ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಪ್ರಶ್ನೋತ್ತರ ರತ್ನನಂದಿನಿ (ಲತಾ ಆಚಾರ್ಯ) ಪ್ರೀತಿ ಅಂದರೇನು ಕೇಳಿದಳು ಅವಳು ಉತ್ತರಿಸದೆ ನಾನು ಸೊಸೆಯ ಕಡೆಗೊಮ್ಮೆ ಕೈಯ ತೋರಿಸುತ ಮುಗುಳ್ನಗೆಯ ಬೀರಿದೆ ಅರ್ಥವಾಗಿರಬೇಕು ಈಗ  ಆಕೆಗೆ  ಅಮ್ಮ ಮಗುವಿಗೆ ತುತ್ತು ಉಣ್ಣಿಸುತ್ತಿದ್ದಳು. ಸ್ನೇಹವೆಂದರೇನು ಮತ್ತೊಂದು ಪ್ರಶ್ನೆ ಈಗಲೂ ನಾನು ಮೌನ ದಿಟ್ಟಿಸಿದಳು ನನ್ನ  ಗೆಳೆಯನೋರ್ವನು ಬಂದು ಹೇಗಿರುವೆ ಎಂದನು ಮತ್ತದೇ ಅಸೌಖ್ಯ ತೋರಿದರೆ ಹೆದರದಿರು ನಾನಿರುವೆ ಜೊತೆಯಲ್ಲಿ ಎಂದಾಗ ಆಕೆ ಮೌನವಾಗಿದ್ದಳು. ಬೆಸುಗೆ ಎಂದರೇನು ಕೇಳಿದಳು ಈ ಬಾರಿ ಏನು ಹೇಳಲಿ ನಾನು ಮಾತು ಬಾರದು ನನಗೆ ಅವಳ ಗಲ್ಲವನು ಹಿಡಿದೆತ್ತಿ ಚುಂಬಿಸುತ ಬಾಹು ಬಂಧನದಲ್ಲಿ ಆಲಿಂಗಿಸಿದೆ  ಏನು ಅರ್ಥವಾಯಿತೋ ಅವಳು ತುಸು ನಕ್ಕಳು. ಕರುಣೆ ಎಂದರೇನು ಮಗದೊಂದು ಪ್ರಶ್ನೆ ಉತ್ತರಿಸಲಾರೆ ಎಂದವಳು ತಿಳಿದಿದ್ದಳು ಕಾಲು ಮುರಿದಿಹ ನಾಯಿಮರಿಯೊಂದನ್ನು ಮಗರಾಯ ಎತ್ತಿ ತರುತ್ತಿರುವುದನ್ನು ಕಿಟಿಕಿಯಿಂದಲೆ ತೋರಿಸಿದೆ ಓಹೋ ಎಂದು ತಲೆಯಾಡಿಸಿದಳು. ಇನ್ನೇನೋ ಪ್ರಶ್ನೆ ಕೇಳುವವಳಿದ್ದಳು ಹೊಟ್ಟೆಯೊಳಗೇನೋ ನೋವು ಯಾರೋ ತಿವಿದಂತೆ ನರಳಿದೆನು ಹೊರಳಾಡಿ ಮುಖವ ಕಿವುಚಿದೆನು ಅಮ್ಮ ಮಗನಲ್ಲಿ ಪಿಸುಗುಟ್ಟಿದಳು ಆಗ ಗೆಳೆಯನಿಗೂ ಕರೆ ಹೋಗಿ ಆತ ಬಂದಿದ್ದನು. ಅವಳೇಕೋ ಈಗ ಮೌನ ತಾಳಿದ್ದಳು ದವಾಖಾನೆಯಲಿ ಮಲಗಿದ್ದ ನನ್ನನ್ನು ದಿಟ್ಟಿಸುತ ಕೇಳಿದಳು ಮುತ್ತೈದೆ ಭಾಗ್ಯವನು ಕೊಡುವಿರೇನು ಪ್ರಶ್ನೆಗುತ್ತರಿಸದೆಯೇ ಮೊದಲ ಬಾರಿಗೆ ನಾನು  ಸೋತು ಹೋಗಿರುವಾಗ ಯಮರಾಯ ಸನಿಹದಲೆ ನಿಂತಿದ್ದನು *******************************

ಕಾವ್ಯಯಾನ Read Post »

ಇತರೆ

ಭಾಷೆ

ಮರಳಿ ಮರಳಿ ಬರಲಿದೆ  ರಾಜ್ಯೋತ್ಸವ…… ಗಣೇಶ  ಭಟ್ಟ ಶಿರಸಿ ಪ್ರತಿ ವರ್ಷವೂ ನವೆಂಬರ್  ಮೊದಲನೇ ತಾರೀಕಿಗೆ  ಕನ್ನಡಿಗರಿಗೆ  ಸಂಭ್ರಮ. ಕನ್ನಡ ಭಾಷಿಕ  ಪ್ರದೇಶಗಳೆಲ್ಲವೂ ಸೇರಿ ಒಂದೇ ರಾಜ್ಯವಾದ  ದಿನ- ಕನ್ನಡದ ಹಬ್ಬವನ್ನು  ಅದ್ಧೂರಿಯಾಗಿ  ಆಚರಿಸುವ  ಹೊಸ ಹೊಸ  ವಿಧಾನಗಳನ್ನು  ಕನ್ನಡ  ಪ್ರೇಮಿಗಳು ಆವಿಷ್ಕರಿಸುತ್ತಿದ್ದಾರೆ.  ಕಿಲೋ ಮೀಟರ್‌ಗಳಷ್ಟು  ಉದ್ದದ ಕನ್ನಡ ಧ್ವಜದ ಮೆರವಣಿಗೆ , ಕನ್ನಡ ಪರ ಹಾಡುಗಳ  ಹಿನ್ನೆಲೆಯಲ್ಲಿ  ಕುಣಿತ, ಸ್ತಬ್ಧ ಚಿತ್ರಗಳ ಮೆರವಣಿಗೆ  ಇತ್ಯಾದಿ ಇತ್ಯಾದಿ…  ಆದರೆ  ಕನ್ನಡಿಗರ ಪಾಡು ಅಮಾಯಕತೆ, ಬಡತನ, ಶೋಷಣೆ,   ನಿರುದ್ಯೋಗಗಳ ಅದೇ ಹಳೇ ಹಾಡು. ಕನ್ನಡವನ್ನು ಉಳಿಸಿ, ಬೆಳೆಸುವ  ಕುರಿತು  ಚಿಂತನಾ ಗೋಷ್ಠಿಗಳು,  ಚರ್ಚೆಗಳು ನಡೆದು ಅಬ್ಬರದ ಹೇಳಿಕೆಗಳು ಬಿಡುಗಡೆಯಾಗುತ್ತವೆ.  ತಾವು  ಕನ್ನಡ ಭಾಷೆಗೆ ಉಪಕಾರ ಮಾಡುತ್ತಿದ್ದೇವೆಂಬ ಮನೋಭಾವ ಹೊಂದಿದವರು ತಮ್ಮಿಂದಲೇ ಕನ್ನಡದ ಉಳಿವು, ಉದ್ದಾರವೆಂದು  ತೋರಿಸಿಕೊಳ್ಳುತ್ತಾರೆ.    ಆದರೆ ನಮ್ಮಿಂದ  ಕನ್ನಡವಲ್ಲ, ಕನ್ನಡದಿಂದ  ನಮ್ಮ  ಅಸ್ಮಿತೆ,  ಅಸ್ತಿತ್ವ, ಉಳಿವು ಎಂಬ ಸತ್ಯದ  ಅರಿವು ಹಲವರಿಗೆ  ಇಲ್ಲವಾಗಿದೆ.  ನಾವು ಫಲಕಗಳಲ್ಲಿ  ಕನ್ನಡವನ್ನು  ಬಳಸಲಿ ಅಥವಾ ಬಳಸದೇ ಇರಲಿ, ಸರ್ಕಾರಿ ಕಛೇರಿಗಳಲ್ಲಿ  ಕನ್ನಡದ ಬಳಕೆ ಆಗಲಿ ಅಥವಾ ಆಗದೇ ಇರಲಿ ; ಕನ್ನಡ   ಮಾಧ್ಯಮದ  ಶಿಕ್ಷಣ  ಇರಲಿ ಅಥವಾ ಇಲ್ಲದಿರಲಿ; ಏನೇ ಆದರೂ  ಕನ್ನಡ ಉಳಿದೇ  ಉಳಿಯುತ್ತದೆ. ಬಳಕೆಯ ಭಾಷೆಯಾಗಿರುವ  ಬದಲಿಗೆ  ಗ್ರಂಥಸ್ಥ ಭಾಷೆಯಾಗಿ  ಉಳಿದೇ ಉಳಿಯುತ್ತದೆ. ಕನ್ನಡದ  ಬಳಕೆ ನಿಂತು ಹೋದರೆ  ಇಡೀ ಕನ್ನಡ  ಸಮುದಾಯ ತನ್ನ ಅಸ್ತಿತ್ವ ಕಳೆದುಕೊಂಡು ಗುಲಾಮಗಿರಿಗೆ  ತಳ್ಳಲ್ಪಡುತ್ತದೆ ಮತ್ತು ನಿರಂತರ ಶೋಷಣೆಗೆ  ತುತ್ತಾಗುತ್ತದೆ ಎಂಬ  ವಾಸ್ತವದ  ಅರಿವಾದಾಗ ಮಾತ್ರ ಕನ್ನಡ  ರಾಜ್ಯೋತ್ಸವಕ್ಕೆ  ಅರ್ಥ ಬರುತ್ತದೆ.    ಭೌಗೋಳಿಕ  ವೈಶಿಷ್ಟ್ಯಗಳು, ಪರಿಸರ-ಪ್ರಾಕೃತಿಕ ವೈವಿದ್ಯತೆಗಳಿಂದಾಗಿ ಮಾನವರ ರೂಪ,ಆಕಾರÀಗಳು ಭಿನ್ನವಾಗಿ ರೂಪುಗೊಂಡಿತು. ಅದೇ ವಿಧದಲ್ಲಿ  ಭಾಷೆಗಳೂ ಭೌಗೋಳಿಕವಾಗಿ ವಿಕಾಸಗೊಂಡವು.  ಇದರಿಂದಾಗಿ ಜಗತ್ತಿನಲ್ಲಿ  ವಿವಿಧ ಭಾಷೆಗಳು ಅಸ್ತಿತ್ವಕ್ಕೆ ಬಂದವು. ಇವುಗಳಲ್ಲಿ  ಯಾವುದೂ ಮೇಲಲ್ಲ ಅಥವಾ ಕೀಳಲ್ಲ.  ಆದರೆ ಆ ಭಾಷಿಕ  ಸಮುದಾಯದ  ಆಂತರಿಕ ಭಾವನೆಗಳ ಅಭಿವ್ಯಕ್ತಿಗೆ  ಅಲ್ಲಿಯದೇ ಭಾಷೆಯ ಬಳಕೆಯಾಗಿ, ಅವರಲ್ಲಿ  ಆತ್ಮವಿಶ್ವಾಸ ಮೂಡಿಸಿ,   ಒಂದು ಸಮುದಾಯವಾಗಿ ಬಾಳಲು ಸಹಾಯಕವಾಯಿತು.  ಕನ್ನಡಿಗರ   ವೈಶಿಷ್ಟ್ಯಪೂರ್ಣ ಅಸ್ತಿತ್ವಕ್ಕೆ  ಕನ್ನಡವೇ ಕಾರಣ. ಭಾಷಾ ಶಾಸ್ತ್ರಜ್ಞರು ಹೇಳುವಂತೆ  ತೆಲಗು ಮತ್ತು ಕನ್ನಡ  ಅತಿ ಹತ್ತಿರದ ಭಾಷೆಗಳು.  ಆದರೆ  ಕನ್ನಡಿಗರು  ಮತ್ತು ತೆಲುಗು  ಭಾಷಿಕರ  ಚಿಂತನಾ ಕ್ರಮ, ಜೀವನ ವಿಧಾನ , ನಂಬಿಕೆಗಳು, ಸಾಮಾಜಿಕ  ವ್ಯವಸ್ಥೆಗಳಲ್ಲಿ ಸಾಕಷ್ಟು  ಭಿನ್ನತೆಯನ್ನು ಗುರ್ತಿಸಬಹುದು.    ಯಾವುದೇ ಪ್ರದೇಶದ  ಜನರನ್ನು  ಒಂದುಗೂಡಿಸಲು ಅಲ್ಲಿಯ  ಭಾಷೆ ಸಹಕಾರಿ.  ಕನ್ನಡ ಭಾಷಿಕರ  ಸಮುದಾಯವನ್ನು  ಒಂದುಗೂಡಿಸಲು ಕನ್ನಡವೇ ಬೇಕು.  ಆದರೆ  ನಮ್ಮ  ಭಾಷಾ ಬಾಂಧವ್ಯಕ್ಕಿಂತ  ಹೆಚ್ಚಾಗಿ ಜಾತಿ, ಮತ,  ಪಂಥಗಳ  ಸಂಬಂಧಗಳೇ ಮೇಲುಗೈ ಸಾಧಿಸುತ್ತಿವೆ. ಈ ಅನಿಷ್ಟಕಾರಿ  ಪ್ರವೃತ್ತಿ ಕೇವಲ ಕರ್ನಾಟಕಕ್ಕೆ   ಮಾತ್ರ ಸೀಮಿತವಲ್ಲ.  ಇಡೀ ಭಾರತಕ್ಕೆ  ತಗಲಿರುವ  ಘೋರ ವ್ಯಾಧಿ. ಜಾತಿ, ಮತ, ಪಂಥಗಳ ಸಂಕುಚಿತತೆ, ಅತಾರ್ಕಿಕತೆಗಳಿಂದ  ಬಿಡುಗಡೆ ಹೊಂದಿ ಒಂದು ಸಮುದಾಯವಾಗಿ ಕನ್ನಡಿಗರು ತಮ್ಮನ್ನು ಗುರ್ತಿಸಿಕೊಳ್ಳಲು   ನಮ್ಮ ಭಾಷೆಯೇ ಅನಿವಾರ್ಯ.  ನಮ್ಮ ನಡುವಿನ  ಬೇಧ, ಭಾವಗಳನ್ನು ಮರೆತು ನಾವೆಲ್ಲರೂ ಕನ್ನಡಿಗರು  ಎಂಬ ಒಗ್ಗಟ್ಟಿನ ಮನೋಭಾವ ಮೂಡಿಸಲು ಸಾಧ್ಯವಾಗದಿದ್ದರೆ ರಾಜ್ಯೋತ್ಸವ ಆಚರಣೆ ಅರ್ಥಹೀನ.     ರಾಜ್ಯೋತ್ಸವದ   ಆಚರಣೆಗಾಗಿ  ರಾಜ್ಯ  ಸರ್ಕಾರ  ಸಾಕಷ್ಟು  ಹಣ ವ್ಯಯಿಸುತ್ತದೆ.  ಅದು ಬರೀ ಬಾಹ್ಯ ಆಡಂಬರಕ್ಕೇ ಖರ್ಚಾಗುತ್ತದೆಯೇ ಹೊರತು  ಕನ್ನಡ  ಸಮುದಾಯದಲ್ಲಿ  ಒಗ್ಗಟ್ಟು ಸಾಧಿಸಲು ಅಲ್ಲ.  ಕನ್ನಡ  ಬಳಸಿ,  ಉಳಿಸಿ,  ಬೆಳಸಿ ಎನ್ನುವ  ಭಾಷಣ ವೀರ ರಾಜಕಾರಣಿಗಳು, ಸಾಹಿತಿಗಳು, ಅಧಿಕಾರಿಗಳು ಮುಂತಾದವರೆಲ್ಲರೂ ತಮ್ಮ ತಮ್ಮ ಸಂಕುಚಿತತೆ , ಸ್ವಾರ್ಥದ  ಚಿಪ್ಪಿನೊಳಗೇ ಇರ ಬಯಸುತ್ತಾರೆ.  ಬಲಿಷ್ಠ ಕನ್ನಡ ಸಮುದಾಯವನ್ನು   ರೂಪಿಸುವತ್ತ  ಇಂಥವರು  ಪ್ರಯತ್ನಿಸುವುದೇ ಇಲ್ಲ. ಇಂತಹ  ಗೋಸುಂಬೆಗಳನ್ನೇ ಆದರ್ಶವೆಂದು ಭಾವಿಸಿರುವ  ಜನಸಮಾನ್ಯರು   ಕೂಡಾ ಅದೇ ವಿಭಜಕ ಚಿಂತನೆಗಳ  ದಾಸರಾಗಿದ್ದಾರೆ.      ಕನ್ನಡ- ಕನ್ನಡ ಎಂದು ಘರ್ಜಿಸುವ  ಹೋರಾಟಗಾರರ ಬಾಯಿಯಿಂದಲೂ ಕನ್ನಡಿಗರನ್ನು ವಿಭಜಿಸಿರುವ  ಸಂಕುಚಿತತೆಯ ಸರಪಳಿಯನ್ನು ತುಂಡರಿಸುವ  ಘೋಷವಾಕ್ಯ   ಕೇಳಿ ಬರುವುದಿಲ್ಲ.  ಹಲವು ಸಂಘಟನೆಗಳು  ಪ್ರಾಮಾಣಿಕವಾಗಿ ಕನ್ನಡದ   ಕೆಲಸ ಮಾಡುತ್ತಿದ್ದಾರೆ.   ಆದರೆ ಕೆಲವು ರೋಲ್‌ಕಾಲ್  ಸಂಘಟನೆಗಳಿಂದಾಗಿ ಎಲ್ಲ ಕನ್ನಡ ಪರ ಸಂಘಟನೆಗಳನ್ನು  ಅನುಮಾನ,  ತಾತ್ಸಾರಗಳಿಂದ  ನೋಡುವ ಸನ್ನಿವೇಶ ನಿರ್ಮಾಣವಾಗಿದೆ.  ಕನ್ನಡ ಎನ್ನುವುದರ  ಜೊತೆಗೆ ಕನ್ನಡಿಗ ಎನ್ನುವ ಘೋಷಣೆಯೂ ಸ್ಥಾನ ಪಡೆದಾಗ ಈ ಹೋರಾಟಗಳ  ವಿಧಿ- ವಿಧಾನಗಳಲ್ಲಿ  ಮಹತ್ತರ  ಬದಲಾವಣೆಯಾಗಲಿದೆ.    ಕನ್ನಡ ಅನ್ನ  ಕೊಡುವ ಭಾಷೆಯಲ್ಲವೆಂದು  ಕೆಲವರ  ಹೇಳಿಕೆ-ಅತಾರ್ಕಿಕ, ಮೂರ್ಖತನದ್ದಾಗಿದ್ದರೂ ಕೂಡ  ಹೆಚ್ಚಿನ  ಜನ  ಇದನ್ನು   ನಂಬುವಂತೆ ಮಾಡಿದೆ.  ಶೇಕಡಾ ೯೦ ರಷ್ಟು ಕರ್ನಾಟಕದ   ನಿವಾಸಿಗಳು  ಕನ್ನಡದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.  ವೃತ್ತಿಪರ  ಕೋರ್ಸ್ಗಳನ್ನು ಅಧ್ಯಯನ  ಮಾಡಿ  ಮಾಸಿಕ ಲಕ್ಷಾಂತರ  ರೂಪಾಯಿ ಸಂಬಳ ಪಡೆಯುವ     ಕೆಲವರನ್ನು  ನೋಡಿ, ಇಂಗ್ಲೀಷ್‌ನಲ್ಲಿ  ಕಲಿತರೆ ಮಾತ್ರ ಇಷ್ಟೊಂದು ಗಳಿಕೆ ಸಾಧ್ಯವೆಂಬ ತಪ್ಪು  ಗ್ರಹಿಕೆಯೇ ಕನ್ನಡದ  ಅವಹೇಳನಕ್ಕೆ  ಕಾರಣ.    ಕನ್ನಡ   ಭಾಷಿಕರು ಒಂದೇ ರಾಜ್ಯದಲ್ಲಿ ಬಾಳಬೇಕೆಂದು ಬಯಸಿದ  ಹಿರಿಯರು,  ಕನ್ನಡಿಗರ  ಬದುಕು  ಉತ್ತಮವಾಗಿರಬೇಕೆಂದೂ ಬಯಸಿದ್ದರು. ಆದರೆ, ನಮ್ಮ ಕನ್ನಡ ನಾಡಿನಲ್ಲಿ ಇಂದು ಕನ್ನಡಿಗರೇ ಅನಾಥರಾಗಿರುವ  ಪರಿಸ್ಥಿತಿ ಉಂಟಾಗಿದೆ.  ಎಲ್ಲವೂ ಇದ್ದೂ,  ನಾವು ಏನೂ ಇಲ್ಲದಿರುವಂತವರಿದ್ದೇವೆ.    ಪ್ರತಿಯೋರ್ವ  ಕನ್ನಡಿಗನಿಗೂ ಕರ್ನಾಟಕದಲ್ಲೇ ದುಡಿಯುವ ಅವಕಾಶ  ಲಭ್ಯವಾಗಬೇಕು. ಬರ, ನೆರೆ,  ಪ್ರಾಕೃತಿಕ ವಿಕೋಪಗಳಿಂದಾಗಿ ಕನ್ನಡಿಗರು ತಮ್ಮ  ಮನೆ, ಊರು ತೊರೆದು ಪಕ್ಕದ ರಾಜ್ಯಗಳಿಗೆ  ಜೀವನೋಪಾಯಕ್ಕಾಗಿ ವಲಸೆ   ಹೋಗುವ   ಸ್ಥಿತಿ  ತಪ್ಪಬೇಕು.  ಇಂತಹ  ಕನ್ನಡ ನಾಡಿನ ನಿರ್ಮಾಣದ  ದೃಢಸಂಕಲ್ಪವನ್ನು ಮಾಡಿದರೆ ಮಾತ್ರ ರಾಜ್ಯೋತ್ಸವಕ್ಕೆ  ಬೆಲೆ ಬರುತ್ತದೆ.    ಪ್ರತಿಯೋರ್ವ ಕನ್ನಡಿಗನಿಗೂ ಕರ್ನಾಟಕದಲ್ಲೇ  ದುಡಿಯುವ ಅವಕಾಶ, ದುಡಿಮೆಯ ಪ್ರತಿಫಲದಿಂದ ತನ್ನ ಹಾಗೂ ತನ್ನ ಅವಲಂಬಿತರ  ಜೀವನದ  ಕನಿಷ್ಠ ಅಗತ್ಯತೆಗಳನ್ನು ಅಂದರೆ ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ಔಷಧೋಪಚಾರ ಪೂರೈಸಿಕೊಳ್ಳುವ ಸಾಮರ್ಥ್ಯವಿರಬೇಕು. ಬಿಪಿಎಲ್  ಕಾರ್ಡ್ಗಾಗಿ  ಅರ್ಜಿ ಸಲ್ಲಿಸಿ ಕೈ ಜೋಡಿಸಿ ನಿಲ್ಲುವ  ದೈನ್ಯ ಸ್ಥಿತಿ  ಯಾವ ಕನ್ನಡಿಗನಿಗೂ  ಬರದಂತಹ  ಸ್ಥಿತಿಯನ್ನೂ ನಿರ್ಮಾಣ ಮಾಡುವ  ಪ್ರತಿಜ್ಞೆ ಮಾಡಿದಾಗ ಮಾತ್ರ ಕನ್ನಡ   ರಾಜ್ಯೋತ್ಸವ ಅರ್ಥಪೂರ್ಣ.    ಈ ಕನಸನ್ನು  ನನಸಾಗಿಸುವುದು ಸಾಧ್ಯವೇ ? ಎಂಬ ಪ್ರಶ್ನೆ ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ.  ಯಾಕೆಂದರೆ ಇಂದು ನಾವು ಅನುಸರಿಸುತ್ತಿರುವ   ಆರ್ಥಿಕ ನೀತಿ, ಶಾಲಾ- ಕಾಲೇಜುಗಳಲ್ಲಿ  ಕಲಿಯುವ  ಇಕೊನೊಮಿಕ್ಸ್ ಕಲಿಸುತ್ತಿರುವುದೇ  ಬಂಡವಾಳವಾದಿ ತತ್ವಗಳನ್ನು  ಅಂದರೆ ಬುದ್ದಿ ಮತ್ತು ಹಣ ಬಲದಿಂದ ಎಲ್ಲರಿಗೂ ಸಲ್ಲಬೇಕಾದ ನ್ಯಾಯಯುತ  ಪಾಲನ್ನು ಕೆಲವರಷ್ಟೇ ತಮ್ಮ  ಹತೋಟಿಯಲ್ಲಿ  ಇಟ್ಟುಕೊಂಡು ಇತರರನ್ನು  ಇಲ್ಲದವರನ್ನಾಗಿಸುವ  ಅಮಾನವೀಯ ವ್ಯವಸ್ಥೆ.   ಎಲ್ಲರ  ಸುಖಕ್ಕಾಗಿ, ಎಲ್ಲರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗದ ಕುರಿತಾಗಿ ಚಿಂತನೆ,  ಆವಿಷ್ಕಾರಗಳನ್ನು ಮಾಡುವ  ಕುರಿತು ತಥಾಕತಿಥ  ಆರ್ಥಿಕ ತಜ್ಞರು ಯೋಜಿಸುವುದೇ ಇಲ್ಲ.     ಲಾಭದಾಸೆಗಾಗಿ ಬರುವ ಹೊರಗಿನವರು ಬಂಡವಾಳ ಹೂಡುವುದರಿಂದ ಸ್ಥಳೀಯರ  ಅಭಿವೃದ್ಧಿಯಾಗುತ್ತದೆಂಬ ಭ್ರಮೆಯಲ್ಲೇ ಬದುಕುತ್ತಿದ್ದೇವೆ. ಕರ್ನಾಟಕದ  ಸಂಪನ್ಮೂಲಗಳನ್ನು ಆಧರಿಸಿ,  ಸಮಸ್ತ ಕನ್ನಡಿಗರ ಹಿತರಕ್ಷಣೆಯ ಗುರಿಯನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದಾಗ ಸಮೃದ್ಧ ಕರ್ನಾಟಕ ನಿರ್ಮಾಣ ಸಾಧ್ಯ.  ಸರ್ಕಾರಕ್ಕೆ  ಹೆಚ್ಚಿನ ತೆರಿಗೆ  ಹರಿದು ಬರುವುದೇ ಸಮೃಧ್ಧತೆಯ  ಲಕ್ಷಣವಲ್ಲ.  ಪ್ರತಿಯೋರ್ವ ಕನ್ನಡಿಗನಿಗೂ ಫಲಪ್ರದ ಉದ್ಯೋಗಾವಕಾಶ ಸೃಷ್ಟಿಯಾದಾಗ  ಮಾತ್ರ ಸಮೃದ್ಧ ಕರ್ನಾಟಕ  ಅರ್ಥಪೂರ್ಣ.    ಇಂದಿನ  ರಾಜಕೀಯ  ಪಕ್ಷಗಳಿಂದ  ಸಮೃದ್ಧ  ಕರ್ನಾಟಕದ ನಿರೀಕ್ಷೆ ಇಟ್ಟುಕೊಳ್ಳುವುದು ಅವಾಸ್ತವ. ರಾಷ್ಟ್ರೀಯ  ಪಕ್ಷಗಳಿಗೆ  ಇಡೀ ದೇಶದಲ್ಲಿ  ಅಧಿಕಾರ  ಪಡೆಯುವುದೇ ಗುರಿ. ಪರಸ್ಪರ  ದೂಷಣೆ,  ಅವಹೇಳನಗಳಲ್ಲಿ ತೊಡಗಿರುವ  ಇವರೆಲ್ಲರೂ ನಂಬಿರುವ  ಆರ್ಥಿಕ ಸಿದ್ಧಾಂತವೇ  ಬಂಡವಾಳವಾದ. ಆರ್ಥಿಕ  ಅಸಮಾನತೆಯನ್ನು  ಸಹಜವೆಂದು  ಒಪ್ಪುವ  ಬಂಡವಾಳವಾದವನ್ನು  ಅನಸರಿಸಿ ಆರ್ಥಿಕ ನ್ಯಾಯ ಒದಗಿಸುವುದು ಬರೀ ಕನಸು.  ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಸ್ವಾವಲಂಬನೆಯನ್ನು ಇಷ್ಟ ಪಡುವುದಿಲ್ಲ.  ರಾಜ್ಯಗಳ  ನೇತಾರರನ್ನು  ತಮ್ಮ ಅಡಿಯಾಳಿನಂತೆ ನಡೆಸಿಕೊಳ್ಳುವುದು  ಅವರ  ಜಾಯಮಾನ.  ತಮ್ಮ ಪಕ್ಷ ಅಧಿಕಾರದಲ್ಲಿದೆ,  ಹೈಕಮಾಂಡ್‌ಗೆ ನಿಯಮಿತವಾಗಿ ಕಪ್ಪ-  ಕಾಣಿಕೆ   ಸಲ್ಲುತ್ತಿದೆ ಎನ್ನುವುದರಲ್ಲೇ ಅವರ ಆಸಕ್ತಿ ಸೀಮಿತವಾಗಿದೆ.     ಪ್ರಾದೇಶಿಕ ಪಕ್ಷವೆಂದು ಕರೆಸಿಕೊಳ್ಳುವ  ಜೆಡಿಎಸ್‌ನ ಚಿಂತನೆಗಳು ಬಿಜೆಪಿ ಅಥವಾ ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ.  ಇತರ  ರಾಜ್ಯಗಳಲ್ಲಿ ಅದರ ಅಸ್ತಿತ್ವ ಇಲ್ಲ ಎನ್ನುವ  ಕಾರಣದಿಂದಾಗಿಯೇ ಅದು  ಪ್ರಾದೇಶಿಕ  ಪಕ್ಷ.   ಕರ್ನಾಟಕವನ್ನು ಸ್ವಾವಲಂಬಿ ಸಮೃದ್ಧ ನಾಡನ್ನಾಗಿ ಪರಿವರ್ತಿಸುವ  ಯಾವುದೇ ಕನಸು ಅಥವಾ ಕಾರ್ಯಕ್ರಮ ಅವರಿಗಿಲ್ಲ.     ಇಂತಹ ಪರಿಸ್ಥಿತಿಯಲ್ಲಿ ಜನಾಂದೋಲನದಿಂದ ಮಾತ್ರ ಪರಿವರ್ತನೆ  ಸಾಧ್ಯ.  ಕರ್ನಾಟಕದ  ದುಡಿಮೆಯ  ಅವಕಾಶಗಳು ಕನ್ನಡಿಗರಿಗೇ ಮೀಸಲಿರಬೇಕೆಂಬ ಚಿಂತನೆ  ಕಳೆದ ಕೆಲವು ತಿಂಗಳುಗಳಿಂದ   ಪ್ರಚಾರದಲ್ಲಿದೆ.  ಈ ವಿಚಾರವನ್ನು  ಹರಿಬಿಟ್ಟ ಸಂಘಟನೆಗಳ ಹುರುಪು ಕಡಿಮೆಯಾದಂತೆ  ಕಾಣುತ್ತಿದೆ.  ಪ್ರಚಾರ ಪ್ರಿಯ  ನೇತಾರರು  ಬಹುಬೇಗ ನಿರಾಸೆ  ಅನುಭವಿಸುತ್ತಾರೆ.   ಯಾಕೆಂದರೆ ಇಂತಹ  ಚಳುವಳಿ ಜನಸಾಮಾನ್ಯರನ್ನು   ಒಳಗೊಳ್ಳುವಂತಾಗಲು ಸಮಯಬೇಕು.   ಪ್ರವಾಹದ ವಿರುದ್ಧ  ಸೆಣೆಸಾಡಬೇಕಾದ  ಕ್ಷೇತ್ರವಿದು.  ಪರ್ಯಾಯ ವ್ಯವಸ್ಥೆಯ ಕಲ್ಪನೆ ಇಲ್ಲದವರಿಂದ  ಇಂತಹ  ಹೋರಾಟವನ್ನು  ದೀರ್ಘಕಾಲದವರೆಗೆ  ಜೀವಂತವಾಗಿಡುವುದು  ಸಾಧ್ಯವಾಗಲಾರದು.  ಆದರೆ ಈ  ಚಿಂತನೆ , ಹೋರಾಟ ನಡೆದೇ ನಡೆಯುತ್ತದೆ.    ಸಾಮಾಜಿಕ- ಆರ್ಥಿಕ ಪರಿವರ್ತನೆಯಾಗುವಾಗ ಸೈದ್ಧಾಂತಿಕ ನೆಲೆಗಟ್ಟು ಅತಿ ಅಗತ್ಯ.  ನೇತಾರರಲ್ಲಿ ನೈತಿಕ   ಮೌಲ್ಯಗಳು ಮತ್ತು  ಸೈದ್ಧಾಂತಿಕ ಬದ್ಧತೆ ಇದ್ದಾಗ ಮಾತ್ರ ಬದಲಾವಣೆಯ ವೇಗ ತೀವ್ರವಾಗುತ್ತದೆ.  ಸಾಮೂಹಿಕ   ಮಾನಸಿಕತೆ  ಬದಲಾದಾಗ   ಮಾತ್ರ ಹೊಸ ವ್ಯವಸ್ಥೆ ಜಾರಿಗೆ ಬರುತ್ತದೆ.  ಇದಕ್ಕಾಗಿ ಶ್ರಮಿಸುವ      ನೇತಾರರಿಗಾಗಿ  ಕನ್ನಡನಾಡು ಕಾಯುತ್ತ್ತಿದೆ.  ತಮ್ಮನ್ನೇ ವೈಭವೀಕರಿಸಿಕೊಳ್ಳುವವರು ಅಲ್ಪಕಾಲದವರೆಗೆ  ಮಿಂಚುತ್ತಾರೆ ಹಾಗೂ ಅಷ್ಟೇ ಬೇಗ ಮರೆಯಾಗುತ್ತಾರೆ.        ರಾಜ್ಯೋತ್ಸವದ ನೆಪದಲ್ಲಿ,  ಕನ್ನಡದ  ಹೆಸರಿನಲ್ಲಿ  ಕುಣಿದು  ಕುಪ್ಪಳಿಸುವವರು ಇಂದು ಗಂಭೀರವಾಗಿ  ಯೋಚಿಸಲೇಬೇಕಾಗಿದೆ.   ಕನ್ನಡ ನಾಡಿನ  ಸಂಪತ್ತನ್ನು  ಹೊರಗಿನವರು ಲೂಟಿ ಹೊಡೆಯುತ್ತಿದ್ದರೆ ಕನ್ನಡ  ನಾಡಿನ  ಉದ್ಯೋಗಾವಕಾಶಗಳು ಹೊರಗಿನವರ ಪಾಲಾಗುತ್ತಿವೆ.  ಕನ್ನಡಿಗರು  ನಿರುದ್ಯೋಗಿಗಳಾಗುತ್ತಿದ್ದಾರೆ.  ತಮ್ಮದೇ ನಾಡಿನಲ್ಲಿ  ನಿರಾಧಾರಿಗಳಾಗುತ್ತಿದ್ದಾರೆ. ಇಂತಹ ಅನ್ಯಾಯವನ್ನು  ಸರಿಪಡಿಸುವ  ಕುರಿತು ಕಾರ್ಯಪ್ರವೃತ್ತರಾಗಬೇಕಿದೆ. ರಾಜಕೀಯದ  ಥಳಕು, ಬಳುಕಿಗೆ  ಮರುಳಾಗಿ  ಕೇಂದ್ರ ನಾಯಕರ  ಗುಲಾಮಗಿರಿ ಮಾಡುತ್ತಾ,  ಕನ್ನಡಿಗರಿಗಾಗುತ್ತಿರುವ  ಅನ್ಯಾಯದ  ವಿರುದ್ಧ ಸೊಲ್ಲೆತ್ತದಿರುವ  ಜನಪ್ರತಿನಿಧಿಗಳಿಗೆ  ಬಿಸಿ ಮುಟ್ಟಿಸುವ ಕೆಲಸಮಾಡಬೇಕಿದೆ.    ಸಮೃದ್ಧ, ಸ್ವಾವಲಂಬಿ , ಸ್ವಾಭಿಮಾನಿ ಕರ್ನಾಟಕದ  ಕನಸನ್ನು ಕಾಣಬಲ್ಲವರು ಮಾತ್ರ ಇದನ್ನು  ನನಸಾಗಿಸಬಲ್ಲರು.   ವಿಕೇಂದ್ರೀಕೃತ  ಆರ್ಥಿಕ ವ್ಯವಸ್ಥೆಯ  ಜಾರಿಯಿಂದ  ಇದು ಸಾಧ್ಯ.  ನಮ್ಮ ನಡುವಿನ  ಹಲವು ಭೇದ  ಭಾವಗಳನ್ನು  ದೂರೀಕರಿಸಿ, ನಮ್ಮನ್ನು ನಾವು ಕನ್ನಡಿಗರೆಂದು  ಗುರ್ತಿಸಿಕೊಳ್ಳುವ  ಮನೋಭಾವದೊಂದಿಗೆ  ಈ ವರ್ಷದ ರಾಜ್ಯೋತ್ಸವ ಆಚರಿಸೋಣ.  ಡಿಜೆ ಸೌಂಡ್‌ನ  ಗೀತೆಗಳಿಗೆ  ಹೆಜ್ಜೆ ಹಾಕಿ ಕುಣಿಯುವಾಗ  ಅಸಹಾಯಕ ಕನ್ನಡಿಗರ  ಸ್ಥಿತಿಯನ್ನು  ಮರೆಯದಿರೋಣ.    ಶೋಷಣಾ  ರಹಿತ  ಕನ್ನಡನಾಡು  ಕಟ್ಟುವ  ದೃಢನಿರ್ಧಾರ  ತಳೆದು ರಾಜ್ಯೋತ್ಸವದ ಶುಭಾಶಯ ವಿನಿಮಯ  ಮಾಡಿಕೊಳ್ಳೋಣ.    ***********************************************************************         

ಭಾಷೆ Read Post »

ಇತರೆ

ಭಾಷೆ

ಭಾಷಾ ಮಾಧ್ಯಮವಲ್ಲ, ಶೈಕ್ಷಣಿಕ ವ್ಯವಸ್ಥೆಯೇ ಬದಲಾಗಬೇಕು! ಡಿ.ಎಸ್.ರಾಮಸ್ವಾಮಿ ಕರ್ನಾಟಕವನ್ನು ಕಾಡುತ್ತಿರುವ ಹಲವು ಸಮಸ್ಯೆಗಳ ನಡುವೆ ಭಾಷೆ, ಭಾಷಾ ಮಾಧ್ಯಮ, ಭಾಷೆಯ ಬಳಕೆ ಮತ್ತು ಕನ್ನಡ ಭಾಷೆಯ ಅಭಿವೃದ್ಧಿಯ ಮಾತುಗಳ ಸುತ್ತ ಹಬ್ಬಿಕೊಂಡಿರುವುದು ಭಾವನಾತ್ಮಕ ಅಂಶಗಳಾಗಿರುವುದರಿಂದ ಈ ವಿಷಯವನ್ನು ಕುರಿತಂತೆ ಹೊಸ ಚಿಂತನೆಗಳೇ ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮನ್ನು ಕಾಡುತ್ತಿರುವ ನದಿ ನೀರಿನ ವಿಚಾರವೂ ಭಾವನಾತ್ಮಕವಾಗಿಯೇ ನಮ್ಮನ್ನು ಇಕ್ಕಟ್ಟಿಗೆ ತಳ್ಳಿರುವ ಸತ್ಯ ನಮ್ಮ ಮುಂದೆ ಢಾಳಾಗಿಯೇ ಇದೆ. ಈ ನೆಲದಲ್ಲಿ ತೀವ್ರ ಸ್ವರೂಪದ ಆಂದೋಲನಗಳೇನಾದರೂ ನಡೆಯುವುದಾದರೆ ಅದು ಕನ್ನಡ-ಕನ್ನಡತನ ಮತ್ತು ಕನ್ನಡ-ಕನ್ನಡಿಗರ ಉಳಿವು ಈ ವಿಷಯಗಳ ನಡುವೆಯೇ ನಡೆದಿದೆ, ನಡೆಯುತ್ತಿರುತ್ತದೆ. ಇಂದಿಗೂ ಕಾಗೋಡು ಸತ್ಯಾಗ್ರಹವನ್ನು ಹೊರತುಪಡಿಸಿದರೆ ಕನ್ನಡಿಗರಿಗೆ ನೆನಪಾಗುವುದು ಗೋಕಾಕ್ ಚಳುವಳಿ ಮಾತ್ರ. ೧೯೭೦ರ ದಶಕದ ದಲಿತ, ಬಂಡಾಯ ಮತ್ತು ಎಡಪಂಥೀಯ ಚಳುವಳಿಗಳು ಎಷ್ಟೇ ಪ್ರಖರವಾಗಿ ನಮ್ಮ ಮೇಲೆ ಪ್ರಭಾವಿಸಿದ್ದರೂ ಅವುಗಳು ನಮ್ಮ ಮನಸ್ಸಿನಿಂದ ಈಗಾಗಲೇ ಮಾಸಿಹೋಗುತ್ತಿವೆ. ಆದರೆ ಕನ್ನಡಪರ ಹೋರಾಟಗಳ ಕಾವು ಸದಾ ಕಾಡುತ್ತಲೇ ಇರುತ್ತದೆ. ಭಾಷೆಯ ಬಾಂಧವ್ಯದ ಸುತ್ತ ನಾವು ನಿರ್ಮಿಸಿಕೊಂಡಿರುವ ವಲಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಭಾಷೆಯ ವಿಭಿನ್ನ ಆಯಾಮಗಳನ್ನು ಹಾಗೂ ಭಾಷೆಯ ಬಳಕೆಯ ಸುತ್ತಲಿನ ಭಾವನಾತ್ಮಕ ಪ್ರಪಂಚವನ್ನು ಬಳಸಿಕೊಳ್ಳುತ್ತಿರುವ ಸಂಘಟನೆಗಳ ಸಂಖ್ಯೆ ನೂರಾರು. ಕನ್ನಡ ಭಾಷೆ ಅವಸಾನ ಹೊಂದುತ್ತಿದೆ ಎಂಬ ಮಿಥ್ಯೆಯನ್ನು, ಕನ್ನಡ ಭಾಷೆಯ ಬಳಕೆ ಕ್ಷೀಣ ಸುತ್ತಿದೆ ಎಂಬ ಭ್ರಮೆಯನ್ನು ಜನಮಾನಸದಲ್ಲಿ ಸೃಷ್ಟಿಸಿ ತಮ್ಮ ಕನ್ನಡತನವನ್ನು ಅಥವಾ ವೀರ ಕನ್ನಡಿಗ ಪರಂಪರೆಯನ್ನು ವೈಭವೀಕರಿಸಿಕೊಳ್ಳುವ ವೇದಿಕೆ-ಸಂಘ-ಸಂಸ್ಥೆಗಳೇ ಈ ಕಾಲದ ಗೊಂದಲಗಳ ಮೂಲ ಕಾರಣ. ಕನ್ನಡ ಮಾಧ್ಯಮ-ಆಂಗ್ಲ ಮಾಧ್ಯಮದ ನಡುವಿನ ಚರ್ಚೆ ಇಂದು ನೆನ್ನೆಯದಲ್ಲ. ಮೈಸೂರು ರಾಜ್ಯದ ನಂತರ  ಉದಯವಾದ ಅಖಂಡ ಕರ್ನಾಟಕದ ಕಾಲದಿಂದಲೂ ಇದು ನಡೆಯುತ್ತ ಬಂದಿದೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬೋಧಿಸುವ ಸರ್ಕಾರದ ದೃಢ ನಿರ್ಧಾರಕ್ಕೀಗ ಉಚ್ಛ ನ್ಯಾಯಾಲಯದ ತಪರಾಕಿ ತಟ್ಟಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಕರ್ನಾಟಕದಲ್ಲಿ ಕನ್ನಡವನ್ನಷ್ಟೇ ಮಾತೃ ಭಾಷೆಯೆಂದು ಪರಿಗಣಿಸಲಾಗದೆಂಬ  ನ್ಯಾಯಾಲಯದ ಮಾತಿಗೆ ಸಹಜವಾಗಿಯೇ ಕನ್ನಡ ಪರ ಮನಸ್ಸುಗಳು ಕೆರಳಿವೆ. ಏಕೆಂದರೆ ಇಲ್ಲಿ ಭಾವನೆಗಳಷ್ಟೇ ಸಕ್ರಿಯವಾಗಿವೆಯೇ ವಿನಾ ವಾಸ್ತವತೆ ಹಿಂದೆ ಸರಿದಿದೆ. ಈ ಹಿಂದೆ ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆ ಯೋಚಿಸಿದಾಗಲೂ ಕನ್ನಡ ಪರ ದನಿಗಳು ಇದೇ ರೀತಿಯ ಕೂಗು ಹಬ್ಬಿಸಿದ್ದವು.   ಇಲ್ಲಿ ಪ್ರಶ್ನೆ ಇರುವುದು ಮತ್ತು ಇರಬೇಕಾದದ್ದು ಭಾಷೆಯ ಉಳಿವು-ಅಳಿವಿನ ಬಗ್ಗೆ ಅಲ್ಲ. ಬದಲಿಗೆ ಅದು ನಮ್ಮ ಭವಿಷ್ಯದ ಜನಾಂಗವನ್ನು ಸೃಷ್ಟಿಸುವ ಶೈಕ್ಷಣಿಕ ವ್ಯವಸ್ಥೆಯದ್ದು. ಶಿಕ್ಷಣ ಮಾಧ್ಯಮಕ್ಕೂ ಒಂದು ಭಾಷೆಯ ಉಳಿವಿಗೂ ಇರುವ ಸೂಕ್ಷ್ಮಸಂಬಂಧಗಳನ್ನು ಭಾವನಾತ್ಮಕ ದೃಷ್ಟಿಯಿಂದ ನೋಡುವುದಕ್ಕಿಂತಲೂ ಸಮಕಾಲೀನ ಸಂದರ್ಭದ ಅನಿವಾರ್ಯತೆ ಮತ್ತು ಭವಿಷ್ಯದ ಅವಶ್ಯಕತೆಗಳ ದೃಷ್ಟಿಯಿಂದ ನೋಡಬೇಕಾಗುತ್ತದೆ. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು ಎನ್ನುವ ವಾದ ಸಮಂಜಸ. ಈ ನೆಲೆಯಲ್ಲಿ ಹಮ್ಮಿಕೊಳ್ಳುವ ಹೋರಾಟಗಳೂ ಸಮರ್ಥನೀಯ. ಆದರೆ ಪ್ರಸಕ್ತ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸನ್ನಿವೇಶದಲ್ಲಿ ಮಧ್ಯಮ ಮತ್ತು ಬಡವರ್ಗದ ಜನತೆಗೆ ಅನಿವಾರ್ಯ ಎನಿಸಿರುವ ಅಂಗ್ಲ ಭಾಷೆಯನ್ನು ಬೋಧಿಸಿದಲ್ಲಿ ಅಪಾಯ ಏನಿದೆ? ಹಿರಿಯ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಜಾರಿಗೊಳಿಸಿದರೆ ಕನ್ನಡ ಭಾಷೆಯ ಬೆಳವಣಿಗೆ ಹೇಗೆ ಕುಂಠಿತವಾಗುತ್ತದೆ ? ಸರ್ಕಾರ ಕಡ್ಡಾಯ ಕನ್ನಡ ಕಲಿಕೆಯ ತನ್ನ ನಿರ್ಧಾರದಿಂದ ಹಿಂದೆ ಸರಿದ ಕೂಡಲೇ ಕನ್ನಡ ಮಾಧ್ಯಮ ಬಯಸುವವರ ಸಂಖ್ಯೆ ಕಡಿಮೆಯಾಗುವುದೇ ? ಆಂಗ್ಲ ಮಾಧ್ಯಮದ ಶಾಲೆಗಳನ್ನು ತೆರೆಯುವುದರಿಂದ ಕನ್ನಡ ಭಾಷೆಗೆ ಧಕ್ಕೆ ಉಂಟಾಗುತ್ತದೆ ಎನ್ನುವುದಾದರೆ, ಕರ್ನಾಟಕದಾದ್ಯಂತ ನಾಯಿಕೊಡೆಗಳಂತೆ ಬೆಳೆದಿರುವ ಆಂಗ್ಲ ಮಾಧ್ಯಮದ ಶಾಲೆಗಳ ಭರಾಟೆಯಲ್ಲಿ ಕನ್ನಡ ಎಂದೋ ನಶಿಸಿಹೋಗಬೇಕಿತ್ತು. ಹಾಗಾಗಿಲ್ಲವಲ್ಲ. ಅಥವಾ ಕನ್ನಡಪರ ಸಂಘಟನೆಗಳು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ವಿರೋಧಿಸುವುದಾದರೆ ಖಾಸಗಿ ಶಾಲೆಗಳಲ್ಲಿ ಮಾತ್ರ ಆಂಗ್ಲ ಮಾಧ್ಯಮದಲ್ಲಿ ಓದಲಿಚ್ಚಿಸುವ ಮಕ್ಕಳೆಲ್ಲರೂ ಅನಿವಾರ್ಯವಾಗಿ ಖಾಸಗಿ ಶಾಲೆಗಳನ್ನೇ ಆಶ್ರಯಿಸಬೇಕಾಗುತ್ತದೆಂಬ ಅರಿವು ಇವರಿಗಿಲ್ಲವೆ? ಮತ್ತು  ಖಾಸಗಿ ಶಾಲೆಗೆ ಹೋಗುವ ಸಾಮರ್ಥ್ಯವಿಲ್ಲದ ಬಡ ಮಕ್ಕಳು ಕನ್ನಡ ಮಾಧ್ಯಮಕ್ಕೇ ಜೋತು ಬೀಳಬೇಕೇ ? ಇಲ್ಲಿ ಉದ್ಭವಿಸುವ ಪ್ರಶ್ನೆ ಆಯ್ಕೆಯ ಸ್ವಾತಂತ್ರದ್ದು. ಆಂಗ್ಲ ಮಾಧ್ಯಮವನ್ನೇ ವಿರೋಧಿಸುವುದಾದರೆ ಕನ್ನಡ ಪರ ಸಂಘಟನೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಖಾಸಗಿ ಶಾಲೆಗಳ ವಿರುದ್ಧವೇ ತಮ್ಮ ಆಂದೋಲನ ಹಮ್ಮಿಕೊಳ್ಳಬೇಕಾಗುತ್ತದೆಯೇ ವಿನಾ ಸರ್ಕಾರದ ವಿರುದ್ಧವಲ್ಲ! ಅಲ್ಲಿಗೆ ಜನಸಾಮಾನ್ಯರ ಹಿತಾಸಕ್ತಿಯ ವಿರುದ್ಧ ಗುಡುಗುವ ಈ ಸಂಘಟನೆಗಳಿಗೆ ನಿಷೇದದ ಪ್ರಸ್ತಾಪ ಬರುವ ಕಾಲವೂ ದೂರವಿಲ್ಲ. ಇದರ ಜೊತೆಗೆ ಇಂದು ಎಷ್ಟು ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿವೆ ಎಂಬ ಸಮೀಕ್ಷೆಯನ್ನೇನ್ನಾದರೂ ಮಾಡಲಾಗಿದೆಯೇ ? ಅಥವಾ ರಾಜ್ಯದ ಜನತೆ ಯಾವ ಮಾಧ್ಯಮವನ್ನು ಬಯಸುತ್ತಾರೆ ಎಂಬ ಸಮೀಕ್ಷೆ ನಡೆಸಲಾಗಿದೆಯೇ ? ಸಂಘಟನಾತ್ಮಕ ಭಾವನೆಗಳು ಜನತೆಯ ಸಮಗ್ರ ಧೋರಣೆಗಳನ್ನು ಪ್ರತಿಬಿಂಬಿಸುತ್ತವೆ ಎಂಬ ಅಹಮಿಕೆಯನ್ನು ಬದಿಗಿಟ್ಟು ಯೋಚಿಸಿದಾಗ ಒಂದು ನಿರ್ದಿಷ್ಟ ವಿದ್ಯಮಾನವನ್ನು ಕುರಿತು ಆಂದೋಲನ ರೂಪಿಸುವ ಸಂಘಟನೆಗಳು ಜನತೆಯ ನೈಜ ಆಶಯಗಳನ್ನು ಅರಿಯಲು ಯತ್ನಿಸಿವೆಯೇ ಅನ್ನುವುದೂ ಮುಖ್ಯವಾಗುತ್ತದೆ. ಈ ಕೆಲಸವನ್ನು ಕನ್ನಡ ಪರ ಸಂಘಟನೆಗಳು ಇಂದಿನವರೆಗೂ ಮಾಡಿಲ್ಲ ಎನ್ನುವುದು ವಿಷಾದನೀಯ ಸಂಗತಿ. ಕನ್ನಡದ ಉಳಿವಿಗಾಗಿ ಶ್ರಮಿಸುವುದು ಇಂದಿನ ತುರ್ತು ಅಗತ್ಯತೆಯೇ ಇರಬಹುದು. ಆದರೆ ಕನ್ನಡ ಅಳಿಸಿಹೋಗುತ್ತಿದೆ ಎಂಬ ಕೂಗು ಅನವಶ್ಯಕ. ಭಾಷೆ ಎಂದಿಗೂ ಅಳಿಯುವುದಿಲ್ಲ. ಕನ್ನಡದಂತಹ ಪ್ರಾಚೀನ ಭವ್ಯ ಪರಂಪರೆಯುಳ್ಳ ಭಾಷೆ ಕ್ಷೀಣಿಸುವುದೂ ಇಲ್ಲ. ಸಮಕಾಲೀನ ಕಾಲಘಟ್ಟದಲ್ಲಿ, ಸಾಮಾಜಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ಭಾಷೆಯ ಬಳಕೆಯಲ್ಲಿ ವ್ಯತ್ಯಯ ಉಂಟಾಗಿರಬಹುದು ಅಷ್ಟೆ. ಆದರೆ ಅದು ಮೇಲ್ನೋಟಕ್ಕೆ ಕಾಣುವ ಚಿತ್ರಣ. ನಗರೀಕೃತ ಮನಸ್ಸುಗಳು ಯೋಚಿಸುವ ರೀತಿಯೇ ಕೆಲವೊಮ್ಮೆ ತಳಮಟ್ಟದ ವಾಸ್ತವಗಳನ್ನು ಮರೆಮಾಚಿಸಿ ಬಿಟ್ಟಿರುತ್ತವೆ. ಕನ್ನಡ ಪರ ಕೂಗಿಗೂ ಇದು ಅನ್ವಯಿಸುತ್ತದೆ. ಭಾಷೆಯ ಉಳಿವು ಎಂದರೆ ಗ್ರಂಥಗಳಲ್ಲಡಗಿರುವ ಭಾಷಾ ಪಾಂಡಿತ್ಯದ ರಕ್ಷಣೆ ಮಾತ್ರವಲ್ಲ. ಭಾಷಿಕರ ಹಿತಾಸಕ್ತಿಗಳ ರಕ್ಷಣೆಯೂ ಹೌದು. ಕನ್ನಡ ಭಾಷಿಕರೆಂದರೆ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿ ಉನ್ನತ ವ್ಯಾಸಂಗಕ್ಕೆ ಅಡಿಪಾಯ ಹಾಕುವ ಆರ್ಥಿಕ ಸಾಮರ್ಥ್ಯ, ಸಾಮಾಜಿಕ ಸ್ಥಾನಮಾನ ಮತ್ತು ಸಾಂಸ್ಕೃತಿಕ ಅವಕಾಶಗಳುಳ್ಳ ಮಧ್ಯಮ-ಮೇಲ್ ಮಧ್ಯಮ ವರ್ಗಗಳು ಅಥವಾ ಮೇಲ್ಜಾತಿಯವರು ಮಾತ್ರವಲ್ಲ. ನವ ಉದಾರವಾದ ಸೃಷ್ಟಿಸಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದುಳಿದ ವರ್ಗಗಳಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಆಂಗ್ಲ ಭಾಷಾ ಶಿಕ್ಷಣ ಒಂದು ಅನಿವಾರ್ಯತೆಯಾಗಿರುವುದು ಒಪ್ಪಲೇಬೇಕಾದ ಸತ್ಯ . ಈ ಅನಿವಾರ್ಯತೆಯನ್ನು ಪೂರೈಸುವ ಹೊಣೆಗಾರಿಕೆ ನಮ್ಮನ್ನಾಳುತ್ತಿರುವವರ ಮೇಲಿದೆ. ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಲಭ್ಯವಾಗುವುದಾದರೆ ಕನ್ನಡ ಭಾಷೆ ನಶಿಸುವುದಿಲ್ಲ ಬದಲಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ಬಡವಿದ್ಯಾರ್ಥಿಗಳು ಕನ್ನಡದ ಮತ್ತು ಕರ್ನಾಟಕದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಾರೆ. ಇಲ್ಲಿ ಉಜ್ವಲ ಭವಿಷ್ಯಕ್ಕಾಗಿ ಆಂಗ್ಲ ಭಾಷೆ ಅಗತ್ಯ ಎಂದು ಭಾವಿಸಬೇಕಿಲ್ಲ. ಶೈಕ್ಷಣ ಕ ಪಯಣದಲ್ಲಿ ಮುನ್ನಡೆಯಲು ಲಭ್ಯವಿರುವ ಹಾರುಮಣೆಗಳಲ್ಲಿ ಆಂಗ್ಲ ಭಾಷೆಯೂ ಒಂದು ಎಂಬ ವಾಸ್ತವವನ್ನು ಗ್ರಹಿಸಬೇಕಷ್ಟೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮನ್ನಣೆ ನೀಡುವುದೇ ಆದರೆ ಈ ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹಿಸುವುದೇ ಸೂಕ್ತ. ಭಾಷಾ ಮಾಧ್ಯಮದ ವಿಚಾರವನ್ನು ಅಸ್ತಿತ್ವಗಳ ನೆಲೆಗಟ್ಟಿನಲ್ಲಿ ನೋಡಿದಾಗ ಭಾವನೆಗಳು ಮೇಲುಗೈ ಸಾಧಿಸುತ್ತವೆ. ವಾಸ್ತವಗಳು ದೂರಾಗುತ್ತವೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಾಂವಿಧಾನಿಕ ದೃಷ್ಟಿಕೋನದಿಂದ ಕೂಡಿದೆ. ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸುವ, ಸಮರ್ಥಿಸುವ ದನಿಗಳು ಈ ತೀರ್ಪಿಗೆ ತಲೆಬಾಗಲೇಬೇಕಾಗುತ್ತದೆ. ಹಾಗಾದರೆ ಕನ್ನಡದ ಪ್ರಶ್ನೆ ಬಗೆಹರಿಯುವುದು ಹೇಗೆ ? ಆಡಳಿತ ವ್ಯವಸ್ಥೆಯ ಇಚ್ಚಾಶಕ್ತಿ ಮತ್ತು ಕನ್ನಡಪರ ದನಿಗಳ ಪ್ರಬುದ್ಧತೆ ಎರಡೂ ಇಲ್ಲಿ ಅಗ್ನಿಪರೀಕ್ಷೆಗೊಳಗಾಗಿರುವುದು ಸ್ಪಷ್ಟ.   ಇಂಗ್ಲಿಷ್ ಭಾಷೆಯನ್ನು ಯಾವ ತರಗತಿಯಿಂದ ಕಲಿಸಬೇಕು ಮತ್ತು ಕಲಿಕೆಯ ಮುಖ್ಯ ಮಾಧ್ಯಮ ಯಾವ ಭಾಷೆಯಲ್ಲಿರಬೇಕು ಎಂಬ ಚರ್ಚೆಗೆ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಭಾಷಾ ಬೋಧನೆಯ ಸಾಧ್ಯತೆ ಮತ್ತು ಮಿತಿಗಳನ್ನು ಅರಿತವರಿಗಿಂತ ಹೆಚ್ಚಾಗಿ ಇಡೀ ವಿಷಯವನ್ನು ಭಾವನಾತ್ಮಕವಾಗಿ ಗ್ರಹಿಸಿದವರು ಮಾತ್ರ ಈ ವಿಷಯದ ಚರ್ಚೆಯ ಮುಂಚೂಣಯಲ್ಲಿದ್ದಾರೆ. ಪರಿಣಾಮವಾಗಿ ಯಾವುದು ಚರ್ಚೆಯಾಗಬೇಕಿತ್ತೋ ಅದು ಚರ್ಚೆಯಾಗದೆ ಕನ್ನಡದ ಬಳಕೆ ಎಂಬುದು ವರ್ಗ, ವರ್ಣ, ಜಾತಿ ಮುಂತಾದುವುಗಳ ಚರ್ಚೆಯಾಗಿ ಬದಲಾಗುತ್ತಿದೆ. ಭಾಷೆಯೊಂದರ ಕಲಿಕೆಯ ಹಿಂದೆ ಈ ಎಲ್ಲಾ ಸಾಮಾಜಿಕ ಅಸಮಾನತೆಗಳು ಪರಿಣಾಮ ಬೀರುತ್ತವೆಯಾದರೂ ಕೇವಲ ಅವುಗಳನ್ನಷ್ಟೇ ಪರಿಗಣಿಸಿ ಭಾಷೆಯೊಂದರ ಕಲಿಕೆಗೆ ಸಂಬಂಧಿಸಿದ ನೀತಿ ರೂಪಿಸಲು ಸಾಧ್ಯವಿಲ್ಲವಲ್ಲ. ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವುದರಿಂದ ಮಕ್ಕಳಿಗೆ ಹೊರೆಯಾಗುತ್ತದೆ. ಕನ್ನಡಕ್ಕೆ ಅಪಾಯ, ಕನ್ನಡ ಸಂಸ್ಕೃತಿಗೆ ಅಪಾಯ ಎಂದು ಒಂದು ಗುಂಪಿನವರು ವಾದಿಸುತ್ತಿದ್ದರೆ ಮತ್ತೊಂದು ಗುಂಪಿನವರು ಇಂಗ್ಲಿಷ್ ಸಾಮಾಜಿಕ ಅಸಮಾನತೆಯ ನಿವಾರಣೆಗೆ ಅತಿ ಅವಶ್ಯ. ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಇಂಗ್ಲಿಷ್ ಇಲ್ಲದಿದ್ದರೆ ಸಾಧ್ಯವಿಲ್ಲ. ಶೋಷಿತ ವರ್ಗಗಳಿಗೆ ಇಂಗ್ಲಿಷ್ನಿಂದಲೇ ವಿಮೋಚನೆ ಎನ್ನುತ್ತಿದ್ದಾರೆ. ದುರಂತವೆಂದರೆ ಈ ಎರಡೂ ವಾದಗಳನ್ನು ಮಂಡಿಸುತ್ತಿರುವವರೆಲ್ಲರೂ  ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶಗಿಟ್ಟಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಈ ಎರಡೂ ವಾದಗಳೂ ವಿತಂಡವಾದಗಳೇ ಸರಿ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಸಂಸ್ಕೃತಿ ಇಷ್ಟೂ ವರ್ಷಗಳಿಂದ ಉಳಿದುಕೊಂಡು ಬಂದಿದೆ. ಈ ಕನ್ನಡ ಸಂಸ್ಕೃತಿ ಎಂಬುದು ಇತರ ಎಲ್ಲಾ ಸಂಸ್ಕೃತಿಗಳಂತೆ ಚಲನಶೀಲವೇ ಆಗಿರುವುದರಿಂದ ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ತನ್ನನ್ನು ಉಳಿಸಿಕೊಂಡಿದೆ. ಹೈದರ್, ಟಿಪ್ಪು ಬಹಮನಿ ಸುಲ್ತಾನರ ಆಡಳಿತದ ಅವಧಿಯಲ್ಲಿ ದಖ್ಖನಿ ಆಡಳಿತ ಭಾಷೆಯಾಗಿತ್ತು. ಹಾಗೆಂದು ಕನ್ನಡ ಮರೆಯಾಗಲಿಲ್ಲ. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಇಂಗ್ಲಿಷ್ ಆಳುವವರ ಭಾಷೆಯಾಗಿತ್ತು. ಆಗಲೂ ಕನ್ನಡ ಮರೆಯಾಗಲಿಲ್ಲ. ಈ ಸವಾಲುಗಳನ್ನು ಎದುರಿಸಿ ಅದು ಉಳಿದುಕೊಂಡಿತು. ಈಗಲೂ ಅಷ್ಟೆ ಜಾಗತೀಕರಣದ ಎಲ್ಲ ಸವಾಲುಗಳನ್ನೂ ಅದು ಎದುರಿಸಿ ಉಳಿದುಕೊಳ್ಳುತ್ತದೆ. ಈ ಸವಾಲುಗಳನ್ನು ಎದುರಿಸಲು ನಮ್ಮ ಭಾಷೆಯನ್ನು ಸಿದ್ಧಗೊಳಿಸಬೇಕು. ಅಂದರೆ ಹೊಸ ಪರಿಕಲ್ಪನೆಗಳನ್ನು ನಮ್ಮ ಭಾಷೆಯಲ್ಲಿ ಚರ್ಚಿಸಬೇಕು. ಇದರ ಬದಲಿಗೆ ಕಂಪ್ಯೂಟರನ್ನು `ಗಣಕ ಯಂತ್ರ’ ಎಂದರೆ ಇಂಜಿನಿಯರನ್ನು ‘ಅಭಿಯಂತರ’ ಎಂದ ಮಾತ್ರಕ್ಕೆ ಕನ್ನಡ ಉದ್ಧಾರವಾಗುತ್ತದೆ ನಂಬಿದರೆ ಕನ್ನಡವನ್ನು ಶಿಶುವಿಹಾರದಿಂದ ಸ್ನಾತಕೋತ್ತರ ಮಟ್ಟದವರೆಗೆ ಕಡ್ಡಾಯ ಮಾಡಿದರೂ ಅದು ಉಳಿಯಲಾರದು. ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿತವರೆಲ್ಲರೂ ಇಂಗ್ಲಿಷ್ ಪಂಡಿತರಾಗಿ ಬಿಡುವುದಿಲ್ಲ. ನನ್ನ ತಲೆಮಾರಿನ ಹಾಗೂ ಅದಕ್ಕೂ ಹಿಂದಿನವರೆಲ್ಲರೂ ಹಳ್ಳಿಯ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಬಂದು ಕಾಲೇಜು ಮಟ್ಟದಲ್ಲಿ ಇಂಗ್ಲಿಷಿಗೆ ತೆರೆದುಕೊಂಡವರು. ನಾವೆಲ್ಲರೂ ಇಂಗ್ಲಿಷನ್ನು ಸಲೀಸಾಗಿ ಬಳಸುತ್ತಿಲ್ಲವೇ? ಹೌದು, ಕೆಲ ಸಂದರ್ಭಗಳಲ್ಲಿ ಇಂಗ್ಲಿಷ್ ಒಂದು ಸವಾಲು ಎನಿಸಿತ್ತು. ಆದರೆ ಅದೇನೂ ಮೀರಲಾರದ ಸವಾಲಾಗಿರಲಿಲ್ಲ. ಏಕೆಂದರೆ ನಮ್ಮ ಇಂಗ್ಲಿಷ್ ಈಗಿನವರ ಇಂಗ್ಲಿಷಿಗಿಂತ ಚೆನ್ನಾಗಿಯೇ ಇದೆ! ಈಗ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವವರೆಲ್ಲ ಸರ್ವಜ್ಞರಾಗಿಬಿಡುವುದಿಲ್ಲ. ಏಕೆಂದರೆ ನಮಗಿರುವ ಸವಾಲು ಕಲಿಯುವ ಮಾಧ್ಯಮದ್ದಲ್ಲ. ಶಿಕ್ಷಣದ್ದು. ಈ ಸವಾಲನ್ನು ಎದುರಿಸುವ ಬದಲಿಗೆ ಅದರಿಂದ ತಪ್ಪಿಸಿಕೊಳ್ಳುವ ಹಾದಿಯಾಗಿ ಮಾಧ್ಯಮದ ಕುರಿತ ಚರ್ಚೆಯನ್ನು ಅನವಶ್ಯಕವಾಗಿ ಬೆಳಸುತ್ತಿದ್ದೇವೆ. ನಮ್ಮ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣಗಳೆರಡೂ ಈ ಕಾಲದ ಅಗತ್ಯವನ್ನು ಪೂರೈಸುತ್ತಿಲ್ಲ. ಜಗತ್ತು ಹಳ್ಳಿಯಾಗಿರುವ ಈ ಹೊತ್ತಿನಲ್ಲಿಯೂ ನಮ್ಮ ಜ್ಞಾನದ ಎಲ್ಲೆಗಳನ್ನು ವಿಸ್ತರಿಸಿಕೊಳ್ಳಲು ಅಗತ್ಯವಿರುವ ಪರಿಕರಗಳನ್ನು ಇವು ಒದಗಿಸುತ್ತಿಲ್ಲ. ಈ ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ಮಾಧ್ಯಮ ಯಾವುದಾಗಿರಬೇಕು ಎಂಬುದರ ಕುರಿತು ಚರ್ಚಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಬದುಕಿಗೆ ಪ್ರಸ್ತುತವಾಗದ ಶಿಕ್ಷಣವನ್ನು ಯಾವ ಮಾಧ್ಯಮದಲ್ಲಿ ಒದಗಿಸಿದರೂ ಅದು ವ್ಯರ್ಥವೇ. ಮಕ್ಕಳ ಬೌದ್ಧಿಕ ವಿಕಸನಕ್ಕೆ ತಾಯ್ನುಡಿಯಲ್ಲೇ ಕಲಿಕೆಯಾಗಬೇಕು ಅನ್ನುವುದನ್ನು ಜಗತ್ತಿನ ವಿಜ್ಞಾನಿಗಳು, ಮನಶಾಸ್ತçಜ್ಞರು, ಕಲಿಕೆ ತಜ್ಞರು, ವಿಶ್ವಸಂಸ್ಥೆ ಸೇರಿದಂತೆ ಸಾವಿರಾರು ಜನರು ಪ್ರತಿಪಾದಿಸುತ್ತಾರೆ. ವಿಶ್ವಸಂಸ್ಥೆಯAತೂ

ಭಾಷೆ Read Post »

ಕಥಾಗುಚ್ಛ

ಕಥಾಗುಚ್ಛ

ವೃದ್ದಾಶ್ರಮ ಎಂಬ ಬೆಳಕು. ಸುಮಾ ಉಮೇಶ್ ಗೌಡ ಮೊಮ್ಮಕ್ಕಳು  ಶಾಲೆಗೆ ಹೋದ್ರು,  ಮಗ ಸೊಸೆ ಕೆಲಸಕ್ಕೆ ಹೋದ್ರು, ಬಾಗಿಲು ಭದ್ರ  ಪಡಿಸಿದ  ರಾಯರು ಪತ್ನಿಯ ಫೊಟೋ ನೋಡುತ್ತಾ  ಕುಳಿತರು  ಏಕಾಂಗಿ ಆಗಿ…    ಗಂಡು ಎಷ್ಟೆ ದರ್ಪದಿಂದ ಇದ್ರು ಪತ್ನಿ  ಮರಣಿಸಿದ ಮೇಲೆ ಹಲ್ಲು ಕಿತ್ತ ಹಾವಿನಂತೆ,  ಯಾರಿಗೆ ಬುಸುಗುಡಿದ್ರು  ಹೇದರಿಕೊಳ್ಳೊರು ಯಾರು..? ರಾಯರ ಬದುಕು ಇದಕ್ಕೆ ಹೊರತಾಗಿರಲಿಲ್ಲ…    ಸದಾ ಚಟುವಟಿಕೆ  ಇಂದ ಇರುವ ರಾಯರಿಗೆ, ನಿವೃತ್ತಿ ಅನ್ನೋದೇ  ಶಾಪವಾದ್ರು,  ಪತ್ನಿಯ ನಗು ಮುಖ,  ಹುಸಿ ಮುನಿಸು,  ಅವರ ಜೊತೆಯಾಗಿ ಲವಲವಿಕೆ ಇಂದ ಇರಲು ಕಾರಣ ಆಗಿತ್ತು,  ಆದರೆ ಆರು ತಿಂಗಳ ಹಿಂದೆ  ಪತ್ನಿ  ಅಗಲಿದ ಮೇಲೆ, ತನ್ನ ಮನೆಯಲ್ಲೇ ತಾನೊಬ್ಬ ಪರಕಿಯ ಅಂತಾಗಿ ಬಿಟ್ಟಿದ್ದರು…     ಪತ್ನಿ ಪದ್ಮಾನ ಫೋಟೋ ನೋಡ್ತಾ,  ಅದು ಯಾವ ದೇವರಿಗೆ ಮುತೈದೆ ಸಾವು  ಬರಲಿ ಅಂತಾ ಬೇಡಿಕೊಂಡೆ  ನೀನು,  ನಿನಗೆ  ಮುತೈದೆ ಸಾವು ಸಿಕ್ಕು,  ನಾನು  ಒಂಟಿಯಾಗಿ ಕೊರಗ್ತಾ ಇದೆನೆ. ನೀನು ನನ್ನ  ಜಾಗದಲ್ಲಿ ಇದ್ದಿದ್ರೆ,  ಅತ್ತು ಮನಸ್ಸು ಹಗುರ ಮಾಡಿಕೊಂಡು,   ಅಕ್ಕ ಪಕ್ಕದ ಮನೆಯವರ  ಜೊತೆ  ಮಾತಾಡ್ತಾ  ಹೇಗೋ ಒಂಟಿತನ  ದೂರ ಮಾಡಿಕೊಳ್ಳತಾ  ಇದ್ದೆ,  ಈಗ ನನ್ನ ಪರಿಸ್ಥಿತಿ ನೋಡು,  ಒಂಟಿಯಾಗಿ ನಾಲ್ಕು ಗೊಡೆಯ ಮಧ್ಯೆ ಇರಬೇಕಾಗಿದೆ,  ಸಂಜೆ ವಾಕಿಂಗ್ ಹೋದರೆ ಒಂಚೂರು ವೇಳೆ ಕಳಿತಿವಿ ಅಷ್ಟೆ…     ಹಾಗಂತ ನಿನ್ನ ಮಗ ಸೊಸೆ ಏನು ದ್ವೇಷಿಸ್ತಾ ಇಲ್ಲ,  ಚನ್ನಾಗಿ ನೋಡ್ಕೊತಾರೆ ನಿನಗೂ ಗೊತ್ತು ಅದು,  ಆದ್ರೆ ಮಮ್ಮಕ್ಕಳಿಗೆ  ಸ್ಕೂಲ್ ಹೊಂ ವರ್ಕ್  ಮಾಡೊಕೆ ವೇಳೆ ಸಾಲಲ್ಲಾ,  ಇನ್ನೂ ನನ್ನ ಜೊತೆ ಕಳೆಯೊಕೆ ಎಲ್ಲಿ ವೇಳೆ ಸಿಗಬೇಕು,  ಮಗ ಸೊಸೆ ಅವರವರ ಕೆಲಸದಲ್ಲಿ ಬ್ಯುಸಿ,  ಸರಿಯಾದ ಟೈಮ್ ಗೆ ಊಟ ತಿಂಡಿ ಮಾಡಿಕೊಟ್ರೆ ಮುಗಿತು,  ಮಗನ ಜೊತೆ ನಾಲ್ಕು ಮಾತು  ಮಾತಾಡೊಕು  ಟೈಮ್ ಇರಲ್ಲ…    ಇದು ನನ್ನೊಬ್ಬನ ಗೋಳಲ್ಲ  ಪದ್ಮಾ,  ಪತ್ನಿಯನ್ನು ಕಳೆದುಕೊಂಡ  ನನ್ನಂತಹ ವಯಸ್ಸಾದವರ ಗೋಳು,  ನಲವತ್ತು ವರುಷ ಸಂಸಾರ ಮಾಡಿ, ಹೀಗೆ ದಿಡಿರ್ ಅಂತಾ ಹೋಗಿಬಿಟ್ರೆ,  ಎಲ್ಲದಕ್ಕೂ  ಪತ್ನಿ ನೆ  ಅವಲಂಬಿಸಿ, ಪತ್ನಿ ಎಷ್ಟೆ  ಚನ್ನಾಗಿ ಬದುಕು ಸಂಬಾಳಿಸಿದರು, ಮತ್ತು ಅವಳ ಮೇಲೆ ರೇಗಾಡೊ ಅಂತಾ ನಮ್ಮ  ಗಂಡಸರ ಸ್ಥಿತಿ ಹೀಗೆ  ಪತ್ನಿ ಹೋದಮೇಲೆ…     ಹಿಂದಿನ ಮನೆ ರಾಮಣ್ಣನ ಪತ್ನಿ ನಾಲ್ಕು ತಿಂಗಳ ಹಿಂದೆ ತೀರಿಕೊಂಡಳು,  ಅವನ ಜೀವನ ಕೂಡಾ ಹೀಗೆ,  ಆಚೆ ಮನೆ ಭೀಮ,  ನನ್ನ ಕ್ಲಾಸ್ ಮೇಟ್  ಸದಾನಂದಾ ಎಲ್ಲರು  ಹೀಗೆ,  ಕೆಲವರಿಗೆ  ಅಂತು ಮಗ ಸೊಸೆ  ಅಂತು  ಸರಿಯಾಗಿ ನೋಡಿಕೊಳ್ಳೊದೆ ಇಲ್ಲ ಪಾಪ,     ನಮ್ಮ ಬಾಸ್  ಶಂಕರ್ ಅವರ ಪತ್ನಿ ಕೂಡಾ  ಹೋದ್ರಂತೆ,  ಹುಲಿ ಅಂತೆ ಇದ್ದವರು ಈಗ  ಇಲಿ ಅಂತೆ ಆಗಿಬಿಟ್ಟಿದಾರೆ,  ಇನ್ನೂ ನಿವೃತ್ತಿ ಆಗಿಲ್ಲ,  ಸದಾ ಕೆಲಸದಲ್ಲೆ  ಮುಳುಗಿರ್ತಾರೆ  ಒಂಟಿತನ  ಮರೆಯಲು,  ಆದ್ರು  ಇಷ್ಟು ವರ್ಷ ಸಂಸಾರ ಮಾಡಿದ  ಸಂಗಾತಿ  ಇಲ್ಲದ ಏಕಾಂತ ಅನುಭವಿಸೋದು  ಹೆಣ್ಣಿಗಿಂತ ಗಂಡಿಗೆ  ಕಷ್ಟ. ಪತ್ನಿಯ ಪಟದ ಎದುರು ಮಾತಾಡ್ತಾ,  ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದ  ರಾಯರ ಫೋನ್ ಗೆ ಕರೆ ಬಂತು,  ಜಾರಿದ ಕಣ್ಣೀರು ಒರೆಸಿಕೊಂಡು  ಫೋನ್ ರಿಸೀವ್ ಮಾಡಿದರು …     ಅರೆ,  ನಮ್ಮ ಬಾಸ್ ಶಂಕರ್ ಅವರ ನಂಬರ್,  ಅವರು ತುಂಬಾ ಕುಗ್ಗಿಹೋಗಿದ್ರು ಅವರಿಗೆ ಏನಾದರೂ ಆಯ್ತಾ,  ಅಯ್ಯೋ ದೇವರೆ ಹಾಗಾಗದೆ ಇರಲಿ ಅಂದು ಫೋನ್ ರಿಸೀವ್ ಮಾಡಿದ…    ರಾಯರೆ ಏನ್ಮಾಡ್ತಿದ್ರಿ..? ಬಾಸ್ ಧ್ವನಿ ಕೇಳಿ ಸಮಾಧಾನ ಆಯ್ತು,  ಇನ್ನೆನಿರುತ್ತೆ ಸರ್,  ಒಂಟಿ ಮನೆಯಲ್ಲಿ ಅಂತರ್ ಪಿಶಾಚಿ ತರ ಇದೆನೆ… ರಾಯರೆ ಹಾಗೆಕಂತಿರಾ..? ಮತ್ತಿನ್ನೇನು  ಸರ್,  ನಮ್ಮ ಕಷ್ಟ ಸುಖ, ನೋವು ನಲಿವು ಕೇಳೊ ಜೀವ ಇಲ್ಲ, ನಿಮಗೂ ಅನುಭವ  ಆಗಿದೆ ಅಲ್ವಾ ಸರ್… ಅದು ನಿಜಾನೆ ರಾಯರೆ, ಎಷ್ಟೆ ಕೋಪ, ಮುನಿಸು ಇದ್ರು,  ನಮ್ಮ ಕಷ್ಟ ಕೇಳೊ  ಪತ್ನಿನ ಇದ್ದಾಗ ಅರ್ಥ ಮಾಡಿಕೊಳ್ಳುವಲ್ಲಿ  ಸೋತಬಿಟ್ಟೆ,  ಈಗ  ಒಂದೊಂದು ಕ್ಷಣ  ಅವಳ  ನೆನಪಿಲ್ಲದೆ  ಬದುಕಲು ಆಗ್ತಾ ಇಲ್ಲ,  ಹಾ ರಾಯರೆ  ನಿಮಗೆ  ಒಂದು ಮುಖ್ಯವಾದ  ವಿಷಯ ತಿಳಿಸಬೇಕಿತ್ತು… ಎನ್ ಸರ್ ಅದು…    ರಾಯರೆ ನಾನು  ಸ್ವಯಂ ನಿವೃತ್ತಿ ಪಡಿತಾ ಇದೆನೆ…    ಸರ್, ಯಾಕೆ ಹಾಗೆ ಮಾಡಿದ್ರಿ,  ಕೆಲಸ ಇಲ್ಲದೇ  ಒಂಟಿಯಾಗಿ ವೇಳೆ ಕಳಿಯೋದು ತುಂಬಾ ಕಷ್ಟ…    ನಿಜಾ  ರಾಯರೆ, ನಾನೊಂದು ನಿರ್ಧಾರಕ್ಕೆ ಬಂದಿದೆನೆ, ಉಳಿದಿರೊ ಜೀವನ ಸಂತೋಷ ವಾಗಿ  ಕಳೆಯಬೇಕು,   ಮಕ್ಕಳು ಸೊಸೆ, ಅಳಿಯ  ಯಾರ ಹಂಗು ಇಲ್ಲದೇ,  ವೃದ್ದಾಶ್ರಮದಲ್ಲಿ  ಇರಬೇಕು ಅಂತಾ ಮಾಡಿದೆನೆ,  ಅಲ್ಲಿ ನಮ್ಮಂತಹ ಹಿರಿಯ ಜೀವಗಳು ಇರ್ತಾರೆ,  ಸಮಾನ ವಯಸ್ಕರ ಜೊತೆ  ಇಡೀ ದಿನ ಕಳೆದು,  ಮನಸ್ಸು  ಉಲ್ಲಾಸಿತ ಆಗಿರಬೇಕು ಅಂದ್ರೆ ಅದೆ ಸರಿ ಅನ್ನಿಸಿತು,  ನನ್ನ ಗೆಳೆಯ ಒಬ್ಬನು ಈಗ ವರ್ಷದಿಂದ ಇದಾನೆ,  ಅವನು  ಅಲ್ಲಿ   ಖುಷಿ ಇಂದ ಇದಾನೆ, ನೀವು ಬನ್ನಿ, ಆದರೆ  ನಾನಲ್ಲಿ  ನಿಮ್ಮ  ಬಾಸ್ ಅಲ್ಲ  ಗೆಳೆಯ, ನಾವು ಸಮಾನ ದುಃಖಿಗಳು…     ರಾಯರು  ತುಂಬಾ ಯೋಚನೆ ಮಾಡಿ  ತಮ್ಮ  ವಾಕಿಂಗ್ ಗೆಳೆಯರ  ಜೊತೆ ಚರ್ಚಿಸಿದಾಗ, ಒಂದು ರೀತಿಯಲ್ಲಿ ಅದೆ  ಸರಿ ಅನ್ನಿಸಿತು,  ಸಮಾನ ವಯಸ್ಕರು,  ಸಮಾನ ದುಃಖಿಗಳು ಇರುವೆಡೆ,  ಕ್ರಿಯಾಶಿಲರಾಗಿ  ವೃದ್ದಾಶ್ರಮದಲ್ಲಿ  ಇರೋದೇ  ಸರಿ ಅನ್ನಿಸಿತು…    ಮಗನಿಗೆ ನಿರ್ಧಾರ ತಿಳಿಸಿದಾಗ,  ನಾವೆಲ್ಲ ಇದ್ದು ವೃದ್ದಾಶ್ರಮ ಯಾಕೆ ಅಪ್ಪಾ ,  ನೋಡಿದವರು  ತಂದೆಯನ್ನು ಮಗ ಸೊಸೆ  ಚನ್ನಾಗಿ ನೋಡಿಕೊಳ್ಳಲಿಲ್ಲ  ಅಂತಾ ಆಡಿಕೊಳ್ಳುತಾರೆ,  ನಾವೇನು ಕಡಿಮೆ ಮಾಡಿದೆವೆ…. ಮಾವ   ನಿಮ್ಮ ಆರೋಗ್ಯಕ್ಕೆ  ಹೊಂದುವಂತ  ಊಟ, ಸರಿಯಾದ ವೇಳೆಗೆ ಮಾತ್ರೆ,  ತಿಂಗಳಿಗೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋದ್ರು ಯಾಕೆ ಮಾವ ಇಂತಹ ನಿರ್ಧಾರ ತಗೆದುಕೊಂಡ್ರಿ   ಅಂದು ಮಗ ಸೊಸೆ  ಒಪ್ಪಲಿಲ್ಲ… ಮಕ್ಕಳು ಚನ್ನಾಗಿ ನೋಡಿಕೊಳ್ಳಲಿಲ್ಲಾ ಅಂತಾ ವೃದ್ದಾಶ್ರಮ ಕ್ಕೆ  ಹೋಗ್ತಾ ಇಲ್ಲ, ನನ್ನ ಏಕಾಂತತೆ  ದೂರ ಮಾಡಿಕೊಳ್ಳಲು ಅಂದು ರಾಯರು ಅರ್ಥ ಮಾಡಿಸಿ, ಬಿಡಿಸಿ,  ಸಮಾಧಾನ ದಿಂದ   ಹೇಳಿದಾಗ ತಂದೆಯ ಮಾತಲ್ಲೂ  ಸತ್ಯ ಇದೆ ಅಂದು ಒಪ್ಪಿದ,  ಮಗ ಸೊಸೆ  ಸಂತೋಷಕ್ಕೆ  ಮೊಮ್ಮಕ್ಕಳೊಂದಿಗೆ  ದೀಪಾವಳಿ ಆಚರಿಸಿ  ವೃದ್ದಾಶ್ರಮ ಕಡೆ  ನಡೆದರು ರಾಯರು …    ವೃದ್ದಾಶ್ರಮ ಕ್ಕೆ  ಹೋದ ರಾಯರಿಗೆ ಹೊಸ ಲೋಕ ತೇರೆದಂತಾಯಿತು,  ತಮ್ಮ ಬಾಸ್ ಜೊತೆ ಆದ್ರು,  ತಮ್ಮಂತಹ ಅನೇಕರು  ಸಿಕ್ಕರು,  ರಾಯರಿಗೆ  ನಿಜವಾದ ದೀಪಾವಳಿ  ವೃದ್ದಾಶ್ರಮದ  ಸ್ನೇಹಿತರ, ಸಂಗಡಿಗರ, ಮೇಲ್ವಿಚಾರಕರ   ಸ್ನೇಹ,  ಪ್ರೀತಿ ಆತ್ಮೀಯತೆಯಲ್ಲಿ  ಸಿಕ್ಕಿತು,  ವೃದ್ದಾಶ್ರಮ ಒಂಟಿ  ಬಾಳಿಗೆ ಬೇಳಕಾಯ್ತು…. ================================= ಪರಿಚಯ: ಗೃಹಿಣಿ,ಹವ್ಯಾಸಿ ಲೇಖಕಿ,ಇವರ ಹಲವು ಬರಹಗಳು ವಿವಿಧ ಪತ್ರಿಕೆಗಳಲ್ಲಿಬಂದಿವೆ.ಇನ್ನೂ ಪುಸ್ತಕ ಹೊರತಂದಿಲ್ಲ

ಕಥಾಗುಚ್ಛ Read Post »

ಕಾವ್ಯಯಾನ

ಕಾರ್ಟೂನ್ ಕೋಲ್ಮಿಂಚು

ಡಾ.ಎನ್.ಸುಧೀಂದ್ರ ಪರಿಚಯ: ಕನ್ನಡ  ಸ್ನಾತಕೋತ್ತರ ಪದವಿ. .”ಕನ್ನಡ ರೇಡಿಯೋ ನಾಟಕಗಳು” ವಿಷಯದಲ್ಲಿ ಕುವೆಂಪುವಿ,ವಿ ಯಿಂದ ಡಾಕ್ಟರೇಟ್. ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿ ಯಾಗಿ ಸೇವೆ. ಈಗ ವಿಶ್ರಾಂತ ಸ್ಪಂದನಟೀವಿಚಾನಲ್ ಶಿವಮೊಗ್ಗ ,ಇದರಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ  ಸೇವೆ. ಮಲೆನಾಡು ಮೀಡಿಯ ವೆಬ್ ಪೋರ್ಟಲ್ ಸಂಪಾದಕರಾಗಿ ಸೇವೆ

ಕಾರ್ಟೂನ್ ಕೋಲ್ಮಿಂಚು Read Post »

ಕಾವ್ಯಯಾನ

ಕಾವ್ಯಯಾನ

ಕಾಡುಹರಟೆ ಮತ್ತು ಕವಿಗೋಷ್ಠಿ. ವಿಜಯಶ್ರೀ ಹಾಲಾಡಿ ವಾರವಿಡೀ ಕಾಡುಮುನಿಯ ಹಕ್ಕಿಗಳು ಮರಿಗಳಿಗೆಂದು ಗೂಡುನೇಯುತ್ತಿದ್ದವು ಕಟ್ಟಿರುವೆಗಳು ಹುಲ್ಲಿನ -ಬೀಜಕ್ಕಾಗಿ ಜಗಳಾಡಿದವು ಗೋಡೆಗಳನ್ನು ಕಾಲುದಾರಿ ಮಾಡಿಕೊಂಡ ಅಳಿಲು ಮುಂಗುಸಿ ಮತ್ತದರ ಮಗು ಪಕ್ಕದ ಖಾಲಿ ಸೈಟಿನಲ್ಲಿ ವಿಹರಿಸುತ್ತಿದ್ದವು.. ಹುಲ್ಲುಗಾವಲಲ್ಲಿ ಕಿವಿಗಳು ಕಂಡದ್ದಷ್ಟೇ ಬೆಚ್ಚನೆಯ ಪಾದವನ್ನು ಎದೆಯೊಳಗೆ ಊರಿ ಮೊಲವೊಂದು ನಾಗಾಲೋಟ ಹೂಡಿತು ಹಿಂದಿನ ಮನೆಯ ಕಿಟಕಿ ಗಾಜನ್ನು ಮರಕುಟಿಕವೊಂದು ಬಡಿದದ್ದೇ ಬಡಿದದ್ದು ಅದರ ತಲೆಯೊಳಗೆ ಮೆದುಳು ಕದಡಲೇ ಇಲ್ಲವಲ್ಲ ಎಂದು ಅಚ್ಚರಿಪಡುತ್ತ ಕಾಲಹರಣಮಾಡಿದೆ.. ನನ್ನ ರಜಾದಿನಗಳು ಹೀಗೇ ಕವಿತೆ ಹುಟ್ಟಿಸುತ್ತ ಶುದ್ಧ ಕಾಡುಹರಟೆಯಾಗಿ ಸದ್ದಲ್ಲದ ಸದ್ದಿನ ಹನಿಗಳಾಗಿ ಖಾಲಿಯಾದವು ಗೆಳತೀ ಹೇಳು ನಿನ್ನ ಕವಿಗೋಷ್ಟಿಯಲ್ಲಿ ಇಂತವೆಲ್ಲ ಇದ್ದುವೇ!? ==============

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಕೃತಿ ಲೋಕಾರ್ಪಣೆ

ಬಂಟಮಲೆ ತಪ್ಪಲಿನಲ್ಲಿ ಪುಸ್ತಕಸಂಭ್ರಮ ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಮುಖ್ಯಸ್ಥ ಶ್ರೀ ಡಾ.ಪುರುಷೋತ್ತಮ ಬಿಳಿಮಲೆಯವರ-“ವಲಸೆ,ಸಂಘರ್ಷ ಮತ್ತು ಸಮನ್ವಯ” ಕೃತಿ ನವೆಂಬರ್ 9 ರಂದು ಲೋಕಾರ್ಪಣೆಗೊಳ್ಳಲಿದೆ. ಕೃತಿಯ ಹೆಸರು-“ವಲಸೆ, ಸಂಘರ್ಷ ಮತ್ತು ಸಮನ್ವಯ” ಲೇಖಕರು-ಡಾ.ಪುರುಷೋತ್ತಮ ಬಿಳಿಮಲೆ ಸ್ಥಳ-ಬಂಟಮಲೆ ತಪ್ಪಲಿನ ಬಿಳಿಮನೆ ಅದ್ಯಕ್ಷತೆ-ಟಿ.ಜಿ.ಮುಡೂರು ಬಿಡುಗಡೆ-ಪ್ರೊ.ಬಿ.ಎ.ವಿವೇಕ ರೈ ಅತಿಥಿಗಳು-ಪ್ರೊ.ಕೆ.ಚಿನ್ನಪ್ಪಗೌಡ ಮತ್ತು ಜಾಕೆ ಮಾದವಗೌಡರು.

ಕೃತಿ ಲೋಕಾರ್ಪಣೆ Read Post »

ಕಾವ್ಯಯಾನ

ಕಾವ್ಯಯಾನ

ಮೌನ ಮಾರಾಟಕ್ಕಿದೆ ತನುನಯ ಮೌನದ ಜೊತೆ ಮಾತು ಬಿಡುವ ಮನಸಾಗಿದೆ ಮೌನವೂ ಸಮ್ಮತಿಸಿ ಟೂ ಬಿಟ್ಟು ನಡೆದಿದೆ ಹಾಳು ಮಳೆಯ ಜೊತೆ ಕಾಡು ಹರಟೆ ಜೋರಾಗಿದೆ ನಿಲ್ಲುತ್ತಿಲ್ಲ ಮಾತಿನ ಮಳೆ ಮುಗಿಸುವ ಮನಸಿಲ್ಲದೆ ಮಳೆಗೂ ಮನಸಿಗೂ ಮಾತಿಲ್ಲದ ಜೊತೆಗಾರರಿಲ್ಲದೆ ಮಳೆಯೂ ಕೂಡ ಮೌನವನು ಮಾರಿಬಿಡು ಎನ್ನುತಿದೆ ಮಾತು ಮುಗಿಯುತ್ತಿಲ್ಲ  ಮೌನವಿಂದು ಮಾರಾಟಕ್ಕಿದೆ ಮಾತಿನ ಸಂತೆಯಲಿ ಕೊಳ್ಳುವವರಿಲ್ಲದೆ ಮೌನ ಮರುಗುತ್ತಿದೆ ಕೊಳ್ಳುವೆಯ ಮೌನವನು ನಿನ್ನ ಮಾತು ಮರೆತು ಬರೆಯುವೆನು ಕವಿತೆಯ ನಿನ್ನೊಲವ ಅರಿತು… =====================

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವ್ಯತ್ಯಾಸ ಪ್ರಮೀಳಾ ಎಸ್.ಪಿ. ಎದೆಯ ಮೇಲೊಮ್ಮೆ ಕಿವಿಯಿಡು ನಿನ್ನೆಸರೇ ನನ್ನುಸಿರಲಿ ಎಂದಿದ್ದವ ಗೊರಕೆ ಸದ್ದುಸಹಿಸಲಾರೆ ದೂರ ಮಲಗುವೆಯಾ ಎನ್ನುತ್ತಿದ್ದಾನೆ ಬೈಕ್ ಮೇಲೆ ನಿನ್ನಬಾಡಿ ಲೈಟ್ ವೈಟ್,ಹಾರೀಯೆ ಎಂದಿದ್ದವ ಕಾರಿಗೂ ಮುಂಬಾರ ಹಿಂದೆ ಕೂರುವೆಯಾ ಎನ್ನುತ್ತಿದ್ದಾನೆ. ನಿನ್ನ ಮುಡಿಗೆ ಮಲ್ಲಿಗೆ ತಂದಿರುವೆ ಮುಡಿಯಲೇ ಬೇಕು ಎಂದಿದ್ದವ ಮಾರೀಗ ರೂಪಾಯಿ ನೂರು ಖಾಲಿ ಜಡೆಯೆ ಚೆನ್ನ ಎನ್ನುತ್ತಿದ್ದಾನೆ ಮಸಾಲೆ ದೋಸೆ ನಿನ್ನಿಷ್ಟ ತಿನ್ನು ನೀ ಎಷ್ಟಾದರೂ ಎಂದಿದ್ದವ ಅನ್ನ ಸಕ್ಕರೆ ಬೇಡ ಸಿರಿಧಾನ್ಯ ತಿನ್ನಲಾರೆಯಾ ಎನ್ನುತ್ತಿದ್ದಾನೆ. ಸೀರೆಯಲಿ ನೀ ಸುಂದರಿ ಕಡು ನೀಲಿ ನಿನಗಂದ ಎಂದಿದ್ದವ ಕಪ್ಪನೆ ಮೈ ಬಣ್ಣದವಳಿಗೆ ಅದ್ಯಾವ ಸೀರೆಯಾದರೇನು ಎನ್ನುತ್ತಿದ್ದಾನೆ ನಿನ್ನ ಮಾತೆ ಎನೆಗೆ ಕೇಳಿದಷ್ಟು ಇಂಪು, ಮನವೆಲ್ಲ ತಂಪು ಎಂದಿದ್ದವ ನಾಯಿ ಬೊಗಳಿದ ಸದ್ದು ಮಾತು ನಿಲ್ಲಿಸುವೆಯಾ ಎನ್ನುತ್ತಿದ್ದಾನೆ. ಕೇಳುವುದಾದರೂ ಯಾರಿಗೆ ನಾನು,ಪ್ರಶ್ನೆಗಳನು….? ಇರುವುದಾದರೂ ಯಾರು ಉತ್ತರಿಸಲು? ಬರೆಯಲೇನಿದೆ ಬಿಳಿ ಹಾಳೆಯ ಮೇಲೆ…. ಕಡಿಮೆಯಾಗಿದ್ದು ಪ್ರೀತಿಯೇ ಯಾರಿಗೆ ಕೇಳಲಿ? ಹೇಳಲಿ? =======

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾ ಮನುಷ್ಯಾ ಅದೀನಿ ಚಂರಾನನ ದು:ಖ ಆದಾಗ ಅತ್ತೇನಿ ಸಂತೋಷ ಆದಾಗ ನಕ್ಕೇನಿ ಯಾಕಂದ್ರ ನಾ ಮನಷ್ಯಾ ಅದೀನಿ….. ಮನಸ್ನ್ಯಾಗೊಂದು, ಮಾತ್ನ್ಯಾಗೊಂದು, ಕೆಲಸ್ದಾಗೊಂದು ಮಾಡಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ…. ಮುಖವಾಡ ಇಟ್ಕೊಂಡ್ ನೋಡಿಲ್ಲ ಮುಖವಾಡ ಹಾಕ್ಕೊಂಡ್ ಆಡಿಲ್ಲ ಯಾಕಂದ್ರ ನಾ ಮನುಷ್ಯಾ ಅದೀನಿ….. ಇದ್ರ ಕೊಟ್ಟೀನಿ,ಇಲ್ಲಾಂದ್ರ ಬಿಟ್ಟೀನಿ ಮುಂದ್ ಹೊಗಳಿಲ್ಲ,ಹಿಂದ್ ಬೈದಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ….. ಕಷ್ಟ ಅಂದ್ರ ಕರಗೀನಿ,ಇಷ್ಟ ಅಂದ್ರ ಹಿಗ್ಗೀನಿ ಏನೂ ಇಲ್ಲಾಂದ್ರ ಸುಮ್ಮನದೀನಿ ಯಾಕಂದ್ರ ನಾ ಮನಷ್ಯಾ ಅದೀನಿ…… ಬದಕಾಕ ರೊಕ್ಕ ಬೇಕ,ರೊಕ್ಕಕ ಬದಕಿಲ್ಲ ಇದ್ದಾಗ ಉಂಡೇನಿ,ಇಲ್ಲದಾಗ ನೊಂದೇನಿ ಯಾಕಂದ್ರ ನಾ ಮನಷ್ಯಾ ಅದೀನಿ….. ===========================

ಕಾವ್ಯಯಾನ Read Post »

You cannot copy content of this page

Scroll to Top