ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ವಾರದ ಕವಿತೆ

ವಾರದ ಕವಿತೆ

ಕವಿತೆ ನಿದ್ದೆ ಬರುತ್ತಿಲ್ಲ! ಕಾತ್ಯಾಯಿನಿ ಕುಂಜಿಬೆಟ್ಟು ನಿದ್ದೆ ಬರುತ್ತಿಲ್ಲ!ಆದರೆ…ನಿದ್ದೆ ಮಾಡದಿದ್ದರೆಒಳಗಿರುವ ಆತ್ಮಿಣಿ ಅಲಂಕರಿಸಿಕೊಂಡುಶತಪಥ ಸುತ್ತುತ್ತಾಳೆ ಪಂಜರದ ಗಿಳಿಯಂತೆಹೊರಹಾದಿ ಅರಸುತ್ತ! ಆಗ…ಪಕ್ಕದಲ್ಲಿರುವ ಪುರುಷಾಕಾರಲಂಘಿಸಿ ರಾವಣನಾಗುತ್ತದೆನನ್ನನ್ನು ಅಪಹರಿಸಿ ಅಶೋಕವನದಲ್ಲಿಡಲು!ಅಥವಾ…ಗುಟುರು ಹಾಕುತ್ತ ರಕ್ಕಸನಾಗುತ್ತದೆಹೊತ್ತೊಯ್ದು ಏಳುಕೋಟೆಯೊಳಗೆಬಂಧಿಸಿಡಲು! ನಿದ್ದೆಯೇ ಬಾರದಿದ್ದರೆನಾನು ಸೀತೆಯಾಗಬೇಕಾಗುತ್ತದೆ!ಆಗ…ಕನಸುಗಳನ್ನು ಹತ್ತುತಲೆಗಳಇಪ್ಪತ್ತು ಕಣ್ಣುಗಳುನೋಟದಲ್ಲೇ ಬೂದಿ ಮಾಡುತ್ತವೆಹತ್ತು ಮೂಗುಗಳು ಇಪ್ಪತ್ತು ಕಿವಿಗಳುಕಿಟಕಿ ಕಿಂಡಿಗಳಾಗಿಹೋದೆಯ ಪಿಶಾಚಿ ಎಂದರೆಬಂದೆ ನಾ ಗವಾಕ್ಷಿಯಲ್ಲಿ! ಎಂದರಚುತ್ತಹತ್ತು ದಳಬಾಯಿಗಳುಕೋಟೆಯ ಮಹಾದ್ವಾರಗಳಾಗಿಅಶೋಕವನದ ಮರಗಳನ್ನುಹೊರದೂಡುತ್ತವೆಅವು ಎಲೆಗಳ ಕಣ್ಣುಗಳನ್ನುಗಾಳಿಗೆ ಮುಚ್ಚಿ ತೆರೆಯುತ್ತಕಣ್ಸನ್ನೆಯಲ್ಲೇಕೋಟೆಯ ಹೊರಗಿಂದಲೇಬಾ ಬಾ ಎಂದು ಬಳಿಕರೆಯುತ್ತವೆ ಶೋಕಿಸಲು ಅಶೋಕವನದಆ ಮರ ಇಲ್ಲವಾದರೆಸೀತೆ ಸೀತೆಯೇ ಅಲ್ಲ!ರಾಮರಾಮರಾಮರಾ… ಎನ್ನುತ್ತಶೋಕಿಸಲು ಹೆಣ್ಣಿಗೆರಾಮನಂಥದ್ದೇ ಮರವೂ ಬೇಕು… ಕಾರಣ!ರಾವಣನಂಥ ಕೋಟೆಯೂ… ಪರಿಣಾಮ! ಒಂದುವೇಳೆ ಸೀತೆಯಾಗದಿದ್ದರೆ…ಏಳುಸುತ್ತಿನ ಕೋಟೆಯಲ್ಲಿ ರಾಕ್ಷಸಸೆರೆಹಿಡಿದ ಅನಾಮಿಕ ರಾಜಕುಮಾರಿಯಂತೆಒಳಗೇ ಬಾಯ್ಬಿಟ್ಟು ರೋಧಿಸುತ್ತಆತ ಏಳು ಕಡಲಾಚೆ ಗಿಳಿಯೊಳಗೇ ತನ್ನ ಜೀವವನ್ನುಬಚ್ಚಿಟ್ಟು ಮೊಸಳೆಯಂತೆ ಕೋಟೆಬಾಗಿಲಲ್ಲೇ ನಿದ್ರಿಸುವಾಗನಿದ್ದೆಯೇ ಬಾರದ ನಾನುಇದುವರೆಗೂ ಕಣ್ಣಲ್ಲೇ ಕಂಡಿರದ ರಾಜಕುಮಾರನನ್ನುಕಾಯುತ್ತ ಕಂಬನಿಯ ಕಡಲಲ್ಲಿಬಂಡೆಯಂತೆ ಈಜುತ್ತಿರಬೇಕು!ಅಜ್ಜಿಯು ಬೊಚ್ಚುಬಾಯಲ್ಲಿ ಕಟ್ಟಿದ ದಂತಕತೆಯಲ್ಲಿ ಉಳಿಯುವ ನಾಸ್ತಿತ್ವದಅನಾಮಧೇಯ ಪಾತ್ರವದು! ನಿದ್ದೆಯೇ ಬಾರದಿದ್ದರೆ…ಏನಾದರೊಂದು ಆಗಲೇಬೇಕಾಗುತ್ತದೆ!ರಾಮಾಯಣದ ಸೀತೆಯಾದರೆಕೋಟೆಯಾಚಿನ ಅಶೋಕವನದಲ್ಲಿಇಡೀ ಲೋಕಕ್ಕೇ ಕಾಣುವ ಹಾಗೆರಾಮಾ ರಾಮಾ ಸೀತಾರಾಮಾ ಎಂದುಬಾಯ್ಬಿಟ್ಟು ಎದೆಬಡಿದು ರೋಧಿಸುತ್ತಮಹಾನಾರೀ ಪತಿವೃತಾಶಿರೋಮಣಿಯಂತೆಕೊರಳ ತಾಳಿ ಹೆರಳ ಚೂಡಾಮಣಿಯನ್ನುಪದೇ ಪದೇ ಕಣ್ಣಿಗೊತ್ತಿಕೊಳ್ಳುತ್ತಅಶೋಕವನದ ನೆರಳಲ್ಲಿಶೋಕ ಕವನವಾಗಬಹುದುಸೀತೆಯ ಕವನ!ಆದರೆ ಶೀರ್ಷಿಕೆ… ಸೀತಾಯಣವಲ್ಲ ರಾಮಾಯಣ!ರಾಮಾಯಣದ ಸೀತೆ… ಗಂಡು ವಾಲ್ಮೀಕಿನುಡಿಸಿದಂತೆ ನುಡಿಯುವ ಹೆಣ್ಣು ಸೀತೆ!ರಾಮನು ಗೆದ್ದ ಸೊತ್ತು ಸೀತೆ!ರಾಮಾ ರಾಮಾ ಅನ್ನುತ್ತಲೇ ಹೋಮಾಗ್ನಿ ಸುತ್ತಿಅಯೋಧ್ಯಾ ಪ್ರವೇಶಅಲ್ಲಿಂದ ವನಪ್ರವೇಶ… ಕಾಡ್ಗಿಚ್ಚು!ಅಲ್ಲಿಂದ ಲಂಕಾಗ್ನಿಅಗ್ನಿಯಿಂದ ಅರಮನೆಅರಮನೆಯಿಂದ ಕಾನನಕಾನನದಿಂದ ಅವನಿ..ಕಾವ್ಯದಿಂದ ಕಾವ್ಯ… !ಅಗ್ನಿ ತಪ್ಪುವುದೇ ಇಲ್ಲ! ಮಂಥರೆಯ ಜಲಪಾತ್ರೆಯಲ್ಲೇಚಂದ್ರನನ್ನು ಪಡೆದು ರಾಮಚಂದ್ರನಾದವನಿಗೆಬಾಳಿಡೀ ಸುಳ್ಳಲ್ಲೇ ನಿಜದ ಭ್ರಮೆ!ನಿದ್ದೆಯೇ ಬಾರದಿದ್ದರೆ…ಭ್ರಮಾಯಣವೇ ಶುರುವಾಗುತ್ತದೆ!ಸೀತೆ ಮಿಥಿಲೆಯ ಜನಕನ ನೇಗಿಲ ಬಾಯಿಗೆ ಸಿಕ್ಕುಕೊನೆಗೆ ರಾಮನ ಬದಿಯಲ್ಲಿ ಸ್ಥಾಪಿತ ಮೂರ್ತಿಯಾಗಿಸುಳ್ಳಲ್ಲೇ ನಿಜವಾಗುತ್ತಾಳೆ…ಅಶ್ವಮೇಧ ಯಾಗದ ಹೊಗೆಯಲ್ಲಿನಹುಷ ಯಯಾತಿ ಪುರುವಂಶದಯುದ್ಧ ಹಿಂಸೆಗಳ ನೆತ್ತರ ಪುಣ್ಯತೀರ್ಥದಲ್ಲಿಮಿಂದು ಗಂಗೆಯಾಗುತ್ತಾಳೆ! ನಿದ್ದೆಯೇ ಬರುತ್ತಿಲ್ಲ!ಓಹ್! ಏನಾಶ್ಚರ್ಯ! ಅಗ್ನಿ! ಅಗ್ನಿ!ವಾಲ್ಮೀಕಿ ರಾಮಾಯಣದಅಗ್ನಿಕುಂಡದ ಅಗ್ನಿದಿವ್ಯದಿಂದೆದ್ದ ಸೀತೆಯು…ಕುವೆಂಪು ರಾಮಾಯಣದರ್ಶನಂನಹೊಸದರ್ಶನದ ಅಗ್ನಿಯೊಳಗೆರಾಮನೊಂದಿಗೇ ಪ್ರವೇಶಿಸಿಅವನು ಅವಳು ಬೇಧವಳಿದುಎದೆಯ ಅಗ್ನಿಕುಂಡದಿಂದೆದ್ದು ಬಂದೇಬಿಟ್ಟರಲ್ಲ! ಅದ್ವೈತ! ಇನ್ನಾದರೂ ನಿದ್ದೆ ಮಾಡಬೇಕು!ಅಯ್ಯೋ! ನನ್ನ ಎದೆಯನ್ನೇ ಸೀಳಿಕೊಂಡು ಹೊರಹೊಮ್ಮುತ್ತಿದೆತುಂಬು ಬಸುರಿಯ ಅರಣ್ಯರೋಧನ!ರಾಮದೇವರೇ!ಉತ್ತರ ರಾಮಚರಿತಕ್ಕೆ ಉತ್ತರ?ಅಲ್ಲೇ ನಿಲ್ಲು ಸೀತೇ!ಹೆಣ್ಣಿನ ಪಾತ್ರವನ್ನು ಇನ್ನು ಹೆಣ್ಣೇ ಬರೆಯಬೇಕು! ***********************************

ವಾರದ ಕವಿತೆ Read Post »

ಕಾವ್ಯಯಾನ

ಸ್ಮಿತಾಭಟ್ ಕಾವ್ಯಗುಚ್ಛ

ಸ್ಮಿತಾಭಟ್ ಕಾವ್ಯಗುಚ್ಛ ನಿರಂತರ ಈಗೀಗ ಒಲವಾಗುವದಿಲ್ಲಅವನ ಮೇಲೆಮುನಿಸು ಕೂಡಾ,, ಹೇಗಿದ್ದೀ ಎಂದು ಕೇಳದಿರೂಕೇಳದೇ ಹೋದರೂಅಂತಹ ವ್ಯತ್ಯಾಸವೇನಿಲ್ಲ, ಸಿಡಿಮಿಡಿ ಬಹಳ-ದಿನ ಉಳಿಯುವುದಿಲ್ಲಪ್ರೀತಿ ಆಗಾಗ-ಹುಟ್ಟಿದ್ದು ಗೊತ್ತೇ ಆಗುವದಿಲ್ಲ. ಇಣುಕಿಣುಕಿ ನೋಡುವ ರಸಿಕತೆಯಿಲ್ಲತಿರುಗಿ ನೋಡುವ ಆತುರವೂ ಇಲ್ಲಉಪಸ್ಥಿತಿ ಅನುಪಸ್ಥಿತಿಯಲ್ಲಿಬದಲಾವಣೆ ಇಲ್ಲ. ಎತ್ತಿಟ್ಟ ಸಾಲೊಂದುಓದದೇ ಹೋಗುತ್ತಾನವ,ಬರೆಯದೇ ಇಟ್ಟ ಹಾಡಿಗೆರಾಗ ಹುಡುಕಿ ಗುನುಗಿಕೊಳ್ಳುವಾಗಕದ್ದು ಕೇಳುವ ನವಿರುಅರಿತೂ ಅರಿಯದೇ ಆತುಕೊಳ್ಳುವ ಬೆರಗು ನೀ ನನ್ನೊಳಗಿರುವದಕ್ಕೆನಾ ನಿನ್ನೊಳಗಿರುವದಕ್ಕೆಸಾಕ್ಷಿ ಆಗಾಗ ಸಿಗುತ್ತದೆಮತ್ತದು ಅಧಿಕಾರವೂಮಾತೊಗೆದು ಹೋಗುವಾಗ ಸಣ್ಣ ಮೌನಮರಳಿ ಬರುವಾಗ ಎಲ್ಲ ದಮನ ಸವೆದ ದಾರಿಯಲೂ ಗರಿಕೆತಲೆಯೆತ್ತುತ್ತಲೇ ಇರುತ್ತದೆ.ಸಂಪೂರ್ಣ ಸಮ್ಮೋಹನಗೊಂಡ ಹಾಡೊಂದುಆಗಾಗ ಅಪರಿಚಿತವಾಗುತ್ತಲೇ ಇರುತ್ತದೆ ನೋವುಗಳಿಗೆ ಒಡ್ಡಿಕೊಂಡಷ್ಟೂಗಟ್ಟಿಯಾಗುತ್ತೇವೆಂಬುದುನಾವೇ ಗೀಚಿದ ಬರಹಕ್ಕೆ ಶರಾ ಬರೆದಂತೆ. ಎಂದೂ ಮುಗಿಯದ ನರಳಿಕೆಗೆಅಳುವ ಮನಸಿಗೂ ಸಣ್ಣ ಅಸಹ‌ನೆಸಹಿಸಿದಷ್ಟೂ ಸಹನೆ ಜಾಸ್ತಿ ಹೌದುಸೀದು ಹೋಗಿದ್ದು ಮಾತ್ರ ಮನಸು.. ಶಾಂತ ಕೊಳದಲಿ ಕಲ್ಲೊಗೆದುಇಣುಕುವ ಪ್ರವೃತ್ತಿ ಇಂದು ನಿನ್ನೆಯದಲ್ಲ.ಮೌನ ಕೊಲ್ಲುವ ಹತ್ಯಾರ;ಮಾತು ಇರಿಯುವ ಹತ್ಯಾರ; ಹೂತಿಟ್ಟ ಕನಸಿಗೆ ಕಾಮನಬಿಲ್ಲು-ಕಟ್ಟುವಾಗ ದಟ್ಟ ಮೋಡ;ಸಿಗದ ನಕ್ಷತ್ರಕ್ಕೆ ದಿನವೂ ಎಣಿಕೆ,ಬಾವಿಯಲಿ ಬಿದ್ದ ಚಂದ್ರನಿಗೆ ಮುಗಿಯದ ಹರಕೆ. ಎತ್ತಿಟ್ಟುಕೊಂಡಿದ್ದೆಲ್ಲ ಆಪತ್ತಿನೊಳಗಿಲ್ಲ.ಆಪ್ತಭಾವದೊಳಗೆ ಬರದೇ ಹೋದದ್ದು!?ಸಹಿಸಿಕೊಂಡಿದ್ದೂ ಸಹಿತವಲ್ಲ.ಅಳತೆಗೋಲೇ ಇಲ್ಲದ ಅನಾದರಚುಕ್ಕಿ ಇಟ್ಟಾಗಲೇ ಮುಗಿದು ಬಿಡಬೇಕು ಸಾಲು. ಮುಳ್ಳು ಕಿತ್ತಮೇಲೂ ಚುಚ್ಚುವ ನೋವು,ಬೇಕಂತಲೇ ಹಾಕಿಸಿಕೊಂಡ ಹಚ್ಚೆ,ಅಳಿದೂ ಉಳುಯುವ ತೊಳಲಾಟಕೊಡವಿಕೊಳ್ಳಲೂ ಒಂದು ಘಟ್ಟಿತನ ಬೇಕು.. ಕೂಡುವ ದಾರಿ* ವಿಶಾಲವಾಗಿ ಹರಡಿದ ಮರದ ಬುಡದಲ್ಲಿದಾರಿಗಳು ಸಂದಿಸುತ್ತಿದ್ದವು.ನಿತ್ಯ ಬರುವವರೂ ಮರದ ಸುತ್ತ ಕುಳಿತುದಣಿವಾರಿಸಿಕೊಂಡು ಮುಂದುವರಿದುಸಾಗುತ್ತಿತ್ತು ದಾರಿ. ಎಷ್ಟೊಂದು ಸಮಸ್ಯೆ ಗಳನ್ನು ಕೇಳುತ್ತಿತ್ತುಆ ಮರ ಮತ್ತು ಅದಕ್ಕಾತುಕೊಂಡ ದಾರಿ! ನನಗಾಗಿ ಕಾಯುತ್ತಿದ್ದ ನೀನು.ನಿನಗಾಗಿಯೇ ಕಾಯುತ್ತಿದ್ದ ನಾನು.ಈ ಕೂಡುವ ದಾರಿಯಲಿ ಕೂಡದೇ ಸಾಗಿಸಂಧಿಸುವ ದಿನಗಳು ಹುಟ್ಟಿ ಕೊಳ್ಳಲೇ ಇಲ್ಲ!ಅಲ್ಲಿಯೇ ಹುಟ್ಟಿ ಗರಿ ಗೆದರಿದ ಭಾವಗಳಿಗೆಗೂಡಿನಲಿದ್ದ ಮೊಟ್ಟೆಯಷ್ಟು ಬೆಚ್ಚಗಿನ ಭಾವ. ಈಗಲ್ಲಿ ಕವಲುಗಳು ಬಹಳ ಒಡೆದಿದೆ.ಗುರುತುಗಳಿಗೆಲ್ಲ ತೇಪೆ ಹಾಕಿದಂತೆಮೆತ್ತಿಕೊಂಡ ಟಾರುಮರಕ್ಕೆ ಕೆತ್ತಿದ ಗೆರೆಗಳು ನಿಧಾನವಾಗಿ ಮುಚ್ಚಿತ್ತಿದೆ.ನೆಲಕ್ಕೆ ಅಂಟಿಕೊಂಡ ಮೊಟ್ಟೆಯ ಜೀವಸಂಧಿಸುವ ಕಾಲುದಾರಿಬೆನ್ನು ಮಾಡಿ ನಿಂತ ಭಾವವೃತ್ತವೊಂದು ಸುತ್ತುವರಿದುಎತ್ತ ಸಾಗಿದರೂಒಂದು ದಾರಿ ಚಾಚಿಕೊಳ್ಳುತ್ತದೆ. ಮತ್ತದರ ಗಮ್ಯನಡೆದೇ ಅರಿಯಬೇಕಿದೆ! ***************************************** , **************************************************

ಸ್ಮಿತಾಭಟ್ ಕಾವ್ಯಗುಚ್ಛ Read Post »

ಕಾವ್ಯಯಾನ

ತೇಜಾವತಿ ಕಾವ್ಯಗುಚ್ಚ

ತೇಜಾವತಿ ಕಾವ್ಯಗುಚ್ಚ ಕಾರಣ ಕೇಳದಿರಿ ನೀವು.. ! ಸಪ್ಪೆ ಮೊಗದ ಹಿಂದಿನ ಕಾರಣ ಕೆಳದಿರಿ ನೀವುದುಃಖದ ಕಟ್ಟೆಯೊಡೆದುನೋವಿನ ಕೋಡಿಹರಿದುಕಂಬನಿಯ ಪ್ರವಾಹ ಹರಿದೀತು….! ಕ್ಷೇಮ ಕುಶಲೋಪರಿಯ ವಿಚಾರಿಸದಿರಿ ನೀವುಮುಳ್ಳುಹಾಸಿನ ಮೇಲೆ ನಡೆದುಬೆಂಕಿಯ ಕೆನ್ನಾಲಿಗೆಯಲಿ ಸಿಲುಕಿಅರೆಬೆಂದಿರುವ ಪಾದಗಳಲಿ ನೆತ್ತರು ತುಳುಕಾಡೀತು…! ಭವಿಷ್ಯದ ಗುರಿಯೇನೆಂದು ಪ್ರಶ್ನಿಸದಿರಿ ನೀವುತಮದ ಕೂಪದಲಿ ಮಿಂದುಕಣ್ಣೆದುರು ಹರಿದಾಡಿದ ನೆರಳು ಕಂಡುಮನಸು ಮತಿಭ್ರಮಣೆಗೆ ಒಳಗಾದೀತು.. ! ಕಲ್ಪನೆಯಾಚೆಗಿನ ವಾಸ್ತವವ ನೆನಪಿಸದಿರಿ ನೀವುಭರವಸೆಯ ಬೆಟ್ಟ ಕುಸಿದುನೆಮ್ಮದಿಯ ಕಣಿವೆ ಸವೆದುಕಂಡ ಕನಸುಗಳು ಕೊಚ್ಚಿ ಹೋದಾವು…! ಎಷ್ಟು ದಿನ ಅಂತ ಉಪ್ಪಿನಕಾಯಿ ಆಗಿರಲಿ ನಾನು? ಮೂಗಿಗೆ ಕಮ್ಮನೆ ಪರಿಮಳ ಬಂದೊಡನೆ ಬಾಯಲ್ಲಿ ನೀರೂರಿ ನಾಲಗೆ ಚಪ್ಪರಿಸಿ ನೆಕ್ಕುವರು…! ಉಪ್ಪಿನಕಾಯಿ ಊಟದ ರುಚಿಗಷ್ಟೇ ಹೊರತು ಊಟಕ್ಕಲ್ಲ..ಉಪ್ಪಿನಕಾಯಾಗಿ ನಾನಿಲ್ಲದಿದ್ದರೂ ಹೊಟ್ಟೆ ತುಂಬಾ ಉಣಬಹುದಲ್ಲದೆಊಟವೇ ಇಲ್ಲದಿದ್ದರೆ..?! ಉಪ್ಪಿನಕಾಯಾಗುವ ಕ್ಷಣಿಕ ಕೀರ್ತಿಗೆ ನಾನೇಕೆ ಭಾಜನವಾಗಲಿ..?ಒಪ್ಪತ್ತಿಗಾದರೂ ಊಟವಾಗಬೇಕು ನಾನುಉಂಡ ಕರುಳಿಗೆ ತೃಪ್ತಿ ನೀಡಬೇಕು ಬಹುಕಾಲದವರೆಗೆ. ರುಚಿಯೆಂದು ಅತಿಯಾಗಿ ಉಪ್ಪಿನಕಾಯನ್ನು ಸೇವಿಸಿದೆಯೋಬಿಪಿ ಏರುವುದು ಗ್ಯಾರಂಟಿ.ಜೊತೆಗೆ ಸರಣಿ ರೋಗರುಜಿನಗಳೂ ಫ್ರೀ.. ಬರಿದೇ ಊಟವಾದರೆಸ್ವಲ್ಪಮಟ್ಟಿಗಾದರೂ ಅರೋಗ್ಯ ವೃದ್ಧಿಸುವುದು ಮಿಂಚಿ ಮರೆಯಾಗುವ ಮಿಂಚುಹುಳಕ್ಕಿಂತಮಾಗಿದ ರಸಭರಿತ ಹಣ್ಣಾಗಬೇಕು ನಾನು..ನನ್ನ ಜೀವನ ಸಾರ್ಥಕವಾಗಬೇಕು ಖಗ ಮೃಗ ಹದ್ದು ಗಿಡುಗಗಳ ಕಾಟದ ಆರ್ಭಟದಲ್ಲಿಮಿಡಿಗಾಯಿ ಬಲಿಯುವುದಾದರೂ ಹೇಗೆ?ಹೌದು.. ನಾನೀಗ ಅವಿತು ಕೂರಲೇಬೇಕುಎಲೆಯ ಮರೆಯೊಳಗೆ ಅನಿವಾರ್ಯವಾಗಿ ಲೋಕಕ್ಕೆ ಕಣ್ಣಾಗಬೇಕಾದ ಹೆಣ್ಣಾಗಿರುವನಾನಂತೂ ಉಪ್ಪಿನಕಾಯಿ ಆಗಲಾರೆ ಬಿಡಿ..,ಹೂ ಹೀಚಾಗಿ ಕಾಯಾಗಿ ಬಲಿತುಮಾಗಿದ ಸತ್ವಯುತ ಹಣ್ಣಾಗಬಯಸುವೆರಸಪುರಿ ಮಾವು ನಾನು….. !

ತೇಜಾವತಿ ಕಾವ್ಯಗುಚ್ಚ Read Post »

ಕಾವ್ಯಯಾನ

ನಿನ್ನ ನಿರೀಕ್ಷೆಯಲ್ಲೇ..

ಕವಿತೆ ನಿನ್ನ ನಿರೀಕ್ಷೆಯಲ್ಲೇ.. ನೀ.ಶ್ರೀಶೈಲ ಹುಲ್ಲೂರು ಜೊತೆಯಿದ್ದವರೆಲ್ಲಹೋದರು ಮುಂದೆ ಮುಂದೆನಾನುಳಿದೆ ನಿನ್ನ ನಿರೀಕ್ಷೆಯಲ್ಲೇ…ನೀನು ಬಂದೇ ಬರುವೆ ಎಂಬಭಾಷೆ ಇತ್ತಲ್ಲ ಹೇಗೂ.. ನಿರ್ಗಮಿಸಿದ ದಿನಕರಇಣುಕಿದ ಚಂದ್ರ ನೀಲಾಗಸದಿನಕ್ಷತ್ರಗಳೆಲ್ಲ ಸಾಕ್ಷಿಯಾದವುಮಿನುಗಿತು ಬೆಳ್ಳಿಚುಕ್ಕಿಯೂಹುಂಜಗಳೆಲ್ಲ ಕೂಗು ಹೊಡೆದವುಕೋಗಿಲೆಯ ಕುಹೂ ಕುಹೂಆಗಲೂ ನಾ ನಿನ್ನ ನಿರೀಕ್ಷೆಯಲ್ಲೇ.. ದೇವ , ದೇವಲೋಕದಯೆ ತೋರಲಿಲ್ಲನಿಜಕ್ಕೂ ನೀ ಬರಲೇ ಇಲ್ಲಇಳೆಯಲಿ ಮೈದಳೆಯಿತುಹೊಸತು ಹೊಂಬೆಳಕುನಿನ್ನ ನೆನಪಲಿ ಮೊಳೆತುಕುಡಿಯೊಡೆದವು ಕಂಬನಿ ತುಂಬಿದೆದೆಯ ಶಿಖರಾಗ್ರದ ಮೇಲಿಂದಿಳಿದ ಕಣ್ಣಹನಿ ಕಣಿವೆಯ ದಾಟಿನೆಲವನಪ್ಪಿತು ಥಟ್ಟನೆಎದೆ ಮೇಲೊರಗಿದಸೆರಗಿಗೂ ತೇವ ಭಾಗ್ಯಆಗಲೂ ನೀನು ಬರಲಿಲ್ಲ ಆಗಸದಿ ಹೊಳೆಯತೊಡಗಿತು ಮಿಂಚು ಫಳಫಳನಡುಗತೊಡಗಿತುಭೂಮಿ ಬಾನು ಗಡ ಗಡಅಷ್ಟ ದಿಕ್ಕುಗಳಲೂಕಿವಿಗಡಚಿಕ್ಕುವ ಸದ್ದು ನೀರಿನ ಹನಿಗಳೊಂದಿಗೆಆಲಿಕಲ್ಲುಗಳ ಸುರಿಮಳೆಬಿರುಗಾಳಿಗೆ ನಡು ಮುರಿದುಕೊಂಡವು ಟೊಂಗೆಗಳುಆಗಲೂ ಸಹ ನಾನಿನ್ನ ನಿರೀಕ್ಷೆಯಲ್ಲೇ.. ಜೋರಾದ ಗಾಳಿ ಮಳೆಗೆಕಪ್ಪರಿಸಿ ಬೀಳತೊಡಗಿದವುನೆನೆದ ಗೋಡೆಗಳು ಧೊಪ್ಪನೆತುಂಬತೊಡಗಿತು ನೀರುಹೊಲ ಗದ್ದೆ ತೋಟಗಳಲ್ಲಿನದಿಗೂ ಪ್ರಳಯದ ಮಹಾಪೂರ ದೇವ,ದೇವಲೋಕದಯೆ ತೋರಲಿಲ್ಲ ಆಗಲೂ..ನನ್ನ ಕಾಲಡಿಯ ನೆಲಕುಸಿಯತೊಡಗಿತುಮೆಲ್ಲ ಮೆಲ್ಲಗೆ.. *************************************

ನಿನ್ನ ನಿರೀಕ್ಷೆಯಲ್ಲೇ.. Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಸರಳತೆಯ ಘನತೆ ನಾನು ಭೇಟಿಮಾಡಿದ ಅಪರೂಪದ ವ್ಯಕ್ತಿಗಳಲ್ಲಿ ಬನ್ನೂರು ನಿವಾಸಿ ಅದೀಬ್ ಅಖ್ತರ್ ಅವರೂ ಒಬ್ಬರು. ಅದೀಬರ ಲಘು ಬರೆಹಗಳನ್ನು ಪತ್ರಿಕೆಗಳಲ್ಲಿ ಓದಿದ್ದೆ. ಒಂದು ಲೇಖನದಲ್ಲಿ ಅವರು ತಾನೊಬ್ಬ ಉರ್ದು ಮಾಧ್ಯಮದ ವಿದ್ಯಾರ್ಥಿಯೆಂದೂ, ನಡುಪ್ರಾಯದಲ್ಲಿ ಕನ್ನಡ ಕಲಿತು ಬರೆಯಲು ಆರಂಭಿಸಿದವನೆಂದೂ ಹೇಳಿಕೊಂಡಿದ್ದರು. ಇದು ಕುತೂಹಲ ಹುಟ್ಟಿಸಿತು. ಅವರೂ ನನ್ನನ್ನು ನೋಡಬಯಸಿ ಪತ್ರ ಬರೆದರು. ಅಂಗಡಿ ಬಿಟ್ಟು ಹೋಗಲು ಸಾಧ್ಯವಾಗದೆ ಇರುವುದರಿಂದ ನಾನೇ ಬರಬೇಕೆಂದು ತಿಳಿಸಿದ್ದರು. ಬನ್ನೂರಿಗೆ ಹೋದೆ. ಅದೀಬರ ವಿಳಾಸ ಬಹಳ ಸುಲಭ- ಬಸ್ಸುನಿಲ್ದಾಣ ಎದುರಿನ ಚಪ್ಪಲಿ ಅಂಗಡಿ. ಕುಟುಂಬಕ್ಕೆ ಇದುವೇ ಆಧಾರ. ನಾನು ಅಂಗಡಿಯಲ್ಲಿದ್ದಷ್ಟು ಹೊತ್ತು ಅಲ್ಲಿಗೆ ಯಾವ ಗಿರಾಕಿಗಳು ಬರಲಿಲ್ಲ. ಹೆಚ್ಚಿನ ಜನ ಮೈಸೂರಿಗೆ ಹೋದಾಗ ಚಪ್ಪಲಿ ಕೊಂಡುಕೊಳ್ಳುತ್ತಾರೆ. ನಿಮ್ಮ ಗಿರಾಕಿಗಳು ಯಾರೆಂದು ಕೇಳಿದೆ. ಶಾಲಾ ಮಕ್ಕಳು ಯೂನಿಫಾರಂ ಜತೆಗೆ ಹಾಕಿಕೊಳ್ಳುವ ಬೂಟುಗಳಿಂದ ಕೊಂಚ ವ್ಯಾಪಾರವಾಗುತ್ತೆ ಎಂದರು. ನನಗೆ ಎದ್ದು ಕಂಡಿದ್ದು ಅವರ ಜತೆ ನಾವು ಮಾತಾಡುವಾಗ ಕರುಬುತ್ತ ತಕರಾರು ಮಾಡುತಿದ್ದ ಬೆಕ್ಕು. ಅದೀಬ್ ಅಂಗಡಿಯಲ್ಲಿ ಮಗನನ್ನು ಕೂರಿಸಿ ನನ್ನನ್ನು ಮನೆಗೆ ಕರೆದುಕೊಂಡು ಬಂದರು. ಅದೊಂದು ತೀರ ಚಿಕ್ಕಮನೆ. ಕುರ್ಚಿಯಿಲ್ಲದ ಚಿಕ್ಕ ಹಾಲು. ಅಗತ್ಯಕ್ಕಿಂತ ಹೆಚ್ಚಿನ ಪಾತ್ರೆಯಿರದ ಅಡುಗೆಮನೆ. ಮಂಚವಿಲ್ಲದ ಒಂದು ಮಲಗುಕೋಣೆ. ಕಳ್ಳಹೊಕ್ಕ ಮನೆಯಂತಿದ್ದ ಅಲ್ಲಿ ಬೆಲೆಬಾಳುವ ವಸ್ತುಗಳೇ ಇರಲಿಲ್ಲ. ಅದೀಬ್ ಭಾಷಣಕ್ಕೆ ಹೋದಾಗ ಸಭೆಗಳಲ್ಲಿ ಕೊಡುವ ಕಾಣಿಕೆಗಳನ್ನು ದಾರಿಯಲ್ಲಿ ಸಿಗುವ ಯಾರಿಗಾದರೂ ಕೊಟ್ಟುಬರುತ್ತಾರಂತೆ. ಅವರಿಗೊಮ್ಮೆ ಶಾಲೆಯವರು `ಇದನ್ನು ಯಾರಿಗೂ ದಾನ ಕೊಡಬಾರದು; ಸಂಸ್ಥೆಯ ನೆನಪಿಗೆ ಇಟ್ಟುಕೊಳ್ಳಬೇಕು’ ಎಂದು ಕರಾರು ಮಾಡಿ ಶಾಲು ಹೊದೆಸಿದರಂತೆ. ಅದೀಬ್ ಪ್ರಾರ್ಥನೆಯಲ್ಲಿ ಚೆನ್ನಾಗಿ ಭಾವಗೀತೆ ಹಾಡಿದ ಒಬ್ಬ ಹುಡುಗಿಗೆ ಗುಟ್ಟಾಗಿ ಅದನ್ನು ಕೊಟ್ಟರಂತೆ. ಅವರ ಮಡದಿಯ ಮುಖದಲ್ಲಿ ಪ್ರಸನ್ನತೆಯು ಕಾವೇರಿ ತೀರದ ಮಾಗಿದ ಬತ್ತದ ತೆನೆಯ ಗದ್ದೆಗಳಂತೆ ತೊನೆದಾಡುತ್ತಿತ್ತು. ಇದಕ್ಕೆ ಅವರ ಅಸಂಗ್ರಹ ತತ್ವವೂ ಕಾರಣವಿರಬಹುದು ಎನಿಸಿತು. ಕೂಡಲೇ ನನಗೆ ನಮ್ಮ ಮಧ್ಯಮವವರ್ಗದ ಮನೆಗಳು ನೆನಪಾದವು. ಶಾಪಿಂಗ್ ಮಾಡಲು ತ್ರಾಣವಿಲ್ಲದಿದ್ದರೂ ಕೊಳ್ಳುಬಾಕತನದ ಕೆಟ್ಟಹುಚ್ಚು ಈ ವರ್ಗಕ್ಕೆ. ಓಡಾಡಲು ಜಾಗವಿಲ್ಲದಂತೆ ಹಾಲಿನಲ್ಲಿ ಫರ್ನಿಚರು; ಗೊಂಬೆಗಳೂ ಫಲಕಗಳೂ ತುಂಬಿದ ಶೋಕೇಸು, ಟಿವಿ; ಸೀರೆಭರಿತ ವಾರ್ಡ್‍ರೋಬು; ಎರಡು ತಿಂಗಳು ಪುನರಾವರ್ತನೆ ಮಾಡದೆ ಉಡಬಹುದಾದಷ್ಟು ಪ್ಯಾಂಟು-ಶರ್ಟು ಮೆರೆಯುತ್ತಿರುತ್ತವೆ. ಇಷ್ಟಾದರೂ ಪೇಟೆಗೆ ಪ್ರವಾಸ ಹೋದರೆ, ಶಾಪಿಂಗ್ ಚಟ ಜಾಗೃತವಾಗುತ್ತದೆ. ನಾನು ಮದುವೆಯಾದ ಹೊಸತರಲ್ಲಿ ಬಂಧುಗಳ ಮನೆಯಲ್ಲೊಮ್ಮೆ ಊಟಕ್ಕೆ ಕರೆದಾಗ ವಸತಿ ಮಾಡಿದ್ದು ನೆನಪಾಗುತ್ತಿದೆ. ನಮಗೆ ಬಿಟ್ಟುಕೊಟ್ಟಿದ್ದ ಬೆಡ್‍ರೂಮಿನ ಮೂಲೆಯಲ್ಲಿ ಕುರ್ಚಿ ಟೀಪಾಯಿ ಒಟ್ಟಲಾಗಿತ್ತು. ಅವುಗಳ ಮೇಲೆ ಉಡುಗೊರೆ ಪ್ಯಾಕು, ಟೇಬಲ್‍ಫ್ಯಾನು ಹೇರಲಾಗಿತ್ತು. ಅವು ಯಾವುದೇ ಗಳಿಗೆಯಲ್ಲಿ ಕವುಚಿ ಮೈಮೇಲೆ ಬೀಳುವಂತೆ ಕಂಡು ನನಗೆ ನಿದ್ದೆಯೆ ಹತ್ತಲಿಲ್ಲ. ಹೊಸಸೊಸೆಯ ಜತೆ ಬಂದಿದ್ದ ಹೊಸ ಫರ್ನಿಚರುಗಳು ಹಳತನ್ನು ಮೂಲೆಗುಂಪು ಮಾಡಿದ್ದವು. ಹಪಾಪಿತನ, ವರದಕ್ಷಿಣೆಗಳಿಂದ ಬಹುತೇಕರ ಮನೆಗಳು ಗೋಡೌನಾಗಿರುತ್ತವೆ. ಅಗತ್ಯವಿರದಾಗ ಬೇಡ ಎನ್ನುವ ಸಂಯಮ, ಹೆಚ್ಚಿದ್ದಾಗ ಹಂಚಿಕೊಂಡು ಬದುಕುವ ಖುಶಿಯನ್ನೇ ಮಧ್ಯಮವರ್ಗದ ನಾವು ಕಳೆದುಕೊಂಡಿದ್ದೇವೆ. ಮಾರುಕಟ್ಟೆ ನಮ್ಮನ್ನು ಹುಳಗಳನ್ನಾಗಿ ಮಾಡಿಬಿಟ್ಟಿದೆ. ಮಧ್ಯಮವರ್ಗದ ಈ ಕೊಳ್ಳುಬಾಕುತನವು ಮೇಲ್‍ಮಧ್ಯಮ ವರ್ಗದ ವಿಲಾಸಿ ಬದುಕಿನ ಕರುಣಾಜನಕ ಅನುಕರಣೆಯ ಪರಿಣಾಮ. ಮಾರುಕಟ್ಟೆ ಸಂಸ್ಕøತಿಯ ಉಬ್ಬರದ ಈ ದಿನಮಾನದಲ್ಲಿ, ಶಾಪಿಂಗ್ ಸೋಂಕುರೋಗದಂತೆ ಹರಡುತ್ತಿದೆ. ಪರಿಚಿತರೊಬ್ಬರು `ಕೋನ್ ಬನೇಗಾ ಕಡೋಡ್ ಪತಿ’ ಕಾರ್ಯಕ್ರಮಕ್ಕೆ ಬಚನ್ ಹೊಸಹೊಸ ಕೋಟು ಹಾಕಿಕೊಂಡು ಬರುತ್ತಾನಲ್ಲ, ಅವನಲ್ಲಿ ಎಷ್ಟು ಕೋಟುಗಳಿರಬಹುದು ಎಂದು ವಿಸ್ಮಯಪಡುತ್ತಿದ್ದರು. ಆ ನಟನ ದಿರಿಸು ಸ್ಟುಡಿಯೋದ್ದೂ ಇದ್ದೀತು. ಆತ ತನ್ನ ಕೋಟುಗಳನ್ನು ಇಂಗ್ಲೆಂಡಿನಲ್ಲಿ ಹೊಲಿಸುತ್ತಾನೆಂಬ ದಂತಕತೆಯಿದೆ. ಸಿರಿಯಗುಡ್ಡೆಯ ಮೇಲೆ ಕುಳಿತವರಿಗೆ ಇದು ದೊಡ್ಡ ವಿಚಾರವಲ್ಲ. ವ್ಯಂಗ್ಯವೆಂದರೆ, `ಅಮಿತಾಭ’ ಎನ್ನುವುದು ಅಸಂಗ್ರಹತತ್ವ ಪ್ರತಿಪಾದಿಸಿದ ಬುದ್ಧನ ಹೆಸರುಗಳಲ್ಲಿ ಒಂದು. ನಾನಿದ್ದಷ್ಟೂ ಹೊತ್ತು ಅದೀಬ್ ಬುದ್ಧನ ಬಗ್ಗೆಯೇ ಮಾತಾಡಿದರು. ನಾನು ಹೊರಡುವಾಗ ಭಿಕ್ಷುವೊಬ್ಬರು ಬರೆದ ಚಿಕ್ಕ ಪುಸ್ತಕವನ್ನು ಕಾಣಿಕೆಯಾಗಿ ಕೊಟ್ಟರು. `ಮನುಷ್ಯನ ವೇದನೆಗೆ ಕಾರಣ ಎಲ್ಲಿದೆ?’ ಎಂಬುದನ್ನು ವಿಶ್ಲೇಷಿಸುವ ಬೌದ್ಧ ಚಿಂತನೆಯ ಪುಸ್ತಿಕೆಯದು. ಹತ್ತಿಪ್ಪತ್ತು ಪುಸ್ತಕಗಳಿದ್ದ ಅವರ ಕಪಾಟನ್ನು ಕುತೂಹಲದಿಂದ ನೋಡುತ್ತ ಒಂದು ಪುಸ್ತಕ ತೆರೆದು ಓದಲಾರಂಭಿಸಿದೆ. ಅದನ್ನು ಕಂಡ ಅದೀಬ್ `ನೀವು ಓದಿಲ್ಲವಾದರೆ ತೆಗೆದುಕೊಂಡು ಹೋಗಿ. ನಾನು ಮುಗಿಸಿದ್ದೇನೆ. ನಿಮ್ಮದು ಮುಗಿದ ಮೇಲೆ ಅಗತ್ಯವುಳ್ಳ ಬೇರೆಯವರಿಗೆ ದಾಟಿಸಿ’ ಎಂದು ನನಗೆ ದಾನಮಾಡಿದರು. ಅವರು ಓದಿದ ಮೇಲೆ ಯಾವ ಪುಸ್ತಕವನ್ನೂ ತಮಗಾಗಿ ಇಟ್ಟುಕೊಂಡಂತೆ ಕಾಣಲಿಲ್ಲ. ಕೆಲವು ವರ್ಷಗಳ ಹಿಂದೆ , ನಾವು ಕೆಲವು ಗೆಳೆಯರು ಸೇರಿ ಬೌದ್ಧಚಿಂತಕರನ್ನು ಭೇಟಿಮಾಡುತ್ತ ಕರ್ನಾಟಕ ತಿರುಗಾಡಿದ್ದುಂಟು. ಆಗ ಅದೀಬ್ ಬೌದ್ಧದರ್ಶನದ ಶ್ರೇಷ್ಠ ಮೌಲ್ಯಗಳನ್ನು ಬದುಕುತ್ತಿರುವ ಸಾಧಕರೆಂದು ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಅವರ ಜತೆ ಅರ್ಧದಿನ ಕಳೆಯುತ್ತಿದ್ದೆವು. ಅದೀಬ್ `ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ತನದಿಂದ ಮನಸ್ಸನ್ನು ಎಷ್ಟು ನಿರಾಳ ಇಟ್ಟುಕೊಂಡಿದ್ದಾರೆ! ಸಂತೃಪ್ತವಾಗಿರುವ ಅವರ ಮುಖ ನೋಡುವಾಗ, ಅದನ್ನು ಅವರು ತಮ್ಮ ಮಡದಿಯಿಂದಲೂ ಪಡೆದಿರಬಹುದು ಅನಿಸಿತು. ಗಾಂಧಿಯ ಬದುಕೂ ಸರಳವಿತ್ತು. ಅವರ ಟೀಕಾಕಾರರು `ಬಾಪು, ನಿಮ್ಮ ಸರಳತೆಗಾಗಿ ಎಷ್ಟೊಂದು ಖರ್ಚು ಮಾಡಲಾಗುತ್ತಿದೆ ಗೊತ್ತೇ?’ ಎಂದು ಕೆಣಕುತ್ತಿದ್ದರು. ಉದ್ಯಮಿಗಳ ಅತಿಥಿ ಗೃಹದಲ್ಲಿ ಉಳಿದುಕೊಳ್ಳುತ್ತಿದ್ದ ಅವರನ್ನು ಛೇಡಿಸುತ್ತಿದ್ದರು. ಭಾಷಣ ಮಾಡುವುದು ಬರೆಯುವುದು ಸುಲಭ. ಸವಾಲಿರುವುದು ಬದುಕುವುದರಲ್ಲಿ. ಬಸವಣ್ಣ ನುಡಿಯ ಚಹರೆಗಳನ್ನು ಮುತ್ತಿನ ಹಾರದಂತೆ ಮಾಣಿಕ್ಯದ ದೀಪ್ತಿಯಂತೆ ಸ್ಫಟಿಕದ ಶಲಾಕೆಯಂತೆ ಇರಬೇಕು ಎಂದೆಲ್ಲ ಪಟ್ಟಿ ಮಾಡುತ್ತಾನೆ. ಕೊನೆಯಲ್ಲಿ ಮಾತಿಗೊಂದು ಶರತ್ತು ವಿಧಿಸುತ್ತಾನೆ- ನುಡಿದಂತೆ ನಡೆಯಲಾಗದಿದ್ದರೆ ವ್ಯರ್ಥ ಎಂದು. ನಾವಾಡಿದ ಮಾತು ನಮಗೇ ಹಗೆಯಾಗದಂತೆ ಬದುಕುವುದು ಬಹಳ ಕಷ್ಟ. ಬದುಕಿದ್ದನ್ನು ಮಾತಿಗೆ ತಾರದೆ ಬದುಕುವುದು ಇನ್ನೂ ದೊಡ್ಡದು. ಅದೀಬರನ್ನು ಭೇಟಿಮಾಡಿ ಬಂದ ಬಳಿಕ ನನ್ನಲ್ಲಿ ಲಜ್ಜೆ ಹುಟ್ಟಿತು. ಅವರ ಬಾಳಿನಲ್ಲಿ ತೋರಿಕೆಯಿರಲಿಲ್ಲ. ಸ್ವಯಂತೃಪ್ತ ಘನತೆಯಿತ್ತು. ಅದನ್ನು ಸರಳತೆಯಲ್ಲಿ ಹುಟ್ಟುವ ಘನತೆ ಎನ್ನಬಹುದು.ಈ ತೃಪ್ತಸ್ಥಿತಿಯಲ್ಲಿ ಲೋಕದ ಆಗುಹೋಗುಗಳಿಗೆ ತಲೆಕೆಡಿಸಿಕೊಳ್ಳದ ನಿರುಮ್ಮಳತೆ ಇರಬಹುದೇ? ತಾನು ಬದುಕದೆ ಊರಿಗೆಲ್ಲ ತತ್ವಸಾರುವುದು ಒಂದು ಮಿತಿ; ಸರಳತೆ ಘನತೆ ಸ್ವಯಂತೃಪ್ತಿಗಳು ಸ್ವಕೇಂದ್ರಿತ ಮನೋಭಾವಕ್ಕೆ ಕಾರಣವಾದರೆ ಇನ್ನೊಂದು ಮಿತಿ. ದೊಡ್ಡಬಾಳು ಮತ್ತೊಂದು ಬಾಳನ್ನು ಸೋಂಕುವ ಅಗತ್ಯವಿದೆ. ಬುದ್ಧನ ಬಾಳು ಕೇವಲ ವಜ್ರಪ್ರಭೆಯಾಗಿರಲಿಲ್ಲ. ಸಂಪರ್ಕಕ್ಕೆ ಬಂದ ದೀಪಗಳನ್ನೂ ಬೆಳಗಿಸಬಲ್ಲ ದೀಪವಾಗಿತ್ತು. ಕರಕುಗಟ್ಟಿದ್ದ ಬತ್ತಿಕುಡಿಯನ್ನು ಸ್ವಚ್ಛಗೊಳಿಸಿಕೊಂಡು ನಾನೂ ದೀಪ ಹತ್ತಿಸಿಕೊಳ್ಳಲು ಯತ್ನಿಸಿದೆ. ಅದು ಉಜ್ವಲಿಸಲಿಲ್ಲ. ಆದರೆ ಮಿಣಿಮಿಣಿಗುಟ್ಟಿತು ****************************

Read Post »

ಕಾವ್ಯಯಾನ

ಕವಿತೆಯೆಂದರೆ…

ಕವಿತೆ ಕವಿತೆಯೆಂದರೆ… ವಿದ್ಯಾಶ್ರೀ ಎಸ್ ಅಡೂರ್ ಕವಿತೆಯೆಂದರೆ ಮನದೊಳಗೊಂದುಚುಚ್ಚುವ ನೋವು….ಕವಿತೆಯೆಂದರೆ ಉಕ್ಕಿಹರಿವಮನಸಿನ ನಲಿವು…. ಕವಿತೆಯೆಂದರೆ ಮೌನಮನಸಿನಸ್ವಚ್ಚಂದ ಆಕಾಶಕವಿತೆಯೆಂದರೆ ಗಿಜಿಗುಡುವಏಕತಾನತೆಯ ಆಕ್ರೋಶ ಕವಿತೆಯೆಂದರೆ ಸುಮ್ಮನೆನಿಡುಸುಯ್ದ ನಿಟ್ಟುಸಿರುಕವಿತೆಯೆಂದರೆ ನೀರು-ಗೊಬ್ಬರಹಾಕಿ ಬೆಳೆಸಿದ ಹಸಿರು ಕವಿತೆಯೆಂದರೆ ರಂಗುರಂಗಿನಬಣ್ಣ ಬಣ್ಣದ ಕಾಮನಬಿಲ್ಲುಕವಿತೆಯೆಂದರೆ ಗಾಢಾಂಧಕಾರದಿಬಿಡುಗಡೆಯ ಸೊಲ್ಲು ಕವಿತೆಯೆಂದರೆ ಮೌನಮನಸ್ಸಿನ ಟಿಪ್ಪಣಿಕವಿತೆಯೆಂದರೆ ಕೂಗಿ ಕರೆಯುವಹಾರಿ ಸಾರುವ ಪುರವಣಿ ಕವಿತೆಯೆಂದರೆ ಜಗಕ್ಕೆ ಬೆನ್ನು ಮಾಡಿಉಪ್ಪಿ ಅಪ್ಪಿದ ಮೌನಕವಿತೆಯೆಂದರೆ ಅಂಗೈಯಲ್ಲಿಮೊಗೆಮೊಗೆದು ಅನುಭವಿಸುವ ಜೀವನ ಕವಿತೆಯೆಂದರೆ ಹೆಪ್ಪುಗಟ್ಟಿದಭಾವಗಳ ಕಾರ್ಮುಗಿಲುಕವಿತೆಯೆಂದರೆ ಧುಮ್ಮಿಕ್ಕಿ ಸುರಿಯುವಮನಸಿನ ದಿಗಿಲು ಕವಿತೆಯೆಂದರೆ ಬಿದ್ದಾಗಆಸರೆ ಕೊಡುವ ನೆಲಕವಿತೆಯೆಂದರೆ ಸದಾ ಹಸಿರುತೆನೆಗಳಿಂದ ತೊಯ್ದಾಡುವ ಹೊಲ ಕವಿತೆಯೆಂದರೆ ಮನದ ತಮ ಕಳೆಯಲುನಾನೇ ಹಚ್ಚಿದ ದೀಪಕವಿತೆಯೆಂದರೆ ಬಗೆ ಬಗೆಭಾವದ ಬಗೆಬಗೆ ರೂಪ ಕವಿತೆಯೆಂದರೆ ನನ್ನ ಸದಾಪೊರೆವ ಅಮ್ಮನ ಮಡಿಲುಕವಿತೆಯೆಂದರೆ ಭಾವದ ಕೂಸುಮಲಗಿರುವ ತೂಗುವ ತೊಟ್ಟಿಲು ********************************************

ಕವಿತೆಯೆಂದರೆ… Read Post »

ಪುಸ್ತಕ ಸಂಗಾತಿ

ಕಾಡ ಸೆರಗಿನ ಸೂಡಿ

ಪುಸ್ತಕ ಪರಿಚಯ ಕಾಡ ಸೆರಗಿನ ಸೂಡಿ ಕಾಡ ಸೆರಗಿನ ಸೂಡಿಕಾದಂಬರಿಮಂಜುನಾಥ್ ಚಾಂದ್ಅಕ್ಷರ ಮಂಡಲ ಪ್ರಕಾಶನ ಮಂಜುನಾಥ್ ಚಾಂದ್ ಅವರು ಪತ್ರಕರ್ತರು. ನಾಡಿನ ಹಲವು ಪತ್ರಿಕೆಗಳ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಚಾಂದ್ ‘ ಓ ಮನಸೇ’ ಪಾಕ್ಷಿಕದಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೂಲತಃ ಕುಂದಾಪುರ ಸಮೀಪದ ಮರವಂತೆಯ ಮಗ್ಗುಲಲ್ಲಿ ಇರುವ ತ್ರಾಸಿ ಎಂಬ ಪುಟ್ಟ ಹಳ್ಳಿಯವರು. ‘ಅಮ್ಮ ಕೊಟ್ಟ ಜಾಜಿ ದಂಡೆ, ಕದ ತೆರೆದ ಆಕಾಶ’ ಅವರ ಪ್ರಮುಖ ಕೃತಿಗಳು. ‘ಕಾಡ ಸೆರಗಿನ ಸೂಡಿ’ ಅವರ ಪ್ರಥಮ ಕಾದಂಬರಿ. ಕಾಡ ಸೆರಗಿನ ಸೂಡಿ ಕಾದಂಬರಿಯು 1930- 34ರ ಕಾಲಘಟ್ಟದಲ್ಲಿ ನಡೆಯುವ ಕಥಾನಕ. 1934ರ ಫೆಬ್ರವರಿ ಇಪ್ಪತ್ತಾರರಂದು ಮಹಾತ್ಮ ಗಾಂಧೀಜಿಯವರು ಕುಂದಾಪುರಕ್ಕೆ ಬಂದ ಎಳೆಯನ್ನು ಇಟ್ಟುಕೊಂಡು ಮಂಜುನಾಥರು ಈ ಕೃತಿಯನ್ನು ರಚಿಸಿದ್ದಾರೆ. ಗಾಂಧೀಜಿ ಬರುವ ಸಮಯದಲ್ಲಿ ಎಲ್ಲೋ ಪ್ರಕಟವಾದ ಪತ್ರಿಕೆ, ಅದು ಮತ್ಯಾವುದೋ ದೂರದ ಗ್ರಾಮದ ಮನೆಮನೆಗೆ ತಲುಪುತ್ತಿದ್ದ ರೀತಿ, ಆ ಗ್ರಾಮದ ಪ್ರಮುಖರು, ಅವರ ಜೀವನ, ಕಾಡಿನಲ್ಲಿ ಜೀವನ ನಡೆಸುತ್ತಿದ್ದ ಬುಡಕಟ್ಟು ಜನಾಂಗದ ತನಿಯಾ ಮತ್ತು ಸನಿಯಾರು ದಂಪತಿಯ ಚಿತ್ರಣ, ಬ್ರಿಟಿಷ್ ಅಧಿಕಾರಿಯ ಕ್ರೂರತೆ, ಮುಂದೆ ಆತ ಒಂದು ಅನೂಹ್ಯ ಕ್ಷಣದಿಂದ ಬದಲಾಗುವುದು, ಊರಿನವರೆಲ್ಲರ ಜೊತೆ ಒಂದಾಗಿ ಬಾಳುವ ಮುಗ್ಧ ತನಿಯಾ, ಸ್ವಾತಂತ್ರ್ಯ ಹೋರಾಟಗಾರರ ಸಾವುಗಳಿಂದ ಚೇತರಿಸಿಕೊಂಡು ಚಳುವಳಿಗೆ ತಮ್ಮದೇ ಕೊಡುಗೆಯನ್ನು ಕೊಡುವ ಮಹಿಳೆಯರು… ಹೀಗೆ ಕಾದಂಬರಿ ಸೌಪರ್ಣಿಕಾ ನದಿಯಂತೆ ಸರಳವಾಗಿ, ಶಾಂತವಾಗಿ ಮತ್ತು ಸುಂದರವಾಗಿ ಸಾಗುತ್ತದೆ. ಯಾವುದೇ ಜನಪ್ರಿಯ ಧಾಟಿಯನ್ನು ಕೃತಿಕಾರರು ಅವಲಂಬಿಸದೇ ತಮ್ಮದೇ ಓಘದಲ್ಲಿ ಕಥೆಯನ್ನು ಹೇಳಿರುವುದು ಇಲ್ಲಿಯ ವಿಶೇಷವಾಗಿದೆ. ನದಿ, ಕಾಡು, ಗುಡ್ಡ, ಜಲಪಾತ, ಮರ, ಬಳ್ಳಿಗಳು ಕಾದಂಬರಿಯ ಉದ್ದಕ್ಕೂ ಹರಡಿಕೊಂಡಿವೆ. ಪ್ರಕೃತಿಯ ದಿವ್ಯ ಸಾನಿಧ್ಯದಲ್ಲಿ ಅಲೆದಾಡಿದ ಅನುಭವ ಓದುಗನಿಗೆ ದೊರೆಯುತ್ತದೆ. ಚಾಂದ್ ಅವರಲ್ಲಿರುವ ನಿರೂಪಕ ಇಲ್ಲಿ ಕಾವ್ಯಾತ್ಮಕವಾಗಿ ಗೋಚರಿಸುತ್ತಾನೆ. ಕುಂದಾಪುರ ಭಾಷೆಯ ಸೊಗಡನ್ನು ಇಲ್ಲಿ ಸವಿಯಬಹುದು. ಇಲ್ಲಿರುವ ಶೀರ್ಷಿಕೆ ಸೂಡಿ ಎನ್ನುವುದು ಇಡೀ ಗ್ರಾಮದ, ಪಂಚಮುಖಿ ಕಣಿವೆಯ ಬೆಳಕೂ, ಜ್ಯೋತಿಯೂ ಆಗಿದೆ, ಪ್ರತಿಭಟನೆಯ ಅಸ್ತ್ರವೂ ಆಗಿದೆ ಮತ್ತು ಪ್ರತಿರೋಧ ತೋರಿದವರ ಪಾಲಿನ ಕೊಳ್ಳಿಯೂ ಆಗಿದೆ. ಹೀಗೆ ಗಾಂಧೀಜಿಯವರು ನಡೆದ ನಾಡಿನ ಅದ್ಭುತವಾದ ಕಥಾನಕವನ್ನು ಚಾಂದ್ ಅವರು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಶ್ರೀಪತಿ ಮತ್ತು ಗಿರಿಜಾ ಹೆಗಡೆ, ತನಿಯಾ- ಸನಿಯಾರು, ಸುಂದರ ಶೆಟ್ಟಿ, ಶಿವರಾಮ ಪಂಡಿತ, ರಾಬರ್ಟ್ ಕೇವಿನ್ ಹೀಗೆ ಪ್ರತೀ ಪಾತ್ರವನ್ನು ಅವರು ತೀವ್ರವಾಗಿ ಚಿತ್ರಿಸಿದ್ದಾರೆ. ಪ್ರಕೃತಿ ಸಹ ಇಲ್ಲೊಂದು ಪಾತ್ರವಾಗಿ ಮಿಂಚುತ್ತದೆ. ಸುಧಾಕರ ದರ್ಭೆ ಅವರ ಮುಖಪುಟ ವಿನ್ಯಾಸ ಮನಸೆಳೆಯುತ್ತದೆ. ಸದಾ ಒಳಿತನ್ನೇ ಆಶಿಸುವ ಸದಾಶಯದ ಕೃತಿಯಿದು. ಮನೋಜಗತ್ತು ತಲ್ಲಣಿಸುತ್ತಿರುವ ಈ ಸಂದರ್ಭದಲ್ಲಿ ನೆಮ್ಮದಿಯ ಓದಿಗೆ ‘ಸೂಡಿ’ಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ***************************  ಡಾ. ಅಜಿತ್ ಹರೀಶಿ

ಕಾಡ ಸೆರಗಿನ ಸೂಡಿ Read Post »

ಪುಸ್ತಕ ಸಂಗಾತಿ

‘ಕಾಗೆ ಮುಟ್ಟಿದ ನೀರು’

ಪುಸ್ತಕ ಪರಿಚಯ ನಾನುಕಂಡಂತೆ– ‘ಕಾಗೆಮುಟ್ಟಿದನೀರು’         ಆಫೀಸಿನ ಕೆಲಸ ಮುಗಿಸಿ, ಬರುತ್ತಾ ದಾರಿಯ ನಡುವೆ ಸಿಗುವ ‘ನವಕರ್ನಾಟಕ’ದಲ್ಲಿ ಪುಸ್ತಕ ಖರೀದಿಸಿದವಳೇ ಮನೆಗೆ ಬಂದೆ. ಮನೆವಾರ್ತೆ, ಮಕ್ಕಳ ಉಸಾಬರಿ, ಊಟ ಮತ್ತೆಲ್ಲಾ ಮುಗಿಸಿ ಪುಸ್ತಕ ಕೈಯಲ್ಲಿ ಹಿಡಿದೆ.        ಅದೇನು ಪುಸ್ತಕ ಓದಿದೆನಾ ಅಥವಾ ‘ಬೆಟ್ಟದ ಹೂ’ ಸಿನೆಮಾ ಪುನಃ ಕಂಡೆನಾ ಗೊತ್ತಾಗದಂತಹ ಭಾವ! ಪುಸ್ತಕದ ಆರಂಭ ಇರುವುದೇ ಹಾಗೆ. ಬಹಳ ಆಪ್ತವಾಗುವಂತೆ. ಕಾಡು, ಮನೆ, ಇಲಿ-ಹಾವು, ಅಪ್ಪ-ಅಮ್ಮ, ಶಾಲೆ, ಗುರುಗಳು, ನೆಂಟರು, ಬಡತನ, ಪುಟಾಣಿ ಹುಡುಗನೊಬ್ಬ ಆಸೆ ಕಂಗಳಿಂದ ಕಾಣುವ ಪುಟ್ಟ ಪುಟ್ಟ ವಿವರಗಳು…   ಅರವತ್ತರ ವಯಸ್ಸಲ್ಲಿ ಮಾಗಿ ಮಗುವಾಗಿ ನೆನಪಿನ ಹಾದಿಯಲ್ಲಿ ಹಿಂದಿರುಗಿ ಉತ್ಪ್ರೇಕ್ಷೆ ಇಲ್ಲದೆ ಸುಮ್ಮಗೆ ಅಡ್ಡಾಡಿ ಬರುವುದು ಇದೆಯಲ್ಲಾ… ಆ ಸುಖ ನಮ್ಮದೂ ಆಗುವ ಆಪ್ತ ಆರಂಭ ಪುಸ್ತಕದಲ್ಲಿದೆ. ಇದನ್ನು ಕೇವಲ ವಿವರಣೆ ಎನ್ನಲೇ? ವರ್ಣನೆ ಎನ್ನಲೇ? ಗೊಂದಲವಾಗುತ್ತೆ.     ಆರಂಭದ ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ತೆರೆದಿಡುವ ಹೂ ಪಕಳೆಗಳಂತಹ ಮೃದುತ್ವದ ಬಾಲ್ಯದನುಭವಗಳು, ಕಂಡ ವ್ಯಕ್ತಿತ್ವ ಶ್ರೇಷ್ಠತೆಗಳು, ಕಟ್ಟಿಕೊಡುವ ಕತೆಗಳು ಭಾರೀ ಹಿಡಿಸುತ್ತವೆ. ಆದರೆ, ಮಂಡ್ಯ ಎಂಬ ಅಪ್ಪಟ ಬಯಲು ನೆಲದ ನನ್ನಂತಹವರಿಗೆ ಗುಡ್ಡ ಬೆಟ್ಟ ಹತ್ತಿಳಿಯುತ್ತಾ ಕಾಡು- ಮೇಡು ಅಲೆದಾಡುತ್ತಾ ಸಿಗುವ ಊರುಗಳು ಹೇಗಿರಬಹುದೆಂಬ ಕುತೂಹಲ ಮೂಡುತ್ತದೆ. ಅದರ  ಹೊರತು ನನ್ನೂರಿನಂತೆ ರಸ್ತೆ ಬದಿಗೇ ಸಿಕ್ಕಿಬಿಡುವ ಊರುಗಳಂತಿಲ್ಲದ ಪರಮಲೆ, ವಾಟೆಕಜೆ, ಕಳ್ಮಕಾರಿ,  ಹೊಪ್ಪಳೆ, ಕಮಿಲ, ಬಂಟಮಲೆ, ಬಿಳಿಮಲೆ, ಏನೇಕಲ್ಲು, ಪಂಜ, ಕರ್ಮಜೆ, ಕರಿಮಲೆ, ಎಲಿಮಲೆ, ಬಂಗಾಡಿ, ಕೂತ್ಕುಂಜ, ಸಂಪಾಜೆ… ಊಫ್!! ಇವೆಲ್ಲಾ ಅರ್ಥವಾಗದ ಚಿದಂಬರ ರಹಸ್ಯ ಹೊದ್ದುಕೊಂಡು ನಿಬಿಡ ಕಾನನದೊಳಗೆ ಲೀನವಾಗಿರುವ ಹಾರುವ ಓತಿಕ್ಯಾತದಂತೆ ಕಾಣುವ ಊರುಗಳಾಗುತ್ತವೆ. ಒಮ್ಮೆಯಾದರೂ ಅವನ್ನೆಲ್ಲಾ ತೀರಾ ಸಮೀಪ ಅನುಭವಿಸಿ ಬರಬೇಕೆನ್ನುವಂತೆ ಹುಚ್ಚು ಹಿಡಿಸುತ್ತವೆೆ.       ಬಾಲ್ಯದ ವಿವರಣೆಗಳು ಆಪ್ತವಾಗುತ್ತಾ ಆಗುತ್ತಾ ಮಂತ್ರಮುಗ್ಧತೆಯಲ್ಲಿ ಕಳೆದು ಹೋಗುತ್ತಿರುವಾಗಲೇ ಕಾಲ ಮಾಗುವುದೇ ತಿಳಿಯದು. ಆಮೇಲಿನದ್ದೆಲ್ಲಾ ಓದು- ಉದ್ಯೋಗ, ಏಳು-ಬೀಳಿನ ವ್ಯಾಪಾರ. ಕನ್ನಡ ಸಾಹಿತ್ಯ ಲೋಕದ ವ್ಯವಹಾರಗಳು, ವಿಶ್ವವಿದ್ಯಾಲಯವೊಂದರ ಕಟ್ಟುವಿಕೆಯ ಪರಿಶ್ರಮ, ಹಿರಿಯರ ಅನುಚಿತ ನಡೆ ಇವೆಲ್ಲಾ ಹಸಿಹಸಿಯಾಗಿಯೇ ದಾಖಲಾಗಿರುವುದು ಇಷ್ಟೊತ್ತಿಗಾಗಲೇ  ನಾಡಿನ ಸಾಹಿತ್ಯ- ಸಾಂಸ್ಕೃತಿಕ ಲೋಕದಲ್ಲಿ ತಳಮಳ ಹುಟ್ಟಿಸಬೇಕಿತ್ತು. ಬಹು ಚರ್ಚೆಗೆ ಗ್ರಾಸವಾಗಬೇಕಿತ್ತು. ಆದರೆ ಲೋಕ ಇರುವುದೇ ಹೀಗೆ ನಮ್ಮ ಬೇಳೆ ಬೆಂದರೆ ಸಾಕೆನ್ನುವ ಲೋಕಜ್ಞಾನ ಪ್ರಾಪ್ತವಾಗಿರುವ ನಾಡವರಾಗಿರುವ ನಾವು ಅದೆಷ್ಟು ಜಡ್ಡುಗಟ್ಟಿದವರೆನ್ನುವುದು ತಿಳಿದುಕೊಂಡು ತೆಪ್ಪಗಿರಬೇಕಾಗಿದೆಯಲ್ಲ ಎಂದು ಸಂಕಟವಾಗುತ್ತದೆ.         ‘ಚದುರಿ ಬಿದ್ದ ಆತ್ಮದ ತುಣುಕುಗಳ’ನ್ನು ಆಯ್ದು ಕೊಂಡು ಎದೆಗಾನಿಸಿಕೊಳ್ಳುತ್ತಿರುವಾಗಲೇ ಥಟ್ಟನೆ ನಾನೊಂದು ಪ್ರವಾಸ ಕಥನವನ್ನೋ, ಸಾಹಸಗಾಥೆಯನ್ನೋ ಓದುತ್ತಿರುವಂತೆ ಭಾಸವಾಗುತ್ತದೆ. ಒಂದು ನಿರ್ದಿಷ್ಟ ತಾರ್ಕಿಕ ಆಲೋಚನೆಯನ್ನು ಹೊಂದಿದ ವ್ಯಕ್ತಿಯೊಬ್ಬರು ಕೆಲವಾರು  ಆಪ್ತ ಸಮಾನಮನಸ್ಕರೊಡನೆ ಸೇರಿ ಮಾಡುವ ಸಾಂಸ್ಥಿಕ  ಸಂಘಟನೆಯ ಕೆಲಸವು ಸಂತಸ ತರುತ್ತದೆ. ಅದರಲ್ಲೂ ನಮ್ಮ ಕನ್ನಡದ ನೆಲದ ವಿಚಾರಗಳು ನಾಡಿನ ಎಲ್ಲೆ ಮೀರಿ ದೆಹಲಿ, ಅಮೇರಿಕ, ಬೆಲ್ಜಿಯಂ, ಜಪಾನು, ಹೊನಲುಲು ಮೊದಲಾದೆಡೆಗಳಲ್ಲಿ ವಿವಿಧ ರೂಪಗಳಲ್ಲಿ ಬಿತ್ತರವಾದ ಬಗೆಗಳು ದಾಖಲಾದ ವಿವರಗಳನ್ನು ಓದುವಾಗ ಹೆಮ್ಮೆಯ ಭಾವ ಸ್ಫುರಿಸುತ್ತದೆ.              ಇಡೀ ಪುಸ್ತಕದ ಸ್ವರೂಪ ಹೀಗೆಯೇ ಎಂದು ನಿರ್ಣಾಯಕವಾಗಿ ಹೇಳಲು ಬಾರದಂತಹ ವಿಶಿಷ್ಟವಾದ ಕೃತಿ. ಸೊಗಸಾದ ನಿರೂಪಣೆ. ಹಲವು ಬಗೆಯಲ್ಲಿ ಕನ್ನಡ ನಾಡು- ನುಡಿ, ರಾಜಕೀಯ- ಸಾಂಸ್ಕೃತಿಕ- ಸಾಮಾಜಿಕ ಸ್ಥಿತ್ಯಂತರಗಳ ದಾಖಲೀಕರಣದಂತೆ ಭಾಸವಾಗುತ್ತದೆ. ಹಾಗೆಯೇ ಕೋಮುವಾದ, ಜಾತೀಯತೆ, ಬಡತನ, ಪಕ್ಷಪಾತ ಮೊದಲಾದನ್ನು ಕುರಿತು ಒತ್ತುಕೊಡದೆ, ಹೇಳಿಯೂ ಹೇಳದಂತೆ ಮಾಡಿರುವ ಲೇಖಕರ ಒಂದು ರೀತಿಯ ಜಾಗೃತ ಸ್ಥಿತಪ್ರಜ್ಞತೆಯು ಕಾಡದೇ ಬಿಡುವುದಿಲ್ಲ.       ನಮ್ಮ ನಡುವೆ ಲೋಕಜಾಗೃತಿಯಂತಿರುವ ಹಿರಿಯರಾದ ಶ್ರೀ ಪುರುಶೋತ್ತಮ ಬಿಳಿಮಲೆಯವರ ‘ಕಾಗೆ ಮುಟ್ಟಿದ ನೀರು’ ಅನ್ನು ಮನೆಗೆ ಕೊಂಡುತಂದ ದಿನವೇ ಓದಿ ಮುಗಿಸಿದಾಗ ರಾತ್ರಿ ೧:೩೦ ದಾಟಿತ್ತು. ಇತ್ತೀಚೆಗೆ ನನ್ನಿಂದ ಇಷ್ಟು ಮಾತ್ರ ಒಂದೇ ಗುಕ್ಕಿಗೆ ಓದಿಸಿಕೊಂಡ ಕೃತಿ ಇದು.             ಎಲ್ಲಾ ಓದಿಯಾದ ಮೇಲೆ ಪುಸ್ತಕದ ಹಲವಾರು ವಿಷಯಗಳು ದಟ್ಟವಾಗಿ ಕಾಡುತ್ತಲಿವೆಯಾದರೂ ತೀವ್ರವಾಗಿ ಉಳಿದದ್ದು ಮಾತ್ರ ಮೂರು ವಿಚಾರಗಳು.   ೧. ನಿಗದಿಪಡಿಸಿದ ದಿನದಂದು ಗಂಡುಮಗುವಿನೊಡನೆ ಗಂಡನ ಮನೆಗೆ ಹಿಂದಿರುಗದೆ, ಮಳೆ ಕಡಿಮೆಯಾದ ಮೇಲೆ ಗಂಡನ ಮನೆಗೆ ಹಿಂದಿರುಗಿದ ಹಸಿಬಾಣಂತಿಯನ್ನು ಮನೆಯೊಳಗೆ ಸೇರಿಸಿಕೊಳ್ಳದೆ ಹಸುಗುಸನ್ನು ಮಾತ್ರ ಉಳಿಸಿಕೊಂಡದ್ದು,ಆದರೆ  ಆ ಬಾಣಂತಿ ಅನಂತರ ಏನಾದರೆಂದು ತಿಳಿಯದೇ ಹೋದದ್ದು… ೨. ಕಾಡ ನಡುವೆ ಶಾಲೆಗೆ ಹೋಗಿ ಬರುತ್ತಿದ್ದ ಮಗುವನ್ನು ಹೊಳೆ ದಾಟಿಸಿಕೊಳ್ಳಲು ಬರುಬೇಕಿದ್ದ ಅಮ್ಮ ಕಾಗೆ ಮುಟ್ಟಿದ್ದಕ್ಕೆ ಬರಲಾರದೇ ಹೋದದ್ದು. ಮತ್ತು ಆ ಮಗು ಇಡೀ ರಾತ್ರಿ ನಿಬಿಡ ಕಾಡಿನೊಳಗೆ ಅಮ್ಮನ ಬರುವಿಕೆಯನ್ನು ನಂಬಿ ಕಾದದ್ದು… ೩. ಹೃದಯವನ್ನು ಎಂದೋ ಕೊಟ್ಟಿದ್ದ ಪತ್ನಿ ಕಿಡ್ನಿ ಕೊಟ್ಟದ್ದು…  ವಸುಂಧರಾ ಕದಲೂರು

‘ಕಾಗೆ ಮುಟ್ಟಿದ ನೀರು’ Read Post »

ಕಾವ್ಯಯಾನ

ಸಂಗಾತಿ ಬುದ್ದ

ಕವಿತೆ ಸಂಗಾತಿ ಬುದ್ದ ನಳಿನ ಡಿ ಬುದ್ಧನಿಗೊಂದು ಪ್ರೇಮದ ಕೋರಿಕೆ ಸಲ್ಲಿಸಿದ್ದೆ,ಒಪ್ಪಿರುವ ಎನಿಸಿದಾಗ,ಸುಖವ ಉಂಡು ಹೃದಯ ಉಬ್ಬಿಹೋಗಿ ಮನೆಗೆ ಮರಳಿದ್ದೆ.. ಕಡೆಗೋಲು ಕಡೆದು ಬೆಣ್ಣೆ ಎತ್ತಿಡುವಾಗ,ಬುದ್ಧ ಬಂದಿದ್ದ ಬಾಲಕನಾಗಿ,ಅಂಗಳದಿ ಸಗಣಿ ಸಾರಿಸಿ ರಂಗೋಲಿ ಚುಕ್ಕಿ ಇಡುವಾಗ,ಬುದ್ಧನಿದ್ದ ಸಾಲು ಸಾಲುಗಳ ಬಣ್ಣಗಳಲಿ,ನಡುವೆ ಆಯಾಸದಿ ನಿದ್ದೆಎಳೆದೊಯ್ದಾಗ,ತಂಪು ಹಳ್ಳದ ಏರಿಯ ಮೇಲೆಕರೆದು ಕೂಗಿದಾಗ ಹೇಳಿದಂತಾಯ್ತು ‘ಸಿಗು ಆಮೇಲೆ’..ಹಣಹಣಿಸಿ ಸೆಣಸುತಿರುವ ಉಭಯ ಬಣಗಳ ನಡುವೆಇರುವಾಗಲೇ ಬುದ್ಧ ಕೈಹಿಡಿದು ಕರಗಿಸಿದ, ಪ್ರೇಮಮಯಿ, ಕ್ಷಮೆಯಾಧರಿತ್ರಿ ಈ ಸುಂದರಿ ಎಂದವರೆಲ್ಲಾ ಎದುರೇ ಒಂದಾಗಿ ಅತ್ತು ಕರೆದು ಮಾಯವಾದರು,ಜನನಿಬಿಡ ಹಾದಿಗುಂಟ ಕೈ ಬೀಸುತಲೇ ಇರಲು, ಕಾಡುಗುಡ್ಡದ ನಡುವೆ, ಅಲೆಮಾರಿ ಹಕ್ಕಿಯಾಗಲುರೆಕ್ಕೆಯಾದವ ಬುದ್ಧ,ಈಶಾನ್ಯ ಗಾಳಿಗೆ ಒಡ್ಡಿದ ದೀಪವೆಂದುಕೊಂಡಾಗ, ಎರಡು ಹಸ್ತಗಳ ನಡುವೆ ದೀವಿಗೆ ಹಿಡಿವವನು,ನಾ ಹುಡುಕಿದಾಗ ಸಿಕ್ಕಿದ ಬುದ್ಧನ ಪ್ರಮಾಣದಂತೆ ಅನುರಣನ ಅವನ ಇರುವಿಕೆ… **********************

ಸಂಗಾತಿ ಬುದ್ದ Read Post »

ಕಾವ್ಯಯಾನ

ಯಾರೊಬ್ಬರಾದರೂ…

ಕವಿತೆ ಯಾರೊಬ್ಬರಾದರೂ… ಅನುರಾಧಾ ಪಿ. ಎಸ್ ಒಂದಷ್ಟು ಸಾಲು ಹುಟ್ಟುತ್ತವೆ ಅವರ ಹೆಸರಲ್ಲಿ,ಗಾಳಿಗೊಪ್ಪಿಸುತ್ತೇನೆ.ವಿಳಾಸ ಹುಡುಕಿ ತಲುಪಿಸುತ್ತದೆ ಗಾಳಿಯೂ ಅಷ್ಟೇ ನಿಷ್ಠೆಯಲ್ಲಿ. ಅವರ ಕಣ್ಣು ಬೆಳಗುತ್ತವೆ,ಆ ಕ್ಷಣ ನಾನು ಹೊಳಪುಂಡ ತಾರೆಯೆನಿಸುತ್ತೇನೆಹೊರನಿಂತು ಮೂಲಸ್ರೋತವನಕ್ಕರೆಯಲಿ ಮೆಲ್ಲ ತಡವುತ್ತೇನೆಕಣ್ಮುಚ್ಚಿ ಮೃದುವೊಂದು ಮಗುವಂತೆಅದು ಮಗ್ಗುಲು ಹೊರಳುತ್ತದೆ ನನಗೋ ಸುಖದ ಅಮಲುಒಳಗೂ ಆ ಅಮಲಡರಿದ ಘಮಲುಅವರುದ್ಗರಿಸುತ್ತಾರೆ,“ಎಂಥ ಭಾಷೆ, ಎಂಥ ಜೀವಭಾವ, ಎಷ್ಟು ಕಾವ್ಯ ನಿನ್ನ ಬರಹದಲ್ಲಿ!” ತಟ್ಟನೆಕಾಲಡಿಯ ನೆಲ ತುಸು ಚುಚ್ಚಿ ಎಚ್ಚರಿಸುತದೆ-‘ನೀನಿನ್ನೂ ತಾಕುವುದಾಗಿಲ್ಲ’ನಾನೆಚ್ಚೆತ್ತುಕೊಳುತೇನೆ,ಒಳಗೆ ಅರಳಿ ನಿಂತಿದ್ದ ಮೌನ ನರಳುತ್ತದೆ- ‘ಸ್ರೋತವವರಿಗೆ ಕಾಣುವುದಿಲ್ಲಮೂಲವನಾರೂ ತಲುಪುವುದಿಲ್ಲ‘ಎಷ್ಟು ಚಂದ ನಿನ್ನ ಪ್ರೀತಿ’ ಎಂದೊಬ್ಬರೂ ಹೇಳುವುದಿಲ್ಲ **********************************

ಯಾರೊಬ್ಬರಾದರೂ… Read Post »

You cannot copy content of this page

Scroll to Top