋ ಹೆಣ್ಣು ಎದೆ… ಮೊಹರೊತ್ತಿಕೊಂಡಿದೆ ಇವನ ಹೆಸರನ್ನ.! ಮತ್ತದೇ ನೋವಿನ ಪ್ರಲಾಪಗಳ ಹಾಡು ಹೇಳ್ತಿರಬಹುದು. ನಡುರಾತ್ರಿವರೆಗೆ..!! ಹೆಣ್ಣು ಜನ್ಮ..’ಅಯ್ಯೋ’ ಅನ್ನೋದು ಜನ್ಮ ಸಿದ್ಧ.! ಎಲ್ಲ ಹೇಳಿ ಹಗುರಾಗಿ ಹೊಸದಾಗಿ ಹೊಳೆಯುತ್ತಿದ್ದ ಅವಳ ಅಕ್ಕರೆಯಲಿ ಕರೆದು ಒಂದು ಸಣ್ಣ ವಾಕಿಂಗ್ ಹೋಗಲಿಕ್ಕೆ ಹೊರಟೆ. ಅವಳೂ ಅಡ್ಡಿಯಿಲ್ಲದೆ  ಎದ್ದಳು. **********************

ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. ….. Read Post »

ಕಾವ್ಯಯಾನ

ಬೊಗಸೆಯೊಡ್ಡುವ

ಕವಿತೆ ಗೋಪಾಲ ತ್ರಾಸಿ ಅಹೋರಾತ್ರಿಬಾನು ಭುವಿಯ ನಡುವೆ ಚಲನಶೀಲ ಶಿಖರದಂದದಿ ಉದ್ದಾನುದ್ದಕೆರಾಶಿರಾಶಿ ಮೋಡಗಳ ಜಂಬೂಸವಾರಿ,ಕಾರಿರುಳ ದಿಬ್ಬಣಕೆ,ಅಲ್ಲೊಂದು ಇಲ್ಲೊಂದುಅಂಜುತ್ತಂಜುತ್ತ ಇಣುಕುವಮಿಣುಕು ನಕ್ಷತ್ರಗಳು, ಸಾಕ್ಷಿ. ಮೈಭಾರವಿಳಿಸಿಕೊಳ್ಳಲೇನೊ, ತಾನೇತಾನು ಮೈತುಂಬ ಕನ್ನಕೊರೆದುನಸುಕಿನಿಂದಲೆ, ಧಸಧಸ ಸುರಿದುಕೊಂಡಮೋಡ;ರ್ರೊಯ್ಯನೆ ಹೊಯಿಲೆಬ್ಬಿಸುವ ಗಾಳಿಗೌಜು,ಧಡಾಂಧುಡೂಂ, ಛಟ್ ಛಟ್ ಛಟೀಲ್ಗುಡುಗು ಮಿಂಚಿನ ಜುಗಲ್ಬಂಧಿಏರುಮಧ್ಯಾಹ್ನವೇ ಸಂಜೆಗತ್ತಲ ಭ್ರಾಂತಿ;ಹೊರಗೆ. ಆಯಾಸದಿಂದ ಕಿಟಕಿಬಾಗಿಲು ಸಂದಿತೂರಿಸುಯ್ಯನೆ ಒಳಸುಳಿದುಅಪ್ಯಾಯಮಾನವಾಗಿ ಕಚಗುಳಿಯಿಡುವಒದ್ದೆಗಾಳಿಗರಿಗರಿಯಾಗಿ ಮೈಮನಸ್ಸು ಬೆಚ್ಚಗೆಗರಿಗೆದರಬೇಕಿತ್ತು ; ಒಳಗೆ. ಮಾಗಿಯ ಚುಮುಚುಮು ಚಳಿಯ ಜೊತೆ ಅನಾಯಾಸ ಬೆವರಿಳಿಸುವನಿರ್ಜೀವ ಜಡ ಜಂತುಭೂಮ್ಯಾಕಾಶ ಬಾಹು ಚಾಚಿಕೊಳ್ಳುತ್ತಲೆ, ಎಲ್ಲೋ ಕ್ಷಿತಿಜದಂಚಿಂದದಿಢೀರನೆ, ಹೊಸ್ತಿಲಲಿ ಹೊಂಚು ! ಹೊರಟೇ ಹೋಯಿತೆನ್ನಿಬಂದಂತೆ ವೈಶಾಖ, ಪೆಚ್ಚುಮೋರೆ ಹಾಕಿಅಟ್ಟಕ್ಕೇರಿದ ಹರ್ಷೋಲ್ಲಾಸವರ್ಷಾಕಾಲಿಟ್ಟರೂ ಮಿಸುಕಾಡಲಿಲ್ಲರಾಹು ಬಡಿದಂತೆ ಮಂಕು ಸಮಯ ! ರೆಕ್ಕೆ ಪುಕ್ಕ ತೊಯ್ದುಹಿಂಜಿ ಹಿಂಡಿ ಇನ್ನಿಲ್ಲವೆಂಬಂತೆಮುದುಡಿ ಹಿಡಿಯಾದ ತೈನಾತಿ ದಿನಚರಿಪಿಳಿಪಿಳಿಗಣ್ಣು ನಿಸ್ತೇಜ ಪಾಪೆತೆರೆಗಣ್ಣಲಿ ಮೂರ್ಛೆ ಹೋದಮಾನವನಹಮಿಕೆಅಳಿದುಳಿದ ಅಂತ:ಸ್ಥೈರ್ಯಮಂಡಿಯೂರಲೂ ಘನಕಾರಣವಿರಬೇಕು;ಇರಲಂತೆ, ಇರುವಂತೆ. ತೊಯ್ಯಲಾಗದ ಮೃದುಲ ಮನಸ್ಸಿನವಿಭ್ರಾಂತಿನಿಮ್ನೋನ್ನತ ಹಾದಿಗುಂಟ ತಲ್ಲಣಗಳ ಸಂತೈಸುತ್ತಲೇ ಪಾರಾಗಬೇಕಿನ್ನುಸಕಲ ಪೀಡಾವಿನಾಶಕ ವಿಪ್ಲವಕ್ಕೆಗದ್ಗದಿತ ಮೋಡ ತೊಟ್ಟಿಕ್ಕುವ ಆ ಕೊನೇಯಸಂಜೀವಿನಿ ಹನಿಗೆಭೊಗಸೆಯೊಡ್ಡುವ ಆವೊಂದುತಂಪು ಬೆಳಕಿನ ಬೆಳಗಿಗೆ…

ಬೊಗಸೆಯೊಡ್ಡುವ Read Post »

You cannot copy content of this page

Scroll to Top