ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಮಹಾನ್ ಮಾನವತಾವಾದಿ ಅಂಬೇಡ್ಕರ ರೇಷ್ಮಾ ಕಂದಕೂರ ನಮ್ಮ ದೇಶದ ಕಾನೂನು ವ್ಯವಸ್ಥೆಗೆ ಪ್ರತೀಕವಾಗಾರುವ ಲಿಖಿತ ದಾಖಲೆಯ ಹೊತ್ತಿಗೆ ಸಂವಿಧಾನ ಇದರ ರಚನೆಗೆ ಮಹತ್ವದ ಕೊಡುಗೆ ನೀಡಿದ ಮಹನೀಯ ಅಂಬೇಡ್ಕರ.ಸ್ವಾತಂತ್ರ್ಯ,ಸಮಾನತೆ,ಬಂಧುತ್ವದ ಆಧಾರವನ್ನು ಅಳವಡಿಸಿಕೊಂಡು ನಮ್ಮ ಸಂವಿಧಾನ ರಚಿತವಾಗಿದೆ. ನಮ್ಮ ಹಕ್ಕು,ಕರ್ತವ್ಯಗಳನ್ನು ತಿಳಿಸಿ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ವ್ಯವಸ್ಥೆಗಳ ಅರಿವು ನೀಡುವ ವಿಶ್ವದಲ್ಲಿಯೇ ಬ್ರಹತ್ ಸಂವಿಧಾನ ಇಂಗ್ಲೆಂಡನ ಸಂವಿಧಾನ ಮಾದರಿಯನ್ನು ಅಳವಡಿಸಿ ಕೊಳ್ಳಲಾಯಿತು. ಅಂಬೇಡ್ಕರ ಬಾಲಕನಿದ್ದಾಗಲೇ ಪ್ರತಿಭಾವಂತ, ಕಲಿಯುವ ಹಂಬಲ,ಸೂಕ್ಷ್ಮತೆಯನ್ನು ಗುರುತಿಸಿ ಶಿಕ್ಷಕರ ಪ್ರೀತಿಗೆ ಪಾತ್ರರಾದರು.ಅಮೇರಿಕಾ,ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮಾಡಿದರು.ಸಾಹು ಮಹಾರಾಜರಿಂದ ಶಿಷ್ಯವೇತನ ಪಡೆದರು . ಸಾಮಾಜಿಕ,ಆರ್ಥಿಕ ಪ್ರಗತಿಗಾಗಿ ನಿರಂತರ ಹೋರಾಟ ನಡೆಸಿದರು.ಭಾರತದ ನೀರಾವರಿ ಜನಕನೆಂದೆ ಹೇಳಬಹುದು ಪಂಡಿತ ನೆಹರುರವರ ಕಾಲದಲ್ಲಿನ ಮಂತ್ರಿಯಾಗಿದ್ದರು ಇವರನ್ನು ಮಂತ್ರಿ ಮಂಡಲದ ವಜ್ರ ಎಂದೇ ನೆಹರುರವರು ಪರಿಚಯಿಸುತ್ತಿದ್ದರು‌. ಹತ್ತನೇ ತರಗತಿಯಲ್ಲಿ ಮುಂಚೂಣಿಯಲ್ಲಿ ಪಾಸಾದಾಗ ಇವರಿಗೆ ಬಹುಮಾನವಾಗಿ ದೊರೆತ “ಬುದ್ಧನ ಚರಿತ್ರೆ” ಪುಸ್ತಕ ಮುಂದೆ ಬೌದ್ಧ ಧರ್ಮ ಸ್ವೀಕರಿಸಲು ಪ್ರೇರಣೆ ನೀಡಿತು.ಬುದ್ಧ,ಮಾರ್ಕ್ಸ ರ ಪ್ರಭಾವ ಇವರ ಅಪಾರ ಮೇಲೆ ಅಪಾರವಾಯಿತು.ಮನುಸ್ಮೃತಿಯಲ್ಲಿ ಅಸ್ಪೃಶ್ಯರನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ವಿರೋಧಿಸಿದರು‌.ಜಾತಿ ಆಧಾರಿತ ತಾರತಮ್ಯದ ವಿರುದ್ಧ ಧ್ವನಿ ಎತ್ತಿದರು. ಪ್ರಜಾ ಪ್ರಭುತ್ವದಲ್ಲಿ ಎದ್ದು ಕಾಣುವ ಸ್ಥೂಲ ಕಲ್ಪನೆಯ ವಿಭಿನ್ನ ಸಮಾಜವನ್ನು ಆದರ್ಶ ಸಮಾಜದ ಕಲ್ಪನೆ ಸುಖಿರಾಜ್ಯವನ್ನಾಗಿ ಬದಲಾಯಿಸಿ ಸ್ವಾತಂತ್ರ್ಯ,ಸಮಾನತೆ,ಭ್ರಾತೃತ್ವಗಳು ಒಟ್ಟಿಗೆ ಸಾಧಿಸುವುದನ್ನು ಕಲ್ಪಿಸಿದರು. ಇಂದಿನ ಸಮಾಜದಲ್ಲಿ ಒಂದು ಮನೋಭಾವ ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ ನೀಡುವುದು ಅವಶ್ಯಕ.ಪೆಡಸಾದ ಸಾಮಾಜಿಕ ಅಡೆತಡೆಗಳಿಂದ ಮುಕ್ತ ಸಮಾಜದ ನಿರ್ಮಾಣ ಅವಶ್ಯಕವಾಗಿದೆ. ಅಮರ ಚೇತನ ಮಹಾನ್ ಮಾನವತಾವಾದಿ ಶೋಷಿತರ ಏಳ್ಗೆಗಾಗಿ,ಸರ್ವ ಸಮಾನತೆಗಾಗಿ ಮೀಸಲಾತಿಯ ಅಧಿನಿಯಮ ಜಾರಿಗಾಗಿ ಶ್ರಮಿಸಿದರು.ಶ್ರಮಿಕರ ಕಣ್ಣೀರ ಒರೆಸುವಲ್ಲಿ.ದೇವರಿದ್ದಾನೆ ಎಂದು ತಿಳಿದ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದವರು ಭಾರತದ ಸಂವಿಧಾನದ ಶಿಲ್ಪಿ ಅಂಬೇಡ್ಕರ. *******

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ಮೂಗಪ್ಪ ಗಾಳೇರ ನಾವು ಹುಟ್ಟಿದಂತೆ ಆತನು ಹುಟ್ಟಿದ್ದ ಯಾಕೋ ಗೊತ್ತಿಲ್ಲ ನಮ್ಮಲ್ಲಿ ಇರದ ಬೆಳಕು ಆತನಲ್ಲಿತ್ತು ಬುದ್ಧನೋ, ಬಸವಣ್ಣನೋ ಯಾರ ತದ್ಭವವೋ ಗೊತ್ತಿಲ್ಲ ಅವರ ಮುಖ ಚರಿತ್ರೆ ಇತನಲ್ಲಿ ಅಡಗಿತ್ತು ಚಮ್ಮಾರನ ಕೈಯಲ್ಲಿ ಲೇಖನಿ ನರ್ತಿಸಿದಾಗ ಪ್ರಳಯವಾದಿತೆಂದು ಕಾದು ಕುಳಿತ ಕೆಲವರಿಗೆ ಭೂಮಿ ಕಂಪಿಸಿದಂತೆ ನಡುಕ ಹುಟ್ಟಿತು ಹೌದು ಆತ ಸೃಷ್ಟಿಸಿದ್ದು ಪ್ರಳಯವೆ ಯಂತಹ ಪ್ರಳಯ ಕಪ್ಪು ಮೋಡಗಳೆಲ್ಲ ಬಿಳಿಯ ಮೋಡಗಳೊಂದಿಗೆ ಮಿಲನ ನಡೆಸಿ ಭೂ ಗರ್ಭದೊಳಗೆ ಮಾನವೀಯ ಕೂಸುಗಳ ಜನನದ ಪ್ರಳಯ ಆ ಪ್ರಳಯಗಳಿಗಾ ಕಣ್ಣು ಮೂಗು ನಾಲಿಗೆ ಕಿವಿ ಚರ್ಮ ಎಲ್ಲೆಂದರಲ್ಲಿ ಉಸಿರಾಡುತ್ತಿವೆ ಹರಿದಾಡುತ್ತಿವೆ ಎಲ್ಲೆಂದರಲ್ಲಿ ಬದುಕು ಕಟ್ಟಿಕೊಳ್ಳುತ್ತಿವೆ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ಜಯಂತಿಗೆ ರಾಮಾನುಜ ನೆನಪು ಡಾ.ನಾ.ಗೀತಾಚಾರ್ಯ ದಲಿತರನ್ನು ಬಲಿತರು ಹೆಗಲಲಿ ಹೊತ್ತು ದೇವಾಲಯದರ್ಶನ ಮಾಡಿಸುವ ಹೊತ್ತು ಎಂದು ಬರುವುದೊ ಎಂದು ಕಾಯುತಿಹೆ ನಾನಂತು. ಜಾತ್ಯತೀತ ಭಾರತದ ಸಮಾನತೆಯ ಈ ಹೊತ್ತು. ಇದು ಕನಸಲ್ಲ, ಹುಚ್ಚಲ್ಲ ,ನಡೆದಿದೆ ಸತ್ಯಕಥೆ. ತಿರುಪ್ಪಾಣರೆಂಬ ದಲಿತ ಆಳ್ವಾರರ ಜೀವನಗಾಥೆ. ಮುನಿಯೆ ವಾಹನನಾಗಿ ಗರ್ಭಗುಡಿಗೇ ಹೊತ್ತೊಯ್ದ ಕಥೆ.ಸಾವಿರವರ್ಷದ ಇತಿಹಾಸ ಮರುಕಳಿಸಬಾರದೇಕೆ. ಅಂಬೇಡ್ಕರ್ ಗಾಂಧಿ ಬಸವರಿಗೂ ಮೊದಲೆ. ರಾಮಾನುಜರಿತ್ತಿದ್ದರು ದಲಿತರಿಗೆ ಹೆಗಲೆ. ದಲಿತರ ಕಾಲ್ತೊಳೆದ ಕೆರೆನೀರ ಕುಡಿದಿದ್ದರಾಗಲೆ. ‘ತಿರುಕುಲ’ರೆಂದು ಕೂರಿಸಿದ್ದರು ದೇವರ ಬಗಲೆ. ಅಂಬೇಡ್ಕರರೆ ನೀವೇನೋ ಆದಿರಿ ದಲಿತ ಸೂರ್ಯ. ಸಂವಿಧಾನದಲಿ ಕೊಟ್ಟಿರಿ ಸಮಾನತೆ, ರಕ್ಷಣೆ, ತೂರ್ಯ. ಎತ್ತಿಹಿಡಿದಿರಿ ವಸುದೈವ ಕುಟುಂಬದ ಧ್ಯೇಯ. ಆದರಿನ್ನೂ ಆಗಿಲ್ಲ ನಮಗೇ ಸೂರ್ಯೋದಯ. ರಾಮಾನುಜ ಸಹಸ್ರಮಾನದ ಈ ಹೊತ್ತಿನಲ್ಲೂ ದಲಿತರ ಮೇಲಿನ ದೌರ್ಜನ್ಯ ಅವ್ಯಾಹತವಯ್ಯೊ. ಮುಟ್ಟಿದರೆ, ನೀರೆತ್ತಿದರೆ, ಎದುರಾಡಿದರೆ ಮೈಲಿಗೆಯ ಘಾತದಲೆ ಬಿದ್ದಿಹರಲ್ಲ ಬಲಿತರೆಲ್ಲ, ಅಯ್ಯ ಎದ್ದೇಳಿ ಬಲ್ಲಿದರೆ ಬಲ್ಮೆತೋರಿ ಸಂವಿಧಾನಕೆ. ಮುನಿವಾಹನರೆನಿಸಿ ದಲಿತರಿಗೆ, ಹಾರಿಸಿ ಪತಾಕೆ. ಭಕ್ತಿಸಾಮ್ರಾಜ್ಯದಲಿಹುದು ದಲಿತ ಭಕ್ತರ ಸಾಲುಭಂಜಿಕೆ. ಲೋಕಸಾರಂಗರಾಗಿ ಲೋಕಕೆ ಸಾರಲೇಕೆ ಅಂಜಿಕೆ ***** ಟಿಪ್ಪಣಿಗಳು: 1)ತಿರುಪ್ಪಾಣಾಳ್ವಾರ್: 12ಜನ ಆಳ್ವಾರ್ ಸಂತರಲ್ಲಿ ಒಬ್ಬರಾದ ದಲಿತ ಭಕ್ತರು. (8-9ನೇ ಶತಮಾನ) 2) ಮುನಿಯ ವಾಹನರಾಗಿ: ಈ ಆಳ್ವಾರರು ಶ್ರೀರಂಗದ ದೇವಾಲಯದ ಮುಂದೆ ಕುಳಿತು ನಿತ್ಯ ವೀಣೆ ನುಡಿಸುತ್ತ ಧ್ಯಾನದಲ್ಲಿರುತ್ತಿದ್ದರು. ಒಂದು ದಿನ ದೇವಾಲಯದ ಪ್ರಧಾನ ಅರ್ಚಕರಾದ ಲೋಕಸಾರಂಗರು ಕಾವೇರಿಯಿಂದ ದೇವರಿಗೆ ಮಡಿನೀರು ಒಯ್ಯುವಾಗ ಅಡ್ಡವಿದ್ದ ಇವರನ್ನು ಕೂಗಲು,ಭಕ್ತಿಯಲಿ ಮೈಮರೆತು ಕೇಳಿಸದಿರಲು, ಸಣ್ಣ ಕಲ್ಲು ಎಸೆದಾಗ ಎಚ್ಚರವಾಗಿ ದೂರ ಸರಿಯುವರು. ಸಾರಂಗರು ದೇವರಿಗೆ ಅಭ್ಯಂಜನ ಮಾಡುವಾಗ ಹಣೆಯಲ್ಲಿ ರಕ್ತ ಕಂಡು ಗಾಬರಿಯಾಗಲು ‘ನನ್ನ ಭಕ್ತನಿಗೆ ಹೊಡೆದು ಅಪಚಾರವಾಗಿದೆ, ಕೂಡಲೆ ಅವನನ್ನು ಹೆಗಲಲಿ ಹೊತ್ತು ಇಲ್ಲಿಗೆ ಕರೆದುತಾ’ರೆಂದು ದೇವ ವಾಣಿಯಾಗಲು,ಸಾರಂಗರು ಎಲ್ಲರನ್ನೂ ಕೂಡಿಕೊಂಡು ಆಳ್ವಾರರ ಬಳಿ ಹೋಗಿ ತಪ್ಪೋಪ್ಪಿ ನಮಸ್ಕರಿಸಿ ಒಲ್ಲೆನೆಂದರೂ ಬಿಡದೆ ಹೆಗಲಲಿ ಕೂರಿಸಿಕೊಂಡು ದೇವರಮುಂದಿಳಿಸುವರು. ಇದರಿಂದ ಇವರಿಗೆ ‘ಮುನಿವಾಹನ’ ಹೆಸರೂ ಇದೆ. 3) ದಲಿತರಿಗೆ ಹೆಗಲು: 11ನೇ ಶ.ದಲ್ಲೇ ರಾಮಾನುಜಾಚಾರ್ಯರು ದಲಿತ ಶಿಷ್ಯ-ದನುರ್ದಾಸ-ನ ಹೆಗಲ ಆಸರೆಯಲ್ಲಿರುತ್ತಿದ್ದರು. 4)ದಲಿತರ ಕಾಲ್ತೊಳೆದ: ಕೆರೆಯಲ್ಲಿ ದನುರ್ದಾಸನ ಪಾದ ತೊಳೆದ ನೀರನ್ನು ತೀರ್ಥವಾಗಿ ಸ್ವೀಕರಿಸಿ ಭಕ್ತರ ಶ್ರೀಪಾದ ತೀರ್ಥದ ಮಹತ್ವ ಸಾರಿದ್ದರು. 5)ತಿರುಕುಲದವರು: ದೆಹಲಿಯಿಂದ ಚೆಲುವನಾರಾಯಣನ ವಿಗ್ರಹ ತರಲು ತಮಗೆ ಜೊತೆಯಾಗಿದ್ದ ದಲಿತರನ್ನು ತಿರುಕುಲತ್ತಾರ್ ( ಶ್ರೇಷ್ಠ ಕುಲದವರು)ಎಂದು ಕರೆದು ದೇವಾಲಯದೊಳಗೆ ಕರೆದೊಯ್ದು ಅವರಿಂದಲೇ ಉತ್ಸವವನ್ನು ಹೊರಡಿಸುವ ಸಂಪ್ರದಾಯ ಹಾಕಿದರು. ಇದು ಈಗಲೂ ಮೇಲುಕೋಟೆಯಲ್ಲಿ ನಡೆಯುತ್ತಿದೆ.

ಕಾವ್ಯಯಾನ Read Post »

You cannot copy content of this page

Scroll to Top