ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ತಲೆ ಮಾರಾಟಕ್ಕಿದೆ.. ಶೀಲಾಭಂಡಾರ್ಕರ್ ತಲೆ ಮಾರಾಟಕ್ಕಿದೆ ಕೊಳ್ಳವವರಿದ್ದಾರೆಯೇ? ಸಾಕಾಗಿದೆ ಈ ತಲೆನೋವು, ಜಂಜಾಟಗಳು. ಆಗಾಗ ತಲೆ ಬಿಸಿ ಯಾರಿಗಾದರೂ ಕೊಟ್ಟು ಹಾಯಾಗಿರೋಣ ಅನಿಸುತ್ತಿದೆ. ಒಂದು ನಿಮಿಷವೂ ತೆಪ್ಪಗಿರಲ್ಲ. ಸುಮ್ನೆ .. ಏನಾದರೂ ವಟಗುಟ್ಟದಿರೆ ಸಮಾಧಾನವಿಲ್ಲ. ಬೇಡದ ಕಸವೇ ತುಂಬಿಕೊಂಡಿದೆಯಲ್ಲ. ದುಡ್ಡು ಕೊಡಬೇಕಾಗಿಲ್ಲ ಹಾಗೇ ಸ್ವಲ್ಪ ದಿನದ ಮಟ್ಟಿಗಾದರೂ ತಿರುಗಾಡಿಸಿ ತಂದರೂ ಅಡ್ಡಿ ಇಲ್ಲ. ಆಹಾ…!!! ಎಷ್ಟು ಗಮ್ಮತ್ತು.. ಖಾಲಿ ತಲೆ ನೆನೆಸಿಕೊಂಡಾಗಲೇ ಏನೋ ಪುಳಕ.. ಹಗುರವಾಗಿ ತೇಲಾಡುವ ತವಕ. *******

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಕನ್ನಡಕವಿತೆ:ಸರಜೂ ಕಾಟ್ಕರ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನ್ಯಾಶನಲ್ ಹೈವೇಗುಂಟ ಹೋಗುತ್ತಿರುವಾಗ ನ್ಯಾಶನಲ್ ಹೈವೇಗುಂಟ ಹೋಗುತ್ತಿರುವಾಗ ಅಲ್ಲಿದ್ದ ಗಿಡಮರಗಳನ್ನು ನಿರ್ದಯವಾಗಿ ಕತ್ತರಿಸಿ ಹಾಕಿದ ರಾಕ್ಷಸರನ್ನು ನೆನೆನೆನೆದು ಸಿಟ್ಟಾಗುತ್ತೇನೆ. ಅಲ್ಲಿಯ ಬೋಳು ಮೈದಾನಗಳಲ್ಲಿ ತಮ್ಮ ಗೂಡುಗಳನ್ನು ಹುಡುಕುತ್ತಿರುವ ಸಾವಿರಾರು ಪಕ್ಷಿಗಳ ಆಕ್ರಂದನ ಕೇಳಿ ಕಂಗಾಲಾಗುತ್ತೇನೆ. ಎಲ್ಲಿ ಹೋಯಿತು ಈ ಗಿಡಗಳ ದಟ್ಟ ಹಸಿರು? ಗಿಡಗಳಿಗಿಂತಲೂ ಉದ್ದವಾಗಿ ಬೀಳುತ್ತಿದ್ದ ನೆರಳು? ವಿಧವಿಧ ಪಕ್ಷಿಗಳ ಕಲರವ? ಗಿಡಗಳ ಸಾಕ್ಷಿಯಲ್ಲಿ ನಡೆಯುತ್ತಿದ್ದ ಪ್ರೇಮದಾಟ? ಏನಾಗಿರಬಹುದು ಈ ಗಿಡಮರಗಳಿಗೆ- ಸತ್ತು ಭಸ್ಮವಾದವೇ ಈ ಮರಗಳು ಅಥವಾ ಯಾರದ್ದಾದರೂ ಮನೆಯಲ್ಲಿರಬಹುದೇ ಟೇಬಲ್, ಕುರ್ಚಿ, ಸೋಫಾಗಳಾಗಿ? ಏನಾದವು ನಮ್ಮ ಜೊತೆಗೆ ಓಡೋಡಿ ಬರುತ್ತಿದ್ದ ಈ ಗಿಡಗಳ ಟೊಂಗೆಗಳು? — ಎಲ್ಲ ನೆನಪಾಗಿ ಕಣ್ಣು ಕೊಳವಾಗುತ್ತದೆ ಆಗ ನನ್ನ ದೇಹದಲ್ಲಿಯೇ ಒಂದು ಗಿಡ ಹುಟ್ಟಿದಂತಾಗುತ್ತದೆ ಗಿಡ ಮರವಾಗಿ, ಮರ ವೃಕ್ಷವಾಗಿ, ವೃಕ್ಷ ಮಹಾ ವೃಕ್ಷವಾಗಿ ನನ್ನ ಕಣ್ಣಿಂದ, ಬಾಯಿಂದ, ಕಿವಿ, ಮೂಗಿನಿಂದ, ನನ್ನ ಸರ್ವಾಂಗಗಳಿಂದ ಒಂದೊಂದು ಟೊಂಗೆ ಹುಟ್ಟಿ ಪ್ರತಿ ಟೊಂಗೆಗಳು ಎಲೆಗಳಿಂದಾವರಿಸಿ ಹಣ್ಣು ತುಂಬಿ ತೊನೆದು ಭೂಮಿಯಲ್ಲಿ ಬೇರುಗಳಾಗಿ ಇಳಿದು ದೂರದಲ್ಲಿ ಭೃಮಿಷ್ಠರಂತೆ ಹಾರುತ್ತಿರುವ ಪಕ್ಷಿಗಳನ್ಪು ಕರೆದು ಈ ಸೀಮೆಯಿಂದ ಬೇರೆಡೆಗೆ ಜಾರುತ್ತಿರುವ ಕಪ್ಪು ಮೋಡವನ್ನು ಆಕರ್ಷಿಸಿ ಮತ್ತೆ ತನ್ನಲ್ಲಿ ಪ್ರತಿಷ್ಠಾಪಿಸಿದಂತಾಗುತ್ತದೆ ಹೀಗೆ ರಸ್ತೆ ತುಂಬ ಜನರೇ ಗಿಡಗಳಾಗಿ ಪ್ರತಿ ಗಿಡಕ್ಕೆ ಗಿಡ ಕಡಿದ ಪ್ರತಿ ರಾಕ್ಷಸರ ನೇಣು ಬಿಗಿದ ಶವಗಳು ನೇತಾಡುತ್ತಿರುವಂತೆ ಢಾಳಾಗಿ ಕಾಣಿಸುತ್ತದೆ. ******** While Traversing along the National High Way) While Traversing along the National high way I turn furious when I think of the Monsters who Mercilessly chopped off the woods I bewilder As I find the squawking of birds in search of their nests In the empty woods Where is it gone all these foliage and big shadow of these trees? sweet chirping of birds? the game of love behind the leaves of trees? What might have happened to these trees? Have they been burned to ashes? or they may be at someone’s house as table,chair, or sofa? What happened to the branches which were reaching out to us Remembering this, eyes turn into a pond Then I feel like, a seedling comes out from my body , grows itself seedling to sapling and then to immense tree. From my eyes, nose, mouth, ears and from my all organs grow boughs, fill with lush foliage and fruits. my roots branch out deep into the earth, call the deluded birds, flying afar and attract the heavy dark clouds slipping from border place Then again gets back to myself. Now, all the roads are full of people Who look like trees, every tree with the hanging of the dead bodies of the tree cutting demons It is a clear visible sight. *************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಕ್ಷುದ್ರ್ ಕೀ ಮಹಿಮಾ ಶಾಮ್ ನಂದನ್ ಕಿಶೋರ್ ಅನುವಾದಕರ ಟಿಪ್ಪಣಿ ಪದ್ಮಶ್ರಿ ಶ್ರೀ ಶಾಮ್ ನಂದನ್ ಕಿಶೋರ್ ಹಿಂದಿಯ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ಒಂದು ಕವಿತೆ “ಕ್ಷುದ್ರ್ ಕೀ ಮಹಿಮಾ” ಓದಲು ಸಿಕ್ಕಿತು. ಮೊದಲ ಓದಿಗೇನೂ ಹೆಚ್ಚು ಅರ್ಥವಾಗಲಿಲ್ಲ. ಆದರೂ ಕವಿ ಏನೋ ವಿಭಿನ್ನವಾದುದನ್ನು ಹೇಳಲು ಹೊರಟಿದ್ದಾರೆಂಬುದರ ಅರಿವಿತ್ತು. ಮತ್ತೆ ಮತ್ತೆ ಓದಿದಾಗ ಅರ್ಥ ಸ್ಪಷ್ಟವಾಗತೊಡಗಿತು. ಶಬ್ದಗಳೊಳ ಹೊಕ್ಕು ಕವಿಯ ಭಾವವನ್ನು ಅರಿಯಲು ಸಹಾಯ ಮಾಡಿದವಳು ಗೆಳತಿ ರೂಪಾ. ಅವಳು ಹಿಂದಿ ಭಾಷೆಯ ಅನುವಾದಿತ ಕೃತಿಗಳ ತುಲನಾತ್ಮಕ ಅಭ್ಯಾಸಗಳ ಮೇಲೆ ಸಂಶೋಧನೆಯನ್ನು ಮಾಡುತಿದ್ದಾಳೆ. ನಾವೆಲ್ಲರೂ ಶ್ರೇಷ್ಠವಾದುದನ್ನು, ಉನ್ನತವಾಗಿರುವುದನ್ನೇ ಬಯಸುತಿದ್ದರೆ, ಕವಿ ಶ್ಯಾಮ್ ನಂದನ್ ಕಿಶೋರ್ ಅವರು ಕ್ಷುದ್ರತೆಯ ಮಹಿಮೆಯನ್ನು ಸಾರುತಿದ್ದಾರೆ. ಅಪರಂಜಿಯಾಗೇನು ಉಪಯೋಗ? ಆಭರಣ ಬಂಗಾರವಾದರೆ ದೇವರ ಕಂಠೀಹಾರವಾದರೂ ಆಗುವ ಭಾಗ್ಯ ದೊರಕುತಿತ್ತು. ಅದೇ ರೀತಿ ಪ್ರತಿಯೊಂದು ವಿಷಯದಲ್ಲೂ ಕೊರತೆ ಇದ್ದಾಗಲೇ ಮತ್ತೆ ಅದನ್ನು ಯಥೇಚ್ಛವಾಗಿ ತುಂಬಿಕೊಳ್ಳುವ ಪ್ರಯತ್ನವಾದರೂ ನಡೆಯುತ್ತದೆ. ಪತನವಿಲ್ಲದೆ ಉತ್ಥಾನವೇ? ನನಗಂತೂ ಬಹಳ ಇಷ್ಟವಾಯಿತು ಈ ಕೃತಿ. ಶೀಲಾ ಭಂಡಾರ್ಕರ್ ಮುಖ್ಯ_ಅಮುಖ್ಯ. ಅಪರಂಜಿಯಾಗೇನುಪಯೋಗ, ನಿಗಿ ಕೆಂಡದೊಳು ಮಿಂದೆದ್ದ ಗಿನಿ ಬಂಗಾರದಿ ಕೊರೆದ ನಿನ್ನ ಕೊರಳಹಾರವಾಗದೇ..! ನಿಯಮಗಳಿಗೆ ಬಂಧಿಸಲ್ಪಟ್ಟ ಮಾನವ.. ಬಲ್ಲನೇನು..? ನಿಯಮಗಳ ಉಲ್ಲಂಘಿಸಿದ ನಂತರದ ಅವಮಾನವ. ಸದಾ ನಿನ್ನ ಸನಿಹದಲ್ಲಿದ್ದು ಅರಿಯಲು ಸಾಧ್ಯವೇ..? ನಿನ್ನ ಕರುಣೆಯ ನೆಳಲಿಗಾಗಿ ಅಲೆದಾಡುವ ಭಾಗ್ಯವ. ಪತನವಾಗಲೇ ಬೇಕಲ್ಲವೇ..! ಉತ್ಥಾನವಾಗಲು. ಇನ್ನೂ ಜನ್ಮಿಸದವಗೆ ಕಾಮನ ಬಿಲ್ಲಿನ ಬಣ್ಣದ ಜಗತ್ತಿನೊಡನೇನು ಸಂಬಂಧ.? ಸ್ವತಹ ನೋವುಣ್ಣದವನಿಂದ ಶಕ್ಯವೇ ಪರರ ದುಃಖಕ್ಕೆ ಸ್ಪಂದನ? ಸೃಷ್ಟಿಯ ಹೊರತು ಇನ್ಯಾರು ಸಮರ್ಥರು ಶೂನ್ಯವನ್ನೂ ಸಿಂಗರಿಸಲು? ತುಸುವಾದರೂ ಮೋಹವಿರಲೇಬೇಕು ಸ್ವಪ್ನ ಸಾಕಾರವಾಗಲು. ಅಭಾವವೆಂದರೆ ಭಾವದ ಕೊರತೆ. ವಿಕರ್ಷಣದಿಂದಲೇ ಪ್ರೀತಿಯ ಒರತೆ. ವಿರಹೀ ಉಪವನದಂತೆ ತೋರುವುದು ಕ್ಷಣ ಮಾತ್ರದ ಪ್ರವಾಸೀ ತಾಣವೂ. ಜಲಪಾತಗಳಿಂದ ಧುಮ್ಮಿಕ್ಕಿ ಸುರಿದ ನೀರೇ ಕಲ್ಲುಗಳ ಮೇಲೆ ಸಂಘರ್ಷದ ಕವಿತೆಗಳ ಬರೆಯುವುದು. ಸುಡುಬಿಸಿಲಿಗೆ ಆವಿಯಾದ ಹನಿಗಳೇ ತಾನೆ.. ಶ್ರಾವಣದಲ್ಲಿ ತಂಪಾಗಿ ಸುರಿಯುವುದು. ಜತೆಯಲಿದ್ದು ಅಸಾಧ್ಯ ಪೂರ್ಣ ಪರಿಚಿತರಾಗಲು. ತುಸು ದೂರ ಸರಿಯಲೇಬೇಕು ಪ್ರೀತಿ ಮಧುರವಾಗಲು. क्षुद्र की महिमा शुद्ध सोना क्यों बनाया, प्रभु, मुझे तुमने, कुछ मिलावट चाहिए गलहार होने के लिए।        जो मिला तुममें भला क्या        भिन्नता का स्वाद जाने,        जो नियम में बंध गया        वह क्या भला अपवाद जाने! जो रहा समकक्ष, करुणा की मिली कब छांह उसको कुछ गिरावट चाहिए, उद्धार होने के लिए।        जो अजन्मा है, उन्हें इस        इंद्रधनुषी विश्व से संबंध क्या!        जो न पीड़ा झेल पाये स्वयं,        दूसरों के लिए उनको द्वंद्व क्या! एक स्रष्टा शून्य को श्रृंगार सकता है मोह कुछ तो चाहिए, साकार होने के लिए!        क्या निदाघ नहीं प्रवासी बादलों से        खींच सावन धार लाता है!        निर्झरों के पत्थरों पर गीत लिक्खे        क्या नहीं फेनिल, मधुर संघर्ष गाता है! है अभाव जहाँ, वहीं है भाव दुर्लभ – कुछ विकर्षण चाहिए ही, प्यार होने के लिए!        वाद्य यंत्र न दृष्टि पथ, पर हो,        मधुर झंकार लगती और भी!        विरह के मधुवन सरीखे दीखते        हैं क्षणिक सहवास वाले ठौर भी! साथ रहने पर नहीं होती सही पहचान! चाहिए दूरी तनिक, अधिकार होने के लिए!

ಅನುವಾದ ಸಂಗಾತಿ Read Post »

You cannot copy content of this page

Scroll to Top