ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಅಂತಃಸಾಕ್ಷಿ ವೀಣಾ ರಮೇಶ್ ನನ್ನ ಪ್ರತಿಹೆಜ್ಜೆಯಲ್ಲೂ ನೀಹೆಜ್ಜೆ ಹಾಕು ಎಂದು ನಾನುಕೇಳುವುದಿಲ್ಲ ನನ್ನ ಪ್ರತಿಮಾತಿಗೂಕಿವಿಯಾಗಿರು ಎಂದುನಾನು ಹೇಳುವುದಿಲ್ಲ ನನ್ನ ನುಡಿಗೆ ದನಿಯಾಗಿರುನನ್ನ ಉಸಿರಿಗೆಎದೆಯ ಬಡಿತದ ಸದ್ದಾಗಿರು ಎಂದು ಕೇಳುವುದಿಲ್ಲ ತಂಪಾಗಿ,ನನ್ನ ಬೆನ್ನ ಹಿಂದೆನೆರಳಾಗಿ, ಕಾವಲಾಗಿರುಎಂದು ನಾನು ಕೇಳುವುದಿಲ್ಲ ನನ್ನ ಆತ್ಮಸಾಂಗತ್ಯಕ್ಕೆನಿನ್ನ ಅಂತರಾತ್ಮನೀಡುವ ಸಂವೇದನೆಗೆಸುಪ್ತಮನಸ್ಸಾಗಿರೂ ಎಂದೂಬೇಡುವುದಿಲ್ಲ ಆದರೆ ನಾನು,ನೀನು,ನಾವಿಬ್ಬರೂಒಂದೇ ಅನ್ನುವ ಅಂತಃಸಾಕ್ಷಿನಿನ್ನ ಅಂತರಂಗ ಹೇಳಿದರೆಸಾಕು,ನಾನೇನೂ ಕೇಳುವುದಿಲ್ಲ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವೈದ್ಯರ ಚುಟುಕುಗಳು ಡಾ ಅರುಣಾ ಯಡಿಯಾಳ್ 1. ಅದೇನು ವೈದ್ಯರ ಫೀಸು ಈ ಪಾಟಿ ದುಬಾರಿ!ಹಣ ಮಾಡುತ್ತಾರೆ ರೋಗಿಯ ರಕ್ತ ಹೀರಿ ಹೀರಿ!”“ ಅಲ್ರೀ,ನಮ್ಮ ಜೀವನುದ್ದಕ್ಕೂ ಇರುವುದು ಬವಣೆಯೇ!ರಕ್ತ ಹೀರಿ ಬದುಕ ಸಾಗಿಸಲು ನಾವೇನು ತಿಗಣೆಯೇ??!?” 2. ಡಾಕ್ಟರನ ಕಾರು ಡಾಕ್ಟರಿನಂತೆಯೇ ಇದ್ದರೆ ಒಳ್ಳೇದು!ಆರಕ್ಕೆ ಏರಬಾರದು;ಮೂರಕ್ಕೆ ಇಳೀಬಾರದು!ಭಾರೀ ಶೋಕಿಯಾದರೆ ಕಾಯುತ್ತದೆ ಜನರ ಕಣ್ಣು..ತೀರಾ ಕಳಪೆಯಾದರೆ ತಿನ್ನಬೇಕಾದೀತು ತಿರಸ್ಕಾರದ ಹಣ್ಣು 3. ಐಷಾರಾಮಿ ಕಾರು ,ಜೀವನ ಬೇಕೇ??ಹಾಗಾದರೆ ವೈದ್ಯರೊಂದಾಗದಿರಿ ಜೋಕೆ!!ಈ ವೃತ್ತಿಯಲ್ಲೂ ಗಳಿಸಬಹುದು ಹೇರಳ ಹಣ…ಎದುರಿಸಬೇಕಾದೀತು ಸಮಾಜದ ಉರಿಗಣ್ಣು;ಗೊಣಗೊಣ!! 4. ರೋಗ ,ರೋಗಿಯ ಶ್ರುಶ್ರೂಷೆಗೆ ಬೇಕು ವ್ಯದ್ಯಕೀಯ ಚಾಕರಿ ..ಆದಾಗ್ಯೂ ಸೇವೆಗೆಯ್ಯುವವರ ಜೇಬಿಗೇ ಕತ್ತರಿ !“ ಇದು ನ್ಯಾಯವೇ ?ಧರ್ಮವೇ ?” ಎಂದು ಹಲುಬದಿರಿ..ಅಸಮತೆ , ಅನ್ಯಾಯ ಜಗದ ರೀತಿಯೆಂದರಿತು ತೆಪ್ಪಗಿರಿ! 5. ನಾವೆಲ್ಲಾ ಹೇಳಲು ತಯಾರು “ ವೈದ್ಯೊ ನಾರಾಯಣ ಹರಿ …ಆದ್ರೂ ಡಾಕ್ಟ್ರು ಫೀಸ್ ಕೇಳುವುದು ಹೇಗೆ ಸರಿ ???”ಯಮನೆಂದ ನಕ್ಕು -“ಹೌದೌದು ,ಆರೋಗ್ಯಕ್ಕಿಂತ ಮುಖ್ಯ ಕಾಸು …ಅಲ್ಲಿರುವುದು ಸುಮ್ಮನೆ ..ಇಲ್ಲಿದೆ ನಿಮ್ಮನೆ ..ಬಂದುಬಿಡಿ..ಬೇಡ ಪಾಸು! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೋಗಿಗಳು ನಟರಾಜು ಎಸ್. ಎಂ. ಪಿತೃಪಕ್ಷದಿ ತಾತನ ಎಡೆಗೆಂದುಬಾಳೆ ಎಲೆಯ ಮೇಲೆ ಇಟ್ಟಿದ್ದಮುದ್ದೆ ಗೊಜ್ಜು ಅನ್ನ ಪಾಯಸದಪಕ್ಕ ಬಿಳಿ ಪಂಚೆ ಬಣ್ಣದ ಚೌಕಹುಳಿ ಹುಳಿಯಾದ ಬಿಳಿಯ ಯೆಂಡ ಬಾಡುಗ್ಲಾಸಿನ ಮೇಲೆ ಹಚ್ಚಿಟ್ಟ ಬೀಡಿ ಸಿಗರೇಟುತಟ್ಟೆಯಲಿ ದ್ರಾಕ್ಷಿ ಬಾಳೆಯ ಜೊತೆಒಂದೆರಡು ಕಿತ್ತಳೆ ಸೇಬುಇವೆಲ್ಲದರ ಮಧ್ಯೆ ಅವಿತು ಕುಳಿತಿರುವಅರಿಸಿನ ಕುಂಕುಮ ವಿಭೂತಿ ಬಳಿದಕಂಚಿನ ದೇವರ ಜೊತೆ ಪುಟ್ಟ ತ್ರಿಶೂಲಗೋಡೆಯ ಹಲಗೆಯ ಮೇಲೆಜೋಡಿಸಿಟ್ಟ ಚಾಮುಂಡಿ ಶಿವ ಪಾರ್ವತಿಡೊಳ್ಳು ಹೊಟ್ಟೆ ಗಣೇಶನ ಚಿತ್ರಪಟಎಲ್ಲವೂ ಅಲಂಕೃತ ಕಟ್ಟಿದ ಕಾಕಡಕನಕಾಂಬರ ಚೆಂಡೂವುಗಳಿಂದ ನಾಟಿ ಹೆಂಚಿನ ಒಳಗೆ ಕೆಂಡದಲಿಘಮ ಘಮಿಸೋ ಸಾಂಬ್ರಾಣಿಅಕ್ಕಿ ತುಂಬಿದ ಲೋಟದಲ್ಲಿ ಉರಿಯುತ್ತಿರೋಸೈಕಲ್ ಗುರುತಿನ ಅಗರಬತ್ತಿಬಾಯಿಗೆ ಟವೆಲ್ ಕಟ್ಟಿ ನಿಂತ ಜೋಗಯ್ಯನಸುತ್ತ ಮುತ್ತ ನೆರೆದ ಮನೆ ಮಂದಿನೀರ್ ಚಿಮುಕಿಸಿ ಗಂಧದ ಕಡ್ಡಿಯ ಘಮ ಸೋಕಿಸಿವೀಳ್ಯದೆಲೆಯ ತುದಿ ತೊಟ್ಟು ಕಿತ್ತುಬಾಳೆಹಣ್ಣಿನ ತುದಿ ಮುರಿದುಒಡೆದ ತೆಂಗಿನ ಕಾಯಿಯ ಎಳನೀರುತೀರ್ಥಕ್ಕೆಂದು ಲೋಟದಿ ಭರ್ತಿಉರಿಯುವ ಕಡ್ಡಿ ಕರ್ಪೂರದ ಬೆಳಕಿಗೆಹೊಳೆಯುತ್ತಿರುವ ದೇವರ ವಿಗ್ರಹಜೋಗಯ್ಯನ ಗಂಟೆಯ ಸದ್ದಿನ ಜೊತೆಅವನ ಮಗನ ಜಿಂಕೆ ಕೊಂಬಿನ ನಾದಕೆಮನಸೋತು ಕಣ್ಮುಚ್ಚಿ ಕೈ ಮುಗಿದ ಭಕ್ತ ವೃಂದ ಮಂಗಳಾರತಿ ತಟ್ಟೆಗೆ ಟಣ್ ಎಂದುಬೀಳುತ್ತಿದ್ದ ನಾಲ್ಕಾಣೆ ಎಂಟಾಣೆ ಜಾಗದಲ್ಲೀಗರೂಪಾಯಿ ಒಂದು ಎರಡು ಐದರ ಸದ್ದುಮುಖಕ್ಕೆ ಬಿದ್ದ ತೀರ್ಥಕ್ಕೆ ಬೆಚ್ಚಿಅಳುವ ಕಂದನ ದನಿಗೆ ಮನೆಯವರ ನಗುಜೋಗಯ್ಯ ಹಾಕುವ ತೀರ್ಥಕ್ಕೆ ಕೈ ಒಡ್ಡಿನಿಂತವರ ಬಲಗೈಗೆ ಬಿದ್ದ ತೀರ್ಥಅರ್ಧ ಹೊಟ್ಟೆಗೆ ಉಳಿದರ್ಧ ತಲೆಗೆದೇವರಿಗೆ ಕಡ್ಡಿ ಹಚ್ಚಿ ಕೈ ಮುಗಿದುಉರಿವ ಕರ್ಪೂರದ ತಟ್ಟೆ ಬೆಳಗಿಅಡ್ಡ ಬಿದ್ದ ಭಕ್ತರ ಹಣೆಗೆ ಜೋಗಯ್ಯನಬೆರಳುಗಳಿಂದ ವಿಭೂತಿಯ ಮೂರು ಪಟ್ಟುಹಿರಿಯರು ಬಂದು ಎಡೆ ಮುಟ್ಟಲಿ ಎಂದಾಗಮನೆಯವರೆಲ್ಲಾ ಮನೆಯಿಂದ ಹೊರ ಬಂದುಬಾಗಿಲು ಮುಚ್ಚಿ ಒಂದೈದು ನಿಮಿಷ ಮೌನನಂತರ ಮನೆ ಹೊಕ್ಕು ನೆಂಟರಿಷ್ಟರ ಜೊತೆಮನೆ ಮಂದಿಗೆ ಪಿತೃಪಕ್ಷದ ಮೃಷ್ಟಾನ್ನ ******

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕಾನನದ ಸುಮ ಶ್ರೀ ಉಮೇಶ ಮುನವಳ್ಳಿಯವರ‘ಕಾನನದ ಸುಮ’ ಕವನ ಸಂಕಲನ. ಸಾಹಿತ್ಯ ನಿರ್ಮಾಣದ ಪರಮ ಉದ್ದೇಶ ಒಳ್ಳೆಯದನ್ನು ಹೇಳುವುದು, ಒಳ್ಳೆಯದನ್ನು ಮಾಡಲು ಪ್ರೇರೇಪಿಸುವುದು ಮತ್ತು ಮುಂದಿನವರಿಗೆ ಸಾಗಿಸಿ ಸಾಗುವುದು. ಸಾಹಿತ್ಯ ವಸ್ತು ಯಾವುದೇ ಇರಲಿ, ಅದರ ಹಿಂದೆ ನಿಸರ್ಗವಿರುತ್ತದೆ ಮತ್ತು ಜಗತ್ತು ಇರುತ್ತದೆಯೆಂಬುದನ್ನು ಮರೆತು ಬರೆದರೆ ಅಂಥ ಸಾಹಿತ್ಯಕ್ಕೆ ಭವಿಷ್ಯವಿರುವುದಿಲ್ಲ. ಕವಿತೆಯಲ್ಲಿ ಉತ್ತಮ ಕವಿತೆ, ಕೆಟ್ಟ ಕವಿತೆ ಎಂಬುದಿರುವುದಿಲ್ಲ, ಅದು ಕವಿತೆ ಹೌದೋ ಅಲ್ಲವೋ? ಎಂಬುದಷ್ಟೇ ಗಣನೆಗೆ ಬರುತ್ತದೆ. ಅದು ಹೌದಾದರೆ ಉತ್ತಮವಾಗಿಯೇ ಇರುತ್ತದೆ. ಯಾವುದಕ್ಕೂ ಕಮಿಟೆಡ್ ಆಗಿರದೆ ಸ್ವತಂತ್ರವಾಗಿರುವುದು ಉತ್ತಮ ಕವಿತೆಯ ಲಕ್ಷಣ. ಕವಿಯಾದವನು ಲೌಕಿಕ ಆಕರ್ಷಣೆಯಿಂದ ತನ್ನನ್ನು ಬಿಡಿಸಿಕೊಂಡು, ಸಹೃದಯ(ಓದುಗ)ನನ್ನೂ ಬಿಡಿಸಿ, ತನ್ನ ರಚನೆಯ ಕಡೆಗೆ ಸೆಳೆಯುತ್ತಾನಲ್ಲ ಅದೇ ಅವನ ಹೆಗ್ಗಳಿಕೆ. ಈ ಹಿನ್ನೆಲೆಯಲ್ಲಿ ಶ್ರೀ ಉಮೇಶ ಮುನವಳ್ಳಿ ಅವರ ‘ಕಾನನದ ಸುಮ’ ಕವನ ಸಂಕಲನವನ್ನು ಅವಲೋಕಿಸಿದಾಗ ಬಹಳ ಸಂತೋಷವಾಯ್ತು. ಪ್ರಾಥಃಸ್ಮರಣೀಯರಾದ ಹೊಸಗನ್ನಡ ಸಾಹಿತ್ಯ ಸಂಭೂತರೆನಿಸಿದ ಶ್ರೀ ಬಿ. ಎಂ. ಶ್ರೀ ಅವರು ಇಂಗ್ಲೀಷ ಪ್ರಾಧ್ಯಾಪಕರಾಗಿದ್ದು, ಕನ್ನಡ ಸಾಹಿತಿಗಳಾಗಿದ್ದರು. ಎರಡೂ ಭಾಷೆಗಳೂ ಅವರಿಗೆ ಇಷ್ಟ. “ಇವಳ ಸೊಬಗನವಳು ತೊಟ್ಟು ನೋಡಬಯಸಿದೆ; ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ” ಎಂದು ಎದೆದುಂಬಿ ಹಾಡಿದವರು. ಅವರು ಒಂದೆಡೆ “ನಾನು ಇಂಗ್ಲೀಷನ್ನೇನು ಕಡಿಮೆ ಪ್ರೀತಿಸುವುದಿಲ್ಲ; ಆದರೆ ಕನ್ನಡವನ್ನು ಹೆಚ್ಚು ಪ್ರೀತಿಸುತ್ತೇನೆ” ಎಂದು ಉದ್ಗಾರ ತೆಗೆದವರು. ಇದನ್ನು ಯಾಕೆ ಹೇಳಿದೆನೆಂದರೆ ಶ್ರೀ ಮುನವಳ್ಳಿಯವರ ಮಾತೃಭಾಷೆ ಕನ್ನಡ ಮತ್ತು ಅಧ್ಯಯನದ ಭಾಷೆ ಇಂಗ್ಲಿಷ. ಇವರಿಗೂ ಆ ತಾಕಲಾಟ ಅನುಭವಕ್ಕೆ ಬಂದಿರಲು ಸಾಕು. ಶ್ರೀ ಮುನವಳ್ಳಿಯವರು ‘ಬಿ. ಎಂ. ಶ್ರೀ’ ಯವರು ಬಳಸಿದ ‘ಸೊಬಗು’ ಮತ್ತು ‘ತೊಡಿಗೆ’ ಪದಗಳನ್ನು ಪ್ರತಿಮೆಯಾಗಿ ಅರಿತು ಬರೆಯಲೆಂದು ಮನವಿ.[2:20 pm, 19/06/2020] UMESH MUNAVALLY: ‘ಕಾನನದ ಸುಮ’ ಕವನ ಸಂಕಲನಕ್ಕೆ ಕವಿಯ ಮಡದಿಯೇ ಮುನ್ನುಡಿ ಬರೆದುದು ಸಾಹಿತ್ಯ ಕ್ಷೇತ್ರಕ್ಕೆ ಹೊಸತು. ಅವರು ಮುನ್ನುಡಿಗೆ ಕೊಟ್ಟ ಶೀರ್ಷಿಕೆ ; “ನಿನ್ನ ಕವಿತೆಗೆ ನಾನೇ ಮುನ್ನುಡಿ” ಎಂಬುದು ಒಂದು ಅಧ್ಭುತ ಪ್ರತಿಮೆಯಾಗಿದೆ! ಶ್ರೀ ಮುನವಳ್ಳಿಯವರು ರಚಿಸಿರುವ, ರಚಿಸಲಿರುವ ಎಲ್ಲ ಸಾಹಿತ್ಯಕ್ಕೂ ಅವರೇ ಪ್ರತಿಮೆ ಮತ್ತು ಮತ್ತು ಪ್ರತೀಕವೆಂದರೆ ತಪ್ಪಾಗಲಾರದು. ಈ ಸಂಕಲನದ ‘ಋತು’ ಕವನ ಪ್ರತಿಮೆಗಳ ಸರಮಾಲೆ! ‘ನಿನ್ನ ಹಾರೈಕೆ’ ಯಲ್ಲಿ ಬಳಸಿದ ‘ಇತಿಹಾಸದ ಮಸಣ’ ಸುಂದರ ಪ್ರತೀಕ. ಮನುಷ್ಯನ ಬಾಳಿಗೆ ನಂಬಿಕೆ ಬಹಳ ಮುಖ್ಯ, ಇತರರನ್ನು ನಂಬುವ ಮೊದಲು ತನ್ನನ್ನು ನಂಬಬೇಕು, ನಂಬಿಕೆಯು ಬಾಳಿಗೊಂದು ಭರವಸೆ. ಈ ಮಾತಿಗೆ ಪ್ರತೀಕದಂತಿವೆ “ನನಗೂ ಒಬ್ಬ ಗೆಳೆಯ ಬೇಕು”, “ಬಾಳ ಕವಿತೆ”, ಮತ್ತು “ಸ್ಪಟಿಕದಂತೆ ಸ್ಪಷ್ಟ” ಕವಿತೆಗಳು. ಶ್ರಂಗಾರಭರಿತ ರಸಭರಿತ ಕಾವ್ಯದಂತಿದೆ “ಹೆಣ್ಣು” ಕವಿತೆ. ಕವಿತೆ, ಪ್ರಾಮಾಣಿಕ ಸಂವೇದನೆಯನ್ನು ಹೊರಹಾಕುವ ಒಂದು ಸೃಜನಶೀಲ ಕ್ರಿಯೆ. ಮೊಗ್ಗೊಂದು ಅರಳಿ ಹೂವಾಗಿ ಚಲುವನ್ನೂ ಸುಗಂಧವನ್ನೂ ಹೊರಸೂಸುವಂತೆ. ಸಿಂಪಿಗ ಬಟ್ಟೆಯನ್ನು ಕತ್ತರಿಸುವ ಪೂರ್ವದಲ್ಲಿ ತನಗೆ ಸಮಾಧಾನ ಆಗುವವರೆಗೆ ಅಳತೆ ತೆಗೆದುಕೊಳ್ಳುತ್ತಾನೆ. ಹಾಗೆಯೇ ಕವನ ರಚನೆಯ ಪೂರ್ವದಲ್ಲಿ ಕವಿ ಹಲವು ದಿಸೆಯಲ್ಲಿ ಯೋಚಿಸಬೇಕು. ಈ ಸಂಕಲನದ ಕೆಲವು ವಾಚ್ಯಾರ್ಥದ ಮತ್ತು ಉಪದೇಶಾತ್ಮಕ ಕವನಗಳನ್ನು ಬಿಟ್ಟರೆ ಉಳಿದೆಲ್ಲ ಕವನಗಳು ಉತ್ತಮವಾಗಿವೆ. ಓದುಗನನ್ನು ಚಿಂತನೆಗೆ ತೊಡಿಸುತ್ತವೆ. ಪ್ರಕೃತಿಯ ಒಮ್ಮೆ ಬನಶಂಕರಿಯಾದರೆ ಪ್ರಸಂಗ ಬಂದರೆ ರಣಭಯಂಕರೀಯೂ ಆಗುತ್ತಾಳೆ. ಹೊಲದಲ್ಲಿ ಬೆಳೆಯ ಜೊತೆ ಕಳೆಯೂ ಬೆಳೆಯುತ್ತದೆ. ರೈತ ಕಳೆ ತೆಗೆದು ಬೆಳೆ ನಳನಳಿಸುವಂತೆ ಮಾಡುತ್ತಾನೆ. ಹಾಗೆಯೇ ಸಮಾಜದಲ್ಲಿ ಒಳ್ಳೆಯದರ ನಡುವೆ ಕೆಟ್ಟದ್ದೂ ಇರುತ್ತದೆ, ಕವಿಯಾದವನು ಅದನ್ನು ಎದುರಿಸಬೇಕು. ಮನ ಮಿಡಿದಾಗ ಧ್ವನಿಯ ಅಲೆಗಳೇ ಕವನಗಳಾಗಿ ಮೂಡಿಬರುತ್ತವೆ.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬಾಗಿಲು ತೆರೆಯೇ ಸೇಸಮ್ಮ ಬಾಗಿಲು ತೆರೆಯೇ ಸೇಸಮ್ಮವೈಚಾರಿಕ ಲಲಿತ ಪ್ರಬಂಧಗಳುಲೇಖಕರು- ಶರತ್ ಭಟ್ ಸೇರಾಜೆಅಂಕಿತ ಪುಸ್ತಕ ಅಂಕಿತ ಪ್ರತಿಭೆ ಮಾಲಿಕೆ-5 ಅಡಿಯಲ್ಲಿ ಅದರ ಸಂಪಾದಕರಾದ ಜೋಗಿಯವರು ಶರತ್ ಭಟ್ಟರನ್ನು ಗುರುತಿಸಿ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿದ್ದಾರೆ.ಶರತರ ಈ ಎಲ್ಲಾ ಹದಿನೈದು ಪ್ರಬಂಧಗಳು ಈ ಗೌರವಕ್ಕೆ ಅರ್ಹವಾಗಿವೆ. ಈ ಲೇಖನಗಳನ್ನು ಓದಿದಾಗ ಅವರು ಅಪಾರವಾಗಿ ಓದಿಕೊಂಡವರು ಎಂಬುದೂ ಗೊತ್ತಾಗುತ್ತದೆ.ಬಳಸಿದ ಭಾಷೆ ಬಹಳ ಚೆನ್ನಾಗಿದೆ.ಅವರ ತರ್ಕ, ತಮಾಷೆ ಮತ್ತು ವಿಷಯವನ್ನು ವಿವರಿಸಲು ಕೊಡುವ ಉದಾಹರಣೆಗಳು ವಿಶಿಷ್ಟವಾಗಿವೆ. ಗುರುತ್ವದ ಅಲೆ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಬಹುದು ಎಂದು ಸೇರಾಜೆ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಪಂಚಿಂಗ್ ಡೈಲಾಗ್ಸ್ ಇವೆ. ಇವು ನಮ್ಮಲ್ಲಿ ನಗುವನ್ನು ಉಕ್ಕಿಸುತ್ತವೆ. ಅವರು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಕವಿತೆಯ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಂತೆ ಚೆಂದವಾಗಿ ವರ್ಣಿಸಿದ್ದಾರೆ.ಬಿಎಂಶ್ರೀಯಿಂದ ಬರ್ನ್ಸ್ ಎಂಬ ಕವಿಯವರೆಗೆ ಉಲ್ಲೇಖ ಮಾಡಿದ್ದಾರೆ. ಥಟ್ ಅಂತ ರಾಷ್ಟ್ರಗಳ ಸಂಖ್ಯೆ ಬಗ್ಗೆ ಶರತ್ ಹೇಳಿಬಿಡುತ್ತಾರೆ.ದೇಶಗಳನ್ನೂ, ಅವುಗಳ ಗುಟ್ಟುಗಳನ್ನು, ಜೋಕುಗಳನ್ನು ಕ್ರ್ಯಾಕ್ ಮಾಡುತ್ತಾ ಬೆಡ್ ರೂಂವರೆಗೂ ಬರುತ್ತಾರೆ. ಅರ್ಥವೆಂಬ ಊಸರವಳ್ಳಿಯಲ್ಲಿ ಶಬ್ದದ ಅನುಕರಣೆ ಮಾಡಿ ಬದಲಾದ ಅರ್ಥಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ರೀಸಸ್ ( ಬಿಡುವು ) ಶಬ್ದ ಮೂತ್ರ ವಿಸರ್ಜನೆಗೆ ಬಳಕೆಯಾಗಿದ್ದು. ಆಯಿಲ್, ಸಕತ್, ಪ್ರವೀಣ ಮುಂತಾದ ಶಬ್ದಗಳ ಬಗ್ಗೆ ಇಲ್ಲಿ ಭಟ್ಟರು ಹೇಳಿದ್ದಾರೆ. ಬಾಗಿಲು ತೆರೆಯೇ ಸೇಸಮ್ಮ – ನಾವು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಬಳಸುವ ಪಾಸ್ವರ್ಡ್ ಕುರಿತು ಮಾಹಿತಿ ನೀಡುವ ಮತ್ತು ಹ್ಯಾಕರ್ ಗಳ ವಿವರ ನೀಡುವ ಪ್ರಬಂಧ.ಇದು ನಿಮಗೆ ಗೂಗಲ್ ಮಾಡಿದರೂ ಸಿಗಬಹುದು ಆದರೆ ಇಲ್ಲಿ ಅವರು ವಿವರಿಸಿದರ ಶೈಲಿ ಇದೆಯಲ್ಲ ಇದು ವಿಭಿನ್ನ ಮತ್ತು ಸರಳವಾಗಿದೆ. ಮರ್ಯಾದೆ ತೆಗೆಯುವ ಕಲೆಯನ್ನು ಓದುತ್ತಾ ನೋಡಬಹುದು ಮತ್ತು ಬೆಚ್ಚಿಬೀಳಬಹುದು.ಇಂಗ್ಲಿಷ್ ಮಾಧ್ಯಮದ ಕುರಿತು ಅವರ ನಿಲುವನ್ನು ಒಪ್ಪದಿರುವುದು ಕಷ್ಟ. ಇಂಗ್ಲೀಷ್ ಭಾಷೆ ದೋಸೆಯಾದರೆ ಮಾತೃಭಾಷೆ ಕನ್ನಡ ಊಟ ಎಂಬ ಸೋದಾಹರಣೆ ಚೆನ್ನಾಗಿದೆ. ಲೆಕ್ಕ ಹಾಕಿ ಸುಳ್ಳು ಹೇಳಿ – ಈ ಕ್ಷಣದ ಕಟು ವಾಸ್ತವವನ್ನು ಅನಾವರಣ ಮಾಡುವ ಲೇಖನ.ಸಿನೆಮಾ ಮತ್ತು ಕಳ್ಳತನ ಕುರಿತು ಅವರ ವಿಚಾರ, ನಮ್ಮ ತಲೆಗೆ ಕೈ ಹಾಕಿ ಹೂಂಗುಟ್ಟುವಂತೆ ಮಾಡುತ್ತದೆ.ವಿಮರ್ಶಕರಿಗೆ ಶಾಲಿನಲ್ಲಿ ಕಲ್ಲು ಹಾಕಿ ತಟ್ಟಿದ್ದಾರೆ. ಕಾರಂತಜ್ಜನ ಕಥೆಗಳು – ಇದರಲ್ಲಿ ಕಾರಂತರ ಕುರಿತು ಅಪರೂಪದ ವಿಷಯಗಳಿವೆ.ಬಲಿ ಚಕ್ರವರ್ತಿಯ ತ್ರಿವಿಕ್ರಮ ದಲ್ಲಿ ಮಿಖಾಯಿಲ್ ತಾಲ್ ಎಂಬ ಚೆಸ್ ಆಟಗಾರ ಬರುತ್ತಾನೆ.ಅದನ್ನು ಓದುವುದೇ ಒಂದು ಪುಳಕ. ನಮ್ಮ ತಲೆಯೂ ನಮ್ಮ ಹರೆಟೆಯೂ; ವೈಚಾರಿಕ ಲಲಿತ ಪ್ರಬಂಧ ಬರೆಯಲು ಆಸಕ್ತಿ ಇರುವವರು ಅಧ್ಯಯನ ಮಾಡುವಂತಹ ಒಂದು ಲೇಖನ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಒಮ್ಮೆ ಓದಲೇಬೇಕಾದ ಲೇಖನಗಳ ಗುಚ್ಛ ಶರತರ ಈ ಕೃತಿ ಎಂದು ಬೇಷರತ್ತಾಗಿ ಹೇಳುವೆ.******* ಡಾ.ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಮುಗಿಯದ ಮಾತು ಅಕ್ಷತಾ ಕೃಷ್ಣಮೂರ್ತಿ ಮನದ ಪ್ರಶ್ನೆಗಳಿಗೆ ಉತ್ತರವಿಲ್ಲಕೇಳಿದರೆ ಸಿಟ್ಟುಜಮದಗ್ನಿಯಂಥವರುಮೌನದಲಿ ಉತ್ತರವಿದೆ ಎನಿಸಿದರೂಆಲಿಸಲು ನಿಶಕ್ತಿಯಿದೆಹೇಳಿದರೆ ಸಲೀಸುಗೊತ್ತಿದ್ದರೂಗೊತ್ತಿಲ್ಲದಂತಿರುವುದೇ ಒಲವಿಗೆಶ್ರೇಯಸ್ಸು ಆದರೂಹೊಟ್ಟೆಕಿಚ್ವು ಎಂದನವ ಯಾಕಾಗಿ ಯಾರಿಗಾಗಿಸ್ವಂತದ್ದು ಆಗಿದ್ದರೆಒಪ್ಪುತ್ತಿದ್ದೆನೆನೋರವಿ ಕಿರಣಕೆಪಾಲುದಾರರೆ ಹೆಚ್ಚಿರುವಾಗಈಗ ಹುಟ್ಟಿದ ನಾನುನೀ ನನ್ನವನೆನಲು ಒಪ್ಪಿತವೇನು?ಅಷ್ಟಕ್ಕೂ ಅವನೊಲವುಅರಿವಿಗೂ ದಕ್ಕದಿರುವಾಗಗೆಲ್ಲುವೆನೆಂಬ ಉಮೇದುತಕ್ಕಡಿಯಲ್ಲಿ ಲೆಕ್ಕ ಹಾಕುತಿದೆಒಲವು ಅಂಟಿಸಿಕೊಳ್ಳುವುದಲ್ಲ. ಅವನೇಕೆ ಒಂದು ನಮೂನಿನೇರ ಇದ್ದಾನೆ ನುಡಿಯುತ್ತಾನೆಎದುರಿಗಿರುವುದು ಪ್ರೀತಿಸುವಮನಸು ಮರೆಯುತ್ತಾನೆಹೇಳಿಯೇ ಬಿಡುತ್ತಾನೆಎಲೆ ಉದುರುವ ಕಾರಣವನಾ ನೀರೆರೆಯುತ್ತೇನೆನಂಬಿ ನನ್ನ ವಸಂತತಪ್ಪದೆ ಬರುವ ಎಲ್ಲತಪ್ಪುಗಳ ಮೀರಿಎಂದೆ ಅಂವ ಆಡಿದ ಮಾತುಮರೆತು ಮತ್ತೆಹೇಳಿಯೇ ಬಿಡುತ್ತಾನೆನೆಟ್ಟ ಮರ ಮುರಿಯಲು ಬಿಡೆ ಎಂದು ಈಗ ಅನಿಸುತ್ತದೆ ಇಬ್ಬರ ದಾರಿ ಒಂದೆನಡೆಯುತ್ತೇವೆ ಓಡುತ್ತೇವೆಒಮ್ಮೊಮ್ಮೆ ಕುಂಟುತ್ತೇವೆಇದ್ದಕ್ಕಿದ್ದಲ್ಲೇ ದಾರಿ ಎರಡಾಗುತ್ತದೆಮಾತಾಡುತ್ತೇವೆ ದೊಡ್ಡದಾಗಿಕೂಗುತ್ತೇವೆ ಕಿರುಚುತ್ತೇವೆಅರೇ! ತಪ್ಪು ತಿಳಿಯಬೇಡಿಎರಡಾದ ದಾರಿ ಒಂದಾಗುವರೆಗೆಕೂ..ಅಂದಿದ್ದುಕೇಳಬೇಕಲ್ಲಮತ್ತೇ ಎಲ್ಲೊ ಒಂದು ಕಡೆದಾರಿ ಸೇರುತ್ತದೆಒಂದಾದ ದಾರಿಯಲ್ಲಿಸೇರುತ್ತೇವೆ ಸಾಗುತ್ತೇವೆಕೊನೆ ನಿಲ್ದಾಣಪರಿಚಯವಾಗುವವರೆಗೆ. ***********

ಕಾವ್ಯಯಾನ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಮೂರನೇ ಆಯಾಮ

ಸುಪ್ತಮನದೊಳಗಿನ ಗುಪ್ತತೆಗಳ ಅನಾವರಣ ಸುಪ್ತಲೇಖಕರು- ಡಾ. ಕೆಬಿ ಶ್ರೀಧರಬೆಲೆ- ೨೦೦ ತ್ರೀ ಈಡಿಯೆಟ್ಸ್ ನೋಡಿದ್ದೀರಲ್ಲ? ಅಲ್ಲಿನ ಒಂದು ದೃಶ್ಯ. ಇಂಜಿನಿಯರ್ ಕಾಲೇಜಿನ ರಿಸಲ್ಟ್ ಬಂದಿರುತ್ತದೆ. ಸ್ನೇಹಿತರಾದ ಫರ್ಹಾನ್ ಖಾನ್ ಮತ್ತು ರಾಜು ತಮ್ಮ ತಮ್ಮ ರಿಸಲ್ಟ್ ನೋಡಲು ಅಂಕಪಟ್ಟಿಯ ಕೆಳಗಿನಿಂದ ಮೇಲಕ್ಕೆ ನೋಡುತ್ತಿರುತ್ತಾರೆ. ಅಲ್ಲೆಲ್ಲೋ ಮಧ್ಯದಲ್ಲಿ ಅವರ ಹೆಸರುಗಳು ಕಾಣಿಸುತ್ತವೆ. ತಮ್ಮ ಹೆಸರು ಸಿಕ್ಕ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಆದರೆ ತಮಗಿಂತ ಒಂದಿಷ್ಟು ಮೇಲಿನವರೆಗೆ ನೋಡಿದರೂ ರಾಂಚೋ ನಂಬರ್ ಸಿಕ್ಕುವುದೇ ಇಲ್ಲ. ಗೆಳೆಯರಿಗೆ ಬೇಸರ. ತಮ್ಮದೇ ಜೊತೆ ತಮ್ಮೆಲ್ಲ ಕೀಟಲೆಯಲ್ಲಿದ್ದ ರಾಂಚೋ ಫೇಲ್ ಆದ ಎನ್ನುವುದು. ಆದರೆ ಮತ್ತೊಮ್ಮೆ ನೋಡಿದರೆ ಚತುರ್‌ನನ್ನೂ ಹಿಮದೆ ಹಾಕಿ ರಾಂಚೋ ಟಾಪರ್ ಆಗಿರುತ್ತಾನೆ. ಲೀಸ್ಟ್‌ನ ಮೊಟ್ಟ ಮೊದಲಲ್ಲಿ ಅವನ ಹೆಸರಿರುತ್ತದೆ. ಆಗ ಒಂದು ಮಾತು ಬರುತ್ತದೆ. ‘ತಮ್ಮ ಸ್ನೇಹಿತ ಫೇಲ್ ಆದ ಎನ್ನುವುದು ಎಷ್ಟು ಬೇಸರ ಕೊಡುತ್ತದೆಯೋ, ಅದಕ್ಕಿಂತ ಹೆಚ್ಚು ಬೇಸರ ಆತ ಕಾಲೇಜಿಗೇ ಮೊದಲಿಗೆ ಎಂದು ತಿಳಿದಾಗ ಆಗುತ್ತದೆ’ ಎನ್ನುವುದು. ನನಗೆ ಈ ಮಾತು ಪದೆಪದೇ ನೆನಪಾಗುತ್ತದೆ. ನಾವು ಯಾರನ್ನೋ ನಮ್ಮವರು ಎಂದುಕೊಳ್ಳುತ್ತಲೇ ಇರುತ್ತೇವೆ. ಜೀವಕ್ಕಿಂತ ಹೆಚ್ಚು, ಪ್ರಾಣಸ್ನೇಹಿತ ಎನ್ನುವ ಮಾತುಗಳನ್ನು ಆಡಿಕೊಳ್ಳುತ್ತಲೇ ಇರುತ್ತೇವೆ. ಆದರೆ ಎಷ್ಟೇ ಜೀವಕ್ಕೆ ಜೀವ ಎಂದರೂ ಎದೆಯ ಮೂಲೆಯಲ್ಲೊಂದು ಸಣ್ಣ ಅಸೂಯೆ ಇದ್ದೇ ಇರುತ್ತದೆಯೇ? ನಾವು ಎರಡು ಜೀವ ಒಂದು ಪ್ರಾಣ ಎನ್ನುವ ಮಾತುಗಳೆಲ್ಲ ಕಷ್ಟದಲ್ಲಿದ್ದಾಗ ನಿಜವೇ. ಕಷ್ಟಕ್ಕೆ ಹೆಗಲು ಕೊಡುವಾಗ ಹೆಚ್ಚಿನ ಸ್ನೇಹಿತರಿಗೆ ಯಾವ ಬೇಸರವೂ ಆಗುವುದಿಲ್ಲ. ನೋವನ್ನು ತಮ್ಮದೇ ಎಂದು ತಿಳಿದು ಅದನ್ನು ನಿವಾರಿಸಲು ಓಡಾಡುವ ಸ್ನೇಹಿತರಿಗೇನೂ ಕೊರತೆ ಇರುವುದಿಲ್ಲ. ಖುಷಿಯ ಜೊತೆಗೆ ಸಾವಿರಾರು ಗೆಳೆಯರಿರಬಹುದು. ಯಶಸ್ಸಿನ ಜೊತೆಗೆ ಇನ್ನೂ ಬಹಳಷ್ಟು ಸ್ನೇಹಿತರು ಹುಟ್ಟಿಕೊಳ್ಳಬಹುದು. ಆದರೆ ಕೊರತೆಯಿರುವುದು ಯಶಸ್ಸನ್ನು ಅಷ್ಟೇ ದೊಡ್ಡ ಮನಸ್ಸಿನಿಂದ ಒಪ್ಪಿಕೊಳ್ಳುವ ಸ್ನೇಹಿತರದ್ದು. ಡಾ. ಶ್ರೀಧರ ಕೆ.ಬಿಯವರ ಸುಪ್ತ ಕಾದಂಬರಿಯನ್ನು ಓದುವಾಗ ನನಗೆ ಇದೆಲ್ಲ ನೆನಪಾಯ್ತು. ಕೆ. ಬಿ. ಶ್ರೀಧರ ಹೆಸರಾಂತ ವೈದ್ಯರು. ವೈದ್ಯರೇಕೆ ಸಾಹಿತ್ಯಲೋಕದೊಳಗೆ ಕಾಲಿಡಲು ಮನಸ್ಸು ಮಾಡಿದರೋ ಗೊತ್ತಿಲ್ಲ. ಅದರಲ್ಲೂ ಕಾದಂಬರಿಯನ್ನು ಬರೆಯುವ ಹುಮ್ಮಸ್ಸು ಮೂಡಿದ್ದೇಕೆ? ಅವರೇ ಅದಕ್ಕೆ ಉತ್ತರ ಹೇಳಬೇಕು.     ‘ಸುಪ್ತ’ ಎನ್ನುವುದು ವೈದ್ಯರೊಬ್ಬರು ಬರೆದಿರುವುದರಿಂದ ಸಹಜವಾಗಿಯೇ ವೈದ್ಯಲೋಕಕ್ಕೆ ಸಂಬಂಧಪಟ್ಟ ಕಾದಂಬರಿ. ಇದು ಬಾಲ್ಯ ಸ್ನೇಹಿತ ಸ್ನೇಹ, ಅಸೂಯೆ, ಅಸಮಧಾನ ಅವರ ಖುಷಿ, ಕುಡಿತದ ಕುರಿತಾಗಿ ಹೇಳುವಂತೆಯೇ ಪ್ರಮುಖವಾಗಿ ಆ ಸ್ನೇಹಿತರಲ್ಲಿ ಒಬ್ಬನ ಕ್ಯಾನ್ಸರ್‌ನ ಕುರಿತಾಗಿ ಹೇಳುತ್ತ ಹೋಗುತ್ತದೆ. ಕ್ಯಾನ್ಸರ್‌ನ ಮೂಲಕವಾಗಿಯೇ ಇವರ ಬಾಲ್ಯ, ಯೌವನದ ದಿನಗಳು, ಇವರ ವಿದ್ಯಾಭ್ಯಾಸದ ಕುರಿತಾಗಿ ಪರ್‍ಯಾವರಣದ ಕ್ರಮದಲ್ಲಿ ವಿಷದಪಡಿಸುತ್ತದೆ. ಇಲ್ಲಿ ಕ್ಯಾನ್ಸರ್ ಪೇಷಂಟ್ ಕೂಡ ಒಬ್ಬ ವೈದ್ಯನೇ. ಕಾದಂಬರಿಕಾರ ಕೂಡ ವೈದ್ಯನೇ ಆಗಿರುವುದರಿಂದ ಕ್ಯಾನ್ಸರ್‌ಗೆ ಸಂಬಂಧಪಟ್ಟ ಹೆಚ್ಚಿನ ವಿವರಣೆಗಳನ್ನು ಇಲ್ಲಿ ಯಥಾವತ್ತಾಗಿ ದಾಖಲಿಸಲು ಸಾಧ್ಯವಾಗಿದೆ ಎಂದುಕೊಳ್ಳುತ್ತೇನೆ. ಕೆಲವು ದಿನಗಳಿಂದ ಫ್ರೆಂಚ್ ಲೇಖಕರ ಬಗ್ಗೆ ಹಿಂದೊಮ್ಮೆ ನಾನೇ ಬರೆದ ಲೇಖನಗಳನ್ನು ತಿದ್ದಿ ಬರೆಯಲೆಂದು ಮತ್ತೊಮ್ಮೆ ಮಾಹಿತಿ ಕಲೆಹಾಕುತ್ತಿದ್ದೆ. ಗೆಳೆಯ ವಿ. ಆರ್ ಕಾರ್ಪೆಂಟರ್ ತನ್ನ ನವಿಲು ಪತ್ರಿಕೆಗಾಗಿ ಒತ್ತಾಯದಿಂದ ವಿಕ್ಷಿಪ್ತ ಲೇಖಕರು ಎಂಬ ಮಾಲಿಕೆಯನ್ನು ಬರೆಸಿದಾಗ ಬರೆದ ಲೇಖನಗಳು ಅವು. ಅನುಭವಕ್ಕಾಗಿಯೇ ಪಾಪದ ಕೂಪದಲ್ಲಿ ಬಿದ್ದು ಹೊರಳಾಡಿದ ಬಹಳಷ್ಟು ಲೇಖಕರ ಬಗ್ಗೆ ಓದಿದಾಗ ನಿಜಕ್ಕೂ ಅಚ್ಚರಿಯಾಗಿತ್ತು. ಬೋದಿಲೇರ್, ಸೆಂಡಾರ್ಸ್, ಪೌಲ್ ವರ್ಲೆನ್ ಮುಂತಾದವರು ತಮ್ಮ ಬರವಣಿಗೆಗಾಗಿಯೇ ಪಾಪಲೋಕದ ಒಳಹೊಕ್ಕು ಆ ಬದುಕನ್ನು ಅನುಭವಿಸಿದರು ಎಂಬುದೇ ಒಂದು ವಿಶೇಷ. ಒಂದು ಕಾದಂಬರಿಗಾಗಿ ತಮ್ಮನ್ನೇ ತಾವು ನಿಕಷಕ್ಕೊಡ್ಡಿಕೊಳ್ಳುತ್ತಾರೆಯೇ? ಹಾಗೆ ಮಾಡಿದರೆ ಅನುಭವಗಳು ದಟ್ಟವಾಗುತ್ತವೆಯೇ ಎಂಬ ಅನುಮಾನ ಕೂಡ ನನಗೆ ಆ ಸಮಯದಲ್ಲಿತ್ತು. ಆದರೆ ಸುಪ್ತ ಕಾದಂಬರಿಯನ್ನು ಓದಿದಾಗ ಅದು ನಿಜ ಎನ್ನಿಸುತ್ತದೆ. ಒಬ್ಬ ವೈದ್ಯ, ವೈದ್ಯಲೋಕದ ಸವಾಲುಗಳ ಬಗ್ಗೆ ಬರೆಯುವುದಕ್ಕೂ, ಇಂಗ್ಲೀಷ್ ಶಿಕ್ಷಕಿಯಾದ ನಾನು ವೈದ್ಯಲೋಕದ ಕುರಿತು ಬರೆಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿರಬಹುದು. ಹೀಗಾಗಿಯೇ ಗೆಳತಿ ದೀಪ್ತಿ ಭದ್ರಾವತಿಗೆ ನಾನು ಪದೇಪದೇ ಹೇಳುತ್ತಿರುತ್ತೇನೆ. ಅದೆಷ್ಟು ಸಮೃದ್ಧ ಅನುಭವಗಳು ಆಕೆಗೆ ದಕ್ಕುತ್ತವೆಯೆಂದು. ಇಲ್ಲಿ ಕೂಡ ಅವಿನಾಶ ಮತ್ತು ಗಿರೀಶ ಇಬ್ಬರೂ ಬಾಲ್ಯ ಸ್ನೇಹಿತರು. ಇಲ್ಲಿ ಬರುವ ಸೂರಿ, ಪ್ರವೀಣ ಮುಂತಾದ ಪಾತ್ರಗಳು ಕೂಡ ಇದೇ ಸ್ನೇಹದ ಪರಿಧಿಯೊಳಗೇ ಬರುವಂತಹುದ್ದು. ಆದರೆ ಗಿರೀಶ ಸಿ ಇ ಟಿ ಪರೀಕ್ಷೆಯಲ್ಲಿ ಪ್ರವೀಣ ಮತ್ತು ಅವಿನಾಶನ ಕಾಪಿ ಹೊಡೆದು ಮೆಡಿಕಲ್ ಸೇರಿದ್ರೆ ಅವಿನಾಶನಿಗೆ ಮೆಡಿಕಲ್ ಸಿಗದೇ ಇಂಜಿನಿಯರ್ ಕಾಲೇಜಿಗೆ ಹೋಗಬೇಕಾಗಿತ್ತು. ಅವಿನಾಶ ಮತ್ತು ಪ್ರವೀಣರ ಪೇಪರ್ ನೋಡಿಕೊಂಡು ತಾನು ಬರೆದಿದ್ದರೂ, ‘ನಿನ್ನ ರ್‍ಯಾಂಕ್‌ಗೆ ಮೆಡಿಕಲ್ ಸೀಟು ಸಿಕ್ಕೋದು ಡೌಟೇ’ ಎಂದು ಅಣಕಿಸುತ್ತಿದ್ದ ಗಿರೀಶನ ಬಗ್ಗೆ ಒಳಗೊಳಗೇ ಇರುವ ಅಸೂಯೆ, ಅದಕ್ಕಿಂತ ಹೆಚ್ಚಾಗಿ ‘ಅವರೇ ತಮ್ಮ ದೊಡ್ಡಸ್ತಿಕೆ ತೋರಿಸೋದಕ್ಕೋಸ್ಕರ ನೋಡ್ಕೊಂಡು ಬರಿ ಅಂತ ಪೇಪರ್ ತೋರಿಸಿದ್ದರು’ ಎನ್ನುವ ಗಿರೀಶನ ಪಾಪಪ್ರಜ್ಞೆಯನ್ನೂ ಇಲ್ಲಿ ಗಮನಿಸಬೇಕು ಗೆಳೆಯರ ನಡುವಣ ಈ ತಾಕಲಾಟದ ಕಥೆಗಳು ಇಡೀ ಪುಸ್ತಕದೊಳಗೆ ಅಂತರಗಂಗೆಯಂತೆ ಹರಿದಿದೆ.      ಕ್ಯಾನ್ಸರ್ ಎಂದರೆ ಸುಲಭವಲ್ಲ. ನಮಗೆ ಕ್ಯಾನ್ಸರ್ ಆಗಿದೆ ಎಂದು ಒಪ್ಪಿಕೊಳ್ಳುವುದಕ್ಕೇ ಬಹಳಷ್ಟು ಸಮಯ ಬೇಕು. ಬಡಪೆಟ್ಟಿಗೆ ಮನಸ್ಸು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ಬಂದರೆ ಸತ್ತೇ ಹೋಗುತ್ತಾರೆಂಬ ಸುಳ್ಳು ನಂಬಿಕೆಗಳು, ದೇವರು ಯಾವುದೋ ವಿಷಯಕ್ಕೆ ಶಿಕ್ಷೆ ಕೊಡೋದಕ್ಕೇ ಈ ರೋಗ ಕೊಟ್ಟಿದ್ದಾನೆ ಅಂತ ಅಂದುಕೊಳ್ಳುವ ಮೂಢನಂಬಿಕೆಗಳಿಂದಾಗಿ ಕ್ಯಾನ್ಸರ್ ರೋಗಿ ಎಂದು ಕರೆಯಿಸಿಕೊಳ್ಳಲು ಯಾರೂ ಇಷ್ಟ ಪಡುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಲಕ್ಷಣಗಳು ಕಾಣಿಸಿದರೂ ಅದಲ್ಲ ಎಂದು ತಮ್ಮನ್ನು ತಾವು ನಂಬಿಸಿಕೊಳ್ಳುವುದೇ ಹೆಚ್ಚು ಎಂಬ ಜನರ ಮನಸ್ಥಿತಿಗೆ ಈ ಕಾದಂಬರಿ ಕನ್ನಡಿ ಹಿಡಿದಿದೆ.    ಅದು ಅಗಷ್ಟ್‌ನ ಸಮಯ. ಅಮ್ಮ ಅಪ್ಪ ಎರಡು ದಿನಗಳ ಮಟ್ಟಿಗೆ ನಮ್ಮ ಮನೆಗೆ ಬಂದಿದ್ದರು. ‘ಇಲ್ನೋಡು ಪಟ್ಟಿ. ಏನೋ ಗಂಟಿದೆ.’ ಅಮ್ಮ ಒಂದು ದಿನ ತನ್ನ ಎದೆಯ ಮೇಲಾದ ಚಿಕ್ಕ ಕಡಲೇ ಕಾಳಿನಷ್ಟು ಗಾತ್ರದ ಗಂಟನ್ನು ಮುಟ್ಟಿಸಿದ್ದರು. ನನ್ನ ಎದೆ ಧಸಕ್ಕೆಂದಿತ್ತು. ‘ಯಾವಾಗ ಆಯ್ತು ಇದು?’ ಗಡಬಡಿಸಿ ಕೇಳಿದ್ದೆ. ‘ಎರಡು ಮೂರು ತಿಂಗಳಾಗಿರಬಹುದು’ ಅಮ್ಮ ಹೇಳಿದ್ದರು. ‘ಆಗಲೇ ಹೇಳೋದಲ್ವಾ? ಇಷ್ಟು ದಿನ ಯಾಕೆ ತಡಮಾಡಿದೆ?’ ನಾನು ಮತ್ತಿಷ್ಟು ಕಂಗಾಲಾದಂತೆ ಕೇಳಿದ್ದೆ. ‘ಏನಾಗಲ್ಲ ಬಿಡು.’ ಅಮ್ಮ ಹೇಳಿದ ಸಮಾಧಾನ ನನಗೋ ಸ್ವತಃ ಅವರಿಗೋ ಅರ್ಥವಾಗಿರಲಿಲ್ಲ. ಮಾರನೇ ದಿನವೇ ಎಲ್ಲ ಅನಾರೋಗ್ಯಕ್ಕೂ ಓಡುವ, ಕುಟುಂಬದವರೇ ಆದ ಕುಮಟಾದ ಪ್ರಸಿದ್ಧ ವೈದ್ಯರಾದ ವಿ ಆರ್ ನಾಯಕರ ಬಳಿ ಕರೆದೊಯ್ದೆ. ಬಯಾಪ್ಸಿಯ ರಿಪೋರ್ಟ್ ತಿಳಿಯಲು ಒಂದು ವಾರ- ಹತ್ತು ದಿನಗಳ ಸಮಯ ಬೇಕಿತ್ತು. ಅಷ್ಟರಲ್ಲಿ ನನಗೆ ಸುಮಾರು ೧೫೦ಕಿಮಿ ದೂರದ ಊರಲ್ಲಿ ತರಬೇತಿ ಪ್ರಾರಂಭವಾಗಿತ್ತು. ಅದು ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ ತರಬೇತಿಯಾದ್ದರಿಂದ ಮತ್ತು ಪುನಃ ನಾವು ಬಂದು ನಮ್ಮ ಜಿಲ್ಲೆಯಲ್ಲಿ ತರಬೇತಿ ನಡೆಸಬೇಕಾದ್ದರಿಂದ ಹೆಚ್ಚಿನ ಒತ್ತಡವಿತ್ತು. ಹೀಗಾಗಿ ಅಪ್ಪ ಅಮ್ಮ ತಾವೇ ಹೋಗಿ ರಿಪೋರ್ಟ್ ತರುವುದಾಗಿ ಹೇಳಿದ್ದರು. ನನಗೋ ಬೆಳಗಿನಿಂದ ಅಂಡು ಸುಟ್ಟ ಬೆಕ್ಕಿನ ಒದ್ದಾಟ. ಅದೇ ಸಮಯಕ್ಕೆ ಅಪ್ಪ ಫೋನ್ ಮಾಡಿ, ‘ಡಾಕ್ಟರ್ ನಮ್ಮ ಬಳಿ ಏನೂ ಹೇಳಲಿಲ್ಲ, ನಿನಗೇ ಫೋನ್ ಮಾಡಲು ಹೇಳಿದ್ದಾರೆ’ ಎಂದಿದ್ದರು. ಅವರು ಹಾಗೆಂದದ್ದೇ ನನಗೆ ಅರ್ಥವಾಗಿತ್ತು. ಆದರೂ ಮಾತನಾಡಲೇ ಬೇಕಲ್ಲ. ಡಾ. ವಿ ಆರ್ ನಾಯಕರಿಗೆ ಫೋನಾಯಿಸಿದ್ದೆ ಹೆದರುತ್ತಲೇ. ಯಾಕೋ ಸ್ವಲ್ಪ ಅನುಮಾನ ಅನ್ನಸ್ತಿದೆ. ಡಾಕ್ಟರ್ ಹೇಳಿದಾಗ ಜಂಘಾಬಲವೇ ಅಡಗಿಹೋದಂತೆ. ಏನಾಯ್ತು? ಕ್ಲೀಯರಾಗಿ ಹೇಳಿಬಿಡು. ನಾನು ಡಾಕ್ಟರ್‌ನ್ನು ಒತ್ತಾಯಿಸಿದ್ದೆ. ಈಗ ಮೊದಲನೇ ಸ್ಟೇಜ್‌ಗೆ ಹೋಗ್ತಿದೆ. ತಕ್ಷಣ ಬೆಂಗಳೂರಿಗೆ ಹೊರಟು ಬಿಡಿ. ಉಲ್ಲಾಸನಿಗೆ ಫೋನ್ ಮಾಡಲು ಹೇಳು. ಎಂದಿದ್ದರು. ಕಣ್ಣಲ್ಲಿ ಸುರಿಯಬೇಕಾಗಿದ್ದ ನೀರನ್ನು ಕಣ್ಣಲ್ಲೇ ಇಂಗಿಸುತ್ತ ಅಣ್ಣ ಉಲ್ಲಾಸನಿಗೆ ಫೋನ್ ಮಾಡಿದ್ದೆ. ಅಪ್ಪ ಅಮ್ಮನನ್ನು ತಕ್ಷಣ ಬರಲು ಹೇಳಿ ಮಾರನೇ ದಿನವೇ ಇಬ್ಬರನ್ನೂ ಅಣ್ಣನ ಮನೆಗೆ ಕಳುಹಿಸಿದೆ. ಅಮ್ಮನಿಗೆ ಹೇಳಬಾರದು ಎಂದುಕೊಂಡರೂ ನನ್ನ ಗಡಿಬಿಡಿಗೆ ಅಮ್ಮನಿಗೆ ಅರ್ಥವಾಗಿತ್ತು. ಆದರೂ ಕಿದ್ವಾಯಿಯಲ್ಲಿ ತೋರಿಸುವವರೆಗೂ ಅದಲ್ಲ, ಹಾಗೇನೂ ಆಗಿರುವುದಿಲ್ಲ ಎಂಬ ನಂಬಿಕೆ. ಆದರೆ ರಿಪೋರ್ಟ್ ಬಂದಾಗ ನಾವು ಬೇಡಿಕೊಂಡಂತೇನು ಆಗಿರಲಿಲ್ಲ. ಆದರೆ ಸಮಾಧಾನವೆಂದರೆ ಮೊದಲ ಸ್ಟೇಜ್‌ಗೆ ಎಂಟರ್ ಆಗುವುದರಲ್ಲಿತ್ತು. ಈ ಕಾದಂಬರಿಯಲ್ಲೂ ಹೀಗೇ. ಗಿರೀಶ ತನ್ನ ಕಣ್ಣಿನ ಕೆಳಗಾದ ಗುಳ್ಳೆಯನ್ನು ಏನೂ ಅಲ್ಲವೆಂದು ನಿರ್ಲಕ್ಷ ಮಾಡಿದ್ದ. ಮೂರನೇ ಸ್ಟೇಜಿಗೆ ಬರುವವರೆಗೂ, ಸ್ವತಹ ತಾನೇ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಲೂ.     ಇಲ್ಲಿ ಬರುವ ವೈದ್ಯಕೀಯ ವಿವರಣೆಗಳು ಎಷ್ಟು ಆಸಕ್ತಿ ಹುಟ್ಟಿಸುತ್ತವೆಯೋ ಅಷ್ಟೇ ಆಸಕ್ತಿಯನ್ನು ಇಲ್ಲಿನ ಸ್ನೇಹಿತರ ಒಡನಾಟವೂ ಹುಟ್ಟಿಸುತ್ತದೆ. ಗೆಳೆಯರ ನಡುವಣ ಅಸೂಯೆ, ಪ್ರೀತಿ, ಪರಸ್ಪರ ಸಹಾಯ ಮಾಡುವ ಮನಸ್ಸಿದ್ದಾಗಲೂ ಕಾಡುವ ಅಪನಂಬಿಕೆಗಳನ್ನು ತುಂಬಾ ಚಂದವಾಗಿ ನಿರೂಪಿಸಿದ್ದಾರೆ. ಬಾಲ್ಯದಲ್ಲಿ ಎಂದೋ ಮಾಡಿದ ಅವಮಾನ ಧುತ್ತನೆ ಎದುರು ನಿಂತು ಸ್ನೇಹದ ನಡುವೆ ಕಟ್ಟಿಬಿಡುವ ಗೋಡೆಯ ಕುರಿತಾಗಿ ಹೇಳಿದ್ದಾರೆ. ಗಿರೀಶನಿಗೆ ಕ್ಯಾನ್ಸರ್ ಆದದ್ದರ ಕುರಿತು ಬೇಸರಿಸಿಕೊಳ್ಳುವ ಅವಿನಾಶನಿಗೂ ಆತ ಹಿಂದೆ ಇವನ ದೇಹಾಕೃತಿಯ ಕುರಿತು ಆಡಿಕೊಂಡಿದ್ದ ಮಾತು ನಿದ್ದೆಯ ಕನವರಿಕೆಯಾಗಿಯೂ ಆಚೆ ಬರುತ್ತದೆ. ಇವೆಲ್ಲದರ ನಡುವೆ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಓದುವ ಯುವ ಮನಸ್ಸುಗಳ ತಾಕಲಾಟ, ತಿಕ್ಕಲುಗಳು, ಸಣ್ಣತನದ ಜೊತೆಜೊತೆಗೇ ಸ್ನೇಹವನ್ನು ಬಿಟ್ಟುಕೊಡಲಾಗದ ಆತ್ಮೀಯತೆ ಮನಸ್ಸು ತಟ್ಟುವಂತಿದೆ. ತನ್ನ ಕಿಮೋ ಮಾಡುವಾಗ ಪೂರ್ತಿಯಾಗಿ ತನ್ನದೇ ರೂಮಿನಲ್ಲಿ ಇಟ್ಟುಕೊಂಡ ಅವಿನಾಶನಿಗೂ ಗಿರೀಶ ಕೊನೆಗೆ ಕೆಟ್ಟದಾಗಿಯೆ ಮಾತನಾಡುತ್ತಾನೆ. ‘ಡಿಕ್ಟೇಟರ್ ತರಹ ಮಾಡ್ತಾನೆ. ಅದು ಮುಟ್ಟಬೇಡ, ಇದು ಮುಟ್ಟಬೇಡ ಅಂತಾನೆ. ಅವನು ಟಿ.ವಿ ಹಾಕಿದಾಗಲೇ ನೋಡಬೇಕು.’ ಎಂಬಂತಹ ಮಾತುಗಳು ಅವಿನಾಶನ ಕಿವಿಗೂ ತಲುಪುತ್ತದೆ. ಅವಿನಾಶನ ಕೂದಲಿಲ್ಲದ ತಲೆಯ ಕುರಿತೂ ತಮಾಷೆ ಮಾಡುತ್ತ ಅಪಹಾಸ್ಯ ಮಾಡುವ ಗಿರೀಶ ಸತ್ತ ದಿನವೇ ಅವಿನಾಶನ ಮದುವೆ. ಆತನ ಕೊನೆಯ ದರ್ಶನವನ್ನೂ ಮಾಡಲಾಗದಂತಹ ಪರಿಸ್ಥಿತಿ. ಒಂದು ಖುಷಿಯ ಬದುಕಿನ ಪ್ರಾರಂಭದೊಂದಿಗೆ ಜೀವನವನ್ನು ತೀರಾ ಹಗುರವಾಗಿ ಪರಿಗಣಿಸಿ ತಾನೆ ತನ್ನ ಕೈಯ್ಯಾರೆ ಹಾಳು ಮಾಡಿಕೊಂಡವನ ಜೀವನ ಮುಗಿಯುವುದು ನಿಜಕ್ಕೂ ವಿಪರ್‍ಯಾಸ.    ಕಾದಂಬರಿ ಕೇವಲ ಯುವ ಮನಸುಗಳ ಅನಾವರಣ, ವೈದ್ಯಕೀಯ ವಿಷಯಗಳನ್ನಷ್ಟೇ ಹೇಳುವುದಿಲ್ಲ. ಅದೊಂದು ಮನೋವೈಜ್ಞಾನಿಕ ಕಥೆಯಾಗಿಯೂ ನಮ್ಮೆದುರು ತೆರೆದುಕೊಳ್ಳುತ್ತದೆ. ಅವಿನಾಶನ ತಂದೆಗೆ ಪಾರ್ಶ್ವವಾಯುವಾದಾಗಿನ ಘಟನೆಗಳನ್ನು ಆತ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾನೆ. ಆ ಕಠಿಣ ಸಮಯದಲ್ಲಿ ಯಾರೂ ಸಹಾಯಕ್ಕೆ ಬರದೇ ಅನುಭವಿಸಿದ ಯಾತನೆ ಮತ್ತೆ ಮತ್ತೆ ಅವಿನಾಶನ ಕಣ್ಣೆದುರಿಗೆ ಹಾದು ಹೋಗುತ್ತದೆ. ಚಿಕ್ಕವನಿರುವಾಗ ಮಗ ಹಾದಿ ತಪ್ಪಬಾರದೆಂದು ಅವಿನಾಶನ ತಂದೆ ತೀರಾ ಕಠಿಣವಾಗಿ ವರ್ತಿಸುತ್ತಿದ್ದರು. ಒಮ್ಮೆ ಅವಿನಾಶನ ಸ್ನೇಹಿತರೆಲ್ಲ ಶಾಲೆಗೆ ಚಕ್ಕರ್ ಹಾಕಿ ಸುತ್ತಾಡಲು ಹೋಗಿದ್ದರು. ಅವಿನಾಶನೂ ಅದೇ ಗುಂಪಿನಲ್ಲಿರುವ ಹುಡುಗನಾದ್ದರಿಂದ ಅವನು ಹೋಗದಿದ್ದರೂ ಅವನೂ ಮಕ್ಕಳ ಜೊತೆ ಶಾಲೆಗೆ ಚಕ್ಕರ್ ಹಾಕಿ ಸುತ್ತಾಡಲು ಹೋಗಿದ್ದಾನೆಂದು ಅನುಮಾನಿಸಿ ಶಿಕ್ಷೆ ನೀಡಿದ್ದರು. ತಾನು ಚಿಕ್ಕೋನು ಎಂದೇ ತನ್ನನ್ನು ಹೀಗೆ ನಿಯಂತ್ರಣದಲ್ಲಿಡುತ್ತಾರೆ ಎಂದು ಭಾವಿಸಿದ್ದ ಅವಿನಾಶ ತಾನು ದೊಡ್ಡವನಾದ ಮೇಲೆ ಅಪ್ಪನನ್ನು ಕಂಟ್ರೋಲ್ ಮಾಡ್ತೇನೆ ಎನ್ನುವ ಮಾತು ಮತ್ತು ಅಪ್ಪನಿಗೆ ಪಾರ್ಶ್ವವಾಯುವಾಗಿ ಅವರು ಪೂರ್ತಿಯಾಗಿ ಇನ್ನೊಬ್ಬರ ಮೇಲೆ ಅವಲಂಭಿಸುವಂತಾದಾಗ ತಾನೀಗ ಅವರ ಮೇಲೆ ರೇಗಾಡಬಹುದು ಎಂದು ಯೋಚಿಸಿ ನಂತರ ತನ್ನ ಯೋಚನೆಗೆ ತಾನೇ ಹೇಸಿ ಅಪ್ಪನನ್ನು ಕಣ್ಣ ರೆಪ್ಪೆಯಂತೆ ನೋಡಿಕೊಂಡಿದ್ದ. ಹೀಗಾಗಿ

ಮೂರನೇ ಆಯಾಮ Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಜ್ಜನಮನೆಯೆನ್ನುವ ಜೀವನಪಾಠ….. ಅಜ್ಜ ನೆನಪಿಗೆ ಬಂದಾಗಲೆಲ್ಲ ಅಜ್ಜನಮನೆ ಎನ್ನುವ ಮಮತೆಯ ಮಲ್ಹಾರವೊಂದು ಮನಸ್ಸನ್ನೆಲ್ಲ ತುಂಬಿಕೊಳ್ಳುತ್ತದೆ. ಈ ಪ್ರೀತಿ-ಮಮಕಾರಗಳ ಮೂಲವನ್ನೊಮ್ಮೆ ಕೆದಕಿ ನೋಡಿ! ಅಜ್ಜಿಯ ಸೆರಗಿನಂಚಿನ ಪ್ರೀತಿಯ ಸೆಲೆಯೊಂದು, ಅಜ್ಜನ ಕಿರುಬೆರಳಿನ ಅಭಯವೊಂದು ನಾವಿಡುವ ಪ್ರತೀ ಹೆಜ್ಜೆಯನ್ನೂ ಸಲಹುತ್ತಿರುತ್ತದೆ. ಎಷ್ಟೇ ಆಧುನಿಕ ಜೀವನಶೈಲಿಯಾದರೂ, ಅಪಾರವಾದ ಸ್ನೇಹಬಳಗವಿದ್ದರೂ ಅಜ್ಜ-ಅಜ್ಜಿ ಎನ್ನುವ ಪ್ರೀತಿಯ ಬಲೆಯೊಂದರಲ್ಲಿ ಬದುಕಿನುದ್ದಕ್ಕೂ ಬಂದಿಯಾಗಿರುತ್ತೇವೆ; ಅಚ್ಚರಿಯೆಂದರೆ ಆ ಬಂಧನ ನಮಗೆಂದೂ ಹೊರೆಯೆನ್ನಿಸುವುದಿಲ್ಲ. ಅಜ್ಜನ ಕಥೆಯಲ್ಲಿ ಬರುವ ನೂರಾರು ಮೂಟೆಗಳ ಭತ್ತದ ದಾಸ್ತಾನನ್ನು ರಾತ್ರೋರಾತ್ರಿ ಖಾಲಿ ಮಾಡಿದ ಇರುವೆಗಳ ದಂಡು, ಅಜ್ಜಿ ತೋರಿಸಿದ ಕಾಕಣ್ಣ ಗುಬ್ಬಣ್ಣನ ಸ್ನೇಹಲೋಕ ಯಾವುದೂ ಕಟ್ಟುಕಥೆಯೆನ್ನಿಸದೇ ವಯಸ್ಸಿಗನುಗುಣವಾಗಿ ರೂಪ ಬದಲಾಯಿಸಿ ನಮ್ಮೊಳಗೆ ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಅಜ್ಜನ ಕಥೆಯಲ್ಲೊಬ್ಬ ರಾಜನಿದ್ದ. ಪ್ರಜೆಗಳಿಗೆಲ್ಲ ಪ್ರಿಯನಾಗಿದ್ದರೂ, ನೆರೆರಾಜ್ಯಗಳಿಗಿಂತ ಸುಭಿಕ್ಷವಾದ ರಾಜ್ಯ ತನ್ನದೆನ್ನುವ ಅಹಂಕಾರದಲ್ಲಿ ಮೆರೆಯುತ್ತಿದ್ದ. ಸಾಮಂತರಿಂದ ಕಪ್ಪಕಾಣಿಕೆಯಾಗಿ ಬಂದ ದವಸ-ಧಾನ್ಯಗಳ ಮೂಟೆಗಳನ್ನು ಗೋದಾಮುಗಳಲ್ಲಿ ಶೇಖರಿಸಿ, ಬರಗಾಲದ ಸಮಯದಲ್ಲೋ ಅಥವಾ ನೆರೆರಾಜ್ಯಗಳು ಸಹಾಯ ಕೋರಿ ಬಂದಾಗಲೋ ಸಮಯೋಚಿತವಾಗಿ ಉಪಯೋಗಿಸುತ್ತಿದ್ದ. ಗೋದಾಮುಗಳಿಗೆ ಕಾವಲುಗಾರರನ್ನು ನೇಮಿಸಿ, ತಾನೇ ಖುದ್ದಾಗಿ ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸುತ್ತಿದ್ದ. ಮೂರು ತಿಂಗಳಿಗೊಮ್ಮೆ ಆಸ್ಥಾನ ಪಂಡಿತರಿಂದ ದಾಸ್ತಾನಿನ ದಾಖಲೆಯನ್ನು ಪರಿಷ್ಕರಿಸಿ, ಶ್ರೀಮಂತಿಕೆಯ ಡಂಗುರ ಸಾರುತ್ತಿದ್ದ. ಕಪ್ಪ ಕೊಡಲಾಗದ ಸಾಮಂತರು, ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ರೈತರಿಗೆಲ್ಲ ರಾಜನ ಈ ಅಹಂಕಾರದ ಬಗ್ಗೆ ಅಸಮಾಧಾನವಿದ್ದರೂ, ಅಸಹಾಯಕತೆಯಿಂದ ಮೌನವಾಗಿ ಸಹಿಸುತ್ತಿದ್ದರು. ಒಮ್ಮೆ ಹೀಗೇ ಗೋದಾಮುಗಳ ಮೇಲ್ವಿಚಾರಣೆ ನಡೆಸುತ್ತಿದ್ದಾಗ ಚೀಲದಲ್ಲಿರುವ ಭತ್ತಗಳೆಲ್ಲ ಖಾಲಿಯಾಗುತ್ತಿರುವುದು ರಾಜನ ಗಮನಕ್ಕೆ ಬಂತು. ಕಾವಲುಗಾರರನ್ನು ಬದಲಿಸಿ ನೋಡಿದ; ಪ್ರಯೋಜನವಾಗಲಿಲ್ಲ. ದಿನಗಳು ಕಳೆದಂತೆ ಭತ್ತದ ಗೋದಾಮಿನಲ್ಲಿ ಖಾಲಿಚೀಲಗಳು ಮಾತ್ರ ಉಳಿದುಕೊಂಡವು. ಪರಿಹಾರವಿಲ್ಲದ ಈ ಸಮಸ್ಯೆ ರಾಜನಿಗೆ ಸವಾಲಾಗಿ ಪರಿಣಮಿಸಿತು. ಸೇನಾಧಿಪತಿ ತಾನೇ ಖುದ್ದಾಗಿ ಭತ್ತದ ಗೋದಾಮಿನ ಕಾವಲಿಗೆ ನಿಂತ. ಆದರೂ ಭತ್ತ ಮಾತ್ರ ಖಾಲಿಯಾಗುತ್ತಲೇ ಇತ್ತು. ಆಸ್ಥಾನ ಪುರೋಹಿತರನ್ನು ಕರೆಸಿ ಪೂಜೆ-ಪುನಸ್ಕಾರಗಳನ್ನು ಮಾಡಿಸಿದ. ಹೋಮ-ಹವನಗಳಿಂದಲೂ ಭತ್ತದ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ದಕ್ಷ ಹಾಗೂ ಬಲಿಷ್ಠನಾದ ತಾನು ಭತ್ತದ ಕಾಳಿನಿಂದ ಸೋಲನ್ನು ಅನುಭವಿಸಿದ ದುಃಖದಿಂದ ಅವಮಾನಿತನಾದ ರಾಜ, ಸಮಸ್ಯೆಗೆ ಪರಿಹಾರ ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿದ. ರಾಜ್ಯದ ಮೂಲೆಮೂಲೆಗಳಿಂದ ವಿದ್ವಾಂಸರು, ಪಂಡಿತೋತ್ತಮರೆಲ್ಲ ಬಂದು ಗೋದಾಮನ್ನು ಜಾಲಾಡಿದರೂ ಭತ್ತ ಕಾಣೆಯಾಗಲು ಕಾರಣ ಸಿಗದೇ ರಾಜ ಪರದಾಡುತ್ತಿರುವಾಗ ಬಡರೈತನೊಬ್ಬ ಅರಮನೆಗೆ ಬಂದ. ರಾತ್ರಿ ತಾನೇ ಗೋದಾಮನ್ನು ಕಾವಲು ಕಾಯುವುದಾಗಿ ಹೇಳಿದ. ಕತ್ತಲಾಗುತ್ತಿದ್ದಂತೆ ಇರುವೆಗಳ ದಂಡೊಂದು ರಾಜಾರೋಷವಾಗಿ ಗೋದಾಮಿನೊಳಗೆ ಪ್ರವೇಶ ಮಾಡಿ ಶಿಸ್ತಿನಿಂದ ಭತ್ತವನ್ನು ಸಾಗಿಸುತ್ತಿರುವುದು ರೈತನ ಕಣ್ಣಿಗೆ ಬಿತ್ತು. ಕತ್ತಿ-ಗುರಾಣಿಗಳಿಲ್ಲದ ಇರುವೆಗಳ ಸೈನ್ಯವೊಂದು ತನ್ನನ್ನು ಸೋಲಿಸಿದ ಪರಿಗೆ ರಾಜ ಬೆರಗಾದ; ತಲೆಗೇರಿದ್ದ ಅಹಂಕಾರದ ಮದ ಕಳಚಿಬಿತ್ತು. ಅಂದಿನಿಂದ ಬಡಜನರಿಂದ ಕಪ್ಪ ವಸೂಲಿ ಮಾಡುವುದನ್ನು ನಿಲ್ಲಿಸಿದ. ಹೀಗೇ ಅಜ್ಜನ ಕಥೆಯ ಇರುವೆ ಒಂದು ಪಾಠ ಕಲಿಸಿದರೆ, ಆಮೆ ಇನ್ನೊಂದು ನೀತಿಯನ್ನು ಬೋಧಿಸಿತು. ಬಾಲ್ಯದ ಮನರಂಜನೆಗೆ ಒದಗಿಬಂದ ಕಥೆಗಳೆಲ್ಲ ಬದುಕಿನುದ್ದಕ್ಕೂ ಜೊತೆಗೇ ನಿಂತು ಕಾಲಕಾಲಕ್ಕೆ ಅಗತ್ಯವಿರುವ ಪಾಠಗಳನ್ನೆಲ್ಲ ಕಲಿಸಿದವು. ಇರುವೆಯ ದಂಡೊಂದು ಭತ್ತದ ಗೋದಾಮನ್ನು ಖಾಲಿ ಮಾಡುವುದು ಸತ್ಯಕ್ಕೆ ದೂರವಾದರೂ, ಅಹಂಕಾರವೊಂದು ತಲೆಗೇರಿದ ಅರಿವಾದಾಗಲೆಲ್ಲ ರಾಜನ ಅಸಹಾಯಕತೆ ಎದುರು ಬಂದು ನಿಂತಂತಾಗುತ್ತದೆ. ಅಜ್ಜಿಯ ಕಥೆಯಲ್ಲೊಂದು ಹಳ್ಳಿಯಿತ್ತು. ಆ ಹಳ್ಳಿಯ ಜನರಷ್ಟೇ ಅಲ್ಲದೇ, ಪ್ರಾಣಿ-ಪಕ್ಷಿಗಳೂ ಸಹ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದವು. ಊರಿನ ಕೊನೆಯಲ್ಲೊಂದು ದೊಡ್ಡ ಕೆರೆಯಿತ್ತು. ಆ ಕೆರೆಯ ಪಕ್ಕ ಗುಬ್ಬಣ್ಣನ ಹುಲ್ಲಿನ ಮನೆಯೊಂದಿತ್ತು. ಕೆರೆಗೆ ಬಟ್ಟೆ ತೊಳೆಯಲು ಬರುತ್ತಿದ್ದ ಕಾಕಣ್ಣ ಗುಬ್ಬಣ್ಣನೊಂದಿಗೆ ಸ್ನೇಹ ಬೆಳೆಸಿತು. ಒಂದು ಮಧ್ಯಾಹ್ನದ ಹೊತ್ತು ಬಟ್ಟೆ ತೊಳೆಯಲು ಬಂದ ಕಾಕಣ್ಣ ಗುಬ್ಬಣ್ಣನನ್ನು ಮಾತನಾಡಿಸಲು ಮನೆಯೊಳಗೆ ಹೋದರೆ, ಗುಬ್ಬಣ್ಣ ಕಾಣಿಸಲಿಲ್ಲ. ಮೂಲೆಯಲ್ಲಿದ್ದ ಗೂಡಿನಲ್ಲಿ ಗುಬ್ಬಣ್ಣನ ಮೂರು ಮೊಟ್ಟೆಗಳು ನಿಶ್ಚಿಂತೆಯಿಂದ ಬೆಚ್ಚಗೆ ಕುಳಿತಿದ್ದವು. ಅವುಗಳನ್ನು ನೋಡಿದ್ದೇ ಕಾಕಣ್ಣನ ಬಾಯಲ್ಲಿ ನೀರೂರಿ, ಗುಬ್ಬಣ್ಣನೊಂದಿಗಿನ ತನ್ನ ಸ್ನೇಹವನ್ನು ಮರೆತು ಮೂರೂ ಮೊಟ್ಟೆಗಳನ್ನು ತಿಂದು ಮುಗಿಸಿತು. ಕೆರೆಗೆ ನೀರು ತರಲೆಂದು ಹೋಗಿದ್ದ ಗುಬ್ಬಣ್ಣ ಮನೆಗೆ ಬರುವಷ್ಟರಲ್ಲಿ ಮನೆಯಿಂದ ಹೊರಹೋಗುತ್ತಿದ್ದ ಕಾಕಣ್ಣನನ್ನು ನೋಡಿದ್ದೇ ಸಂದೇಹದಿಂದ ಒಳಗೆ ಹೋಗಿ ನೋಡಿದರೆ, ಮೊಟ್ಟೆಗಳೆಲ್ಲ ಕಾಣೆಯಾಗಿದ್ದವು. ಕಾಕಣ್ಣನ ಮೋಸದಿಂದ ನೊಂದ ಅಸಹಾಯಕ ಗುಬ್ಬಣ್ಣ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ದಿನಗಳನ್ನು ದೂಡುತ್ತಿತ್ತು. ಹೀಗಿರುವಾಗ ಮಳೆಗಾಲದ ಒಂದು ಸಂಜೆ ಕಾಕಣ್ಣ ತನ್ನ ಎರಡು ಮರಿಗಳೊಂದಿಗೆ ಆಶ್ರಯ ಕೋರಿ ಗುಬ್ಬಣ್ಣನ ಮನೆಗೆ ಬಂತು. ಸಗಣಿಮನೆಯಲ್ಲಿ ವಾಸಿಸುತ್ತಿದ್ದ ಕಾಕಣ್ಣನ ಮನೆ ಮಳೆಗೆ ಕರಗಿಹೋಗಿತ್ತು. ಕಾಕಣ್ಣನ ಅಸಹಾಯಕತೆಗೆ ಮರುಗಿ ಗುಬ್ಬಣ್ಣ ದ್ವೇಷ ಮರೆತು ಕಾಕಣ್ಣನನ್ನು ಕ್ಷಮಿಸಿ, ಕಾಕಣ್ಣನ ಮರಿಗಳನ್ನು ತನ್ನದೇ ಮರಿಗಳೆನ್ನುವ ಮಮಕಾರದಲ್ಲಿ ಕಾಪಾಡಿತು. ಕಾಕಣ್ಣ ಗುಬ್ಬಣ್ಣ ತಮ್ಮ ಸ್ನೇಹವನ್ನು ಮರಳಿ ಪಡೆದುಕೊಂಡು ಊರಿಗೊಂದು ಮಾದರಿಯಾದವು. ಹೀಗೇ ಪ್ರೀತಿ-ವಾತ್ಸಲ್ಯಗಳ ಕಥೆಗಳನ್ನು ಹೆಣೆಯುತ್ತ, ಸಹನೆ-ಸಾಮರಸ್ಯಗಳಿಂದ ಬದುಕನ್ನು ಹಸನಾಗಿಸಿಕೊಂಡ ಅಜ್ಜಿ ಕಲಿಸಿದ ಪಾಠಗಳನ್ನು ಕ್ಲಾಸ್ ರೂಮೊಂದು ಕಲಿಸಿಕೊಟ್ಟ ನೆನಪಿಲ್ಲ. ಉಪ್ಪಿನಕಾಯಿ ಆಸೆಗೆ ಮಾವಿನಹೋಳುಗಳಿಗೆ ಉಪ್ಪನ್ನು ಬೆರೆಸುವಾಗಲೆಲ್ಲ, ಆಸೆ-ಆಕಾಂಕ್ಷೆಗಳ ಹದ ತಪ್ಪದಂತೆ ಸಲಹುವ ಅಜ್ಜಿಯ ನೆನಪಿಗೆ ಶರಣಾಗುತ್ತೇನೆ. ಅಜ್ಜಿಗೆ ಮಾವಿನಮರಗಳೆಡೆಗೆ ಅಪಾರವಾದ ಪ್ರೇಮವಿತ್ತು. ಬೇಸಿಗೆರಜದ ಅಜ್ಜನಮನೆಯ ಮಾವಿನ ಸೀಸನ್ನೆಂದರೆ ನಮಗೆಲ್ಲ ಹಬ್ಬ. ಮನಸೋಇಚ್ಛೆ ಮಾವಿನಹಣ್ಣು ತಿನ್ನುತ್ತಿದ್ದ ನಾವೆಲ್ಲ ಗೊರಟೆಯನ್ನು ಬಿಸಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಅಜ್ಜಿಯದಾಗಿತ್ತು. ಸಂಜೆಯಾಗುತ್ತಿದ್ದಂತೆ ಮೊಮ್ಮಕ್ಕಳನ್ನೆಲ್ಲ ಸೇರಿಸಿಕೊಂಡು ವಾಕಿಂಗ್ ಹೊರಡುತ್ತಿದ್ದ ಅಜ್ಜಿ, ಗೊರಟೆಗಳನ್ನೆಲ್ಲ ಹಳೆಯ ಪೇಪರಿನಲ್ಲಿ ಸುತ್ತಿ ಎಲ್ಲರ ಕೈಗೂ ಕೊಡುತ್ತಿದ್ದಳು. ಅಂಗಳದಂಚಿಗೋ, ದಾರಿಯ ಬದಿಯಲ್ಲೋ, ಬೆಟ್ಟದ ಖಾಲಿ ಜಾಗದಲ್ಲೋ ಅಂಗೈಯಗಲದ ಚಿಕ್ಕಚಿಕ್ಕ ಗುಂಡಿಗಳನ್ನು ತೆಗೆದು ಒಂದೊಂದೇ ಗೊರಟೆಯನ್ನು ಅವುಗಳಲ್ಲಿ ಹಾಕಿ ಮಣ್ಣು ಮುಚ್ಚುತ್ತಿದ್ದೆವು. ಬೇಸಿಗೆ ಮುಗಿದು ಮಳೆ ಶುರುವಾದಂತೆಲ್ಲ ಗೊರಟೆಗಳೆಲ್ಲ ಜೀವ ಪಡೆದು ಚಿಗುರೊಡೆಯುತ್ತಿದ್ದವು. ಚಿಗುರಿದ ಗಿಡಗಳಿಗೆಲ್ಲ ಅಜ್ಜಿ ಗಿರಿಜೆಯೆಂತಲೋ, ಗಂಗೆಯೆಂತಲೋ ನಾಮಕರಣ ಮಾಡುತ್ತಿದ್ದಳು. ಹೀಗೇ ಗಿಡ-ಮರಗಳನ್ನೆಲ್ಲ ಹೆಣ್ಣಾಗಿ ಅರಳಿಸಿದ ಅಜ್ಜಿ ಪ್ರಕೃತಿಯನ್ನು ತಾಯಿಯಾಗಿ ಪೊರೆದವಳು. ಮೊದಲಮಳೆಗೆ ಜೀವತಳೆದ ಪ್ರತೀ ಚಿಗುರನ್ನೂ ಅಜ್ಜಿಯ ಸೆರಗೊಂದು ನೆರಳಾಗಿ ಕಾಯುತ್ತಿರಬಹುದು. ತನ್ನ ಮಮತೆಯ ನೆರಳಿನಲ್ಲಿ ಜೀವಕ್ಕೊಂದು ನೆಲೆ ಒದಗಿಸಿದ ಅಜ್ಜನಮನೆ ಕಲಿಸಿದ ಜೀವನ ಪಾಠಗಳೆಲ್ಲ ಇಂದಿಗೂ ಪ್ರಸ್ತುತ. ನೀತಿಕಥೆಗಳನ್ನು ಹೇಳುತ್ತಾ, ನೀತಿ ತಪ್ಪದೇ ಬದುಕಿದ ಅಜ್ಜ-ಅಜ್ಜಿ ಸಲಹಿದ ಮರಗಳ ಪೊಟ್ಟರೆಗಳಲ್ಲಿ ಇರುವೆಗಳ ಸೈನ್ಯವೊಂದು ಭತ್ತದ ರಾಶಿಯ ಮೇಲೆ ನಿಶ್ಚಿಂತೆಯಿಂದ ನಿದ್ರಿಸುತ್ತಿರಬಹುದು; ಪೊಟ್ಟರೆಯ ಸ್ವಲ್ಪ ಮೇಲೆ ಗುಬ್ಬಣ್ಣನ ಹುಲ್ಲಿನ ಬೆಚ್ಚನೆಯ ಮನೆಯೊಂದಿರಬಹುದು; ಮನೆಯೊಳಗೊಂದು ಪುಟ್ಟ ಗುಬ್ಬಣ್ಣ ರೆಕ್ಕೆ ಬಲಿಯುವ ಗಳಿಗೆಗಾಗಿ ಕಾಯುತ್ತಿರಬಹುದು. ಸಹನೆಯಿಂದ ಕಾದು, ಹದವಾಗಿ ಬಲಿತು ಈಗಷ್ಟೇ ನೆಲಕ್ಕುರುಳಿದ ಮಾವಿನಹಣ್ಣಿಗೆ ಅಜ್ಜಿಯ ಸೆರಗು ದೊರಕಿ ಗೊರಟೆಯೊಂದು ಗಿಡವಾಗಿ ಚಿಗುರುವಂತಾಗಲಿ. ಕಾಯುವ, ಚಿಗುರುವ ಪ್ರಕ್ರಿಯೆಗಳೆಲ್ಲವನ್ನೂ ಸಹನೆಯಿಂದ ಪೊರೆಯುವ ಅಜ್ಜನಮನೆಯ ಪ್ರೀತಿಯ ಅಲೆಯೊಂದು ಚಾಚಿರುವ ಅಂಗಾಲುಗಳನ್ನೆಲ್ಲ ಸ್ಪರ್ಶಿಸಿ ಹೃದಯದೆಡೆಗೆ ಹರಿಯುತ್ತಿರಲಿ. ******* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

You cannot copy content of this page

Scroll to Top