ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನುವಾದ ಸಂಗಾತಿ

“ಗಂಡು ಪ್ರೇಮದಲ್ಲಿದ್ದಾಗ” ಸಿರಿಯನ್ ಕವಿ: ನಿಜಾರ್ ಕಬ್ಬಾನಿ ಕನ್ನಡಕ್ಕೆ:ಕಮಲಾಕರ ಕಡವೆ ಗಂಡಸು ಪ್ರೇಮದಲ್ಲಿದ್ದಾಗಹಳೆಯ ಶಬ್ದಗಳ ಹೇಗೆ ಉಪಯೋಗಿಸಿಯಾನು?ಪ್ರೇಮಿಯ ಅಪೇಕ್ಷೆಯಲ್ಲಿಇರುವ ಹೆಣ್ಣುಭಾಷಾತಜ್ಞರು, ವ್ಯಾಕರಣತಜ್ಞರುಗಳಜೊತೆ ಮಲಗ ಬೇಕೇನು? ನಾನು ಏನೂ ಹೇಳಲಿಲ್ಲನನ್ನ ಪ್ರೀತಿಯ ಹೆಣ್ಣಿಗೆ.ಬದಲಿಗೆ, ಪ್ರೇಮಕ್ಕೆ ಇರುವ ವಿಶೇಷಣಗಳನ್ನುಸೂಟಕೇಸಿನಲ್ಲಿ ತುಂಬಿಕೊಂಡುಎಲ್ಲ ಭಾಷೆಗಳಿಂದ ದೂರ ಓಡಿಹೋದೆ. ಮೂಲ: WHEN A MAN IS IN LOVE” When a man is in lovehow can he use old words?Should a womandesiring her loverlie down withgrammarians and linguists? I said nothingto the woman I lovedbut gatheredlove’s adjectives into a suitcaseand fled from all languages. *********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ನೆನಪಿನ ಮೀನು..! ಡಾ.ಜಯಪ್ಪ ಹೊನ್ನಾಳಿ(ಜಯಕವಿ) ನಿನ್ನ ನೆನಪಿನ ಮೀನು ಎಷ್ಟೊಂದು ಬಣ್ಣದಲಿ ಆಡುತಿವೆ ಎದೆಗೊಳದ ತಿಳಿಯಾಳದಲ್ಲಿ..! ಕನಸ ರೆಪ್ಪೆಯ ತೆರೆದು ಕನವರಿಕೆಯಲೆ ನೆರೆದು ಮಳೆಬಿಲ್ಲ ಮಿಂದಂತೆ ಮಧು ಮೇಳದಲ್ಲಿ..! ಹೊಸಿಲ ಚುಂಬಿಸುತಿಹುದು ಹೊಂಬಿಸಿಲಿನೊಡಗೂಡಿ ಹೊಸತೊಂದು ಹಾರೈಕೆ ಹಳೆ ನೋವ ಕೊಂದು..! ನಗುವ ನಂದನದೊಲವು ತಂಗಾಳಿ ತೊಟ್ಟಿಲಲಿ ಪರಿಮಳದಿ ತಾ ತುಂಬಿ ನವ ಭಾವ ತಂದು..! ಬಣಗುಡುವ ಬದುಕಲ್ಲಿ ನೀ ಬಂದು ನಕ್ಕಂದು ಮರಳಿ ಬಂದಿತು ಮನಕೆ ಮತ್ತೆ ಮಲೆನಾಡು..! ಜೀವವಾಯಿತು ಜಿಂಕೆ ರೆಕ್ಕೆ ಬಿಚ್ಚಿತು ನವಿಲು ನಲಿದು ಉಲಿಯಿತು ಕುಕಿಲು ಬಂತು ಹೊಸ ಹಾಡು.. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನೆಯುವೆ ಕವಿತೆಯಲಿ ತ್ರಿವೇಣಿ ಜಿ.ಹೆಚ್. ಮಾತು ಮಾತಿಗೂ ಕೋಪ ಮನಸು ಮುನಿದ ರೂಪ.. ಈಗ ಕೇಳು! ರಾಧೆಯ ಮನದಲಿ ಪರಿತಾಪ… ಸರಿಸು ಮೌನವ ಕೊಳಲ ಆಲಾಪದಲಿ. ಆದರೀಗ, ರಾಧೆ ಒಲವ ಹಾಸಿ ನಿನ್ನ ಅರಸಿ ಭಜಿಸಿ ಪೂಜಿಪಳು… ಮರಳಿ ಬಿಡು ಬಿದಿರ ಕೊಳಲು ನುಡಿಸಲು.. ಹುಸಿ ಮುನಿಸು ತಣಿಸಲು ಮಾತು ಮೌನ ಬೆಸೆದು ಒಳಗೆ.. ಶರಣಾಗಲಿ ಮನದೊಳಗೆ. ಮಾಧವ, ಬಾರದೆ ಸರಿಯದಿರು… ಬರೆದು ನೆನೆಯುವೆ ಕವಿತೆಯಲಿ. **********

ಕಾವ್ಯಯಾನ Read Post »

You cannot copy content of this page

Scroll to Top