ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ವಿವೇಕಾನಂದರ ಆಶಯ ಗಣೇಶಭಟ್ ಶಿರಸಿ ಸ್ವಾಮಿ ವಿವೇಕಾನಂದರ ಆಶಯಗಳು ವಾಸ್ತವವಾಗುವ ಬಗೆ…… ಪ್ರತಿವರ್ಷದಂತೆ ಈ ವರ್ಷವೂ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಅವರ ಫೋಟೊ ಇಟ್ಟು, ಹೂ ಹಾಕಿ, ಅವರ ಆದರ್ಶಗಳನ್ನು ಪಾಲಿಸಿ ಎಂದು ಭಾಷಣಗಳ ಸುರಿಮಳೆಯೂ ಆಯಿತು. ಆದರೆ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಾಸ್ತವವಾಗಿಸುವ ಬಗೆ ಹೇಗೆಂದು ಯಾವೊಬ್ಬ ಭಾಷಣಕಾರರೂ ಹೇಳಲಿಲ್ಲ. ಅವರ ಹೆಸರಿನಲ್ಲಿ ತಮ್ಮ ಸಂಘಟನೆಗಳನ್ನು ಬಲಪಡಿಸಿಕೊಳ್ಳುತ್ತಿರುವವರೂ ಸಹ ಸ್ವಾಮೀಜಿಯ ಉನ್ನತ ಆದರ್ಶಗಳನ್ನು ಭೂಮಿಗಿಳಿಸುವ ವ್ಯವಹಾರಿಕ ಚಿಂತನೆಯ ಕುರಿತಾಗಿ ಎಂದೂ ಹೇಳುವುದಿಲ್ಲ. ಯಾಕೆಂದರೆ, ವಿವೇಕಾನಂದರ ವಿಶ್ವೈಕ್ಯ ದೃಷ್ಟಿಕೋನವನ್ನು ಸಂಕುಚಿತ ರೂಪದಲ್ಲಿ ಪ್ರಸ್ತುತಪಡಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವವರೇ ಹೆಚ್ಚು. ಸ್ವಾಮಿ ವಿವೇಕಾನಂದ ಆಶಯಗಳು ಆಧ್ಯಾತ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ವ್ಯಕ್ತಿ ಮತ್ತು ಸಮಷ್ಠಿಯ ಸರ್ವತೋಮುಖ ಅಭಿವೃದ್ಧಿಯ ಕುರಿತು ಅವರು ಹೇಳುತ್ತಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ ‘ನಾವು ಬೇಕಾದಷ್ಟು ಅತ್ತಿರುವೆವು, ಇನ್ನು ಸಾಕು. ನಿಮ್ಮಕಾಲಿನ ಮೇಲೆ ನಿಂತು ಪುರುಷ ಸಿಂಹರಾಗಿ. ಪುರುಷ ಸಿಂಹರನ್ನು ಮಾಡುವ ಧರ್ಮ, ಅಂತಹ ಸಿದ್ಧಾಂತ ನಮಗಿಂದು ಬೇಕಾಗಿದೆ. ಸರ್ವತೋಮುಖವಾದ ಪುರುಷ ಸಿಂಹರನ್ನು ಮಾಡುವ ವಿದ್ಯಾಭ್ಯಾಸ ಇಂದಿನ ಅಗತ್ಯತೆ’. ಮುಂದುವರಿದು ಸ್ವಾಮೀಜಿ ಹೇಳುತ್ತಾರೆ. ‘ಗಿಳಿಯಂತೆ ಮಾತನಾಡುವುದೊಂದು ನಮ್ಮ ಬಾಳಿನ ಚಾಳಿಯಾಗಿದೆ. ಏನನ್ನೂ ಅನುಷ್ಠಾನಕ್ಕೆ ತರುವುದಿಲ್ಲ. ಶಾರೀರಿಕ ದುರ್ಬಲತೆಯೇ ಇದಕ್ಕೆ ಕಾರಣ. ಇಂತಹ ದುರ್ಬಲ ಮಿದುಳು ಏನನ್ನೂ ಸಾಧಿಸಲಾರದು. ನಾವು ಅದನ್ನು ಪುಷ್ಟಿಗೊಳಿಸಬೇಕು. ಮೊದಲು ನಮ್ಮ ಯುವಕರು ಬಲಿಷ್ಠರಾಗಬೇಕು. ಅನಂತರ ಧರ್ಮ. ನಿಮ್ಮಬಾಹುಗಳ ಮಾಂಸಖಂಡದಲ್ಲಿ ಸ್ವಲ್ಪ ಶಕ್ತಿಯಿದ್ದರೆ ನೀವು ಗೀತೆಯನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಬಲ್ಲಿರಿ’. ಹಸಿದ ಹೊಟ್ಟೆಗೆ ಧರ್ಮೋಪದೇಶ ಮಾಡುವುದನ್ನು ವಿವೇಕಾನಂದರು ಒಪ್ಪುವುದಿಲ್ಲ. ಭಾರತದ ಉದ್ದಗಲಕ್ಕೂ ಓಡಾಡಿದ, ಪ್ರಪಂಚದ ಹಲವು ದೇಶಗಳನ್ನು ನೋಡಿದ ಸ್ವಾಮೀಜಿಯವರು ಹೇಳುತ್ತಿದ್ದುದು, ‘ಶಕ್ತಿಯೇ ಪ್ರಪಂಚದ ಮಹಾ ವ್ಯಾಧಿಗೆ ದಿವ್ಯೌಷಧ. ಶ್ರೀಮಂತರ ದಬ್ಬಾಳಿಗೆಗ ತುತ್ತಾದಾಗ ದೀನರಿಗೆ ಬೇಕಾಗಿರುವುದೇ ಶಕ್ತಿ ಸಂಜೀವಿನಿ. ಜ್ಞಾನಿಗಳ ಉಪಟಳಕ್ಕೆ ತುತ್ತಾದಾಗ ಅಜ್ಞಾನಿಗಳಿಗೆ ಬೇಕಾಗಿರುವುದು ಶಕ್ತಿ ಸಂಜೀವಿನಿ’. ವಿವೇಕಾನಂದರು ಹೇಳುತ್ತಾರೆ ‘ಬಡವರ ಗೋಳಿಗೆ ಯಾರ ಹೃದಯ ರಕ್ತಸುರಿಸುವುದೋ ಅವನನ್ನು ಮಹಾತ್ಮನೆಂದು ಕರೆಯುತ್ತೇನೆ. ಇಲ್ಲದೇ ಇದ್ದರೆ ಅವನು ದುರಾತ್ಮ. ಎಲ್ಲಿಯವರೆಗೆ ಉಪವಾಸದಲ್ಲಿ, ಅಜ್ಞಾನದಲ್ಲಿ ಕೊಟ್ಯಾನುಕೋಟಿ ಭಾರತೀಯರು ನರಳುತ್ತಿರುತ್ತಾರೋ ಅಲ್ಲಿಯವರೆಗೂ , ದೀನದ ದುಡಿತದಿಂದ ಕೃತವಿದ್ಯನಾದ ಪ್ರತಿಯೊಬ್ಬ ಭಾರತೀಯನೂ ಕುಲಘಾತುಕನೆಂದು ಹೇಳುತ್ತೇನೆ’ ಸ್ವಾಮೀಜಿಯವರ ಈ ಮಾತನ್ನು ಇಂದಿನ ನೇತಾರರು, ಮಠಾಧೀಶರು, ಉದ್ಯಮಪತಿಗಳು ಗಮನಿಸಬೇಕಿದೆ. ಸಮಾಜದಲ್ಲಿ ನಡೆಯುತ್ತಿರುವ ಆರ್ಥಿಕ ಶೋಷಣೆಗೆ ನಾವು ಅನುಸರಿಸುತ್ತಿರುವ ಬಂಡವಾಳವಾದಿ ವ್ಯವಸ್ಥೆಯೇ ಕಾರಣ. ಬಂಡವಾಳಶಾಹಿಗಳಿಗೇ ಅನುಕೂಲವಾಗುವ ರೀತಿಯಲ್ಲಿ ಕಾನೂನು ರೂಪಿಸುತ್ತಿರುವ, ಹೂಡಿಕೆದಾರರಿಂದಲೇ ದೇಶದ ಉದ್ದಾರವೆಂಬಂತೆ ವರ್ತಿಸುವ ನೇತಾರರಿಗೆ ಈ ವಿಷಯ ಅರ್ಥವಾದರೂ, ಅವರ ಸ್ವಾರ್ಥ ಮನೋಭಾವದಿಂದಾಗಿ ಜನಪರ ನಿರ್ಣಯಗಳನ್ನು ಕೈಗೊಳ್ಳಲಿಲ್ಲ. ಹಿಂದಿನ ಜನ್ಮದ ಪಾಪ, ಪುಣ್ಯಗಳಿಂದಲೇ ಬಡವ, ಶ್ರೀಮಂತರಾಗುತ್ತಾರೆಂಬ ತಪ್ಪು ಕಲ್ಪನೆಯನ್ನು ಮಠಾಧೀಶರು, ಪುರೋಹಿತಶಾಹಿಗಳು ಪ್ರಚಾರ ಮಾಡಿ ಜನರನ್ನು ಅಜ್ಞಾನದ ಕೂಪಕ್ಕೆ ತಳ್ಳುತ್ತಿದ್ದಾರೆ. ದೇಶದ ಭೌಗೋಳಿಕ ಗಡಿಯ ಕುರಿತಾದ ಘೋಷಣೆಗಳೇ ದೇಶಭಕ್ತಿಯೆಂದು ಪ್ರಚಾರಮಾಡುವ ಹುಸಿ ರಾಷ್ಟ್ರಾಭಿಮಾನಿಗಳು ದೇಶವಾಸಿಗಳನ್ನು ಪ್ರೀತಿಸಲಾರದೇ ಜಾತಿ, ಮತ, ಪಂಥಗಳ ಆಧಾರದಲ್ಲಿ ದ್ವೇಷ ಹಬ್ಬಿಸಿ, ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದಾರೆ. ವಿವೇಕಾನಂದರ ಉಪನ್ಯಾಸಗಳನ್ನು ಓದಿ, ಸರಿಯಾಗಿ ಅರ್ಥ ಮಾಡಿಕೊಳ್ಳುವುದರಿಂದ ಹುಸಿ ದೇಶ ಭಕ್ತರ ಅಂದಾಭಿಮಾನಿಗಳ ಕಣ್ತೆರೆಯಬಲ್ಲದು. ಸ್ವಾಮೀಜಿ ಹೇಳುತ್ತಾರೆ, ‘ಮಗು ! ಯಾವ ದೇಶವಾಗಲಿ, ವ್ಯಕ್ತಿಯಾಗಲಿ ಮತ್ತೊಬ್ಬನನ್ನು ದ್ವೇಷಿಸಿ ಬಾಳಲಾರದು. ಮ್ಲೇಚ್ಛರೆಂಬ ಪದವನ್ನು ಕಂಡು ಹಿಡಿದು ಹೊರಗಿನವರೊಂದಿಗೆ ಸಂಪರ್ಕವನ್ನು ನಿಲ್ಲಿಸಿದ ದಿನದಿಂದಲೇ ಭಾರತದ ಭಾಗ್ಯ ಅವನತಿಗೆ ಇಳಿಯಿತು’. ಮತೀಯ ದ್ವೇಷದ ಭಾವೋನ್ಮಾದದಲ್ಲಿ ನರಳುತ್ತಿರುವವರು ಗಮನಿಸಲೇಬೇಕಾದ ಹೇಳಿಕೆ ಇದು. ಆಧ್ಯಾತ್ಮವೆಂದರೆ ವಿಕಾಸವೆಂದು ಸ್ವಾಮೀಜಿ ಹೇಳುತ್ತಿದ್ದರು. ಗುಡಿ, ಮಸೀದಿ, ಚರ್ಚುಗಳಲ್ಲೇ ಭಗವಂತನನ್ನು ಹುಡುಕುವವರಿಗಾಗಿ ಅವರು ಎಚ್ಚರಿಸಿದ ಪರಿ, ‘ಮನುಷ್ಯನು ಒಂದು ಚೈತನ್ಯ ಎಂದು ತಿಳಿಯುವ, ಅನುಭವಿಸುವ ಧೈರ್ಯ ನಮಗೆ ಬೇಕು… ನಾವೇ ಜಗದೀಶ್ವರ ಸ್ವರೂಪಿಗಳೆಂದು ತಿಳಿದು ದೇವರಿಗಾಗಿ ಅಲ್ಲಿ, ಇಲ್ಲಿ ಹುಚ್ಚರÀಂತೆ ಹುಡುಕಾಡುವುದನ್ನು ಬಿಟ್ಟು ಬಿಡುವುದು ಒಳ್ಳೆಯದು…ಹುಚ್ಚು ಹುಡುಕಾಟಗಳನ್ನು ಕೈ ಬಿಟ್ಟು ನಾಟಕದ ಪಾತ್ರಧಾರಿಯಂತೆ ಈ ವಿಶ್ವ ನಾಟಕದಲ್ಲಿ ನಿಮ್ಮ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿರಿ’. ‘ಎಲ್ಲವನ್ನೂ ಭಗವಂತನೆಂದೇ ತಿಳಿದು, ಎಲ್ಲರಲ್ಲೂ ಭಗವಂತನನ್ನೇ ಕಾಣುತ್ತಾ ನಿಮ್ಮ ಕರ್ತವ್ಯಗಳನ್ನು ಮಾಡಬೇಕು.. ಎಲ್ಲದರಲ್ಲೂ ಭಗವಂತನೇ ತುಂಬಿರುವಾಗ ಆತನನ್ನು ಪ್ರತ್ಯೇಕವಾಗಿ ಕಾಣಲು ನಾವೆಲ್ಲಿಗೆ ಹೋಗಬೇಕು?… ಪ್ರತಿಯೊಬ್ಬ ಜೀವಿಯಲ್ಲೂ ದೇವನಿದ್ದಾನೆ.. ಈ ಜೀವ ಸೇವೆಯೇ ದೇವ ಸೇವೆ.” ಆಧ್ಯಾತ್ಮದ ಬದುಕೇ ಮಾನವ ಧರ್ಮವೆಂಬುದು ವಿವೇಕಾನಂದರ ಅಭಿಪ್ರಾಯವಾಗಿತ್ತು. ಅವರ ಉಪನ್ಯಾಸಗಳಲ್ಲಿ ಅವರು ಬಳಸುತ್ತಿದ್ದ ಧರ್ಮ ಶಬ್ದದ ಅರ್ಥವನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಆದರೆ, ಸ್ವಾರ್ಥಿಗಳು, ಧರ್ಮ ಶಬ್ದವನ್ನು ಮತ ಅರ್ಥಾತ್ ನಂಬಿಕೆ, ಆಚರಣೆಗಳಿಗೇ ಸೀಮಿತಗೊಳಿಸಿ ವ್ಯಾಖ್ಯಾನಿಸುತ್ತಿದ್ದಾರೆ. ಬದುಕಿನ ಸರ್ವಸ್ತರಗಳನ್ನು, ದೃಷ್ಟಿಕೋನವನ್ನು ಆಧ್ಯಾತ್ಮೀಕರಣಗೊಳಿಸಬೇಕೆಂದು ಸ್ವಾಮೀಜಿ ಬಯಸಿದ್ದರು. ‘ರಾಜಕೀಯ ಮತ್ತು ಸಾಮಾಜಿಕ ವಿಷಯಗಳಿಂದ ಭರತಖಂಡವನ್ನು ತುಂಬುವುದಕ್ಕಿಂತ ಮುಂಚೆ ಆಧ್ಯಾತ್ಮಿಕ ಭಾವನೆಯ ಮಳೆಗರೆಯಿರಿ.. ಮಠಗಳಿಂದ , ಕಾನನಗಳಿಂದ, ತಮಗೆ ಮೀಸಲಾಗಿವೆ ಎಂದು ಭಾವಿಸಿದ ಕೆಲವು ಜನರಿಂದ ಆಧ್ಯಾತ್ಮ ಜ್ಞಾನವನ್ನು ಹೊರಗೆ ತಂದು ಎಲ್ಲರಿಗೂ ಪ್ರಚಾರ ಮಾಡಬೇಕು ಎಂಬುದು ಅವರ ಹೇಳಿಕೆ. ಆರ್ಥಿಕ ಕ್ಷೇತ್ರವೇ ಇರಲಿ, ಸಾಮಾಜಿಕ ಕ್ಷೇತ್ರವೇ ಆಗಿರಲಿ. ಎಲ್ಲವೂ ಆಧ್ಯಾತ್ಮೀಕರಣಗೊಳ್ಳಬೇಕೆಂಬುದು ಅಂದರೆ ಎಲ್ಲವೂ ಪರಮಾತ್ಮನ ಅಭಿವ್ಯಕ್ತಿ ಎಂಬ ಭಾವನೆ ಮೂಡುವಂತಾಗಬೇಕು. ಸ್ವಾಮಿ ವಿವೇಕಾನಂದರ ಆಶಯ. ಸಮಾಜ ಸುಧಾರಣೆ ರಾಜಕೀಯವನ್ನೂ ಅವುಗಳ ಮೂಲಕ ಹೇಗೆ ನಮ್ಮ ಆಧ್ಯಾತ್ಮಿಕ ಸಂಪತ್ತನ್ನು ಹೆಚ್ಚಿಸಬೇಕೆಂಬುದನ್ನು ಲಕ್ಷದಲ್ಲಿಟ್ಟುಕೊಂಡು ಬೋಧಿಸಬೇಕೆಂದು ಅವರು ಹೇಳುತ್ತಿದ್ದರು. ‘ಸಮಾಜದ ಸರ್ವ ಸದಸ್ಯರಿಗೂ ಸಂಪತ್ತು, ವಿದ್ಯಾಭ್ಯಾಸ ಅಥವಾ ಜ್ಞಾನ ಸಂಪಾದನೆಗೆ ಏಕ ಪ್ರಕಾರದ ಅವಕಾಶಗಳಿರಬೇಕು. ಎಲ್ಲ ವಿಷಯಗಳಲ್ಲಿ ಸ್ವಾತಂತ್ರ್ಯವಿರಬೇಕು. ಎಲ್ಲರೂ ಮೋಕ್ಷದ ಕಡೆಗೆ ನಡೆಯುವಂತಾಗಬೇಕು’ ಎನ್ನುತ್ತಿದ್ದರು ಸ್ವಾಮೀಜಿ. ‘ಮನುಷ್ಯರಿಗೆ ದೈಹಿಕವಾಗಿ ಮತ್ತು ವಸ್ತು ಮೂಲಕವಾಗಿ ನೆರವು ನೀಡಿ ಅವರ ಭೌತಿಕ ಅವಶ್ಯಕತೆಗಳನ್ನು ಪರಿಹರಿಸುವುದು ನಿಜವಾಗಿಯೂ ದೊಡ್ಡ ಕೆಲಸ’À.. ನಮ್ಮ ಎಲ್ಲಾ ರೀತಿಯ ಕ್ರಿಯೆಗಳಿಗೂ ಆಧ್ಯಾತ್ಮಿಕತೆಯೇ ಭದ್ರವಾದ ನೈಜ ತಳಪಾಯ…ಆಧ್ಯಾತ್ಮಿಕ ಶಕ್ತಿಯಿಲ್ಲದ ಮನುಷ್ಯನ ಭೌತಿಕ ಅವಶ್ಯಕತೆಗಳು ಸರಿಯಾಗಿ ಪೂರೈಸಲ್ಪಡಲಾರವು’ ಎಂಬುದು ಸ್ವಾಮೀಜಿಯವರ ಸ್ಪಷ್ಟ ಅಭಿಪ್ರಾಯ. ವಿವೇಕಾನಂದರು ವೇದಾಂತದ ಒಣ ಉಪದೇಶವನ್ನು ನೀಡುತ್ತಿರಲಿಲ್ಲ. ಕ್ರಾಂತಿಕಾರಿ ವಿಚಾರಗಳನ್ನು ಹೊಂದಿದ್ದರು. ‘ಮೋಕ್ಷವನ್ನು ಪಡೆಯುವುದು ಪ್ರತಿಯೋರ್ವ ಮನುಷ್ಯನ ಹಕ್ಕು. ಈ ವಿಕಾಸ ಪಥದ ಸ್ವಾತಂತ್ರ್ಯವನ್ನು ತಡೆಯುವ ಎಲ್ಲ ರೀತಿಯ ಸಾಮಾಜಿಕ ಕಟ್ಟುಪಾಡುಗಳು ಹಾನಿಕಾರಕ. ಅಂತಹ ಕಟ್ಟುಪಾಡುಗಳನ್ನು ಆದಷ್ಟು ಬೇಗ ಕಿತ್ತೆಸೆಯಬೇಕು. ವಿಕಾಸ ಪಥದಲ್ಲಿ ಮುನ್ನಡೆಯಲು ಸಹಕಾರಿಯಾದ ಎಲ್ಲ ರೀತಿಯ ಸಾಮಾಜಿಕ ವ್ಯವಸ್ಥೆಗಳನ್ನೂ, ಸಂಸ್ಥೆಗಳನ್ನೂ ಬಲಪಡಿಸಬೇಕು’ ಎನ್ನುವುದು ಅವರ ವಿಚಾರಧಾರೆ. ವಿವೇಕಾನಂದರು ಯಾವುದೇ ನಿರ್ದಿಷ್ಟವಾದ ಆರ್ಥಿಕ ಸಿದ್ಧಾಂತವನ್ನು ಅಥವಾ ಆರ್ಥಿಕ ನೀತಿಯನ್ನು ನೀಡಲಿಲ್ಲವಾದರೂ ಅವರ ಆಶಯಗಳನ್ನು ಆಧ್ಯಾತ್ಮಿಕ ಸಮಾಜವಾದವೆಂದು ಹೇಳುತ್ತಾರೆ. ಇಂದು ಪ್ರಚಲಿತವಿರುವ ಆರ್ಥಿಕ ಚಿಂತನೆಗಳು ಮತ್ತು ವಾದಗಳು ವಿವೇಕಾನಂದರ ಆಶಯಗಳನ್ನು ಪೂರ್ತಿಗೊಳಿಸುವ ಸಾಮಥ್ರ್ಯ ಹೊಂದಿವೆಯೇ ಎಂದು ಗಮನಿಸಬೇಕಿದೆ. ಕಮ್ಯುನಿಸಂ ವಿಚಾರಧಾರೆಯಲ್ಲಿ ಆಧ್ಯಾತ್ಮಿಕತೆಗೆ ಸ್ಥಾನವೇ ಇಲ್ಲ. ಮಾನವನನ್ನು ಹೆಚ್ಚು ಕಡಿಮೆ ಆರ್ಥಿಕ ಪಶುವೆಂಬ ಗ್ರಹಿಕೆಯ ಆಧಾರದ ಮೇಲೆ ರೂಪಿತವಾದ ಸಿದ್ಧಾಂತವದು. ಮಾನವನ ಭೌತಿಕ ಅಸ್ತಿತ್ವವನ್ನೇ ಸರ್ವಸ್ವವೆಂದು ಪರಿಗಣಿಸಿದ ಕಮ್ಯುನಿಸಂ , ಮಾನವರ ಕನಿಷ್ಠ ಅಗತ್ಯತೆಗಳನ್ನೂ ಪೂರೈಸಲಾರದೇ ವಿಫಲಗೊಂಡು, ತಿರಸ್ಕøತಗೊಂಡಿರುವುದು ಇತಿಹಾಸ. ಬಂಡವಾಳವಾದಿ ಚಿಂತನೆಗಳ ಆಧಾರವೇ ಮಾನವನ ಸ್ವಾರ್ಥ ಮತ್ತು ಲಾಭಗಳಿಕೆಯ ಹೆಚ್ಚಳ. ಆಧ್ಯಾತ್ಮವನ್ನು ಮತ, ಪಂಥಗಳ ಚೌಕಟ್ಟಿಗೆ ಬಂಧಿಸಿ, ಸ್ವಾರ್ಥ ಸಾಧನೆಯಲ್ಲಿ ಬೆಂಬಲಿಸುವ ವಿಚಾರಧಾರೆಯಿದು. ಮಾನವನ ಸೃಷ್ಟಿಯಲ್ಲದ, ಎಲ್ಲರಿಗೂ ಸಲ್ಲಬೇಕಾದ ಭೌತಿಕ ಸಂಪತ್ತನ್ನು ಕೆಲವರದೇ ಹಕ್ಕು ಎಂದು ಸಾಧಿಸುವ ಚಿಂತನೆಯ ಬಂಡವಾಳವಾದ ಆಧ್ಯಾತ್ಮಿಕ ಬದುಕಿಗೆ ಬಹುದೂರ. ಜನರಲ್ಲಿ ಸುಖಲೋಲುಪತೆಯನ್ನು ಹೆಚ್ಚಿಸಿ ಉನ್ನತ ಆದರ್ಶಗಳಿಂದ ವಿಮುಖರನ್ನಾಗಿಸಿ, ಪ್ರತಿಭಟನೆ ಮನೋಭಾವವನ್ನೇ ಚಿವುಟಿ ಹಾಕುವ, ಬಂಡವಾಳವಾದೀ ವ್ಯವಸ್ಥೆಯಿಂದ ಆಧ್ಯಾತ್ಮಿಕ ಸ್ವಾತಂತ್ರ್ಯದ ಹರಣವಾಗುತ್ತಿರುವುದು ಜನಸಾಮಾನ್ಯರ ಗಮನಕ್ಕೂ ಬರುತ್ತಿಲ್ಲ. ಸಂಪತ್ತಿನ ಗಳಿಕೆ ಮತ್ತು ಸಂಗ್ರಹಣೆಯೇ ಬದುಕಿನ ಪರಮ ಧ್ಯೇಯವೆಂಬ ಮಿಥ್ಯೆಯನ್ನೇ ಪ್ರಚಾರ ಮಾಡಿ ನಂಬಿಸಿ, ಮಾನವರ ಸೂಕ್ಷ್ಮ ಅಸ್ತಿತ್ವದ ಅಭಿವ್ಯಕ್ತಿಗಳಿಗೆ ಅವಕಾಶ ನೀಡದ ಬಂಡವಾಳವಾದ ವಾಸ್ತವದಲ್ಲಿ ಮಾನವ ವಿರೋಧಿ. ಬಂಡವಾಳಶಾಹಿಗಳು ನಡೆಸುವ ಮತೀಯ ಆಚರಣೆ, ನೀಡುವ ಧನ, ದೇಣಿಗೆಗಳು ತಾವು ಮಾಡುತ್ತಿರುವ ಶೋಷಣೆಯನ್ನು ಮುಚ್ಚಿಕೊಂಡು, ಜನರನ್ನು ದಾರಿ ತಪ್ಪಿಸುವ ಕುತಂತ್ರಗಳು ಜನರನ್ನು ಮತೀಯ ಉನ್ಮಾದಕ್ಕೊಳಪಡಿಸಿ ಪರಸ್ಪರರು ಹೊಡೆದಾಡಿಕೊಂಡಿರುವಂತೆ ಮಾಡಲು ರಾಜಕಾರಣಿಗಳಿಗೆ ಧನ ಬೆಂಬಲ ನೀಡುತ್ತಿರುವವರೂ ಇದೇ ಬಂಡವಾಳಶಾಹಿಗಳು. ಬುದ್ಧಿಜೀವಿಗಳನ್ನು ಹಣದಿಂದ ಖರೀದಿಸಿ, ತಮ್ಮ ಕಾರ್ಯವೈಖರಿಗೆ, ಬೌದ್ಧಿಕ ಸಮರ್ಥನೆ ಪಡೆದು ಜನರು ತಾವು ಒಳಗಾಗಿರುವ ಶೋಷಣೆಯ ಅರಿವಾಗದಂತೆ ಮಾಡುತ್ತಿರುವ ಬಂಡವಾಳವಾದದಿಂದ ಸಮಾಜದ ಆಧ್ಯಾತ್ಮಿಕ ಪ್ರಗತಿಗೆ ಮಾರಕವಾಗುತ್ತಿದೆ. ಇನ್ನುಳಿದಂತೆ ಸಮಾಜವಾದ, ಮಿಶ್ರ ಆರ್ಥಿಕನೀತಿ ಮುಂತಾದವು ಎಡಬಿಡಂಗಿ ಚಿಂತನೆಗಳು. ಇವೆಲ್ಲವೂ ಬಂಡವಾಳವಾದಿ ಚಿಂತನೆಯ ವಿವಿಧ ರೂಪಗಳು ಮಾತ್ರ. ಈ ಎಲ್ಲಾ ಸಿದ್ಧಾಂತಗಳು ಪ್ರತಿಪಾದಿಸುವದು ಜನಾಧಿಕಾರ ಮೊಟಕುಗೊಳಿಸುವ ಕೇಂದ್ರೀಕೃತ ಅರ್ಥವ್ಯವಸ್ಥೆಯನ್ನು. ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶವಿರಬೇಕು. ದುಡಿಮೆಯ ಪ್ರತಿಫಲದಿಂದ ತನ್ನ ಹಾಗೂ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳನ್ನು ಪೂರೈಸಿಕೊಳ್ಳುವ ಅವಕಾಶವಿರಲೇಬೇಕು. ಇದು ಸಾಧ್ಯವಾಗುವುದು ಸಹಕಾರಿ ರಂಗದ ಜನಾಧಿಕಾರದ ವಿಕೇಂದ್ರೀಕೃತ ಅರ್ಥನೀತಿಯಿಂದ ಮಾತ್ರ. ಅಂತಹ ಆರ್ಥಿಕ ಸಿದ್ಧಾಂತವೇ ಶ್ರೀ ಪ್ರಭಾತ್ ರಂಜನ್ ಸರ್ಕಾರರಿಂದ 1959ರಲ್ಲಿ ಪ್ರತಿಪಾದಿಸಲ್ಪಟ್ಟ ಪ್ರಗತಿಶೀಲ ಉಪಯೋಗ ತತ್ವ – ಸಂಕ್ಷಿಪ್ತದಲ್ಲಿ ಪ್ರಉತ. ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳ ಪೂರೈಕೆಯನ್ನು ಖರೀದಿ ಶಕ್ತಿಯ ಮೂಲಕ ನೀಡಲೇಬೇಕೆಂಬ ಉದ್ದೇಶವೆಂದರೆ ಪ್ರತಿಯೋರ್ವನೂ/ಳೂ ತನ್ನ ಜೀವನದ ಗುರಿಯಾದ ಪೂರ್ಣತ್ವವನ್ನು ಪಡೆಯಲು ಅವಕಾಶ ನೀಡುವದಾಗಿದೆÀಯೆಂದು ಪ್ರಉತ ಹೇಳುತ್ತಿದೆ. ಪ್ರಉತದ ಆಧಾರವೇ ಆಧ್ಯಾತ್ಮಿಕತೆ. ಪ್ರಉತವೆಂದರೆ ಬರೀ ವಿಚಾರಧಾರೆ ಅಥವಾ ಒಣ ಸಿದ್ಧಾಂತವಲ್ಲ. ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಸ್ಪಷ್ಟ ಚಿತ್ರಣದೊಂದಿಗೆ ಅದನ್ನು ಕಾರ್ಯಾನುಷ್ಠಾನಗೊಳಿಸುವ ವಿಧಿ, ವಿಧಾನಗಳನ್ನು ಅದು ಒಳಗೊಂಡಿದೆ. ‘ಪವಿತ್ರ ಭಾವನೆಯಿಂದ ಜ್ವಲಿಸುತ್ತಾ, ಜಗದೀಶ್ವರನಲ್ಲಿ ಅಚಲ ಶೃದ್ಧೆಯಿಂದ, ಕಲ್ಲಿನ ಕೋಟೆಯಂತೆ ದೃಢರಾಗಿ, ಶೋಷಿತರ , ಪತಿತರ, ದೀನದರಿದ್ರರ ಬಗೆಗೆ ದಯಾ ಭಾವನೆಯಿಂದ , ಸಿಂಹದಂತೆ ಧೈರ್ಯಸ್ಥರಾಗಿ ಸಾವಿರಾರು ಮಂದಿ ಸ್ತ್ರೀ ಪುರುಷರು ಸರ್ವಮೋಕ್ಷದ, ಸರ್ವ ಸಹಾಯದ ಸಿದ್ಧಾಂತವನ್ನು, ಸರ್ವೋಧ್ಧಾರದ, ಸರ್ವಸಮಾನತೆಯ ವಿಚಾರಗಳನ್ನು ಸಾರುತ್ತಾ ಈ ದೇಶದ ಉದ್ದಗಲಗಳಲ್ಲಿ ಸಂಚಾರ ಮಾಡಲಿದ್ದಾರೆ’ ಎಂಬ ವಿವೇಕಾನಂದರ ಆಶಯವನ್ನು ಸಾಕಾರಗೊಳಿಸುವ ಶಕ್ತಿ ಪ್ರಉತ ಸಿದ್ಧಾಂತಕ್ಕಿರುವುದನ್ನು ನಾನು ಮನಗೊಂಡಿದ್ದೇನೆ. ***********

ಪ್ರಸ್ತುತ Read Post »

ಕಾವ್ಯಯಾನ

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ನಿನ್ನ ಕಣ್ಣೋಟ ತಾಕಿ ಇಲ್ಲಿ ಬೆಳಕು ಹರಿದಿದೆ ನಿನ್ನ ಕರಸ್ಪರ್ಶದಲ್ಲಿ ಪುಲಕ ಹೊನಲಾಗಿದೆ ಮಿಂಚು ಗೂಳಿ ಮೈಯನಿಡೀ ಉತ್ತು ಬಿತ್ತಿದೆ ಫಸಲು ಹೇಗಿರಬಹುದು ಕಾತರ ಕುಡಿಯಾಗಿದೆ ಎಂತಹ ಕರಿ ದುಗುಡ ಮಡುವಾಗಿತ್ತಿಲ್ಲಿ ನಿನ್ನ ಕೈ ಸೋಕಿದ್ದೇ ತಡ ಎಲ್ಲ ಬದಲಾಗಿದೆ ಸುಧೆಯನುಂಡವರು ಮಾತ್ರ ಅಮರರೇನು ನೀನು ತಂದ ಅನುರಾಗಕ್ಕೆ ಸಾವೆಲ್ಲಿದೆ ಹಿಗ್ಗನ್ನು ಬಿತ್ತಿ ಸುಗ್ಗಿ ಮಾಡುವ ರೀತಿ ನಿನ್ನದೇ ಸೌದಾಮಿನಿ ನೀನು ಈಗ ಕಣಜ ತುಂಬಿದೆ ************

ಗಝಲ್ ಸಂಗಾತಿ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅರಿವು ಅವ್ಯಕ್ತ ಎಲ್ಲಾ ಮಕ್ಕಳ ರಿಸಲ್ಟ್ ಗಳು ಒಂದಾದಮೇಲೊಂದು ಮೆಸೇಜ್ ಗಳಾಗಿ ನನ್ನ ಬಳಿ ಬರುತ್ತಿವೆ, ಕೆಲವು ಮೆಸೇಜ್ ಗಳು, ಕೆಲವು ಮುಖಗಳು, ಪ್ರಸನ್ನತೆಯ ಅಲೆಗಳು, ಸ್ವೀಟಿನ ಡಬ್ಬಗಳು, ಕೃತಜ್ಞತೆಗಳು,ಕಥೆಗಳು ಒಂದಾದಮೇಲೊಂದು ಸಿಹಿ ಸುದ್ದಿಗಳು ಎಳೆ ಎಳೆಯಾಗಿ ಹರಿದುಬಂದರೆ ನನಗೆ ಮಾತ್ರ ಮನಸ್ಸಿನಲ್ಲೊಂದು ಆತಂಕ! ಮುಖದಲ್ಲಿ ನಗುವಿದ್ದರೂ ಬಾಯಿ ತುಂಬಾ ಆಶೀರ್ವಾದಗಳಿದ್ದರೂ ಅವಳ ರಿಸಲ್ಟ್ ಏನಾಯ್ತು?! ಇನ್ನೂ ವಿಷಯ ಬರಲಿಲ್ಲವಲ್ಲ ಎಂಬುದು ಮಾತ್ರ ಮನಸಲ್ಲಿ ಬೇರೂರಿತ್ತು. ಬರುವ ಮಕ್ಕಳನ್ನೆಲ್ಲಾ ಕೇಳುವುದು “ಅವಳ ರಿಸಲ್ಟ್ ಏನಾಯ್ತು?” “ಯಾರಿಗಾದರೂ ಸಿಕ್ಕಿ ದ್ಲಾ.?”. “ಅವಳ ರಿಜಿಸ್ಟರ್ ನಂಬರ್ ಏನು……?” ಮಧ್ಯಾಹ್ನದೊತ್ತಿಗೆ ಅವಳಮ್ಮ ಫೋನ್ ಮಾಡಿದರು, ಕೆಲವೊಂದರಲ್ಲಿ ಬಹಳ ಒಳ್ಳೆ ಅಂಕ ಬಂದಿದೆ ಕನ್ನಡ ಮಾತ್ರ ಉಳಿದಿದೆ, ಧನ್ಯವಾದಗಳ ಒಂದು ಅಲೆ. ನನ್ನ ಮನದಲ್ಲಿ ಎಲ್ಲಿಲ್ಲದ ಸಂತೋಷ ಸದ್ಯ ಈ ಮಗು ಪಾರಾಗಿಬಿಟ್ಟಳು. ನಾನು ಮನೆಯೊಳಗೆ ಹೋಗಿ ಎರಡು ದ್ರಾಕ್ಷಿಗಳನ್ನು ಬಾಯಿಗೆ ಹಾಕಿ ಕೃಷ್ಣನಿಗೆ ಒಂದು ನಮಸ್ಕಾರ ಹಾಕಿ ಅಲ್ಲಿದ್ದ ಮಕ್ಕಳಿಗೆ ಪಾಠ ಮಾಡುವ ಕೆಲಸ ಮುಂದುವರಿಸಿದೆ. ಅವಳು ನನ್ನ ಬಳಿ ಬಂದ ದಿನ ಇನ್ನೂ ಹಸನಾಗಿ ಮನದಲ್ಲಿ ನನಗಿದೆ. 10ನೇ ತರಗತಿಗೆ ನನ್ನ ಬಳಿ ಕಲಿಯಲು ಬಂದವಳು ಒಂದೇ ಒಂದು ಸಾಲು ಓದಲೂ ಬಹಳ ಕಷ್ಟ.. ಅತೀ ಮುಗ್ದೆ. ತುಂಬಾ ಭಯ. ಮುಖದಲ್ಲಿ ನಗು ಇದ್ದರೂ ಕಣ್ಣಲ್ಲಿ ಏನೋ ಭಯ. ಮಾತೇ ಆಡುತ್ತಿರಲಿಲ್ಲ. ‘ಹೃದಯವನ್ನೇ ಯಾರೋ ಹಿಸುಕಿ ಬಿಟ್ಟಿದ್ದಾರೆ’ ಅನ್ನಿಸಿಬಿಟ್ಟಿತ್ತು.. ಓದಲು ಬರುವುದಿಲ್ಲ, ಬರೆಯುವ ಶೈಲಿ ಅರ್ಥವೇ ಆಗುತ್ತಿಲ್ಲ, ಹೆದರಿಕೆ ಮಿತಿಮೀರಿದ್ದು…. ಏನು ಮಾಡಲಿ ಈ ಹುಡುಗಿಗೆ ಎಂದು ಆಲೋಚಿಸುತ್ತಿದ್ದೆ. ದಿನಾ ನನ್ನ ಬಳಿ ಕೂಡಿಸಿಕೊಂಡು ಅವಳಲ್ಲಿ ಏನು ಕತೆಗಳಿವೆ ಎಂದು ವಿಶ್ಲೇಷಣೆ ಮಾಡುವುದು ನನ್ನ ಕೆಲಸವಾಗಿತ್ತು. ನನಗೆ ಸಹಕಾರ ಕೊಡಲು ಇನ್ನೂ ಮೂರು ಅದೇ ಮನೋಭಾವನೆ ಇರುವ ಹುಡುಗಿಯರು ನನ್ನ ಬಳಿ ಬರುತ್ತಿದ್ದರು ಅವರ ಸಹಾಯದಿಂದ ಹುಡುಗಿಯ ಎಲ್ಲಾ ಲಕ್ಷಣಗಳನ್ನು ಪದರಪದರವಾಗಿ ಬಿಚ್ಚತೊಡಗಿದೆ. ಆಶ್ಚರ್ಯವೆಂದರೆ ಓದಲೇ ಬರದ ಹುಡುಗಿ ಅದು ಹೇಗೆ ಯಾವ ಮೆಂಟಲ್ ಎಬಿಲಿಟಿ ಪುಸ್ತಕದಲ್ಲಿಯೂ ವಿವರಣೆ ಇಲ್ಲದೆ ಹಾಗೆ ಬರೆಯುತ್ತಿದ್ದಾಳೆ. ನನಗೆ ಒಂದು ಕುತೂಹಲ… ಓದಲು ಬರದವಳು ಹೇಗೆ ಬರೆಯುತ್ತಾಳೆ?! ಕೇಳಿದರೆ ಹೇಳುತ್ತಾಳೆ…. “ನನಗೆ ಬೇರೆ ಶಿಕ್ಷಕಿಯೊಬ್ಬಳು ಬೆತ್ತದಲ್ಲಿ ಬಿಡುತ್ತಿದ್ದಳು, ನನ್ನನ್ನು ಗಮನಿಸುತ್ತಲೇ ಇರಲಿಲ್ಲ…ಜಗತ್ತಿನ ಭಯಕ್ಕೆ ನಾನು ಹೇಗೋ ಬರೆಯುವುದನ್ನು ಕಲಿತೆ” ಎನ್ನುತ್ತಾಳೆ. ತನ್ನ ಮೊದಲ ಕ್ಲಾಸಿನಿಂದ ಹತ್ತನೇ ಕ್ಲಾಸಿನವರೆಗೆ ಒಂದು ಹುಡುಗಿಗೆ …..ನಿನಗೆ ಓದಲು ಬರೆಯಲು ಬರುವುದಿಲ್ಲ ಆಗೋದಿಲ್ಲ ಎಂದರೆ ಯಾರಿಗೂ ಹೇಳಿಕೊಳ್ಳಲಾಗದ ಎಷ್ಟು ಕಸಿವಿಸಿ ಪಟ್ಟಿರಬಹುದು. ನಮ್ಮ ಶೈಕ್ಷಣಿಕ ಸಮಾಜದಲ್ಲಿ ಮಕ್ಕಳು ಓದುತ್ತಿಲ್ಲ, ಬರೆಯುತ್ತಿಲ್ಲ, ಅಂಕಗಳಿಸುತ್ತಿಲ್ಲ, ಪಾಠ ಕೇಳುತ್ತಿಲ್ಲ, ಓದುತ್ತಿಲ್ಲ, ಬರೆಯುತ್ತಿಲ್ಲ, ಇತ್ಯಾದಿ, ಇತ್ಯಾದಿ…… ಕಾರಣಗಳನ್ನು ಕೊಡುವವರೇ ಹೊರತು ಕಾರಣದ ಮೂಲ ಸಮಸ್ಯೆಯನ್ನು ಹುಡುಕುವವರು ಬಹಳ ವಿರಳ . ತಂದೆ-ತಾಯಿಯೂ ಅಸಹಾಯಕರಂತೆ ಒದ್ದಾಡುವರು. ಇಲ್ಲವಾದರೆ ಮಕ್ಕಳನ್ನು ಶಿಕ್ಷಿಸುವರು……. ಈ ಹುಡುಗಿಗೆ ಇದ್ದ ಸಮಸ್ಯೆ ‘ಅಕ್ಷರ ಜ್ಞಾನವೇ ಇಲ್ಲ’. ಅಕ್ಷರಗಳನ್ನು ಚಿತ್ರಗಳಂತೆ ಜೋಡಿಸಿ ಜೋಡಿಸಿ ಬರೆಯುತ್ತಿದ್ದಳು ಅಕ್ಷರ ಜ್ಞಾನವಿಲ್ಲದವರು ಚಿತ್ರಗಳಂತೆ ಜೋಡಿಸಿ ಅಂಕಗಳನ್ನು ಹೇಗೆ ತೆಗೆಯಬಲ್ಲರು….. ಬರುತ್ತಿದ್ದದ್ದು ಮೂರು-ನಾಲ್ಕು ಅಂಕ. ಆದರೂ ನನಗೆ ಅದು ಬಹಳ ಹೆಮ್ಮೆಯ ವಿಷಯ. ಅಕ್ಷರ ಜ್ಞಾನವಿಲ್ಲದೆ ಅಂಕ ಪಡೆದವಳು, ಅಕ್ಷರಗಳು ಬಂದಮೇಲೆ ಅಕ್ಷರಗಳನ್ನು ಜೋಡಿಸಿ ಪದಗಳನ್ನು ಜೋಡಿಸಿ ಸ್ವಚ್ಛವಾಗಿ ವಾಕ್ಯ ಮಾಡಲಿಕ್ಕೆ ಕಲಿತರೆ ಅವಳು ಇನ್ನಷ್ಟು ಒಳ್ಳೆಯ ಅಂಕ ಪಡೆಯಬಹುದು…… ಒಳ್ಳೆ ಚಿತ್ರಗಾರಳು ಹಾಗಾಗಿ ಬದುಕುಳಿದಳು, ಕೂಡುವುದು- ಕಳೆಯುವುದು- ಗುಣಿಸುವುದು- ಬಾಗಿಸೋದು, ಅದೆಲ್ಲ ಆರಾಮಾಗಿ ಮಾಡ್ತಿದ್ಲು. ಹಾಗಾಗಿ, ಈ ಜನಗಳ ಮಧ್ಯದಲ್ಲಿ ಹೇಗೋ ಒಂದು ಹಂತದವರೆಗೆ ಜಸ್ಟ್ ಪಾಸ್ ಆಗಿದ್ಳು. ನನ್ನ ಮುಂದೆ ಒಂದಲ್ಲ ಹಲವಾರು ಚಾಲೆಂಜ್ ಗಳು…. ಅವಳಲ್ಲಿದ್ದ ಭಯ ಹೋಗಿಸಬೇಕು, ಅಷ್ಟೇ ಅಲ್ಲ ಹತ್ತಾರು ಜನರ ಎದುರು ಧೈರ್ಯವಾಗಿ ಸ್ಪಂದಿಸುವ ವ್ಯಕ್ತಿತ್ವ ರೂಪಿಸಬೇಕು, ಅವಳು ಸರಿಯಾದ ರೀತಿಯಲ್ಲಿ ಓದುವುದು ಬರೆಯುವುದು ಕಲಿಯಬೇಕು, ಮುಂದಿನ ಭವಿಷ್ಯಕ್ಕೆ ಒಂದು ದಾರಿ ಮಾಡಬೇಕು, ಅವಳ ನಗುವಿನ ಹಿಂದೆ ಇದ್ದ ನೋವುಗಳನ್ನು ಶಮನ ಮಾಡಬೇಕು. “ಮನಸ್ಸು ಮೆದುಳಿನ ಸರಿಯಾದ ಸ್ಪಂದನ ವಿದ್ದರೆ ಸಮಸ್ಯೆಗಳ ಅರಿವು ಅದರ ಶಮನಕ್ಕೆ ನಾಂದಿ ಯಾಗುವುದು.”( ಮುಂದುವರೆಯುವುದು …….) ***************

ಅವ್ಯಕ್ತಳ ಅಂಗಳದಿಂದ Read Post »

ಕಾವ್ಯಯಾನ

ಕಾವ್ಯಯಾನ

ಒಲವಿನಾಟ ಮಧುವಸ್ತ್ರದ್ ಕೃಷ್ಣಾ..ಒಲವಿನಾಟವ ಆಡು ಬಾ ಕಾದಿರುವಳು ಬೆಡಗಿ.. ಹೃದಯ ಕಸಿದು ಮನವ ಬೆಸೆದು ಎಲ್ಲಿರುವೆ ನೀ ಅಡಗಿ.. ಕರ್ಪೂರಗೊಂಬೆ ರೂಪಸಿ ರಂಭೆ ಕಾಯುತಿಹಳು ಸೊರಗಿ.. ಸೋಕಿದೊಡೆ ನಿನ್ನ ಪ್ರೇಮಜ್ವಾಲೆ ನೀರಾಗುವಳು ಕರಗಿ.. ಸನಿಹ ನೀನಿರೆ ಮೆಲ್ಲುಸಿರಾಯ್ತು ಪ್ರಣಯ ಕವನ‌.. ಸೂಸಿತು ತಂಗಾಳಿ ಹಾಡುತಲಿ ಒಲವಿನ ಸವಿಗಾನ.. ತರುಲತೆ ತೂಗಿಬಾಗಿ ನೀಡಿಹವು ಪ್ರೇಮ ಸಿಂಚನ‌‌.. ವನದೇವಿ ನಕ್ಕು ಹಾರೈಸಿಹಳು ನಮ್ಮ ಶುಭಮಿಲನ.. ತನುಮನ ಕಾತರದಿ ಕಾದಿಹವು ನಿನ್ನಾಗಮನದ ಕ್ಷಣ.. ಹೊಳೆದಿಹ ಕೆಂದಾವರೆ ಮೊಗಕೆ ಮುತ್ತಿನಾಭರಣ.. ಬಳುಕುವ ದೇಹಸಿರಿಗೆ ನಿನ್ನ ಬಾಹುಗಳಾವರಣ‌.. ನಮ್ಮೀ ಒಲವ ಬಂಧನ ಜನ್ಮ ಜನ್ಮಾಂತರದ ಋಣ.. ********* ಮ

ಕಾವ್ಯಯಾನ Read Post »

ಕಾವ್ಯಯಾನ

ಅನುವಾದ ಸಂಗಾತಿ

“ಗಂಡು ಪ್ರೇಮದಲ್ಲಿದ್ದಾಗ” ಸಿರಿಯನ್ ಕವಿ: ನಿಜಾರ್ ಕಬ್ಬಾನಿ ಕನ್ನಡಕ್ಕೆ:ಕಮಲಾಕರ ಕಡವೆ ಗಂಡಸು ಪ್ರೇಮದಲ್ಲಿದ್ದಾಗಹಳೆಯ ಶಬ್ದಗಳ ಹೇಗೆ ಉಪಯೋಗಿಸಿಯಾನು?ಪ್ರೇಮಿಯ ಅಪೇಕ್ಷೆಯಲ್ಲಿಇರುವ ಹೆಣ್ಣುಭಾಷಾತಜ್ಞರು, ವ್ಯಾಕರಣತಜ್ಞರುಗಳಜೊತೆ ಮಲಗ ಬೇಕೇನು? ನಾನು ಏನೂ ಹೇಳಲಿಲ್ಲನನ್ನ ಪ್ರೀತಿಯ ಹೆಣ್ಣಿಗೆ.ಬದಲಿಗೆ, ಪ್ರೇಮಕ್ಕೆ ಇರುವ ವಿಶೇಷಣಗಳನ್ನುಸೂಟಕೇಸಿನಲ್ಲಿ ತುಂಬಿಕೊಂಡುಎಲ್ಲ ಭಾಷೆಗಳಿಂದ ದೂರ ಓಡಿಹೋದೆ. ಮೂಲ: WHEN A MAN IS IN LOVE” When a man is in lovehow can he use old words?Should a womandesiring her loverlie down withgrammarians and linguists? I said nothingto the woman I lovedbut gatheredlove’s adjectives into a suitcaseand fled from all languages. *********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ನೆನಪಿನ ಮೀನು..! ಡಾ.ಜಯಪ್ಪ ಹೊನ್ನಾಳಿ(ಜಯಕವಿ) ನಿನ್ನ ನೆನಪಿನ ಮೀನು ಎಷ್ಟೊಂದು ಬಣ್ಣದಲಿ ಆಡುತಿವೆ ಎದೆಗೊಳದ ತಿಳಿಯಾಳದಲ್ಲಿ..! ಕನಸ ರೆಪ್ಪೆಯ ತೆರೆದು ಕನವರಿಕೆಯಲೆ ನೆರೆದು ಮಳೆಬಿಲ್ಲ ಮಿಂದಂತೆ ಮಧು ಮೇಳದಲ್ಲಿ..! ಹೊಸಿಲ ಚುಂಬಿಸುತಿಹುದು ಹೊಂಬಿಸಿಲಿನೊಡಗೂಡಿ ಹೊಸತೊಂದು ಹಾರೈಕೆ ಹಳೆ ನೋವ ಕೊಂದು..! ನಗುವ ನಂದನದೊಲವು ತಂಗಾಳಿ ತೊಟ್ಟಿಲಲಿ ಪರಿಮಳದಿ ತಾ ತುಂಬಿ ನವ ಭಾವ ತಂದು..! ಬಣಗುಡುವ ಬದುಕಲ್ಲಿ ನೀ ಬಂದು ನಕ್ಕಂದು ಮರಳಿ ಬಂದಿತು ಮನಕೆ ಮತ್ತೆ ಮಲೆನಾಡು..! ಜೀವವಾಯಿತು ಜಿಂಕೆ ರೆಕ್ಕೆ ಬಿಚ್ಚಿತು ನವಿಲು ನಲಿದು ಉಲಿಯಿತು ಕುಕಿಲು ಬಂತು ಹೊಸ ಹಾಡು.. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನೆಯುವೆ ಕವಿತೆಯಲಿ ತ್ರಿವೇಣಿ ಜಿ.ಹೆಚ್. ಮಾತು ಮಾತಿಗೂ ಕೋಪ ಮನಸು ಮುನಿದ ರೂಪ.. ಈಗ ಕೇಳು! ರಾಧೆಯ ಮನದಲಿ ಪರಿತಾಪ… ಸರಿಸು ಮೌನವ ಕೊಳಲ ಆಲಾಪದಲಿ. ಆದರೀಗ, ರಾಧೆ ಒಲವ ಹಾಸಿ ನಿನ್ನ ಅರಸಿ ಭಜಿಸಿ ಪೂಜಿಪಳು… ಮರಳಿ ಬಿಡು ಬಿದಿರ ಕೊಳಲು ನುಡಿಸಲು.. ಹುಸಿ ಮುನಿಸು ತಣಿಸಲು ಮಾತು ಮೌನ ಬೆಸೆದು ಒಳಗೆ.. ಶರಣಾಗಲಿ ಮನದೊಳಗೆ. ಮಾಧವ, ಬಾರದೆ ಸರಿಯದಿರು… ಬರೆದು ನೆನೆಯುವೆ ಕವಿತೆಯಲಿ. **********

ಕಾವ್ಯಯಾನ Read Post »

ಕವಿತೆ ಕಾರ್ನರ್

ದುರಿತ ಕಾಲದ ದನಿ

ರಣ ಹಸಿವಿನಿಂದ! ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರುಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರುಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರುಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರುಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರುಇದೀಗ ಧರ್ಮಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ ತರಿದ ತಲೆಗಳಭೋಗಿಸಿದ ಯೋನಿಗಳಕಚ್ಚಿದ ಮೊಲೆಗಳಕಲಸಿಹಾಕಿದ ಭ್ರೂಣಗಳನಿಖರ ಅಂಕಿಅಂಶಗಳಿಗಾಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ ಪ್ರತಿ ಮನುಷ್ಯನಿಗೂಇರಬಹುದಾದ ಮೃಗದ ಮುಖವಾಡವಕಳಚಲೆತ್ನಿಸಿದಷ್ಟೂ ಗೊಂದಲವಾಗುವುದು ಖಚಿತನೋಡು ಬರೆಯುವಾಗಲೂ ಇದನುಕೆಕ್ಕರಿಸಿ ನೋಡುತಿದೆ ಮೃಗವೊಂದುರಣಹಸಿವಿನಿಂದ!****************

ದುರಿತ ಕಾಲದ ದನಿ Read Post »

ಕಾವ್ಯಯಾನ

ಕಾವ್ಯಯಾನ

ನೆನೆವರಾರು ನಿನ್ನ ಮಧು ವಸ್ತ್ರದ್ ಮುಂಬಯಿ ಓ ಅಂಬಿಗಾ..ಬೇಗ ಬೇಗನೆ ಮುನ್ನೆಡೆಸು ದೋಣಿಯ.. ತೀರದಾಚೆಯ ಹಳ್ಳಿ ಹೊಲದಲಿ‌ ಕಾಯುತಿಹನು ನನ್ನಿನಿಯ.. ಅಂಬಿಗಣ್ಣಾ ಶಾಲೆಯ ಸಮಯ ಆಯ್ತು ನಡೆ ಬೇಗ.. ಎಲವೋ ಅಂಬಿಗ ದಡದಾಚೆಯ ಜನರ ಓಟುಬೇಕು ನಡೆ ಈಗ.. ತಮ್ಮ ತಮ್ಮದೇ ಲೋಕದಲಿ ವಿಹರಿಸುತಿಹರು ಎಲ್ಲರು.. ಹೊಳೆಯ ದಾಟಿದ ನಂತರ ಬಡ ಅಂಬಿಗನ ನೆನೆವರಾರು.. ಬಿಸಿಲು ಮಳೆ ಗುಡುಗುಸಿಡಿಲು ಕತ್ತಲಾದರೆ ಸುತ್ತಲು.. ಈಜುಬಾರದವರಿಗೆಲ್ಲ ಆಧಾರ ನೀನೆ ಗುರಿ ಮುಟ್ಟಲು.. ಶಾಂತಚಿತ್ತದಿ ಹೊಣೆಯ ಹೊತ್ತಿದೆ ನಿನ್ನಯ ಬಾಗಿದ ಹೆಗಲು.. ಕಾಯಕ ಯೋಗಿಯತ್ತ ಗಮನ ಕೊಡಲುವೇಳೆಯಿಲ್ಲ ಯಾರಲು.. ತಂತ್ರಜ್ಞಾನ ಬೆಳೆದಂತೆ ದೋಣಿ, ಅಂಬಿಗನ ಮರೆವರೆಲ್ಲ.. ಭವ ಸಾಗರ ದಾಟಲು ಕಾಣದ ದೇವರ ಬೇಡುವರೆಲ್ಲ.. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿ ಸಾಗರದಲಿ ಅವ್ಯಕ್ತ ಕಂಡೆನಾ ಸಿರಿಯ ಅಯ್ಸಿರಿಯ ಮಾಲೆ , ಮುದುಡಿದ ಮನದ ಅಂಗಳ ಅರಳುತಲಿ… ಹಚ್ಚಹಸಿರ ಹಾಸಿಗೆಯ ಮೇಲೆ , ಹೊಸದಾಗಿ ಹಾಸಿದ ಬಿಳಿ ಮೋಡಗಳ ಸಾಲೆ. ಅಲ್ಲೊಂದು ಇಲ್ಲೊಂದು ನಿಂತಿರುವ ತಲೆಗಳು, ಕಣ್ಣಾಮುಚ್ಚಾಲೆ ಆಡುತ್ತಾ ನಲಿವ ಕಿರಣಗಳು. ||೧|| ಕೈ ಚಾಚಿ ,ಆಲಂಗಿಸಿ ಕರೆಯುತಲಿ, ಹೇಳಿತೇನೋ ಪಿಸು ಮಾತುಗಳಲಿ, ಎಲ್ಲೆಲ್ಲೂ ನಾನಿರುವೆ ಹಂಚುತ ಸವಿಗಳ, ಪ್ರೀತಿ, ನೆಮ್ಮದಿ, ಸುಖಸಂತೋಷಗಳ. ||೨|| ನನ್ನಲ್ಲಿ ನೀನಿರಲು, ನಿನ್ನಲ್ಲಿ ನಾನಿರಲು ಮಿಡಿಯುವ ಕಂಗಳು, ಮನದಾಳದ ಮಾತುಗಳು, ಪೃಕ್ರತಿಯ ಪ್ರಕೃತಿ ನನ್ನೊಳಗೆ ಹರಿದಿರಲು ಶಾಂತವಾಯಿತು ಪುಟ್ಟ ಮಗುವಿನಂತೆ ಕರುಳು.||೩|| ಹರಸುತ ಹಾರೈಸುತ ಹಗಲಿರುಳು ಕಳೆವೆನು ಓಂದಾಗುತಾ ಪ್ರೀತಿಯ ಸಾಗರದಲಿ….. *******

ಕಾವ್ಯಯಾನ Read Post »

You cannot copy content of this page

Scroll to Top