ಕಾವ್ಯಯಾನ

ಶರಣಾಗಿ ಬಿಡಲೆ

ವಸುಂಧರಾ ಕದಲೂರು ನಿನ್ನ ಕಂಗಳ ಪ್ರಾಮಾಣಿಕತೆನನ್ನನು ಹಿಂಬಾಲಿಸುತ್ತಿದೆ.ಭದ್ರ ಕೋಟೆ ಗಟ್ಟಿ ಬೇಲಿಛಿದ್ರಗೊಳಿಸಿ ಎದೆ ತಟ್ಟುತ್ತಿದೆ. ನೀನು ಮಂಡಿಯೂರಿ ಬಿಡುನೀನೂ ಮಂಡಿಯೂರಿ ಬಿಡು ಮಾರ್ದನಿಸುವ ಮಾತುಗಳಿಗೆಇನ್ನೆಷ್ಟು ಕಾಲ ಕಿವುಡಾಗಿರಲಿಹಾದಿ ಮರೆವ ಮುನ್ನ ನಾಕುಹೆಜ್ಜೆ ನಡೆದು ಬರಲೆ ಹನಿಮುತ್ತು ಜಲಗರ್ಭದಚಿಪ್ಪೊಳಗೆ ಕಾಣೆಯಾಗಲುಬಿಡಬೇಡ ಮುಳುಗಿ ತೆಗೆಪಿಸುಮಾತು ಕೇಳುತ್ತಿದೆ ಪ್ರತಿಧ್ವನಿ ತರಂಗವಾಗಿಹೃದಯದಲಿ ನಯವಾಗಿನವುರಾಗಿ ಲಯವಾಗಿಕಂಪನ ಎಬ್ಬಿಸುತ್ತಿವೆ. ******* ಕಾಲ ದುಬಾರಿ ತಾನೆಂದುಸಾಬೀತು ಪಡಿಸುತ್ತಿದೆಜಾರಿಹೋದ ನೆನಪುಗಳಈಟಿಯಿಂದ ಇರಿಯುತ್ತಾ. ನಾನು ಶರಣಾಗಿ ಬಿಡಲೆನಾನೂ ಶರಣಾಗಿ ಬಿಡಲೆ

ಶರಣಾಗಿ ಬಿಡಲೆ Read Post »