ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಇಲ್ಲೆ ಎಲ್ಲಾ..

ಕವಿತೆ ಇಲ್ಲೆ ಎಲ್ಲಾ.. ಜ್ಯೋತಿ ಡಿ.ಬೊಮ್ಮಾ ಬಿಡು ಮನವೆ ಕೊರಗುವದುನಿನಗಾರಿಲ್ಲ ಇಲ್ಲಿ ಆಪ್ತ ನಿನಗೆ ನೀನೆ ಶತ್ರು ನಿನಗೆ ನೀನೆ ಮಿತ್ರನಿನಗೆ ನೀನೆ ಆಗು ಪರಮಾಪ್ತ ಆಪೇಕ್ಷಿಸಿ ಕಾತರಿಸಿದಷ್ಟು ಹೆಚ್ಚುವದು ದುಃಖನೀರಿಕ್ಷಿಸದಿರು ಯಾರಿಂದ ಎನನ್ನೂ ,ಅದೇ ಸುಖ ಅಲೆಯದಿರು ಹುಡುಕುತ್ತಾ ಹೊರಗೆಲ್ಲೂ ಮುಕ್ತಿಬಾಹ್ಯದಲ್ಲೆಲ್ಲೂ ದೊರಕದದು ಅರಿ ನೀ, ಅದೇ ಯುಕ್ತಿ ನೆಮ್ಮದಿಯ ಬೆಂಬತ್ತಿ ಓಡೋಡದಿರುದ್ಯಾನದಲ್ಲೆ ಅಡಗಿರುವದದು ಮರೆಯದಿರು ಕೋಪ ಅಸೂಯೆಗಳು ಚಿಗುರದಂತೆ ತಡೆಪ್ರೀತಿ ಕರುಣೆಗಳು ಹಂಚುತ್ತ ನಡೆ ಸ್ವರ್ಗ ನರಕಗಳು ಮತ್ತೆಲ್ಲೂ ಇಲ್ಲತನ್ನ ತಾ ಅರಿತವನಿಗೆ ಇಲ್ಲೆ ಎಲ್ಲಾ.. ****************************** ಜ್ಯೋತಿ ಡಿ.ಬೊಮ್ಮಾ.

ಇಲ್ಲೆ ಎಲ್ಲಾ.. Read Post »

ಕಾವ್ಯಯಾನ

ನಡುವೆ ಸುಳಿಯುವ ಆತ್ಮ!

ಕವಿತೆ ನಡುವೆ ಸುಳಿಯುವ ಆತ್ಮ! ನಡುವೆ ಸುಳಿಯುವ ಆತ್ಮಗಂಡೂ ಅಲ್ಲ ಹೆಣ್ಣೂ ಅಲ್ಲ!ಜೇಡರ ದಾಸಿಮಯ್ಯ ನೆನಪಾದ…ಗೋಡೆಯಲ್ಲಿದ್ದ ಗೌಳಿಹಲ್ಲಿ ಲೊಚಲೊಚ ಲೊಚ್ಚಲೊಚಗುಟ್ಟಿತುಪಚಪಚ ಪಚ್ಚ ಕಾಯಿ ಕಡೆಯುತ್ತಿದ್ದ ಬೋಳಜ್ಜಿಥತ್! ಅಪಶಕುನ! ಎಂದಳು.ಹೊಟ್ಟೆಗಂಟಿಕೊಂಡ ಬಿಳಿ ಮೊಟ್ಟೆಯನ್ನು ಹೊತ್ತಹೆಣ್ಣು ಜೇಡವುಗೋಡೆಯ ಮೇಲಿಂದವರಹಾವತಾರ ಕ್ಯಾಲೆಂಡರಿನ ಭೂಮಂಡಲದಮರೆಗೆ ಸರಿಯಿತು! ದಾಸಿಮಯ್ಯನ ಈ ವಚನ ಕಂಠಪಾಠ ಅವನಿಗೆ!ಪ್ರತಿ ಭಾಷಣದಲ್ಲೂ ಸ್ತ್ರೀ… ಸ್ತ್ರೀ… ಎಂದು ಸಂವೇದನೆಯಇಸ್ತ್ರೀ ಸೀರೆಸೀರೆಗಳಿಗೆ ಜೋರಲ್ಲೇ ಎಳೆಯುತ್ತಿರುತ್ತಾನೆವೇದಿಕೆಯಲ್ಲಿ!ಮನೆಯಲ್ಲಿ ‘ನಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!’ಇಸ್ತ್ರಿಯೇ ಇಲ್ಲದ ಹರಕು ಸೀರೆಯಲ್ಲಿಬಾಯಿ ಮುಚ್ಚಿಕೊಂಡೇ ಹೆಂಡತಿಯೋಜನಗಂಧಿಯರ ಮೀನು ಹೂವು ಮೂರಿಗಂಧ ಬೆರೆತುಬೆಂತರಾದಅವನ ಶರ್ಟ್ ಪ್ಯಾಂಟು ಬನಿಯನ್ನು ನಿಕ್ಕರನ್ನುಅವನೇ ಎಂಬಂತೆಬಟ್ಟೆಯೊಗೆಯುವ ಕಲ್ಲಿಗೆ ರಪರಪನೆ ಬಡಿದುಕೈ ಕಾಲುಗಳಲ್ಲಿ ಹಿಡಿದುಕರುಳನ್ನು ಹಿಂಡಿ ಹಿಪ್ಪೆ ಮಾಡಿನೇಲೆಹಗ್ಗದಲ್ಲಿ ಸುಡುಸುಡುವ ಸೂರ್ಯನಡಿಯಲ್ಲಿಒಣಗಲು ಹಾಕಿಉರಿಯುತ್ತ ಬೆವರಲ್ಲಿ ಮೀಯುತ್ತಾಳೆತಾನೇ ಒಣಗಿ!ಸ್ತ್ರೀಪರ ಭಾಷಣಗಾರನ ಹೆಂಡತಿ ಇವಳು! ಲಕ್ಕಿ!ಎಂದು ಬೆಟ್ಟು ತೋರಿದಾಗನಡು ಸಂತೆಯಲ್ಲೇ ಬತ್ತಲಾದವಳಂತೆಓಡಿ ಬರುತ್ತಾಳೆ ಅವಳು! ಅವಲಕ್ಕಿ ಕಟ್ಟನ್ನು ಎದೆಗೊತ್ತಿಕೊಂಡೇ! ಕಡ್ಡಿಗಳು ಮುರಿದುಬೆನ್ನುಮೂಳೆ ಬಾಗಿ ಸುಕ್ಕು ತೊಗಲು ಬಟ್ಟೆ ಹರಿದು ಅವನುಮುಲ್ಲೆಗೆ ಬಿಸಾಕಿರುವ ಕೊಡೆಯ ಪಳೆಯುಳಿಕೆಯಂತಹ ಅಮ್ಮಗಂಡನಿಗೆ ತೆರೆದುಕೊಳ್ಳದೆಗಾಳಿಯಲ್ಲಿ ಆಕಾಶಕ್ಕೆ ತಿರುವುಮುರುವಾಗಿಗರಿಬಿಚ್ಚಿ ಹಾರಿದ ‘ಸಿರಿ’ ಭೂತದ ಕ್ಷಣಗಳನ್ನುಮೆಲುಕು ಹಾಕುತ್ತ ತನ್ನಸೊಸೆಯು ಕರಿಮಣಿ ಹರಿದು ಹಿಡಿಸೂಡಿಗೆ ಕಟ್ಟುವಗಳಿಗೆಗಾಗಿ ಮೈಯೆಲ್ಲ ಕಣ್ಣಾಗಿ ಕುಳಿತಿದ್ದಾಳೆ!ಗಂಡು ಪ್ರಾಣಿಯ ತಲೆತುದಿ ಕಂಡರೆ ಸಾಕು…ಈ ಹಳೇಕೊಡೆಯು ನಾಗರಹಾವಾಗಿ ಸುಯುಂಪಿಭುಸುಗುಟ್ಟುತ್ತದೆ ಮಲಗಿದಲ್ಲೇ ಹೆಡೆ ಅರಳಿಸಿ! ಕೈಗೆ ಮೈಕ ಸಿಕ್ಕಿದರೆ ಸಾಕು ಅದಕ್ಕೇಹೆಬ್ಬಾವಿನಂತೆ ಸುತ್ತಿಕೊಂಡು ಸ್ತ್ರೀಯರನ್ನೇ ನುಂಗುವಂತೆ ನೋಡುತ್ತಎಂಜಲು ಮಾತುಗಳನ್ನು ಕಕ್ಕುವ ಈ ಮಾರಾಯಕರಿಮಣಿ ಎಂಬ ಉರುಳು ಕಟ್ಟಿತವರಿನ ಹಟ್ಟಿಯನ್ನು ಬಿಟ್ಟು ಬರಲಾರೆ ಎಂದುಕಣ್ಣೀರಿಡುತ್ತಿದ್ದ ಎಳೆ ಪ್ರಾಯದ ಕನ್ನೆಯನ್ನು ಹೆಂಡತಿಯೆಂದುಎಳೆದುಕೊಂಡೇ ಬಂದು… ಅವಳುನಿತ್ಯದಂತೆ ಅಳದಿದ್ದರೆ… ಸಂಶಯದಲ್ಲೇ ಅಳೆದು ಅಳೆದುಅವಳು ಹೆತ್ತ ಹೆಣ್ಣು ಕೂಸಲ್ಲಿ ಯಾರ್ಯಾರದ್ದೋಕಣ್ಣು ಮೂಗನ್ನು ಹುಡುಕುತ್ತಾನೆ! ಭಾಷಣ ಕೇಳಿ…ಅಬ್ಬಾ… ಹೆಣ್ಣುಹೃದಯವೇ! ಅಂದುಕೊಂಡುಅವನಲ್ಲಿ ನೀನು ಅಣ್ಣನೋ ತಮ್ಮನೋ ಗೆಳೆಯನೋಅಂದುಕೊಂಡು…ಸೆಕ್ಸ್ ಒಂದನ್ನು ಬಿಟ್ಟುಹೆಣ್ಣುದೇಹದ ಮುಟ್ಟು ಮಾಸಿಕ ಬಸಿರು ಬಾಣಂತನಮಲಮೂತ್ರ ನೆತ್ತರು ಸತ್ತರು… ಲಂಗು ಪುಸ್ಕುಕಷ್ಟ ಸುಖ ಮಾತಾಡಿ ನೋಡಂತೆ ಹಗಲು!ಆ ಅವನಿಗೆ ಮೈಲಿಗೆಯಾಗಿಬಿಡುತ್ತದೆಒಂದು ಕೆಜಿ ಹುಣಸೆಹುಳಿ ಕಿವುಚಿದ ಮುಖದಲ್ಲೇಆಕಾಶದಿಂದ ದೇವರ ಮೂಗಿಂದಲೇಉದುರಿದ ದೇವಪಾರಿಜಾತದಂತೆಮೈಗೆ ಅತ್ತರು ಬಳಿದುಕೊಳ್ಳುತ್ತಾನೆಮನಸ್ಸು ಕೊಳೆತು ನುಸಿ ಹಾರುತ್ತಿರುತ್ತದೆ!ಆ ರಾತ್ರಿಯೇ ತೀರ್ಥದಲ್ಲಿ ಮಿಂದುನಿನಗೆ ಸೆಕ್ಸ್ ಮೆಸ್ಸೇಜ್ ಕಳುಹಿಸಿಹಾಸಿಗೆಗೆ ಬರುತ್ತೀಯ? ಅನ್ನುತ್ತಾನೆ…ನೀನು ಥೂ! ಅನ್ನುತ್ತೀಯ… ಅವನ ಮುಖಕ್ಕೇಉಗುಳುವ ಧೈರ್ಯ ಸಾಲದೆ!ನಿನ್ನ ಉಗುಳು ನಿನ್ನ ಮುಖಕ್ಕೇ ಬೀಳುವ ಭಯದಲ್ಲಿ!ಅವನ ಬಾರ್ ಗೆಳೆಯರು ಬರೋಬ್ಬರಿ ನಗುವಲ್ಲಿತೇಲಿ ಮುಳುಗಿ ಕೊಚ್ಚಿಕೊಂಡು ಹೋಗುತ್ತಿರುತ್ತಾರೆಅದುವರೆಗೂ ಅವರು ನೋಡಿಯೇ ಇರದನಿನ್ನ ಅಂಗಾಂಗಗಳ ವರ್ಣನೆಯಲ್ಲೇನಿನಗೆ ಆಕಾರ ಕೊಡುತ್ತ…ಬಟ್ಟೆ ತೊಡಿಸಿ ಒಂದೊಂದ್ಶಾಗಿ ಬಿಚ್ಚುತ್ತ…ತಥ್! ಹಗುರವಾಗಲು ಅವಳಲ್ಲಿ ಹೇಳಿಯೇಬಿಟ್ಟಿಯಾ?ಎಲ್ಲ ಹೇಳಿಬಿಟ್ಟೆಯಾ? ಸರಿ, ಅನುಭವಿಸು ಇನ್ನು!ಕಿವಿಗಳಿಗೆರಡು ಹೂ ಸಿಕ್ಕಿಸಿಕೊಂಡ ಆ ಮಡಿಬೆಕ್ಕುಮಿಡಿನಾಗಿಣಿಯಂತೆ“ಮಿಡಿ ಧರಿಸಿಕೊಂಡವರು ಮಡಿವಂತರಲ್ಲ…ಇಡಿಧರಿಸಲಿಕ್ಕೇನು ಧಾಡಿ? ಅವನನ್ನು ಬುಟ್ಟಿಗೆ ಹಾಕಿಕೊಳ್ಳಲುನೋಡಿ ಸೋತು… ಅಪಪ್ರಚಾರ ಮಾಡುತ್ತಿದ್ದಾಳೆ ಈ ಹಡಬೆ!”ಎಂದು ಗೋಡೆಗೋಡೆಗಳಿಗೂ ಇಲ್ಲದ್ದನ್ನು ಉಸುರಿಬಿಲ ಸೇರಿ ಭುಸುಗುಡುತ್ತಿರುತ್ತಾಳೆ…ಥೇಟ್ ಧಾರವಾಹಿಯ ನೀಲಿ ರೆಪ್ಪೆಯಮೀಡಿಯಾಳ ಹಾಗೆ!ಒಳಗೊಳಗೇ ಸಂಚು ಮಾಡುವ ಗುಳ್ಳೆನರಿಯಂತೆಮುಖ ತೋರಿಸದೆ ಓಡಾಡುತ್ತಾಳೆ!ಪ್ಚ್ ಪ್ಚ್!ತನ್ನ ಬಲೆಯಲ್ಲಿತಾನೇ ಸಿಕ್ಕಿಹಾಕಿಕೊಂಡ ಜೇಡನಂತೆ…ತನ್ನ ಮಾನಕ್ಕೆ ತಾನೇ ಬಟ್ಟೆ ಹೆಣೆಯುತ್ತ ಹೆಣೆಯುತ್ತನೆತ್ತರ ಕೊನೆಯ ಬಿಂದು ಕಾಲಿಯಾಗುವವರೆಗೂದೇಹವನ್ನು ಮಡಿಬಲೆಗೇ ಸುತ್ತಿಕೊಳ್ಳುತ್ತ ಸುತ್ತಿಕೊಳ್ಳುತ್ತಅವಳು ಈಗ ಈಗ ಸತ್ತಳು! ಮುಚ್ಚಿದ ಬಾಗಿಲೊಳಗೆಸೀರೆ ಸೆರಗಿನ ಅಂಚಿಗೆ ಬೆಂಕಿ ಭಗ್ಗೆಂದು ಹಿಡಿದುಕೆಂಪು ಕೆಂಪು ಗೆಣಸಿನಂತೆ ಭಗಭಗ ಮೈ ಬೇಯುವಾಗಲೂಕಿಟಕಿಯಿಂದ… “ ಸೀರೆ ಕಿತ್ತು ಬಿಸಾಡು! “ಎಂದು ಅರಚುವ ಗಂಡಸರಮುಂದೆಸೀರೆ ಕಳಚಿ ಎಸೆದು ಬತ್ತಲಾಗಿ ಜೀವ ಉಳಿಸಿಕೊಳ್ಳಲು ನಾಚಿ! ಛೆ!ಆತ್ಮಕ್ಕಂಟಿಕೊಂಡ ಹೆಣ್ಣುಮೈಯನ್ನು ಕಳಚಿ ಎಸೆಯಲಾಗದ ಸಂಕಟಕ್ಕೆಸುಟ್ಟು ಬೂದಿಯಾಗಿಬಿಟ್ಟಳು! ಗಂಡುಸಂತೆಯಲ್ಲಿ ಬಣ್ಣಬಣ್ಣದ ಶೀಲ ತುಂಬಿಕೊಂಡಉರುಟು ಚೌಕ ಆಯತ ತ್ರಿಕೋನ… ಆಕಾರ ಆಕಾರಗಳ ಹೆಣ್ಜುಕುಪ್ಪಿಬಾಟಲಿಗಳು ಮಾನದಲ್ಲೇ ಹರಾಜಾಗುತ್ತಿರುತ್ತವೆಮಾನ ಕಳಕೊಂಡು ಬೇಲಿಯ ಅಂಚಲ್ಲೇ ಒಡೆದುಖಾಲಿ ಬಿದ್ದಿರುತ್ತವೆ!ಅಡುಗೆ ಮನೆಯಲ್ಲಿ ಬೋಳಜ್ಜಿನಿರಾಕಾರದ ಹಿಟ್ಟನ್ನು ನಾದಿ ನಾದಿಆಕಾರದ ರೊಟ್ಟಿ ಕಾಯಿಸುತ್ತಹಿಟ್ಟಿನ ಮುದ್ದೆಯಂತೆ ಒಲೆ ಮುಂದೆಕಾಯುತ್ತಿರುತ್ತಾಳೆ ಅಜ್ಜನನ್ನು! ಅಜ್ಜ ನೆಟ್ಟ ಆಲದಮರದ ಬೇರಿಗೆಒಂದು ಹೂವಿಟ್ಟು ಅರಶಿನ ಕುಂಕುಮ ಬಳಿದುಊದುಬತ್ತಿಕಡ್ಡಿ ಹಚ್ಚಿ ದಿನಾ ನೂರ ಎಂಟು ಸುತ್ತು ಹಾಕದಿದ್ದರೆಮದುವೆಯಾಗುವುದಿಲ್ಲ ಮಕ್ಕಳಾಗುವುದಿಲ್ಲಬಂಜೆಗೊಡ್ಡಾಗುತ್ತಿ ಎಂದು ಸಹ್ಸ್ರನಾಮಾರ್ಚನೆ ಮಾಡುಮಾಡುತ್ತಲೇಸತಿ ಹೋದ ಆ ಅಜ್ಜಿಯ ನೆನಪಲ್ಲೇ ಉದ್ದಲಂಗದ ಮಗಳುಜೀವಮಾನವಿಡೀ ಮರಕ್ಕೆ ಸುತ್ತು ಹೊಡೆಯುತ್ತಲೇ ಇರುತ್ತಾಳೆಕುಪ್ಪಸದ ಬೆನ್ನು ಹೊಕ್ಕಳು ಹೊಟ್ಟೆಯ ಚರ್ಮಸುಕ್ಕಾಗಿಮೊಲೆಗಳು ಜೋತುಬೀಳುವವರೆಗೂಮೆದುಳನ್ನೇ ಕೊಂಬಚೇಳು ಕಚ್ಚಿಹಿಡಿದಾಗದೇವರಕಿಂಡಿಗೆ ಹಣೆ ಚಚ್ಚಿಕೊಳ್ಳುತ್ತಾಳೆ ಆಗ…ಜೇಡರ ದಾಸಿಮಯ್ಯ ಹೇಳಿದಗಂಡೂ ಅಲ್ಲದ ಹೆಣ್ಣೂ ಅಲ್ಲದ ಆತ್ಮವನ್ನುದೇವರು ಹುಡುಕಲು ಹೊರಡಬೇಕೆಂದುಕೊಳ್ಳುತ್ತಾನೆಶರ್ಟ್ ತೊಡಲೇ ಸೀರೆ ಉಡಲೇ!ಎಂದು ಕನ್ನಡಿಯ ಮುಂದೆ ಬತ್ತಲೆ ನಿಂತುತಲೆ ಕೆರೆದುಕೊಳ್ಳುತ್ತ! ********************************** ಕಾತ್ಯಾಯಿನಿ ಕುಂಜಿಬೆಟ್ಟು

ನಡುವೆ ಸುಳಿಯುವ ಆತ್ಮ! Read Post »

ಇತರೆ, ಪ್ರಬಂಧ

ಹೊರಗೋಡೆ

ಪ್ರಬಂಧ ಹೊರಗೋಡೆ ಗೋಡೆ ಎಂಬುದು ಹಲವಾರು ವಸ್ತುಗಳು, ವಿಶೇಷಗಳು ಹಾಗೂ ವಿಷಯಗಳನ್ನು ಮುಚ್ಚಿಡಬಹುದಾದ ಇಟ್ಟಿಗೆ, ಮರಳು, ಸುಣ್ಣ, ಬೆಲ್ಲ, ಸಿಮೆಂಟುಗಳಿಂದ ಕಟ್ಟಿದ ಒಂದು ರಚನೆ ಎಂದುಕೊಳ್ಳುವುದು ಒಂದು ಬಗೆಯಲ್ಲಿ ಒಪ್ಪಬಹುದಾದ ವಿಷಯವಾದರೂ, ಹಲವಾರು ಕಾರಣಗಳಿಂದ ಗೋಡೆಗಳು ನಮ್ಮನ್ನು ಪೂರ್ವಜರೊಂದಿಗೆ ಬೆಸೆಯುತ್ತಲೇ ಪ್ರಸ್ತುತ ಜೀವನದಲ್ಲಿ ಆಸಕ್ತಿ ಮೂಡಿಸುತ್ತಾ ಹೋಗುತ್ತವೆ. ಪ್ರತಿಯೊಂದು ಗೋಡೆಯನ್ನು ಕಟ್ಟಲು ಆರಂಭಿಸಿದ ಕೂಡಲೇ ಹೊರಗೋಡೆ ಹಾಗೂ ಒಳಗೋಡೆ ಎರಡೂ ಜೊತೆ ಜೊತೆಗೆ ನಿರ್ಮಾಣವಾಗುತ್ತಾ ಸಾಗುತ್ತದೆ. ನಾಗರೀಕತೆಯ ಆರಂಭವನ್ನು ನಾವು ಅರಿಯಲು ಹಾಗೂ ನಮ್ಮ ಪೂರ್ವಜರ ಇರುವನ್ನು ನಂಬಲು ಅವರುಗಳು ಕಟ್ಟಿ, ಬಿಟ್ಟು ಹೋಗಿರುವ ಗೋಡೆಗಳೇ ಸಾಕ್ಷಿ. ಅಂತೆಯೇ ಶತಮಾನಗಳೇ ಕಳೆದರೂ ಇನ್ನೂ ಸುಸ್ಥಿತಿಯಲ್ಲಿರುವಂಥಹ ಗೋಡೆಗಳಿಗೆ ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳನ್ನೇ ಬಳಸಿಕೊಂಡು, ಸಾವಿರಾರು ವರ್ಷಗಳಷ್ಟು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಿರುವುದು ಮಾತ್ರ ಒಟ್ಟೊಟ್ಟಿಗೇ ಭೂಮಿಯ ಗುಣ ಹಾಗೂ ನಮ್ಮ ಪೂರ್ವಜರ ಬುದ್ಧಿವಂತಿಕೆಯನ್ನು ಅನಾವರಣಗೊಳಿಸುತ್ತದೆ. ತಮ್ಮ ವೈಯಕ್ತಿಕ ಜೀವನವನ್ನು ಅನ್ಯರಿಗೆ ಕಾಣಿಸುವ ಅಗತ್ಯವಿಲ್ಲದಾಗ ಸುರಕ್ಷತೆಯ ಹಾಗೂ ಸಂರಕ್ಷಿಸಿಕೊಳ್ಳುವ ದೃಷ್ಟಿಯಿಂದ ಸಿಂಧೂ ನಾಗರೀಕತೆಯ ಕಾಲದಲ್ಲಿಯೇ ಗೋಡೆಗಳನ್ನು ಕಟ್ಟಿರುವ ಸಾಕ್ಷಿ ಇಂದಿಗೂ ಹರಪ್ಪಾ ಹಾಗೂ ಮೊಹಾಂಜದಾರೋ ರೂಪದಲ್ಲಿ ನಮ್ಮ ಕಣ್ಣ ಮುಂದಿದೆ ಎನ್ನುವುದು, ಮಾನವರಿಗೆ ಗೋಡೆಗಳ ಅಗತ್ಯ ಹಾಗೂ ಅವರುಗಳು  ಅನಾದಿಕಾಲದಿಂದಲೂ ಗೋಡೆಗಳಿಗೆ ನೀಡುತ್ತಿದ್ದ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ಅರಿಯಲು ಸಹಕಾರಿಯಾಗಿದೆ. ಅಂತೆಯೇ ಕೋಟೆಯ ಗೋಡೆಗಳೂ ಸಹ ಸಾವಿರಾರು ವರ್ಷಗಳೇ ಕಳೆದರೂ, ಕೆಲವು ಅವಶೇಷ ಸ್ಥಿತಿ ತಲುಪಿ ಇಂದಿಗೂ ನೋಡಬಹುದಾದ ಗೋಡೆಗಳು ಎಂಥಹವರಲ್ಲೂ ಭೂಮಿಯ ಮೇಲೆ ಬಾಳಿ, ಆಳಿದ ನಂತರ ಅಳಿದ ಪ್ರತಿಯೊಂದು ಪರಂಪರೆಯನ್ನು ನಮ್ಮ ಕಣ್ಮುಂದೆ ತರುವ ಒಂದು ಅದ್ಭುತವೇ ಸರಿ. ಈಜಿಪ್ಟಿನ ಪೂರ್ವಜರು ನಿರ್ಮಿಸಿರುವ ಪಿರಾಮಿಡ್ಡುಗಳೂ, ಚೈನಾ ಗೋಡೆಗಳೂ ಸಹ ಇದನ್ನು ಸಾಕ್ಷೀಕರಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಯಾವುದೋ ಕಾಲದಲ್ಲಿ ಕಟ್ಟಿದ ಗೋಡೆಯನ್ನು ಇಂದಿಗೂ ಹೊಡೆದುಹಾಕುವುದೋ ಅಥವಾ ಇನ್ನಷ್ಟು ಬೆಳೆಸುವುದೋ ಸಾಧ್ಯವಾಗದೇ ಯಥಾಸ್ಥಿತಿ ಕಾಪಾಡಿಕೊಂಡು, ಇಂದು ದೇಶ ದೇಶಗಳ ನಡುವೆ ಸ್ವಾಭಿಮಾನ ಹಾಗೂ ಪ್ರತಿಷ್ಠೆಯ ಪ್ರತೀಕವಾಗಿಯೂ ಉಳಿದುಕೊಂಡು ಬಂದಿರುವ ಅನೇಕ ಉದಾಹರಣೆಗಳು ಸಹಾ ಇಲ್ಲದೆ ಇಲ್ಲ. ವೈರಿಗಳು ಗಡಿ ನುಸುಳದಂತೆ ಹಾಗೂ ಒಂದು ದೇಶದಲ್ಲಿ ನಡೆಯುವ ವಿಷಯಗಳನ್ನು ಗುಟ್ಟಾಗಿಡುವ ಉದ್ದೇಶದಿಂದ ಯಾವ ದೇಶವೇ ಗೋಡೆಯನ್ನು ಕಟ್ಟಿದರೂ, ಉಭಯ ದೇಶಗಳಿಗೂ ಗೋಡೆಯಾಚಿನ ಪ್ರದೇಶ “ಹೊರಗೋಡೆ” ಆಗಿರುತ್ತದೆ. ಇಂದಿಗೂ ನೋಡಲು ಲಭ್ಯವಿದ್ದು, ಗೋಡೆಗಳೇ ಹೇಳುವ ಕಥೆಯನ್ನು ತಿಳಿಯುತ್ತಲೇ, ಪ್ರಸ್ತುತ ನಾಗರೀಕರು ಗೋಡೆಯನ್ನು ಕಟ್ಟುವ ಹಾಗೂ ನಿರ್ವಹಿಸುವ ಅದರಲ್ಲಿಯೂ ಹೊರಗೋಡೆಯ ಬಗ್ಗೆ ತಿಳಿಯಬೇಕಾಗುತ್ತದೆ. ಬಹುತೇಕ ಹೊರ ಪ್ರಪಂಚದಿಂದ ನಮ್ಮನ್ನು ಬೇರ್ಪಡಿಸುವ ಗೋಡೆಗಳು ಕೆಲವರಿಗೆ ಸ್ವಂತದ್ದಾದರೆ ಹಲವರಿಗೆ ಬಾಡಿಗೆ ಅಥವಾ ಭೋಗ್ಯದವು. ಗೋಡೆಗಳನ್ನು ಕೂಡಿಸಿ, ಕೋಣೆಗಳನ್ನು ಬೇರ್ಪಡಿಸಿದ ಮನೆಗೆ ಸೇರಿಕೊಂಡು ಬಾಗಿಲು ಹಾಕಿದರೆ ಗೋಡೆಯಾಚೆ ನಡೆಯಬಹುದಾದ, ನಡೆದುಹೋದ ಹಾಗೂ ನಡೆಯುತ್ತಿರುವ ಎಷ್ಟೋ ವಿಷಯಗಳು ತಮ್ಮ ಗಣನೆಗೆ ಬರುವುದಾಗಲೀ ಅಥವಾ ತಮ್ಮ ಕಲ್ಪನೆಗೆ ಎಟುಕುವುದಾಗಲೀ ಸಾಧ್ಯವೇ ಇರುವುದಿಲ್ಲ. ಒಬ್ಬ ಕಳ್ಳನು ಕದ್ದ ವಸ್ತುಗಳನ್ನು ತಂದು ಒಂದು ಬಂಗಲೆಯ ಹಿಂಭಾಗದಲ್ಲಿ ಶೇಖರಿಸಿಟ್ಟು, ಗೋಡೆಗೆ ಒಲೆ ನಿರ್ಮಿಸಿ, ಅಡುಗೆ ಮಾಡಿಕೊಂಡು ದಿನ ಕಳೆಯುತ್ತಿದ್ದ ಘಟನೆಯು ಒಂದೊಮ್ಮೆ ಬೆಂಗಳೂರಿನ ಒಂದು ಪ್ರತಿಷ್ಠಿತ ಬಡಾವಣೆಯ ನಾಗರಿಕರ ನಿದ್ದೆ ಕೆಡುವಂತೆ ಮಾಡಿತ್ತು. ಆ ಮಟ್ಟಿಗೆ ನಮ್ಮದೇ ಮನೆಯ ಹೊರಗೋಡೆಯಲ್ಲಿ ನಡೆಯುವ ಹಲವಾರು ವಿಷಯಗಳು ನಮ್ಮ ಗಮನಕ್ಕೆ ಬಂದೇ ಇರುವುದಿಲ್ಲ ಎನ್ನುವುದು ವಿಪರ್ಯಾಸ. ಮೊದಲೆಲ್ಲಾ ನಮ್ಮ ಹೊರ ಗೋಡೆಯಲ್ಲಿ ನಡೆಯುವ ಹಲವಾರು ಘಟನೆಗಳು ಬೇರೆಯವರಿಗೆ ಕಾಣಬಹುದಿತ್ತಾಗಲೀ, ನಮಗೆ ತಿಳಿಯಬೇಕಿದ್ದರೆ, ಸ್ವತಃ ನಾವು ಹೊರ ಬಂದು ನೋಡಬೇಕಿತ್ತು. ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನವು ನಮ್ಮದೇ ಗೋಡೆಯಾಚೆ ನಡೆಯುವ ವಿದ್ಯಮಾನಗಳ ಮಾಹಿತಿಯನ್ನು ಮನೆಯೊಳಗೆ ಕುಳಿತು ಯಾರಾದರೂ ಗೋಡೆ ಹತ್ತಿ ಮಹಡಿ ತಲುಪುವುದನ್ನೂ ತಿಳಿದುಕೊಳ್ಳುವಷ್ಟು ಬೆಳೆದಿದೆ. ಮನೆಯ ಹೊರಗೋಡೆಗೆ ವಿಶೇಷವಾದ ಹೆಸರಿರುವುದಿಲ್ಲವಾಗಿ, ಕಟ್ಟಿಗೆ ಒಟ್ಟಿದ್ದರೆ ಕಟ್ಟಿಗೆಗೋಡೆ, ಹಿತ್ತಲಿಗೆ ತೆರೆದುಕೊಂಡಿದ್ದರೆ ಹಿತ್ತಲಗೋಡೆ, ಬೀದಿಕಡೆಗಿದ್ದರೆ ಬೀದಿಗೋಡೆ, ಅಡಿಗೆಮನೆಯ ಹೊರಗೋಡೆ ಹೀಗೆ ಕರೆಯುವುದು ಸಾಮಾನ್ಯ. ಕಾಂಪೌಂಡಿನ ಹೊರ ಗೋಡೆಯಾದರಂತೂ ನಾವೇ ಕಟ್ಟಿಸಿದ ಗೋಡೆಯನ್ನೇ ಅಕ್ಕಪಕ್ಕದವರ ಮನೆಯವರ ಹೆಸರಿನೊಂದಿಗೆ ಗುರುತಿಸುತ್ತೇವೆ. “ಮಾಚಿ ಮನೆ ಕಂಪೌಂಡಿನ ಒಳಗೆ ಇಲಿ ಸತ್ತುಹೋಗಿದೆ” ಅನ್ನುವುದು. ಅಥವಾ “ಮಂಜು ಮನೆ ಕಂಪೌಂಡಿನಲ್ಲಿ ಮಲ್ಲಿಗೆ ಹೂ ಬಿಟ್ಟಿದೆ” ಎಂದು ಆ ಬದಿ ಯಾರಿದ್ದರೆ ಅವರದೇ ಹೆಸರಿನೊಂದಿಗೆ ಕಂಪೌಂಡಿನ ಹೊರಗೋಡೆಗೆ ನಾಮಕರಣವಾಗುತ್ತದೆ. ಅಥವಾ ಪಕ್ಕದ ಮನೆಯವರು ಹಣ ಖರ್ಚು ಮಾಡಿ  ಕಂಪೌಂಡ್ ಕಟ್ಟಿಸಿದ್ದರೂ ನಮ್ಮನ್ನು ಕುರಿತು “ರೀ ನಿಮ್ಮ ಕಂಪೌಂಡ್ ಒಳಗೆ ನಮ್ಮ ಬಟ್ಟೆ ಬಿದ್ದಿದೆ” ಅನ್ನುವುದೋ ಅಥವಾ “ಪೋಸ್ಟ್ ಮಾಸ್ಟರ್ ಲೆಟರನ್ನ ನಿಮ್ಮ ಕಂಪೌಂಡ್ ಕಡೆ ಹಾಕಿದ್ದಾನೆ” ಎಂದು ಅವರು ಕಟ್ಟಿಸಿದ ಕಂಪೌಂಡಿಗೆ ನಮ್ಮನ್ನು ಒಡೆಯರನ್ನಾಗಿಸುತ್ತಾರೆ. ಹೀಗೆ ಹೊರಗೋಡೆಯು ಒಬ್ಬರಿಂದ ಖರ್ಚುಮಾಡಿಸಿ ಮತ್ತೊಬ್ಬರಿಗೆ ರಕ್ಷಣೆ ಹಾಗೂ ಒಡೆತನವನ್ನು ನೀಡುತ್ತದೆ. ಇದು ಹೊರಗೋಡೆಗಲ್ಲದೆ ಭೂಮಿ ಮೇಲಿನ ಯಾವುದೇ ಮಾನವ ರಚನೆಗೆ ಸಾಧ್ಯವಿರಲಾರದು ಎನ್ನುವುದು ಇಲ್ಲಿ ಪ್ರಸ್ತುತ. ಸಾಮಾನ್ಯವಾಗಿ ಮನೆ ಕಟ್ಟುವವರು, ತಮ್ಮ ಮನೆಯನ್ನು ಎಲ್ಲರಿಗಿಂತಲೂ ವಿಶೇಷ ಹಾಗೂ ಪ್ರತ್ಯೇಕವಾಗಿ ಕಾಣಿಸುವ ದಿಸೆಯಲ್ಲಿ ಬೀದಿಗೆ ಕಾಣುವ  ಹೊರಗೋಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ನಗರದಲ್ಲಿಯ ಸ್ಥಿತಿವಂತರ ಮನೆಯ ಹೊರಗೋಡೆಗಳು ಮನೆಯಿಂದ ಮನೆಗೆ ಸಾಧ್ಯವಾದಷ್ಟು ವಿಭಿನ್ನ ಅಭಿರುಚಿಯಿಂದ ಕೂಡಿದ್ದು, ತಮ್ಮ ವಿಚಾರಧಾರೆಗೆ ತಕ್ಕಂತೆ ವಿನ್ಯಾಸಗೊಳಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇತ್ತೀಚೆಗೆ ನಗರೇತರ ಪ್ರದೇಶಗಳಲ್ಲಿಯೂ ಹೊರಗೋಡೆಗಳನ್ನು ಅಂದಗಾಣಿಸುವ ಹವ್ಯಾಸ ಬೆಳೆಯುತ್ತಿದೆ. ಹೊರಗೋಡೆಗೆ ಹೆಚ್ಚಿನ ಆಸಕ್ತಿ ತೋರುವ ಮಾಲೀಕರು ತಮ್ಮದೇ ಮನೆಯ ಅಕ್ಕಪಕ್ಕದ ಗೋಡೆಗಳನ್ನು ಚೂರುಪಾರು ಅಲಂಕರಿಸಿದರೆ, ಹಿಂದಿನ ಗೋಡೆಯದಂತೂ ಗೌಣಗಣನೆ ಅಂತೆಯೇ ಅದನ್ನು ಅಂದಗೊಳಿಸುವ ಅಗತ್ಯವೂ ಇರುವುದಿಲ್ಲ.  ವಿನ್ಯಾಸಕಾರರ ವಿಶೇಷತೆ ಹಾಗೂ ನಿರಂತರ ಆವಿಷ್ಕಾರದೊಂದಿಗೆ ಅರಳುವ ಮನೆಯ ಮುಂದಿನ ಹೊರಗೋಡೆ ವಿನ್ಯಾಸವನ್ನು ನೋಡಿಯೇ ರಸ್ತೆಯಲ್ಲಿ ಓಡಾಡುವ ಜನರು, ಮನೆಯಲ್ಲಿರುವವರ ಆರ್ಥಿಕ ಸ್ಥಿತಿ ಹಾಗೂ ಅಭಿರುಚಿಯನ್ನು ಅಳಿಯಬಹುದಾಗಿದೆ. ಇಂತಿರುವ ಹೊರಗೋಡೆಯ ಪುರಾಣವು ಇಲ್ಲಿಗೇ ಮುಗಿಯುವುದಿಲ್ಲ. ಸಾಮಾನ್ಯವಾಗಿ ಸರಕಾರೀ ಕಟ್ಟಡಗಳು, ಸಮುದಾಯ ಭವನಗಳು, ಸರಕಾರಿ ಸಿಬ್ಬಂದಿ ಕ್ವಾರ್ಟರ್ಸಿನ ಗೋಡೆಗಳಲ್ಲಿ ಮೊದಲೇ ಕಳಪೆ ಕಾಮಗಾರಿಯಿಂದ ಹಲವೆಡೆ ಹೊರಗೋಡೆಗಳಲ್ಲಿ ಬಿರುಕು ಉಂಟಾಗಿದ್ದರೆ, ಅದೇ ಗೋಡೆಯಲ್ಲಿ ಜೇಡರಬಲೆ ಜಾಳುಜಾಳಾಗಿ ನೇತಾಡುವುದನ್ನು ಕಾಣಬಹುದು. ಆಲ, ಗಸಗಸೆ, ಔದಂಬರ, ಅರಳಿ, ಕ್ಯಾಕ್ಟಸ್ ಹಾಗೂ ಮುಂತಾದ ಗಿಡಗಳು ಹುಟ್ಟಿ ಮರವಾಗುವ ಹಂತ ತಲುಪಿದ್ದರೂ ಅದನ್ನು ಕಿತ್ತೆಸೆಯುವ ಗೋಜಿಗೇ ಹೋಗದೇ ತಮಗೆ ಸಂಬಂಧಿಸಿದ ವಿಷಯವೇ ಅಲ್ಲವೆಂಬಂತೆ ವರ್ತಿಸಿ, ಸಾರ್ವಜನಿಕರ ಹಣವನ್ನು ಪೋಲು ಮಾಡುವುದರಲ್ಲಿ ಹಲವರ ಉದಾಸೀನ ಭಾವನೆ ಎದ್ದು ಕಾಣುತ್ತದೆ. ನೌಕರರು ಬಿಟ್ಟಿಯಾಗಿರಲು ಕಟ್ಟಿದ ಕಟ್ಟಡವೆಂದು ಸರ್ಕಾರವೂ, ತಾವು ಕೇವಲ ತಂಗುವವರು ಮಾತ್ರವಾದ್ದರಿಂದ ನಿರ್ವಹಣೆಯ ಉಸ್ತುವಾರಿಯನ್ನು ಸರ್ಕಾರವೇ ನೋಡಿಕೊಳ್ಳಲಿ ಎನ್ನುವ ಧೋರಣೆ ತೋರುವ ನಿವಾಸಿಗಳು, ಹೀಗೆ ಹಲವರ ತಾಕಲಾಟದಲ್ಲಿ ಹೊರ ಗೋಡೆಯಿಂದ ಹಾಳಾಗಳಾರಂಭಿಸಿ ಪೂರ್ತಿ ಕಟ್ಟಡವೇ ಪಾಳು ಬೀಳುವ ಹಂತದಲ್ಲಿರುವ ಅಸಂಖ್ಯಾತ ಕಟ್ಟಡಗಳನ್ನು ನಾವು ನಮ್ಮ ಅಕ್ಕಪಕ್ಕದಲ್ಲಿಯೇ ಕಾಣಬಹುದು. ಸರ್ಕಾರಿ ಕಟ್ಟಡಗಳಲ್ಲಿ ತಾನಾಗಿಯೇ ಗೂಡುಕಟ್ಟಿ ನೆಲೆ ನಿಂತು ಸಂತಾನಾಭಿವೃದ್ಧಿ ಮಾಡಿಕೊಳ್ಳುವ ಹಲವು ಹಕ್ಕಿಗಳು, ಈಗೀಗ  ಮಾಲೀಕರು ತಮ್ಮ ಮನೆಯ ಹೊರಗೋಡೆಯಲ್ಲಿ ಹಕ್ಕಿಗಳಿಗಾಗಿಯೇ ನಿರ್ಮಿಸಿರುವ ಗೂಡುಗಳಲ್ಲಿ ಸೇರಿಕೊಂಡು ಚಿಲಿಪಿಲಿಗುಟ್ಟುತ್ತಿವೆ. ******************************* ಶಾಂತಿವಾಸು

ಹೊರಗೋಡೆ Read Post »

ಅನುವಾದ

ಮರ ಕಡಿಯುವಾ ನೋಟ

ಅನುವಾದಿತ ಕವಿತೆ ಮರ ಕಡಿಯುವಾ ನೋಟ ಇಂಗ್ಲೀಷ್ ಮೂಲ: Clifford Dymont ಕನ್ನಡಕ್ಕೆ: ಗಣೇಶ್ ವಿ. ನೂರಾರು ವರುಷಗಳ ಹಿರಿದಾದ ಮರವನ್ನುಕಡಿಯುತಿಹ ಕಟುಕನನು ನೋಡುತ್ತ ನಿಂತೆಥಳಥಳನೆ ಹೊಳೆಯುವ ಆ ಕತ್ತಿಯ ಅಲಗುಮರದ ಮರ್ಮಕ್ಕೆ ನಾಟಿತ್ತು ಕಡಿತದ ರಭಸಕ್ಕೆ ಗಡಗಡ ನಡುಗುವ ಮರದ ಬುಡದಿಂದಚಕ್ಕೆಗಳು ಚಿಮ್ಮಿದವು  ಸಕಲ ದಿಕ್ಕುಗಳಲಿಗಾಳಿಯಲಿ ತಿರುಗಿದವು ಬುಗುರಿಯಾಕಾರದಲಿಮರವು ರೋದಿಸುತಲಿತ್ತು ಸಾವಿನಾ ಸಮಯದಲಿ ಕಟುಕನಾ ಹೊಡೆತಕ್ಕೆ ಮರ ಉರುಳಿ ಬಿದ್ದಿತ್ತುಕೊಡಲಿಯಾ ಆರ್ಭಟಕೆ ಜಯಭೇರಿ ಎಂಬಂತೆನೋಡನೋಡುತಿರುವಂತೆ ಬೆಳೆದಿದ್ದ ಆ ಮರವುಜನಸಾಗರದಾ ನಡುವೆ ಹೆಣವಾಗಿ ಬಿದ್ದಿತ್ತು. ತೂಗಾಡುವಾ ಕತ್ತಿ ಜನರನ್ನು ಸೆಳೆಯುವುದುಮರ ಕಡಿಯುವಾ ನೋಟದ ಚೆಂದವ ನೋಡಲುನೂರಾರು ಜನರು ಬಂದು ಸೇರಿಕೊಳ್ಳುವರುತುಂಬಲಾರದ ನಷ್ಟ ಅರಿಯದಿಹ ಮೂರ್ಖರು ನಮ್ಮ ಹಿರಿಯರು ಬೆಳಸಿ ಉಳಿಸಿದ್ದ ನಾಡಸಿರಿಮುಂದಿನಾ ಪೀಳಿಗೆಗೆ ಹಸಿರಾಗಿ ಉಳಿಯಲಿಇದನರಿಯದಿರೆ ನಾವು ಮೂರ್ಖರಾಗುವೆವುನಮ್ಮ ಸಮಾದಿಯನು ನಾವೇ ಕಟ್ಟಿಕೊಂಡಂತೆ ********************** ಗಣೇಶ್.ವಿ

ಮರ ಕಡಿಯುವಾ ನೋಟ Read Post »

ಕಾವ್ಯಯಾನ

ನೆನಪಾಗುತ್ತಾರೆ

ಕವಿತೆ ನೆನಪಾಗುತ್ತಾರೆ ಡಾ.ಯ.ಮಾ.ಯಾಕೊಳ್ಳಿ ನೆನಪಾಗುತ್ತಾರೆಈ ಇವರುಬಿಸಿಲು ತಾವುಂಡು ಬೆಳದಿಂಗಳಬೆಳೆಯ ಬೆಳೆದವರುಕತ್ತಲೆಯ ಗಾಡಾಂಧಕಾರದೊಳಗೆಯುಬೆಳಕು ಪಂಜನು ಹಿಡಿದುಬೆಳಗ ಹಂಚಿದವರು ಕರುಣೆ ಪ್ರೀತಿ‌ ಮಾತ್ರಇಲ್ಲಿ ಬದುಕ ಉಳಿಸಬಹುದುಎಂದು‌ ಬಲವಾಗಿ ನಂಬಿಅದರ ಬೀಜವನೆ ಬಿತ್ತಿದವರುಅಂಗುಲಿಮಾಲನ ಕ್ರೂರ ಎದೆಯೊಳಗುಪ್ರೀತಿ ಅರಳಿಸಬಹುದೆಂದುತಿಳಿದವರು ವಸ್ತ್ರ ವಡವೆ ಅಧಿಕಾರ ಅಂತಸ್ತುಎಲ್ಲವನು ಧಿಕ್ಕರಿಸಿಮನುಷ್ಯತ್ವಕ್ಕಿಂತ‌ ಮಿಗಿಲಾದುದಿಲ್ಲವೆಂದವರು ನುಡಿಯಹದನ ಕಿಂತ ನಡೆಯ ಬೆಳಕಹರಡಿದವರು ನಮ್ಮ ನಡುವೆ ಎಲ್ಕವೂನಿಂತಂತೆನಿಸಿರುವಾಗಮುಚ್ಚಿದ ಬೀಗವ ತಗೆಯವಕೊಂಡಿಯಂತಿವರುಮತ್ತೆ‌ ಮತ್ತೆ ನೆನಪಾಗುತ್ತಾರೆ ಬಂಧಗಳನು ಒಗ್ಗೂಡಿಸುವಮಂತ್ರದಂಡದಂತೆ!ಮರೆಯದೆ ಹೋಗಬೇಕಿದೆಅಲ್ಲಿಗೆರಾಜ್ಯ ಬಿಟ್ಟವರ,ತುಂಡು‌ಬಟ್ಟೆ ತೊಟ್ಟವರಎಲ್ಲ ನಮ್ಮವನೆಂದವರಅಕ್ಷರದ ಬಲವಿಡಿದುಸಮಾನತೆಯಹೊತ್ತಗೆಯನಿತ್ತವರ ಬಳಿಗೆ…ಮತ್ತೆ‌ಮತ್ತೆ ನೆನಪಾಗುವಅವರದೆ ಆಸರೆಗೆ *************************** ಡಾ.ವೈ.ಎಂ.ಯಾಕೊಳ್ಳಿ

ನೆನಪಾಗುತ್ತಾರೆ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ  ಕಬ್ಬಿಗರ ಅಬ್ಬಿ  ನಿಮಗೆ ತಿಳಿಸಾರು ಗೊತ್ತೇ? ಅದೊಂದು ಕೋಣೆ, ರಸಾವಿಷ್ಕಾರದ ಕೋಣೆ ಅದು!. ಅದನ್ನು ಜನರು ಈ ಕೋಣೆಯನ್ನು ಮನೆ ಅಂತಲೇ ಕರೆಯೋದಕ್ಕೆ, ಬಹುಷಃ ಈ ಕೋಣೆಯ ತಾಯ್ತನವೇ ಕಾರಣ ಅನ್ಸುತ್ತೆ. ಮಗುವಿಗೆ ಅಮ್ಮ ಊಡುವ ಎದೆ ಹಾಲಿನ ಹಾಗೆಯೇ, ಈ ಕೋಣೆ ಮನೆ ಮಂದಿಗೆಲ್ಲ ಉಣಿಸುವುದು ಬದುಕು. ‘ಅಡುಗೆ ಮನೆ’ ಯಲ್ಲಿ ಜೀವಜಲ ಬಿಂದುವಾಗಿ ಹರಿಯುತ್ತೆ. ಹಸಿರು ತರಕಾರಿಗಳು ನೆಲಹಾಸಿನಲ್ಲಿ ತಣ್ಣಗೆ ಕಾಯುತ್ತವೆ. ನೆಲದೊಳಗೆ ಬೇರಿಳಿಸಿ ಪಿಷ್ಟಅಹಾರ ಸಂಗ್ರಹಿಸಿ ಬಲಿತ ಗಡ್ಡೆಗಳೂ ಜತೆಗೆ. ಅಡುಗೆ ಮನೆಯ ಉಗ್ರಾಣಗಳಲ್ಲಿ, ಮನುಷ್ಯ ತಿನ್ನಲೇ ಹುಟ್ಟಿದ್ದೋ ಎಂಬಂತಹಾ ಧಾನ್ಯಗಳು. ಅವುಗಳಲ್ಲಿ ಕೆಲವಕ್ಕೆ ಕಪ್ಪು ಬಣ್ಣ, ಕೆಲವಕ್ಕೆ ಬಿಳಿ. ನಡು ನಡುವಿನ ಗೋಧಿ ಬಣ್ಣದವುಗಳೂ ಪುಡಿಯಾಗಲು ಕಾಯುತ್ತವೆ. ಕಡಲು ಅತ್ತೂ ಅತ್ತೂ ಉಪ್ಪಾದ ನೀರನ್ನು ಸೋಸಿ ಆವಿಯಾಗಿಸಿದಾಗ ಉಳಿದ ಉಪ್ಪುಪ್ಪಾದ ಭಾವ ಪಿಂಗಾಣಿ ಪಾತ್ರೆಯಲ್ಲಿದೆ. ( ಉಳಿದ ಪಾತ್ರೆಯಲ್ಲಿ ಉಪ್ಪು ತುಂಬಿದರೆ, ಅದು ಪಾತ್ರೆಯನ್ನು ತನ್ನ ಸ್ವ-ಭಾವ ದಿಂದ ಪುಡಿಗಟ್ಟುತ್ತೆ). ಬಲಿತ ಕಬ್ಬನ್ನು ಚರ ಚರಾ ಅಂತ ಗಾಣದ ತಿರುಗಾಲಿಗಳ ನಡುವೆ ಕ್ರಷ್ ಮಾಡಿ ನಮಗೆ ಸಿಹಿ ಅನ್ನಿಸುವ ರಸವಾಗಿಸಿ ಮಂದಗಟ್ಟಿಸಿ, ನಮಗಿಷ್ಟವಾದ ಆಕಾರದಲ್ಲಿ ( ಷಟ್ಕೋನವೋ, ದುಂಡಾಕಾರವೋ) ಅದನ್ನು ಅಚ್ಚಾಗಿಸಿದ ಬೆಲ್ಲ ಡಬ್ಬಿಯೊಳಗೆ ಅತಿಥಿಗಳ ಬಾಯಿ ಸಿಹಿ ಮಾಡಲು ಬಂದಿಯಾಗಿವೆ. ಮತ್ತೆ, ಜಿಹ್ವೆಯ ಜೀವೋತ್ಪತ್ತಿಗೆ ಅಗತ್ಯವಾದ ರಾಸ ರಸದ ಖಾರ, ದಿನ ದಿನವೂ ಬದುಕಲು ರುಚಿ ಹೆಚ್ಚಿಸುವ ಹುಣಿಸೇ ಹುಳಿ,  ಪಾಕಕ್ಕೆ ಮುತ್ತಿಡುವ ಒಗ್ಗರಣೆಗೆ ಅಗತ್ಯದ ಸಾಸಿವೆ, ಹೀಗೇ ಹಲವು ಚೀಜ್ ಗಳು ಈ ಮನೆಯನ್ನು ಗ್ಲಾಮರಸ್ ಮಾಡಿವೆ. ಮರೆತೆನಲ್ಲ! ಅಲ್ಲಿ ಒಲೆಯಿದೆ. ಒಲೆಯಲ್ಲಿ ಬೆಂಕಿ, ಬೇಯಿಸುವುದಕ್ಕೆ. ನನ್ನಮ್ಮ ಒಲೆಯ ಪಕ್ಕದಲ್ಲಿ ಸ್ಥಾಪನೆಯಾಗಿ ಬದುಕಿಡೀ,  ಆ ಒಲೆಯ ಕಿಚ್ಚಲ್ಲಿ ಆಹಾರವನ್ನು ಬೇಯಿಸುತ್ತಾ ಪಕ್ವವಾದವಳು. ಅನ್ನ ಬೆಂದಿದೆಯೇ ಎಂದು ಒಂದೇ ಅಗುಳನ್ನು ಒತ್ತಿ ಹೇಳಬಲ್ಲ ತಾಕತ್ತು, ಈ ಪಾಕತ್ತಿನಿಂದಲೇ ಬಂದದ್ದು. ಒಲೆಯ ಮೇಲಿನ ಅಟ್ಟದಲ್ಲಿ, ಶತಮಾನಗಳ ಹೊಗೆ ತಾಗಿದಂತಹ ಮಸಿಹಿಡಿದ ಸಾಲು ಭರಣಿಗಳು. ಅವುಗಳೊಳಗೆ ಶೇಖರಿಸಿ ಇಟ್ಟ ಬಗೆಬಗೆಯ ಉಪ್ಪಿನಕಾಯಿಗಳು. ಮಾವಿನ ಮಿಡಿ ಯೌವನದ ಗೊರಟು ಕಟ್ಟುವ ಮೊದಲೇ ಕೊಯಿದು, ಉಪ್ಪಲ್ಲಿ ಕಾದಿರಿಸಿ ಮುರುಟಿದಾಗ ಅದಕ್ಕೆ ಮೆಣಸಿನ ಪಾಕ ಸೇರಿಸಿ ಶೇಖರಣೆ ಮಾಡುವುದು. ಉಪ್ಪಿನ ಕಾಯಿ ಹಾಕುವಾಗಲೂ ಯೋಚನೆಗಳನ್ನು ಹದಬರಿಸುವಾಗಲೂ, ಮೈಮನಸ್ಸು ಕೊಳೆಯಾಗಬಾರದು. ಉಪ್ಪಿನಕಾಯಿ ಕೊಳೆತು ಹಾಳಾಗಬಾರದಲ್ಲಾ. ಅಡುಗೆ ಮನೆ ಅಮ್ಮನವರ ಗುಡಿ. ಅದರ ನೆಲವೇ ಸ್ತ್ರೀ ಪಾದ ಸ್ಪರ್ಶದ ನೆಲೆ. ಅಲ್ಲಿ ತೊಳೆದ ಅಕ್ಕಿಯ ನೀರಿಗೆ ತಿಳಿ ತಿಳಿಯಾದ ತಿಳಿವಿದೆ. ತುಂಬಿದ ಪಾತ್ರೆಯೊಳಗೆ ಸೌಟು ತಿರುಗಿಸುವಾಗ, ರಸ ಸ್ವರಕ್ಕೆ ಪ್ರಕೃತಿಸಹಜ ಸ್ವರೂಪವಿದೆ . ಒಳಗೆ ಜೋಡಿಸಿಟ್ಟ ಪಾತ್ರೆಗಳ ಸಾಲುಗಳಲ್ಲಿ ಒಳಸೌಂದರ್ಯವಿದೆ. ಒಂದೇ ಅಗುಳನ್ನು ಒತ್ತಿ ಅನ್ನ ಬೆಂದಿದೆಯೇ ಎನುವಷ್ಟು ಅನುಭೂತಿ ಇದೆ. ಅಂತಹ ಜೀವಕಟ್ಟುವ ಕಾಯಕದ ನಡುವೆ ಕವನ ಹುಟ್ಟದೇ?. ವೈದೇಹಿ ಅವರ ಈ ಕವನ ನೋಡೋಣ. **    **    ***  ತಿಳಿದವರೇ… ಹೇಳಿ ಕಾವ್ಯದ  ಬಗ್ಗೆ ತಿಳಿದವರೇ ಹೇಳಿ.  ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು. ತಿಳಿಸಾರು ಎಂದರೆ ಏನೆಂದುಕೊಂಡಿರಿ? ಅದಕ್ಕೂ ಬೇಕು ಒಳಗೊಂದು ಜಲತತ್ವ – ಗಂಧತತ್ವ – ಕುದಿದು ಹದಗೊಂಡ ಸಾರತತ್ವ… ಹೀಗೆ – ಇತ್ತು ಸಾರಿನ ಪಾತ್ರೆ ಮೂಲೆಯಲ್ಲಿ ನಂಗದೆಯೂ ನಂಗದಂತಿದ್ದ ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ ಕಾಯುತ್ತಿದ್ದಂತೆ. ಕಾದರೇನು? ಮಾಂಸದಡುಗೆಯ ಕಿಡಿಮಿಂಚು ವಗ್ಗರಣೆಯ ಬಡಿಸುವ ಝಣ್ ಝಣ್ ನಡಿಗೆಯವರ ಲಘು ನಗೆ ಬಗೆ ವಿನಿಮಯ ಒಡ್ಡೋಲಗದಲ್ಲಿ ತೆಳ್ಳನೆಯ ತಿಳಿಸಾರು ಹಾಗೆಯೇ ಇತ್ತು ಬೆಳಗಿಂದ ನಂಗದೆಯೂ ನಂಗಿದಂತಿದ್ದ ಕೆಂಡದೊಲೆಯ ಮೇಲೆ ಕುದಿಕುದಿದು ಬತ್ತಿ ರಾತ್ರಿಯಾದರೂ ಹಳಸದೆ ಕಾವ್ಯದ ಬಗ್ಗೆ ದೊಡ್ಡಕ್ಕೆ ತಿಳಿದವರೇ ಹೇಳಿ. ಗೊತ್ತೇ ತಿಳಿಸಾರು ನಿಮಗೆ? ಕ್ಷಮಿಸಿ, ಗೊತ್ತಿಲ್ಲ ಕಾವ್ಯ ನನಗೆ †*     ***     *** ‘ತಿಳಿದವರೇ …ಹೇಳಿ’ ಎನ್ನುವ ಈ ಶೀರ್ಷಿಕೆ ಒಂದು ವಿಜ್ಞಾಪನೆ ಮಾತ್ರವೇ?. ಅಥವಾ ಅದು, ಜ್ಞಾನಾಕಾಂಕ್ಷೀ ವಿದ್ಯಾರ್ಥಿಯ ಹಂಬಲವೇ?.ಅಥವಾ, ತಿಳಿದವರಿಗೆ ಹಾಕಿದ ಸವಾಲೇ?. “ಕಾವ್ಯದ  ಬಗ್ಗೆ ತಿಳಿದವರೇ ಹೇಳಿ.  ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು.” ಕಾವ್ಯ ಎನ್ನುವುದು ಕ್ಲಿಷ್ಟ ಅಭಿವ್ಯಕ್ತಿ.  ಅದಕ್ಕೆ ಅದರದ್ದೇ ಆದ ವಿನ್ಯಾಸ, ಅರ್ಥದಿಗಂತ ಎಲ್ಲವೂ ಇದೆ. ಕಾವ್ಯದ ತಿಳಿವು ಅಂದರೆ ಏನು? . ಕಾವ್ಯ ಎಂದರೆ ಮಿದುಳು ಪೆಟ್ಟಿಗೆಯೊಳಗೆ ಬೀಗ ಹಾಕಿಡುವ ವಸ್ತುವೇ?. ತನಗೆ ಕಾವ್ಯ ತಿಳಿದಿದೆ ಎನ್ನುವಾಗ, ಕಾವ್ಯದ ವ್ಯಾಪ್ತಿಯನ್ನು ಘಮಂಡು ಸೀಮಿತಗೊಳಿಸದೇ?. ‘ಕಾವ್ಯ ತಿಳಿದವರೇ ಹೇಳಿ’ ಎನ್ನುವಾಗ ಅಕ್ಷರ ಪದರದ ಕೆಳಗೆ ವಿಡಂಬನೆಯ ಧ್ವನಿ ಕೇಳಿಸುತ್ತೆ. ‘ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು ‘  ಅಂತ ವೈದೇಹಿ ಅವರ ಉಸಿರು, ಉಸುರುತ್ತಿದೆ. ಅಡುಗೆ ಮನೆಯಲ್ಲಿ ತಿಳಿಸಾರು ತಯಾರು ಮಾಡುವ ಸ್ತ್ರೀ ಸಂವೇದನೆಯ ದನಿಯದು. ಅದಷ್ಟೇ ಅಲ್ಲ. ತಿಳಿಸಾರು, ಪ್ರಯೋಗ ಸಿದ್ಧ ಜ್ಞಾನ. ಕಾವ್ಯ ಬೆಳೆದು ನಿಲ್ಲುವುದು ಕಲ್ಪನೆ ಮತ್ತು ಚಿಂತನೆಗಳ ಚಪ್ಪರವಾಗಿ. ಹಲವು ಬಾರಿ ಕಾವ್ಯದ ಅಭಿವ್ಯಕ್ತಿ, ಸಿದ್ಧಾಂತದ ಪ್ರತಿಪಾದನೆ ಅಥವಾ ನಿರಾಕರಣೆಯೂ ಆಗಿರುತ್ತೆ. ಪ್ರಯೋಗ ಸಿದ್ಧ ‘ತಿಳಿಸಾರು’ ವಿನ ಜ್ಞಾನಕ್ಕೂ ಕಾವ್ಯದ ಥಿಯರೆಟಿಕಲ್ ಹೈಪಾಥಿಸಿಸ್ ಗೂ ನಡುವೆ ಪ್ರಶ್ನೋತ್ತರದ ಪ್ರತೀಕ ಮೇಲಿನ ಸಾಲೇ?. ‘ತಿಳಿಸಾರು’ ಆಹಾರ. ಆಹಾರವಿದ್ದರೆ ಮನುಷ್ಯ ಜೀವಿಸಬಲ್ಲ. ಕಾವ್ಯ ಜ್ಞಾನದಿಂದ ಹಸಿವು ತಣಿದೀತೇ?. ದೇಹದ ಪೋಷಣೆ ಮತ್ತು ಅಸ್ತಿತ್ವ ಕವಿತೆಯಿಂದ ಸಾಧ್ಯವಿಲ್ಲ. ಅದಕ್ಕೆ ಆಹಾರ ಬೇಕು. ಹಾಗಿದ್ದರೆ, ಅಸ್ಥಿತ್ವಕ್ಕೆ ಅಗತ್ಯವಾದ ವಾಸ್ತವ ವಸ್ತುಗಳು ಜೀವನದ ಮೊದಲ ಆದ್ಯತೆ ಅನ್ನಬಹುದೇ?. ಇನ್ನೂ ಗಹನವಾಗಿ ಯೋಚಿಸಿದರೆ, ‘ತಿಳಿ ಸಾರು’ ವಿನ ‘ತಿಳಿ’ ಎಂದರೆ ಅರಿವು. ತಿಳಿ ಎಂದರೆ ಸ್ಪಷ್ಟತೆ, ಸ್ಫುಟತೆ ಮತ್ತು ಪಾರದರ್ಶಕತೆ. ಕ್ರಿಯಾಪದವಾದಾಗ, ಈ ಎಲ್ಲವನ್ನೂ ಪಡೆಯುವ ದೃಷ್ಟಿ ಮತ್ತು ಪ್ರಕ್ರಿಯೆ. ಸಾರು ಎಂದರೆ ಘೋಷಣೆ ಅಂತಲೂ ಪ್ರಸಾರ ಮಾಡು ಅಂತಲೂ, ವಿಸ್ತರಿಸು ( spread, ಅಂಗಳಕ್ಕೆ ಸೆಗಣಿ ಸಾರಿಸುವುದು) ಅಂತ ಬಹುಅರ್ಥಗಳಿವೆ. ತಿಳಿಸಾರು ಎಂದರೆ ಅರಿವನ್ನು ಪಸರಿಸು, ಸ್ಪಷ್ಟವಾಗಿ ಸ್ಪುಟವಾಗಿ ವಿಸ್ತರಿಸಿ ಕಾಣು ಅಂತ ಅನ್ವಯಿಸಬಹುದು. ಹಾಗಾದರೆ,  ಕಾವ್ಯ ಎಂಬ ಕ್ಲಿಷ್ಟಕರ, ಪ್ರತಿಮಾತ್ಮಕ ಗೂಡುಕಟ್ಟುವ ಅಭಿವ್ಯಕ್ತಿ ಗೊತ್ತಿಲ್ಲ. ಸರಳ, ಪ್ರಾಯೋಗಿಕ, ಸ್ಪುಟ,ಪಾರದರ್ಶಕ ದೃಷ್ಟಿಯೂ, ಅದನ್ನು ಅನಿರ್ಬಂಧವಾಗಿ ಹರಡಿ ವಿಸ್ತರಿಸಿ ಹಂಚುವುದು ಗೊತ್ತು ಅನ್ನುವ ಅರ್ಥವೇ?. “ತಿಳಿಸಾರು ಎಂದರೆ ಏನೆಂದುಕೊಂಡಿರಿ? ಅದಕ್ಕೂ ಬೇಕು ಒಳಗೊಂದು ಜಲತತ್ವ – ಗಂಧತತ್ವ – ಕುದಿದು ಹದಗೊಂಡ ಸಾರತತ್ವ… ಹೀಗೆ -“ ‘ತಿಳಿಸಾರು’ ವಿಗೆ ಬೇಕು ಜಲತತ್ವ, ಗಂಧ ತತ್ವ ಮತ್ತು ಕುದಿದು ಹದಗೊಂಡ ಸಾರ ತತ್ವ.ಜಲತತ್ವ ,ಗಂಧತತ್ವ ಮತ್ತು ಸಾರತತ್ವ, ಇವು ಮೂರೂ ನೀರು, ಪರಿಮಳ, ಇತರ ವ್ಯಂಜನಗಳನ್ನು ಸರಿ ಮಾತ್ರೆಯಲ್ಲಿ ಬೆರೆಸಿ, ಕುದಿಸಿ ಸಾರವನ್ನು ಸಮತೋಲಿಸುವ ಹದಬರಿಸುವ ಕ್ರಿಯೆ ಎನ್ನುವುದು ಸಾಲುಗಳ ಹೊರತತ್ವ.! ಜಲತತ್ವ ದ ಜಲದ ಮೂಲ ಸ್ವರೂಪ, ಹರಿಯುವುದು. ಅಧಿಕ ಗುರುತ್ವಾಕರ್ಷಣೆಯ ಪೊಟೆನ್ಶಿಯಲ್ ( ಎತ್ತರ) ನಿಂದ ಕಡಿಮೆ ಪೊಟೆನ್ಶಿಯಲ್ ( ತಗ್ಗು) ನತ್ತ ಹರಿಯುತ್ತೆ. ಜ್ಞಾನವೂ ಹಾಗೆಯೇ, ಹೆಚ್ಚು ಅರಿವಿನ ಸ್ಥಾನದಿಂದ ( ಗುರು) ಕಡಿಮೆ ಅರಿವಿನ ‘ಖಾಲಿ’ ( ವಿದ್ಯಾರ್ಥಿ) ಯತ್ತ ಹರಿಯುತ್ತೆ. ಜಲದ ಇನ್ನೊಂದು ಸ್ವಭಾವ, ಅದಕ್ಕೆ ಸ್ಥಿರ ಆಕಾರ ಇಲ್ಲ. ಅದು ತುಂಬಿದ ಪಾತ್ರೆಯ ಆಕಾರ ಅದಕ್ಕೆ. ( ಹಾಗಂತ ಅದು ನಿರಾಕಾರ ಅಲ್ಲ). ಜಲವನ್ನು ನೀವು ಮಥಿಸಬಹುದು ಅನ್ನುವುದು ಇನ್ನೊಂದು ತತ್ವ. ಜಲವನ್ನು ನಿರಂತರ ಕುದಿಸಿದಾಗ ಅದು ಆವಿಯಾಗಿ ತನ್ನ ತನವನ್ನು ಕಳೆದುಕೊಳ್ಳುತ್ತೆ. ಹಾಗಾಗಿ ಅದನ್ನು ಅಗತ್ಯಕ್ಕಿಂತ ಹೆಚ್ಚು ಕುದಿಸಬಾರದು! ಯಾವುದೇ ಗ್ರಹದಲ್ಲಿ ಜೀವಿಗಳು ಇರಬಹುದೇ ಎನ್ನುವ ಪ್ರಶ್ನೆಗೆ ವಿಜ್ಞಾನಿಗಳು ಮೊದಲು ಹುಡುಕುವುದು, ಅಲ್ಲಿ ಜಲವಿದೆಯೇ ಅಂತ. ಹಾಗಾಗಿ ಜಲತತ್ವ ಎನ್ನುವುದು ಜೀವ ತತ್ವ, ಸೃಷ್ಟಿತತ್ವಕ್ಕೂ ಪ್ರತಿಮೆಯೇ. ‘ಗಂಧ ತತ್ವ’ ದ ಗಂಧ ಎಂದರೆ ಪರಿಮಳ. ಪರಿಮಳ ಆಕರ್ಷಣೆಯೂ. ಗಂಧ ಎಂದರೆ ವಾಸನೆ, ಸ್ವಭಾವ. ಕರ್ಮಸಿದ್ಧಾಂತದ ಪ್ರಕಾರ, ವಾಸನೆಯ ಮೂಲದಲ್ಲಿ ಸಂಗ್ರಹಿತವಾದ ಕರ್ಮ, ಇಂದ್ರಿಯಗಳನ್ನು ಪೋಲರೈಸ್ ಮಾಡುವುದರಲ್ಲಿದೆ. ಗಂಧ ಎನ್ನುವುದು ಅನುವಂಶಿಕವೂ ( ಜೆನೆಟಿಕ್) ಆಗಬಗಹುದು. ಗಂಧ ಎನ್ನುವುದು ಗಂಧದ ಕೊರಡು ಅಂತ ತಗೊಂಡರೆ, ಕೊರಡನ್ನು ತಳೆದಷ್ಟೂ ಇನ್ನೂ ಪರಿಮಳ, ಸೂಸುವ ತತ್ವ ಅದು. ನಿರಂತರ ಪೀಡನೆಗೊಳಗಾದರೂ ಸಹಿಸಿ ಪರಿಮಳವನ್ನು ಹರಡುವ ತ್ಯಾಗ ಮತ್ತು ಸಮರ್ಪಣೆಯ ತತ್ವ. ‘ಕುದಿದು ಹದಗೊಂಡ ಸಾರತತ್ವ’  ಷಡ್ರಸಗಳನ್ನು ಅಗತ್ಯ ಮಾತ್ರೆಯಲ್ಲಿ ಬೆರೆಸಿದರೆ ‘ತಿಳಿಸಾರು’ ಆಗಲ್ಲ. ಅದನ್ನು ಕುದಿಸ ಬೇಕು. ಎಲ್ಲಾ ಸಾರಗಳೂ ಹದವಾಗಿ ಬೆರೆಯಬೇಕು. ಸಾರಗಳು ಇಂದ್ರಿಯಗ್ರಾಹ್ಯವಾಗುವಷ್ಟು ಪರಿಷ್ಕರಿಸಲ್ಪಡಬೇಕು. ಹದ ಎನ್ನುವುದು ಸಮತೋಲನ. ಚಲನಶೀಲ ಪ್ರಕ್ರಿಯೆಗಳು ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಸಮತೋಲನಕ್ಕೆ ( equilibrium)  ಬರುತ್ತವೆ. ಆ ಸಮತೋಲನದಲ್ಲಿ ನೋಟಕ್ಕೆ,ಸ್ವಭಾವಕ್ಕೆ ಸ್ಥಿರತೆಯಿರುತ್ತೆ. ಚಂಚಲತೆಯಿಂದ ಸ್ಥಿರತೆಯತ್ತ ದಾರಿಯಲ್ಲಿ ಮಂಥನವಿದೆ. ಇಲ್ಲಿ ‘ತಿಳಿಸಾರು’ ಬದುಕಿಗೆ, ಕಾವ್ಯಕ್ಕೆ, ಕಲೆಗೆ, ಸೃಜನಶೀಲ, ಪ್ರಯೋಗಾತ್ಮಕ ಪ್ರಯತ್ನಕ್ಕೆ  ಹೋಲಿಕೆಯಾದಂತೆ ಅನಿಸುತ್ತೆ. “ಇತ್ತು ಸಾರಿನ ಪಾತ್ರೆ ಮೂಲೆಯಲ್ಲಿ ನಂಗದೆಯೂ ನಂಗದಂತಿದ್ದ ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ ಕಾಯುತ್ತಿದ್ದಂತೆ. ಕಾದರೇನು?” ಮೂಲೆಯಲ್ಲಿ ಸದಾ ಉರಿಯುತ್ತಿರುವ ಬೂದಿ ಮುಚ್ಚಿದ ಒಲೆಯ ಮೇಲೆ, ಈ ತಿಳಿ ಸಾರಿನ ಪಾತ್ರೆ. ಹೊರಗೆ ತಣ್ಣಗಿನ ಬಿಳಿ ಬಿಳಿ ಬೂದಿ. ಒಳಗೆ ಉರಿಯುವ ಕೆಂಡ. ಸಾರು ಕಾಯುತ್ತಿದೆ. ಅಂದರೆ ಬಿಸಿಯಾಗುತ್ತಿದೆ ಅಂತ ಒಂದು ಅರ್ಥವಾದರೆ, ಸಾರು ಏನನ್ನೋ ನಿರೀಕ್ಷೆ ಮಾಡುತ್ತಿದೆ ಅಂತ ಇನ್ನೊಂದು ಅರ್ಥ.  ಈ ಪ್ರಕ್ರಿಯೆಯ ನಂತರ ಏನು? ಎನ್ನುವ ಪ್ರಶ್ನೆ ಕೇಳುವುದು, ಬಹುಷಃ, ಈ ಕಾಯುವಿಕೆ ಮತ್ತು ಕಾಯುವ ವ್ಯಕ್ತಿಯತ್ತ ಸಮಾಜಕ್ಕೆ ಅಸಡ್ಡೆಯಿದೆ ಅಂತಾನೇ?. “ಮಾಂಸದಡುಗೆಯ ಕಿಡಿಮಿಂಚು ವಗ್ಗರಣೆಯ ಬಡಿಸುವ ಝಣ್ ಝಣ್ ನಡಿಗೆಯವರ ಲಘು ನಗೆ ಬಗೆ ವಿನಿಮಯ ಒಡ್ಡೋಲಗದಲ್ಲಿ ತೆಳ್ಳನೆಯ ತಿಳಿಸಾರು ಹಾಗೆಯೇ ಇತ್ತು ಬೆಳಗಿಂದ” ಸಮಾಜದ ದೈಹಿಕ ಜಗತ್ತು ಮಾಂಸದಡುಗೆ, ರುಚಿ, ಆಡಂಬರ,ಅಬ್ಬರ ಇತ್ಯಾದಿಗಳನ್ನು ಸವಿಯುತ್ತೆ. ಕಿಡಿ ಮಿಂಚು ವಗ್ಗರಣೆ ಎಂಬುದು ಅಪೂರ್ವ ಪರಿಕಲ್ಪನೆ. ಪುರುಷ ಪ್ರಧಾನ ಸಮಾಜದ ಮಧುಶಾಲೆಯಲ್ಲಿ, ಝಣ್ ಝಣ್ ನಡಿಗೆಯ ಮಧುಬಾಲೆ ಎಲ್ಲರಿಗೂ ಆಕರ್ಷಣೆ. ( ಹರಿವಂಶರಾಯ್ ಬಚ್ಚನ್ ಅವರ ಮಧುಶಾಲಾ ನೀಳ್ಗವಿತೆಯನ್ನು ಇಲ್ಲಿ ನೆನೆಯಬಹುದು). ಆ ಅಬ್ಬರದಲ್ಲಿ ನಮ್ಮ ಅಡುಗೆ ಮನೆಯಲ್ಲಿ ದಿನರಾತ್ರೆ ಕಾದು, ಬೆಂದ ತೆಳುದೇಹದ ( ಹೊಳಪು ದೀಪ್ತಿಯ) ಅಮ್ಮ ಮತ್ತು, ಆಕೆ ಕುದಿಸಿದ ತಿಳಿಸಾರು ಬೆಳಗಿನಿಂದ ಕಾಯುತ್ತಿದೆ. ಹಾಗೆಯೇ ಇತ್ತು ಬೆಳಗಿನಿಂದ ಎಂದರೆ, ಆರಂಭದಿಂದಲೂ ರುಚಿಕೆಡದ ಬದುಕು. ಇಲ್ಲಿ ತಿಳಿಸಾರು ಮತ್ತು ಮನೆಮಂದಿಗಳ ಬದುಕು ಕಟ್ಟುವ ಸ್ತ್ರೀಯರ ನಡುವೆ ಸಾಮ್ಯತೆ ಕಾಣಿಸುತ್ತೆ. “ನಂಗದೆಯೂ ನಂಗಿದಂತಿದ್ದ ಕೆಂಡದೊಲೆಯ ಮೇಲೆ ಕುದಿಕುದಿದು ಬತ್ತಿ ರಾತ್ರಿಯಾದರೂ ಹಳಸದೆ” ದಿನವಿಡೀ ಕುದಿ ಕುದಿದು ಬತ್ತಿದೆ ತಿಳಿಸಾರು, ನಂದದೆಯೂ ನಂದಿದಂತಿದ್ದ ಕೆಂಡದೊಲೆಯ ಮೇಲೆ, ಮತ್ತು ಅದರ ರುಚಿ ಉಳಿಸಿಕೊಂಡಿದೆ. ಅಡುಗೆಗುಡಿಯಮ್ಮನೂ ಬದುಕಿನುದ್ದಕ್ಕೂ ( ಬೆಳಗಿನಿಂದ ರಾತ್ರಿತನಕ) ಕುದಿ ಕುದಿದು ದೇಹ ಬತ್ತಿದರೂ ಸ್ತ್ರೀ ಸಹಜ ಸಕಲ ಗುಣಗಳನ್ನು ಉಳಿಸಿಕೊಂಡು ಸ್ವಲ್ಪವೂ ಹಳಸದೇ ( ಹೊಸತನವನ್ನು ಕಾಪಿಟ್ಟು),  ಹೊರಗೆ ನಂದಿದಂತೆ ಕಂಡರೂ  ಹೃದಯದೊಳಗೆ ಸದಾ ಬೆಳಗುವ ಮಮತೆಯ ನಂದಾದೀಪ ಬೆಳಗುತ್ತಾ  ಅಸ್ತಿತ್ವ ಉಳಿಸಿಕೊಳ್ಳುತ್ತಾರೆ. “ಕಾವ್ಯದ ಬಗ್ಗೆ ದೊಡ್ಡಕ್ಕೆ

Read Post »

ಕಥಾಗುಚ್ಛ

ಯಾರು ಹೊಣೆ ?

ಕಥೆ ಯಾರು ಹೊಣೆ ? ಎಂ.ಆರ್.ಅನಸೂಯ ಅಮ್ಮಾ ,ಅಮ್ಮಾ’ ಎಂದು ಚಂದ್ರಮ್ಮ ಬಾಗಿಲು ತಟ್ಟುತ್ತಾ ಕೂಗಿದಂತಾಯಿತು . ಟಿ.ವಿ ನೋಡುತ್ತ ಕೂತಿದ್ದ ಸುಮಿತ್ರ  ಗಡಿಯಾರದ ಕಡೆ ನೋಡಿದಳು. ಆಗಲೇ ರಾತ್ರಿ ಒಂಭತ್ತು  ಗಂಟೆಯಾಗಿತ್ತು. ಈಗ್ಯಾಕೆ ಬಂದಳಪ್ಪಾ ಎಂದುಕೊಳ್ಳುತ್ತಾ ಸುಮಿತ್ರ ಬಾಗಿಲು ತೆಗೆದು “ಏನು ಚಂದ್ರಮ್ಮ ಇಷ್ಟೊತ್ನಲ್ಲಿ ಯಾಕೆ  ಬಂದೆ’ ಎಂದು ಬಾಗಿಲತ್ರನೇ ನಿಂತು ಕೇಳಿದಳು. “ಅಮ್ಮಾ, ನಡಿರಮ್ಮ ಒಳಗೆ ಸ್ವಲ್ಪ ಮಾತಾಡ್ಬೇಕು”ಎನ್ನುತ್ತ   ಚಂದ್ರಮ್ಮ ಒಳಗೆ ಬಂದು ಕುಳಿತಳು. ಸುಮಿತ್ರ ಸೋಫದ ಮೇಲೆ ಕುಳಿತು”ಏನ್ಸಮಾಚಾರ ಚಂದ್ರಮ್ಮ” ಎಂದರು “ನೋಡ್ರಮ್ಮ ನಮ್ಮ ಹುಡುಗಿ ಗೀತ ಎಂಥ ಹಲ್ಕಾ ಕೆಲಸ  ಮಾಡ್ಕಂಡು ಕುಂತವಳೆ. ಮೂರೂ ಬಿಟ್ಟವಳು ” ಎಂದು ಅಳಲು ಶುರು ಮಾಡಿದಾಗ “ಅದೇನು ಸರ್ಯಾಗಿ ಹೇಳು ಚಂದ್ರಮ್ಮ” “ಏನೇಳನ್ರಮ್ಮ ನಂ ಹುಡುಗಿ ಗೀತ ಬಸ್ರಾಗಿ ಕುಂತವಳೆ.  ಸರೀಕರೆದ್ರುಗೆ ತಲೆಯೆತ್ಕಂಡು ಓಡಾಡ್ದಂಗೆ ಮಾಡ್ಬಿಟ್ಲು. ಎಲ್ಲನ ಹೋಗಿ ಸತ್ರೆ ಸಾಕು ಅನ್ಸು ಬಿಟ್ಟೈತೆ ಏನ್ಮಾಡದೊ ಒಂದು ಗೊತ್ತಾಗಕಿಲ್ಲ”ಎಂದು ಅಳುತ್ತಿದ್ದಳು ಆಗ ಸುಮಿತ್ರಾ “ನಿನ್ನದೇ ತಪ್ಪುಬೆಂಗಳೂರಿಗೆ  ನೀನ್ಯಾಕೆ ಕಳಿಸ್ದೆ .ಇಲ್ಲೇ ಮನೆ ಕೆಲಸ ಸಿಕ್ತಿರಲಿಲ್ವೆ.ಯಾರಾದ್ರೂನು  ವಯಸ್ಸಿಗೆ ಬಂದಿರ ಹುಡುಗಿನ ಬೇರೆ ಊರಿಗೆ ಕಳಿಸ್ತಾರ ಈಗ ಅತ್ರೆ ಏನು ಬಂತು”ಎಂದು ಒರಟಾಗಿ ಹೇಳಿದಳು.  “ಇಲ್ಲೆ ಇರಂಗಿದ್ರೆ ನಾನ್ಯಾಕ್ರಮ್ಮ ಬೆಂಗಳೂರಿಗೆ ಕಳಿಸ್ತಿದ್ದೆ”  “ಇಲ್ಲಿರಕಾಗ್ದೆ ಇರೋ ಅಂಥಾದ್ದು ಏನಾಗಿತ್ತು” “ಏನು ಹೇಳನ್ರಮ್ಮ.ನನ್ನ ಹಣೆಬರಾನೇ  ಸರ್ಯಾಗಿಲ್ಲ. ನನ್ನ ಗಂಡ ಕುಡ್ದೂ ಕುಡ್ದೂ ಸತ್ತ. ಆ ನನ್ನ ಎರಡ್ನೆ ಮಗಾನು  ಅವರಪ್ಪನಂಗೆ ಕುಡಿಯ ಚಟಕ್ಕೆ ಬಿದ್ದು ಹಾಳಾದ.ದಿನಾ ಕುಡ್ಕಂಡು ಬಂದು ಆ ಹುಡುಗೀನ ಬಾಯಿಗೆ ಬಂದಂಗೆ ಬೈದು ಹೊಡಿಯಕ್ಕೆ ಹೋಗ್ತಿದ್ದ. ಈ ಹುಡುಗಿ ಹೆದರ್ಕಂಡು ಪಕ್ಕದ ಮನೆಗೆ ಓಡೋಗದು. ದಿನಾ ಈ ರಗಳೆ ನೋಡಕ್ಕೆ ಆಗ್ತಿರಲಿಲ್ಲ. ಬೆಂಗ್ಳೂರನಗಿರ ನನ್ನ ಎರಡ್ನೆ ಮಗಳು ಮನೆ ಕೆಲ್ಸ ಒಂದು ನೋಡಿದೀನಿ ಕಳ್ಸು ಅಂದ್ಲು. ಅದಕ್ಕೆ ಕಳಿಸ್ದೆ ಕಣ್ರಮ್ಮ.ಇನ್ನೇನು ಮಾಡ್ಲಿ ನೀವೇ ಹೇಳ್ರಮ್ಮ” ಎಂದಾಗ ಸುಮಿತ್ರಾಳಲ್ಲೂ ಉತ್ತರವಿರಲಿಲ್ಲ. ನಮ್ಮ ಘನ ಸರ್ಕಾರ ಘೋಷಿಸಿರುವ ಭೇಟಿ ಬಚಾವೋ ಯೋಜನೆ ನೆನಪಿಗೆ ಬಂತು. ಅ‌ಸಹಾಯಕಳಾದ ಚಂದ್ರಮ್ಮನಿಗೆ ಬೇರೆ ದಾರಿ ಇರಲಿಲ್ಲ ಅನಿಸಿತು. ಆಗ ಸುಮಿತ್ರಾಳು ಸಹಾ ಮೌನಕ್ಕೆ ಶರಣಾದಳು.ಸ್ವಲ್ಪ ಹೊತ್ತಿನ ನಂತರ ಚಂದ್ರಮ್ಮ ಮೆಲ್ಲಗೆ “ನನ್ನ ದೊಡ್ಮಗಳು ಡಾಕ್ಟರತ್ರ ಕರ್ಕೊಂಡು ಹೋಗ್ತವಳೆ. ಒಂದೆರಡು ಸಾವ್ರ ಕೊಡ್ರಮ್ಮ. ನನ್ನ ಮಾನ ಮರ್ಯಾದೆ ಹೋಗುತ್ತೆ. ಈಗ್ಲೆ ಕರ್ಕೊಂಡು ಹೋಗ್ಬೇಕು” ಎಂದು ಹೇಳಿ ಅತ್ತಳು.ಸುಮಿತ್ರ ದುಡ್ಡು ಕೊಟ್ಟ ತಕ್ಷಣವೇ “ಬರ್ತಿನಮ್ಮ ನಿಮ್ಮ ಉಪಕಾರ ಮರೆಯಂಗಿಲ್ಲ” ಎನ್ನುತ್ತಾ ಹೊರಟಳು ಚಂದ್ರಮ್ಮ ಸುಮಿತ್ರಾಳ ಮನೆಕೆಲಸಕ್ಕೆ ಸೇರಿ ಹದಿನೈದು ವರ್ಷಗಳ ಮೇಲಾಗಿತ್ತು.ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ಚಂದ್ರಮ್ಮ ಸುಮಿತ್ರನ ಮನಸ್ಸನ್ನುಗೆದ್ದಿದ್ದಳು ಯಾವ ಕೆಲಸವನ್ನು ಹೇಳಿದರೂ ಇಲ್ಲ ಎನ್ನದೆ ಮಾಡುವ ಚಂದ್ರಮ್ಮನ ಮಾತು ಕಡಿಮೆ.ಸುಮಿತ್ರಳು ಸಹ ಅವಳೆಲ್ಲ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಳು. ಇವರ ಆಪ್ತತೆಯನ್ನು ಕಂಡ ಸುಮಿತ್ರನ ಮಗಳು “ನಿನ್ನ ಆಪ್ತ ಸಖಿ ಹೇಗಿದ್ದಾಳೆ” ಎಂದು ತಮಾಷೆ ಮಾಡುತ್ತಾಳೆ. ಇಂತಹ ಚಂದ್ರಮ್ಮನಿಗೆ ಐದು ಜನ ಮಕ್ಕಳಿದ್ದರು. ಮೂರುಹೆಣ್ಣು ಎರಡು ಗಂಡು. ಗಂಡ ಕುಡಿತದ ಚಟಕ್ಕೆ ಬಿದ್ದು ಆರೋಗ್ಯ ಕೆಡಿಸಿಕೊಂಡು ತೀರಿಕೊಂಡಿದ್ದ. ಹಿರಿಮಗ ಮದುವೆ ಆದ ಮೇಲೆ ಬೇರೆ ಮನೆ ಮಾಡಿದ್ದ. ದೊಡ್ಡ ಮಗಳನ್ನು ತಮ್ಮನಿಗೆ ಕೊಟ್ಟು ಮದುವೆ ಮಾಡಿದ್ದಳು. ಬಸ್ ಅಪಘಾತವೊಂದರಲ್ಲಿ ತಮ್ಮ ಸತ್ತ ಮೇಲೆ ಮಗಳು ಪುಟ್ಟ ಹೆಣ್ಣುಮಗುವನ್ನು ಕರೆದುಕೊಂಡು ತವರು ಮನೆ ಸೇರಿದ್ದಳು. ಕೂಲಿ ಮಾಡಿ ದುಡಿದು ತರುತ್ತಿದ್ದರಿಂದ ಯಾರಿಗೂ ಭಾರವಾಗಿರಲಿಲ್ಲ. ಚಂದ್ರಮ್ಮನ ಎರಡನೆ ಮಗನೂ ಸಹಾ ಅವರಪ್ಪನಂತೆ ಕುಡಿತಕ್ಕೆ ದಾಸನಾಗಿದ್ದ. ಅವನು ದುಡಿದದ್ದೆಲ್ಲ ಅವನ ಕುಡಿತಕ್ಕೇ ಸರಿ ಹೋಗುತ್ತಿತ್ತು. ಎರಡನೆ ಮಗಳು ಮತ್ತು ಅವಳ ಗಂಡ ಇಬ್ಬರೂ ಬೆಂಗಳೂರು ಸೇರಿದ್ದರು. ಇನ್ನು ಮೂರನೆ ಮಗಳು ಗೀತ ಹತ್ತನೆ ತರಗತಿಯ ತನಕ ಓದಿ ಫೇಲಾಗಿ ಶಾಲೆ ಬಿಟ್ಟಿದ್ದಳು. ಚಂದ್ರಮ್ಮಮೂರು ಮನೆಗಳ ಮನೆ ಕೆಲಸ ಮಾಡಿದರೆ, ಗೀತ ಎಲ್ಲೂ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು ಅಡುಗೆ ಮಾಡ್ಕೊಂಡು ಅಕ್ಕನ ಮಗಳನ್ನ  ನೋಡಿಕೊಂಡಿದ್ದಳು.ಒಟ್ಟಾರೆ ಮನೆಯ ಹೆಣ್ಣುಮಕ್ಕಳೇ ಸಂಸಾರದ ಆಧಾರದ ಸ್ತಂಭವಾಗಿದ್ದರು. ಚಂದ್ರಮ್ಮನಿಗೆ ಹುಷಾರಿಲ್ಲದಾಗ ಮನೆ ಕೆಲಸ ಮಾಡಿ ಕೊಡುತ್ತಿದ್ದ ಗೀತ ಲಕ್ಷಣವಾಗಿದ್ದಳು.ಕುಡುಕನಾಗಿದ್ದ ಎರಡನೆ ಅಣ್ಣನ ಕಾಟ ತಡೆಯಲಾಗದೆ ಗೀತ ಬೆಂಗಳೂರಿನಲ್ಲಿದ್ದ ಅಕ್ಕನ ಮನೆಗೆ  ಬಂದು ಅವಳ ಮನೆ ಹತ್ತಿರವೇ ಇದ್ದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆಯಲ್ಲಿದ್ದ ಮಗುವನ್ನು ನೋಡಿ ಕೊಳ್ಳ ಬೇಕಾಗಿತ್ತು. ಮನೆಯಲ್ಲಿದ್ದಂಥ ಮಗುವಿನ ಅಜ್ಜಿಗೆ ಸಹಾಯಕಿಯಾಗಿ ಇರಬೇಕಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಹೋದರೆ ಸಂಜೆ ಎಂಟು ಗಂಟೆಗೆ ವಾಪಸಾಗುತ್ತಿದ್ದಳು ಊಟ ತಿಂಡಿ ಎಲ್ಲಾ ಅಲ್ಲೇ ಆಗುತ್ತಿದ್ದರಿಂದ ಅಕ್ಕನಿಗೂ ಸಹ ಭಾರವಾಗಿರಲಿಲ್ಲ. ಕೈಗೆ ನಾಲ್ಕು ಸಾವಿರ ಸಿಗುತ್ತಿತ್ತು. ಪ್ರತಿ ಭಾನುವಾರ ರಜೆ ಸಿಗುತ್ತಿತ್ತು. ಮನೆಯಲ್ಲಿನ ಇತರ ಕೆಲಸಗಳನ್ನು ಬೇರೆಯವರು ಮಾಡಿ ಕೊಡುತ್ತಿದ್ದರಿಂದ ಮಗು ನೋಡಿಕೊಳ್ಳುವ ಕೆಲಸ ಅಷ್ಟೇ. ಇಷ್ಟೇ ಆಗಿದ್ದರೆ ಚಂದ್ರಮ್ಮ ಇಷ್ಟೊತ್ನಲ್ಲಿ ಸುಮಿತ್ರನ ಮನೆಗೆ  ಬಂದು ಹೀಗೆ ಗೋಳಾಡುವ ಪ್ರಮೇಯವೇ ಇರುತ್ತಿರಲಿಲ್ಲ.ಗೀತಳ ಅಕ್ಕ ಗಾರ್ಮೆಂಟ್ ಕೆಲ್ಸಕ್ಕೆ ಹೋದ್ರೆ ಅವಳ ಗಂಡ ಹೋಟೆಲ್ ಕೆಲ್ಸಕ್ಕೆ ಹೋಗುತ್ತಿದ್ದ. ಅವನ ಜೊತೆ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದನು ಅವನೊಡನೆ ಗೀತಳ ಸ್ನೇಹವು ಬೆಳೆದು ಅವರಿಬ್ಬರೂ  ಪ್ರೇಮಿಗಳಾಗುವ ಹಂತಕ್ಕೆ ಬಂದಿತ್ತು.ಅವಳ ಅಕ್ಕನಿಗೆ  ನಾವಿಬ್ಬರೂ ಮದುವೆಯಾಗುತ್ತೇವೆ ಎಂದು ಹೇಳಿದ್ದಳು  ಅವಳ ಅಕ್ಕ ಸ್ವಲ್ಪ ಸಲಿಗೆ ಬಿಟ್ಟಿದ್ದೇ ಈಗ ತಪ್ಪಾಗಿತ್ತು. ಪ್ರತಿ ಭಾನುವಾರ ಅವನ ಜತೆ ಸಿನಿಮಾ ಹೋಟೆಲ್ ಗೆ ಹೋಗಿ ಬರುತ್ತಿದ್ದಳು. ಅವಳ ಅಕ್ಕನ ಕಣ್ಣಿಗೆ ಗೀತಳ ಹೊಟ್ಟೆಯು ಸ್ವಲ್ಪ ದಪ್ಪಗಾದಂತೆ ಎನಿಸಿ ಅನುಮಾನದಿಂದ ಕೇಳಿದಾಗ ಗೀತ ನಿಜವನ್ನು ಬಾಯ್ಬಿಟ್ಟಳು.”ಏನೇ ಇದೆಲ್ಲಾ ಮದ್ವೆಗೆ ಮುಂಚೆನೆ” ಎಂದು ಕೇಳಿದರೆ “ನಾವಿಬ್ರು, ದೇವಸ್ಥಾನದಗೆ  ಮದ್ವೆ ಆಗಿದೀವಿ.”ಎಂದು ಹೇಳಿ ತೆಗೆದಿಟ್ಟಿದ್ದ ಕರಿಮಣಿ ಸರವನ್ನು ಹಾಕಿಕೊಂಡಳು.ಇದನ್ನು ಕೇಳಿದ ಅವಳಕ್ಕನ ಗಂಡ ಸಿಟ್ಟಾಗಿ “ನೀನು ಇಲ್ಲಿರಬೇಡ ಮೊದ್ಲು ಊರಿಗೆ ಹೊರಡು” ಎಂದು ಕೂಗಾಡಿದನು ಮಾರನೆ ದಿನವೇ ಅವಳ ಅಕ್ಕ ಗೀತ ಕೆಲಸ ಮಾಡುತ್ತಿದ್ದ ಮನೆಗೆ ಅವಳ  ಜೊತೆಗೆ ಹೋಗಿ ಅವರಲ್ಲೇ ಬಿಟ್ಟಿದ್ದ ಸಂಬಳದ ದುಡ್ಡು ಸುಮಾರು ನಲ್ವತ್ತು ಸಾವಿರದಷ್ಟಿದ್ದ ದುಡ್ಡು ಕೇಳಿ ತರಲು  ಹೋದಾಗ ಗೊತ್ತಾಯ್ತು ಆಗಲೇ ಐದು ಸಾವಿರವನ್ನು ಗೀತ  ಖರ್ಚು ಮಾಡಿದ್ದಳು. ಸ್ವಲ್ಪ ದಿನ ಊರಿಗೆ ಹೋಗಿ ಬರ್ತಳೆ. ನಮ್ಮಮ್ಮಂಗೆ ಹುಷಾರಿಲ್ಲ ಎಂದು ಮನೆಕೆಲಸದ ಯಜಮಾನಿಗೆ ಸುಳ್ಳು ಹೇಳಿ ಇಬ್ರು ಬಂದರು. ಗಂಡನ ಮಾತಿನಂತೆ ಅವಳ ಅಕ್ಕನೂ ಗೀತನ ಜತೆಗೆ ಊರಿಗೆ ಬಂದಿದ್ದಳು. ಚಂದ್ರಮ್ಮನಿಗೆ ಇರೋ ವಿಷ್ಯಾನೆಲ್ಲಾ ತಿಳಿಸಿ ಗಾರ್ಮೆಂಟ್ನವರು ರಜಾ ಕೊಡಲ್ಲ ಎಂದು ಹೇಳಿ ಹೊರಟೆ ಬಿಟ್ಟಿದ್ದಳು. ಬೆಳಿಗ್ಗೆ ಮನೆ ಕೆಲ್ಸಕ್ಕೆ ಬಂದ ಚಂದ್ರಮ್ಮ ಏನೂ ಮಾತಾಡದೆ ಮೌನವಾಗಿದ್ದಳು. ಸುಮಿತ್ರಾ ಟೀ ಕೊಟ್ಟು ಕೇಳಿದ್ರು”ಏನಂದ್ರು ಡಾಕ್ಟರ್”. ಅಬಾಷನ್ ಮಾಡಕ್ಕಾಗಲ್ಲವಂತೆ. ಆಗ್ಲೆ ನಾಕ್ ತಿಂಗಳು ತುಂಬೈತಂತೆ “ಎಂದಳು ಸೋತು ಸುಣ್ಣವಾದ ಧ್ವನಿಯಲ್ಲಿ  ನಾಲ್ಕು ತಿಂಗಳಾದ್ರೂ ನಿಮಗೆ ಅಷ್ಟೂ ಗೊತ್ತಾಗಲಿಲ್ವೆ ” ಸ್ವಲ್ಪ ಒರಟಾಗೇ ಕೇಳಿದಳು ಸುಮಿತ್ರ.”ಆಗೆಲ್ಲ ಎನೇನೊ ಹೇಳ್ಕಂಡು ಅವ್ರ ಅಕ್ಕನ್ನ ಏಮಾರಿಸಿ ಬಿಟ್ಟವಳೆ.ಮೂರೂ ಬಿಟ್ಟವಳು ಅವರಕ್ಕನಿಗೆ ಗೊತ್ತಾಗಿರದೆ ಈಗ. ಗೊತ್ತಾದ ತಕ್ಷಣವೇ ಇಲ್ಲಿಗೆ ಕರ್ಕೊಂಡು ಬಂದವಳೆ” ಅದರ ಬಗ್ಗೆ ಮಾತಾಡಕ್ಕೆ ಅವಳಿಗೆ ಇಷ್ಟವಿಲ್ಲವೆಂದರಿತ ಸುಮಿತ್ರಾನೂ ಸುಮ್ಮನಾದಳು. ಹೋಗುವಾಗ “ಒಂದು ವಾರ ಕೆಲ್ಸಕ್ಕೆ ಬರಲ್ಲಮ್ಮ.ನನ್ನ ದೊಡ್ಡ ಮಗಳ್ನ ಕಳಿಸ್ತಿನಿ”ಎಂದು ಹೇಳಿ ಹೋದಳು. ಮಧ್ಯಾಹ್ನ ಒಂದು ಗಂಟೆಗೆ ಚಂದ್ರಮ್ಮನು ಅವಳ ಎರಡನೆ ಮಗಳು ಬಂದರು.ಅವಳ ಮಗಳು ತಾನು ತಂದಿದ್ದ ಲಗೇಜ್ ಬ್ಯಾಗಿನಿಂದ ಒಂದು ಕೆಂಪು ಪ್ಲಾಸ್ಟಿಕ್ ಕವರ್ ತೆಗೆದು ಅವರಮ್ಮನ ಕೈಗೆ ಕೊಟ್ಟಳು ಚಂದ್ರಮ್ಮಅದನ್ನು ಸುಮಿತ್ರಾ ಕಡೆ ಕೊಡುತ್ತಾ” ಇದ್ರಗೆ ಮುವತ್ತು ಸಾವಿರ ಐತ್ರಮ್ಮ.ನಾನು ಕೇಳಗಂಟ ಇದು ನಿಮ್ಮತ್ರನೇ ಇರಲಿ.ನನ್ ಮಗನ ಕಣ್ಣೀಗೇನಾರ ಬಿದ್ರೆ ಎಗರಿಸಬಿಡ್ತನೆ”ಎಂದಳು. ಆಗ ಸುಮಿತ್ರಾ “ಬೇಡಬೇಡ ಚಂದ್ರಮ್ಮ .ಬ್ಯಾಂಕ್ನಲ್ಲಿಡು”ಎಂದಾಗ ಅವಳ ಮಗಳು “ನಮ್ಮಮ್ಮನ ಹೆಸರಿನಗ ಐತಂತ ಅವ್ನಿಗೆ ಗೊತ್ತಾದರೆ ನಮ್ಮಮ್ಮನ ಪ್ರಾಣ ಹಿಂಡಿ ತಗಂಡು ಬಿಡ್ತನೆ. ಅದಕ್ಕೆ ಒಂದು ಹದಿನೈದು ದಿನ ಕಳೆದ ಮೇಲೆ ಗೀತನ ಅಕೌಂಟ್ ಗೆ ಹಾಕ್ಕಂತಳೆ ಅಲ್ಲಿತನಕ ನಿಮ್ಮತ್ರನೆ ಇರಲಿ” ಎಂದಾಗ ಸುಮಿತ್ರಾ ದುಡ್ಡನ್ನು ಎಣಿಸಿ ಕೊಂಡು “ಹದಿನೈದು ದಿನ ಆದ ಮೇಲೆ ತಗೊಂಡು ಹೋಗಿ ಬ್ಯಾಂಕಲ್ಲಿ ಇಡಬೇಕು” ಎಂದು ತಾಕೀತು ಮಾಡಿದರು.ನಂತರ ನೆನ್ನೆ ರಾತ್ರಿ ತಾನೆ ತಗೊಂಡಿದ್ದ ಎರಡು ಸಾವಿರ ವಾಪಸ್ ಕೊಟ್ಟರು.ಒಂದು ವಾರ ಕಳೆದ ಮೇಲೆ ಚಂದ್ರಮ್ಮ ಬಂದಳು. ನೋಡಿದರೆ ಅದೇ ಚಿಂತೆಯಲ್ಲಿ ಸೊರಗಿದಾಳೆ ಎನಿಸಿತು. ಕೆಲಸವೆಲ್ಲ ಮುಗಿಸಿದ ಮೇಲೆ ಸುಮಿತ್ರಾ”ಏನು ಆ ಹುಡುಗನ್ನ ಸುಮ್ನೆ ಬಿಟ್ಬಿಟ್ರಾ”ಎಂದು ಕೇಳಿದಳು.”ಅದೆಂಗರಮ್ಮ ಸುಮ್ತಿರಕಾಗುತ್ತೆ. ತಂಗಿ ಗಂಡ,ಚಂದ್ರಮ್ಮನ ಮಗಮತ್ತು ಅಳಿಯ ಎಲ್ಲ ಹೋಗಿ ಜೋರು ಮಾಡಿದರಂತೆ.”ಆಗ ನಾವಿಬ್ರೂ ಒಪ್ಪಿನೇ ಮದ್ವೆ ಆಗಿರೋದು.ದೇವಸ್ಥಾನದಲ್ಲಿ ಮದ್ವೆ ಮಾಡ್ಕಂಡಿದೀವಿ.ಈಗಲೇ ಮನೆ ಮಾಡಕ್ಕೆ ನನ್ನತ್ರ ದುಡ್ಡಿಲ್ಲ. ವರ್ಷ ಕಳೆದ್ಮೇಲೆ ನಾನೇ ಬಂದು ಕರ್ಕೊಂಡು ಹೋಗ್ತೀನಿ. ಈಗ ನನ್ನ ಹತ್ರ ಇರೋದು ಹತ್ತು ಸಾವಿರ ಅಷ್ಟೆ”ಎಂದು ಹೇಳಿ ದುಡ್ಡು ಕೊಟ್ಟು ಕಳಿಸಿದ್ದ. ನಮ್ಮ ಹುಡುಗಿ ಹಳ್ಳಕ್ಕೆ ಬಿದ್ದೈತೆ.ಇಂಥ ಪರಿಸ್ಥಿತಿಯಾಗೆ ಇನ್ನೇನು ಮಾಡಾದು ಅಂತ ಬಾಯ್ಮುಚ್ಚಿಕೊಂಡು ಬಂದವ್ರೆ.ಅವಳ ಹಣೆಬರನ ನಾವು ತಿದ್ದಕ್ಕಾಗುತ್ತೇನು. ಮಾಡಿದ್ದುಣ್ಣೋ ಮಹರಾಯ. ಉಪ್ಪುತಿಂದ ಮ್ಯಾಲೆ ನೀರು ಕುಡಿಬೇಕು ಚಂದ್ರಮ್ಮನ ತಂಗಿ ಗಂಡ ಬಂದು ಚಂದ್ರಮ್ಮನ ಎರಡ್ನೆ ಮಗನಿಗೆ “ಆ ಹುಡುಗಿ ಸುದ್ದಿಗೆ ಹೋಗ್ಬೇಡಪ್ಪ ಹುಷಾರ್ ಪ್ರಾಣಗೀಣ ಕಳ್ಕೊಂಡ್ರೆ ಏನ್ಮಾಡಾದು.ಆಗಬಾರದಾಗಿತ್ತು ಆಗೋಗೈತೆ. ಅವಳ ಹಣೆಬರ ಇದ್ದಂಗಾಗುತ್ತೆ. ನಮ್ಮ ಕೈ ಮೀರೈತೆ”ಅಂತ ಹೇಳಿ ಹೋದ. ನಮ್ಮ ಅಕ್ಕಪಕ್ಕದ ಮನೆ ಜನಗಳಿಗೆಲ್ಲ ಗೊತ್ತಾಗಿ ಬಿಟ್ಟೈತೆ. ಆಡ್ಕಂಡು ನಗೋವ್ರ ಮುಂದೆನೇ ಎಡವಿ ಬಿದ್ದಂಗಾಯ್ತು. ಜನಕ್ಕೆ ಆಡ್ಕಳ್ಳ ಕತೆ ಆಗೋಯ್ತು ನಮ್ಮನೆ ಬದುಕು.ನೆಂಟರೆಲ್ಲ ಆಡಿಕ್ಯಂಡು ನಗ್ತಾವರೆ.ನಮ್ಮತ್ರಯಾರೂ ಮಾತಾಡಲ್ಲ.ಎಲ್ಲಾದ್ರು ತಲೆ ಮರೆಸ್ಕಂಡು ಹೋಗಿ ನೇಣಾಕ್ಕಂಡು ಸಾಯಂಗಾಗೈತೆ ನಾನ್ ತಲೆಎತ್ಕಂಡ್  ಒಡಾಡಕ್ಕಾಗದಂಗೆ ಮಾಡ್ಬಿಟ್ಟಳು” ಅಳುತ್ತಾ ಕಣ್ಣೀರು ಹಾಕಿದಳು.ಮತ್ತೆ ಮತ್ತೆ ಅದೇ ವಿಶ್ಯಾ ಕೆದಕಿ ಕೇಳುತ್ತಾ ಬೇಜಾರು ಮಾಡೋದು ಬೇಡವೆಂದು  ಸುಮಿತ್ರಾ ಏನೂ ಕೇಳಲಿಕ್ಕೆ ಹೋಗಲಿಲ್ಲ. ಒಂದಿಪ್ಪತ್ತು ದಿನಗಳಾಗಿರಬಹುದು. ಒಂದು ದಿನ “ನಮ್ಮ ದೊಡ್ಮಗಳು  ನೆನ್ನೆ ಡಾಕ್ಟ್ರತ್ರಕ್ಕೆ ಗೀತನ್ನ  ಕರ್ಕೊಂಡು ಹೋಗಿದ್ದಳು. ಅವಳಿಗೆ ರಕ್ತ ಕಡಿಮೆ ಐತಂತ ಹೇಳವ್ರೆ”ಎಂದಳು. ಈಗ ಮಗಳ ಬಗ್ಗೆ ಸಿಟ್ಟಿಗಿಂತ ಮರುಕವೇ ಎದ್ದು ಕಾಣುತ್ತಿತ್ತು. ಎಷ್ಟೇ ಆಗಲಿ ಹೆತ್ತ ತಾಯಿ ಅಲ್ವೆ ! ಆ ಕ್ಷಣ ಚಂದ್ರಮ್ಮನ್ನ  ನೋಡಿದ ಸುಮಿತ್ರಳಿಗೆ ಅಯ್ಯೋ ಅನಿಸಿತು.ಆ ಕ್ಷಣದಲ್ಲಿ ಸುಮಿತ್ರಳಿಗೆ  ಟಿ.ವಿ.ನಲ್ಲಿ ನೋಡಿ ಕೇಳಿದ ಮರ್ಯಾದಾ ಹತ್ಯೆಗಳು ನೆನಪಿಗೆ ಬಂತು. ಚಂದ್ರಮ್ಮನ ತಾಯ್ತನವೇ ಗೆದ್ದಿತ್ತು.ತಂದೆತಾಯಿಗಳು ಹೆತ್ತ ಮಕ್ಕಳನ್ನೇ ಕೊಲ್ಲುವಷ್ಟು  ಕಟುಕರಾಗಲು ಹೇಗೆ ಸಾದ್ಯ ? ಮಕ್ಕಳ ಪ್ರೇಮ ಪ್ರಕರಣ  ತಮ್ಮ ಕೈ ಮೀರಿ ಬೆಳೆದಾಗ ಅದಕ್ಕೆ ಬೇರೆ ರೀತಿಯಲ್ಲಿಯೇ ಪರಿಹಾರಗಳನ್ನು ಹುಡುಕಬೇಕು. ಅದನ್ನು ಬಿಟ್ಟು ತಮ್ಮ ಹೆತ್ತ ಮಕ್ಕಳನ್ನೆ ಕೊಲ್ಲುವ ಮಟ್ಟಕ್ಕಿಳಿಯಬಾರದು.ಏನೂ ಮಾಡಲಾಗದಿದ್ದರೆ ಕಡೆ ಪಕ್ಷ ಸುಮ್ಮನೆ ಇದ್ದು ಬಿಡಬೇಕು ಚಂದ್ರಮ್ಮನ ಅಸಹಾಯಕ ಪರಿಸ್ಥಿತಿಗೆ ಯಾವ ರೀತಿಯ ಸಮಾಧಾನ  ಹೇಳಬೇಕೆಂದು ಸುಮಿತ್ರಳಿಗೆ ತೋಚಲಿಲ್ಲ. ಚಂದ್ರಮ್ಮನ ಸಂಸಾರ ನೆರೆಹೊರೆಯವರ ನಗು ಪಾಟ್ಲಿಗೆ  ಗುರಿಯಾಗಿ ಅವಳ ನೆಮ್ಮದಿಯನ್ನು ಕೆಡಿಸಿತ್ತು. ಅದೂ

ಯಾರು ಹೊಣೆ ? Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರತ್ನ ರಾಯಮಲ್ಲ . ಬದಲಾಗುವ ಋತುಮಾನಗಳಲ್ಲಿ ನೀನೇ ನನ್ನ ವಸಂತನಿನಗಾಗಿ ಮನೆ-ಮಠಗಳನ್ನು ತೊರೆದ ನಾನೇ ನಿನ್ನ ಸಂತ ಶಶಿಗೂ ಬೆಳದಿಂಗಳನು ನೀಡಿರುವ ಚಂದ್ರಮುಖಿ ನೀನುಹೃದಯದಿ ನಿನಗಾಗಿ ಪಾರಿಜಾತ ಹೂ ನೆಟ್ಟ ಹೃದಯವಂತ ನೀನು ಇಲ್ಲದ ಕತ್ತಲೆ ವೈರಿಯಾಗಿ ಕಾಡುತ್ತಿದೆ ಅನುದಿನವೂನಿನಗಾಗಿ ಪ್ರೇಮದ ಕಂದೀಲು ಹಿಡಿದು ಕುಳಿತಿರುವ ಗುಣವಂತ ವಿರಹವನ್ನೇ ಹಾಸಿ ಹೊದ್ದುಕೊಂಡು ಮಲಗಿರುವೆ ನೆನಪಿನಲ್ಲಿನಿನಗಾಗಿ ಸರಸದ ಪಲ್ಲಂಗ ಹಾಕಿರುವೆನು ಪ್ರೀತಿಯ ಸಿರಿವಂತ ನಿನಗೋಸ್ಕರ ಹಗಲನ್ನು ತಡೆದು ನಿಲ್ಲಿಸುತಿರುವನು ಈ ಮಲ್ಲಿಆಗಸದ ತಾರೆಗಳನ್ನು ನಿನ್ನ ಮುಡಿಗಾಗಿ ಹೆಣೆದ ಕಲಾವಂತ ****************************

ಗಝಲ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಎ . ಹೇಮಗಂಗಾ ಕಲ್ಲುಮುಳ್ಳುಗಳ ಹಾದಿಯಲ್ಲಿ ನಡೆಯುತ್ತಲೇ ಇದ್ದೇನೆ ನಾನೇಕೆ ಹೀಗೆಕಷ್ಟ ಕಾರ್ಪಣ್ಯಗಳಲ್ಲಿ ಮುಳುಗುತ್ತಲೇ ಇದ್ದೇನೆ ನಾನೇಕೆ ಹೀಗೆ ಮೇಲೇರಬೇಕೆಂದರೂ ಕಾಲು ಹಿಡಿದು ಜಗ್ಗುವವರೇ ಹೆಚ್ಚುನಿತ್ಯ ಬೆನ್ನಿಗೆ ಇರಿಸಿಕೊಳ್ಳುತ್ತಲೇ ಇದ್ದೇನೆ ನಾನೇಕೆ ಹೀಗೆ ಮೋಡಿ ಮಾತುಗಳಿಗೆ ಮರುಳಾದರೂ ಎಚ್ಚೆತ್ತುಕೊಳ್ಳಲಿಲ್ಲಕುಹಕಿಗಳ ನೋಟಕೆ ಗುರಿಯಾಗುತ್ತಲೇ ಇದ್ದೇನೆ ನಾನೇಕೆ ಹೀಗೆ ಬೆಳ್ಳಗಿರುವುದೆಲ್ಲಾ ಹಾಲೆಂಬ ನಂಬಿಕೆ ಹೆಜ್ಜೆಹೆಜ್ಜೆಗೂ ಹುಸಿಯಾಗಿದೆವಂಚನೆಯ ಹಾಲಾಹಲವ ಕುಡಿಯುತ್ತಲೇ ಇದ್ದೇನೆ ನಾನೇಕೆ ಹೀಗೆ ಬೇಲಿಯೇ ಎದ್ದು ಹೊಲ ಮೇಯುವ ಕಾಲ ಇದಲ್ಲವೇ ಹೇಮತಿದ್ದಲಾಗದ ನನ್ನ ನಾನು ಹಳಿಯುತ್ತಲೇ ಇದ್ದೇನೆ ನಾನೇಕೆ ಹೀಗೆ ************************

ಗಝಲ್ Read Post »

ಇತರೆ, ವಾರ್ಷಿಕ ವಿಶೇಷ

ಸಂಗಾತಿಯೊಡನೆ ನನ್ನ ಪಯಣ

ಸಂಗಾತಿಯ ಇಬ್ಬರು ಲೇಖಕರುಬರೆದ ಅನಿಸಿಕೆಗಳು ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಮಹತ್ವ ಪ್ರತ್ಯೇಕವಾಗಿ ಉಲ್ಲೇಖಿಸುವ ಅವಶ್ಯಕತೆಯೇ ಇಲ್ಲ . ಮೊದಲಿನಿಂದ ಪ್ರಸಾರ ಮಾಧ್ಯಮ ಎಂದರೆ ಪತ್ರಿಕೆ ಮತ್ತು ಆಕಾಶವಾಣಿ. ಈಗ ದೂರದರ್ಶನ ಹಾಗೂ ಅಂತರ್ಜಾಲಗಳು ಈ ಪರಿಧಿಗೆ ಸೇರಿವೆ.  ದಿನಪತ್ರಿಕೆ ಓದದೇ ಬೆಳಗು ಆರಂಭವಿಲ್ಲ  ಎಂಬಂಥ ಕಾಲ ಹೋಗಿ ಎಲ್ಲವನ್ನೂ ದೃಶ್ಯ ಮಾಧ್ಯಮಗಳಲ್ಲಿ ಕಂಡುಕೊಳ್ಳುವ ಈ ಯುಗದಲ್ಲಿ ಮುದ್ರಿತ ಓದಿನ ಪತ್ರಿಕೆ, ನಿಯತ ಕಾಲಿಕೆಗಳು ತಮ್ಮ ಮೊದಲಿನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ.  ಈ ಪ್ರಚಲಿತ ವಿದ್ಯಮಾನದಲ್ಲಿ ಸುದ್ದಿ ತಿಳಿಯಲು ದಿನಪತ್ರಿಕೆಯೇ ಬೇಕೆಂದೇನಿಲ್ಲ.  ಎಲ್ಲೋ ಕೆಲವರಿಗಷ್ಟೇ ಈ ವಿದ್ಯುನ್ಮಾನದ ಓದುವಿಕೆಗಿಂತ ಅಚ್ಚಾದ ಕಪ್ಪು ಬಿಳುಪಿನ ಸುದ್ದಿಗಳ ಮೇಲೆ ಮಮಕಾರ.  ಹೀಗಿರುವಾಗ ವೆಬ್ ಮ್ಯಾಗಜಿನ್ಗಳು ಪತ್ರಿಕೆಗಳು ಮುಂಚೂಣಿಗೆ ಬರುತ್ತಿರುವುದು ವಿಶಿಷ್ಟವೂ ಅಲ್ಲ ವಿಶೇಷವೂ ಅಲ್ಲ . “ಕಾಲಾಯ ತಸ್ಮೈ ನಮಃ”  ಎನ್ನುವ ಬದಲಾದ ಪ್ರಪಂಚ ದೆಡೆಗೆ ಸಹಜ ನಡೆ . ಸಂಗಾತಿ ಪತ್ರಿಕೆಯ ಆರಂಭದ ಸಂಪಾದಕೀಯದಲ್ಲಿ ಸಂಪಾದಕರಾದ ಶ್ರೀ ಮಧುಸೂದನ ರಂಗೇನಹಳ್ಳಿ ಅವರು ಹೇಳುವ ಈ ಮಾತುಗಳು ಸಕಾಲಿಕ ಹಾಗೂ ಸಂದರ್ಭೋಚಿತ .. “ಮೊದಲಿನ ಹಾಗೆ ಪುಸ್ತಕವೊಂದನ್ಮು ಕೈಲಿ ಹಿಡಿದು ಕೂತಲ್ಲೇ ಬೇರು ಬಿಟ್ಟು ಓದುವ ಪುರುಸೊತ್ತು ಯಾರಿಗೂ ಇಲ್ಲ. ಆದರೆ ತಮ್ಮ ಟ್ಯಾಬ್,  ಫೋನುಗಳ ಮೂಲಕ ಪ್ರಯಾಣ ಮಾಡುತ್ತಾ, ಮನೆ ಕೆಲಸ ಮಾಡುತ್ತಾ, ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಲೆ ಓದುವ ಅಭ್ಯಾಸಕ್ಕೆ ಜನ ಒಗ್ಗಿ ಹೋಗುತ್ತಿದ್ದಾರೆ.  ಜನರ ಇಂತಹ ಸಾಹಿತ್ಯ ಓದಿನ ಅಗತ್ಯಕ್ಕಾಗಿಯೇ ಸಂಗಾತಿ ಪತ್ರಿಕೆಯನ್ನು ರೂಪಿಸಲಾಗಿದೆ” ಹೀಗೆ ರೂಪು ತಳೆದ ಸಂಗಾತಿ ಪತ್ರಿಕೆಗೀಗ ಒಂದು ವರ್ಷ.  ಈ ಸಂತಸದ ಸಂದರ್ಭದಲ್ಲಿ ಪತ್ರಿಕೆ ನಡೆದುಬಂದಿರುವ ಹಾದಿಯನ್ನು ಓದುಗಳಾಗಿ ನಾನು ಗುರುತಿಸಿರುವುದು ಹೀಗೆ.  ಮೊದಲಿಗೆ ನೂರಾರು (ಅಥವಾ ಸಾವಿರ?) ಉದಯೋನ್ಮುಖ ಕವಿಗಳಿಗೆ ಲೇಖಕರಿಗೆ ಗಜಲ್ ಕಾರರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.  ಸಂಗಾತಿಯಲ್ಲಿ ನಮ್ಮ ಕವಿತೆ ಬಂದಿದೆ ಎಂದು ಹೆಮ್ಮೆಯಿಂದ ಲಿಂಕ್ ಪ್ರದರ್ಶಿಸುವವರ ದಂಡೇ ಇದೆ ನನ್ನನ್ನು ಸೇರಿಸಿ.  ನಂತರ ಅಂಕಣ ಬರಹಗಳು . ಹಳೆ ಬೇರು ಹೊಸ ಚಿಗುರು ಎಂಬಂತೆ ಪಾರ್ವತಿ ಐತಾಳರಂತಹ ಹಿರಿಯ ಸಾಹಿತಿಗಳ ಬರಹದ ಸವಿ ಉಣಿಸಿದಂತೆ ಮತ್ತೆ ಹಲ ಕೆಲವರಿಗೆ ಪ್ರಥಮ ಬಾರಿ ಅಂಕಣ ಬರೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ . ಹೊಸ ತರಹದ  ಕಥೆ ಕವಿತೆಗಳ ಪ್ರಕಟಣೆ, ವಿಚಾರಪೂರ್ಣ ಲೇಖನಗಳಿಂದ ಪುಸ್ತಕ ಪರಿಚಯಗಳವರೆಗೆ ಪ್ರತಿಭಾನ್ವಿತರ ಪರಿಚಯ, ಸಂದರ್ಶನ ,ಸಂದರ್ಭಾನುಸಾರ ವಿಶೇಷ ಸಂಚಿಕೆಗಳು (ಅಂಬೇಡ್ಕರ್ ಗಾಂಧಿ ಜಯಂತಿ )ಇತ್ಯಾದಿ…… ಏನುಂಟು ಏನಿಲ್ಲ?  ಮೊಗೆದಷ್ಟು ಸಾಹಿತ್ಯದ ಸವಿ ಎಳನೀರು  ಉಣಿಸುವ ಶರಧಿ ನಮ್ಮ ಸಂಗಾತಿ ಪತ್ರಿಕೆ . ಇಲ್ಲಿನ ಅಂಕಣ ಬರಹಗಳ ವಿಶೇಷಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುವೆ. ಕವಿತೆ ಕಾರ್ನರ್ _ಶ್ರೀ  ಮಧುಸೂಧನ ರಂಗೇನಹಳ್ಳಿ ಎಲ್ಲಕ್ಕಿಂತ ಹೆಚ್ದು ಕಾದು ಕುಳಿತು ಓದುವ ಈ ಕವಿತೆಯ ಅಡ್ಡಾ ನನಗೆ ತುಂಬಾ ಇಷ್ಟದ್ದು.  ಶ್ರೀ ಮಧುಸೂಧನ ಅವರ ವಿಶಿಷ್ಟ ಕವನಗಳ ರಸಾಸ್ವಾದನೆಯ ಅವಕಾಶ ಕಲ್ಪಿಸುವ ಕವಿತೆ ಕಾರ್ನರ್ ನನ್ನಂತೆ ಇನ್ನಷ್ಟು ಅವರ ಅಭಿಮಾನಿಗಳ ಮೆಚ್ಚಿನ ಮೂಲೆ . ಹೊತ್ತಾರೆ  _  ಅಮೆರಿಕದ ಇಂಜಿನಿಯರ್ ಅಶ್ವತ್ಥ್ ಅವರ ಅಂಕಣ ನನಗೆ ನೆನಪಿರುವಂತೆ  ಸಂಗಾತಿಯಲ್ಲಿ ಮೊಟ್ಟ ಮೊದಲ ಅಂಕಣ ಹೊತ್ತಾರೆ . ಹೆಸರಲ್ಲೇ ಒಂಥರಾ ಸೆಳೆತವಿದ್ದ ಈ ಅಂಕಣದಲ್ಲಿ ಲೇಖಕರು ತಮ್ಮ ಬಾಲ್ಯದ ನೆನಪುಗಳ ಖಜಾನೆಯನ್ನೇ ಮೊಗೆಮೊಗೆದು ಸುರಿದು ಬಿಟ್ಟಿದ್ದಾರೆ.  ಹೆಚ್ಚಿನ ಅಂಶಗಳ ಸಾಮ್ಯವಿದ್ದ ವಿಷಯಗಳಿಂದ ಅಪ್ಯಾಯವೆನಿಸಿದ ನಮ್ಮದೇ ಅನುಭವಗಳ ನೆನಪಿನೂರಿಗೇ ಹೋಗಿ ಬಂದಂತೆ ಆಗಿತ್ತು . ಚೆಂದದ ಅಂಕಣದಿಂದ ಸಂಗಾತಿ ಅಂಕಣ ಬರಹಗಳ ಯಾನದ ಮುನ್ನುಡಿಯಾದ ಹೊತ್ತಾರೆ ತುಂಬಾ ಆತ್ಮೀಯವಾಗಿತ್ತು ಎಂದರೆ ಅತಿಶಯೋಕ್ತಿ ಏನಲ್ಲ . ಶಿವಮೊಗ್ಗ ಜಿಲ್ಲೆಯ ಚಳವಳಿಗಳು ಡಾಕ್ಟರ್ ಸಣ್ಣರಾಮ ಈ ಅಂಕಣವೂ ತುಂಬಾ ಮಾಹಿತಿಪೂರ್ಣ ಹಾಗೂ ವಿಚಾರ ಪ್ರಚೋದಕವಾಗಿದ್ದು ಅನೇಕ ಕುತೂಹಲಕಾರಿ ಮಾಹಿತಿಗಳನ್ನು ತೆರೆದಿಟ್ಟಿತ್ತು ದಿಕ್ಸೂಚಿ _  ಜಯಶ್ರೀ ಅಬ್ಬಿಗೇರಿ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವಂತಹ ವಿಚಾರಪೂರ್ಣ ಲೇಖನಗಳ ಮಾಲೆ.  ಹೆಸರಿಗೆ ತಕ್ಕಂತೆ ದಿಕ್ಸೂಚಿಯೇ ಸರಿ ವ್ಯಕ್ತಿತ್ವ ವಿಕಸನದ ಒಂದೊಂದೇ ಅಂಶಗಳನ್ನು ಸುಲಭ ಸರಳ ಭಾಷೆಯಲ್ಲಿ ಮನಸ್ಸಿಗೆ ಮುಟ್ಟುವಂತೆ ವಿವರಿಸುವ ಈ ಅಂಕಣದಿಂದ ತುಂಬಾ ಅನುಕೂಲ ಪಡೆದುಕೊಂಡೆ ನಾನಂತೂ.  ತುಂಬಾ ಇಷ್ಟವಾದ ಕೆಲ ಮಾಲಿಕೆಗಳು “ಆಗದು ಎಂದು ಹೇಳಲು ಕಲಿಯಿರಿ ಕಲಿಸಿರಿ”,  “ಸೋಲಿನ ಸುಳಿಯಲ್ಲಿ ಗೆಲುವಿನ ಹಾದಿ ಇದೆ” , “ತೊಂದರೆ ಕೊಡಬೇಡಿ ಎಂದು ಹೇಳಿಬಿಡಿ” ಎಲ್ಲಾ ಎಷ್ಟೋ ಬಾರಿ ಕೇಳಿದ ವಿಷಯಗಳೇ ಆದರೂ ಇಲ್ಲಿ ಓದುವಾಗ’  “ಹೌದಲ್ವಾ ಇಷ್ಟು ಸುಲಭವಾಗಿ ಮಾಡುವಂಥದ್ದನ್ನು ನಾವೇಕೆ ಪಾಲಿಸಲ್ಲ” ಅನ್ನಿಸುತ್ತೆ. ಎಲ್ಲೋ ನನ್ನ ಹಾಗೆ ಯೋಚಿಸುವವರೂ ಇದಾರಲ್ಲ ಆದರೆ ಮಾಡಬಹುದು ತಪ್ಪಲ್ಲ ಅನ್ನುವ   ಭಾವವನ್ನು ತರುತ್ತೆ. ಸಂಗಾತಿ ಓದುಗರ ಮನ ಸೆಳೆದಿರುವ ಮಾಲಿಕೆಯಿದು.  ಸಂಪ್ರೋಕ್ಷಣ _  ಅಂಜನಾ ಹೆಗಡೆ ಸುಂದರ ಭಾವಗಳನ್ನು ಅಂಕಣದ ಚೌಕಟ್ಟಿಗೆ ಹಿಡಿಸುವಂತೆ ಬಂಧಿಸಿ ಚೆಲುವಿನ ಚಿತ್ತಾರದ ರಂಗವಲ್ಲಿ ಹಾಕಿ ಮನ ಮುದಗೊಳಿಸುವ ಭಾವ ಪುಳಕದ ಸಿಂಚನದ ಸಂಪ್ರೋಕ್ಷಣ ಮಾಡಿಸುವುದು ಅಂಜನಾ ಹೆಗಡೆಯವರ ಈ ಅಂಕಣ . ಸಂಗಾತಿಗಾಗಿಯೇ ಮೊದಲ ಬಾರಿ ಅಂಕಣ ಬರೆದ ವಿಶೇಷತೆ ಇವರದು .ಸಂಗಾತಿಯ ಕೊಡುಗೆ ಎಂದರೆ ತಪ್ಪಾಗಲಾರದು.  ಬಣ್ಣದ ಕನಸುಗಳ ಮೋಹಕ ಲೋಕ ತೆರೆದಿಡುವ ಇವರು ಬಣ್ಣಗಳೇ ಇರದಿದ್ದರೆ ಲೋಕ ಹೇಗಿರುತ್ತಿತ್ತು ಎಂಬ ಯೋಚನೆಗೆ ಪ್ರಚೋದಿಸುತ್ತಾರೆ ಇವರ ಬರಹಗಳ ಸುಂದರ ಲೋಕದಲ್ಲಿ ವಿಹರಿಸುವುದೇ ಸಂಭ್ರಮದ ವಿಷಯ. ಸಂಗಾತಿಯ ಸಾನ್ನಿಧ್ಯದ ಹಿತ ಹೆಚ್ಚಿಸುವ ಸಂಪ್ರೋಕ್ಷಣ ಸಂಗಾತಿಯ ಆಕರ್ಷಣೆಗಳಲ್ಲೊಂದು ಮೂರನೇ ಆಯಾಮ _ ಶ್ರೀದೇವಿ ಕೆರೆಮನೆ ಈಗಾಗಲೇ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿ ಪ್ರಸಿದ್ಧ ಅಂಕಣ ಕರ್ತೆಯಾಗಿರುವ ಶ್ರೀದೇವಿ ಕೆರೆಮನೆಯವರ ಅಂಕಣ ಆರಂಭವಾಗಲಿದೆ ಎಂದಾಗ ಸ್ವಾಭಾವಿಕವಾಗಿಯೇ ನಿರೀಕ್ಷೆ ಹೆಚ್ಚಿತ್ತು . ಅದನ್ನು ಸುಳ್ಳು ಮಾಡದೆಯೇ ವಾರವಾರವೂ ಹೊಸ ಪುಸ್ತಕಗಳ ಸರಕು ತಂದು ನಮ್ಮ ಮುಂದೆ ಜೋಡಿಸಿಡುವ ಈ ಅಂಕಣ ಓದಿನ ಆಸಕ್ತಿಯ ಹರಿವಿಗೆ ದಿಶೆ ತೋರಿಸುತ್ತಿದೆ ಎಂದರೆ ತಪ್ಪಾಗಲಾರದು ಕವಿತೆಗಳಿರಲಿ ಕಥೆ ಇರಲಿ ಇವರ ವಿಮರ್ಶೆಯ ನಿಕಷದಲ್ಲಿ ಮತ್ತಷ್ಟು ಹೊಳೆಯುವ ಪರಿ ಓದಿಯೇ ಆಸ್ವಾದಿಸಬೇಕು ಇವರ ಬರಹದಿಂದ ಪ್ರೇರೇಪಿತಳಾಗಿ ಕೆಲ ಪುಸ್ತಕಗಳನ್ನು ಕೊಂಡು ಓದಿದ್ದೇನೆ . ಬೌದ್ಧಿಕ ಹಸಿವಿಗೆ ಬುತ್ತಿ ಒದಗಿಸುವ ಅಂಕಣ ಇದು ಅನುವಾದಿತ ಕೃತಿ ಪ್ರಪಂಚ ಪ್ರವೇಶ ಪಾರ್ವತಿ ಐತಾಳ ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಪುಸ್ತಕಗಳ ಪರಿಚಯ ಮಾಡಿಸುವ ಅಂಕಣ.  ಉತ್ತಮ ಅನುವಾದಿತ ಹಾಗೂ ಓದಲೇ ಬೇಕಾದ ಕೃತಿಗಳನ್ನು ಸಂಗಾತಿಯ ಓದುಗರ ಗಮನಕ್ಕೆ ತರುವ ಈ ಅಂಕಣಕಾರ್ತಿ ನಿಜಕ್ಕೂ ಅಭಿನಂದನಾರ್ಹರು . ಶ್ರೇಷ್ಠ ಲೇಖಕಿ ಹಾಗೂ ಅನುವಾದಕಿಯಾದ ಇವರಿಂದ ಮತ್ತಷ್ಟು ಕೃತಿಗಳು ಸಂಗಾತಿಯ ಓದುಗರಿಗೆ ದಕ್ಕಲಿ ಎಂಬ ಅಭಿಲಾಷೆ ಹೊಸದನಿ ಹೊಸ ಬನಿ _ ಡಿ ಎಸ್ ರಾಮಸ್ವಾಮಿ ಹೆಸರಾಂತ ಕವಿಗಳು ಲೇಖಕರು ಆಗಿರುವ ನಮ್ಮ ಜೀವ ವಿಮಾ ಕುಟುಂಬದವರೇ ಆದ ಶ್ರೀ ಡಿ ಎಸ್ ರಾಮಸ್ವಾಮಿಯವರು ಬರೆಯುವ ಈ ಪುಸ್ತಕ ವಿಮರ್ಶೆಯ ಅಂಕಣ ತುಂಬಾ ಸ್ವಾರಸ್ಯಕರ . ಹಾಗೂ ಅವರ ವಿಮರ್ಶೆಯ ಹೊಳಹುಗಳನ್ನು ಅವಲಂಬಿಸಿ ನಡೆದರೆ ಹೊಸ ಬರಹಗಾರರಿಗಂತೂ ಉತ್ತಮ ಮಾರ್ಗದರ್ಶನ .ಉದಯೋನ್ಮುಖ ಕವಿ ಲೇಖಕರ ಪುಸ್ತಕ ಪರಿಚಯ ಮಾಡಿಕೊಡುವ ಈ ಅಂಕಣವಂತೂ ತಪ್ಪದೇ ಓದಿಸಿಕೊಂಡು ಹೋಗುವ ಗುಣ ಹೊಂದಿದೆ . ಮುಂದೊಂದು ದಿನ ನನ್ನ ಕವನ ಸಂಕಲನವೂ ಈ ಅಂಕಣದಲ್ಲಿ ವಿಮರ್ಶೆಯಾಗುವ ಪುಣ್ಯ ಪಡೆಯಲಿ ಎಂಬ ದೂ(ದು)ರಾಸೆಯೂ ಇದೆ . ಕಬ್ಬಿಗರ ಅಬ್ಬಿ_  ಮಹಾದೇವ ಕಾನತ್ತಿಲ ವೃತ್ತಿಯಲ್ಲಿ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತ್ಯ ಸಂಗೀತದ ಅಭಿಮಾನಿಯಾಗಿ ಮೆಟೀರಿಯಲ್ ಸೈನ್ಸ್ ನ ತತ್ವಗಳೊಂದಿಗೆ ರಸಾನುಭೂತಿಯ ಸ್ವಾದವನ್ನು ಪ್ರತಿವಾರ ಉಣಬಡಿಸಿ ಕಬ್ಬಿಗರ ಅಬ್ಬಿಯಲ್ಲಿ ಮೀಯುವ ಅವಕಾಶ ಮಾಡಿಕೊಡುವ ಈ ಅಂಕಣ ನಾನು ತಪ್ಪದೆ ಓದುವ ಅಂಕಣಗಳಲ್ಲೊಂದು . ವಾಸ್ತವದ ವಿದ್ಯಮಾನಗಳೊಂದಿಗೆ ಕವಿಕಲ್ಪನೆಯ ಬೆಸುಗೆಯನ್ನು ಮಾಡಿ ಅದಕ್ಕೆ ತಕ್ಕ ಕಾವ್ಯ ಕವನ ಪರಿಚಯದೊಂದಿಗೆ ಹೊಸ ವಿಸ್ಮಯ ಪ್ರಪಂಚದ ಅನಾವರಣ ಮಾಡುವುದಷ್ಟೇ ಅಲ್ಲ ಕವಿ ಮನಸ್ಸುಗಳನ್ನು ಆ ವಿಶ್ವ ಪರ್ಯಟನೆಗೆ ಜೊತೆಯಲ್ಲೇ ಕೊಂಡೊಯ್ಯುವ ಅದ್ಭುತ ಅನನ್ಯ ಬರವಣಿಗೆ ಇವರದು.  ಕವಿತೆ ಬರೆಯಬೇಕೆನ್ನುವವರೆಲ್ಲಾ  ಓದಲೇಬೇಕಾದ ಲೇಖನ ಮಾಲೆ ಇದು. ಒಂದು ಲಕ್ಷ ಓದುಗರನ್ನು ತಲುಪಿರುವ ಸಂಗಾತಿಯನ್ನು ಮತ್ತಷ್ಟು ಜನರಿಗೆ ತಲುಪಿಸುವ ಕಾರ್ಯ ನಡೆಯಬೇಕು. ಸಂಗಾತಿಯ ಪೋಸ್ಟ್ಗಳಿಗೆ  ಕಾಮೆಂಟ್ಸ್ ಮಾಡುವರು ಇನ್ನಷ್ಟಿ ಹೆಚ್ಚಾಗಬೇಕು .ತಮ್ಮ ತಮ್ಮ ಸಾಮಾಜಿಕ ಜಾಲತಾಣದ ವರ್ಗಗಳಲ್ಲಿ ಸಂಗಾತಿಯನ್ನು ಹೆಚ್ಚೆಚ್ಚು ಪರಿಚಯಿಸಿ ಎಂಬುದು ಓದುಗಳಾಗಿ ನನ್ನ ಕಳಕಳಿಯ ಮನವಿ. ಇನ್ನು ಪತ್ರಿಕೆ ಹೆಚ್ಚು ಜನರನ್ನು ಮುಟ್ಟಬೇಕಾದರೆ ಇನ್ನಷ್ಟು ವೈವಿಧ್ಯಮಯ ಸಾಹಿತ್ಯ ಪ್ರಕಾರಗಳ ಅಂದರೆ ಕಥೆಗಳು ಕಾದಂಬರಿಗಳು ಥೀಮ್ ಬರಹ ಕವಿತೆಗಳು ಸ್ಪರ್ಧೆಗಳು ಆಯೋಜಿಸಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ.  ಓದುಗರ ಒಳ್ಳೆಯ ಕಾಮೆಂಟ್ಗಳನ್ನು ಪ್ರಕಟಿಸಬಹುದು . ಕುವೆಂಪು ಅವರು ಒಂದೆಡೆ ಹೇಳುತ್ತಾರೆ “ಪತ್ರಿಕೋದ್ಯಮ ಉದ್ಯೋಗದ ಅಥವಾ ಲಾಭದ ಮಟ್ಟಕ್ಕಿಳಿದು ‘ಪತ್ರಿಕೋದ್ಯೋಗಿ’ಯಾಗದಿರುವುದೊಂದು ಶುಭ ಚಿಹ್ನೆ.. ಉದ್ಯೋಗದ ಅಥವಾ ಲಾಭದ ಯೋಚನೆ ಸುಳಿಯಿತೆಂದರೆ ಶಾಸ್ತ್ರೀಯವಾಗಿ ನಿಷ್ಪಕ್ಷಪಾತವಾಗಿ ಉದ್ಯಮವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ” (ಕುವೆಂಪು _ ಲೇಖನ ಪತ್ರಿಕಾ ಮನೋಧರ್ಮ). ಈ ಮಾತನ್ನು ಪುಷ್ಟೀಕರಿಸುವಂತಹ ಕಾರ್ಯ ಸಂಗಾತಿಯದು.  ಸಾಹಿತ್ಯ ಬೆಳೆಸುವ ಹಾಗೂ ಕನ್ನಡ ಪರ ಸೇವೆಯೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡಿರುವ ನಿಸ್ವಾರ್ಥ ಮನೋಭಾವದ ಸಂಗಾತಿಗೆ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಹಾರ್ದಿಕ ಅಭಿನಂದನೆಗಳು  . ಸಂಗಾತಿಯ ಸಾಹಿತ್ಯ ಸಾಂಗತ್ಯ ಕನ್ನಡಿಗರೆಲ್ಲರಿಗೂ ಹೆಚ್ಚಾಗಲಿ, ಎಲ್ಲರ ಹೃದಯ ಮುಟ್ಟಲಿ . ಪತ್ರಿಕೆಯ ಪರಿಧಿ ಇನ್ನಷ್ಟು ವಿಸ್ತಾರಗೊಳ್ಳಲಿ ಮೇರು ಮುಟ್ಟಲಿ ಎಂಬ ಆಶಯ .  ಈ ರಥದ ಸಾರಥಿಯಾಗಿರುವ ಶ್ರೀ  ಮಧುಸೂದನ್ ಅವರಿಗೆ ಹೃದಯಾಂತರಾಳದ ವಂದನೆ ಮತ್ತು ಅಭಿನಂದನೆಗಳು.                         ಸಂಗಾತಿಯ ಆಭಿಮಾನಿ ಓದುಗಳು                              ಸುಜಾತಾ ರವೀಶ್ .                                 ಸಂಗಾತಿ ಎಂಬ ಪದವು ಸಾಂಗತ್ಯದಿಂದ ಬಂದಿತೆಂದು ಕಾಣುತ್ತದೆ.  ಸ್ನೇಹಕ್ಕೂ ಸಾಂಗತ್ಯಕ್ಕೂ ತುಂಬಾ ವ್ಯತ್ಯಾಸವಿದೆ. ಸ್ನೇಹದ ವ್ಯಾಪ್ತಿ ಚಿಕ್ಕದು. ಸಾಂಗತ್ಯದ್ದು ಹಾಗಲ್ಲ. ಅದರ ನಿಘಂಟುವಿನ ಅರ್ಥ ಹೊಂದಾಣಿಕೆ, ಸಾಮರಸ್ಯ ಎಂದು ಕಾಣುತ್ತದೆ. ಅಂದರೆ ಒಂದು ತರದ ಪರಸ್ಪರ ಗೌರವ, ಮರ್ಯಾದೆ ಕೊಟ್ಟು ತೊಗೊಳ್ಳುವುದು. ಅದು ಸಂಪಾದಕರ ಸಂದೇಶಗಳಲ್ಲಿ ಕಾಣುತ್ತದೆ. ಬರಹಗಾರರ ಬಗ್ಗೆ ಅವರು ತೋರುವ ಸೌಜನ್ಯವೇ ಸಂಗಾತಿಯ ಉಸಿರು. ನಾನು ಈ ಒಂದೆರಡು ತಿಂಗಳಿಂದ ಮಾತ್ರ ಸಂಗಾತಿಯ ಸಂಗಾತಿಯಾಗಿದ್ದರೂ, ನನ್ನ ಬಗ್ಗೆ ಪತ್ರಿಕೆಯವರು ತೋರಿದ ಆದರ ಮರೆಯಲಾರದ್ದು. ಅದೇ ಪತ್ರಿಕೆಯ ಜನಾನುರಾಗದ ಅಡಿಪಾಯವಾಗಿದೆ. ಮುಂದೆ ಪತ್ರಿಕೆಯ ಅಂತರ್ವಸ್ತು. ಅನೇಕ ಸಾಹಿತ್ಯದ ವಿಷಯಗಳನ್ನುಣ ಬಡಿಸುವ ಪತ್ರಿಕೆಯವರ ತವಕ ಪತ್ರಿಕೆಯನ್ನು ಸಾಹಿತ್ಯದ ಕಾಮನಬಿಲ್ಲಾಗಿಸಿದೆ ಎಂದರೆ ತಪ್ಪಗಲಾರದು. ನಿಜಕ್ಕೂ ಪತ್ರಿಕೆಯ ಮೊದಲನೆಯ ವಾರಿಷಿಕೋತ್ಸವ ಈ ತಿಂಗಳ ಇಪ್ಪತ್ತರಂದು ಅಂತ ನೋಡಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಒಂದು ವರ್ಷದ ಈ ಕೂಸಿನಲ್ಲಿ ಅದೆಷ್ಟು ಪ್ರಬುದ್ಧತೆ ಕಾಣುತ್ತದೆ ಎನ್ನಿಸಿದ್ದಂತೂ ಹೌದು. ನಮ್ಮ ಹೈದರಾಬಾದಿನಲ್ಲಿ ಈ ವಾರ ಸುರಿದು ಜನಜೀವನವನ್ನು ಮತ್ತು ನಮ್ಮ ನೆಂಟರಿಷ್ಟರಿಗೆ ಕೊಟ್ಟ ಅನಾನುಕೂಲತೆಯಿಂದ ನನ್ನ ಲೇಖನ ಸ್ವಲ್ಪ ಮೊಟುಕುಗೊಳಿಸಬೇಕಾಗಿ ಬಂದಿದೆ ಬಿಟ್ಟರೆ ಇಲ್ಲಾಂದರೆ ಇನ್ನೂ ತುಂಬಾ ಬರೆಯುವುದಿತ್ತು. ಕರ್ನಾಟಕದಲ್ಲಿಯ ಕನ್ನಡ ಪತ್ರಿಕೆಗಳಲ್ಲಿ ಹೊರನಾಡ ಕನ್ನಡಿಗರ ಪರವಾಗಿ ನನ್ನದೊಂದು ವಿನಂತಿ ಇದೆ. ಹೊರನಾಡಲ್ಲಿದ್ದು ನಾವು ಕನ್ನಡಮ್ಮನ ಸೇವೆ ಮಾಡುತ್ತಿರುವವರು.

ಸಂಗಾತಿಯೊಡನೆ ನನ್ನ ಪಯಣ Read Post »

You cannot copy content of this page

Scroll to Top