ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

“ನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ” ಮೂಲ: ಆನಾ ಎನ್ರಿಕೇಟಾ ತೇರಾನ್ (ವೆನಿಜುವೆಲಾ) ಕನ್ನಡಕ್ಕೆ: ಕಮಲಾಕರ ಕಡವೆ “ನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ” ಕವಯಿತ್ರಿ ತಾತ್ಕಾಲಿಕ ಗಿಡಮೂಲಿಕೆಗಳ ಒಟ್ಟುಮಾಡಿಕೊಳ್ಳುತ್ತಾಳೆಹಳತಾದ ಬ್ರೆಡ್ಡು, ಚೂರಿಗೆ ಸರಿಯಾದ ಬೂದಿ,ಫಲಿತಾಂಶಕ್ಕೆ ಮತ್ತು ಮೊದಲ ಆಚರಣೆಗಳಿಗೆ ಬೇಕಾದ ನಾರುಬೇರು.ಬಹುಶಃ ಅವಳಿಗೆ ಬಲಾಢ್ಯರು ತಮ್ಮದೆನುವ ಪರಂಪರೆ ಇಷ್ಟಅಧ್ಯಯನಶೀಲ ತಂಡ, ಕೈ ಖಾಲಿ, ಮುಚ್ಚಿದ ಎದೆ.ಯಾರು, ಅವನೋ, ಅವಳೋ? ಪ್ರಮಾಣಕ್ಕೆ ಬದ್ಧ, ಭವಿಷ್ಯಮುಖಿ:ಶಬ್ದಕ್ಕೆಂದು ಕಾದಿರುವ ನಾಯಿಯ ಕುಡಿ, ಸಂತನೆಡೆತಲುಪುವುದು ಹೇಗೆಂದು ಯಾಚಿಸುತ್ತ, ಅವಳ ಮಂಜಿನಂತ ನಾಲಿಗೆಯಿಂದ,ನಿನ್ನೆ ರಾತ್ರಿ ದೇಶದ ಬೆನ್ನ ಮೇಲೆ ಕಲ್ಲುಗಳಿದ್ದವುಹಳ್ಳಿ ಗಲ್ಲಗಳಿಗೆಲ್ಲ ಮಶಿ ಬಳಿದಿತ್ತು.ಬಳಿಕ ಅವರು ಧನ್ಯವಾದಗಳನು ಅರ್ಪಿಸಿದರು, ಕೈಕುಲುಕಿದರು, ಕೊಂಚ ಸುಳ್ಳಾಡಿದರುಜೂನ್ ಮತ್ತು ಜುಲೈ ಹಸಿವಿನಿಂದ ತಡೆಹಿಡಿದರು, ಹಸಿವು ಆದೀತು ಎಂದು.ನೂರರವರೆಗೆ ಎಣಿಸಿ ಒಳ್ಳೆಯ ಹುಡುಗಿ ತಲೆಬಾಗಿ ಹೊರ ಬೀಳುತ್ತಾಳೆನೂರರವರೆಗೆ ಎಣಿಸಿ ಕೆಟ್ಟ ಹುಡುಗಿ ತಲೆಬಾಗಿ ಹೊರ ಬೀಳುತ್ತಾಳೆನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ. “The Poetess Counts to 100 and Bows Out” The poetess gathers interim herbage,aged bread, ash right for the knife,herbs for the outcome and the first rites.Maybe she likes the legacy the strong ones claim,the studious group, hands free, hearts shut.Who, he or she? oathbound, bound for the future:Scions of a bitch baying so sweetly for the word, begging howto get to the saint, her mistful tongue.Last night there were stones on a nation’s back,much coal smeared on far village cheeks.But then they gave thanks, shook hands, told some lies,pulled back June and July for hunger. That there might be hunger.The good girl counts to 100 and bows out.The bad girl counts to 100 and bows out.The poetess counts to 100 and bows out.

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಕೊಂದು ಕೊಳ್ಳುವೆ ವಿಜಯಶ್ರೀ ಹಾಲಾಡಿ ಕಣ್ಣೀರು ಕೆನ್ನೆಗಿಳಿವಾಗಲೇನಗುತ್ತೇನೆ ಮಣ್ಣ ಘಮಕ್ಕೆ ಸೋತಾಗಅರಳುವುದೇ .. ಕಡಲು ಸೋಕಬೇಕೆಂದಿಲ್ಲಜೀವಕೋಶದೊಳಗಿದೆ ಅಪರಿಚಿತನೆಂದು ಬೀಗಬೇಡಮಾತು ಸುಮ್ಮನೇ ಗೋರಿ ಮೇಲೆ ಹೂ ಅರಳಿದ್ದುಲೋಕರೂಢಿ ಸಾಯುವೆನೆಂದು ಗೋಳಿಡಬೇಡಬೇಕಾದರೆ ಕೊಂದುಕೊಳ್ಳುವೆ  **************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕರಿನೆರಳು ಪ್ಯಾರಿಸುತ ಕರಿನೆರಳು ಕರಿಯ ನೆರಳು ಕಾಡುತಿತ್ತು ರಾತ್ರಿ ಹಗಲಿನಲ್ಲಿ ಹಗಲಿನಲ್ಲಿ ಸುಡು ನೆಲದ ಮೇಲೆ ರಾತ್ರಿಯಲ್ಲಿ ಕಪ್ಪು ನೆಲದಮೇಲೆ ಹೆಜ್ಜೆಗೊಂದು ಹಜ್ಜೆ ಹಾಕಿ ಅಷ್ಟು ಬೈದರೂ ಲಜ್ಜೆ ಹೊಸಕಿ ಇಣುಕುತಿತ್ತು,ಕೆಣಕುತಿತ್ತು ಬೆನ್ನ ಹಿಂದೆ ದೂಡಿದಷ್ಟು ಕಾಡುತ್ತಿತ್ತು ,ಬಾಗಿದಷ್ಟು ಬಳಕುತಿತ್ತು ಎತ್ತ ಹೋದರು ಭೂತದಂತೆ..! ದೇಗುಲಕೂ, ಆಶ್ರಮಕೂ ಬರುತಲಿತ್ತು ಕೇಳುತ್ತಿತ್ತು ಹೇಳುತ್ತಿತ್ತು ದೇವರೆದರು ನಾನು ಏಕೆ ಇವರಿಗೆ ಅಂಟು…? ನನಗೂ ಇವರಿಗೂ ಯಾವ ನಂಟು…? ಜೀವ ಇರುವ ನೀನು ಭಾವ ಮೆರೆವ ನಾನು ಜೀವಕೊಂದು ಜೀವವಿರಲು ನನಗೂ ನಿನಗೂ ಯಾಕೆ ಈ ಮಾಯದ ಗಂಟು ಊರುಕೇರಿ ಓಡುತ್ತಿತ್ತು,ನಿಲ್ಲುತ್ತಿತ್ತು ಕೇಳುತ್ತಿತ್ತು ಹೇಳುತ್ತಿತ್ತು ಜನರೆದುರು ಯಾರು ಇವನ ಗೆಳೆಯರು…? ಯಾರು ಇವನ ಬೆನ್ನು ಬಿದ್ದವರು..? ಯಾಕೆ ಇಲ್ಲ, ಇವನ ಸಲುಗೆ..? ಯಾರು ಹಾಕಿದರು ನನ್ನ ಇವನ ಬೆನ್ನಿಗೆ ಅದಕೂ ಸಾಕಾಯಿತು ಅನಿಸಿತು ನನ್ನ ಒಲುಮೆ -*******

ಕಾವ್ಯಯಾನ Read Post »

ಇತರೆ

ಹಾಸ್ಯಲೇಖನ

ನಾ ಮಾಡಿದ ಉಪ್ಪಿಟ್ಟು  ಗೋಪಿನಾಥ್ ನಾ ಮಾಡಿದ ಉಪ್ಪಿಟ್ಟು  ರೀ ಒಂದ್ ಸಲ ಸೌಟು ಹಿಡಿದು ನೋಡಿ ಗೊತ್ತಾಗುತ್ತೆ ಅಡಿಗೆ ಮಾಡುವುದು ಏನು ಮಹಾ ಅಂತಿರಲ್ಲಾ, ಮೂವತ್ತು ಅಂಕ ಗಳಿಸಿ ಸಾಕೆಂದಳು ! ನಾ ಅವಳ ಚಾಲೆಂಜ್ ಒಪ್ಪಿಕೊಂಡೆ..ಆದರೆ ಒಂದ್ ಕಂಡಿಷನ್. ನೀನು ಯಾವುದೇ ಕಾರಣಕ್ಕೂಅಡಿಗೆಮನೆಯೊಳಗೆ ‌ಬರಬಾರದು ! ಅವಳು ಖುಷಿಯಿಂದ ನಿಮ್ಮಗ್ರಹಚಾರಕ್ಕೆ ನಾನೇನು ಮಾಡಲಾದೀತೆಂದು ರೂಮು ಸೇರಿದಳು. ನಾನು ಬಹಳ ಹುಮ್ಮಸ್ಸಿನಲ್ಲಿದ್ದೆ, ಅಡಿಗೆ ಮನೆಗೆ ಹೋಗಿ ಸೌಟು ಕೈಲಿ ಹಿಡಿದು ಕೈ ಚೌಕವನ್ನು ಹೆಗಲಿಗೇರಿಸಿ ನಳಮಹರಾಜನ ಹಾಗೆ ಪೋಸ್ ಕೊಟ್ಟು ಸೆಲ್ಫೀ ತೆಗೆದುಕೊಂಡೆ..ನಾಳೆ‌ ಇವಳು ಅಲ್ಲಗೆಳದರೆ ?! ಏನು ಮಾಡುವುದು ಒಪ್ಪಿಕೊಂಡಾಗಿದೆ  T.V. ತಿರುಗಿಸಿದೆ, ಮೊದಲಿಗೆ ಕಂಡಿದ್ದು ಪಾಕಶಾಲೆಯ ಕಾರ್ಯಕ್ರಮ ಖುಷಿ ಇಂಗಿಹೋಯಿತು ಅಂದು ಭಾನುವಾರ ಬಾಡೂಟ ನಮಗೆ ಲಾಯ್ಕಲ್ಲಂತ.. ಹಾಗೆ ಎಲ್ಲ ಚಾನಲ್ಗಳ ಪಾಕ ನಿಪುಣೆಯರನ್ನು ನೆನಸಿಕೊಂಡು ಧೈರ್ಯವಾಗಿ ಮುಂದಡಿಯಿಟ್ಟೆ. ತಲೆಯಲ್ಲಿ ಅವರುಗಳು ಹೇಳಿದ್ದು ಮೆಲಕು ಹಾಕುತ್ತಾ… ‘ಮೊದಲಿಗೆ ಅಡಿಗೆ ಮನೆಗೆ ಹೋಗಬೇಕು, ಸರಿ ಅಡಿಯಿಟ್ಟೆ..ಮುಂದೆ ? ಒಲೆಗೆ ಬೆಂಕಿ ಹಚ್ಚಬೇಕು ! ಛೇ ಅಲ್ಲ, ಒಲೆಹಚ್ಚಬೇಕೂ..ಬಾಣಲೆ ಒಲೆ ಮೇಲೆ ಇಡಬೇಕು, ಆಮೇಲೆ ಮುಂದೆ ? ಅವಳು‌ರೂಮಿನಿಂದ ಬೊಬ್ಬೆ ಹೊಡೆದಳು ‘ಏನದು ಸೀದ ವಾಸನೆ ? ಬಾಣಲೆ ಸೀದಿತ್ತು ಕೈಕಾಲಾಡದೆ ಸ್ಟವ್ ಆಫ್ ಮಾಡಿದೆ, ಆ..ಈಗ ಜ್ಞಾಪಕ ಬಂತು ಎಣ್ಣೆ ಹಾಕಬೇಕು. ಹೌದು ಏನೆಣ್ಣೆ ಹಾಕುತ್ತಾರೆ ? ಸಂದೇಹ ನಿವಾರಿಸಿಕೊಳ್ಳುವ ಸಲುವಾಗಿ ‘ಲೇ.. ಎಣ್ಣೆ ಕಾಣುತ್ತಿಲ್ಲಾಂದೆ, ಸುಮ್ಮನೆ ಹೇಳಬೇಕಲ್ಲವಾ ?‌ ‘ನೀವು ಎಣ್ಣೆ ಹಾಕುವ ಸಮವಿನ್ನೂ ಇದೆ ರಾತ್ರಿಯಾಗಿಲ್ಲ ! ಆ…ಮತ್ತೆ ಕಡಲೆಕಾಯಿ ಎಣ್ಣೆ ಎರಡನೇ ಅಟ್ಟದಲ್ಲಿದೆ. ಸರಿ ಎಣ್ಣೆ ಹಾಕಿದೆ ಬಾಣಲೆಗೆ ಧಗ ಧಗ ಬೆಂಕಿ..ಬಾಣಲೆ ಅಷ್ಟು ಕಾದಿತ್ತು..’ರೀ ಮನೆಗೇ ಬೆಂಕಿ ಹಚ್ಚಿದರೇನು ? ‘ಇಲ್ಲ ಮಹರಾಯಿತಿ ಗಾಬರಿಯಾಗ ಬೇಡ ಎಂದು ಅವಳಿಗೆ ಹೇಳಿ ಹಣೆ ಮೇಲಿನ ಬೆವರನ್ನು ಒರಸಿಕೊಂಡೆ, ಹೆಚ್ಚಿಕೊಂಡ  ಈರುಳ್ಳಿ, ಹಸಿ ಮೆಣಸಿಕಾಯಿ, ಕೊತ್ತಂಬರಿ,  ಕರಿಬೇವು ಮೂರು ನಾಲ್ಕು ಬೇಳೆಗಳು ಎಲ್ಲವನ್ನು ಒಟ್ಟಿಗೆ ಹಾಕಿದೆ‌ ಚಿನಕುರಳಿ ಪಟಾಕಿ ಸದ್ದು..ಮತ್ತೆ ಏನೋ ಬಿಟ್ಟೆ ಎಂದು ನೆನಪಾಗಿ ಒಂದಿಷ್ಟು ಉಪ್ಪು ಸುರಿದೆ..ಈಗ ನೀರು ಹಾಕ ಬೇಕು ಎನಿಸಿ ನೀರು ಹಾಕಿದೆ, ಕೊತ ಕೊತ ಕುದಿಯುವಾಗ ರವೆ ಹಾಗೆನೆ..ಸ್ವಲ್ಪ ಹೊತ್ತು ತಟ್ಟೆಯನ್ನು ಮುಚ್ಚಿಡಬೇಕು. ಅಬ್ಬಾ ಎಲ್ಲಾ ಸರಿಯಾಗಿ ಮಾಡಿದೀನಿ ಎನಿಸಿ ಪರೀಕ್ಷೆ ಮುಗಿಸಿ‌ ವಿಜಯ ಧ್ವಜವನ್ನು ಹಾರಿಸಿದಷ್ಟು ಖುಷಿಯಾಗಿತ್ತು. ‘ಲೇ ಆಯಿತು ಬಂದು ನೋಡು ಎಂದು ದರ್ಪವಾಗಿ ಹೇಳಿದೆ..ಆದರೆ ನನ್ನ ಮೂಗನ್ನೇ ನಂಬದಾದೆ ಸೀದ ಬಗ್ಗಡದ ವಾಸನೆ..ಸ್ಟವ್ ಆರಿಸುವುದನ್ನೇ ಮರೆತಿದ್ದೆ, ರವೆ ಹುರಿದಿರಲಿಲ್ಲ‌.  ಇವಳು ಒಳಗೆ ಬರದೆಯೇ ಅಲ್ಲಿಂದಲೇ ಹೇಳಿದಳು ‘ಹಿತ್ತಲ ನಲ್ಲಿ ಕೆಳಗೆ‌ ಬಾಣಲೆಯಿಟ್ಟು ಜೋರಾಗಿ ನೀರು ಬಿಟ್ಟು ಬನ್ನಿ. ‘ಏನಾಯಿತೆಂದು‌ ನಾ ಕೇಳಲೇ ಇಲ್ಲ, ನಾನು ಫಸ್ಟ್‌ ಕ್ಲಾಸಲ್ಲಿ ಫೇಲಾಗಿದ್ದೆ. ಬಾಗಿಲ ಬೆಲ್ ಆಯಿತು..ಹೊರಗೆ ಹೋಟೆಲ್ ಹುಡುಗ ಪಾರಸಲ್ ಹಿಡಿದು ನಿಂತಿದ್ದ. **************************************

ಹಾಸ್ಯಲೇಖನ Read Post »

You cannot copy content of this page

Scroll to Top