ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಮಹಮೂದ್ ದಾರ್ವೀಶ್ ಪ್ಯಾಲೆಸ್ತಿನ್ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಈಗ, ನೀನು ಎಚ್ಚರಗೊಂಡಂತೆ…” ಈಗ, ನೀನು ಎಚ್ಚರಗೊಂಡಂತೆ, ಹಂಸದ ಅಂತಿಮ ನೃತ್ಯವ ನೆನಪಿಸಿಕೊ.ಕನಸಲ್ಲಿ ದೇವಕನ್ಯೆಯರೊಡನೆ ನೃತ್ಯ ಮಾಡಿದೆಯೇನು?ಗುಲಾಬಿಯ ನಿರಂತರ ಬೆಳಕಿಂದ ದಹಿಸಿದ ಚಿಟ್ಟೆ ನಿನ್ನನ್ನು ಬೆಳಗಿತೇನು?ನಿನ್ನೆದುರು ಸ್ಪಷ್ಟ ರೂಪದಲ್ಲಿ ಅವತರಿಸಿದ ಫೀನಿಕ್ಸ ಹೆಸರ ಹಿಡಿದು ನಿನ್ನ ಕರೆಯಿತೇನು?ನಿನ್ನ ಪ್ರಿಯತಮೆಯ ಬೆರಳುಗಳ ಮೂಲಕ ಬೆಳಗಾಗುವುದ ಕಂಡೆಯೇನು?ನಿನ್ನ ಕೈಯಿಂದ ಕನಸನ್ನು ಮುಟ್ಟಿದೆಯಾ ಅಥವಾನಿನ್ನದೇ ಅನುಪಸ್ಥಿತಿ ಥಟ್ಟನೆ ಅರಿವಿಗೆ ಬಂದುಅದರ ಪಾಡಿಗೆ ಕನಸುತಿರಲು ಬಿಟ್ಟೆಯಾ?ಕನಸುಗಾರರು ಕನಸುಗಳ ತೊರೆಯುವುದಿಲ್ಲಕನಸಿನೊಳಗಿನ ತಮ್ಮ ಜೀವನವನ್ನು ಅವರು ಧಗಧಗನೆ ಮುಂದುವರಿಸುವರುನಿನ್ನ ಕನಸನ್ನು ಒಂದು ಜಾಗದಲ್ಲಿ ಹೇಗೆ ಬಾಳಿದೆ ಹೇಳು,ನೀನು ಯಾರೆಂದು ನಾನು ಹೇಳುವೆ. ಈಗ ನೀನು ಎಚ್ಚರಗೊಂಡಂತೆನಿನ್ನ ಕನಸಿಗೆ ನೀನೇನಾದರೂ ಅಪಚಾರ ಮಾಡಿದ್ದರೆ, ನೆನಪಿಸಿಕೊ.ಮಾಡಿದ್ದು ಹೌದಾದರೆ ಹಂಸದ ಅಂತಿಮ ನೃತ್ಯವ ನೆನಪಿಸಿಕೊ. ********************

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಮಾತು-2 ಡಾ.ಗೋವಿಂದ ಹೆಗಡೆ ಮಾತು ಮಾತನಾಡುವಾಗ ಹೀಗೇನಾದರೂ ಕಿಟಕಿ ತೆರೆದುಬಿಟ್ಟಿದ್ದರೆ ಎಂಥ ಅನಾಹುತವಾಗುತ್ತಿತ್ತು ತೂರಿ ಹೋಗಿ ಕೆಳಗೆ ರಸ್ತೆಯಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವ ಚಿಣ್ಣರ ರಾಕೆಟ್ ಮೇಲೆ ಬಿದ್ದು ಆ ಕಡೆ ಈ ಕಡೆ ಹಾರಿ ಬಿದ್ದು ಹಾರಿ ಬಿದ್ದು ಹೇಗೆ ಇಳಿಯಬಹುದಿತ್ತು ಕುರ್ಚಿ ಹಾಕಿ ಮುಗುಮ್ಮಾಗಿ ಕೂತು ಈ ಮಾಗಿಯ ಇಳಿ ಹೊತ್ತು ತೆರೆದು ಕೂತು ಮಾತಿನ ಲೋಕ ಎಂಥ ವಿಚಿತ್ರ ಈ ಮಾತಿನದು ಮಾತು ಮಾತಾಗಲು ಕಂಠ ನಾಲಗೆ ತುಟಿ ಅಷ್ಟೇ ಸಾಲದು ಕಿವಿಯೂ ಬೇಕು ಮೆದುಳಿಂದ ಕೇಳಿಸಿಕೊಳ್ಳುತ್ತಾರೆ ಅವರು ಕೆಲವರು ಮಾತ್ರ ಒಡಲಿಂದ ಮಾತು ಮಾತ್ರ ಮರಳುತ್ತದೆ ಆಡಿದ ಮರುಕ್ಷಣ ಮೌನಕ್ಕೆ ಗೂಡಿಗೆ ಮರಳುವ ಹಕ್ಕಿ ಮತ್ತೆ ಎದ್ದಾಗ ಅದು ಅದೇ ಮೌನವೇ ಮಾತು ಅದೇನೇ ಬಣ್ಣ ಬೆಳಕು ಆಡಲು ಬೇಕು ಕತ್ತಲ ಭಿತ್ತಿ ಮಾತಿಗೆ ಮೌನ ಬೆಳೆ ಬೆಳೆದಂತೆಲ್ಲಾ ಅದು ಕಡಲಿಂದ ಆವಿ ಎದ್ದು ಮೋಡವಾಗಿ ಮಳೆ ಸುರಿದು ಮತ್ತೆ ಕಡಲನು ಕೂಡಿ ತಾಸು ತಾಸು ಸನಿಹವಿದ್ದೂ ಮಾತೇ ಆಡದ ಉಲ್ಲಾಸ ತನ್ನ ನಗೆಯಿಂದಲೇ ಎಷ್ಟೋ ನುಡಿದಂತೆ ಥಟ್ಟನೆ ಎದ್ದು ಹೊರಟೇ ಹೋದಾಗಲೂ ಉಳಿದೇ ಇರುವಂತೆ ಪರಿಮಳ- ಮಾತಿಲ್ಲದೆ. ಮೌನದಲ್ಲಿ ನಿರುಮ್ಮಳತೆಯನ್ನು ಶಬ್ದದಲ್ಲಿ ನಿರರ್ಥಕತೆಯನ್ನು ಹುಡುಕಿ ಹೊರಟಾಗಲೂ ಅದು ಇದ್ದೇ ಇರುತ್ತದೆ ಕಾಗೆ ಕಾ ಎಂದರೂ ಎನ್ನದಿದ್ದರೂ ಕಂಠವನ್ನು ಅದುಮಿ ಹಿಡಿದಾಗಲೂ ಕಿಟಕಿ ತೆಗೆದಾಗಲೂ ಮುಚ್ಚಿದಾಗಲೂ ಅಲ್ಲಿ ರಾಕೆಟ್ ಮೇಲೆ ಆ ಕಡೆ ಈ ಕಡೆ ಆಡುತ್ತ ********

ಕಾವ್ಯಯಾನ Read Post »

You cannot copy content of this page

Scroll to Top