ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನುವಾದ ಸಂಗಾತಿ

ಗುಟ್ಟು ಮೂಲ: ಶರತ್ ಚಂದ್ರ ಬರ್ (ಬೋಡೊ) ಕನ್ನಡಕ್ಕೆ: ನಾಗರಾಜ ಹರಪನಹಳ್ಳಿ ಯಾವ ಕಣ್ಣೀರಿನಲ್ಲಿಹೃದಯ ಮಿಡಿತದ ಸಂದೇಶವಿಲ್ಲವೋ ಯಾವ ಕಣ್ಣೀರಿನಲ್ಲಿಪವಿತ್ರವಾದ ಸತ್ಯವಿಲ್ಲವೋಯಾವ ಕಣ್ಣೀರಿನಲ್ಲಿಒಡೆದ ಹೃದಯದ ಸದ್ದು ಇಲ್ಲವೋಆ ಕಣ್ಣೀರು ಅಪ್ಪಟ ಕಣ್ಣೀರಲ್ಲ ಯಾವ ನಗುವಿನಲ್ಲಿ ಮೌಲ್ಯದ ಬೆಳಗು ಇಲ್ಲವೋಯಾವ ನಗುಕಲ್ಮಶದ ಪರದೆಯಲ್ಲಿ ಅಡಗಿದೆಯೋಅಂತಹ ನಗು ಸಂತಸದ ನಗುವಲ್ಲ ಯಾವ ಪ್ರೀತಿ ತನ್ನಷ್ಟಕ್ಕೆ ತಾನು ಅರಳುವುದಿಲ್ಲವೋಯಾವ ಪ್ರೀತಿಯಲ್ಲಿ ಬೆಸುಗೆಯ ಗುಣವಿಲ್ಲವೋಅಂತಹ ಪ್ರೀತಿಆದರಣೀಯ ಪ್ರೀತಿಯಲ್ಲ ಯಾವ ಕಾಣಿಕೆಯಲ್ಲಿಮರಳಿ ಪಡೆವ‌ ವ್ಯಾಮೋಹವಿದೆಯೋಯಾವ ಕಾಣಿಕೆಯಲ್ಲಿಪ್ರಶಂಸೆಯನ್ನು ಪಡೆವ‌ ಅಪೇಕ್ಷೆಯಿದೆಯೋಅಂತಹ ಕಾಣಿಕೆ ಕಾಣಿಕೆಯಲ್ಲ………………….. ನಾಗರಾಜ್ ಹರಪನಹಳ್ಳಿ

ಅನುವಾದ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬಣ್ಣದ ಜೋಳಿಗೆ ಬಣ್ಣದ ಜೋಳಿಗೆ ಸ್ನೇಹಾ ಪಬ್ಲಿಕೇಶನ್ಸ್ ಗಾಯಿತ್ರಿ ರಾಜ್ “”ಬಣ್ಣದ ಜೋಳಿಗೆ “” ಗಾಯತ್ರಿ ರಾಜ್ ಅವರ ಮೊದಲ ಕಥಾ ಸಂಕಲನ, ಚೊಚ್ಚಲ ಪುಸ್ತಕ,ಒಂದೇ ದಿನದಲ್ಲಿ ಬರೆಯಬಹುದುದಾದ ಅನಿಸಿಕೆಗೆ ಮೂರು ದಿನಾ ತಗೊಂಡೆ ಅಂದ್ರೆ ನಾನು ಬರೆಯೋದು “ಆರು ಹೆತ್ತೋಳಿಗೆ ಮೂರು ಹೆತ್ತೋಳು ಹದ ಹೇಳಿದಂತೆ”” ಆಗತ್ತೇನೋ ಅನ್ನಿಸಿ, ತಡ ಮಾಡಿದೆ, ನನ್ನ ತಿಳಿವಿನ ಮಟ್ಟಕ್ಕೆ, ಯಾವ ಅತಿಶಯೋಕ್ತಿ ಪೂರ್ವಗ್ರಹ ಇಲ್ಲದೇ ಬರೆದಿರುವೆ, ಗುಣಕ್ಕೆ ಮತ್ಸರ ಏಕೆ?? ಅಲ್ವಾ..ಪೂರ್ಣ ಪ್ರಮಾಣದಲ್ಲಿ ಬರಹಕ್ಕೆ ಕುಳಿತರೆ ಒಳ್ಳೇ ಸಾಹಿತಿ ಆಗಬಲ್ಲಳು, ಯಾಕೆಂದರೆ ಬರಹಗಾರನಿಗೆ ಮೂಲತಃ ಇರಬೇಕಾದದ್ದು ತಾನು ಬರೆಯುವ ವಿಷಯದ ಅಧ್ಯಯನ ಮತ್ತು ಅರಿವು, ಮತ್ತು ಎಲ್ಲಾ ಪ್ರಕಾರಗಳಲ್ಲಿ ಬರೆಯೋದು, ಈಗಾಗಲೇ ಇವಳ ಕಥೆ, ಕವನ, ಪ್ರವಾಸಕಥನಗಳು ಸುಧಾ ತರಂಗ, ಕರ್ಮವೀರ, ಓ ಮನಸೇ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಹೊಸ ದಿಗಂತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ, ಸಂಪದ ಸಾಲು ಪತ್ರಿಕೆಯ ವರ್ಷಗಳ ಅಂಕಣಕಾರ್ತಿ ಕೂಡಾ… ಅಭಿನಂದನೆಗಳು, ಶುಭಾಶಯಗಳು ಗೆಳತೀ…ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿಯಾಗಿರೋ ಗಾಯತ್ರಿ ನಂಗೆ ಫೇಸ್ಬುಕ್ ಪರಿಚಯ, ಓದಿನ ಬರಹದ ಸಮಾನ ಆಸಕ್ತಿ ನಮ್ಮನ್ನು ಹತ್ತಿರ ತಂದಿದ್ದಾದರೂ ಬಹಳಷ್ಟು ಆಸಕ್ತಿಯ ಸಾಮ್ಯತೆಗಳು ಗೆಳೆತನವನ್ನು ಗಾಢವಾಗಿ ಬೆಸೆದಿದೆ, ಸಂಗೀತ, ಸಾಹಿತ್ಯ, ಕೆಲವು ಕಲೆ ಹವ್ಯಾಸಗಳ ಆಗರ ಆಗಿರೋ ಗಾಯತ್ರಿ ಸದಾ ಕ್ರಿಯೇಟಿವ್, ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ ಇರೋ ಇವಳಿಗೆ ತನ್ನ ಬಿಡುವಿಲ್ಲದ ಕೆಲಸಗಳಲ್ಲೂ ಬರಹವನ್ನು ಆಪ್ತವಾಗಿಸಿಕೊಂಡವಳು, ಅಕ್ಷರವನ್ನು ಪದಗಳಾಗಿಸಿ, ಅದನ್ನು ತನ್ನ ಹಿಡಿತದಲ್ಲಿ ಇಟ್ಟು ಓದುಗರ ಮನಸ್ಥಿತಿಗನುಗುಣವಾಗಿ ಬರೆಯುವ ಚತುರತೆ ಇವಳಿಗೆ ತಾನಾಗಿ ಒಲಿದು ಬಂದಿದೆ,ಆ ಕರಾಳ ರಾತ್ರಿ… ಪ್ರವಾಹ ಮತ್ತು ಪ್ರಕೃತಿ ವಿಕೋಪದ ಹಲವು ಮುಖಗಳನ್ನು ಕಂಡಿದ್ದೀವಿ ಹಾಗೂ ಕಾಣುತ್ತಲೇ ಇದ್ದೀವಿ, ಇದರ ಜೊತೆ, ಮಾನವೀಯ ಭಾವನಾತ್ಮಕ ಸಂಬಂಧಗಳ ತಳುಕು, ಅಜ್ಜಿ ಮೊಮ್ಮಗನ, ಮತ್ತು ತನ್ನ ಮೇಲೇ ಅವಲಂಬಿತವಾಗಿರುವ ಅಸಹಾಯಕ ವೃದ್ಧ ಜೀವವನ್ನು ರಕ್ಷಿಸಲು ರಾಜೇಶ್ ಪಡುವ ಪಾಡು, ಜೀವಕ್ಕೇ ಹತ್ತಿರವಾದ, ಪ್ರೇಮವನ್ನು ಮೀರಿ ಅಜ್ಜಿಯನ್ನು ಉಳಿಸಿಕೊಳ್ಳಲು ಹೋರಾಡಿಯೂ , ಪ್ರವಾಹದ ಸಂಕಷ್ಟದಲ್ಲಿ ಬಹುಪಾಲು ಜೊತೆಗಿದ್ದು ಇನ್ನೇನೂ ಗುರಿ ಸೇರಿದ್ದೀವಿ ಅನ್ನೋಲ್ಲಿ ಎದುರಾದ ನಿರಾಸೆ … ಇಲ್ಲಿ ಎರಡು ಸಂಭವಗಳನ್ನು ನಮ್ಮ ಮುಂದಿಟ್ಟು ಕಥೆ ಮುಗಿಸುವ ಲೇಖಕಿಯ ಜಾಣ್ಮೆ, ನಿರೂಪಣೆ, ಪ್ರಬುದ್ಧತೆ ಇಷ್ಟವಾಗತ್ತೆ, ಮೊಮ್ಮಗನ ಅಂತಃಶಕ್ತಿಯಾಗಿ ಜೊತೆಗಿರುವ ಅಜ್ಜಿಯೇ ಅಂತಾ ಪ್ರವಾಹವನ್ನು ದಾಟಿಸುವ ಶಕ್ತಿ ಎಂದರೆ ತಪ್ಪಿಲ್ಲ ….ಅನೈತಿಕನಾ??ಅನೈತಿಕ ಈ ಪದಕ್ಕೇ ಯಾವ ಅರ್ಥ ಕೊಡಬೇಕು ಅನ್ನೋದು ಇವತ್ತಿಗೂ ಒಗಟೇ… ನಿಜ ಯಾವುದು ಅನೈತಿಕ? ಪುರಾಣಗಳ ಪುಟ ತುಂಬಾ ಧರ್ಮಸೂಕ್ಷ್ಮಗಳಡಿಯಲ್ಲಿ ಬರುವ ವಿಷಯ ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಚರ್ಚೆಗೆ, ನಿಂದನೆಗೆ ಗುರಿಯಾಗೋದು ವಿಡಂಬನೆಯಾ…. ವಿಪರ್ಯಾಸವಾ?? ಆದರೇ ನಮ್ಮಂತವರು ಸಮಾಜಕ್ಕೆ ಕುಹಕಕ್ಕೆ ಹೆದರಿ ಬರೆಯಲಾರದ ವಿಷಯವನ್ನು ತೆಗೆದುಕೊಂಡು ಲೀಲಾಜಾಲವಾಗಿ ಸುಂದರವಾಗಿ ನಿರೂಪಿಸಿ ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೇ….ಬಡತನದ ಬಣ್ಣ ಕಡುಕೆಂಪು…..ಇನ್ನೊಬ್ಬರ ನೋವು, ಸಂಕಟ, ಹಸಿವು ನಿರಾಸೆಯನ್ನು ನಾವು ಅನುಭವಿಸಿದಂತೆ, ನಮ್ಮದೇ ಅನುಭವದಂತೆ ಓದುವವರಿಗೂ ತಮ್ಮದೇ ಅನುಭವ ಅನ್ನೋ ಹಾಗೇ ಅಕ್ಷರಗಳಲ್ಲಿ ನಿರೂಪಿಸುವುದರಲ್ಲಿ ಬರಹಗಾರರ ಚಾತುರ್ಯ ಜಾಣ್ಮೆ, ಓದುಗರ ಮನಗೆಲ್ಲುವ ಆಕರ್ಷಣೆ ಅಡಗಿರತ್ತೆ, ಈ ನಿಟ್ಟಿನಲ್ಲಿ ಲೇಖಕಿ ಈ ಕಥೆಯಲ್ಲಿ ಓದುವ ನಮ್ಮನ್ನೇ ಪಾತ್ರವಾಗಿಸಿ ಮನ ಮಿಡಿಯುವಂತೆ ಚಿತ್ರಿಸಿದ್ದಾರೆ….. ಹಸಿವಿನ ನೋವು ಸಂಕಟ ಮಾತ್ರವಲ್ಲ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ,” ಮಾಮ್ ” ಅಮಾನವಿ ಕುತಂತ್ರ,ಆಧುನಿಕತೆ ಹೆಚ್ಚಿದಷ್ಟೂ ಮನುಷ್ಯನ ಲಾಲಸೆ ಯೂ ಹೆಚ್ಚುತ್ತಲೇ ಹೋಗತ್ತಾ , ಜೊತೆಗೆ ಎಷ್ಟು ಸೌಲಭ್ಯಗಳು ಸಿಕ್ಕರೂ ಇನ್ನೂ ಇನ್ನೂ ಬೇಕೆನ್ನುವ ಹಪಾಹಪಿ ಜಾಸ್ತಿಯಾಗತ್ತಾ, ಸೋಮಾರಿತನ ಯಂತ್ರಗಳ ಮೇಲಿನ ಅವಲಂಬನೆ ಹೆಚ್ಚತ್ತಾ…. ಇದನ್ನು ಓದುತ್ತಿದ್ದರೆ ಭಯ ಅನ್ನಿಸತ್ತೆ… ಕಣ್ಮುಂದೆ ನೆಡೆದಂತೆ ಅನುಭವ ನೀಡುವ ಬರಹದ ಲೇಖಕಿಯ, ತಿಳುವಳಿಕೆ ಮತ್ತು ಅದನ್ನು ಓದುಗರ ಮನಕ್ಕಿಳಿಯುವಂತೆ ಬರಹಕ್ಕಿಳಿಸುವ ಜಾಣ್ಮೆ ಮೆಚ್ಚುವಂತಹದು,ನಿರ್ಧಾರ..ನಿಜ ದೈನಂದಿನ ಬದುಕಲ್ಲಿ ತುಂಬಾ ಗಹನ ಆಗಿದ್ದೂ ನಮ್ಮ ನಿರಾಸಕ್ತಿ ಬೇಜವಾಬ್ದಾರಿ ಇಂದಲೋ, ಮುಜುಗರ ಸೌಜನ್ಯ, ಅತ್ವಾ ಕರ್ತವ್ಯ ಜವಾಬ್ದಾರಿ ಎಂದೋ ಕೆಲವು ದುಡುಕಿನ ನಿರ್ಧಾರಗಳು ಬಾಳಪೂರ್ಣ ನಮ್ಮನ್ನು ಕಾಡಿ ಕಂಗೆಡಿಸುತ್ತವೆ, ಮನಸ್ಸು ಹೃದಯ ಎಂದು ಬದುಕಿಡೀ ನರಳುವ ಬದಲು ಬುದ್ದಿಗೆ ಸಾಣೆ ಹಿಡಿದು ಯೋಚಿಸಿ ನಿರ್ಧರಿಸಿದರೆ, ಬಹಳಷ್ಟು ಉತ್ತಮ ಜೀವನ ನೆಮ್ಮದಿಗೆ ಕಾರಣವಾಗುತ್ತದೆ, ಲೇಖಕಿಯ ಧನಾತ್ಮಕ ಯೋಚನೆ ಹಾಗೂ ಅದನ್ನು ಸಮಾಜಕ್ಕೂ ಧನಾತ್ಮಕತೆಯನ್ನು ಹರಡುವ ಉದ್ದೇಶ ಎರಡೂ ಸಫಲವಾಗಿದೆ,ಸುಂಟರಗಾಳಿ?ಏನೋ ಆಗಿದೆ ಅನ್ನೋ ಭಯ… ಅದು ತರುವ ಅಸಹನೆ…. ನಮ್ಮಲ್ಲಿನ ಕೀಳರಿಮೆ ತಪ್ಪಿತಸ್ಥ ಮನೋಭಾವನೆ ಎಷ್ಟು ಬೇಗ ನಮ್ಮನ್ನು ಪಾತಾಳಕ್ಕೆ ತಳ್ಳಬಹುದು ಅನ್ನೋದಕ್ಕೆ ಈ ಕಥೆ ಸಾಕ್ಷಿಯಾಗಿದೆ, ಅನುಮಾನ ಮತ್ತು ಅಹಂಕಾರ ಸಂಬಂಧಗಳ ಸಮಾಧಿಗೆ ತಳಹದಿ, ನಿಜ ಇದನ್ನು ಸರಳವಾಗಿ ಸುಲಭವಾಗಿ ಮನಸ್ಸಿಗಿಳಿವಂತೆ ಬಿಂಬಿಸಿದ ಲೇಖಕಿಗೆ ವಂದನೆಗಳು,ರಾಜಿ..?ಯಾರಾದರೂ ಯೋಚಿಸಲು ಮಾತನಾಡಲು ಸಂಕೋಚ ಮುಜುಗರ ಪಡುವ ಸಲಿಂಗ ಸಾಂಗತ್ಯದ ವಿಷಯವನ್ನೆತ್ತಿಕೊಂಡು, ಸುಲಲಿತವಾಗಿ ಅದನ್ನು ಬರಹಕ್ಕಿಳಿಸಿ, ಓದುಗರಿಗೂ ಎಲ್ಲೂ ಮುಜುಗರ ಆಗದಂತೆ, ಬಾಲ್ಯದಿಂದಲೂ ಹೆಣ್ಮಕ್ಕಳ ಮೇಲಾಗುವ ದೌರ್ಜನ್ಯದಿಂದ ದಾಂಪತ್ಯ ಸಾಂಗತ್ಯದ ಬಗ್ಗೆ ಹೆಣ್ಮಕ್ಕಳ ಮೇಲಾಗುವ ಪರಿಣಾಮ ಅದ್ಭುತವಾಗಿ ಬಿಂಬಿತವಾದ ಕಥೆ ಲೇಖಕಿಗೆ ಹ್ಯಾಟ್ಸಾಪ್ ಹೇಳದೇ ಬೇರೆ ಮಾತಿಲ್ಲ. “”ಬಾಳಲ್ಲಿ ನಿನ್ನಿಂದ ಸೂರ್ಯೋದಯ”, ದಲ್ಲಿ ಕರಾಳತೆ ಕವಿದ ಬದುಕೊಂದು ಸಾಮಾಜಿಕ ಸಂಪ್ರದಾಯಗಳ ಸಂಕೋಲೆ ಮೀರಿ ಬದುಕನ್ನು ಧನಾತ್ಮಕವಾಗಿ ಯೋಚಿಸುವ ನಿಟ್ಟಿನಲ್ಲಿ ನಮ್ಮನ್ನು ಚಿಂತನೆಗೆ ಹಚ್ಚಿದರೇ….“ಪಿಂಕ್ ಶರ್ಟ್ ಮತ್ತು ಖಾಕಿ?” ನಾವು ಕಾಣದ ಸಮಾಜದ ವಿಭಿನ್ನ ವ್ಯಕ್ತಿ ಮತ್ತು ವ್ಯಕ್ತಿತ್ವ, ತನ್ನದಲ್ಲದ ತಪ್ಪಿಗೆ ತೃತೀಯ ಲಿಂಗಿ ಅನ್ನಿಸಿಕೊಂಡು ಬದುಕಿದ ಮನಸ್ಸಿನ ನೋವು ಕಳವಳ, ಪಾಡು ಪರದಾಟಗಳನ್ನ ಹೇಳುತ್ತಾ… ವ್ಯವಸ್ಥೆಯ ದೌರ್ಜನ್ಯ ಮತ್ತು ಕಾಯಬೇಕಾದವರೇ ಕೊಲ್ಲುವ ಮನಸ್ಥಿತಿಯ ಕ್ರೌರ್ಯ ಪರಿಸ್ಥಿತಿಯ ದುರ್ಬಳಕೆಯನ್ನು ಮಾಡಿಕೊಳ್ಳುವ ಅಧಿಕಾರಿ ವರ್ಗ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ ಲೇಖಕಿ, ಅಕ್ಷರಗಳನ್ನು ಪದಗಳನ್ನು ಸೇರಿಸಿ ಹನೆದ ಕಥೆ ಸಚಿತ್ರವಾಗಿ ಕಣ್ಮುಂದೆ ಬರತ್ತೆ,…” ಕಲ್ಲಾದಳೆ ಅಹಲ್ಯೆ…..?? ” ಈ ಕಥೆ ಓದುತ್ತಾ ಓದುತ್ತಾ ನಾನೇ ಅಹಲ್ಯೆ ಆಗ್ಬಿಟ್ಟಿದ್ದೆ, ಅಹಲ್ಯೆಯ ಮನದಾಳದ ಭಾವ ನೋವು ಆಕ್ರಂದನ ಆಕ್ರೋಶ ಹತಾಶೆ ಅಸಹಾಯಕತೆ, ಒಂದು ತಣ್ಣನೆ ಸೇಡು ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟ ಪರಿ ಅನನ್ಯ, ಪುರಾಣಗಳ ಪುಟಗಳನ್ನು ಮೂಲಕ್ಕೇ ಚ್ಯುತಿ ತರದೇ ಬಿಂಬಿಸೋದೇ ಒಂದು ದೊಡ್ಡ ಸಾಹಸ, ಈ ಕಥೆ ಓದಿದರೆ ಬಹುಶಃ ಲೇಖಕಿ ಪುರಾಣದ ಯಾವುದೇ ಒಂದು ಪಾತ್ರವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಅಳವಡಿಸಿ ಅದ್ಬುತ ಕಾದಂಬರಿ ಮಾಡಲು ಶಕ್ತಳು ಅನ್ನಿಸಿತು,“”ಅನಿರೀಕ್ಷಿತ ತಿರುವು “” ನಿಜಾ ಬಹಳ ಸಲ ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ತೀರಾ ಎಲ್ಲೋ ಮುಂಚೆನೇ ನೆಡೆದಂತೆ ಕನಸಲ್ಲಿ ಕಂಡಂತೆ ಈ ಮೊದಲೇ ಅನುಭವಕ್ಕೆ ಬಂದಂತೆ ಅನ್ನಿಸಿ ಗಾಬರಿ ಹುಟ್ಟಿಸುವುದು, ಇದು ಬಹಳ ಜನಕ್ಕೆ ಏನೆಂದು ಅರಿವಾಗೋದು ಇಲ್ಲಾ, ನಾವೇ ಇದೇನೂ ಸಿಕ್ಸ್ತ್ ಸೆನ್ಸಾ ಅನ್ನಿಸಿ ಕಳವಳ ಆಗೋದುಂಟು, ಅಂತಹ ಒಂದು ಎಳೆ ಹಿಡಿದು ಕಥೆ ಹೆಣೆದು ಅಲ್ಲಿಯೂ ಅನೂಹ್ಯ ತಿರುವಿಟ್ಟಿದ್ದಾರೆ ಲೇಖಕಿ, ಅನುಬಂಧಗಳ ಪರಸ್ಪರ ಮಿಡಿಯುವಿಕೆಯ ಭಾವಗಳ ತಾಕಲಾಟ ನಿರೂಪಣೆ ಚಂದ ಚಂದ,“”ಹೀಗೊಂದು ಅಂತ್ಯ “” ತನ್ನ ಬದುಕಿನಲ್ಲಿ ನೆಡೆಯೋ ಅಪಘಾತ ಲೇಖಕನ ಮುಂದಿಟ್ಟು ಅವನು ಕೊಡೋ ಅಂತ್ಯವನ್ನು ತಾನು ಅಪಾದಿಸಿಕೊಳ್ಳುವ ಅದನ್ನರಿಯದ ಲೇಖಕ ಅಂತ್ಯವನ್ನು ಸೂಚಿಸಿ ತೊಳಲಾಡುವ ಉದ್ವೇಗ, ಪರಿತಾಪ ಚೆನ್ನಾಗಿ ವ್ಯಕ್ತವಾಗಿದೆ, ಲೇಖಕರಿಗೆ ಇರಬೇಕಾದ ಸಾಮಾಜಿಕ ಪ್ರಜ್ಞೆ ಸೂಚ್ಯವಾಗೀ ಮೂಡಿ ಬಂದಿದೆ,“ವಿಷಸರ್ಪ” ಕೆಲವು ಬಾರಿ ನಾವು ಮನುಷ್ಯರನ್ನು ಮೊದಲು ನೋಡಿದಾಗಲೇ ಏನೋ ಒಂದು ಭಾವ ಉದ್ಭವ ಆಗ್ಬಿಡತ್ತೆ, ಅದರಲ್ಲಿ ಅವರ ಹೊರ ರೂಪ ನಮ್ಮಲ್ಲಿ ಸಲ್ಲದ ಋಣಾತ್ಮಕ ಅಂಶಗಳೇ ಎದ್ದು ಕಾಣಿಸಿದಂತಾಗೀ ವಿನಾಕಾರಣ ದ್ವೇಷ ಅಸಹನೆ ಬೆಳೆಯುತ್ತ, ಕೊನೆಗೊಂದು ಸಲ ನಮ್ಮ ತಪ್ಪು ಅರಿವಾಗೋದ್ರೊಳಗೆ ಏನಾದರೂ ಘಟನೆ ಸಂಭವಿಸಿರತ್ತೆ, ಅದಕ್ಕೇ ಹಿರಿಯರು ಹೇಳೋದೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾ, ಹಾವೂ ಮುಂಗುಸಿ ಕಥೆ ನೆನಪಾಯಿತು,“” ಅವ್ಯಕ್ತ ” ನಮ್ಮೊಳಗಿನ ಮಾನಸಿಕ ತಾಕಲಾಟಗಳು ಸಂಸಾರದ ಇತರ ಸದಸ್ಯರುಗಳ ಮೇಲಾಗುವ ಸಾಮಾಜಿಕ ಸಾಂಸಾರಿಕ ಮಾನಸಿಕ ಪರಿಣಾಮಗಳನ್ನು ಹೇಳುವ ಕಥೆ, ಇಂತಹ ವಿಷಮ ಸನ್ನಿವೇಶದಲ್ಲಿ ಆತುರ ಪಡದೇ ಸಾವಧಾನವಾಗಿ ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳಬೇಕಾದ ಅವಶ್ಯಕತೆ ಎತ್ತಿ ಹಿಡಿಯತ್ತೆ,“”ತಪ್ಪಿದ ತಾಳ ” ಅತಿಯಾದಲ್ಲಿ ಅಮೃತವೂ ವಿಷವೇ, ಕಾಮವೂ ಅದಕ್ಕೇ ಹೊರತಲ್ಲ, ಮನೋ ನಿಗ್ರಹ, ಇಂದ್ರಿಯ ನಿಗ್ರಹ ಸ್ವಸ್ಥ ಬದುಕಿಗೇ, ಸಂಸಾರ ಸಮರಸಕ್ಕೆ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯ, ಯಾವುದು ಎಲ್ಲೇ ದಾಟಿದರೂ, ಯಾರೇ ಮಿತಿ ಮೀರಿದರೂ, ಪರಿಣಾಮ ಇಡೀ ವ್ಯವಸ್ಥೆಯ ಮೇಲಾಗುವುದು,ಎಲ್ಲಾ ಹದಿನೈದು ಕಥೆಗಳು ವಿಭಿನ್ನ ಕೋನಗಳಲ್ಲಿ ಭಿನ್ನ ವಸ್ತುಗಳಲ್ಲಿ ಬರೆದ ಲೇಖಕಿ ಮೊದಲ ಹೆಜ್ಜೆಯಲ್ಲೇ ತಾನೇನೂ ಎಂಬುದನ್ನು ಸಾಬೀತು ಪಡಿಸಿದ್ದಾರೆ, ಹೊಸ ಲೇಖಕಿ ಎಂದೋ ತಿಳಿಯದೆಯೋ, ಇಲ್ಲದ ಪೂರ್ವಗ್ರಹಕ್ಕೆ ಒಳಗಾಗಿ ಓದದಿದ್ದರೆ ನಷ್ಟ ಓದುಗರದೆ, ಸಾಹಿತ್ಯಾಭಿಮಾನಿಗಳು ಒಮ್ಮೆ ಓದಿ, ಹೊಸ ಲೇಖಕರನ್ನು ಪ್ರೋತ್ಸಾಹಿಸಿ ಹಾರೈಸಿ, ಸ್ನೇಹ ಬುಕ್ ಹೌಸ್, ಫೀನಿಕ್ಸ್ ಬುಕ್ ಹೌಸ್ ಅಲ್ಲಿ ಮತ್ತು ಲೇಖಕರ ಬಳಿಯೂ “ಬಣ್ಣದ ಜೋಳಿಗೆ ” ಲಭ್ಯವಿದೆ, ********* ಪದ್ಮಜಾ ಜೋಯ್ಸ್ ತೀರ್ಥಹಳ್ಳಿ ,

ಪುಸ್ತಕ ಸಂಗಾತಿ Read Post »

ಇತರೆ

ಪ್ರಬಂಧ

ಸ್ವಚ್ಛ ಭಾರತ ನಂದಿನಿ ಹೆದ್ದುರ್ಗ ಇದು ಸುಮಾರು ಮುವ್ವತ್ತು-ಮುವ್ವತ್ತೈದು ವರ್ಷಗಳ ಹಿಂದಿನ ಮಾತು.ಆಗೆಲ್ಲಾ ಹಳ್ಳಿಗೊಂದು ಪ್ರಾಥಮಿಕ ಶಾಲೆ ಇರುತ್ತಿದ್ದೇ ಹೆಚ್ಚು . ಇನ್ನೂ ಶೌಚಾಲಯ, ಬಿಸಿಯೂಟ ಕನಸಲ್ಲೂ ಯೋಚಿಸುವ ಹಾಗಿಲ್ಲ.ನಾವು ಮೂರೂ ಮಕ್ಕಳು ನಾಲ್ಕನೆ ತರಗತಿ ಮುಗಿದಾಗ ಹತ್ತು ಕಿಮಿ ಆಚೆ ಇರುವ ಸಣ್ಣ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಹೊಗುತ್ತಿದ್ದೇವೆ.ನಾವು ಮಾತ್ರವಲ್ಲ..ಪ್ರತಿ ಜಿಲ್ಲೆಯ ಸಣ್ಣಸಣ್ಣ ಹಳ್ಳಿಗಳಮಕ್ಕಳದ್ದೂ ಇದೇ ಪಾಡು.ಆಗೆಲ್ಲಾ ದಾರಿಯಲ್ಲಿ ಅವಸರವಾದರೆ ಗಂಡು ಹುಡುಗರನ್ನ ಕಾವಲಿಗೆ ನಿಲ್ಲಿಸಿ ನಾವು ಪಕ್ಕದ ಕಾಫಿ ತೋಟದಲ್ಲಿ ನೀರಾವರಿ ಮುಗಿಸಿ ಬರ್ತಿದ್ದೆವು.ವ್ಯವಸ್ಥೆ ಇರದಿದ್ದರೂ ಸಂಕೀರ್ಣತೆ ಇರಲಿಲ್ಲ.ಯಾವ ಆನೆ ಚಿರತೆಗಳೂ ಆಗ ದಾಳಿ‌ಮಾಡುತ್ತಿರಲಿಲ್ಲ.ಕಾಮದ ಹಸ್ತಗಳು ಪುಟ್ಟ ಮಕ್ಕಳನ್ನು ಮುಟ್ಟುತ್ತಿರಲಿಲ್ಲ.ಯಾವ ರೋಗಗಳೂ ಅಷ್ಟು ಹರಡುತ್ತಿರಲಿಲ್ಲ.ಅಥವಾ ಈಗಿನಷ್ಟು ವಿಪರೀತ ಆಗಿರಲಿಲ್ಲ.ಹಾಗಾಗಿಯೇ ಕಾಡಹಾದಿಯಲ್ಲಿ ಒಬ್ಬಿಬ್ಬರು ಮಕ್ಕಳೂ ಧೈರ್ಯವಾಗಿ ಶಾಲೆಗೆ ಹೋಗಿಬರುತ್ತಿದ್ದರು.ಬಿಡಿ.ಅದಲ್ಲ ವಿಷಯ. ಇಡೀ ದೇಶಾದ್ಯಂತ ಸ್ವಚ್ಚತೆಯೇ ಪರಮೋಚ್ಚ ಗುರಿ ಎನ್ನುವ ಗುರಿಯೂ ದೊರೆಯೂ ಬಂದ‌ಮೇಲೆ ಪ್ರತಿ ಪುಟ್ಟ ಹಳ್ಳಿಯ ಶಾಲೆಗಳಿಗೂ ಒಂದೋ ಎರಡೋ ಶೌಚಾಲಯ, ನೀರಿನ ವ್ಯವಸ್ಥೆ, ಬಿಸಿಯೂಟ ವ್ಯವಸ್ಥೆ ಎಲ್ಲವೂ ಆಗಿ ಇನ್ನೇನು ಹಳ್ಳಿಯ ಮಕ್ಕಳು ಕೆರೆ ಬದಿಗೆ,ಪೊದೆಯ ಹಿಂದುಗಡೆ, ಮರೆ ಅರಸಿ ಶೌಚಕ್ಕೆ ಕೂರುವ ಕರ್ಮ ಕೊನೆಯಾಗಿ ಹೆಣ್ಣುಮಕ್ಕಳ ಆರೋಗ್ಯವೂ ಮರ್ಯಾದೆಯೂ ಸುಧಾರಿಸಿತೆಂಬ ಭರವಸೆಯಲಿದ್ದಾಗಲೇ ಪಕ್ಕದ ತಾಲೂಕಿನ ಪುಟ್ಟ ಹಳ್ಳಿಯ ಶಾಲಾ ಕಾರ್ಯಕ್ರಮವೊಂದಕ್ಕೆ ಆಹ್ವಾನ ಬಂತು. ಹೋದೆ. ಸಣ್ಣ ಕುರುಚಲು ಕಾಡಿನಂತ ಒಂದು ಸರಕಾರಿ ಜಮೀನಿನ ಮಧ್ಯಭಾಗವನ್ನು ಸಪಾಟು ಗೊಳಿಸಿ ಶಾಲಾ ಕಟ್ಟಡ ನಿರ್ಮಾಣವಾಗಿತ್ತು.ಶಾಲೆ ಪಕ್ಕದಲ್ಲೇ ಶೌಚಾಲಯ, ಗಂಡು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ವ್ಯವಸ್ಥೆ. ನೀರಿನ ತೊಟ್ಟಿ, ಬಿಸಿಯೂಟದ ಕೋಣೆ ಎಲ್ಲವೂ ವ್ಯವಸ್ಥಿತವಾಗಿತ್ತು. ಹಳೆಯ ಶಾಲೆಗಳನ್ನು ‌ನೆನಪಿಸಿಕೊಂಡು ಹೊಸ ವ್ಯವಸ್ಥೆಗಳ ಅಚ್ಚುಕಟ್ಟುತನ ಪ್ರಸ್ಥಾಪಿಸುವಾಗಲೇ ಪುಟ್ಟ ಹುಡುಗಿಯೊಂದು ತನ್ನ ಕಿರುಬೆರಳ ಮೇಲಕ್ಕೆತ್ತಿ ನಿಂತುಕೊಂಡಳು.ಮೇಷ್ಟ್ರು ಗದರುತ್ತಲೇ ದೊಡ್ಡ ಹುಡುಗಿ ಜೊತೆಮಾಡಿ ಕಳಿಸಿದರು. ಅವರಿಬ್ಬರೂ ಶಾಲೆಯ ಹಿಂಬದಿಯ ಸಣ್ಣ ಪೊದೆಯ ಬಳಿ ಹೋದರು..ಅಚ್ಚರಿಯಾಯ್ತು.ಕಾರ್ಯಕ್ರಮ ‌ಮುಗಿಸಿ ಊಟಮಾಡುವ ಮೊದಲು ಕೈ ತೊಳೆಯಲು ಟ್ಯಾಂಕಿನ ನಲ್ಲಿ ತಿರುಗಿಸ ಹೋದವಳಿಗೆ ಅದು ಬಹಳ‌ ಪುರಾತನ ಕಾಲದಲ್ಲೇ ಚಲನೆ ನಿಲ್ಲಿಸಿ ಸ್ತಬ್ಧವಾಗಿರುವುದರ ಕುರುಹು ಅಲ್ಲೆಲ್ಲ ಗೋಚರಿಸಿದ್ದು‌ ನೋಡಿ ಸುತ್ತ ನೋಡಿದೆ. ಮಕ್ಕಳು ಸಣ್ಣಸಣ್ಣ ಗುಂಪಿನಲ್ಲಿ ಶಾಲೆಯ ಹಿಂಬದಿಯ ಕುರುಚಲು ಕಾಡಿಗೆ ಹೋಗಿ‌ಬರ್ತಿರೋದು ನೋಡಿದಾಗ ಏನೋ ಸರಿಯಿಲ್ಲವೆನಿಸಿತು.ಆಗಲೆ ಅಲ್ಲಿ ಬಂದ ಟೀಚರಮ್ಮ ‘ಅಲ್ಲಿ‌ನೀರು ಬರ್ತಿಲ್ಲ .ಬನ್ನಿ. ಇಲ್ಲೇ ಬಾಟಲಿ ನೀರಿನಲ್ಲಿ ಕೈ ತೊಳೆಯಿರಿ ಎಂದಾಗ ಅಚ್ಚರಿ ಯಿಂದಹಾಗಾದರೆ ಟಾಯಲೆಟ್ ಗೆ‌ ನೀರು.?ಎಂದೆ.ಇಲ್ಲಿ ಯಾವುದಕ್ಕೂ ನೀರಿಲ್ಲ ಮೇಡಮ್.ಕೇವಲ ಟ್ಯಾಂಕಿದೆ ಅಷ್ಟೆ.ಮೊದಮೊದಲು ಸ್ವಲ್ಪ ಬಿಡ್ತಿದ್ರು .ಈಗ ಅದೂ ಇಲ್ಲ.ಹಾಗಾಗಿ‌‌ ಮಕ್ಕಳು ಹಿಂಬದಿಯ ಪೊದೆಗೇಹೋಗ್ತಾರೆ.ಇದೂ ಒಂಥರ ಸರಿಯೇಆಯ್ತು.ಸ್ವಲ್ಪ ನೀರು ಬಿಡ್ತಿದ್ದಾಗಟಾಯ್ಲೆಟ್ ಬಳಸಿ ಸರಿಯಾಗಿ ಸ್ವಚ್ಛ ವಾಗದೇ ಶಾಲೆಯ ಪರಿಸರವೇ ಹಾಳಾಗಿತ್ತು.ಹಳ್ಳಿ ಮಕ್ಕಳು.ಎಷ್ಟೇ ಹೇಳಿಕೊಟ್ಟರೂ ಶೌಚಾಲಯ ಬಳಕೆ ಅವರಿಗೆ ಕಷ್ಟವೂ ಆಗಿತ್ತು..ಇನ್ನೇನು ಈ ಅಭ್ಯಾಸ ರೂಢಿಸಿಕೊಳ್ತಾರೆ ಎನ್ನುವಾಗ ನೀರು‌ ಬಂದ್ ಆಯ್ತು.ಹೆಣ್ಣಮಕ್ಕಳನ್ನ ದೂರಕ್ಕೆ ಕಳಿಸುವಾಗ ತುಸು ಭಯವೂ ಇರ್ತದೆ.ಆದರೆ ಏನ್ಮಾಡೋದು‌ ಹೇಳಿ.ಯಾರನ್ನೂ ದೂರಿ ‌ಫಲವಿಲ್ಲ.ಇಲ್ಲಿನ ಸ್ಥಳೀಯ ಜನ ಪ್ರತಿನಿಧಿ ಬೇರೆ ಪಕ್ಷ .ಸರ್ಕಾರಕ್ಕೆ ಸಮಸ್ಯೆ ತಲುಪಿಸುವುದರಲ್ಲಿ ಅಂತಹ ಆಸಕ್ತಿಯೂ ಇಲ್ಲ. ತಲುಪಿಸಿದರೂ ಪಕ್ಷ ಬೇರೆ ಇರುವುದರಿಂದ ಈಡೇರುವ ಭರವಸೆಯೂ ಇಲ್ಲ.ಒಮ್ಮೆ ಇಲ್ಲೇ ಬೋರವೆಲ್ ತೆಗೆಸುವುದಕ್ಕೆ ಬಂದ ಫಂಡ್ ಯಾವ ಯಾವುದೋ ಕಾರಣಕ್ಕೆ ಸದುಪಯೋಗ ಆಗಲೇ ಇಲ್ಲ.ಶಾಲೆ, ಮೀಟಿಂಗು,ಓಡಾಟದಲ್ಲೇ ನಾವು ಕಳೆದುಹೋಗುವುದರಿಂದ ನೀರಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸುವುದು ಕಷ್ಟವಾಗ್ತಿದೆ.ಈಗ ಊಟ ತಯಾರಿಸಲು ಸಹ ಕೊಡದಲ್ಲಿ ತರಬೇಕು ಅಂತ ಅಸಹಾಯಕತೆ ಹೇಳಿಕೊಂಡರು.ಅಷ್ಟರಲ್ಲಿ ಶೌಚ ಮುಗಿಸಿ ಮಕ್ಕಳು ಬಂದರು.ಮನೆಯಿಂದ ತಂದಿದ್ದ ಬಾಟಲಿ ನೀರು ತಟ್ಟೆ ತೊಳೆಯಲೂ ಬೇಕಿರೋದ್ರಿಂದ ಕೈ ತೊಳೆಯದೇ ಊಟಕ್ಕೆ ಕುಳಿತರು. ಶೌಚಾಲಯದ ‌ಮೇಲೆ ಸ್ವಚ್ಛ ಭಾರತ ಅನ್ನುವ ಪದಗಳಿದ್ದವು.ಯಾಕೊ ಸ್ವಚ್ಛವೊಂದು ಕಡೆ,ಭಾರತವೊಂದು ಕಡೆ ಇರಬೇಕಾ ಅನಿಸಿತು. ************

ಪ್ರಬಂಧ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ ಎಸ್. ಮಕಾನದಾರ ತಲೆ ಬಾಗಿಲಿಗೆ ಕೈಹಚ್ಚಿ ಕಾಯುತಿರುವೆ ಪ್ಯಾರಿಭಾವರಸ ನೊರೆಹಾಲ ತುಂಬುತಿರುವೆ ಪ್ಯಾರಿ ಅಚ್ಚೇರು ಬಂಗಾರದಲಿ ಅಚ್ಚು ಒತ್ತುತ್ತಿರುವೆಸ್ನೇಹ ಅಚ್ಚುಮೆಚ್ಚೆಂದು ಸಾರುತಿರುವೆ ಪ್ಯಾರಿ ಹಾಯಿದೋಣಿಗೆ ನಾವಿಕನಾಗಿ ಸಾಗುತಿರುವೆಚೂರಾದ ಹೃದಯ ತೋರಣ ಕಟ್ಟಿರುವೆ ಪ್ಯಾರಿ ನದಿಗಳ ಜಾಡಿನೊಳಗೆ ಚಹರೆ ಕಾಣುತಿರುವೆವಿಶ್ವಪ್ರೇಮ ಬಾವುಟ ಹಾರಿಸುತ್ತಿರುವೆ ಪ್ಯಾರಿ ಅಂತರಂಗ ಜ್ಯೋತಿಗೆ ಧೋಖಾ ಮಾಡದಿರುಸಾಹೇಬ್ ಮಸ್ತಕಕ್ಕೆ ಇಳಿದು ಬರುವೆ ಪ್ಯಾರಿ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಗುವಾದ ನೆಲ ಬಿದಲೋಟಿ ರಂಗನಾಥ್ ಬಿತ್ತಿದ ಬೀಜ ಮೊಳಕೆ ಒಡೆದು ನಗುವಾಗಸಿರಿಯು ಮಡಿಲು ತುಂಬಿತುಮಗುವಾದ ನೆಲಮಮತೆಯ ಕರುಳ ಹೂ ಬಿಟ್ಟಿತು ಎದೆಯೊಳಗಿನ ತಲ್ಲಣ ಕಣ್ಣು ಚಾಚಿ ನೋಡುತ್ತಿರಲುಖುಷಿಯ ಸಮುದ್ರ ನಕ್ಕುನಕ್ಷತ್ರಗಳು ಅಂಗೈಯೊಳಗೆ ಆಡಿದವು ಮೊಳಕೆಯ ಕುಡಿ ಸಾಗುತಿರಲುಮಳೆಯ ಸ್ಪರ್ಶಕೆ ಕಳೆಗಟ್ಟಿಮೆದು ನೆಲದ ಭಾವ ಕಲ್ಲುಗಳೊಂದಿಗೆ ಮಾತಾಡಿತು ಬೆವರ ಹನಿಯು ಬಿದ್ದುಬಿತ್ತು ಹುತ್ತ ನೆಲ ಬಸಿರಾಗುವುದೆಂದರೇಹೊಳೆ ಸೀಳಿನಲಿ ಬೊಗಸೆ ನೀರು ಕುಡಿದ ಸಂತಸಮೈಯೊಳಗೆ ಚಂದ್ರ ನಡೆದ ಗುರುತು ***********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಸೇಡಿನ ಫಲ ಮೂಲ: ವಿಲಿಯಂ ಬ್ಲೇಕ್(ಇಂಗ್ಲೀಷ್) ಕನ್ನಡಕ್ಕೆ: ವಿ.ಗಣೇಶ್ ನನ್ನ ಗೆಳೆಯನ ಮೇಲೆ ಬಂದ ಮುನಿಸಿಗೆ ನಾನು    ತಾಳ್ಮೆಯಿಂದಲೆ ಅಂದೆ, ‘ಸುಮ್ಮನಿರು’  ಎಂದು    ಮಾಯವಾಗಿಯೆ ಹೋಯ್ತು ಕೋಪವಂದು.    ನನ್ನ ವೈರಿಯ ಮೇಲೆ ಬಂದ ಮುನಿಸಿಗೆ ನಾನು    ಕೋಪದಿಂದಲೆ ನುಡಿದೆ, ‘ಚೆಂಡಾಡು’ ಎಂದು    ಮನದೊಳಗೆ ಬೆಳೆಯಿತದು ನನಗರಿವಿಲ್ಲದೆಲೆ    ಹಗೆತನದ ಬೀಜವದು ಮೊಳಕೆಯೊಡೆಯುತ್ತ    ಸಸಿಯಾಗಿ ಬೆಳೆದು ಮರವಾಗಿ ನಿಂತಿತ್ತು    ಭಯವೆಂಬ ಕಣ್ಣೀರ, ನಗುವೆಂಬ ಎಳೆ ಬಿಸಿಲ    ನೀಡುತ್ತ ಬೆಳೆಸಿದೆನು ಹಗಲು ರಾತ್ರಿಯೆನ್ನದೆಲೆ    ವಂಚನೆಯ ತಂತ್ರಗಳ ನಡುನಡುವೆ ತುರುಕುತ್ತ    ಮರವಾಗಿ ಬೆಳೆಸಿದೆನು ಸೇಡಿನಾ ಗಿಡವನ್ನು    ಮರ ಬೆಳೆದು ಹೂವಾಯ್ತು, ಹೂವರಳಿ ಹಣ್ಣಾಯ್ತು    ನನ್ನ ಅರಿ ನೋಡಿದನು ಥಳಥಳಿಪ ಹಣ್ಣನ್ನು    ಕಿಂಚಿತ್ತು ಯೋಚಿಸಿದಲೆ ನನ್ನ ಹಣ್ಣೆಂದರಿತು    ಕಳಿತ ಹಣ್ಣನು ಕದ್ದು ತಿಂದು ಮುಗಿಸಿದನು    ಕತ್ತಲಿನ ಆವರಣ ಅವನ ಕಣ್ಣನು ಮುಚ್ಚಿ    ನನ್ನ ಖೆಡ್ಡದಲಿ ಅವನ ಎಳೆದು ಕೆಡವಿತ್ತು     ಬೆಳಗಿನಾ ಬೆಳಕಲ್ಲಿ ಸಂತಸದಿ ನೋಡಿದೆನು     ನನ್ನ ಮರದಡಿಯಲ್ಲಿ ಸೆಟೆದು ಬಿದ್ದಾ ವೈರಿಯನು   A Poisonous Tree: By William Blake ******** ವಿ.ಗಣೇಶ್

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನ? ಮೂಲ: ನೋಷಿ ಗಿಲ್ಲಾನಿ(ಉರ್ದು) ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನನನ್ನ ತೋಳುಗಳನ್ನ, ನನ್ನ ಕಣ್ಣುಗಳನ್ನ, ನನ್ನ ಮುಖವನ್ನ? ನಾನೊ೦ದು ನದಿ, ಹರಿದು ಬೆರೆಯುತ್ತಿದ್ದೇನೆ ಮತ್ತದೇ ಕಡಲೊಳಗೆ.ಯಾರಾದರೂ ಹರಿಸ ಬಲ್ಲಿರಾ ನನ್ನನ್ನು ಮರುಭೂಮಿಯಲ್ಲಿ? ಸಾಗುತ್ತಿದೆ ಬದುಕು, ಆದರೆ ನನ್ನ ಬಾಲ್ಯ, ನನ್ನ ಮಿಣುಕು ಹುಳು,ನನ್ನ ಗೊ೦ಬೆ ಗಳನಲ್ಲದೇ ಮತ್ತೇನನ್ನೂ ಬೇಡಲಾರೆ ಈ ಬದುಕಿ೦ದ! ಈ ಹೊಸ ಋತು ಯಾಕೋ ಒಗ್ಗುತ್ತಿಲ್ಲ ನನಗೆ.ನನ್ನನ್ನು ಕರೆದೊಯ್ಯಿರಿ ಹಿ೦ದಕ್ಕೆ ನಗರದ ಹಲವು ಮುಖಗಳಲ್ಲಿ ನನ್ನೊಳಗಿನೊಳಗನ್ನು ಓದಬಲ್ಲಮುಖವೊ೦ದನ್ನು ಪಡೆವ ಹ೦ಬಲದ ನನ್ನ ಹಳೆಯ ಕನಸುಗಳಿಗೆ! ಸುದೀರ್ಘ ಕಾಲದಿ೦ದ ನನ್ನ ಬದುಕೊ೦ದು ಸುಳಿಗೆ ಸಿಕ್ಕ ನಾವೆ!ಓ ದೇವರೇ, ಮುಳುಗಿಸು ಅದನ್ನು ಇಲ್ಲವೇ ಮರಳಿಸು ಮರುಭೂಮಿಗೆ! ******** ಮೇಗರವಳ್ಳಿ ರಮೇಶ್

ಅನುವಾದ ಸಂಗಾತಿ Read Post »

ಇತರೆ, ಜೀವನ

ಇತರೆ

ಮರುಕ ಹುಟ್ಟುತ್ತದೆ ವಿದ್ಯಾ ಶ್ರೀ ಎಸ್ ಅಡೂರ್ ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ. ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ, ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ ನನ್ನೆಲ್ಲ ತುಂಟತನಗಳಿಗೆ ಜತೆಯಾಗಿದ್ದವಳು, ಮದುವೆಯಾಗಿ ಮಹಾನಗರವನ್ನು ಸೇರಿ “ಸಿಟಿವಂತ“ಳಾಗಿದ್ದಳು. ಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ ನನಗೆ ಮಜಬೂತು ಖಾತರ‍್ದಾರಿಯ ಪ್ಲಾನ್ಮಾಡಿಕೊಂಡಿದ್ದಳು.ಆತ್ಮೀಯತೆಯಿಂದ ನನ್ನನ್ನು ಬರಮಾಡಿಕೊಂಡು ಮಾತಿನಲ್ಲಿ ಮೈಮರೆತಿದ್ದವಳು ಅಚಾನಕ್ಕಾಗಿ ನಾಲಿಗೆ ಕಚ್ಚಿಕೊಂಡು ತನ್ನ ಏಳೆಂಟು ವರ್ಶದ ಮಗಳನ್ನು ಬಳಿಗೆ ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟಿದಳು. ಮರುಕ್ಷಣವೇ ಆ ಹುಡುಗಿ ಮನೆಯಿಂದ ಹೊರಗೋಡಿ ಸ್ವಲ್ಪ ಹೊತ್ತಿಗೆ ವಾಪಾಸಾಗಿದ್ದನ್ನು ನಾನು ಕಡೆಗಣ್ಣಿನಲ್ಲಿ ಗಮನಿಸಿದೆ. ಇಡೀದಿನ ಗೆಳತಿಯ ಆದರಾಥಿತ್ಯವನ್ನು ಸ್ವೀಕರಿಸಿ ದಣಿದಿದ್ದ ನಾನು, ಸ್ವಲ್ಪ ಹೊತ್ತು ಆರಾಮಾಗಿ ಕೂತಿರುವಾಗ ಆಕೆಯ ಮಗಳು ನನ್ನ ಜತೆಗೆ ಬಂದು ಕುಳಿತಳು.ನನಗೋ ತಡೆಯದೆ, “ಆಗ ಅಮ್ಮ ನಿನ್ನ ಬಳಿ ಏನು ಹೇಳಿದುದಕ್ಕೆ ನೀನು ಹೊರ ಹೋಗಿಬಂದೆ?” ಎಂದು ಕೇಳಿದೆ. ಮಾತು ತಪ್ಪಿಸಲರಿಯದ ಮುಗ್ಧಮಗು ”ನಮ್ಮ ಮನೆಯ ಫ್ರಿಜ್ಜಿನಲ್ಲಿ ಹಾಲು ಖಾಲಿಯಾಗಿ ಅಮ್ಮನಿಗೆ ತರುವುದು ಮರೆತಿತ್ತು. ಅದಕ್ಕೆ ಪಕ್ಕದ ಮನೆಯ ಆಂಟಿಯ ಫ್ರಿಜ್ಜಿನಿಂದ ಹಾಲು ಇಸಿದುಕೊಂಡು ಬರಲು ಅಮ್ಮ ಕಳಿಸಿದ್ಲು“ ಎಂದು ಹೇಳಿತು. ನಾನು ಪುನಃ ಕುತೂಹಲ ತಡೆಯದೆ ಫ್ರಿಜ್ಜಿಗೆ ಹಾಲು ಎಲ್ಲಿಂದ ಬರುತ್ತೆ ಎಂದು ಕೇಳಿದೆ. ಅದಕ್ಕೆ ಮಗು ”ರಾತ್ರಿ ಮಲಗುವಾಗ ಬಾಗಿಲು ಹತ್ರ ಚೀಟಿ ಹಾಕಿದ್ರೆ, ಬೆಳಿಗ್ಗೆ ಬಾಗಿಲು ತೆಗೆಯುವಷ್ಟರಲ್ಲಿ ಹಾಲು ಬಂದಿರುತ್ತೆ “ಎಂದು ಹೇಳಿತು. ಮನದಲ್ಲಿ ಇನ್ನೂ 2-3 ಪ್ರಶ್ನೆಗಳಿದ್ದರೂ,ಅವುಗಳು ಆ ಮಗುವಿನ ಜ್ಞಾನಕ್ಕೆ ನಿಲುಕದ್ದು ಎಂದು ಸುಮ್ಮನಾದೆ. ಗೆಳತಿಯ ಜತೆ ಬಾಲ್ಯದ ನೆನಪುಗಳನ್ನು ಪುನಃ ಒಮ್ಮೆ ಹಸಿರಾಗಿಸಿ ಸಂಜೆಗೆ ನಮ್ಮೂರಿನ ಬಸ್ಸು ಹತ್ತಿದವಳಿಗೆ “ಫ್ರಿಜ್ಜಿನಹಾಲಿನಮೂಲ” ಮನದಾಳದಲ್ಲಿ ದಾರಿ ಹುಡುಕತೊಡಗಿತ್ತು. ಸರಿಯಾಗಿ ನೆನಪಿಲ್ಲವಾದರೂ ಅಂದಾಜು ನಾನು 2-3ನೇ ತರಗತಿಯಲ್ಲಿರುವಾಗಲೊಮ್ಮೆ ನಮ್ಮ ತಾತ ನಮ್ಮ ಮನೆಗೆ ಬಂದಿದ್ದಾಗ,ಅವರಿಗೆ ಕಾಫಿ ಮಾಡಲೂ ನಮ್ಮ ಮನೆಯಲ್ಲಿ ಹಾಲಿರಲಿಲ್ಲ. ಬಡತನದ ಅಂದಿನ ದಿನಗಳಲ್ಲಿ ಮೂರು ಮಕ್ಕಳ ತಾಯಿಯಾದ ನಮ್ಮಮ್ಮ, ಕೊಂಡು ತಂದು ನಮಗೆ ಹಾಲು ಕುಡಿಸುವಷ್ಟು ಸಿರಿವಂತೆಯಾಗಿರಲಿಲ್ಲ. ಪರಿಸ್ಥಿತಿಯನ್ನು ಅರ‍್ಥ ಮಾಡಿಕೊಂಡ ನಮ್ಮ ತಾತ ಅಮ್ಮನಿಗೆ “ನೀನು ಮದುವೆಗೂ ಮುಂಚೆ ಹಟ್ಟಿ ತುಂಬಾ ದನಕರುಗಳನ್ನು ಕಟ್ಟಿ, ಸಾಕಿ,ಹಾಲನ್ನುಮಾರಿ,ಮನೆಯಲ್ಲಿ ಹಾಲು, ಮಜ್ಜಿಗೆ, ತುಪ್ಪ ಎಂದು ಸಮೃದ್ಧಿಯನ್ನು ಉಂಟುಮಾಡಿದ್ದವಳು. ಈಗ ನಿನ್ನ ಮಕ್ಕಳಿಗೆ ಹಾಲಿಲ್ಲವೆಂದು ಕೊರಗಬೇಡ. ನಿನ್ನಿಷ್ಟದ ಕರು ಈಗ ಹಸುವಾಗಿ ಯಥೇಚ್ಚ ಹಾಲನ್ನು ನೀಡುತ್ತಿದೆ. ಅದನ್ನು ನಿನ್ನಲ್ಲಿಗೆ ಕಳಿಸಿಕೊಡುತ್ತೇನೆ. ಮಕ್ಕಳು ಹಾಲು, ಮಜ್ಜಿಗೆಯ ಬಣ್ಣ ನೋಡಲಿ ಎಂದಾಗ ಅಮ್ಮ ಮತ್ತು ಅಜ್ಜನ ಕಣ್ಣಾಲಿಗಳು ತುಂಬಿದ್ದವು. ಮಾತಿಗೆ ತಪ್ಪದೇ ಅಜ್ಜ ಹಸುವನ್ನೂ ಅದರ ಕರುವನ್ನೂ ನಮ್ಮಲ್ಲಿಗೆ ಕಳುಹಿಸಿಯೇಬಿಟ್ಟರು .ಅನೇಕ ವರ‍್ಷಗಳಿಂದ ಅಮ್ಮನನ್ನು ನೋಡಿರದಿದ್ದ ಅಮ್ಮನೇ ಸಾಕಿದ್ದಹಸು, ಅಮ್ಮನನ್ನು ನೋಡಿ ಬಾಲ ನಿಮಿರಿಸಿ ಕುಣಿದು ಕುಪ್ಪಳಿಸಿತು .”ಬಂದೆಯಾ ಕುಂಟಿಮಾಚಕ್ಕ” ಎಂದು ಅಮ್ಮ ಹಸುವನ್ನು ಸ್ವಾಗತಿಸಿದಾಗ., ಇದೆಂತ ಹೆಸರು ಎಂಬ ನಮ್ಮ ಪ್ರಶ್ನೆಗೆ, ಕುಳ್ಳಗಿನ ಮಾಚಕ್ಕ ಎಂಬ ಹಸು ಕೊಂಡಾಟದಲ್ಲಿ ಕುಂಟಿಮಾಚಕ್ಕ ಎಂದಾಗಿದೆ ಎಂದರು.ನಮಗಂತೂ ಅದಕ್ಕಾಗಿ ಕಟ್ಟಿದ ಸಣ್ಣ ಹಟ್ಟಿಗೆ ದಿನಕ್ಕೊಂದು ಐವತ್ತು ಸಲ ಹೋಗಿ ಹಸು ಕರುವನ್ನು ನೋಡಿಕೊಂಡು ಬರುವುದೇ ಒಂದು ಸಂಭ್ರಮವಾಯಿತು .ಅಲ್ಲಿಂದ ಮುಂದೆ ನಮಗೆ ಕುಡಿಯಲು ಮಾತ್ರವಲ್ಲದೆ ಮಾರಾಟ ಮಾಡುವುದಕ್ಕೂ ಹಾಲು ಒದಗತೊಡಗಿತು. ಅನಂತರ ಹುಟ್ಟಿದ ಕರುಗಳಿಗೆ ಹೆಸರಿಡುವುದೇ ನಮಗೊಂದು ಸಂಭ್ರಮ. ಮೊದಲು ಹುಟ್ಟಿದವಳೇ ”ಚಿನ್ನಿ”. ಹೆಸರಿಗೆ ತಕ್ಕಂತೆ ಚಿನ್ನದಂತಹ ಹಸು. ನಮ್ಮಿಂದ ಹೆಚ್ಚಿನ ಕೊಂಡಾಟವನ್ನು ಅಪೇಕ್ಷಿಸದ ಅವಳಿಗೆ ತನ್ನ ಕಣ್ಣುಗಳಲ್ಲಿ ಉಕ್ಕುವ ಪ್ರೀತಿಯನ್ನು ಮರೆಮಾಚಲು ಗೊತ್ತಿರಲಿಲ್ಲ. ಅನಂತರ ಪುಟ್ಟಿ…ಬಂಗಾರಿ …ಹೀಗೆ ಸುಮಾರು ಕರುಗಳಾದವು. ಮೊದಲ ಎರಡು ತಿಂಗಳು ಕರುಗಳೆಲ್ಲ ಮನೆಯ ಒಳಗೇ ವಾಸ. ಮನೆಯೊಳಗೆ ಅವಕ್ಕೆ ಬೇಕಾದಲ್ಲಿ ಹೋಗಿ ಕೂರುವುದು, ಮಲಗುವುದು ಮಾಡುತ್ತಿದ್ದವು. ಮುಸ್ಸಂಜೆಗೆ ಎಲ್ಲರೂ ಕೂತು ದೇವರ ಭಜನೆ, ಶ್ಲೋಕ ಹೇಳುವಾಗ ನಮ್ಮ ಬಳಿಯೇ ಬಂದು ಅಂಟಿ ಕೂರುತ್ತಿದ್ದವು. ರಾತ್ರಿ ಚಾಪೆ ಹಾಸಿ ಮಲಗುವಾಗ ನಮ್ಮ ಚಾಪೆಯಲ್ಲೇ ಬಂದು ಮಲಗುತ್ತಿದ್ದವು. ಆದರೆ ಅಸಲಿ ಆಟ ಶುರುವಾಗಿದ್ದೇ ಚಿನ್ನಿ ಕರು ಹಾಕಿದ ನಂತರ.ಆವರೆಗಿನ ಎಲ್ಲಾ ಕರುಗಳೂ ಊರಿನ ತಳಿಯವಾಗಿದ್ದರೆ, ಚಿನ್ನಿ ಹಾಕಿದ ಕರು ಬೇರೆ ತಳಿ. ಉದ್ದಉದ್ದ ಕೈ..ಕಾಲಿನ, ದೊಡ್ಡ ದೊಡ್ಡ ಕಿವಿಯ, ನೀಲಿಕಣ್ಣಂಚಿನ, ಇಟ್ಟಿಗೆಬಣ್ಣದ, ಹಣೆಯ ಮೇಲೆ ಎರಡು ಬಿಳಿಯ ಬೊಟ್ಟುಳ್ಳ, ಬೆಣ್ಣೆಯಂತೆ ನುಣುಪಾದ ಕೂದಲಿನ, ಮುದ್ದು ಮುದ್ದಾಗಿ ಓಡಾಡುತ್ತ ನಮ್ಮ ಮಡಿಲಿನಲ್ಲೇ ಎಂಬಂತೆ ಬಂದು ಕೂರುತ್ತಿದ್ದ ಸುಂದರಿ ಕರುವಿಗೆ ನಾವೆಲ್ಲರೂ ಒಮ್ಮತದಿಂದ ಇಟ್ಟ ಹೆಸರು “ಸಿಂಗಾರಿ”.ನಾವೆಲ್ಲರೂ ಆಕೆ ಧರೆಗಿಳಿದ ಶಾಪಗ್ರಸ್ತ ಅಪ್ಸರೆಯೇನೋ ಎಂಬಂತೆ ಅವಳ ಮೋಹಕ್ಕೆ ಒಳಗಾಗಿದ್ದೆವು. ಸಂಜೆ ಶಾಲೆ ಬಿಟ್ಟಾಗ ಎಲ್ಲಿಯೂ ನಿಲ್ಲದೆ ಓಡೋಡಿ ಬಂದು ಅವಳ ಜೊತೆ ಆಟಕ್ಕೆ ಬೀಳುತ್ತಿದ್ದೆವು. ಸ್ವಲ್ಪ ಸಮಯದ ನಂತರ ಮನೆ ಬಿಟ್ಟು ಆಕೆ ಹಟ್ಟಿಗೆ ಶಿಫ್ಟ್ ಆದಮೇಲೆ ನಾವೆಲ್ಲ ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳತೊಡಗಿದರೆ ಕೊನೆಯವನಾದ ನನ್ನ ತಮ್ಮ, ಅವಳ ಜೊತೆ ಹಟ್ಟಿಗೇ ಶಿಫ್ಟ್ ಆಗಿಬಿಟ್ಟಿದ್ದ. ಸಂಜೆ ಹೊತ್ತು ಶಾಲೆ ಮುಗಿಸಿ ಬಂದು, ತಿನ್ನಲು ಹಾಳುಮೂಳುಗಳೆಲ್ಲಾ ಇರದ ಆ ದಿನಗಳಲ್ಲಿ, ಬೆಲ್ಲ ತಿನ್ನುವುದು ಅಭ್ಯಾಸ ಮಾಡಿಕೊಂಡಿದ್ದ ಆತ,ತನ್ನ ಅಂಗಿಯ ಕಿಸೆ ತುಂಬಾ ಬೆಲ್ಲದ ಚೂರುಗಳನ್ನು ತುಂಬಿಕೊಂಡು ಹೋಗಿ ದನಗಳಿಗೆ ಹುಲ್ಲು ಹಾಕುವ ಬೈಪಣೆಯಲ್ಲಿ ಮಲಗಿಬಿಡುತ್ತಿದ್ದ. ಅವನ ಕೆನ್ನೆ,ಮುಖ, ಕೈಯನ್ನೆಲ್ಲಾ ನೆಕ್ಕುತ್ತಿದ್ದ ಚಿನ್ನಿ ಮತ್ತು ಸಿಂಗಾರಿ ಬೆಲ್ಲದ ಪರಿಮಳಕ್ಕೆ ಕಿಸೆಯೊಳಗೇ…… ನಾಲಿಗೆ ಹಾಕಿ ಬೆಲ್ಲ ಖಾಲಿ ಮಾಡುತ್ತಿದ್ದವು. ಕಾಲ ಸರಿದಂತೆ ಕರುವಾಗಿದ್ದ ಸಿಂಗಾರಿ ದನವಾಗಿ ತಾನೇ ಕರು ಹಾಕತೊಡಗಿದಾಗ, ನಮಗೋ ಅವುಗಳಿಗೆ ಹೆಸರಿಡುವುದೇ ಒಂದು ಸಂಭ್ರಮ. ರಾಜ…ಭೋಜ ಇನ್ನೂ ಏನೇನೋ.. ನಮ್ಮ ಮೂರು ಜನ ಮಕ್ಕಳ ಬದುಕು ರೂಪಿಸುವ ಜವಾಬ್ದಾರಿ ಹೊತ್ತ ನಮ್ಮ ಅಮ್ಮನ ಹೊರೆ ಹೆಚ್ಚಾಗಿದ್ದುದರಿಂದ ಖರ್ಚಿನ ನಿರ‍್ವಹಣೆಗೂ ನಾವು ಜಾನುವಾರುಗಳನ್ನು ಅವಲಂಬಿಸಿದ್ದೆವು. ಮೂರು ಹೊತ್ತೂ ಹುಲ್ಲು ಹೆರೆದು ಹಾಕಿ ಸಾಕಲು ಕಷ್ಟವಾಗುತ್ತಿದ್ದರಿಂದ ಹಗಲು ಹೊತ್ತು ಗುಡ್ಡೆಗೆ ಹೋಗಿ ತಾವೇ ಮೇಯಲು ಬಿಟ್ಟುಬಿಡುತ್ತಿದ್ದೆವು. ದಿನವಿಡೀ ಮೇದು ಸಂಜೆಗೆ ಮನೆಗೆ ಮರಳುತ್ತಿದ್ದವು. ನಮ್ಮ ಚಿನ್ನಿ ನಾಯಕತ್ವದ ದನಗಳ ಗುಂಪು. ಆದರೆ ಎಲ್ಲರಂತಲ್ಲದ ನಮ್ಮ ಸಿಂಗಾರಿ ಈ ವಿಷಯದಲ್ಲಿ ಹೇಗೆ ಎಲ್ಲರಂತೆ ಆದಾಳು?ಹಗಲು ಮೇಯುವಾಗ ಅವಳಿಗೆ ಹೊಟ್ಟೆತುಂಬುತ್ತಿರಲಿಲ್ಲವೋ,..ಅಲ್ಲ ಬೇಕೆಂದೇ ಚೇಷ್ಟೆ ಮಾಡುತ್ತಿದ್ದಳೋ…..?ಕೆಟ್ಟಬುಧ್ಧಿಯೊಂದು ಕಲಿತುಬಿಟ್ಟಳು. ಸಂಜೆ ಎಲ್ಲರೊಂದಿಗೆ ಮನೆಗೆ ಬರದೆ, ಎಲ್ಲಾದರೂ ಮರೆಯಲ್ಲಿ ಕಾದಿದ್ದು, ಹಗಲು ಗುರುತು ಮಾಡಿಕೊಂಡಿರುವ ಜಾಗಕ್ಕೆ ರಾತ್ರಿ ಹೋಗಿ ಮೇದು,ನಡುರಾತ್ರಿಯಲ್ಲಿ ವಾಪಾಸಾಗುತ್ತಿದ್ದಳು.ಅದೂ ಇಡೀ ಊರಿಗೇ ಕೇಳುವಂತೆ ಶಂಖ ಊದಿದಂತೆ ಕೂಗಿಕೊಂಡು. ಕ್ರಮೇಣ ದಿನ ಕಳೆದಂತೆ ಫಸಲು ಕಳೆದುಕೊಂಡ ಒಬ್ಬೊಬ್ಬರೇ ಬಂದು ಅಮ್ಮನಲ್ಲಿ ದೂರು ಹೇಳಲು ಸುರುಮಾಡಿದರು. ಕಟ್ಟಿ ಹಾಕಿ ಸಾಕುವ ಸಾಧ್ಯತೆಗಳೇ ಇಲ್ಲದೆ ಅಮ್ಮ ಒಳಗಿಂದೊಳಗೇ ಪೇಚಾಡತೊಡಗಿದರು. ಕಡೆಗೂ ಅವಳನ್ನು ಯಾರಾದರೂ ಸಾಕಿಕೊಳ್ಳುವವರಿಗೆ ಕೊಡುವುದು ಎಂದು ತೀರ‍್ಮಾನವಾದಾಗ ಹೊಟ್ಟೆಯೊಳಗೆ ಆದ ಸಂಕಟವನ್ನು ನಾನು ಇವತ್ತಿಗೂ ಅನುಭವಿಸಬಲ್ಲೆ. ಪೇಟೆಯಲ್ಲಿ ಅಪ್ಪನ ಅಂಗಡಿ ಸಮೀಪದ ಮನೆಯವರು ಬಂದು ಅವಳನ್ನು ಕರೆದೊಯ್ಯುವಾಗ ನಾವು ಮನೆಯಲ್ಲಿರಲಿಲ್ಲಮರುದಿನ ಅಂಗಡಿಗೆ ಹೋದ ಅಪ್ಪ ರಾತ್ರಿ ಮರಳುವಾಗ ಮಾಮೂಲಿನಂತಿರಲಿಲ್ಲ. ಏನೆಂದು ವಿಚಾರಿಸಿದಾಗ ಅವರು ಹೇಳಿದ್ದು, “ಸಿಂಗಾರಿ ಅಂಗಡಿ ಬಳಿ ಬಂದವಳು ಸಂಜೆವರೆಗೂ ಹೋಗಲೇಇಲ್ಲ. ಅಂಗಡಿ ಬಾಗಿಲಲ್ಲೇ ಮಲಗಿದ್ದಳು”ಎಂದು.ನಮಗೆಲ್ಲ ಹೃದಯ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಅನುಭವ. ಹೊಟ್ಟೆಯಲ್ಲಿ ಅದೇನೋ ಕಿಚಿಪಿಚಿ.ಮರುದಿನ ಅಪ್ಪ ಅಂಗಡಿಗೆಹೊರಟಾಗ, ಆವತ್ತಿನ ತಿಂಡಿಯದೊಂದು ಪೊಟ್ಟಣ ಕಟ್ಟಿ ಅಮ್ಮ, ಅಪ್ಪನ ಕೈಗಿತ್ತು”ಸಿಂಗಾರಿಗೆ ತಿನ್ನಿಸಿ “ಎಂದಾಗ ಆಕೆಯ ಕಣ್ಣಂಚಿನಲ್ಲಿ ನೀರು ಜಿನುಗಿದ್ದನ್ನು ಆಕೆಗೆ ನಮ್ಮಿಂದ ಮರೆಮಾಚಲಾಗಲಿಲ್ಲ ಎಂಬುವುದು ನನಗೆ ಇಂದಿಗೂ ನೆನಪಿದೆ. ಇವತ್ತಿನ ಆಧುನಿಕತೆಯ ನಾಗಾಲೋಟದ ನಡುವೆಯೂ ಹಟ್ಟಿಯಲ್ಲಿರುವ ಹಸುಕರುಗಳಿಗೆ ಹೆಸರಿಟ್ಟು, ಅವುಗಳ ಜೊತೆಗೆ ಕುಣಿದು ಸಂಭ್ರಮಿಸುವ ನನ್ನ ಮಗಳನ್ನು ನೋಡಿದರೆ, ಸಧ್ಯ ನಾನೂ ನನ್ನ ಗೆಳತಿಯಂತೆ ಸಿಟಿವಂತಳಾಗದೇ ಉಳಿದೆನಲ್ಲಾ ಎಂದು ಸಮಾಧಾನವಾದರೂ…….ಕಾಮನ್ಸೆನ್ಸ್ ಇಲ್ಲದ, ಹಳ್ಳಿಗರು ಎಂದರೆ ತಾತ್ಸಾರ ಮಾಡುವ ಸಿಟಿಯವರನ್ನು ನೆನೆದರೆ ಮರುಕ ಹುಟ್ಟುತ್ತದೆ.*************

ಇತರೆ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಮಾಲತಿ ಹೆಗಡೆ ನೂರು ಆಸೆ ನೂರು ಕನಸ ಹತ್ತಿಕ್ಕುತ ನಡೆದೆಯೇಕೆ?ಕೋಪತಾಪದಲ್ಲಿ ಬಳಲಿ ಬಿಕ್ಕುತ್ತ ನಡೆದೆಯೇಕೆ? ಹೆತ್ತ ಕೂಸಿನ ವಾತ್ಸಲ್ಯವ ಕಳಚಿ ನಿರ್ಮೋಹ ಮೆರೆದೆಉತ್ತರ ಕೊಡದ ಮೌನ ಕಕ್ಕುತ್ತ ನಡೆದೆಯೇಕೆ? ಸಿಕ್ಕ ಬದುಕ ಕಟ್ಟಲರಿಯದೇ ಸಿಕ್ಕು ಸಿಕ್ಕಾಗಿಸಿ ಸೊರಗಿದೆನಕಾರಾತ್ಮಕ ವಿಚಾರದಲ್ಲೇ ಸೊಕ್ಕುತ್ತ ನಡೆದೆಯೇಕೆ? ಹುಟ್ಟಿದವರಿಗೆಲ್ಲ ಒಂದು ದಿನ ಬರುವುದು ಸಾವು ನಿಶ್ಚಿತಅರೆ ಆಯುಷ್ಯದಲ್ಲೇ ಸೋಲು ಮುಕ್ಕುತ್ತ ನಡೆದೆಯೇಕೆ? ಮುದ್ದುಕಂದನಿಗೆ ಅಮ್ಮನಾಗಿ ಹೆಮ್ಮೆಯ ದೇವತೆಯಾಗಿದ್ದೆನಕ್ಷತ್ರವಾಗುವ ಹುಚ್ಚಿನಲಿ ನೋಯುತ್ತ ನಡೆದೆಯೇಕೆ? ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೌದಿ ಸ್ಮಿತಾ ರಾಘವೇಂದ್ರ ಮಂಚದ ಅಂಚಿನ ಮೂಲೆಯಲ್ಲೋನಾಗಂದಿಗೆಯ ಹಾಸಿನಲ್ಲೋತುಕ್ಕು ಹಿಡಿದ ಟ್ರಂಕಿನೊಳಗೋ ಭದ್ರವಾಗಿಯೇ ಇರುವ ಗಂಟು. ಆಗಾಗ ಸುಮ್ಮನೇ ಎಳೆದು ತಂದುಗಂಟಿಗೆ ಕೈ ಹಚ್ಚಿದಾಗೆಲ್ಲತರಾತುರಿಯ ಕೆಲಸವೊಂದು ಹಾಜರುಸಮಯ ಹೊಂದಿಸಿಕೊಂಡುಬಿಚ್ಚಿಕೊಳ್ಳುತ್ತವೆ ರಾಶಿ ರಾಶಿ ನೆನಪುಹರಿದಿಲ್ಲ,ಹುಕ್ಕು ಕಿತ್ತಿಲ್ಲ,ಮಾಸಿದ್ದೂ ಇಲ್ಲಮುದ್ದೆಯಾದ ಗೆರೆಗಳ ತುಂಬಆಪ್ಯಾಯ ಕಂಪುಮತ್ತೆ ಹೆಗಲೇರುವ ಒನಪು ಸಂಜೆ ಹೊತ್ತಿಗೆ ಸಾಕೆನ್ನಿಸುತ್ತದೆಇಳಿಸಂಜೆಯ ಬದುಕಿನಂತೆ.ಬಿಡಿಸಿಕೊಳ್ಳಲಾಗದ ನಂಟಿನಂತೆ ಬಣ್ಣ ಬಣ್ಣದ ಅರಿವೆಗಳ ಅರಿಯಬೇಕುಇನ್ನೂಬದುಕು ಸವೆದ ಪುಟಗಳ ಮಸುಕು ಅಕ್ಷರಗಳಂತೆತೊಟ್ಟು ಸಂಭ್ರಮಿಸಿದ ಹಲವು ಭಾವಬಿಡಲಾಗದು ಬಳಸಲಾಗದುಆದರೂ ಇರಬೇಕು ಜೊತೆಯಾಗಿಮುದುಡಿದ ಕನಸುಗಳು. ಹೊಸ ಭಾವ ತುಂಬುವ ಹುರುಪಿನಲಿಯಾವುದೋ ಗಳಿಗೆಯಲ್ಲಿಕತ್ತರಿಗೆ ಸಿಕ್ಕು ಚಂದನೆಯ ಚೌಕ ಚೌಕಮತ್ತೆ ಜೋಡಿಸಿ ಅಂದ ನೋಡುವಸಿಂಪಿಯ ಉತ್ಸಾಹ ವಿಶಾಲವಾಗಿ ಹರಡಿಕೊಂಡಹಳೆಯ ಹೆಂಚಿನ ಮನೆಯಂತೆಆಪ್ತ ಆಪ್ತಕಳೆದ ಬದುಕನ್ನೇಬರಸೆಳೆದು ಹುದುಗಿಸಿಮೆತ್ತಗಾಗಿಸುತ್ತವೆಪ್ರತೀ ರಾತ್ರಿ.ನೀಟಾದ ಎಳೆಗಳು ಹೇಳುತ್ತವೆಮತ್ತೆ ಮತ್ತೆ ಹೊಲಿ ಬದುಕ ಕೌದಿಯಂತೆ. *************

ಕಾವ್ಯಯಾನ Read Post »

You cannot copy content of this page

Scroll to Top