ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಳೆಯ ಸ್ವಗತ

ಕಲಾ ಭಾಗ್ವತ್

ಹಕ್ಕಿ ಹಾರಾಡಿ
ಗೂಡ ಸೇರುವ ಸಂಜೆ
ಚಿಲಿಪಿಲಿಗಳ ಸದ್ದು ಗದ್ದಲ

ತಾನೇ ಗೆದ್ದೆನೆಂಬ ದಣಿವು
ಹಿಗ್ಗಿ ಹಿಂದಿಕ್ಕಿ ಓಡಿಹುದು
ಕರುಳ ಕುಡಿಗಳ ಸಿದ್ಧಿ ಸಂಭ್ರಮದ
ಕಥೆಗಳಿಗೆ..
ಮೆಲುದನಿಯಲೇ ಉತ್ತರ
ಒಳಗೊಳಗೆ ಏರು ಎತ್ತರ!

ಪಿಸುಮಾತಿನ ರಸಘಳಿಗೆ,
ಕುಸುರಿ ಮಾಡಿದೆ ಕನಸ,
ಪಡುವಣದ ಕೆಂಪಂಚಿನಲಿ..
ಹೋಗಿಯೇ ಬಿಟ್ಟ
ನಾಳೆ ಬರುವೆನೆಂದು!
ಇಲ್ಲೀಗ ಕಗ್ಗತ್ತಲು..

ಕೈಯೊಂದು ಚಾಚಿತು ಬಾ
ಎಂದು ಬೆಳಕ ತೋರಲು..
ಆಹಾ.. ಎಂತಹ ಶುಭ್ರ !
ಎಂದಿನಂತಲ್ಲ ಇಂದು..

ಮಾಸಕೊಮ್ಮೆಯಾದರೂ
ಮರೆಯಾದರೇ ಚಂದ
ಈ ಚಂದ್ರಮ..
ಮರುದಿನ ತುಸು ಮಾತ್ರ ನೋಡಲು.
ಪುಟ್ಟ ಮಗುವಿಗೆ
ಬೇಕಲ್ಲವೇ ಊಟದಾಟಕೆ?
ಕರುಣೆಯೋ, ಒಲುಮೆಯೋ..
ಇಣುಕಿದರೆ ಸೆಳವೊಂದಿಹುದು

ದಿನದಂತ್ಯದ ಶಾಂತ, ಹಸಿತ
ಅವನ ಮೊಗವೊಂದೇ ಸಾಕು
ಹಂಚಿಕೊಳ್ಳಲು ಸಿಹಿ-ಕಹಿಯ

ಬೆಳಗಾದರೆ ಬಂದೇ ಬಿಡುವನವನು
ಬಡಿದೆಬ್ಬಿಸಲು
ಮಾತಿಗೆ ತಪ್ಪದೆ,
ಮೂಡಣವ ರಂಗೇರಿಸಿ..
ತಿಳಿಗೊಳದಲಿ ತೋರಿ ಪ್ರತಿಬಿಂಬ
ಹಸಿರಿಗಷ್ಟೇ ಕೇಳುವುದು
ಕಿವಿಯಲೂದಿದ
ಉಸಿರಿನ ಸ್ವರ..
ಯಾಕೆ ಆಯಾಸ?

ಮುಸುಕ ಸರಿಸಿ, ಮುಖವರಳಿಸಿ
ಹಸಿ ಕನಸಲಿ ಸ್ವಾಗತಿಸಲೇ
ಮತ್ತೆ ಸಂಜೆಯ?..

************************************

About The Author

9 thoughts on “ಕಾವ್ಯಯಾನ”

  1. ಸಂಗಾತಿ ಬಳಗಕ್ಕೆ ಹಾಗೂ ಪ್ರೋತ್ಸಾಹಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

Leave a Reply

You cannot copy content of this page

Scroll to Top