ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಅಮುಕ್ತ ಅಮೃತಮತಿ ಲಕ್ಷ್ಮೀ ಪಾಟೀಲ ಅಂಗ ಸೌಷ್ಠವದ ಬಾಹ್ಯ ಸೌಂದರ್ಯ ರಾಜ ವರ್ಚಸ್ಸು ವಜ್ರ ವೈಡೂರ್ಯ ಭೋಗ ಭಾಗ್ಯಗಳ ನಿವಾಳಿಸಿ ಅಂತರಂಗ ಬೇಟಕೆ ಮನವ ಬೀಳಿಸಿ ಬಿಗಿ ಮೌನ ಮುರಿದು ಮಾತಾಗಲು ನಡೆದೆ ಪಂಜರದ ಅರಗಿಳಿಗೆ ಮಾತು ಕಲಿಸಿದ್ದೂ ಮರೆತು, ಕಾಡ ಕೋಗಿಲೆ ಕರೆಗೆ ವಸಂತ ಕೂಟಕೆ ನಡೆದೆ ಬೇಟ ಕೂಟಕೆ ಮನವ ಮಿಡಿಸಿ ಶರತ್ತುಗಳಿಲ್ಲದೆ ಪ್ರೀತಿ ಕೊಡಲು ಮೈ ಬೆವರ ಬಸಿದು ಸೋನೆ ಸುಯ್ಯಲು ಬಿಡುವಿಲ್ಲದೆ ನಡೆದೆ, ಭಾವ ಕೂಟಕೆನಡೆದೆ,,, ಅಗ್ನಿ ದಿವ್ಯದ ದಾರಿಗೆ ಅಗ್ನಿ ಮಳೆಯಾದರೂ ಸಾಕಿದ ಗಂಡಿನ ಕ್ರೌರ್ಯಕೆ ನಲುಗಿದೆ ರಾಗ ಭಾವದೊಳು ಲಯವಾಗಲು ನಡೆದೆ ಅಮೃತಧಾರೆ ಎದೆಗವಚಿ ನಡೆದೆ,,, ಇಂಪಾದ ಕೊರಳ ಮೆದು ಬೆರಳ ಸ್ಪರ್ಶದಲಿ ಪ್ರೀತಿ ಕಾಮನೆಗಳ ಕಟೆದಂತೆ ಭಗ್ನಶಿಲ್ಪ ಕನಸುಗಳಿಗೆ ಅಮೃತ ಹನಿಸಿ ಅರಮನೆಯ ಕಣ್ಣಕೆಂಪಿಗೆ ನಂಜೇರಿಸಿ ಲೋಕದೆಲ್ಲೆಗೆ ವಿಷವಾಗಲು ನಡೆದೆ ಸುರಂಗದಾರಿಯಲ್ಲಿ ಮಲ್ಲಿಗೆಮನವಾಗಿನಡೆದೆ ಭಾವಮೇಳದಲಿ ನಾಟ್ಯವಾಡಲು ನಡೆದೆ ಬಿಡುವಿಲ್ಲದೆ ನಡೆದೆ ಭಾವ ಕೂಟಕೆ ನಡೆದೆ,,, ಅಂತರಂಗ ಅರಳಿಸಲು ಅಮೃತ ನರಳಿಸಲದು ವಿಷ ಕಾಲಕರ್ಮವಿಧಿಗಳನ್ನು ಬೆರಗಾಗಿಸಿ ಷರಾ ಹೊಡೆದು ನಡೆದೆ ವಿಷ ಮಥಿಸಿ ಕಕ್ಕಿಸಿ, ಎದೆಯಲ್ಲಿ ಇಳಿಸಿದರು ಗುಂಡುಗಳ ಭಾರ, ನಿನ್ನ ಬೆತ್ತಲೆ ಬರೆದು ತಮ್ಮಬೆತ್ತಲೆ ಮರೆತು , ಯಶೋಧರನ ಯಶೋದುಂದುಭಿ ಹಾಡಿ ನಿನ್ನ ಬೆಂತರ ಮಾಡಿದರು ಅವರ ಗಂಡುಗಳಿಗಿಲ್ಲಿ ಮುಕ್ತಿಸಾಲು ಈಗಲೂಸಂಕಟದಲಿ ಕುದಿವ ಅಮೃತಮತಿನೀನು,ಅತೃಪ್ತಪ್ರೇತಗಳುನಾವು ಯಶೋಧರರ ಪರಮಾಧಿಕಾರ ದಾಟಲು ಅಷ್ಟಾವಕ್ರರ ಅಸಹನೆ ಅಳಿಯಲು ನಡದಲ್ಲೆಲ್ಲ ಅಹಂ ಮೂರ್ಖತೆಗೆ ತಲೆ ತಿರುಗಿಸಿ ಬದುಕಿದ್ದೇವೆ ಅಮೃತಮತಿ ನಾವೂ ನಿನ್ನಂತೆ ನಿನ್ನೊಳಗಿನ ಉಸಿರಂತೆ ಅಷ್ಟಾವಕ್ರರ ಚಕ್ರಬಂಧ, ಯಶೋದುಂಧುಭಿಗಳ ಷರಾ ಎಲ್ಲ ಬಾಹುಗಳ ಬಿಗಿತದಲಿ ಹಣ್ಣಾದರೂ ನಿಂತಿದ್ದೇವೆ ಅಮೃತಮತಿ ನಿನ್ನ ಮರೆಯದೆ !ನಿನ್ನ ಹೆಜ್ಜೆಗಳಲಿ ನಮ್ಮ ಅಸ್ಮಿತೆಯ ಅಗೆಯಲು,,, ಒಡೆಯ ಒಕ್ಕಲು, ಹೆಣ್ಣು ಗಂಡು ಸುಂದರ ಕುರೂಪ, ನೀತಿ ನಿಷ್ಟುರಗಳ ಬೆಂಕಿಬಂಧ ನಡೆದಿದ್ದೇವೆ ದಾಟಲು ನಮ್ಮ ದಾರಿಯ ಗುರಿಗೆ ಶ್ರದ್ದೆಗಳ ತಳಕು ಕಟ್ಟಿದವರ ಕೈಗಿತ್ತು ಗೌರವದ ಸೀರೆ ತಲೆಗೆ, ಪಾವಿತ್ರ್ಯದಕಲಶ ಕೊಟ್ಟವರಿಗೇ ಎತ್ತಿಟ್ಟು, ಸೆರಗು ಸೀರೆಯಾಚೆ ನಗ್ನರಾಗಿದ್ದೇವೆ. ಲಕ್ಶ್ಮಣರೇಖೆಗಳನ್ನು ದಾಟಿಯೇ ಬದುಕುವ ಹಮ್ಮಿಗೆ. ನಾವೂ ನಡೆದಿದ್ದೇವೆ ಅಮೃತಮತಿ ನಮ್ಮದೇ ಹೆಜ್ಜೆಯ ನಡಿಗೆ,,, ಪ್ರೀತಿಯ ಘಾತುಕವರಿತರೂ ಪ್ರಿತಿಸಿದೆ ಆಳ ಅಳೆಯಲು ಪ್ರೀತಿಯ ಇಣುಕಿದೆ ಆಳಕ್ಕಿಳಿದು ಒಂಟಿಯಾದರೂ ಪ್ರೀತಿಯ ತಬ್ಬಿದೆ ‘ಪ್ರೀತಿಗೆ ಸ್ವಾತಂತ್ರ್ಯವೇ ಪ್ರೀತಿ ಎಂದು ಸಾರಿದೆ ಮುಕ್ತಿಗೆ ದೂರಾದೆ ನೆಲಕೆ ಹತ್ತಿರವಾದೆ ನೆಲದ ಘಮವಾಗಿ ಬಂಡಾಯದಕೂಗಾದೆ ಹೆಣ್ಣುಗಳ ಸುಪ್ತಲೋಕಕೆ ಇಳಿದು ಈ ನೆಲದಲ್ಲೇ ಉಳಿವ ಪ್ರೀತಿಬೇರಾದೆ ಮುಕ್ತದಾರಿಗೆ ಶಕ್ತರೂಪಿಣಿ ಅಮುಕ್ತ ಅಮೃತಮತಿಯಾದೆ ********

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಸರಳುಗಳು ಸರಳುಗಳು ನನ್ನತ್ತ ತೂರಿಬಂದ ಕಲ್ಲುಗಳನ್ನುಹೂ ಮಾಡಿಕೊಳ್ಳುವ ಕಲೆ ಸಿದ್ದಿಸಿರಲಿಲ್ಲ ನನಗೆ ಹಲವು ಹಣೆಗೆ ಬಡಿದವು ಕೆಲವು ಎದೆಗೆ ಬಡಿದವುಒಟ್ಟಿನಲ್ಲಿ ರಕ್ತಸಿಕ್ತವಾಯಿತು ಮೈ ತಂದು ಕೂಡಿ ಹಾಕಿದ ದವಾಖಾನೆಯೇಕಾರಾಗೃಹವಾಗಿಬಿಸಿಲಿಗೆ ಸರಳುಗಳು ಹೆದರಿಸುವ ಕಪ್ಪು ನೆರಳುಗಳಾಗಿನನ್ನ ಹಗಲುಗಳು ನರಕಸದೃಶವಾದವು ಇರುಳುಗಳು ಬಂದವೊ ಹೋದವೊ ಅರಿವಾಗದೆಸುಮ್ಮನೇ ಕೂರುತ್ತೇನೆ ದ್ಯಾನಸ್ಥನಾಗಿ ಪದ್ಮಾಸನ ಹಾಕಿ ಯಾವತ್ತಾದರೂ ಒಂದು ದಿನ ಸರಳುಗಳು ಇಲ್ಲವಾಗಬಹುದುಸೆರೆಮನೆಯಂತಹ ದವಾಖಾನೆ ಬಯಲೂ ಅಗಬಹುದು ಅಂತಹದೊಂದು ದಿನನಾನು ಮತ್ತೆ ಬರುತ್ತೆನೆ ನಿನ್ನ ಕಾಣಲುಹಳೆಯ ಕನಸುಗಳನು ನನಸಾಗಿಸಲುಕಾಯುವೆಯಾದರೆ ಅಲ್ಲಿಯವರೆಗೂಸಹಿಸಬಲ್ಲೆ ಸರಳುಗಳ ಹಿಂದಿನ ಯಾತನೆಗಳ ಅಷ್ಟೂ ಕ್ಷಣಗಳನ್ನುಹಲ್ಲು ಕಚ್ಚಿ!ನಿನಗಾಗಿ ಮಾತ್ರ—- ******** ಕು.ಸ.ಮದುಸೂದನ್

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಬದುಕುವೆ…… ಆ ಮುಂಜಾನೆ ನನಗಿನ್ನೂ ನೆನಪಿದೆಎಳೆ ಗರಿಕೆಯ ಮೇಲೆ ಕೂತ ಇಬ್ಬನಿಯಂತೆ ನೀನಿದ್ದೆ ನನ್ನೆದುರು! ಆ ಮದ್ಯಾಹ್ನ ನನಗಿನ್ನೂ ನೆನಪಿದೆಊರಾಚೆಯ ಚಿತಾಗಾರದಲ್ಲಿ ಬೇಯುತ್ತಿದ್ದ ಹೆಣದಂತೆ ನೆನಪಾಗಿದ್ದೆ ನನ್ನೊಳಗೆ! ಆ ಸಂಜೆ ನನಗಿನ್ನೂ ನೆನಪಿದೆದೂಳು ಬಿದ್ದ ಕಣ್ಣೊಳಗೆ ಬಾಣಂತಿ ಎದೆಹಾಲ ಹನಿಸಿದಂತಿದ್ದೆ ನನ್ನುಸಿರೊಳಗೆ! ಈಗೆಲ್ಲ ಮರೆತು ಹೋಗಿದೆನೀನಿದ್ದದ್ದುನೀ ಹೋದದ್ದು! ನಿಜ ಬಿಡು ಸುಳ್ಳು ಹೇಳಲೂ ಮಿತಿಯಿರಬೇಕುಎನ್ನುವ ಮಾತೇ ಮರೆತು ಹೋಗಿದೆ——! ನೀನಿರುವೆ ನೀನಿಲ್ಲಗಳ ನಡುವೆಬದುಕಿದೆ ಬದುಕಿರುವೆ ಮುಂದೆಯೂ ಬದುಕವೆ! ***** ಕು.ಸ.ಮಧುಸೂದನ್

ಕವಿತೆ ಕಾರ್ನರ್ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-8 ತೆಗೆದೀತೆ ದುಡಿಮೆಯ ಬಾಗಿಲು? ನಾಲ್ಕು ವರ್ಷಗಳ ಕೃಷಿ ಲೇಖನಗಳ ಸರಣಿ ಬರಹಕ್ಕಾಗಿ ಹಲವು ಹಳ್ಳಿಗಳ ರೈತರನ್ನು ಸಂದರ್ಶಕ ಮಾಡಿದ್ದೆ. ಎಲ್ಲ ರೈತರೂ ಕಾರ್ಮಿಕರ ಕೊರತೆಯನ್ನೆದುರಿಸುತ್ತಿರುವ ವಿಷಯ ಹೇಳುತ್ತಿದ್ದರು. ಯಾಕೆ ಎಲ್ಲ ಹಳ್ಳಿಗಳಲ್ಲಿಯೂ ಹೀಗೆ? ಎಂದು ಕಾರ್ಮಿಕರನ್ನು ವಿಚಾರಿಸಲಾರಂಭಿಸಿದೆ. ನಗರದ ಅಂಚಿನ ಹಳ್ಳಿಯಲ್ಲಿ ವಾಸಿಸುವ ಕಾರ್ಮಿಕರು ಕೃಷಿ ಭೂಮಿಯಲ್ಲಿ ದುಡಿಯುವುದಕ್ಕಿಂತ ನಗರಗಳಲ್ಲಿ ಕೆಲಸಕ್ಕೆ ಹೋದರೆ ಕೂಲಿ ಹೆಚ್ಚು ಸಿಗುತ್ತದೆ ಎಂದು ಲೆಕ್ಕ ಹಾಕಿ ದಿನವೂ ನಗರಕ್ಕೆ ಹೋಗುತ್ತಿದ್ದರು. ಅವರಲ್ಲಿ ನಗರದ ಸಿನಿಮಾ, ತಿಂಡಿ ತಿನಿಸು, ವೇಷಭೂಷಣ, ವ್ಯಸನ .. ಹೀಗೆ ಹಲವು ಆಮಿಷಕ್ಕೆ ಮರುಳಾದ ಮನಸ್ಥಿತಿಯೂ ಇತ್ತು. ಇನ್ನೂ ಕೆಲವು ಹಳ್ಳಿಗಳು ವಲಸೆ ಮನಸ್ಥಿತಿಯವು. ಮಳೆಗಾಲದಲ್ಲಿ ಊರಿನಲ್ಲಿ ಇದ್ದರೆ ನಂತರ ಇಡೀ ಹಳ್ಳಿಯಲ್ಲಿ ದುಡಿಯುವಷ್ಟು ಗಟ್ಟಿ ಇದ್ದವರೆಲ್ಲ ಮಹಾನಗರಕ್ಕೆ ಗುಳೆ ಹೋಗುತ್ತಿದ್ದರು. ಒಮ್ಮೆ ಕಾರ್ಮಿಕ ಮಹಿಳೆಯೊಬ್ಬಳು ಅವರ ಜೀವನವನ್ನು ಹೀಗೆವಿವರಿಸಿದಳು..ದೀಪಾವಳಿ ಮುಗಿತಂದ್ರೆ ಗೋವಾ, ಮುಂಬೈ, ಬೆಂಗಳೂರಿಗೆಲ್ಲ ಕೆಲಸಾ ಹುಡುಕಿ ಹೊಂಟಬಿಡ್ತೇವ್ರಿ. ಗಂಡನನ್ನು ಮಾತ್ರ ಕಳಿಸಿದ್ರೆ ಚಟಕ್ಕ ಬಿದ್ದು, ಬ್ಯಾರೆ ಹೆಣ್ಣಿನ ಕೂಡ ಜೀವ್ನಾ ಮಾಡಿದ್ರೇನು ಗತಿ. ನಮ್ಮನ್ನ ಮಕ್ಕಳನ್ನ ನೋಡುವವರಾರು? ಅಂದ್ಕೊಂಡು ವಯಸ್ಸಾದ ಅತ್ತಿ ಮಾವ ಇಲ್ಲ ಅಪ್ಪಾ ಅವ್ವಾನಗೂಡ ಮಕ್ಕಳನ್ನು ಊರಿನಲ್ಲಿಯೇ ಬಿಟ್ಟು ಹೊರಟುಬಿಡ್ತೇವ್ರೀ. ಬ್ಯಾಸಿಗಿ ಮುಗಿಯೂ ಟೇಮ್ಗ ಕೈಯಾಗ ಒಂದಿಷ್ಟು ಕಾಸು ಕೂಡಿಸಿಕೊಂಡು ಹೊಳ್ಳಿ ಬರ್ತೇವ್ರೀ. ಯಾವ ನಗರಕ್ಕೆ ಹೋದರೂ ಒಂದು ಬಾಡಗಿ ಮನಿ ಹಿಡಿಯುವಷ್ಟು ರೊಕ್ಕ ನಮ್ಮ ಕಡಿಗ ಆಗಂಗಿಲ್ಲ.ಅರ್ಧ ಕಟ್ಟಿದ ಕಟ್ಟಡ, ರೇಲ್ವೆ ಸ್ಟೇಷನ್ನು, ಸೇತುವೆಯ ಕೆಳಭಾಗ, ಕೊಳಗೇರಿಗಳಲ್ಲೆಲ್ಲೋ ಇರಬೇಕಾಗ್ತದೆ. ಇದ್ದೂರಾಗ ಗಳಿಸಾಕ ಅವಕಾಶ ಇದ್ರೆ ನಾವ್ಯಾಕ ಹಿಂಗ ತಿರುಬೋಕಿಗಳಾಗುತ್ತಿದ್ದೆವು…. ಲಾಕ್ ಡೌನ್ ಮಾಡಿದಾಗ ಇದ್ದ ನಗರದಲ್ಲೇ ಇರಲಾಗದೇ ಸ್ವಂತ ಊರಿಗೆ ಬರಲೂ ಆಗದೇ ಪರದಾಡಿದವರ ಸ್ಥಿತಿ ಕರುಣಾಜನಕವಾದದ್ದು. ಅನೇಕ ಸಂಘ ಸಂಸ್ಥೆಗಳು, ಸರಕಾರ ಇವರಿಗೆ ಹಲವು ಬಗೆಯಲ್ಲಿ ನೆರವಾದರೂ ಅನೇಕರಿಗೆ ಕಷ್ಟವಾಯಿತು. ಕೆಲವರು ನೂರಾರು ಮೈಲಿ ನಡೆದಾದರೂ ಊರು ತಲುಪಿಬಿಡಬೇಕೆಂದು ಪ್ರಯತ್ನ ಮಾಡಿ ಜೀವ ತೆತ್ತರು. ಈಗಲೂ ಹೇರಳವಾದ ಅವಕಾಶಗಳಿರುವ ಕೃಷಿಕ್ಷೇತ್ರದಲ್ಲಿ ದುಡಿಯಲು ಕಾರ್ಮಿಕರು ಮನಸ್ಸು ಮಾಡಿದರೆ ಇದ್ದ ಊರಿನಲ್ಲಿ, ಸುತ್ತ ಮುತ್ತಲ ಊರಿನಲ್ಲಿ ಅನೇಕ ಕಾರ್ಮಿಕರಿಗೆ ಕೆಲಸ ದೊರೆಯುತ್ತದೆ. ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತ ಇವರೆಲ್ಲ ನಗರಕ್ಕೆ ದೌಡಾಯಿಸುವುದಕ್ಕೆ ಪರ್ಯಾಯವಾಗಿ ವಲಸೆ ಕಾರ್ಮಿಕರು ಇರುವ ಸ್ಥಳಗಳನ್ನು ಗುರುತಿಸಿ ಸರಕಾರ ಅಥವಾ ಉದ್ಯಮಿಗಳು ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷಿ ಆದರೆ ಅನೇಕ ಕಾರ್ಮಿ ಕರು ನೆಮ್ಮದಿಯಿಂದ ಬದುಕುವಂತಾಗಬಹುದು. ಚಿಂದಿಯಾಗಿರುವ ಅವರ ಸಂಸಾರಗಳು ಸುಖ ಕಾಣಬಹುದು.. ********* ಮುಂದುವರಿಯುತ್ತದೆ… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಲಕ್ಷ್ಮಿ ದೊಡಮನಿ ಮಹಾಮಾರಿಯ ಬಲಿ ಕಂಡು ಎದೆಗೆ ಬೆಂಕಿ ಇಟ್ಟಂತಾಗಿದೆ ಎಲ್ಲರ ಕೈಮೀರುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ನನ್ನ ದೌರ್ಬಲ್ಯಗಳನ್ನು ಖಚಿತ ಪಡಿಸಿಕೊಂಡು ನನ್ನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿರುವೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಹಳೆಯದಾದರೂ ಮರೆಯಾಗುತ್ತಿಲ್ಲ ಹೆಚ್ಚುತ್ತಿದೆ ನೋವು ಮನ ನೆನಪಿಸುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಅಂದಿನ ಅನ್ನವನ್ನು ಅಂದೇ ಗಳಿಸುವ ಜನ ನಾವು ಗೃಹಬಂಧನದಿ ಹೊಟ್ಟೆ ಹೊರೆದುಕೊಳ್ಳುವದ್ಹೇಗೆಂದು ಎದೆಗೆ ಇಟ್ಟಂತಾಗಿದೆ ಅತಿಯಾದ ಸ್ವಾರ್ಥವನೆಂದಿಗೂ ನಾನು ಯೋಚಿಸಿಲ್ಲ ‘ಚೆಲುವೆ’ ಈ ಅನೀರಿಕ್ಷಿತತೆಯ ಮಾತು ಎದೆಗೆ ಬೆಂಕಿ ಇಟ್ಟಂತಾಗಿದೆ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹಂಬಲಿಸಿರುವೆ ಶಿವಲೀಲಾ ಹುಣಸಗಿ ನಿನ್ನ ಮೇಲೊಂದು ಮುನಿಸಿದೆ ಕಾರಣ ಹೇಳಲ್ಲ ಚಿಂತಿಸೊಮ್ಮೆ.! ಕನಿಕರಿಸದ ಇರುಳುಗಳೆಲ್ಲ ಉರುಳುಗಳಾಗಿ ಬೆಸೆದಿವೆ..! ಮಬ್ಬಿನಲೊಂದು ನಿಟ್ಟುಸಿರು ತುಟಿಯಂಚಿನಲೊಂದು ಹಸಿಯಾದ ಮೌನದುಸಿರು.! ಕಾಡಿಗೆಯ ಕರಿನೆರಳು.. ಕಮರಿದಾ ಪುಷ್ಪದಂತೆ ರತಿ ಉರಿದು ಭಸ್ಮವಾದಂತೆ..! ಕಪ್ಪುಛಾಯೆಯ ಬಿಂಕನಾನೊಲ್ಲೇ ಮಡುಗಟ್ಟಿದ ಒಡಲುನನ್ನಲ್ಲೇ ನಿನ್ನುಸಿರ ಅಪ್ಪುಗೆಯಲಿ ಬಿಗಿದು ಮುತ್ತಿನಾ ಮಳೆಯ ಸುರಿದ ಬಾರದೇ ನನಗಿನ್ನೇನೂ ಬೇಕಿಲ್ಲ..ನಲ್ಲಾ.. ನಿನ್ನ ಹಿಡಿ ಪ್ರೀತಿಯ ಹೊರತು…! ನಿನ್ನೊಟಕೆ ಹುಸಿಗೋಪ ಮರೆವೆನು ಮರುಗಿದಾಗೆಲ್ಲ ಕನವರಿಕೆಗಳು ಮೊಳಕೆಯೋಡಯದ ಕನಸುಗಳು ನಿಟ್ಟೂಸಿರು ಬಿಡದಾ ಕಂಗಳು..! ನೀ ನೀಡಿದ ಉದರಾಗ್ನಿಯಲಿ ಬೆಂದು- ಬಸವಳಿದಿರುವೆ ಚಿರನಿದ್ರೆಗೆ ಜಾರುವ ಗಳಿಗೆಯಲಿ ಮನದ ಪ್ರತಿಬಿಂಬವಾಗ ಬಾರದೆ….? ಮುನಿಸಾದರೂ ನನ್ನೊಳಗೆ ಮನಸಾದರೆ ನಾ ನಿನ್ನೊಳಗೆ ಹೃದಯವನರಿಯೆಂದು ಪರಿತಪಿಸಿರುವೆ. ಪ್ರೀತಿಗಾಗಿ ಹಗಲಿರುಳು ಹಂಬಲಿಸಿರುವೆ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಕ್ಕಳ ಕವಿತೆ ಆಸೆ ಮಲಿಕಜಾನ ಶೇಖ ಆಕಾಶಕ್ಕೆ ಹಾರುವ ಆಸೆ ರೆಕ್ಕೆಗಳಿಲ್ಲದೆ ಹಾರುವದ್ಹೇಗೆ..? ಗರುಡನೆ ಗರುಡನೆ ಕೇಳಿಲ್ಲಿ ನಿನ್ನಯ ರೆಕ್ಕೆ ಕೊಡು ಎನಗೆ.. ಮುದ್ದಿನ ಬಾಲಕ ಕೇಳಲೆ ನೀನು ರೆಕ್ಕೆಗಳೇನು ಕೊಡುವೆನು ನಾನು ಛಲವಿಲ್ಲದನೆ ಹಾರುವದ್ಹೇಗೆ..? ರೆಕ್ಕೆಗಳಂತು ಚಿಟ್ಟೆಗೆವುಂಟು..! ಸಾಗರದಾಚೆ ಈಜುವ ಆಸೆ ಕಿವಿರುಗಳಿಲ್ಲದೆ ಈಜುವದ್ಹೇಗೆ..? ಮೀನವೆ ಮೀನವೆ ಕೇಳಿಲ್ಲಿ ನಿನ್ನಯ ಕಿವಿರು ಕೊಡು ಎನಗೆ.. ಪುಟ್ಟನೆ ಪುಟಾಣಿ ಕೇಳಲೆ ನೀನು ಕಿವಿರುಗಳೇನು ಕೊಡುವೇನು ನಾನು ತಾಳ್ಮೇಯ ಇಲ್ಲದೆ ಈಜುವದ್ಹೇಗೆ..? ಕಿವಿರುಗಳಂತು ಚಿಪ್ಪೆಗೆವುಂಟು..! ಗುಬ್ಬಿಯ ಗೂಡನು ಕಟ್ಟುವ ಆಸೆ ಕೊಕ್ಕವನಿಲ್ಲದೆ ಕಟ್ಟವದ್ಹೇಗೆ..? ಗುಬ್ಬಿ ಗುಬ್ಬಿ ಕೇಳಿಲ್ಲಿ ನಿನ್ನಯ ಕೊಕ್ಕು ಕೊಡು ಎನಗೆ.. ಚಿಣ್ಣರ ಚಿಣ್ಣಾ ಕೇಳಲೆ ನೀನು ಕೊಕ್ಕವನೇನು ಕೊಡುವೇನು ನಾನು ಬುದ್ಧಿಯ ಇಲ್ಲದೆ ಕಟ್ಟುವದ್ಹೇಗೆ..? ಕೊಕ್ಕಗಳಂತು ಕಾಗೆಗೆವುಂಟು..! ವೇಗದಿ ನನಗೆ ಓಡುವ ಆಸೆ ಕಾಲಲಿ ವೇಗ ಇಲ್ಲದ್ಹೇಗೆ..? ಜಿಂಕೆ ಜಿಂಕೆ ಕೇಳಿಲ್ಲಿ ನಿನ್ನಯ ಕಾಲು ಕೊಡು ಎನಗೆ.. ಅಂದದ ಕಂದಾ ಕೇಳಲೆ ನೀನು ಕಾಲುಗಳೇನು ಕೊಡುವೇನು ನಾನು ಜೋಶ್ ಇಲ್ಲದ ಓಡುವದ್ಹೇಗೆ..? ಕಾಲುಗಳಂತು ಆಮೆಗೆವುಂಟು..! ಮಧುರದಿ ಗಾನವ ಗುನುವ ಆಸೆ ಅಂದದ ಕಂಠವ ಇಲ್ಲದ್ಹೇಗೆ..? ಕೋಗಿಲೆ ಕೋಗಿಲೆ ಕೇಳಿಲ್ಲಿ ನಿನ್ನಯ ಕಂಠವ ಕೊಡು ಎನಗೆ.. ಪುಟಾಣಿ ಕಂದಾ ಕೇಳಲೆ ನೀನು ಕಂಠವನೇನು ಕೊಡುವೇನು ನಿನಗೆ ರಾಗವ ಇಲ್ಲದೆ ಹಾಡುವದ್ಹೇಗೆ..? ಕಂಠವೇನು ಗೂಬೆಗೆವುಂಟು..! ನೂರಾರು ವರ್ಷ ಬದುಕುವ ಆಸೆ ಜೀವಕೆ ಆಯುಷ್ಯ ಇಲ್ಲದ್ಹೇಗೆ..? ಆಮೆ ಆಮೆ ಕೇಳಿಲ್ಲಿ ನಿನ್ನಯ ಜೀವ ಕೊಡು ಎನಗೆ.. ಜಾಣರ ಜಾನ್ ಕೇಳಲೆ ನೀನು ಬೇಡುವದನ್ನು ಬಿಡುವಲೆ ನೀನು ನಿನ್ನಯ ಒಳಗೆ ಅಣುಕಿಸು ನೀನು ಎಲ್ಲವುವುಂಟು ನಿನ್ನಲ್ಲಿ..! ಅರಿತು ಬಾಳುವದನ್ನು ಕಲಿ ಮೊದಲು… *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

‘ಪ್ರಶ್ನೆ ದಾಳ’ ವಸುಂಧರಾ ಕದಲೂರು.  ಎಳೆ ಹುಡುಗನನ್ನು ಮಲೆ ಮೇಲೆ ಕೂರಿಸಿ ಆತ, ಮೊಲೆ ಕಾಣಬಾರದೆಂದು ಬಿಡುತ್ತಾರೆ ! ಹತ್ತಲು ೧೮ ಏಕೆ ..? ಉತ್ತರವಿಲ್ಲದವರ ಬಳಿ ಇಂತಹ ಪ್ರಶ್ನೆ ಕೇಳಬಾರದು. ಎರಡೊಂಬತ್ತಲಿ ಹದಿನೆಂಟೆಂದು ಒಂದು ಗರ್ಭಾವಧಿಯ ಅವಧಿಯ ಮರೆತು ಬಿಡುತ್ತಾರೆ. ಬೀಜ ನಾಟಿ, ಬೇರು ಚಿಗುರಿ ಹೂವೋ ಕಾಯೋ ಅರಳಿಕೊಳಲು ಒಂದ್ಹೊಂಬತ್ತು. ಹೊಟ್ಟೆ ಮಗುಚಿ ಅಂಬೆಗಾಲಿರಿಸಿ, ಬಾಯ ತೊದಲು ಶುರುವಿಗೆ ಇನ್ನೊಂದು ಒಂಬತ್ತು. . ಆಯಿತಲ್ಲ ಹದಿನೆಂಟು..! ಪ್ರತೀ ಪ್ರಶ್ನೆಗೂ ಒಂದು ಉತ್ತರವಿದೆ ಒಪ್ಪಿತವಾದರೆ. ಆದರೂ ತನ್ನ ಮಗುವ ತಾನೇ ಕಾಣಬಾರದೇಕೆನುವ ಉತ್ತರವಿರದ ಒಂದು ‘ಪ್ರಶ್ನೆ ದಾಳ’ ಮರಳಿ ಉರುಳಿ ಉರುಳಿ, ತಾಯ ಹೃದಯ ನರಳಿದೆ.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಿಶ್ವಗುರು ಬಸವಣ್ಣ ತೇಜಾವತಿ ಹೆಚ್. ಡಿ ನೀನೇ ಅಲ್ಲವೇ ಮಹಾಮಾನವತಾವಾದಿ ಹನ್ನೆರಡನೆಯ ಶತಮಾನದ ಕ್ರಾಂತಿಯೋಗಿ ಅದೆಷ್ಟೋ ಅಂಧಕಾರದ ಧೂಳುಹಿಡಿದ ಮನಗಳಲಿ ಅರಿವಿನ ಪ್ರಣತಿಯ ಬೆಳಗಿದೆ ! ಹುಟ್ಟುಬ್ರಾಹ್ಮಣ ಸಂಸ್ಕಾರಶರಣ ಅಂಧಶ್ರದ್ಧೆ ಜಡ ಸಂಪ್ರದಾಯ ತೊರೆದು ಸತ್ಯಾನ್ವೇಷಕನಾದೆ ! ಅಂತರ್ಜಾತಿ ವಿವಾಹ ಮಾಡಿಸಿ ಬಿಜ್ಜಳನಾಸ್ಥಾನ ಮಂತ್ರಿ ನೀನು ಗಡೀಪಾರಿಗೀಡಾದೆ! ಸಮಾಜ ಸುಧಾರಕನಾದೆ ಕಾಯಕವೇ ಕೈಲಾಸವೆಂದೆ ನುಡಿದಂತೆ ನಡೆಯೆಂದೆ ಅಂತರಂಗಶುದ್ಧಿಯೇ ಮಿಗಿಲೆಂದೆ ಜ್ಞಾನವೇ ಬಂಢಾರವೆಂದು ನೀ ಭಕ್ತಿ ಬಂಢಾರಿಯಾದೆ ! ಆಚಾರವೇ ಸ್ವರ್ಗವೆಂದೆ ಅನಾಚಾರವೇ ನರಕವೆಂದೆ ಅನುಭವ ಮಂಟಪದೊಳು ಮಹಾಜ್ಞಾನಿಯಾದೆ ! ಇಷ್ಟಲಿಂಗ ಪರಿಕಲ್ಪನೆಯೊಂದಿಗೆ ಜಗಜ್ಯೋತಿಯಾದೆ ! ಕೂಡಲಸಂಗಮ ವಚನಾಂಕಿತದಿ ನೀ ನಿಜಶರಣನಾದೆ…. ನಿಜ….ಶರಣನಾದೆ… *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಸವಣ್ಣ ಡಾ.ಪ್ರಸನ್ನ ಹೆಗಡೆ ಅಣ್ಣ ಬಸವಣ್ಣನೆಂದರೆ ಬಿಜ್ಜಳ ಮಂತ್ರಿಯೊಂದೇ ಅಲ್ಲ ಸಾವಿರದ ಬೀಜ ಬಿತ್ತಿದ ಮಹಾ ಮಂತ್ರ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೆ ವಚನಕಾರನಲ್ಲ ಹೊಸ ವಿಚಾರ ಸೃಜಿಸಿದ ವಿವೇಕ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಶಿವಶರಣನಲ್ಲ ಶಿವ ಚರಣ ಮುಟ್ಟದಾ ವಿಶ್ವ ಮೂರ್ತಿ ಅಣ್ಣ ಬಸವಣ್ಣನೆಂದರೆ ವಿಚಾರವಾದಿಯೊಂದೇ ಅಲ್ಲ ಶಿಷ್ಟಾಚಾರ ಪಾಲಿಸಿದ ಇಷ್ಟ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಲಿಂಗ ಪಿಡಿದವನಲ್ಲ ಲಿಂಗವನ್ನೇ ಮೆಚ್ಚಿಸಿದ ಜ್ಞಾನ ಮೂರ್ತಿ ಅಣ್ಣ ಬಸವಣ್ಣನೆಂದರೆ ಜ್ಞಾನ ಸಾಗರವಷ್ಟೇ ಅಲ್ಲ ಸರ್ವರನೂ ಕ್ಷಮಿಸಿದ ಕ್ಷಮಾ ಮೂರ್ತಿ. *******

ಕಾವ್ಯಯಾನ Read Post »

You cannot copy content of this page

Scroll to Top