ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಲಹರಿ

ಹಾಡುಗಳು ಹೀಗೆ…. ಜಿ.ಲೋಕೇಶ್ ಈ ಬದುಕಿನ ಒತ್ತಡಗಳನ್ನು ನಿಭಾಯಿಸುವವರು ತಾವು ಅದರಿಂದ ಮುಕ್ತರಾಗಲು ತಾವು ತಾವಾಗಿಯೇ ಇರಲು ಹಲವು ದಾರಿಗಳನ್ನು ಕಂಡುಕೊಳ್ಳುತ್ತಾರೆ.ಅದರಲ್ಲಿ ಸಂಗೀತವಂತು ಮನಸ್ಸಿಗೆ ಹಬ್ಬ ನೀಡುವ ಬೆಳಕು.ಹಾಡುಗಳನ್ನು ಗುನುಗುತ್ತಾ ಅವುಗಳೊಡನೆ ದಿನ ದೂಡುವ ಎಷ್ಟೋ ಮನಸ್ಸುಗಳಿವೆ. ಕೆಲವು ಹಾಡುಗಳಂತು ಎಷ್ಟು ಕಾಡುತ್ತವೆ ಅಂದರೆ ಬಹುಶಃ ಅವು ನಮ್ಮ ಬದುಕಿನುದ್ದಕ್ಕೂ ಜೊತೆಗೆ ಇದ್ದು ಬಿಡುತ್ತವೆ.ನಮ್ಮೊಂದಿಗೆ, ನಮ್ಮೊಡನೆ,ನಮ್ಮ ಜೀವನದ ಘಟನೆಗಳೊಡನೆ ತಳಕು ಹಾಕಿಕೊಂಡಿರುತ್ತವೆ.ಅದರಲ್ಲಿ ಪ್ರೇಮಿಗಳಿಗಂತು ಹಾಡುಗಳು ವರದಾನ. ಅಂತಹ ಪ್ರೇಮಿ ಹೀಗೆ ತನ್ನ ಜೀವನವನ್ನು ತನ್ನ ಪ್ರಿಯತಮೆಗಾಗಿ ಮೀಸಲಿಡಬಹುದು. “ತೇರೆ ಮೇರೆ ಸಪ್ನೆಅಬ್ ಏಕ್ ರಂಗ್ ಹೈ!”ವಾಹ್ ಎಂತಹ ಅದ್ಭುತ ಸಾಲುಗಳು ಅವಳ ಕನಸುಗಳು, ಇವನ ಕನಸುಗಳು ಒಂದೇ ಬಣ್ಣದಲ್ಲಿವೆ. ಸಾಕಲ್ಲವೇ?ಮನಸ್ಸಿಗೆ ಇನ್ನೇನು ಬೇಕು? ಸರ್ವ ಋತುವು ವಸಂತವೇ, ಚಿಗುರೆಲೆಯ ಘಮಲೇ!” “ದೂರ ಬೆಟ್ಟದಲ್ಲಿ ಒಂದು ಮನೆಯಿರಬೇಕು,ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು”ಈ ಹಾಡಿನ ಸಾಲುಗಳು ಅವನು ಅವಳು ಕಂಡ ಕನಸುಗಳನ್ನು ಪ್ರತಿ ಕ್ಷಣವನ್ನು ನೆನಪಿಸುತ್ತಿರುತ್ತದೆ .ಅವರದೇ ಕನಸಿನ ಮನೆಯನ್ನು ಈ ಸಮಾಜದ ಗೊಡವೆಯೇ ಇರದ ದೂರದ ಬೆಟ್ಟದಲ್ಲಿ ಮನೆ ನಿರ್ಮಿಸಿ ಹಾಸಿ ಹೊದಿಯಲು ಕನಸುಗಳು. ಇವನಿಗೆ ಅವಳು, ಅವಳಿಗೆ ಇವನು .ಹಾಸಿ ಹೊದಿಯಲು ಕನಸುಗಳು. ಮುದಿತನದ ದಿನಗಳವರೆಗೂ ಇಬ್ಬರೇ! ಮಕ್ಕಳು ಬೇಡವೇ ಎನ್ನುತ್ತಾಳೆ ಅವಳು ಹಾಡುಗಳನ್ನು ಕೇಳಿ, ಕೇಳಿ ಇವನೆ ಒಂದು ಸಾಲು ಹೇಳುತ್ತಾನೆ “ಮಗುವಿನಂತೆ ನೀನಿರಲುಮಕ್ಕಳು ಬೇಕೆ? ಜೊತೆಗಿರಲು”ಮನೆಯ ಸುತ್ತಲೂ ಹೂವು ರಾಶಿ ಹಾಸಿಕೊಂಡು ದಿನವು ಇವರನ್ನು ನೋಡಿ ನಗುತಿರಬೇಕು. ಮನೆಯ ಮುಂದೆ ಹೊಂಡ ನಿರ್ಮಿಸಿ ಅದರಲ್ಲಿ ಕಮಲದ ಹೂಗಳು ಬಾತುಕೋಳಿಗಳು ಒಂದಷ್ಟು ವಿವಿಧ ಜಾತಿಯ ಹಕ್ಕಿಗಳು. ಹೊಸ ಪ್ರಪಂಚವನ್ನೇ ನಿರ್ಮಾಣ ಮಾಡಿ ಬದುಕು ಸಾಗಬೇಕು.ಆಕಸ್ಮಾತ್ ಅವಳಿಗೆ ನೋವಾದರೆ ಹೇಳುತ್ತಾನೆ “ನೀನ್ಯಾತಕೆ ಬಾಡುವೆ ಸೊರಗಿನಾನಿಲ್ಲವೇ ಆಸರೆಯಾಗಿ”ಅವಳನ್ನು ತೊಡೆಯ ಮೇಲೆ ಇರಿಸಿ ತಲೆ ನೇವರಿಸುತ್ತಾ ಕಂಗಳ ಹನಿಗಳನ್ನು ತಡೆಯುವನು ಕೊನೆಗೆ ಅವಳ ಅನುಪಸ್ಥಿತಿ ಕಾಡಿ ಹೇಳುತ್ತಾನೆ “ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಿಅದರ ಮಧುರ ಸ್ಮೃತಿಯ ನಾನುಹೇಗೆ ತಾನೇ ಮರೆಯಲಿ.”ಎಂದು ನೋವು ತಡೆದು ಪ್ರತಿದಿನವೂ ಬದುಕು ದೂಡುತ್ತಾನೆ. ಅವನ ಬದುಕಿನ ಪುಟವು ಕೊನೆಯಾಗ ಬಂದಾಗ “ಒಲವೇ ಜೀವನ ಸಾಕ್ಷಾತ್ಕಾರಒಲವೇ ಮರೆಯದ ಮಮಕಾರ.”ಎಂದು ಜಗವು ಇವರ ರೀತಿಯ ಪ್ರೀತಿ ಕಂಡಿಲ್ಲದಂತೆ ಅಮರವಾಗಿಸುತ್ತಾನೆಕೊನೆಗೆ ಒಂದು ಉಯಿಲು ಬರೆದಿಡುತ್ತಾನೆ. ದಿನವೂ ನಮ್ಮ ಸಮಾಧಿಯ ಮುಂದೆ ಹೂಗಳು ನಲಿಯುತ್ತಿರಲಿ. ನಮ್ಮ ಕನಸುಗಳು ಮುಂದುವರಿಯಲು ಮತ್ತೊಂದು ಜೀವಾತ್ಮಗಳು ಮನೆಯನ್ನು ಸಿಂಗರಿಸಲಿಅವರ ಬೆಳಗುಗಳು ಮತ್ತಷ್ಟು ಹೊಸ ಹಾಡುಗಳೊಂದಿಗೆ ಪ್ರಾರಂಭವಾಗಲಿ ಎಂದು! ************* ಜಿ.ಲೋಕೇಶಶಿಕ್ಷಕರುಸ.ಹಿರಿಯ ಪ್ರಾಥಮಿಕ ಶಾಲೆ ಮೈಲಾಪುರಚಿಂತಾಮಣಿ ತಾಲೂಕುಚಿಕ್ಕಬಳ್ಳಾಪುರ ಜಿಲ್ಲೆ563125# 9731549945

ಲಹರಿ Read Post »

ಇತರೆ

ಶಿಶು ಗೀತೆ

ಪುಟ್ಟನ ಮನೆ ತೇಜಾವತಿ ಹೆಚ್.ಡಿ. ಒಮ್ಮೆ ಪುಟ್ಟಅಮ್ಮನೊಡನೆಸಾಗರ ನೋಡಲೋದರಾಶಿ ರಾಶಿಉಸುಕು ಕಂಡುಕುಣಿದು ಕುಣಿದು ಹಿಗ್ಗಿದ || ಪುಟ್ಟ ನುಣುಪುಉಸುಕಿನಲ್ಲಿಚಂದ ಮನೆಯ ಕಟ್ಟಿದಅಲೆಯು ಬಂದುಕೊಚ್ಚಿ ಹೊಯ್ದುಅಮ್ಮಾ! ಎಂದು ಕೂಗಿದ || ಅಮ್ಮ ಬಂದುಹೇಳು ಕಂದಏಕೆ ಅಳುವೆ ಎನ್ನಲುನೋವಿನಿಂದಉರುಳಿ ಬಿದ್ದಮನೆಯ ತೋರಿ ಹಲುಬಿದ || ಕೇಳು ಮಗನೆಏಕೆ ಅಳುವೆಮರಳ ಮನೆಯು ಕ್ಷಣಿಕವುನೀನು ಕಟ್ಟುಮನದ ಮನೆಯಆತ್ಮ ಛಲವು ಜೊತೆಗಿದೆ || ಒಡನೆ ಪುಟ್ಟಎದ್ದು ನಿಂತುಅಮ್ಮನಪ್ಪಿ ಹೇಳಿದಬಿಡೆನು ನಾನುನಿನ್ನ ಮಾತಒಪ್ಪಿಕೊಂಡೆ ಎಂದನು || ಮಗನ ನುಡಿಯಕೇಳಿ ಅಮ್ಮಪ್ರೀತಿ ಧಾರೆ ಎರೆದಳುಮಿಂದ ಪುಟ್ಟಮಡಿಲ ಸುಖದಿಹೊಸತು ಕನಸ ಕಂಡನು || ಊರಿನಲ್ಲಿಗೆಳೆಯರೊಡನೆಜೀವ ಭಾವ ಹುಡುಕಿದತಂದು ಎಲ್ಲಕೂಡಿ ಕಳೆದುಮನದ ಮನೆಯ ಕಟ್ಟಿದ || ಅಮ್ಮ ನೀನುಬಂದು ನೋಡುಎಂದು ಮುದದಿ ಓಡಿದನೋಡಿ ಅವಳುಶ್ರಮದ ಫಲವು  ದೊರೆವುದೆಂದು ನುಡಿದಳು || ಅಂದಿನಿಂದಪುಟ್ಟ ತಾನುಕೋಟಿ ಕನಸ ಕಂಡನುಬಿಡದೆ ಹಿಡಿದುತನ್ನ ಛಲವದೊಡ್ಡ ಜಾಣನಾದನು || ***********

ಶಿಶು ಗೀತೆ Read Post »

ಕಾವ್ಯಯಾನ

ಅನುವಾದ ಸಂಗಾತಿ

ಗುಟ್ಟು ಮೂಲ: ಶರತ್ ಚಂದ್ರ ಬರ್ (ಬೋಡೊ) ಕನ್ನಡಕ್ಕೆ: ನಾಗರಾಜ ಹರಪನಹಳ್ಳಿ ಯಾವ ಕಣ್ಣೀರಿನಲ್ಲಿಹೃದಯ ಮಿಡಿತದ ಸಂದೇಶವಿಲ್ಲವೋ ಯಾವ ಕಣ್ಣೀರಿನಲ್ಲಿಪವಿತ್ರವಾದ ಸತ್ಯವಿಲ್ಲವೋಯಾವ ಕಣ್ಣೀರಿನಲ್ಲಿಒಡೆದ ಹೃದಯದ ಸದ್ದು ಇಲ್ಲವೋಆ ಕಣ್ಣೀರು ಅಪ್ಪಟ ಕಣ್ಣೀರಲ್ಲ ಯಾವ ನಗುವಿನಲ್ಲಿ ಮೌಲ್ಯದ ಬೆಳಗು ಇಲ್ಲವೋಯಾವ ನಗುಕಲ್ಮಶದ ಪರದೆಯಲ್ಲಿ ಅಡಗಿದೆಯೋಅಂತಹ ನಗು ಸಂತಸದ ನಗುವಲ್ಲ ಯಾವ ಪ್ರೀತಿ ತನ್ನಷ್ಟಕ್ಕೆ ತಾನು ಅರಳುವುದಿಲ್ಲವೋಯಾವ ಪ್ರೀತಿಯಲ್ಲಿ ಬೆಸುಗೆಯ ಗುಣವಿಲ್ಲವೋಅಂತಹ ಪ್ರೀತಿಆದರಣೀಯ ಪ್ರೀತಿಯಲ್ಲ ಯಾವ ಕಾಣಿಕೆಯಲ್ಲಿಮರಳಿ ಪಡೆವ‌ ವ್ಯಾಮೋಹವಿದೆಯೋಯಾವ ಕಾಣಿಕೆಯಲ್ಲಿಪ್ರಶಂಸೆಯನ್ನು ಪಡೆವ‌ ಅಪೇಕ್ಷೆಯಿದೆಯೋಅಂತಹ ಕಾಣಿಕೆ ಕಾಣಿಕೆಯಲ್ಲ………………….. ನಾಗರಾಜ್ ಹರಪನಹಳ್ಳಿ

ಅನುವಾದ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬಣ್ಣದ ಜೋಳಿಗೆ ಬಣ್ಣದ ಜೋಳಿಗೆ ಸ್ನೇಹಾ ಪಬ್ಲಿಕೇಶನ್ಸ್ ಗಾಯಿತ್ರಿ ರಾಜ್ “”ಬಣ್ಣದ ಜೋಳಿಗೆ “” ಗಾಯತ್ರಿ ರಾಜ್ ಅವರ ಮೊದಲ ಕಥಾ ಸಂಕಲನ, ಚೊಚ್ಚಲ ಪುಸ್ತಕ,ಒಂದೇ ದಿನದಲ್ಲಿ ಬರೆಯಬಹುದುದಾದ ಅನಿಸಿಕೆಗೆ ಮೂರು ದಿನಾ ತಗೊಂಡೆ ಅಂದ್ರೆ ನಾನು ಬರೆಯೋದು “ಆರು ಹೆತ್ತೋಳಿಗೆ ಮೂರು ಹೆತ್ತೋಳು ಹದ ಹೇಳಿದಂತೆ”” ಆಗತ್ತೇನೋ ಅನ್ನಿಸಿ, ತಡ ಮಾಡಿದೆ, ನನ್ನ ತಿಳಿವಿನ ಮಟ್ಟಕ್ಕೆ, ಯಾವ ಅತಿಶಯೋಕ್ತಿ ಪೂರ್ವಗ್ರಹ ಇಲ್ಲದೇ ಬರೆದಿರುವೆ, ಗುಣಕ್ಕೆ ಮತ್ಸರ ಏಕೆ?? ಅಲ್ವಾ..ಪೂರ್ಣ ಪ್ರಮಾಣದಲ್ಲಿ ಬರಹಕ್ಕೆ ಕುಳಿತರೆ ಒಳ್ಳೇ ಸಾಹಿತಿ ಆಗಬಲ್ಲಳು, ಯಾಕೆಂದರೆ ಬರಹಗಾರನಿಗೆ ಮೂಲತಃ ಇರಬೇಕಾದದ್ದು ತಾನು ಬರೆಯುವ ವಿಷಯದ ಅಧ್ಯಯನ ಮತ್ತು ಅರಿವು, ಮತ್ತು ಎಲ್ಲಾ ಪ್ರಕಾರಗಳಲ್ಲಿ ಬರೆಯೋದು, ಈಗಾಗಲೇ ಇವಳ ಕಥೆ, ಕವನ, ಪ್ರವಾಸಕಥನಗಳು ಸುಧಾ ತರಂಗ, ಕರ್ಮವೀರ, ಓ ಮನಸೇ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಹೊಸ ದಿಗಂತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ, ಸಂಪದ ಸಾಲು ಪತ್ರಿಕೆಯ ವರ್ಷಗಳ ಅಂಕಣಕಾರ್ತಿ ಕೂಡಾ… ಅಭಿನಂದನೆಗಳು, ಶುಭಾಶಯಗಳು ಗೆಳತೀ…ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿಯಾಗಿರೋ ಗಾಯತ್ರಿ ನಂಗೆ ಫೇಸ್ಬುಕ್ ಪರಿಚಯ, ಓದಿನ ಬರಹದ ಸಮಾನ ಆಸಕ್ತಿ ನಮ್ಮನ್ನು ಹತ್ತಿರ ತಂದಿದ್ದಾದರೂ ಬಹಳಷ್ಟು ಆಸಕ್ತಿಯ ಸಾಮ್ಯತೆಗಳು ಗೆಳೆತನವನ್ನು ಗಾಢವಾಗಿ ಬೆಸೆದಿದೆ, ಸಂಗೀತ, ಸಾಹಿತ್ಯ, ಕೆಲವು ಕಲೆ ಹವ್ಯಾಸಗಳ ಆಗರ ಆಗಿರೋ ಗಾಯತ್ರಿ ಸದಾ ಕ್ರಿಯೇಟಿವ್, ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ ಇರೋ ಇವಳಿಗೆ ತನ್ನ ಬಿಡುವಿಲ್ಲದ ಕೆಲಸಗಳಲ್ಲೂ ಬರಹವನ್ನು ಆಪ್ತವಾಗಿಸಿಕೊಂಡವಳು, ಅಕ್ಷರವನ್ನು ಪದಗಳಾಗಿಸಿ, ಅದನ್ನು ತನ್ನ ಹಿಡಿತದಲ್ಲಿ ಇಟ್ಟು ಓದುಗರ ಮನಸ್ಥಿತಿಗನುಗುಣವಾಗಿ ಬರೆಯುವ ಚತುರತೆ ಇವಳಿಗೆ ತಾನಾಗಿ ಒಲಿದು ಬಂದಿದೆ,ಆ ಕರಾಳ ರಾತ್ರಿ… ಪ್ರವಾಹ ಮತ್ತು ಪ್ರಕೃತಿ ವಿಕೋಪದ ಹಲವು ಮುಖಗಳನ್ನು ಕಂಡಿದ್ದೀವಿ ಹಾಗೂ ಕಾಣುತ್ತಲೇ ಇದ್ದೀವಿ, ಇದರ ಜೊತೆ, ಮಾನವೀಯ ಭಾವನಾತ್ಮಕ ಸಂಬಂಧಗಳ ತಳುಕು, ಅಜ್ಜಿ ಮೊಮ್ಮಗನ, ಮತ್ತು ತನ್ನ ಮೇಲೇ ಅವಲಂಬಿತವಾಗಿರುವ ಅಸಹಾಯಕ ವೃದ್ಧ ಜೀವವನ್ನು ರಕ್ಷಿಸಲು ರಾಜೇಶ್ ಪಡುವ ಪಾಡು, ಜೀವಕ್ಕೇ ಹತ್ತಿರವಾದ, ಪ್ರೇಮವನ್ನು ಮೀರಿ ಅಜ್ಜಿಯನ್ನು ಉಳಿಸಿಕೊಳ್ಳಲು ಹೋರಾಡಿಯೂ , ಪ್ರವಾಹದ ಸಂಕಷ್ಟದಲ್ಲಿ ಬಹುಪಾಲು ಜೊತೆಗಿದ್ದು ಇನ್ನೇನೂ ಗುರಿ ಸೇರಿದ್ದೀವಿ ಅನ್ನೋಲ್ಲಿ ಎದುರಾದ ನಿರಾಸೆ … ಇಲ್ಲಿ ಎರಡು ಸಂಭವಗಳನ್ನು ನಮ್ಮ ಮುಂದಿಟ್ಟು ಕಥೆ ಮುಗಿಸುವ ಲೇಖಕಿಯ ಜಾಣ್ಮೆ, ನಿರೂಪಣೆ, ಪ್ರಬುದ್ಧತೆ ಇಷ್ಟವಾಗತ್ತೆ, ಮೊಮ್ಮಗನ ಅಂತಃಶಕ್ತಿಯಾಗಿ ಜೊತೆಗಿರುವ ಅಜ್ಜಿಯೇ ಅಂತಾ ಪ್ರವಾಹವನ್ನು ದಾಟಿಸುವ ಶಕ್ತಿ ಎಂದರೆ ತಪ್ಪಿಲ್ಲ ….ಅನೈತಿಕನಾ??ಅನೈತಿಕ ಈ ಪದಕ್ಕೇ ಯಾವ ಅರ್ಥ ಕೊಡಬೇಕು ಅನ್ನೋದು ಇವತ್ತಿಗೂ ಒಗಟೇ… ನಿಜ ಯಾವುದು ಅನೈತಿಕ? ಪುರಾಣಗಳ ಪುಟ ತುಂಬಾ ಧರ್ಮಸೂಕ್ಷ್ಮಗಳಡಿಯಲ್ಲಿ ಬರುವ ವಿಷಯ ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಚರ್ಚೆಗೆ, ನಿಂದನೆಗೆ ಗುರಿಯಾಗೋದು ವಿಡಂಬನೆಯಾ…. ವಿಪರ್ಯಾಸವಾ?? ಆದರೇ ನಮ್ಮಂತವರು ಸಮಾಜಕ್ಕೆ ಕುಹಕಕ್ಕೆ ಹೆದರಿ ಬರೆಯಲಾರದ ವಿಷಯವನ್ನು ತೆಗೆದುಕೊಂಡು ಲೀಲಾಜಾಲವಾಗಿ ಸುಂದರವಾಗಿ ನಿರೂಪಿಸಿ ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೇ….ಬಡತನದ ಬಣ್ಣ ಕಡುಕೆಂಪು…..ಇನ್ನೊಬ್ಬರ ನೋವು, ಸಂಕಟ, ಹಸಿವು ನಿರಾಸೆಯನ್ನು ನಾವು ಅನುಭವಿಸಿದಂತೆ, ನಮ್ಮದೇ ಅನುಭವದಂತೆ ಓದುವವರಿಗೂ ತಮ್ಮದೇ ಅನುಭವ ಅನ್ನೋ ಹಾಗೇ ಅಕ್ಷರಗಳಲ್ಲಿ ನಿರೂಪಿಸುವುದರಲ್ಲಿ ಬರಹಗಾರರ ಚಾತುರ್ಯ ಜಾಣ್ಮೆ, ಓದುಗರ ಮನಗೆಲ್ಲುವ ಆಕರ್ಷಣೆ ಅಡಗಿರತ್ತೆ, ಈ ನಿಟ್ಟಿನಲ್ಲಿ ಲೇಖಕಿ ಈ ಕಥೆಯಲ್ಲಿ ಓದುವ ನಮ್ಮನ್ನೇ ಪಾತ್ರವಾಗಿಸಿ ಮನ ಮಿಡಿಯುವಂತೆ ಚಿತ್ರಿಸಿದ್ದಾರೆ….. ಹಸಿವಿನ ನೋವು ಸಂಕಟ ಮಾತ್ರವಲ್ಲ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ,” ಮಾಮ್ ” ಅಮಾನವಿ ಕುತಂತ್ರ,ಆಧುನಿಕತೆ ಹೆಚ್ಚಿದಷ್ಟೂ ಮನುಷ್ಯನ ಲಾಲಸೆ ಯೂ ಹೆಚ್ಚುತ್ತಲೇ ಹೋಗತ್ತಾ , ಜೊತೆಗೆ ಎಷ್ಟು ಸೌಲಭ್ಯಗಳು ಸಿಕ್ಕರೂ ಇನ್ನೂ ಇನ್ನೂ ಬೇಕೆನ್ನುವ ಹಪಾಹಪಿ ಜಾಸ್ತಿಯಾಗತ್ತಾ, ಸೋಮಾರಿತನ ಯಂತ್ರಗಳ ಮೇಲಿನ ಅವಲಂಬನೆ ಹೆಚ್ಚತ್ತಾ…. ಇದನ್ನು ಓದುತ್ತಿದ್ದರೆ ಭಯ ಅನ್ನಿಸತ್ತೆ… ಕಣ್ಮುಂದೆ ನೆಡೆದಂತೆ ಅನುಭವ ನೀಡುವ ಬರಹದ ಲೇಖಕಿಯ, ತಿಳುವಳಿಕೆ ಮತ್ತು ಅದನ್ನು ಓದುಗರ ಮನಕ್ಕಿಳಿಯುವಂತೆ ಬರಹಕ್ಕಿಳಿಸುವ ಜಾಣ್ಮೆ ಮೆಚ್ಚುವಂತಹದು,ನಿರ್ಧಾರ..ನಿಜ ದೈನಂದಿನ ಬದುಕಲ್ಲಿ ತುಂಬಾ ಗಹನ ಆಗಿದ್ದೂ ನಮ್ಮ ನಿರಾಸಕ್ತಿ ಬೇಜವಾಬ್ದಾರಿ ಇಂದಲೋ, ಮುಜುಗರ ಸೌಜನ್ಯ, ಅತ್ವಾ ಕರ್ತವ್ಯ ಜವಾಬ್ದಾರಿ ಎಂದೋ ಕೆಲವು ದುಡುಕಿನ ನಿರ್ಧಾರಗಳು ಬಾಳಪೂರ್ಣ ನಮ್ಮನ್ನು ಕಾಡಿ ಕಂಗೆಡಿಸುತ್ತವೆ, ಮನಸ್ಸು ಹೃದಯ ಎಂದು ಬದುಕಿಡೀ ನರಳುವ ಬದಲು ಬುದ್ದಿಗೆ ಸಾಣೆ ಹಿಡಿದು ಯೋಚಿಸಿ ನಿರ್ಧರಿಸಿದರೆ, ಬಹಳಷ್ಟು ಉತ್ತಮ ಜೀವನ ನೆಮ್ಮದಿಗೆ ಕಾರಣವಾಗುತ್ತದೆ, ಲೇಖಕಿಯ ಧನಾತ್ಮಕ ಯೋಚನೆ ಹಾಗೂ ಅದನ್ನು ಸಮಾಜಕ್ಕೂ ಧನಾತ್ಮಕತೆಯನ್ನು ಹರಡುವ ಉದ್ದೇಶ ಎರಡೂ ಸಫಲವಾಗಿದೆ,ಸುಂಟರಗಾಳಿ?ಏನೋ ಆಗಿದೆ ಅನ್ನೋ ಭಯ… ಅದು ತರುವ ಅಸಹನೆ…. ನಮ್ಮಲ್ಲಿನ ಕೀಳರಿಮೆ ತಪ್ಪಿತಸ್ಥ ಮನೋಭಾವನೆ ಎಷ್ಟು ಬೇಗ ನಮ್ಮನ್ನು ಪಾತಾಳಕ್ಕೆ ತಳ್ಳಬಹುದು ಅನ್ನೋದಕ್ಕೆ ಈ ಕಥೆ ಸಾಕ್ಷಿಯಾಗಿದೆ, ಅನುಮಾನ ಮತ್ತು ಅಹಂಕಾರ ಸಂಬಂಧಗಳ ಸಮಾಧಿಗೆ ತಳಹದಿ, ನಿಜ ಇದನ್ನು ಸರಳವಾಗಿ ಸುಲಭವಾಗಿ ಮನಸ್ಸಿಗಿಳಿವಂತೆ ಬಿಂಬಿಸಿದ ಲೇಖಕಿಗೆ ವಂದನೆಗಳು,ರಾಜಿ..?ಯಾರಾದರೂ ಯೋಚಿಸಲು ಮಾತನಾಡಲು ಸಂಕೋಚ ಮುಜುಗರ ಪಡುವ ಸಲಿಂಗ ಸಾಂಗತ್ಯದ ವಿಷಯವನ್ನೆತ್ತಿಕೊಂಡು, ಸುಲಲಿತವಾಗಿ ಅದನ್ನು ಬರಹಕ್ಕಿಳಿಸಿ, ಓದುಗರಿಗೂ ಎಲ್ಲೂ ಮುಜುಗರ ಆಗದಂತೆ, ಬಾಲ್ಯದಿಂದಲೂ ಹೆಣ್ಮಕ್ಕಳ ಮೇಲಾಗುವ ದೌರ್ಜನ್ಯದಿಂದ ದಾಂಪತ್ಯ ಸಾಂಗತ್ಯದ ಬಗ್ಗೆ ಹೆಣ್ಮಕ್ಕಳ ಮೇಲಾಗುವ ಪರಿಣಾಮ ಅದ್ಭುತವಾಗಿ ಬಿಂಬಿತವಾದ ಕಥೆ ಲೇಖಕಿಗೆ ಹ್ಯಾಟ್ಸಾಪ್ ಹೇಳದೇ ಬೇರೆ ಮಾತಿಲ್ಲ. “”ಬಾಳಲ್ಲಿ ನಿನ್ನಿಂದ ಸೂರ್ಯೋದಯ”, ದಲ್ಲಿ ಕರಾಳತೆ ಕವಿದ ಬದುಕೊಂದು ಸಾಮಾಜಿಕ ಸಂಪ್ರದಾಯಗಳ ಸಂಕೋಲೆ ಮೀರಿ ಬದುಕನ್ನು ಧನಾತ್ಮಕವಾಗಿ ಯೋಚಿಸುವ ನಿಟ್ಟಿನಲ್ಲಿ ನಮ್ಮನ್ನು ಚಿಂತನೆಗೆ ಹಚ್ಚಿದರೇ….“ಪಿಂಕ್ ಶರ್ಟ್ ಮತ್ತು ಖಾಕಿ?” ನಾವು ಕಾಣದ ಸಮಾಜದ ವಿಭಿನ್ನ ವ್ಯಕ್ತಿ ಮತ್ತು ವ್ಯಕ್ತಿತ್ವ, ತನ್ನದಲ್ಲದ ತಪ್ಪಿಗೆ ತೃತೀಯ ಲಿಂಗಿ ಅನ್ನಿಸಿಕೊಂಡು ಬದುಕಿದ ಮನಸ್ಸಿನ ನೋವು ಕಳವಳ, ಪಾಡು ಪರದಾಟಗಳನ್ನ ಹೇಳುತ್ತಾ… ವ್ಯವಸ್ಥೆಯ ದೌರ್ಜನ್ಯ ಮತ್ತು ಕಾಯಬೇಕಾದವರೇ ಕೊಲ್ಲುವ ಮನಸ್ಥಿತಿಯ ಕ್ರೌರ್ಯ ಪರಿಸ್ಥಿತಿಯ ದುರ್ಬಳಕೆಯನ್ನು ಮಾಡಿಕೊಳ್ಳುವ ಅಧಿಕಾರಿ ವರ್ಗ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ ಲೇಖಕಿ, ಅಕ್ಷರಗಳನ್ನು ಪದಗಳನ್ನು ಸೇರಿಸಿ ಹನೆದ ಕಥೆ ಸಚಿತ್ರವಾಗಿ ಕಣ್ಮುಂದೆ ಬರತ್ತೆ,…” ಕಲ್ಲಾದಳೆ ಅಹಲ್ಯೆ…..?? ” ಈ ಕಥೆ ಓದುತ್ತಾ ಓದುತ್ತಾ ನಾನೇ ಅಹಲ್ಯೆ ಆಗ್ಬಿಟ್ಟಿದ್ದೆ, ಅಹಲ್ಯೆಯ ಮನದಾಳದ ಭಾವ ನೋವು ಆಕ್ರಂದನ ಆಕ್ರೋಶ ಹತಾಶೆ ಅಸಹಾಯಕತೆ, ಒಂದು ತಣ್ಣನೆ ಸೇಡು ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟ ಪರಿ ಅನನ್ಯ, ಪುರಾಣಗಳ ಪುಟಗಳನ್ನು ಮೂಲಕ್ಕೇ ಚ್ಯುತಿ ತರದೇ ಬಿಂಬಿಸೋದೇ ಒಂದು ದೊಡ್ಡ ಸಾಹಸ, ಈ ಕಥೆ ಓದಿದರೆ ಬಹುಶಃ ಲೇಖಕಿ ಪುರಾಣದ ಯಾವುದೇ ಒಂದು ಪಾತ್ರವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಅಳವಡಿಸಿ ಅದ್ಬುತ ಕಾದಂಬರಿ ಮಾಡಲು ಶಕ್ತಳು ಅನ್ನಿಸಿತು,“”ಅನಿರೀಕ್ಷಿತ ತಿರುವು “” ನಿಜಾ ಬಹಳ ಸಲ ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ತೀರಾ ಎಲ್ಲೋ ಮುಂಚೆನೇ ನೆಡೆದಂತೆ ಕನಸಲ್ಲಿ ಕಂಡಂತೆ ಈ ಮೊದಲೇ ಅನುಭವಕ್ಕೆ ಬಂದಂತೆ ಅನ್ನಿಸಿ ಗಾಬರಿ ಹುಟ್ಟಿಸುವುದು, ಇದು ಬಹಳ ಜನಕ್ಕೆ ಏನೆಂದು ಅರಿವಾಗೋದು ಇಲ್ಲಾ, ನಾವೇ ಇದೇನೂ ಸಿಕ್ಸ್ತ್ ಸೆನ್ಸಾ ಅನ್ನಿಸಿ ಕಳವಳ ಆಗೋದುಂಟು, ಅಂತಹ ಒಂದು ಎಳೆ ಹಿಡಿದು ಕಥೆ ಹೆಣೆದು ಅಲ್ಲಿಯೂ ಅನೂಹ್ಯ ತಿರುವಿಟ್ಟಿದ್ದಾರೆ ಲೇಖಕಿ, ಅನುಬಂಧಗಳ ಪರಸ್ಪರ ಮಿಡಿಯುವಿಕೆಯ ಭಾವಗಳ ತಾಕಲಾಟ ನಿರೂಪಣೆ ಚಂದ ಚಂದ,“”ಹೀಗೊಂದು ಅಂತ್ಯ “” ತನ್ನ ಬದುಕಿನಲ್ಲಿ ನೆಡೆಯೋ ಅಪಘಾತ ಲೇಖಕನ ಮುಂದಿಟ್ಟು ಅವನು ಕೊಡೋ ಅಂತ್ಯವನ್ನು ತಾನು ಅಪಾದಿಸಿಕೊಳ್ಳುವ ಅದನ್ನರಿಯದ ಲೇಖಕ ಅಂತ್ಯವನ್ನು ಸೂಚಿಸಿ ತೊಳಲಾಡುವ ಉದ್ವೇಗ, ಪರಿತಾಪ ಚೆನ್ನಾಗಿ ವ್ಯಕ್ತವಾಗಿದೆ, ಲೇಖಕರಿಗೆ ಇರಬೇಕಾದ ಸಾಮಾಜಿಕ ಪ್ರಜ್ಞೆ ಸೂಚ್ಯವಾಗೀ ಮೂಡಿ ಬಂದಿದೆ,“ವಿಷಸರ್ಪ” ಕೆಲವು ಬಾರಿ ನಾವು ಮನುಷ್ಯರನ್ನು ಮೊದಲು ನೋಡಿದಾಗಲೇ ಏನೋ ಒಂದು ಭಾವ ಉದ್ಭವ ಆಗ್ಬಿಡತ್ತೆ, ಅದರಲ್ಲಿ ಅವರ ಹೊರ ರೂಪ ನಮ್ಮಲ್ಲಿ ಸಲ್ಲದ ಋಣಾತ್ಮಕ ಅಂಶಗಳೇ ಎದ್ದು ಕಾಣಿಸಿದಂತಾಗೀ ವಿನಾಕಾರಣ ದ್ವೇಷ ಅಸಹನೆ ಬೆಳೆಯುತ್ತ, ಕೊನೆಗೊಂದು ಸಲ ನಮ್ಮ ತಪ್ಪು ಅರಿವಾಗೋದ್ರೊಳಗೆ ಏನಾದರೂ ಘಟನೆ ಸಂಭವಿಸಿರತ್ತೆ, ಅದಕ್ಕೇ ಹಿರಿಯರು ಹೇಳೋದೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾ, ಹಾವೂ ಮುಂಗುಸಿ ಕಥೆ ನೆನಪಾಯಿತು,“” ಅವ್ಯಕ್ತ ” ನಮ್ಮೊಳಗಿನ ಮಾನಸಿಕ ತಾಕಲಾಟಗಳು ಸಂಸಾರದ ಇತರ ಸದಸ್ಯರುಗಳ ಮೇಲಾಗುವ ಸಾಮಾಜಿಕ ಸಾಂಸಾರಿಕ ಮಾನಸಿಕ ಪರಿಣಾಮಗಳನ್ನು ಹೇಳುವ ಕಥೆ, ಇಂತಹ ವಿಷಮ ಸನ್ನಿವೇಶದಲ್ಲಿ ಆತುರ ಪಡದೇ ಸಾವಧಾನವಾಗಿ ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳಬೇಕಾದ ಅವಶ್ಯಕತೆ ಎತ್ತಿ ಹಿಡಿಯತ್ತೆ,“”ತಪ್ಪಿದ ತಾಳ ” ಅತಿಯಾದಲ್ಲಿ ಅಮೃತವೂ ವಿಷವೇ, ಕಾಮವೂ ಅದಕ್ಕೇ ಹೊರತಲ್ಲ, ಮನೋ ನಿಗ್ರಹ, ಇಂದ್ರಿಯ ನಿಗ್ರಹ ಸ್ವಸ್ಥ ಬದುಕಿಗೇ, ಸಂಸಾರ ಸಮರಸಕ್ಕೆ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯ, ಯಾವುದು ಎಲ್ಲೇ ದಾಟಿದರೂ, ಯಾರೇ ಮಿತಿ ಮೀರಿದರೂ, ಪರಿಣಾಮ ಇಡೀ ವ್ಯವಸ್ಥೆಯ ಮೇಲಾಗುವುದು,ಎಲ್ಲಾ ಹದಿನೈದು ಕಥೆಗಳು ವಿಭಿನ್ನ ಕೋನಗಳಲ್ಲಿ ಭಿನ್ನ ವಸ್ತುಗಳಲ್ಲಿ ಬರೆದ ಲೇಖಕಿ ಮೊದಲ ಹೆಜ್ಜೆಯಲ್ಲೇ ತಾನೇನೂ ಎಂಬುದನ್ನು ಸಾಬೀತು ಪಡಿಸಿದ್ದಾರೆ, ಹೊಸ ಲೇಖಕಿ ಎಂದೋ ತಿಳಿಯದೆಯೋ, ಇಲ್ಲದ ಪೂರ್ವಗ್ರಹಕ್ಕೆ ಒಳಗಾಗಿ ಓದದಿದ್ದರೆ ನಷ್ಟ ಓದುಗರದೆ, ಸಾಹಿತ್ಯಾಭಿಮಾನಿಗಳು ಒಮ್ಮೆ ಓದಿ, ಹೊಸ ಲೇಖಕರನ್ನು ಪ್ರೋತ್ಸಾಹಿಸಿ ಹಾರೈಸಿ, ಸ್ನೇಹ ಬುಕ್ ಹೌಸ್, ಫೀನಿಕ್ಸ್ ಬುಕ್ ಹೌಸ್ ಅಲ್ಲಿ ಮತ್ತು ಲೇಖಕರ ಬಳಿಯೂ “ಬಣ್ಣದ ಜೋಳಿಗೆ ” ಲಭ್ಯವಿದೆ, ********* ಪದ್ಮಜಾ ಜೋಯ್ಸ್ ತೀರ್ಥಹಳ್ಳಿ ,

ಪುಸ್ತಕ ಸಂಗಾತಿ Read Post »

ಇತರೆ

ಪ್ರಬಂಧ

ಸ್ವಚ್ಛ ಭಾರತ ನಂದಿನಿ ಹೆದ್ದುರ್ಗ ಇದು ಸುಮಾರು ಮುವ್ವತ್ತು-ಮುವ್ವತ್ತೈದು ವರ್ಷಗಳ ಹಿಂದಿನ ಮಾತು.ಆಗೆಲ್ಲಾ ಹಳ್ಳಿಗೊಂದು ಪ್ರಾಥಮಿಕ ಶಾಲೆ ಇರುತ್ತಿದ್ದೇ ಹೆಚ್ಚು . ಇನ್ನೂ ಶೌಚಾಲಯ, ಬಿಸಿಯೂಟ ಕನಸಲ್ಲೂ ಯೋಚಿಸುವ ಹಾಗಿಲ್ಲ.ನಾವು ಮೂರೂ ಮಕ್ಕಳು ನಾಲ್ಕನೆ ತರಗತಿ ಮುಗಿದಾಗ ಹತ್ತು ಕಿಮಿ ಆಚೆ ಇರುವ ಸಣ್ಣ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಹೊಗುತ್ತಿದ್ದೇವೆ.ನಾವು ಮಾತ್ರವಲ್ಲ..ಪ್ರತಿ ಜಿಲ್ಲೆಯ ಸಣ್ಣಸಣ್ಣ ಹಳ್ಳಿಗಳಮಕ್ಕಳದ್ದೂ ಇದೇ ಪಾಡು.ಆಗೆಲ್ಲಾ ದಾರಿಯಲ್ಲಿ ಅವಸರವಾದರೆ ಗಂಡು ಹುಡುಗರನ್ನ ಕಾವಲಿಗೆ ನಿಲ್ಲಿಸಿ ನಾವು ಪಕ್ಕದ ಕಾಫಿ ತೋಟದಲ್ಲಿ ನೀರಾವರಿ ಮುಗಿಸಿ ಬರ್ತಿದ್ದೆವು.ವ್ಯವಸ್ಥೆ ಇರದಿದ್ದರೂ ಸಂಕೀರ್ಣತೆ ಇರಲಿಲ್ಲ.ಯಾವ ಆನೆ ಚಿರತೆಗಳೂ ಆಗ ದಾಳಿ‌ಮಾಡುತ್ತಿರಲಿಲ್ಲ.ಕಾಮದ ಹಸ್ತಗಳು ಪುಟ್ಟ ಮಕ್ಕಳನ್ನು ಮುಟ್ಟುತ್ತಿರಲಿಲ್ಲ.ಯಾವ ರೋಗಗಳೂ ಅಷ್ಟು ಹರಡುತ್ತಿರಲಿಲ್ಲ.ಅಥವಾ ಈಗಿನಷ್ಟು ವಿಪರೀತ ಆಗಿರಲಿಲ್ಲ.ಹಾಗಾಗಿಯೇ ಕಾಡಹಾದಿಯಲ್ಲಿ ಒಬ್ಬಿಬ್ಬರು ಮಕ್ಕಳೂ ಧೈರ್ಯವಾಗಿ ಶಾಲೆಗೆ ಹೋಗಿಬರುತ್ತಿದ್ದರು.ಬಿಡಿ.ಅದಲ್ಲ ವಿಷಯ. ಇಡೀ ದೇಶಾದ್ಯಂತ ಸ್ವಚ್ಚತೆಯೇ ಪರಮೋಚ್ಚ ಗುರಿ ಎನ್ನುವ ಗುರಿಯೂ ದೊರೆಯೂ ಬಂದ‌ಮೇಲೆ ಪ್ರತಿ ಪುಟ್ಟ ಹಳ್ಳಿಯ ಶಾಲೆಗಳಿಗೂ ಒಂದೋ ಎರಡೋ ಶೌಚಾಲಯ, ನೀರಿನ ವ್ಯವಸ್ಥೆ, ಬಿಸಿಯೂಟ ವ್ಯವಸ್ಥೆ ಎಲ್ಲವೂ ಆಗಿ ಇನ್ನೇನು ಹಳ್ಳಿಯ ಮಕ್ಕಳು ಕೆರೆ ಬದಿಗೆ,ಪೊದೆಯ ಹಿಂದುಗಡೆ, ಮರೆ ಅರಸಿ ಶೌಚಕ್ಕೆ ಕೂರುವ ಕರ್ಮ ಕೊನೆಯಾಗಿ ಹೆಣ್ಣುಮಕ್ಕಳ ಆರೋಗ್ಯವೂ ಮರ್ಯಾದೆಯೂ ಸುಧಾರಿಸಿತೆಂಬ ಭರವಸೆಯಲಿದ್ದಾಗಲೇ ಪಕ್ಕದ ತಾಲೂಕಿನ ಪುಟ್ಟ ಹಳ್ಳಿಯ ಶಾಲಾ ಕಾರ್ಯಕ್ರಮವೊಂದಕ್ಕೆ ಆಹ್ವಾನ ಬಂತು. ಹೋದೆ. ಸಣ್ಣ ಕುರುಚಲು ಕಾಡಿನಂತ ಒಂದು ಸರಕಾರಿ ಜಮೀನಿನ ಮಧ್ಯಭಾಗವನ್ನು ಸಪಾಟು ಗೊಳಿಸಿ ಶಾಲಾ ಕಟ್ಟಡ ನಿರ್ಮಾಣವಾಗಿತ್ತು.ಶಾಲೆ ಪಕ್ಕದಲ್ಲೇ ಶೌಚಾಲಯ, ಗಂಡು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ವ್ಯವಸ್ಥೆ. ನೀರಿನ ತೊಟ್ಟಿ, ಬಿಸಿಯೂಟದ ಕೋಣೆ ಎಲ್ಲವೂ ವ್ಯವಸ್ಥಿತವಾಗಿತ್ತು. ಹಳೆಯ ಶಾಲೆಗಳನ್ನು ‌ನೆನಪಿಸಿಕೊಂಡು ಹೊಸ ವ್ಯವಸ್ಥೆಗಳ ಅಚ್ಚುಕಟ್ಟುತನ ಪ್ರಸ್ಥಾಪಿಸುವಾಗಲೇ ಪುಟ್ಟ ಹುಡುಗಿಯೊಂದು ತನ್ನ ಕಿರುಬೆರಳ ಮೇಲಕ್ಕೆತ್ತಿ ನಿಂತುಕೊಂಡಳು.ಮೇಷ್ಟ್ರು ಗದರುತ್ತಲೇ ದೊಡ್ಡ ಹುಡುಗಿ ಜೊತೆಮಾಡಿ ಕಳಿಸಿದರು. ಅವರಿಬ್ಬರೂ ಶಾಲೆಯ ಹಿಂಬದಿಯ ಸಣ್ಣ ಪೊದೆಯ ಬಳಿ ಹೋದರು..ಅಚ್ಚರಿಯಾಯ್ತು.ಕಾರ್ಯಕ್ರಮ ‌ಮುಗಿಸಿ ಊಟಮಾಡುವ ಮೊದಲು ಕೈ ತೊಳೆಯಲು ಟ್ಯಾಂಕಿನ ನಲ್ಲಿ ತಿರುಗಿಸ ಹೋದವಳಿಗೆ ಅದು ಬಹಳ‌ ಪುರಾತನ ಕಾಲದಲ್ಲೇ ಚಲನೆ ನಿಲ್ಲಿಸಿ ಸ್ತಬ್ಧವಾಗಿರುವುದರ ಕುರುಹು ಅಲ್ಲೆಲ್ಲ ಗೋಚರಿಸಿದ್ದು‌ ನೋಡಿ ಸುತ್ತ ನೋಡಿದೆ. ಮಕ್ಕಳು ಸಣ್ಣಸಣ್ಣ ಗುಂಪಿನಲ್ಲಿ ಶಾಲೆಯ ಹಿಂಬದಿಯ ಕುರುಚಲು ಕಾಡಿಗೆ ಹೋಗಿ‌ಬರ್ತಿರೋದು ನೋಡಿದಾಗ ಏನೋ ಸರಿಯಿಲ್ಲವೆನಿಸಿತು.ಆಗಲೆ ಅಲ್ಲಿ ಬಂದ ಟೀಚರಮ್ಮ ‘ಅಲ್ಲಿ‌ನೀರು ಬರ್ತಿಲ್ಲ .ಬನ್ನಿ. ಇಲ್ಲೇ ಬಾಟಲಿ ನೀರಿನಲ್ಲಿ ಕೈ ತೊಳೆಯಿರಿ ಎಂದಾಗ ಅಚ್ಚರಿ ಯಿಂದಹಾಗಾದರೆ ಟಾಯಲೆಟ್ ಗೆ‌ ನೀರು.?ಎಂದೆ.ಇಲ್ಲಿ ಯಾವುದಕ್ಕೂ ನೀರಿಲ್ಲ ಮೇಡಮ್.ಕೇವಲ ಟ್ಯಾಂಕಿದೆ ಅಷ್ಟೆ.ಮೊದಮೊದಲು ಸ್ವಲ್ಪ ಬಿಡ್ತಿದ್ರು .ಈಗ ಅದೂ ಇಲ್ಲ.ಹಾಗಾಗಿ‌‌ ಮಕ್ಕಳು ಹಿಂಬದಿಯ ಪೊದೆಗೇಹೋಗ್ತಾರೆ.ಇದೂ ಒಂಥರ ಸರಿಯೇಆಯ್ತು.ಸ್ವಲ್ಪ ನೀರು ಬಿಡ್ತಿದ್ದಾಗಟಾಯ್ಲೆಟ್ ಬಳಸಿ ಸರಿಯಾಗಿ ಸ್ವಚ್ಛ ವಾಗದೇ ಶಾಲೆಯ ಪರಿಸರವೇ ಹಾಳಾಗಿತ್ತು.ಹಳ್ಳಿ ಮಕ್ಕಳು.ಎಷ್ಟೇ ಹೇಳಿಕೊಟ್ಟರೂ ಶೌಚಾಲಯ ಬಳಕೆ ಅವರಿಗೆ ಕಷ್ಟವೂ ಆಗಿತ್ತು..ಇನ್ನೇನು ಈ ಅಭ್ಯಾಸ ರೂಢಿಸಿಕೊಳ್ತಾರೆ ಎನ್ನುವಾಗ ನೀರು‌ ಬಂದ್ ಆಯ್ತು.ಹೆಣ್ಣಮಕ್ಕಳನ್ನ ದೂರಕ್ಕೆ ಕಳಿಸುವಾಗ ತುಸು ಭಯವೂ ಇರ್ತದೆ.ಆದರೆ ಏನ್ಮಾಡೋದು‌ ಹೇಳಿ.ಯಾರನ್ನೂ ದೂರಿ ‌ಫಲವಿಲ್ಲ.ಇಲ್ಲಿನ ಸ್ಥಳೀಯ ಜನ ಪ್ರತಿನಿಧಿ ಬೇರೆ ಪಕ್ಷ .ಸರ್ಕಾರಕ್ಕೆ ಸಮಸ್ಯೆ ತಲುಪಿಸುವುದರಲ್ಲಿ ಅಂತಹ ಆಸಕ್ತಿಯೂ ಇಲ್ಲ. ತಲುಪಿಸಿದರೂ ಪಕ್ಷ ಬೇರೆ ಇರುವುದರಿಂದ ಈಡೇರುವ ಭರವಸೆಯೂ ಇಲ್ಲ.ಒಮ್ಮೆ ಇಲ್ಲೇ ಬೋರವೆಲ್ ತೆಗೆಸುವುದಕ್ಕೆ ಬಂದ ಫಂಡ್ ಯಾವ ಯಾವುದೋ ಕಾರಣಕ್ಕೆ ಸದುಪಯೋಗ ಆಗಲೇ ಇಲ್ಲ.ಶಾಲೆ, ಮೀಟಿಂಗು,ಓಡಾಟದಲ್ಲೇ ನಾವು ಕಳೆದುಹೋಗುವುದರಿಂದ ನೀರಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸುವುದು ಕಷ್ಟವಾಗ್ತಿದೆ.ಈಗ ಊಟ ತಯಾರಿಸಲು ಸಹ ಕೊಡದಲ್ಲಿ ತರಬೇಕು ಅಂತ ಅಸಹಾಯಕತೆ ಹೇಳಿಕೊಂಡರು.ಅಷ್ಟರಲ್ಲಿ ಶೌಚ ಮುಗಿಸಿ ಮಕ್ಕಳು ಬಂದರು.ಮನೆಯಿಂದ ತಂದಿದ್ದ ಬಾಟಲಿ ನೀರು ತಟ್ಟೆ ತೊಳೆಯಲೂ ಬೇಕಿರೋದ್ರಿಂದ ಕೈ ತೊಳೆಯದೇ ಊಟಕ್ಕೆ ಕುಳಿತರು. ಶೌಚಾಲಯದ ‌ಮೇಲೆ ಸ್ವಚ್ಛ ಭಾರತ ಅನ್ನುವ ಪದಗಳಿದ್ದವು.ಯಾಕೊ ಸ್ವಚ್ಛವೊಂದು ಕಡೆ,ಭಾರತವೊಂದು ಕಡೆ ಇರಬೇಕಾ ಅನಿಸಿತು. ************

ಪ್ರಬಂಧ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ ಎಸ್. ಮಕಾನದಾರ ತಲೆ ಬಾಗಿಲಿಗೆ ಕೈಹಚ್ಚಿ ಕಾಯುತಿರುವೆ ಪ್ಯಾರಿಭಾವರಸ ನೊರೆಹಾಲ ತುಂಬುತಿರುವೆ ಪ್ಯಾರಿ ಅಚ್ಚೇರು ಬಂಗಾರದಲಿ ಅಚ್ಚು ಒತ್ತುತ್ತಿರುವೆಸ್ನೇಹ ಅಚ್ಚುಮೆಚ್ಚೆಂದು ಸಾರುತಿರುವೆ ಪ್ಯಾರಿ ಹಾಯಿದೋಣಿಗೆ ನಾವಿಕನಾಗಿ ಸಾಗುತಿರುವೆಚೂರಾದ ಹೃದಯ ತೋರಣ ಕಟ್ಟಿರುವೆ ಪ್ಯಾರಿ ನದಿಗಳ ಜಾಡಿನೊಳಗೆ ಚಹರೆ ಕಾಣುತಿರುವೆವಿಶ್ವಪ್ರೇಮ ಬಾವುಟ ಹಾರಿಸುತ್ತಿರುವೆ ಪ್ಯಾರಿ ಅಂತರಂಗ ಜ್ಯೋತಿಗೆ ಧೋಖಾ ಮಾಡದಿರುಸಾಹೇಬ್ ಮಸ್ತಕಕ್ಕೆ ಇಳಿದು ಬರುವೆ ಪ್ಯಾರಿ **********

ಕಾವ್ಯಯಾನ Read Post »

You cannot copy content of this page

Scroll to Top