ಅಂಕಣ ಬರಹ ಗುರುತುಗಳು ಗುರುತುಗಳುಮೂಲ ಮಲೆಯಾಳ ; ಸೇತು ಕನ್ನಡಕ್ಕೆ : ಡಾ.ಅಶೋಕ್ ಕುಮಾರ್ಪ್ರಕಾಶನ : ಕೇಂದ್ರಸಾಹಿತ್ಯ ಅಕಾಡೆಮಿಪ್ರಕಟಣೆಯ ವರ್ಷ : ೨೦೧೧ಬೆಲೆ : ರೂ.೨೦೦ಪುಟಗಳು : ೩೪೬ ಇದು ಮುಖ್ಯವಾಗಿ ಸಿಂಗಲ್ ಪೇರೆಂಟ್ ಆಗಿರುವ ಒಬ್ಬ ತಾಯಿ ಮತ್ತು ಮಗಳ ಸುತ್ತ ಹೆಣೆಯಲಾದ ಕತೆ. ತಾಳ ತಪ್ಪಿದ ವೈವಾಹಿಕ ಜೀವನದಿಂದ ನೊಂದು ಸ್ವತಂತ್ರವಾಗಿ ಬಾಳುತ್ತೇನೆಂದು ಸಬರ್ವಾಲ್ ಕುಟುಂಬವು ನಡೆಸುತ್ತಿರುವ ಒಂದು ಕಂಪೆನಿಯ ಹೆಚ್.ಆರ್.ಮುಖ್ಯಸ್ಥೆಯಾಗಿ ಸೇರುತ್ತಾಳೆ ಪ್ರಿಯಂವದಾ ಮೆನೋನ್. ಬುದ್ಧಿವಂತೆಯಾದ ಆಕೆ ಪರಿಶ್ರಮ ಪಟ್ಟು ದುಡಿಯುವವಳು. ತನ್ನ ಪ್ರೀತಿಯ ಮಗಳು ನೀತುವನ್ನು ಎಂ.ಬಿ.ಎ.ಓದಿಸುತ್ತಿದ್ದಾಳೆ. ಅಪ್ಪನ ಪ್ರೀತಿಯೆಂದರೆ ಏನೆಂದು ತಿಳಿಯದ ನೀತು ವಾಚಾಳಿಯಾಗಿ ಬೆಳೆಯುತ್ತಾಳೆ ಒಮ್ಮೆ ತನ್ನ ಉದ್ಯೋಗದ ಒಂದು ಭಾಗವಾಗಿ ಗೋವಾದಲ್ಲಿ ನಡೆಯುವ ಉದ್ಯಮಿಗಳ ಸೆಮಿನಾರಿನಲ್ಲಿ ಪ್ರಿಯಂವದಾ ಪ್ರಬಂಧ ಮಂಡಿಸುತ್ತಾಳೆ. ಅಲ್ಲಿ ಆಕೆ ಬಹಳ ಹಿಂದಿನಿಂದಲೂ ತನ್ನ ಗುರುವೆಂದು ಭಾವಿಸಿ ಗೌರವಿಸುತ್ತಿದ್ದ ಡಾ.ರಾಯ್ ಚೌಧುರಿಯನ್ನು ಭೇಟಿಯಾಗುತ್ತಾಳೆ. ಮಾತನಾಡುತ್ತ ಆತನಿಗೆ ಮಾನಸಿಕವಾಗಿ ತುಂಬ ಹತ್ತಿರವಾಗುತ್ತಾಳೆ. ಅವರ ಸಂಬಂಧ ಊರಿಗೆ ಮರಳಿದ ನಂತರವೂ ಮುಂದುವರಿಯುತ್ತದೆ. ಆದರೆ ಆತನೊಂದಿಗಿನ ಅಮ್ಮನ ಈ ಆತ್ಮೀಯತೆ ನೀತುವಿಗೆ ಇಷ್ಟವಾಗುವುದಿಲ್ಲ. ನೀತುವಿನ ತಿರಸ್ಕಾರವು ಪ್ರಿಯಂವದೆಯ ಔದ್ಯೋಗಿಕ ಮತ್ತು ಕೌಟುಂಬಿಕ ಜೀವನದ ಸಂತೋಷಕ್ಕೆ ಭಂಗ ತರುತ್ತದೆ. ತನ್ನ ಮನೆಗೆ ಬರುವ ನೀತುವಿನ ಗೆಳತಿಯರ ಮೂಲಕ ಅವಳ ಜತೆಗೆ ರಾಜಿ ಮಾಡಿಕೊಳ್ಳಲು ಪ್ರಿಯಂವದಾ ಪ್ರಯತ್ನಿಸುತ್ತಾಳೆ. ನೀತು ಹರಿನಾರಾಯಣನೆಂಬ ತನ್ನ ಬುದ್ಧಿಜೀವಿ ಸಹಪಾಠಿಯ ಸ್ನೇಹ ಬೆಳೆಸುತ್ತಾಳೆ. ಗೆಳತಿಯರು ಬೇಡವೆಂದು ಉಪದೇಶಿಸಿದರೂ ಉಪಯೋಗವಾಗುವುದಿಲ್ಲ. ನೀತು ಅಮ್ಮನನ್ನು ನಿರ್ಲಕ್ಷಿಸಿ ವಿದೇಶದಲ್ಲಿದ್ದ ತನ್ನ ಅಪ್ಪ ರಂಜಿತ್ಗೆ ಹತ್ತಿರವಾಗಲು ಪ್ರಯತ್ನಿಸುತ್ತಾಳೆ. ಹತಾಶಳಾದ ಪ್ರಿಯಂವದಾಳ ಕನಸುಗಳಲ್ಲಿ ಅವಳು ಗೋವಾದಲ್ಲಿ ಕಂಡ ಪಾತ್ರಗಳು ಮತ್ತೆ ಮತ್ತೆ ಬರುತ್ತವೆ. ತನ್ನ ಮನೆಯಲ್ಲಿ ಸಹಾಯಕ್ಕೆಂದು ಪ್ರಿಯಂವದಾ ನಿವೇದಿತಾ ಎಂಬ ಪರ್ಸನಲ್ ಮ್ಯಾನೇಜರ್ನ್ನು ನೇಮಿಸಿಕೊಳ್ಳುತ್ತಾಳೆ. ರೇವತಿ ಎಂಬ ನಿಜನಾಮಧೇಯವುಳ್ಳ ಆಕೆಯನ್ನು ಕಂಪೆನಿಯಲ್ಲೂ ತನ್ನ ಜೂನಿಯರಾಗಿ ನೇಮಿಸಿಕೊಳ್ಳುತ್ತಾಳೆ. ರೇವತಿಯ ಜತೆ ಸೇರಿ ಪ್ರಿಯಂವದಾ ಕಂಪೆನಿಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಾಳೆ. ಮಗಳ ಬಗ್ಗೆ ಚಿಂತೆಯಿಂದಾಗಿ ಕೆಲಸ ಮಾಡಲಾಗದೆ ಕಂಪೆನಿಯಿಂದ ದೀರ್ಘಕಾಲದ ರಜಕ್ಕಾಗಿ ಅರ್ಜಿ ಹಾಕುತ್ತಾಳೆ. ಇದರೆಡೆಯಲ್ಲಿ ನೀತುವಿನ ಮನಃಪರಿವರ್ತನೆಯಾಗಿ ಅವರಿಬ್ಬರೂ ಊರಲ್ಲಿ ನೆಲೆಸಲು ಬರುತ್ತಾರೆ. ಉಳಿದದ್ದನ್ನು ಓದುಗರ ಕಲ್ಪನೆಗೆ ಬಿಟ್ಟು ಕಾದಂಬರಿ ಇಲ್ಲಿಗೆ ಮುಕ್ತಾಯವಾಗುತ್ತದೆ. ಕಾದಂಬರಿಯಲ್ಲಿ ಅಲ್ಲಲ್ಲಿ ಬರುವ ಮಳೆಗೆ ಅತೀವ ಸೌಂದರ್ಯವೂ ಆಕರ್ಷಣೆಯೂ ಇದೆ. ಬದುಕಿನ ಸಂಕೀರ್ಣ ಸಮಸ್ಯೆಗಳು, ಮನುಷ್ಯ ಸಂಬಂಧಗಳ ವಾಸ್ತವ ಸತ್ಯ ಹಾಗೂ ಟೊಳ್ಳುತನ, ಸ್ವಪ್ನ ಸದೃಶ ನಿರೂಪಣೆಯೊಂದಿಗೆ ಇಲ್ಲಿ ತಾಯಿ-ಮಗಳ ಬದುಕು ಚಿತ್ರಣಗೊಂಡಿದೆ. ಅದಮ್ಯವೂ ಸಂಕೀರ್ಣವೂ ಆದ ಮನುಷ್ಯ ಮನಸ್ಸು ಅನುಭವಿಸುವ ಸಂಕಟಗಳಿಗೆ ಸರಳ ಉತ್ತರಗಳನ್ನು ಪಡೆಯುವ ಬಗೆಯನ್ನು ಕಾದಂಬರಿ ಹೇಳುತ್ತದೆ. ಒಂದು ಊರಿನ ಎಲ್ಲಾ ಸುಖ-ದುಃಖಗಳನ್ನು ಕಪ್ಪು-ಬಿಳುಪುಗಳೊಂದಿಗೆ ಶರೀರದ ಮೇಲೆ ಗುರುತುಗಳಾಗಿಸಿದ ಹಿಮ-ಧ್ರುವಗಳಲ್ಲಿ ಏಕಾಂತ ಧ್ಯಾನದಲ್ಲಿ ಮುಳುಗಿದ ಪೆಂಗ್ವಿನ್ಗಳು ಪೂರ್ವಜನ್ಮದಲ್ಲಿ ವಿಧವೆಗಳಾಗಿದ್ದವೆಂದೂ ಅವುಗಳ ಕುಲದಲ್ಲಿ ಹುಟ್ಟಿದ ಪ್ರಿಯಂವದಾಳ ಹಾಗೂ ಮಗಳು ನೀತುವಿನ ಕತೆಗಳನ್ನು ಪ್ರಕೃತಿಯೊಂದಿಗೆ ಮಿಳಿತಗೊಳಿಸಿ ಸೇತು ಅವರು ಮನೋಜ್ಞವಾಗಿ ಪ್ರಸ್ತುತಗೊಳಿಸಿದ್ದಾರೆ. ನಗರೀಕರಣಕ್ಕೊಳಗಾದ ಬದುಕಿನಲ್ಲಿ ಮನುಷ್ಯ ಮನಸ್ಸುಗಳ ಆತಂಕ, ತಲ್ಲಣ, ಕೌಟುಂಬಿಕ ಬದುಕಿನ ಸಂಘರ್ಷಗಳು,ಹಾಗೂ ಎಡೆಬಿಡದೆ ಅನುಭವಿಸುವ ನೋವು ಈ ಕಾದಂಬರಿಯಲ್ಲಿವೆ. ಭೌತಿಕ ಜಗತ್ತಿನ ಆಂತರಿಕ ಸಂಘರ್ಷಗಳ ನಡುವೆ ವ್ಯಕ್ತಿಯ ಮನಸ್ಸುಗಳು ಸೃಷ್ಟಿಸುವ ವಿಚಿತ್ರ ಅನುಭವಗಳು ಓದುಗರಲ್ಲಿ ಹೊಸ ಕುತೂಹಲವನ್ನು ಹುಟ್ಟಿಸುತ್ತವೆ. ಮೂಲ ಮಲೆಯಾಳದ ಸುಭಗ ಶೈಲಿಗೆ ನಿಷ್ಠರಾಗಿ ಅಶೋಕ ಕುಮಾರ್ ಅವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ************************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ವಾರದ ಕತೆ ಧ್ರುವ ತಾರೆ ವಿನುತಾ ಹಂಚಿನಮನಿ . ಸಂಜೆ ನಾಲ್ಕು ಗಂಟೆಯ ಸಮಯ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಯಲ್ಲಿ ಗದ್ದಲ ಸ್ವಲ್ಪ ಕಡಿಮೆಯಾಗಿದೆ. ಈಗ ಸಾಧಾರಣವಿರುವ ದವಾಖಾನೆಗೆ ಮಹತ್ವ ಬಂದು, ಕೊರೊನಾ ರೋಗಿಗಳಿಂದ ಯಾವಾಗಲೂ ಗಿಜಿಗುಟ್ಟುತ್ತಿದೆ. ರೋಗಿಗಳನ್ನು ಬಿಟ್ರೆ ಬೇರೆ ಯಾರೂ ಇಲ್ಲಿಗೆ ಬರುವ ಧೈರ್ಯ ಮಾಡುವುದಿಲ್ಲ. ಅಲ್ಲಿಯೇ ಒದಗಿಸುವ ಊಟದ ಸಮಯ ಮುಗಿದಿದ್ದರಿಂದ ನರ್ಸ್, ಆಯಾ ಓಡಾಟ ಕೂಡ ಕಡಿಮೆಯಾಗಿದೆ. ಡಾಕ್ಟರ್ ಇನ್ನು ಬರುವುದು ರಾತ್ರಿಗೇ. ಹೊರಗಡೆ ಸಿಟಿಯಲ್ಲಿ ಲಾಕ್ಡೌನ್ ಇದ್ದುದರಿಂದ ಜನಸಂಚಾರವಿಲ್ಲ. ವಾಹನಗಳ ಸದ್ದು ಕಡಿಮೆಯೇ! ಅಲ್ಲೊಂದು-ಇಲ್ಲೊಂದು ಪಿಸುಮಾತಿನ ಶಬ್ದ ಮತ್ತು ಡ್ಯೂಟಿ ಮುಗಿಸಿ ಹೋಗುವ ತರಾತುರಿಯಲ್ಲಿ ಇರುವ ನರ್ಸ್ ಆಯಾಗಳ ಹೆಜ್ಜೆಯ ಮತ್ತು ಟಕ್ ಟಕ್ ಅನ್ನುವ ಬೂಟಿನ ಸದ್ದು ಬಿಟ್ಟರೆ ಬೇರೆ ಎಲ್ಲ ಶಾಂತವಾಗಿದೆ. ಆದರೆ ಆಸ್ಪತ್ರೆಯಲ್ಲಿ ಮಲಗಿದವರ ಎದೆಯ ಬಡಿತ ಮತ್ತು ತಲೆಯಲ್ಲಿ ಸುತ್ತುವ ನಾನಾ ನಮೂನೆಯ ಬಿರುಗಾಳಿಯಂತಹ ವಿಚಾರಗಳಿಗೆ ಎಲ್ಲಿಯ ಪ್ರತಿಬಂಧ? ಈ ಶಾಂತಿಯನ್ನು ರಣಶಾಂತಿ ಮತ್ತು ಮೌನವನ್ನು ಸ್ಮಶಾನ ಮೌನವೆನ್ನಬಹುದು. ಶಕುಂತಲಾ ಆಸ್ಪತ್ರೆಯ ಮೊದಲ ಮಹಡಿಯ ಸೆಮಿ ಸ್ಪೆಷಲ್ ರೂಮಿನಲ್ಲಿ ಕೋವಿಡ್ ಪೇಷಂಟ್ ರಂಗಣ್ಣ ತನ್ನ ಕಾಟ ಮೇಲೆ ಮಲಗಿ ವಿಚಾರ ಮಂಥನದಲ್ಲಿ ಮುಳುಗಿದ್ದಾನೆ. ಇಲ್ಲಿಗೆ ಬಂದು ಸುಮಾರು ಒಂದು ವಾರ ಆಗಿರಬಹುದು. ದಿನದ ಲೆಕ್ಕ ಯಾರಿಗಿದೆ? ಜೀವಕ್ಕೆ ಲೆಕ್ಕವಿಲ್ಲದಾಗ?…. ರೂಮಿನ ಅರ್ಧಭಾಗ ವ್ಯಾಪಿಸಿಕೊಂಡ ಕಾಟ್ ಮೇಲೆ ಮಲಗಿ ಹೊರ ಜಗತ್ತಿನ ಸಂಪರ್ಕವೇ ಇಲ್ಲವಾಗಿದೆ. ತಲೆಮೇಲೆ ತಿರುಗುತ್ತಿರುವ ಫ್ಯಾನ್ ಸಪ್ಪಳ ಮಾಡುತ್ತ ತನ್ನ ಸೇವೆಯನ್ನು ಪ್ರಚಾರ ಮಾಡುತ್ತಿದೆ……. ಮುಖದ ಮೇಲೆ ಫಿಕ್ಸ್ ಮಾಡಿದ ವೆಂಟಿಲೇಟರ್ ನಿಶಬ್ದ ಕಾರ್ಯತತ್ಪರ…….. ಪಕ್ಕದಲ್ಲಿ ನಿಲ್ಲಿಸಿದ ಕಬ್ಬಿಣದ ಸ್ಟ್ಯಾಂಡಗೆ ಬಾಟ್ಲಿ ಜೋಡಿಸಿ ಅದರಿಂದ ಹೊರಟ ಇನ್ನೊಂದು ತುದಿ ರಂಗಣ್ಣನ ಎಡಗೈಯಲ್ಲಿ ಸೂಜಿಯ ಮುಖಾಂತರ ಹೊಕ್ಕಿದೆ……. ಅಲ್ಲಿಂದ ಬರುತ್ತಿರುವ ಔಷಧ, ವೆಂಟಿಲೇಟರ್ ನಿಂದ ಪೂರೈಕೆಯಾಗುತ್ತಿರುವ ಪ್ರಾಣವಾಯು ತನ್ನನ್ನು ಜೀವದಿಂದ ಇಟ್ಟಿವೆ ಎನ್ನುವುದು ಅವನಿಗೆ ಗೊತ್ತು. ಇಲ್ಲಿಗೆ ಬರುವ ಮೊದಲು ಒಂದು ವಾರ ಧಾರವಾಡದ ಇಳಕಲ್ ಆಸ್ಪತ್ರೆಯಲ್ಲಿ ಇದ್ದವ, ಅಲ್ಲಿ ಆಕ್ಸಿಜನ್ ಸ್ಟಾಕ್ ಇಲ್ಲ ಅಂತ ಈ ದವಾಖಾನೆಗೆ ಬರಬೇಕಾಯಿತು. ಉಳಿವಿನ ಬಗ್ಗೆ ರಂಗಣ್ಣನಿಗೆ ಯಾವಾಗ ಭರವಸೆ ಇಲ್ಲದಾಯಿತೊ ಆ ಕ್ಷಣದಿಂದ ಅವನ ಮನಸ್ಸಿನಲ್ಲಿ ವಿಚಾರಗಳ ಯುದ್ಧ ನಡೆದಿದೆ. “ಅಲ್ಲಾ! ನನಗೆ ಯಾಕೆ ಈ ರೋಗ ಬಂತು? ಇಷ್ಟು ವರ್ಷ ಡಯಾಬಿಟಸ್ ಅನುಭವಿಸಿದ್ದು ಬೇಕಾದಷ್ಟು ಆಗಿರುವಾಗ! ನಾನೆಷ್ಟು ಕಾಳಜಿ ತಗೆದುಕೊಂಡಿದ್ದೆ, ಮದ್ದಣ್ಣ ತೀರಿಹೋದಾಗ! ದೂರದಿಂದ ನೋಡಿದ್ದು ಬಿಟ್ಟರೆ ಸಂಪರ್ಕ ಎಲ್ಲಿ ಬಂದಿತ್ತು? ಸ್ಮಶಾನಕ್ಕೆ ಹೋಗಿರಲಿಲ್ಲ. ಅವನು ಸತ್ತದ್ದು ಕೊವಿಡ್ ನಿಂದ ಅಂತ ಗೊತ್ತಾದ ಕೂಡಲೇ ಎಲ್ಲರೂ ಅಲ್ಲಲ್ಲೇ ಸ್ಟ್ಯಾಚು ತರ ಆದರಲ್ಲ! ಸ್ವಂತ ಅತ್ತೆಯ ಮಗ, ಒಬ್ಬಂಟಿ ಬೇರೆ… ಇಂತಹ ಸಮಯದೊಳಗೆ ನಾನಿದ್ದು ಏನು ಉಪಯೋಗ ಆಯ್ತು! ನನ್ನ ಹಂಗ ರಾಘು ಮತ್ತು ಪರಿಮಳರಿಗೆ ಈ ರೋಗ ಅಮರಿಕೊಂಡಿತ್ತಲ್ಲಾ! ರಾಘುನಿಂದ ನನಗೆ ಬಂದಿರಬಹುದು …..”. ಹೀಗೆ ಸಾಗಿತ್ತು ವಿಚಾರಧಾರೆ. ಯಾರನ್ನೂ ಭೆಟ್ಟಿಯಾಗುವ ಹಂಗಿಲ್ಲ, ಮನಸ್ಸಿನ ಮಾತನ್ನು ಹೇಳಿ ಹಗುರ ಮಾಡಿಕೊಳ್ಳುವ ಹಂಗಿಲ್ಲಾ ಅನ್ನುವ ಬೇಸರ! ರಂಗಣ್ಣನ ತಮ್ಮ ರಾಘು ಹುಬ್ಬಳ್ಳಿಯೊಳಗ ತಮ್ಮ ಸೋದರ ಅತ್ತೆಯ ಮಗ ಮದ್ದಣ್ಣನ ಒಟ್ಟಿಗೆ ಇರುತ್ತಿದ್ದ. ಇಬ್ಬರೂ ಬ್ರಹ್ಮಚಾರಿಗಳು. ಒಬ್ಬರಿಗೊಬ್ಬರು ಆಸರೆಯಾಗಿದ್ದರು. ಯಾವಾಗ ಮದ್ದಣ್ಣ ಸಾವಿಗೆ ಈಡಾದನೋ, ಒಮ್ಮೆಲೆ ಎಲ್ಲರ ಮನಸ್ಸಿನಲ್ಲಿ ನಡುಕ ಶುರುವಾಗಿತ್ತು. ಮದ್ದಣ್ಣನಿಗೆ ಅದು ಹೇಗೆ ಬಂದಿತು? ಯಾರಿಗೂ ಗೊತ್ತಿಲ್ಲ….. ಆಸ್ಪತ್ರೆ ತಲುಪುವದರೊಳಗೆ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನೊಟ್ಟಿಗೆ ಇರುತ್ತಿದ್ದ ರಾಘುನಿಗೆ ತಾಗಿರಬೇಕು, ಗೊತ್ತಾಗಿರಲಿಲ್ಲ. ಅವನಿಗೆ ಕ್ರಿಯಾ ಕರ್ಮ ಮಾಡಿ ಅಣ್ಣ ರಂಗಣ್ಣನೊಟ್ಟಿಗೆ ಕೆಲವು ದಿನ ಇರುವುದರಲ್ಲಿಯೇ ರಾಘುನಿಗೆ ಕರುನಾ ಪಾಸಿಟಿವ್ ಅಂತ ಗೊತ್ತಾಯ್ತು. ಅದರೊಟ್ಟಿಗೆ ಇಲ್ಲಿರುವ ರಂಗಣ್ಣನಿಗೆ ಕೂಡ. ಮೂವರು ಆಸ್ಪತ್ರೆಗೆ ದಾಖಲಾದರು. ಒಂದು ವಾರದಲ್ಲಿ ಅವರಿಬ್ಬರು ಆರಾಮಾಗಿ ಮನೆಗೆ ಹೋದರು. ರಂಗಣ್ಣನಿಗೆ ರೋಗ ಉಲ್ಬಣಿಸ ತೊಡಗಿತು. ಧಾರವಾಡದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗದ ಕಾರಣ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಗೆ ಸೇರಿಸಬೇಕಾಗಿ ಬಂತು. ಕೆಲವೊಮ್ಮೆ ಆಕ್ಸಿಜನ್ ಸಪ್ಲೈ ತೆಗೆಯುವುದು ಮತ್ತೆ ಉಸಿರಾಟದ ತೊಂದರೆ ಕಾಣಿಸಿದ ಕೂಡಲೇ ಮತ್ತೆ ಹಚ್ಚುವುದು ನಡೆದೇ ಇತ್ತು. ದಿನಕಳೆದಂತೆ ರೋಗ ಉಲ್ಬಣಿಸಿತ್ತು. ತನ್ನ ಮನಸ್ಸಿನಲ್ಲಿ ನಡೆಯುತ್ತಿರುವ ವಿಚಾರಗಳನ್ನು ಯಾರಿಗೆ ಹೇಳಿಕೊಳ್ಳಬೇಕು? ಜೀವನಚಕ್ರ ಕಣ್ಣುಮುಂದೆ ಬರತೊಡಗಿತು. ನಾ ಎಷ್ಟು ಸಂತೋಷದಿಂದ ಇದ್ದೆ ಸಣ್ಣವನಿರುವಾಗ ದೊಡ್ಡ ಮನೆತನ, ಕೂಡುಕುಟುಂಬ ಯಾವುದಕ್ಕೂ ಕೊರತೆ ಇಲ್ಲದ ಜೀವನ. ಮನಿಯೊಳಗ ಅಪ್ಪ-ಅವ್ವ ಅಕ್ಕ-ತಮ್ಮ ಮತ್ತೆ ನಾಲ್ಕು ಜನ ತಂಗಿಯರು. ಸಹಜೀವನ, ಸಹಕಾರ, ಹಂಚಿಕೊಳ್ಳುವುದು ಸಾಮಾನ್ಯವಿತ್ತು. ಯಾರ್ದನ್ನು ಯಾರೋ ಉಪಯೋಗಿಸಿದರೂ ಬೇಸರ ಇಲ್ಲ, ಪ್ರತಿಬಂಧ ಇಲ್ಲ ಅದರೊಳಗ ನನಗ ಅಕ್ಕ ತಮ್ಮ ತಂಗಿಯರು ಅಂದರ ಪ್ರಾಣ. ಅವರಿಗೆ ಸಿಟ್ಟು ಬರದಂಗ ಬ್ಯಾಸರವಾಗದಂಗ ಇರೋದು ನನಗೆ ಸೇರ್ತಿತ್ತು. ಹೀಗಾಗಿ ‘ಭೋಳೇಶಂಕರ’ ಅಂತ ಬಿರುದು ಸಿಕ್ಕಿತ್ತು. ಆರು ವರ್ಷ ಕಳೆದ ಮೇಲೆ ಸಾಲಿಗೆ ಸೇರಿಸಿದರು. ಹಳ್ಳಿಯೊಳಗಿನ ಸಾಲಿ, ಮತ್ತ ಪರಿಚಯದ ಮಾಸ್ತರರು. ಕೆಲವರು ಗೆಳೆಯರು ಹೆಚ್ಚಾದರೂ ಹೆಚ್ಚಿನ ಬದಲಾವಣೆ ಅನ್ನಿಸಲಿಲ್ಲ. ಆದರೆ ಸರಿಯಾದ ಸಮಯಕ್ಕ ಸಾಲಿಗೆ ಹೋಗಿ ಬರುವುದು ಸ್ವಲ್ಪ ಕಠಿಣ ಆಗ್ತಿತ್ತು. ಯಾಕಂದರೆ ಆಟ ಆಡಲಿಕ್ಕೆ ವೇಳೆ ಹೆಚ್ಚು ಸಿಗುತ್ತಿರಲಿಲ್ಲ. ಒಂದು ಮಾತ್ರ ಖುಷಿ ಕೊಟ್ಟಿದ್ದು ನನ್ನ ಗೆಳೆಯರೆಲ್ಲಾ ಅದs ಸಾಲಿವಳಗ ಇದ್ದರು. ಕೆಲವರು ಕ್ಲಾಸಿನೊಳಗೆ ಮತ್ತ ಕೆಲವರು ಸಾಲಿವಳಗ. ಹಿಂಗಾಗಿ ನಮ್ಮ ಆಟ ಮಸ್ತಿ ಅಲ್ಲಿನೂ ಸುರುವಾಯ್ತು. ಸಾಲಿ ಮುಗಿಸಿ ಮನೆಗೆ ಬಂದ ಕೂಡಲೇ ಅಭ್ಯಾಸಕ್ಕಿಂತ ಊಟ ತಿಂಡಿಯ ಕಡೆಗೇ ಲಕ್ಷ್ಯ. ಮಾಸ್ತರೆಲ್ಲ ಕಾಕಾ, ಮಾಮಾ, ಚಿಕ್ಕಪ್ಪ ಅಂತ ಸೋದರಸಂಬಂಧಿ ಇದ್ದದ್ದಕ್ಕ ಹೆದರಿಕೆ ಇರಲಿಲ್ಲ. ಶನಿವಾರ ಅರ್ಧದಿನದ ಸಾಲಿ. ಉಳಿದರ್ಧ ದಿನ ಮುಂದಿನ ವಾರಕ್ಕೆ ಶಾಲೆಗೆ ಬೇಕಾಗುವ ಅರಿವೆ -ಬಟ್ಟೆ ನೋಡಿಕೊಳ್ಳುವುದು ಇಂತಹ ಕೆಲಸ. ರವಿವಾರ ಮಾತ್ರ ಹಿಡಿಯುವವರು ಇದ್ದಿಲ್ಲ. ಮುಂಜಾನೆ ನದಿಗೆ ಹೋಗಿ ಸ್ನಾನ ಮಾಡಿ, ಸಾಕು ಅನ್ನಿಸುವಷ್ಟು ಈಸಿ, ಬಿಸಿಲು ಏರಿದ ಕೂಡಲೇ ಕಲ್ಮೇಶ್ವರ ಗುಡಿಗೆ ಹೋಗುವುದು. ಅಲ್ಲೆ ಸೀನ, ವೆಂಕಟ, ನಾನಿ ಯಾರಾದರೊಬ್ಬರು ಅವಲಕ್ಕಿ ಹಣ್ಣು ತಂದಿರುತ್ತಿದ್ದರು ಅದನ್ನು ತಿಂದು ಮತ್ತೆ ಆಟ. ಮಾಸ್ತರರ ಅಣಕ ಮಾಡಿ ತೋರಿಸುವುದು, ಹುಡುಗಿಯರ ಬಗ್ಗೆ ಕಾಮೆಂಟ್ ಮಾಡುವುದು ನಡೀತಿತ್ತು. ನಮಗೆಲ್ಲ ಸಿನಿಮಾ ಮತ್ತ ನಾಟಕದ ನಾಟಕದ ಹುಚ್ಚು ಭಾಳಿತ್ತು. ಆವಾಗ ಬ್ಯಾರೆ ಏನೂ ಮನರಂಜನೆ ಇರುತ್ತಿರಲಿಲ್ಲ. ನೋಡಿ ಬಂದ ಸಿನೆಮಾದ್ದು ಕೆಲವು ಸೀನು ನಾವs ಅಭಿನಯ ಮಾಡುತ್ತಿದ್ದೆವು. ಹೆಚ್ಚಾಗಿ ಭಕ್ತ ಕನಕದಾಸ, ಸತ್ಯಹರಿಶ್ಚಂದ್ರ, ಕೃಷ್ಣದೇವರಾಯ, ಬಬ್ರುವಾಹನ ಇಂತಹ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾದ್ದು. ನನಗೆ ಯಾವಾಗಲೂ ಕನಕದಾಸನ ಪಾತ್ರ. ಕನಕನ್ನ ಕಂಭಕ್ಕ ಕಟ್ಟಿ ಹೊಡೆಯುವುದು, ಬಾಳೆಹಣ್ಣು ತಿನ್ನಲಿಕ್ಕೆ ಕೊಡುವುದು ಬಹಳ ಮಜಾ ಬರುತ್ತಿತ್ತು. ಸತ್ಯಹರಿಶ್ಚಂದ್ರನ ಸಿನಿಮಾದ ವೀರಬಾಹುವಿನ ಪಾತ್ರ ಮಾಡಲಿಕ್ಕೆ ಪ್ರಯತ್ನ ಮಾಡಿದ್ದೇ ಮಾಡಿದ್ದು. ಸಂಜೆಯಾದರೂ ಊಟದ ಖಬರು ಇಲ್ಲದ ಆಟ ನಡೀತಿತ್ತು. ಮನೆಯವರೆಗೂ ಗೊತ್ತಿತ್ತು ,ಹಸಿವಾದರೆ ಮನೆಗೆ ಬರ್ತಾರೆ ಅಂತ . ಹಬ್ಬ-ಹುಣ್ಣಿಮೆ ಬಂದರೆ ನಮ್ಮೂರ ಒಳಗೆ ಗುಡಿಗೆ ಹೋಗುವ ಜನ ಜಾಸ್ತಿ. ನಮ್ಮ ನಾನಿ ಅಪ್ಪ ಗುಡಿ ಪೂಜಾರಿ. ಒಮ್ಮೊಮ್ಮೆ ದೇವರ ಪೂಜೆ ಮಾಡುವ ಪ್ರಸಂಗ ನಾನಿಗೆ ಬರ್ತಿತ್ತು. ಅವತ್ತಿನ ದಕ್ಷಿಣ ರೊಕ್ಕ ನಮ್ಮ ಮುಂದಿನ ಸಿನಿಮಾದ ಖರ್ಚಿಗೆ ಅಂತ ಇಡುತ್ತಿದ್ದ. ಶ್ರೀಮಂತಿಕೆ ಬಡತನ ವ್ಯತ್ಯಾಸ ಆಗ್ತಿದ್ದಿಲ್ಲಾ. ಬಾಲ್ಯದ ಮುಗ್ಧತೆ ಎಷ್ಟು ಚೆಂದ ಇತ್ತು? ಈಗ ಅರಿವಿಗೆ ಬರ್ತದ. ಯಾವುದೇ ರೀತಿಯ ಏರು ಇಳಿವು ಇಲ್ಲದ ಜೀವನ ಸಾಗಿತ್ತು. ಸಾಲಿಯೊಳಗ ಮುಂದಿನ ಕ್ಲಾಸಿಗೆ ಹೋಗುವುದು ಗ್ಯಾರಂಟಿ ಇರುತ್ತಿತ್ತಲ್ಲ. ಅಭ್ಯಾಸದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಏನು ಓದುತ್ತೇನೆ, ಎಷ್ಟು ಮಾರ್ಕ್ಸ್ ತೆಗಿತೀನಿ ಅಂತ ಅಪ್ಪ ಕೂಡ ಹೆಚ್ಚು ಜಿಕೇರಿ ಮಾಡ್ತಿದ್ದಿಲ್ಲ. ಪಾಠ ತಿಳಿಲಿಲ್ಲ ಅಂದ್ರೆ ಗೆಳೆಯರು ಇದ್ದರಲ್ಲ, ನಾನೀ, ಸೀನಾ ಹೇಳಿಕೊಡುತ್ತಿದ್ದರು. ಹಂಗೂ ಹಿಂಗೂ ಮಾಡಿ ಎಸ್ಎಸ್ಸಿ ಪಾಸಾದೆ. ಕಾಲೇಜಿಗೆ ಹೋಗಾಕ ಹಸಿರು ನಿಶಾನಿ ಸಿಕ್ಕಂಗಾಯ್ತು. ಅದs ಊರೊಳಗಿನ ಕಾಲೇಜಿಗೆ ಆರ್ಟ್ಸ್ ಗೆ ಎಡ್ಮಿಶನ್ ಮಾಡಿಸಿದೆ. ನಾನಿ ಒಬ್ಬಾವ ಮಾತ್ರ ಸೈನ್ಸಗೆ ಸೇರಿದ. ಗಣಿತದ ತಲಿಬಿಸಿ, ಪ್ರ್ಯಾಕ್ಟಿಕಲ್ಸ್ ದ ಉಪದ್ರ ಬ್ಯಾಡಾ ಅನಿಸಿತ್ತು ನನಗ. ಈಗ ಮೊದಲಿನ ಹುಡುಗುತನ ಸ್ವಲ್ಪ ಕಡಿಮೆಯಾಗಿತ್ತು. ಮನಿ ಕೆಲಸ ಜಾಸ್ತಿ ಆಗಿತ್ತು. ಮನಿಯೊಳಗಿನ ಹಿಂಡ ಜನರೊಳಗ ಅದೇನು ಭಾಳ ಅನಸ್ತಿದ್ದಿಲ್ಲ. ಮನಿಯೊಳಗ ಮದುವಿ, ಮುಂಜವಿ ಇಂಥಾದ್ದೆಲ್ಲಾ ಕಾರ್ಯಕ್ರಮಕ್ಕ ಇದ್ದರಲ್ಲ ಆಜೂ- ಬಾಜೂ ನಮ್ಮವರು……ಗೊತ್ತಾಗದ ನಡದು ಹೋಗ್ತಿತ್ತು. ನಮ್ಮಜ್ಜ ತನ್ನ ನಾಲ್ಕು ಗಂಡ ಮಕ್ಕಳೊಳಗ ಇಬ್ಬರು ಮಕ್ಕಳನ್ನು ದತ್ತಕ ಕೊಟ್ಟಿದ್ದು, ಅವರಿಬ್ಬರ ಕುಟುಂಬ ಮತ್ತು ಇನ್ನುಳಿದ ಇಬ್ಬರದು ವರ್ಷದಿಂದ ವರ್ಷಕ್ಕೆ ಬೆಳೆದು ಅರ್ಧ ಊರಲ್ಲಿ ನಮ್ಮ ಸಂಬಂಧಿಕರು ತುಂಬಿದ್ದರು. ನೋಡುತ್ತಾ ನೋಡುತ್ತಾ ನಾಲ್ಕು ವರ್ಷ ಮುಗಿದು, ನನ್ನ ಗ್ರಾಜುಯೇಷನ್ ಆಗಿಹೋಯಿತು. ಈ ನಾಲ್ಕು ವರ್ಷದೊಳಗ ಎರಡು ಮುಂಜವಿ, ಇಬ್ಬರ ಅಕ್ಕಂದಿರ ಮದುವೆ ನಡೆದು ಹೋಯಿತು. ಅಪ್ಪನ ಮಾಸ್ತರಿಕೆ ಪಗಾರ ದೊಡ್ಡ ಸಂಸಾರಕ್ಕ ಕಡಿಮೆ ಬೀಳುತ್ತಿತ್ತು ಮದುವೆಗೆ, ಮುಂಜುವಿಗೆ ಹೊಲದ ಒಂದೊಂದು ತುಕಡಿ ಹೊಲ ಗೇಣಿ ಮಾಡುವ ರೈತನಿಗೆ ಮಾರುವುದು ನಡೆದಿತ್ತು. ಅಕ್ಕ ಮತ್ತು ತಂಗಿಯಂದಿರ ಗಂಡನ ಮನಿ ಅಂದ್ರ ಸಂಬಂಧಿಕರs. ಅಕ್ಕನ ಗಂಡ ನನ್ನ ಖಾಸ ಸೋದರಮಾವ. ಹಂಗ ನೋಡಿದರೆ ಹೊಸಬರು ಪರಿವಾರದೊಳಗೆ ಸೇರಲಿಲ್ಲ, ಏನೂ ಬದಲಾವಣೆ ಆದಂಗ ಅನಿಸಲಿಲ್ಲ. ಜೀವನ ಸರಳವಾಗಿ ಹರಿಯುವ ನದಿಯಾಗಿತ್ತು. ನೌಕರಿ ಬ್ಯಾಟಿಗೆ ಶುರುಮಾಡಿದೆ. ನನ್ನ ಸಾದಾ ಬಿ ಎ ಗೆ ಕೆಲಸ ಸಿಗೋದು ಕಠಿಣ ಇತ್ತು. ಪೂರ್ವಜರು ಮಾಡಿದ ಪೌರೋಹಿತ್ಯ ಮತ್ತು ಮಾಸ್ತರ್ಕಿಗೆ ನನಗೆ ಯೋಗ್ಯತಾ ಇರಲಿಲ್ಲ. ನನ್ನದು ಅಂತ ಜೀವನ ಕಟ್ಟಿಕೊಳ್ಳಾಕ ಒಂದು ಕೆಲಸ ಅವಶ್ಯವಿತ್ತು. ಖರೆ ಹೇಳಬೇಕಂದ್ರೆ, ಬೇರೆಯಾದ ಅಸ್ತಿತ್ವ ನಮಗ್ಯಾರಿಗೂ ಇರಲಿಲ್ಲ. ಆದರೂ ಪಾಯಿಪ್ಸ್ ಮಾರುವ ಒಂದು ಪ್ರೈವೇಟ್ ಕಂಪನಿಯೊಳಗ ಕ್ಲರ್ಕ್ ಕೆಲಸ ಸಿಕ್ಕಿತು. ಆದರೆ ಊರು ಬಿಟ್ಟು ಹತ್ತಿರದ ಊರಿಗೆ ಹೋಗಬೇಕಾಯಿತು. ಅಲ್ಲಿ ನಾ ಇರಬೇಕೆಂದರೆ ಮನಿ ಮಾಡಬೇಕು ಅಂತ ಹೇಳಿ ನಮ್ಮವ್ವ ಮತ್ತು ನಮ್ಮ ಅಕ್ಕ ಕೂಡಿ ನನ್ನ ಮದುವೆ ಮಾಡಬೇಕಂತ ಕನ್ಯಾ ಹುಡುಕಲಿಕ್ಕೆ ಹತ್ತಿದರು. ದೂರದ ಸಂಬಂಧಿಗಳ ಬಡವರ ಹುಡಿಗಿ ರಾಧಾ ನನ್ನ ಅರ್ಧಾಂಗಿಯಾಗಿ ಮನಿ ತುಂಬಿದಳು. ಸೌಮ್ಯ ಸ್ವಭಾವದ ರಾಧಾ ಎಲ್ಲ ರೀತಿಯಿಂದ ಹೊಂದಿಕೆ ಆಗಿದ್ದಳು. ಆದರ ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳ ಭಾಗ್ಯ ಸಿಗಲಿಲ್ಲ. ಅವ್ವ ರಾಧಾಳನ್ನ ಡಾಕ್ಟರ್ ಕಡೆಗೆ ಕರ್ಕೊಂಡು ಹೋದಳು. ಅವಾಗ ಬೇರೆ ಏನೋ ವಿಷಯ ಹೊರಗೆ ಬಂತು. ಏನಂದ್ರೆ ರಾಧಾಗ ಡಯಾಬಿಟಿಸ್ ಇತ್ತು. ಅದು ಕೂಡ ಹೆಚ್ಚಿನ ಪ್ರಮಾಣದ ಸಕ್ಕರೆ ರೋಗ. ಸರಿ ಅದಕ್ಕೆ ಟ್ರೀಟ್ಮೆಂಟ್ ಸುರುವಾಯಿತು. ಮಕ್ಕಳ ವಿಷಯ ಮರೆತು ಹೋಯಿತು. ಮುಂದೆ ಕೆಲವರ್ಷದೊಳಗ ನನಗೂ ಡಯಾಬಿಟಸ್ ಶುರುವಾಗಿತ್ತು. ಆದರೂ ನಾ ತಲಿಬಿಸಿ ಮಾಡಿಕೊಳ್ಳಲಿಕ್ಕೆ ಹೋಗಲಿಲ್ಲ. ನಮ್ಮ ಸಂಬಂಧಿಕರು ಬಹುತೇಕ ಜನರಿಗೆ ಇದು ಇತ್ತು. ಬಹುಶಃ ಆನುವಂಶಿಕತೆ ಇರಬಹುದು ಅನಿಸಿ ನಾನೂ ಕೂಡ ಔಷಧಿ ತೆಗೆದುಕೊಳ್ಳಹತ್ತಿದೆ. ಕೂಡು ಕುಟುಂಬದೊಳಗೆ ಇದ್ದುಕೊಂಡು ಸದಾಕಾಲ ಸಾವು – ನೋವು, ರೋಗ
ನೆರಳಿಲ್ಲದ ಜೀವ
ಕವಿತೆ ನೆರಳಿಲ್ಲದ ಜೀವ ಆನಂದ ಆರ್ ಗೌಡ ಬಿರುಕು ಬಿಟ್ಟ ಅದೇ ಗೋಡೆಯೊಳಗೆಹಸಿದ ಕಣ್ಣುಗಳು ಇಣುಕಿನೋಡುತ್ತಿದ್ದವುಅವ್ವನ ಹೆಜ್ಜೆ ಗುರುತುಗಳನು ಒಡಲೊಳಗಿನ ಬಸಿರಲಿಪಿಸುಮಾತು ಮೇಯ್ದ ಕರುಳ ಕುಡಿಗಳಿಗೆನೊಂದ ಬೇಗೆಯಲಿ ಗಳಿಸಿದ ತುತ್ತುಜೋಗುಳವ ಹಾಡುತ್ತಿತ್ತು ! ಮಾಂಗಲ್ಯ ತೊಡಿಸಿದ ಕೈಯ ಅಗ್ನಿಯಲಿಸುಟ್ಟ ಸೀರೆ ಇನ್ನೂ ಅವಳ ಬಿಟ್ಟಿಲ್ಲತವರು ಅರಸಿ ಬಂದ ಕಣ್ಣವೆಗಳುಹಸುಳೆಗಳ ಪಿಡುಗು ಇಂಗಿಸಿಲ್ಲ ಅನ್ನ ಅರಸಿದ ಪಾದ ಮಾಸದ ಗಾಯಕರುಣೆ ಕನಿಕರ ಕಾಣದ ತನ್ಹಸಿವುಹೊದ್ದು ಮಲಗಿದ ಪರಿಯುಎಲ್ಲವ ಮರೆಸಿ ನಿಶ್ಯಬ್ಧವಾಗಿಸಿದೆ ಘಾಸಿಗೊಂಡ ಮನಸುಹೊನ್ನು ಮಣ್ಣು ಮೋಹಿಸಿಲ್ಲನೆರಳಿಲ್ಲದ ಜೀವ ಕನಸುಗಳನು ಹೊತ್ತುಮತ್ತೆ ಹೆಜ್ಜೆಯಿಟ್ಟಿದೆ ಹೊಟ್ಟೆ ತುಂಬಲು !! ******************************
ಕನಸುಗಳ ದೊಂಬರಾಟ
ಕವಿತೆ ಕನಸುಗಳ ದೊಂಬರಾಟ ಸುಮನಸ್ವಿನಿ. ಎಂ ನೀ ಮರಳುವೆಯೆಂಬಪವಾಡವೊಂದು ಘಟಿಸಿಯೇತೀರುತ್ತದೆಂದು ನನ್ನ ನಂಬಿಸಲುಹರಸಾಹಸ ಪಡುವಕನಸುಗಳ ದೊಂಬರಾಟಕ್ಕೆನಕ್ಕುಬಿಡುತ್ತೇನೆ ಈಗೀಗ..ಹೊರಳಿ ನೋಡಿದರೂ ಸಹಕಾಣದಷ್ಟು ದೂರದಲ್ಲಿ ನೀನನ್ನಿರಿಸಿಬಿಟ್ಟಿರುವುದರಿಂದ! ದಿನಕ್ಕೆರಡು ಬಾರಿಯಾದರೂಕಣ್ತುಂಬಿ ತುಳುಕಿ ಉರುಳಿಹೋಗಲು ನಿನ್ನ ನೆನಪುಗಳುನನ್ನೊಂದಿಗೆ ಜಿದ್ದಿಗೆ ಬೀಳುತ್ತವೆ..ಎದೆಯೊಳಗೆ ಹನಿಯೊಡೆದುಹರಡಿಕೊಂಡಂತೆಲ್ಲಾ ಜಾಗಸಾಲದಾದಾಗ, ಪಾಪ!ಅಮಾಯಕ ನೆನಪುಗಳುತಾನೇ ಏನು ಮಾಡಿಯಾವು? ಏಳುಸಮುದ್ರಗಳಾಚೆಗಿನಏಳುಸುತ್ತಿನ ಏಕಾಂತ ಕೋಟೆಯತುತ್ತತುದಿಯ ಕೋಣೆಗೂ ನುಗ್ಗಿ‘ರಾಜ’ಕುಮಾರನೊಬ್ಬ ಬರುತ್ತಾನೆಂಬನಿರೀಕ್ಷೆಯ ಅದಮ್ಯ ನಂಬಿಕೆಗೆಬೆರಗಾಗುತ್ತೇನೆ ಬಹಳವೇ,ಮುಗಿದ ದಾರಿಯ ಕಡೆಯಲ್ಲೊಂದುಹೊಸ ತಿರುವು ಸೃಷ್ಟಿಯಾಗುವಭ್ರಮೆಯ ‘ಬಗೆ’ಗೆ ಸೋಜಿಗಪಡುತ್ತಾ! *************************************
ಹಾಯ್ಕುಗಳು
ಹಾಯ್ಕುಗಳು ವಿ.ಹರಿನಾಥ ಬಾಬು ಒಲೆಯ ಮುಂದೆಕರುಳ ಸುಟ್ಟ ಅಮ್ಮತಾಯ ಮಮತೆ* ಕುದಿ ಎಸರುತಾಯಿಯ ಎದೆಹಾಲುಕಟ್ಟಿದ ಬಾಯಿ* ಅಳುವ ಮಗುನಿಷ್ಕರುಣಿ ಜಗತ್ತುತಬ್ಬಲಿ ತಾಯಿ* ಕರುಳ ಕುಡಿಭಯ ಭೀತಗೊಂಡಿದೆಕತ್ತಲ ರಾಜ್ಯ* ರಸ್ತೆಯ ಮೇಲೆಎಳೆದು ನಿಂತ ತೇರುಜೀವನ ಮುಕ್ತಿ* ಕಡಲ ನೀರುಸವಿಯಲೊಲ್ಲೆ ಉಪ್ಪುಸಪ್ಪೆ ಬದುಕು* ಓಡಿದ ನದಿಸೇರಿತು ಕಡಲನುಬದುಕು ಅಂತ್ಯ* ಮೇಲೆ ಚಂದಿರಈಕೆ ಬೆಳದಿಂಗಳುಬಾಳು ಹುಣ್ಣಿಮೆ* ಬೀಸುವ ಗಾಳಿಉದುರಿದವು ಎಲೆಅಪ್ಪಿತು ಮುಪ್ಪು* ಗುಡಿಯ ಮುಂದೆಭಿಕ್ಷುಕರದೇ ಸಾಲುಭಕ್ತಿ ಕುರುಡು* ದೇವನಿರದಗುಡಿಯೊಳಗೆ ನಾನುಅನಾಥ ಪ್ರಜ್ಞೆ* ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ* ಉರಿವ ಬೆಂಕಿಒಲೆಯ ಮೇಲೆ ಅನ್ನಹಸಿದ ಕಂದ* ಸಿಟ್ಟಾದ ಸೂರ್ಯಭೂಮಿ ಬಳಲಿ ಬೆಂಡುಹಾಳಾದ ರೈತ* ಜೋರಾದ ಮಳೆಕೊಚ್ಚಿಹೋದ ಫಸಲುಹತಾಷ ರೈತ* ತುಂತುರು ಹನಿಪುಲಕಗೊಂಡ ಭೂಮಿಪ್ರಸನ್ನ ಜನ* ಮೌನದ ಕಾಡುಅಲ್ಲಿ ಮನುಷ್ಯರಿಲ್ಲಸುಂದರ ಲೋಕ* ಕಣ್ಣ ಕಂಬನಿಅವಳ ಖಾಲಿ ನೋಟಎದೆಯ ಗಾಯ* ಅವಳ ಅಳುಆಕಾಶದ ಕಾರ್ಮೋಡನನ್ನೆದೆ ನೋವು* ನಕ್ಕಳು ನಲ್ಲೆಅರಳಿದವು ಹೂವುಮನಸು ತೋಟ**********************
ಆಧುನಿಕ ವಚನಗಳು
ಆಧುನಿಕ ವಚನಗಳು ರತ್ನಾ ಕಾಳೇಗೌಡ ಅರಮನೆಯ ರಾಜನಾದರೇನು?ಬಡವ ಭಿಕ್ಷುಕನಾದರೇನು?ಇಬ್ಬರಿಗೂ ಒಂದೇ ರೀತಿಯ ಹಸಿವುಅನ್ನವೇ ಇಬ್ಬರ ಹೊಟ್ಟೆ ತುಂಬಿಸುವುದುಅರಮನೆಯಲ್ಲಿ ಮಲಗುವುದಕ್ಕೆ ಮಂಚಭಿಕ್ಷುಕರಿಗೆ ಪಾರ್ಕಿನ ಕಲ್ಲು ಬೆಂಚೇಮಂಚ:ಇಬ್ಬರೂ ಮಾಡುವುದು ನಿದ್ದೆ ಎಂಬುದತಿಳಿದು ಬಾಳಯ್ಯ — ರತ್ನದೀಪ ನಿರ್ಗತಿಕ ಮಾಡಿ ಬಂಧುಗಳ ಮನೆಗೆಹೋದಾಗ ಗುರುತಿಲ್ಲದವರಂತೆ ಮುಖತಿರುಗಿಸಿಕೊಂಡು ಸೋದರತ್ತೆಧನಿಕಳೆಂದು ತಿಳಿದಾಗ ಮುಗಿ ಬಿದ್ದುಬಂದಿರಯ್ಯಎತ್ತೆತ್ತಲೂ ನನ್ನದೆ ಗುಣಗಾನಮಾಡುತಿಹರಯ್ಯಗುಣ ನಡೆ ನುಡಿಯಿಂದಲೇ ಸಮಾಜದಲ್ಲಿಸ್ಥಾನ ಮಾನ ದೊರೆಯುವುದೆಂದುತಿಳಿಯರಯ್ಯಗುಣ ನಡತೆಯನ್ನು ಮೂಲೆಗೆ ತಳ್ಳಿ ಹಣಕ್ಕೆಬೆಲೆ ಕೊಡುವ ದಾನ ದಾಹಿಗಳನು ಮನೆಗೆಹೇಗೆ ಸೇರಿಸಲಯ್ಯ –ರತ್ನದೀಪ ಗಜನ ಮಣಿಸಿ ದಂತ ಪಡೆಯಬಹುದುವ್ಯಾಘ್ರನ ಒಲಿಸಿ ಉಗುರು ಹಲ್ಲುಪಡೆಯಬಹುದುಮೊಸಳೆಯ ಮರ್ದಿಸಿ ಪಾರಾಗಬಹುದುಉರುಗ ಕಚ್ಚಿದರೆ ಬದುಕಿಸಬಹುದುನೆರೆ ಉಕ್ಕಿದರೆ ಈಜಿ ದಡ ಸೇರಬಹುದುಮನೆಗೆ ಬೆಂಕಿ ಬಿದ್ದರೆ ನುಸುಳಿಬರಬಹುದುಕಾಲು ಕೆರೆದು ನಿಂತ ಗೂಳಿಯನುಬಗ್ಗಿಸಬಹುದುಜ್ಞಾನದ ಬಡತನವಿರಲು ಎಲ್ಲದರಲ್ಲೂಬೋರಯ್ಯ —ರತ್ನದೀಪ ಒಪ್ಪಿ ಭಜಿಸುವ ಮನಸ್ಸಿರಬೇಕುಒಪ್ಪದಿಂದ ಅರಿವ ಗುಣ ಸಂಪತ್ತುಇರಬೇಕುನಿತ್ಯ ಪೂಜೆಗೈಯಲು ನಿರ್ಮಲಚಿತ್ತವಿರಬೇಕುಭಕ್ತನ ಮನಸು ಏಕಾಗ್ರತೆಯಿಂದಿರಬೇಕುಭಕ್ತಿ ತಾನೆಂದು ಹುಂಬಿನಲಿ ಪೂಜೆಗೈಯಲುಒಲಿಯುವನೆ ಶಿವನು ಮುನಿದೋಡುನಾನಯ್ಯ –ರತ್ನದೀಪ ಕನ್ನಡಿಯೊಳಗಿನ ಬಿಂಬ ಕಂಡುಬೀಗದಿರು ತರುಣಿಅಮೂಲ್ಯ ವೇಳೆಯನ್ನು ಕಬಳಿಸುವುದುಕನ್ನಡಿಯೊಳಗಿನ ಬಿಂಬನಿನ್ನ ಗುರಿಯನ್ನು ನುಂಗಿಸೌಂದರ್ಯದ ಹುಚ್ಚು ಹಿಡಿಸಿ.ಅಲಂಕಾರದ ಅಮಲೇರಿಸಿನಿತ್ಯ ಕಾಯಕದ ಕರ್ತವ್ಯ ಮರೆಸಿದುಃಖದ ಮೂಲಕ್ಕೆ ಹೊಯ್ಯುವುದುಎಚ್ಚರವಿರಲಿ —ರತ್ನದೀಪ ಕಾಮ ಕಿಡಿಯಾಗಬಹುದುಕೋಟಿ ಕುರಿತಾಗಿ ಬಹುದುಹರಿಯಬಿಟ್ಟು ಮನಸು ಹಾವಾಗಬಹುದುಮೋಹ ಮನದ ಪರದೆ ಮುಚ್ಚಬಹುದುಕಾಮ ದಾಹಕ್ಕೆ ಕುರುಡಾಗದಿರುವಂದಿಸಿದವಳನುಳಿದು ಉಳಿದವರುತಾಯಂದಿರು ಸೋದರಿಯರೆಂದೆಣಿಸುನಿನ್ನ ಕಣ್ತೆರೆಯುವುದು —ರತ್ನದೀಪ ಅಗಸನಿಗೆ ಯಾರು ಬಟ್ಟೆಯಾದರೇನು?ಒಗೆಯುವುದು ಅವನ ಕಾಯಕಕತ್ತೆಗೆ ಯಾವ ಹೊರೆಯಾದರೇನುಹೊರುವುದು ಅದರ ಕಾಯಕಅಗಸನಿಗಿಲ್ಲ ಅದರ ಚಿಂತೆ ಮೌಢ್ಯ ತುಂಬಿದ ಮನಕೆಜ್ಞಾನ ನೀಡಯ್ಯಕತ್ತಲು ತುಂಬಿದ ಮನಕೆಅರಿವಿನ ಬೆಳಕು ನೀಡಯ್ಯಕತ್ತಲಲ್ಲಿ ಹುದುಗಿರುವ ಭಾವನೆಗಳಿಗೆಬೆಳಕು ನೀಡಯ್ಯಬೆತ್ತಲಾದ ಮನಕೆವಚನದ ಬಟ್ಟೆ ತೊಡಿಸಯ್ಯಬೆತ್ತಲಾದ ಮನದಲ್ಲಿ ವಚನಗಳುಅರಳುವಂತೆ ಮಾಡಯ್ಯ – ರತ್ನದೀಪ ಕಾಯಕ ಮಾಡಿದೆಕೈಲಾಸಂ ಬೇಡಿದರೆಂತಯ್ಯ?ಮೋಹ ತೊರೆಯದೆಮೋಕ್ಷ ಬೇಡಿದರೆಂತಯ್ಯ?ಸೌಹಾರ್ದತೆ ಇಲ್ಲದೆಸಂಭ್ರಮ ಬೇಡಿದರೆಂತಯ್ಯ?ಸಂಬಂಧದ ಮೌಲ್ಯವನರಿಯದೆಸ್ನೇಹ ಬೇಡಿದರೆಂತಯ್ಯ?ಎಲ್ಲರೊಳಗೆ ಒಂದಾಗಿ ಬೆರೆಯದಿರಲುಏನಿದ್ದರೂ ಫಲವಿಲ್ಲಯ್ಯ – ರತ್ನದೀಪ ಅರಗಿನ ಮನೆಯೊಳಗಿದ್ದುಅಗ್ನಿಗೆ ಅಂಜಿದೊಡೆಂತಯ್ಯ?ಅಂದರೆ ಮಡದಿಯನು ಕೂಡಿನಿಂದನೆಗೆ ಅಂಜಿದೊಡೆಂತಯ್ಯ?ಸಾಕುವ ಶಕ್ತಿಯಿಲ್ಲದೆ ಕಂದನ ಪಡೆದುನಾಡಿನ ಮೇಲೆ ಬಿಸುಟರೆಂತಯ್ಯ ?ಕೈಯಲ್ಲಿ ಖಡ್ಗವಿದ್ದರೂ ರಕ್ಷಿಸಿಕೊಳ್ಳಲುಹಿಂಜರಿದರೆಂತಯ್ಯ? – ರತ್ನದೀಪ************************
ಮುಂಜಾವಿನ ಬೆರಗು
ಕವಿತೆ ಮುಂಜಾವಿನ ಬೆರಗು ಡಾ.ಪ್ರೀತಿ ಕೆ.ಎ. ಅದೊಂದು ತಿಳಿ ಮುಂಜಾವುಎದ್ದಿದ್ದೆ ನಿನ್ನ ನೆನಪುಗಳಿಂದಕಣ್ಣ ಮೇಲಿನ ಮುಂಗುರುಳನ್ನುಹಗೂರಕ್ಕೆ ಹಿಂದೆ ಸರಿಸಿಬೆಚ್ಚಗಿನ ಚಹಾವನ್ನು ಇಷ್ಟಿಷ್ಟೇಹೀರುತ್ತಾ ಬಾಲ್ಕನಿಯಲ್ಲಿ ನಿಂತಿದ್ದೆ ನಿನ್ನೆವರೆಗೆ ಮೊಗ್ಗಾಗಿದ್ದಕೆಲವೇ ಕೆಲವು ಗಳಿಗೆಗಳಹಿಂದಷ್ಟೇ ಹೂವಾಗಿ ಬಿರಿದಆ ಸೇವಂತಿಗೆಯ ಮೃದು ಪಕಳೆಗಳಿಗೆನಿನ್ನದೇ ಮೈಯ ಘಮ ಚೀವ್ ಚೀವ್ ಗುಬ್ಬಿಮರಿಗಳಜೊತೆ ಸೇರಿದ ಹೊಸ ಹಕ್ಕಿಗಳಸಂಗೀತ ಸುಧೆಯಲ್ಲಿನಿನ್ನದೇ ನಾದ ಮೆಲ್ಲನೇ ಬೀಸುತ್ತಿರುವತಂಗಾಳಿಗೆ ಸಾಥ್ ಕೊಡುವಂತೆಅತ್ತಿಂದಿತ್ತ ಓಲಾಡುತ್ತಿರುವಆ ಎಳೇ ಸಂಪಿಗೆ ಗಿಡಕ್ಕೆನಿನ್ನದೇ ಲಯ ನೀಲಾಕಾಶದಲ್ಲಿ ತುಸುವೇಮೊಗವನ್ನು ತೋರುತ್ತಿದ್ದಇದೀಗ ಬಂಗಾರದ ಬಣ್ಣದಿಂದಮಿರಿ ಮಿರಿ ಹೊಳೆಯುತ್ತಿರುವ ಸೂರ್ಯನಿಗೆನಿನ್ನ ಕಣ್ಣುಗಳಲ್ಲಿದ್ದಷ್ಟೇ ಪ್ರಖರತೆ ಅರೇ ! ಇದೇನಿದುನಿನ್ನ ನೆನಪುಗಳ ಬಂಧದಿಂದಬಿಡಿಸಿಕೊಂಡೆ ಎಂಬುವುದುಬರೆಯ ಭ್ರಮೆಯಲ್ಲವಷ್ಟೇ? ನನ್ನನ್ನು ನೀನು ಆವರಿಸಿಕೊಂಡಪರಿಗೆ ಬೆರಗಾಗುತ್ತಿರುವಾಗಹಿತವಾಗಿ ತಬ್ಬಿ ನಿಂತೆಇದು ಕನಸಲ್ಲವೆಂದುಸಾಬೀತು ಪಡಿಸುವನಂತೆ…! **********************
ದ್ವಿಪದಿಗಳು
ದ್ವಿಪದಿಗಳು ಸಿದ್ಧರಾಮ ಕೂಡ್ಲಿಗಿ ಖಾಲಿಯಾದ ಕಣ್ಣುಗಳಲಿ ತೇಲುತ್ತವೆ ಕಂಬನಿದುಂಬಿದ ಮೋಡಗಳು ಒಮ್ಮೊಮ್ಮೆ ಭೋರ್ಗರೆಯುತ್ತವೆ ಒಮ್ಮೊಮ್ಮೆ ಕಣ್ಣಂಚಿನಲೇ ನಿಲ್ಲುತ್ತವೆ – ಬಂಜೆ ನೆಲಕೂ ಆಗಾಗ ಕನವರಿಕೆ ಒಡಲು ತುಂಬುವ ಸರದಾರ ಬರಬಹುದೆಂದು – ಬರಿದಾದ ತಲೆಯಲಿ ಚಿಂತೆಯ ಹದ್ದುಗಳದೇ ಗಲಾಟೆ ಬೇಟೆ ಸಿಕ್ಕರೆ ಭೂರಿ ಭೋಜನ ಇಲ್ಲದಿರೆ ಬರೀ ಗಾನ ಬಜಾನ – ಮತ್ತೊಬ್ಬರ ಬೂಟಿನಲಿ ಮೂಗು ತೂರಿಸುವ ಹೆಜ್ಜೆಗಳು ತಮಗೊಂದು ಅಸ್ತಿತ್ವವಿದೆಯೆಂದು ಎಂದೂ ಯೋಚಿಸವು – ಮುಗುಳ್ನಗೆಗಳು ಹಾರಾಡುತ್ತವೆ ಚಿಟ್ಟೆಯಂತೆ ಪ್ರೀತಿ ಇದ್ದಲ್ಲಿ ಕೂರುತ್ತವೆ ಇಲ್ಲದಿದ್ದಲ್ಲಿ ಮುಂದೆ ಸಾಗುತ್ತವೆ – ಏನು ಪುಣ್ಯವೋ ಹೆಜ್ಜೆಗಳಿಗೆ ಮಾತು ಬರದಿರುವುದು ಇಲ್ಲವಾದರೆ ಅವುಗಳಲ್ಲಿಯೂ ಪ್ರೀತಿ ಜಗಳಗಳಿರುತ್ತಿದ್ದವು – ಕಣ್ಣೊಳಗಿನ ಆಸೆಯೆಂಬ ಧೂಳು ತೊಳೆದರೆ ಎಲ್ಲವೂ ಸ್ಪಷ್ಟ, ದಿಟ್ಟ, ನೇರ, ನಿರಂತರ ***************************************** –
ಗಜಲ್
ಗಜಲ್ ಅಕ್ಷತಾ ಜಗದೀಶ ಬಾಳಲ್ಲಿ ಆನಂದದ ಹೊಳೆ ಹರಿಸಿದೆ ನೀ ಕಂದಸಾಗರದ ಆಳದಲಿ ದೊರಕಿದ ಮುತ್ತಿನಂತೆ ಆನಂದ ನೀ ಅತ್ತರು ಅದು ಸಂಗೀತದ ನಾದ ಕಂದನಕ್ಕಾಗ ಅದುವೇ ಮಾತ್ರ ಸ್ವರ್ಗದಾನಂದ ತೊದಲು ನುಡಿಯಲಿ ನುಡಿವೆ ನೀ ಕಂದನಿನ್ನೊಡನಾಟವದುವೇ ಎನಗೆ ಚಂದ ಬಾಳಲ್ಲಿ ನಂದಾದೀಪವಾದೇ ನೀ ಕಂದಸಂತೋಷದ ಅಲೆಯಾಗಲಿ ಈ ಅನುಬಂಧ ಪುಟ್ಟ ಪುಟ್ಟ ಹೆಜ್ಜೆ ನೀ ಇಡುವಾಗ ಕಂದಮನೆ ಆಗಿದೆ ಮಂತ್ರಾಲಯದಂತೆ ಮಹದಾನಂದ. ************************
ಕ್ಷಮಿಸಿ ಬಿಡು ಬಸವಣ್ಣ
ಕವಿತೆ ಕ್ಷಮಿಸಿ ಬಿಡು ಬಸವಣ್ಣ ಡಾ.ಶಿವಕುಮಾರ್ ಮಾಲಿಪಾಟೀಲ ನೀ ಹಾಕಿದ ಸಮಾನತೆಯಭದ್ರ ಬುನಾದಿ ಮೇಲೊಂದುಅಸಮಾನತೆಯ ಸೋರುವ ಗುಡಿಸಲು ಹಾಕಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನೀನು ಗಳಿಸಿದ ನೈತಿಕಆಸ್ತಿಯ ಮಾರಿಮಹಾಮನೆಯ ಜಂತಿಮುರಿದು ಉರುವಲಾಗಿಬಳಸುತ್ತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನಿನ್ನ ಜನ್ಮದಿನದಂದೆಆಸ್ತಿ, ಬಂಗಾರ ಖರೀದಿಸಿಅಕ್ಷಯ ನಿಧಿ ತುಂಬಿಸಿಕೃತಕ ಜಗತ್ತು ಕಟ್ಟುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ ದೇಶ ವಿದೇಶಗಳಲಿ ನಿನ್ನ ಮೂರುತಿ ಸ್ಥಾಪಿಸಿ,ನಿನ್ನ ವಚನಗಳನ್ನುಎಲ್ಲಾ ಭಾಷೆಗಿಳಿಸಿ,ಕಲ್ಯಾಣ ನಾಡನ್ನೆಕಟ್ಟುವುದ ಮರೆತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ ನಿನ್ನ ವಚನಗಳನ್ನು ಹೇಳುತ್ತ ಕೇಳುತ್ತ ವಚನ ಭ್ರಷ್ಟರಾಗಿ,ಕಾಯಕವೇ ಕಷ್ಟವೆಂದುನಿನ್ನನ್ನು ಕೂಡಲಸಂಗಮದಲ್ಲಿ ದಿನವೂ ಮುಳುಗಿಸುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ ಜಾತಿ ಅಳಿಸಲು ನೀನು ಚಳುವಳಿ ರೂಪಿಸಿದಿಜಾತಿ ಉಳಿಸಲು ನಾವು ಪೀಠಗಳನ್ನು ಸ್ಥಾಪಿಸಿಜಾತಿ ಸಮಾವೇಶಗಳ ಧೂಳಿನಲ್ಲಿ ನಿನ್ನನ್ನುಹುಡುಕಲು ಹೊರಟಿದ್ದೇವೆ— ಕ್ಷಮಿಸಿಬಿಡು ಬಸವಣ್ಣ ನಿನ್ನ ಕ್ರಾಂತಿಯ ಕಣಗಳುನಮ್ಮ ರಕ್ತದಲ್ಲಿಂದು ಮಾಯವಾಗಿವೆ“ಬಸವಾ ಮತ್ತೆ ಹುಟ್ಟಿ ಬಾ” ಎಂದ್ಹೇಳಲು ನಾವು ಅರ್ಹತೆ ಕಳೆದುಕೊಂಡಿದ್ದೇವೆ–ಕ್ಷಮಿಸಿಬಿಡು ಬಸವಣ್ಣ.ಕ್ಷಮಿಸಿ ಬಿಡು ….************************
ಕ್ಷಮಿಸಿ ಬಿಡು ಬಸವಣ್ಣ Read Post »









