ಅಂಜಲಿ ಜ್ಯೋತಿ ಬಾಳಿಗ ಇಂಜಿನಿಯರಿಂಗ್ ಕೆಲಸದ ನಿಮಿತ್ತ ಅಮೇರಿಕಾಕ್ಕೆ ಹೋದ ಅಂಜಲಿ ‘ವೀಸಾ’ ರಿನಿವಲ್ ಗಾಗಿ ಮತ್ತೆ ಭಾರತಕ್ಕೆ ಬಂದಿದ್ದಳು. ಬೆಂಗಳೂರು ವಿಮಾನ ನಿಲ್ದಾಣದಿಂದ ಮೊದಲೇ ಕಾಯ್ದಿರಿಸಿದ ‘ಪಂಚತಾರಾ’ ಹೊಟೇಲ್ ಗೆ ಹೋಗಿ ಫ್ರೆಶ್ ಆಗಿ ತನ್ನ ಗೆಳತಿಯನ್ನು ಭೇಟಿ ಮಾಡಬೇಕೆಂದು ವೆರೆಂಡಾದ ಬಳಿ ಬಂದಾಗ ತನ್ನ ಗತ ಜೀವನದ ಭಾಗವಾಗಿರುವ ವ್ಯಕ್ತಿಯನ್ನು ಹೊಟೇಲ್ ನ ಪಾರ್ಕಿಂಗ್ ನಲ್ಲಿ ನೋಡಿದೊಡನೆ ಭಯದಿಂದ ಕಂಪಿಸತೊಡಗಿದಳು. ತಾನು ಯಾರನ್ನು ಜೀವನದುದ್ದಕ್ಕೂ ನೋಡಬಾರದು ಅಂದುಕೊಂಡಿದ್ದಳೋ ಆ ವ್ಯಕ್ತಿಯ ಆಗಮನವು,ಅವಳ ಬದುಕನ್ನು ಮತ್ತೊಮ್ಮೆ ಕತ್ತಲ ಕೂಪಕ್ಕೆ ತಳ್ಳಬಹುದೆಂಬ ಭಯ ಅಂಜಲಿಯ ಮೈ ಮನವನ್ನು ಆವರಿಸತೊಡಗಿತ್ತು. ಗೆಳತಿಯ ನೋಡಲೆಂದು ಹೊರಗೆ ಹೊರಟವಳು ಮನಕ್ಷೋಭೆಯಿಂದ ಹಾಗೆಯೇ ಹಿಂತಿರುಗಿ ಹೂದೋಟದಲ್ಲಿ ಹಾಕಿದ್ದ ಆರಾಮ ಆಸನದ ಮೇಲೆ ಕೂತು ಕಣ್ಣು ಮುಚ್ಚಿ ಮಲಗಿದಳು. ತಣ್ಣನೆಯ ಗಾಳಿಯ ಜೊತೆಗೆ ಪಟ ಪಟ ಎಂದು ಮಳೆಯ ಹನಿಗಳು ಮುಖಕ್ಕೆ ಬಡಿದರೂ ಅವಳು ಏಳದೇ ಕೂತಿರುವುದನ್ನು ನೋಡಿದ ಮ್ಯಾನೇಜರ್ ಒಳಗಿನಿಂದ ಕೊಡೆಯನ್ನು ತಂದು ಅಂಜಲಿ ಒದ್ದೆಯಾಗದಿರಲೆಂದು ತಲೆಯ ಮೇಲೆ ಹಿಡಿದ. ತನ್ನಿಂದ ಅವನಿಗೇಕೆ ತೊಂದರೆ ಎಂದು ಅಂಜಲಿ ಅವನ ಜೊತೆಯಲ್ಲಿ ಹೆಜ್ಜೆಗೆ ಹೆಜ್ಜೆ ಹಾಕಿದಳು. ಪನ್ನೀರಿನಂತೆ ಬೀಳುತ್ತಿದ್ದ ಮಳೆಯ ಹನಿಯ ಬಿಂದುಗಳು ತನ್ನ ಆಕಾರವನ್ನು ಹೆಚ್ಚಿಸುತ್ತಿದ್ದಂತೆ ಅಂಜಲಿ ಸಂಪೂರ್ಣವಾಗಿ ಒದ್ದೆಯಾಗುವುದನ್ನು ನೋಡಿದ ಮ್ಯಾನೇಜರ್ ರಾಜೀವ್ ಪಾಂಡೆ ವೆರಾಂಡದ ಕಡೆ ಓಡಿದ. ಅವನು ವೆರಾಂಡಕ್ಕೆ ತಲುಪಿದರೂ ಅವಳ ನಡಿಗೆಯ ವೇಗ ಹೆಚ್ಚಾಗಲಿಲ್ಲ. ಅವಳಿನ್ನೂ ವೆರಾಂಡ ತಲುಪಲು ತುಂಬಾ ದೂರದಲ್ಲೇ ಇದ್ದಳು.ಗಾಳಿ ಮಳೆಯ ಜೊತೆಗೆ ಸಿಡಿಲಿನ ಬೆಳಕಿಗೆ ಅಂಜಲಿಯ ಮನದಲ್ಲಿ ನಡೆಯುತ್ತಿದ್ದ ಸಂಘರ್ಷದಿಂದ ದುಃಖ ಉಮ್ಮಳಿಸಿ ಬಂದ ಕಣ್ಣೀರು ಮಳೆ ಹನಿಯ ಜೊತೆಗೆ ಮಿಲನವಾದದ್ದು ರಾಜೀವನ ಕಣ್ಣಿಗೆ ಕಾಣಿಸಿತು. ಅಂಜಲಿ ಕೋಣೆಯೊಳಗೆ ಬಂದವಳೇ ಒದ್ದೆಯಾಗಿದ್ದರೂ ಹಾಗೆಯೇ ಹಾಸಿಗೆಯ ಮೇಲೆ ಬಿದ್ದಳು. ಕಣ್ಣೀರು ಒಂದೊಂದೇ ಹನಿ ಹನಿಯಾಗಿ ಬೀಳುವಾಗ ಅವಳ ಜೀವನದಲ್ಲಿ ನಡೆದ ಘಟನೆಗಳು ಒಂದೊಂದರಂತೆ ಕಾಡಲು ಶುರುವಾಯಿತು. ****************************************************ವೇಣುಗೋಪಾಲರಾಯರು ಹಾಗೂ ಸುನಂದಿ ದಂಪತಿಯ ಏಕಮಾತ್ರ ಪುತ್ರಿಯೇ ಅಂಜಲಿ.ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ನಗು ಮುಖದಿಂದ ಸ್ವೀಕರಿಸುವ ಅಪ್ಪನೇ ಅವಳಿಗೆ ಸ್ಪೂರ್ತಿ. ಅಪ್ಪ ತಂದ ದುಡಿಮೆಯಲ್ಲಿ ಅಚ್ಚುಕಟ್ಟಾಗಿ ಸಂಸಾರ ನಿರ್ವಹಿಸುವ ಅಮ್ಮನೆಂದರೆ ಅಂಜಲಿಗೆ ಅಪಾರ ಪ್ರೀತಿ. ತನ್ನ ಓದಿಗಾಗಿ ಹಗಲು ರಾತ್ರಿ ಕಷ್ಟಪಡುತಿರುವ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ತನ್ನ ಮನಸ್ಸನ್ನು ಸಂಪೂರ್ಣವಾಗಿ ಓದಿನೆಡೆಗೆ ಕೇಂದ್ರಿಕರಿಸಿದ್ದಳು.ತಂದೆಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಖರ್ಚನ್ನು ನಿಭಾಯಿಸುವ ಶಕ್ತಿ ಇಲ್ಲವೆಂದು ತಿಳಿದ ಅಂಜಲಿ ಮೆರಿಟ್ ಸೀಟ್ ಪಡೆದರೆ ಉಚಿತವಾಗಿ ಕಾಲೇಜಿನಲ್ಲಿ ಅಡ್ಮಿಷನ್ ಸಿಗುತ್ತದೆ ಜೊತೆ ಜೊತೆಗೆ ಸ್ಕಾಲರ್ಶಿಪ್ ನಿಂದ ಬರುವ ಹಣವನ್ನು ಹಾಸ್ಟೆಲ್ ವಾಸಕ್ಕೆ ಉಪಯೋಗಿಸುವ ಯೋಚನೆಯನ್ನು ಮಾಡಿ ಕಷ್ಟಪಟ್ಟು ಓದಿ ಸಿಯಿಟಿ ಯಲ್ಲಿ ರ್ಯಾಂಕ್ ಪಡೆದು ತನ್ನ ಕನಸು ನನಸು ಮಾಡುವತ್ತ ಹೆಜ್ಜೆ ಇಟ್ಟಳು. ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕೆಂದು ತಿಳಿದ ಅಂಜಲಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೇಲೂ ಅಳೆದು ತೂಗಿ ತನ್ನ ಹಣವನ್ನು ಖರ್ಚು ಮಾಡುತ್ತಿದ್ದಳು. ಅಂಜಲಿಯ ಕಷ್ಟ ಅರಿತ ಗೆಳತಿಯರು ಅವಳ ಮನಸ್ಸಿಗೆ ನೋವಾಗದಂತೆ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು.ಹಾಸ್ಟೆಲ್, ಲೈಬ್ರರಿ ಬಿಟ್ಟರೆ ಬೇರೆ ಯಾವುದೇ ವಿಷಯದ ಕಡೆ ಗಮನ ಕೊಡದ ಅಂಜಲಿ ಮೊದಲ ವರ್ಷ ಇಂಜಿನಿಯರಿಂಗ್ ನಲ್ಲಿ ತರಗತಿಗೆ ಪ್ರಥಮ ಸ್ಥಾನ ಪಡೆದಳು. ರಜೆಯಲ್ಲಿ ಮನೆಗೆ ಹೋಗಿ ಅಮ್ಮ ತಯಾರಿಸಿದ ರುಚಿಯಾದ ಊಟ ಮಾಡಿ ಅಪ್ಪನ ಹಿತವಾದ ಪ್ರೀತಿಯನ್ನು ಸವಿಯುತ್ತಿದ್ದ ಅಂಜಲಿಗೆ ದಿನಗಳು ಓಡುತ್ತಿದ್ದದ್ದೆ ತಿಳಿಯಲಿಲ್ಲ. ಇನ್ನೇನೂ ಒಂದು ವರ್ಷದ ಇಂಜಿನಿಯರಿಂಗ್ ಕೋರ್ಸ್ ಬಾಕಿ ಇರುವ ಹೊತ್ತಿಗೆ ಅಂಜಲಿಯ ಸಹಪಾಠಿಯಾದ ಪ್ರಮೋದ ಅವಳ ಬಳಿ ಬಂದು ಪ್ರೇಮಭಿಕ್ಷೆ ಕೇಳಿದ.“ನನಗೆ ಈ ಪ್ರೀತಿ ಪ್ರೇಮದಲ್ಲಿ ವಿಶ್ವಾಸವಿಲ್ಲ ಪ್ರಮೋದ್. ಓದು ಮುಗಿದ ಮೇಲೆ ನನಗೆ ನನ್ನದೇ ಕೆಲವು ಗುರಿಗಳು ಇವೆ. ಕೆಲಸಕ್ಕೆ ಸೇರಬೇಕು, ಇಷ್ಟು ವರ್ಷ ಬಾಡಿಗೆ ಮನೆಯ ಸಹವಾಸ ಸಾಕಾಗಿದೆ. ಅಪ್ಪ ಅಮ್ಮನಿಗಾಗಿ ಪುಟ್ಟ ಮನೆಯನ್ನು ಖರೀದಿಸಬೇಕು. ಸ್ವಲ್ಪ ಸಮಯ ಅವರ ಜೊತೆಯಲ್ಲಿ ಕಳೆಯಬೇಕು.ಅಪ್ಪ ಅಮ್ಮ ಇಷ್ಟಪಟ್ಟ ಹುಡುಗನ ಗುಣ ಸ್ವಭಾವ ಇಷ್ಟವಾದರೆ ಅವನ ಜೊತೆಯಲ್ಲಿ ಮದುವೆಯಾಗುವುದು..” ಎಂದು ಹೇಳಿ ಅವನಿಗೆ ಸಮಾಧಾನ ಮಾಡಿ ಕಳುಹಿಸಿದಳು. ಅಂಜಲಿಯ ತಿರಸ್ಕಾರ ಪ್ರಮೋದ್ ಗೆ ಬೇಸರವಾದರೂ ಅವಳ ಬೆನ್ನು ಬಿಡದ ಬೇತಾಳದಂತೆ ಹಿಂದೆ ಸುತ್ತಲೂ ಶುರುಮಾಡಿದ. ಅವನ ವರ್ತನೆಯಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದೆಂದು ಅರಿತ ಅಂಜಲಿ ಪ್ರಾಂಶುಪಾಲರಿಗೆ ದೂರು ಕೊಡುವೆ ಎಂದು ಪ್ರಮೋದನಿಗೆ ಹೆದರಿಸಿದಳು. ಓದು ಬಿಟ್ಟು ಬೇರೆ ಯಾವುದೇ ವಿಷಯಕ್ಕೂ ತಲೆ ಹಾಕದೇ ಇರುತ್ತಿದ್ದ ಅಂಜಲಿಯ ಹಠದ ಸ್ವಭಾವವನ್ನು ಇಷ್ಟು ವರ್ಷದಿಂದ ನೋಡಿದ್ದ ಪ್ರಮೋದ್ ಗೆ ಅವಳು ನಿಜವಾಗಿಯೂ ಪ್ರಾಂಶುಪಾಲರಿಗೆ ದೂರು ಕೊಟ್ಟರೆ ತನ್ನ ವಿದ್ಯಾರ್ಥಿ ಜೀವನಕ್ಕೆ ಕಪ್ಪು ಚುಕ್ಕೆ ಬೀಳುವುದು ಖಚಿತವೆಂದು ತಿಳಿದು ಅಂಜಲಿಯ ವಿಷಯಕ್ಕೆ ಹೋಗುವುದನ್ನು ಕಡಿಮೆ ಮಾಡಿ ಸುಮ್ಮನಾಗುತ್ತಾನೆ. ಸಮಯ ಯಾರಿಗೂ ಕಾಯದೇ ಓಡುತ್ತಿತ್ತು. ವಿದ್ಯಾರ್ಥಿಗಳೆಲ್ಲಾ ಇನ್ನೇನೂ ತಾವು ‘ಇಂಜಿನಿಯರ್’ ಆದೆವು ಎಂಬ ಖುಷಿಯಿಂದ ಅಂತಿಮ ಪರೀಕ್ಷೆಗಾಗಿ ಹಗಲು ರಾತ್ರಿ ಓದಿ ಪರೀಕ್ಷೆಯನ್ನು ಬರೆದಿದ್ದರು.ವಿದ್ಯಾರ್ಥಿ ಜೀವನದ ಕೊನೆಯ ದಿನವನ್ನು ಮರೆಯದಂತೆ ಕಳೆಯಬೇಕೆಂದು ಯೋಚಿಸಿದ ಎಲ್ಲರೂ ಸೇರಿ ಪಾರ್ಟಿ ಮಾಡುತ್ತಾರೆ.ಔತಣ ಕೂಟ ಮುಗಿಸಿದ ವಿದ್ಯಾರ್ಥಿಗಳು ಸಂಜೆಯ ಹೊತ್ತಿಗೆ ಊರಿಗೆ ಹೋಗಲಿರುವುದೆಂದು ಹಾಸ್ಟೆಲ್ ನಿಂದ ಲಗೇಜು ಹಿಡಿದು ತಮ್ಮ ತಮ್ಮ ಮನೆಗೆ ಹೋಗಲು ಬಸ್ಸು ನಿಲ್ದಾಣಕ್ಕೆ ಬರುತ್ತಾರೆ. ಒಬ್ಬೊಬ್ಬರೇ ಅವರ ಊರಿನ ಬಸ್ಸು ಬಂದಾಗ ಉಳಿದವರಿಗೆ ‘ಬಾಯ್’ ಎಂದು ಹೇಳಿ ಬಸ್ಸು ಹತ್ತಿ ಹೋದರು. ಸುಮಾರು ಎಂಟು ಗಂಟೆ ಕಳೆದರೂ ತನ್ನ ಊರಿಗೆ ಹೋಗುವ ಬಸ್ಸು ಬಾರದೇ ಮುಂದೇನೂ ಮಾಡುವುದೆಂದು ತೋಚದೇ ನಿಂತಿದ್ದ ಅಂಜಲಿ ಪರಿಚಿತ ಧ್ವನಿಯೊಂದು ಕೇಳಿ ಗೆಲುವಾಗುತ್ತಾಳೆ. ತನ್ನ ಗೆಳೆಯರನ್ನು ಬಸ್ಸು ಹತ್ತಿಸಲು ಬಂದಿದ್ದ ಪ್ರಮೋದ್ , ಅಂಜಲಿಯನ್ನು ಕಂಡು ಒಬ್ಬಳೇ ನಿಂತಿರುವ ಬಗ್ಗೆ ಕೇಳುತ್ತಾನೆ. ಬಸ್ಸು ಬಾರದಿರುವ ಕಾರಣದಿಂದ ಇಲ್ಲಿ ನಿಂತಿರುವುದು ಎಂದು ಅಂಜಲಿ ಹೇಳಿದಾಗ “ಈ ಹೊತ್ತಿನಲ್ಲಿ ನೀನು ಒಬ್ಬಳೇ ಇಲ್ಲಿ ನಿಲ್ಲುವುದು ಬೇಡಾ, ನಾನು ನಿನ್ನನ್ನು ಮನೆಗೆ ತಲುಪಿಸುತ್ತೇನೆ..” ಎಂದು ಪ್ರಮೋದ್ ಹೇಳುತ್ತಾನೆ. ಅಂಜಲಿ ಬೇಡವೆಂದು ಹೇಳಿದರೂ ಕೇಳದೆ ಅವಳ ಲಗೇಜುಗಳನ್ನು ಕಾರಿನ ಡಿಕ್ಕಿಯಲ್ಲಿರಿಸಿ ಕಾರಿನ ಡೋರ್ ತೆಗೆದು ನಿಲ್ಲುತ್ತಾನೆ. ಪರಿಚಯವಿರದವರ ಜೊತೆಗೆ ನಿಲ್ಲುವ ಬದಲು ಪರಿಚಯದವನ ಜೊತೆಯಲ್ಲಿ ಮನೆಗೆ ತಲುಪುದು ಕ್ಷೇಮವೆಂದು ಅಂಜಲಿ ಕಾರಿನೊಳಗೆ ಕೂತುಕೊಳ್ಳುತ್ತಾಳೆ. ಅಂಜಲಿಯ ಊರು ತಲುಪಲು ಏಳು ಗಂಟೆಯ ಪ್ರಯಾಣವಿರುವುದರಿಂದ ಪ್ರಮೋದ್ ಅರ್ಧದಾರಿಯಲ್ಲಿ ಊಟ ಮಾಡಲು ಕಾರು ನಿಲ್ಲಿಸುತ್ತಾನೆ. ಹಳೆಯ ಕಹಿನೆನಪುಗಳನ್ನು ಮರೆತ ಇಬ್ಬರೂ ನಗು ನಗುತ್ತಾ ಊಟ ಮುಗಿಸಿ ಕಾರನ್ನು ಏರುತ್ತಾರೆ. ಪಾರ್ಟಿಯಲ್ಲಿ ಕುಣಿದು ಸುಸ್ತಾಗಿದ್ದ ಅಂಜಲಿ ಚಳಿಗೆ ಮುದುಡಿ ಕಾರಿನಲ್ಲೇ ಮಲಗಿರುವಾಗ ಪ್ರಮೋದ್ ಗೆ ಕೆಟ್ಟ ವಿಚಾರ ಮನದಲ್ಲಿ ಸುಳಿಯುತ್ತದೆ. ಪ್ರಮೋದ್ ಗೆ ತಾನು ಮಾಡುವುದು ತಪ್ಪು ಎಂದು ತಿಳಿದಿದ್ದರೂ ವಯಸ್ಸಿನ ಕಾಮನೆಯನ್ನು ತಡೆದುಕೊಳ್ಳಲಾಗದೇ ಜನಸಂಚಾರವಿಲ್ಲದ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸುತ್ತಾನೆ. ನಿದ್ದೆಯ ಮಂಪರಿನಲ್ಲಿದ್ದ ಅಂಜಲಿ ಊರು ಬಂತಾ? ಎಂದು ಕೇಳುವಾಗ ಬರ್ಹಿದೆಸೆಗಾಗಿ ಎಂದು ಸುಳ್ಳು ಹೇಳುತ್ತಾನೆ. ತನ್ನ ಪ್ರೀತಿಯನ್ನು ತಿರಸ್ಕರಿಸಿದ ಅಂಜಲಿಯ ಜೀವನ ಹಾಳು ಮಾಡಲು ಇದೇ ಸರಿಯಾದ ಸಮಯವೆಂದು ಯೋಚಿಸಿದ ಪ್ರಮೋದ್ ಹಸಿದ ವ್ಯಾಘ್ರದಂತೆ ಅವಳ ದೇಹವನ್ನು ಆಕ್ರಮಿಸುತ್ತಾನೆ. ಎದೆಯ ಮೇಲೆಲ್ಲಾ ಕಚ್ಚಿ ರಕ್ತ ಸೋರುತ್ತಿದ್ದರೂ ತನ್ನ ಪೈಶಾಚಿಕ ಕೃತ್ಯವನ್ನು ಮುಂದುವರಿಸುತ್ತಾನೆ. ಎಷ್ಟು ಚೀರಾಡಿದರೂ ತನ್ನನ್ನು ರಕ್ಷಿಸಲು ಯಾರು ಬರಲಾರರು ಎಂದು ಅಂಜಲಿಗೆ ಅರಿವಾದಾಗ ಸೋತು ಕಣ್ಣೀರು ಹಾಕುತ್ತಾಳೆ. ತನ್ನ ಕೆಲಸ ಮುಗಿಸಿದ ಪ್ರಮೋದ್ ಅವಳ ಕುತ್ತಿಗೆಯನ್ನು ಹಿಸುಕಿ ಸತ್ತು ಹೋದಳೆಂದು ತಿಳಿದು ಅಲ್ಲೇ ಬಿಟ್ಟು ಹೋಗುತ್ತಾನೆ. ಅಂಜಲಿಯ ದೈವಬಲ ಚೆನ್ನಾಗಿತ್ತೋ, ಅಥವಾ ಪ್ರಮೋದ್ ಗ್ರಹಚಾರ ಕೆಟ್ಟಿತ್ತೋ, ಅಂಜಲಿ ಸಾಯದೇ ಬದುಕಿರುತ್ತಾಳೆ. ಮುಂಜಾನೆಯ ಹೊತ್ತು ಪ್ರಜ್ಞೆ ಬಂದ ಅಂಜಲಿ ತನ್ನ ಇರುವಿಕೆಯನ್ನು ತಿಳಿಸಲು ಕಿರುಚಾಡುತ್ತಾಳೆ. ಆ ದಾರಿಯಲ್ಲಿ ಬರುತ್ತಿದ್ದ ಲಾರಿಯವರು ಕಿರುಚಾಟ ಕೇಳಿ ಗಾಡಿ ನಿಲ್ಲಿಸಿ ನೋವಿನಿಂದ ಒದ್ದಾಡುತಿರುವ ಅಂಜಲಿಯನ್ನು ಲಾರಿಯಲ್ಲಿ ಹಾಕಿ ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆಯಿಂದ ಅವಳ ಮನೆಗೆ ವಿಷಯ ತಿಳಿಸಿದಾಗ ಅಳುತ್ತಾ ರಾಯರು ಹಾಗೂ ಅವರ ಪತ್ನಿ ಬರುತ್ತಾರೆ. ಹದಿನೈದು ದಿನ ಸಾವು ಬದುಕಿನೊಂದಿಗೆ ಹೋರಾಡಿದ ಅಂಜಲಿ ಕೊನೆಗೂ ಬದುಕಿ ಉಳಿಯುತ್ತಾಳೆ. ವೇಣುಗೋಪಾಲರಾಯರು ಅಂಜಲಿಯನ್ನು ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಅತ್ಯಾಚಾರದ ಕೇಸು ಆಗಿರುವುದರಿಂದ ಅಂಜಲಿ ನ್ಯಾಯಲಯದ ಮೆಟ್ಟಿಲು ಹತ್ತಬೇಕಾಗುತ್ತದೆ. ವಿಚಾರಣೆಗಾಗಿ ಅವಳು ಠಾಣೆಗೆ ಹೋಗಿ ಬರುವುದರಿಂದ ಅವಳಿಗೆ ಅತ್ಯಾಚಾರವಾದ ವಿಷಯದ ಹೊರಬೀಳುತ್ತದೆ.ಈ ಸುದ್ದಿಯನ್ನು ಯಾರೋ ಹಬ್ಬಿಸಿದ್ದರಿಂದ ಮಾಧ್ಯಮದವರು ಇವಳ ಬಗ್ಗೆ ಮಾಹಿತಿಯನ್ನು ಕೇಳಲು ಒಬ್ಬೊಬ್ಬರಾಗಿ ಸೇರುತ್ತಾರೆ. ತಮ್ಮ ಮಗಳಂತೆ ಅಂಜಲಿ ಎಂಬ ಅಕ್ಕರೆಯು ತೊರದೇ, ಅವಳ ಸಾಧನೆಯ ಬಗ್ಗೆ ಅಸಮಾಧಾನವನ್ನು ಹೊಂದಿದವರು ಕೆಟ್ಟಕೆಟ್ಟದಾಗಿ ಮಾಧ್ಯಮದವರ ಬಳಿ ಹೇಳಿದಾಗ ಇದನ್ನೇ ದಾಳವಾಗಿ ಉಪಯೋಗಿಸಿದ ಪ್ರಮೋದ್ ಕೇಸ್ ಗೆಲ್ಲುತ್ತಾನೆ. ನ್ಯಾಯ ದೊರಕದೇ ಅಂಜಲಿಯ ಜೊತೆಗೆ ಹೆತ್ತವರು ಕುಸಿಯುತ್ತಾರೆ. ಸಮಾಜದಲ್ಲಿ ತಮ್ಮ ಗೌರವ ಹಾಳಾಯಿತು, ಇನ್ನೂ ಬದುಕಲು ಸಾಧ್ಯವಿಲ್ಲವೆಂದು ಮೂವರು ಸೇರಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ವಿಧಿನಿಯಮವೋ, ದೇವರ ಇಚ್ಛೆಯೋ ಹೆತ್ತವರ ಕಳೆದುಕೊಂಡ ಅಂಜಲಿ ಮತ್ತೊಮ್ಮೆ ಸಾವು ಬದುಕಿನೊಡನೆ ಹೋರಾಡಿ ಬದುಕುತ್ತಾಳೆ. ಇಂಜಿನಿಯರಿಂಗ್ ನಲ್ಲಿ ಅಂಜಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಷಯ ತಿಳಿದು ಶುಭಕೋರಲು ‘ರೀನಾ’ ಪೋನ್ ಕರೆ ಮಾಡಿದಾಗ ತಾನು ಅನುಭವಿಸಿದ ನೋವು, ಹೆತ್ತವರ ಸಾವು ಎಲ್ಲವನ್ನೂ ಅಂಜಲಿ ರೀನಾಳಿಗೆ ತಿಳಿಸುತ್ತಾಳೆ. ಅಂಜಲಿಯ ಪರಿಸ್ಥಿತಿಗೆ ನೊಂದ ರೀನಾ ಆಸ್ಪತ್ರೆಗೆ ಬಂದು ಅವಳನ್ನು ಕರೆದುಕೊಂಡು ತನ್ನ ಊರಿಗೆ ಹೋಗುತ್ತಾಳೆ.“ಇನ್ನೂ ಚಿಕ್ಕ ವಯಸ್ಸು ನಿನ್ನದು, ಕಹಿ ಘಟನೆಯನ್ನು ಮರೆತು ಬದುಕುವುದನ್ನು ಕಲಿ ” ಎಂದು ಅವಳಿಗೆ ಬುದ್ದಿ ಹೇಳಿ ಕೆಲಸಕ್ಕೆ ಸೇರಲು ಒತ್ತಾಯಿಸುತ್ತಾಳೆ. ಎಲ್ಲವನ್ನೂ ಮರೆತು ದೂರದ ದಿಲ್ಲಿಯಲ್ಲಿ ನೆಲೆನಿಂತ ಅಂಜಲಿ ತಾನು ಕಲಿತ ವಿದ್ಯೆಗೆ ಸರಿಹೊಂದುವಂತ ಕೆಲಸವನ್ನು ಹುಡುಕಿ ಜೀವನ ನಡೆಸುತ್ತಾಳೆ. ****************************************************ಹಳೆಯ ನೆನಪಿನಿಂದ ಎಚ್ಚೆತ್ತು ಬೆವರಿನಿಂದ ಮುದ್ದೆಯಾದ ಅಂಜಲಿ ಗಟಗಟನೆ ಬಾಟಲ್ ನಿಂದ ನೀರು ಕುಡಿದಳು. ದೇಹ ಹಾಗೂ ಮನಸ್ಸು ಸಹಜ ಸ್ಥಿತಿಗೆ ಮರಳಿದಾಗ ಪ್ರಮೋದ್ ಗೊಂದು ಗತಿ ಕಾಣಿಸಬೇಕೆಂದು ಅವನ ಚಲನವಲನ ಗಮನಿಸಿದಳು. ತನ್ನ ಮುಖ ಪರಿಚಯ ತಿಳಿಯಬಾರದೆಂದು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಹೋಟೆಲ್ ನ ಒಬ್ಬ ಸರ್ವೆಂಟ್ ‘ಗೆ ಹಣದ ರುಚಿ ತೋರಿಸಿ ಪ್ರಮೋದ್ ನ ಬಗ್ಗೆ ಸಂಪೂರ್ಣ ವಿಷಯ ಕಲೆ ಹಾಕಿದಳು. ಅವನು, “ಪ್ರಮೋದ್ ಇಲ್ಲಿಯ ಖಾಯಂ ಕಸ್ಟಮರ್ .ತಾನು ಮದುವೆಯಾಗುವ ಹುಡುಗಿಯ ಪರಿಚಯಮಾಡಿಕೊಳ್ಳಲು ಬಂದಿದ್ದಾನೆ” ಎಂದು ಹೇಳಿದಾಗ ಅಂಜಲಿಗೆ ಕೋಪದ ಜೊತೆಗೆ ಆ ಹುಡುಗಿಯ ಬಗ್ಗೆ ಮರುಕವಾಗುತ್ತದೆ. ನನ್ನಂತೆ ಮತ್ತೊಂದು ಹೆಣ್ಣಿನ ಬಾಳು ಹಾಳಾಗುವುದು ಬೇಡವೆಂದು ಯೋಚಿಸಿ ಪ್ರಮೋದ್ ನಂತಹ ಕ್ರಿಮಿಗಳನ್ನು ಹೊಸಕಿ ಹಾಕಲು ನಿರ್ಧಾರ ಮಾಡುತ್ತಾಳೆ. ಸರ್ವೆಂಟ್ ಸಹಾಯದಿಂದ ಬಾಡಿಗೆ ಹಂತಕರ ಪರಿಚಯ ಮಾಡಿಕೊಂಡ ಅಂಜಲಿ, ಪ್ರಮೋದ್ ನ ಕೈಕಾಲು ಮುರಿಸುವುದಷ್ಟೇ ಅಲ್ಲದೇ ಅವನ ಪುರುಷತ್ವವನ್ನು ನಾಶ ಪಡಿಸಲು ಹಂತಕರಿಗೆ ಹೇಳುತ್ತಾಳೆ. ವಿಷಯ ಹೊರಬಾರದಂತೆ ಇಬ್ಬರಿಗೂ ಕೈ ತುಂಬಾ ಹಣಕೊಡುತ್ತಾಳೆ. ಪ್ರಮೋದ್ ಗೆ ಗತಿ ಕಾಣಿಸಿದ ಮಾಹಿತಿಯನ್ನು ಪಡೆದ