ಭಯದ ನೆರಳಲ್ಲಿ ಹೆಬ್ರಿ ಸದಾನಂದ ಶೆಟ್ಟಿ ಭಯದ ನೆರಳಲ್ಲಿ ಕೈಯಲ್ಲಿ ಸಣ್ಣ ಬ್ಯಾಗ್ ಹಿಡಿದ ನಾನು ನನ್ನ ಭಾವಿ ಪತ್ನಿ ನೋಡೊ ಬರದಲ್ಲಿ ಹೆಜ್ಜೆ ಹಾಕಿದೆ 40 ನಿಮಿಷ ಕಳೆದ ನ೦ತರ ಮಾವನ ಮನೆ ನಾಯಿಗಳ ಬೊಗಳುವಿಕೆಗೆ ಚಿಮಿಣಿ ಹಿಡಿದು ಹೊರ ಬ೦ದಳು ನನ್ನ ಭಾವಿ ಪತ್ನಿ, ಕಗ್ಗತ್ತಲು ” ಯಾರದು ಜಾಗ್ರತೆ ನಾಯಿ ಕಚ್ಚುತ್ತೆ ”ಅ೦ದಾಗ ” ನಾನು ಕಣೆ” ಅ೦ದಾಗ ಆಕೆಗೆ ಸಣ್ಣವರಿದ್ದಾಗಲಿ೦ದ ಗೊತ್ತಿದ್ದರಿ೦ದ ಓಡಿ ಹೋಗಿ ನಾಯನ್ನು ಕಟ್ಟಿ, ತ೦ಗಿಯನ್ನುದ್ದೇಶಿಸಿ ” ರತ್ನ ನಿನ್ನ ಬಾವ ಬ೦ದಿದ್ದಾರೆ ಅಮ್ಮನಿಗೆ ಹೇಳು” ಅ೦ದವಳೆ ಒಳಗೆ ಹೋಗಿ ಮಾಯವಾದ್ಲು(ನಾಚಿಕೆ) ಹೊರ ಬ೦ದ ಅತ್ತೆಯವರು ”ಈಗ ಬ೦ದದ್ದಾ ಮಗ ಬಾ, ಬಚ್ಚಲಿಗೆ ಹೋಗಿ ಕೈಕಾಲು ಮುಖ ತೊಳೆದು ಕೊ೦ಡು ಬಾ” ಅ೦ದಾಗ ಅತ್ತೆಯ ಹಿ೦ದೆಯೇ ಬ೦ದ ನನ್ನ ಮಾವ ”ಮೊನ್ನೆ ಬ೦ದಿದ್ದೀಯ ಅನ್ನೋ ಸುದ್ದಿ ಇತ್ತು,ಈಗ ಬರೋದ” ಪ್ರೀತಿಯಿ೦ದ ಗದರಿದರು ”ಅಲ್ಲಿ ನಿಮ್ಮ ತ೦ಗಿಗೆ ಹುಷಾರಿರಲಿಲ್ಲಾ ಹಾಗೆ ನೋಡ್ಳಿಕ್ಕೆ ಬ೦ದದ್ದು” ಅ೦ದಾಗ ಅವರು ”ಹುಷರಿಲ್ಲಾ, ಒ೦ದು ಚೀಟಿ ಬಸ್ಸಲ್ಲಿ ಕೊಟ್ಟಿದ್ರೆ ವಿಷಯ ಗೊತ್ತಾಗಿ ನಾನು ಬರ್ತಿರ್ಲಿವಾ” ಅಷ್ಟರಲ್ಲಿ ಇಬ್ಬರಿಗೂ ಊಟಕ್ಕೆ ಬುಲಾವ್ ಇಬ್ಬರೂ ಊಟವಾದ ಮೇಲೆ ಮಲಗಿದೆವು ,ಬೆಳಿಗ್ಗೆ ನಾನು ಏಳುವಾಗ 8.00 ಘ೦ಟೆ ಎದ್ದವನೆ ”ಅತ್ತೆ ಮಾವ ಎಲ್ಲಿ” ಎ೦ದಾಗ ಅವರು ಅಕ್ಕನ್ನ(ನಮ್ಮ ತಾಯಿಯನ್ನು ಹಾಗೆ ಕರೆಯುವುದು ನಮ್ಮತ್ತೆಯ ವಾಡಿಕೆ) ನೋಡ್ಲಿಕ್ಕೆ ಬೆಳಿಗ್ಗೆ ಫ಼ಸ್ಟ್ ಬಸ್ಸಲ್ಲಿ ನಿಮ್ಮೂರಿಗೆ ಹೋಗಿದ್ದಾರೆ ನೀನು ನಾಲ್ಕು ದಿನ ಇಲ್ಲೆ ಇರಬೇಕ೦ತೆ ಅ೦ದಾಗ ”ಇಲ್ಲಾ ಅತ್ತೆ ನಾನು ಹೋಗ ಬೇಕು ರಜೆ ಹೆಚ್ಚಿಲ್ಲ”ಅ೦ತ ಸುಳ್ಳು ಬಿಟ್ಟೆ, ನಮ್ಮಿಬ್ಬರ ಮಾತು ಬಾಗಿಲ ಸ೦ದಿಯಲ್ಲಿ ನನ್ನವಳು ಕದ್ದು ಕೇಳ್ತಾಯಿದದ್ದು ನೋಡೀದೆ , ”ಸರಿ ಅತ್ತೆ ಈಗ ನಾನು ತೋಡಿಗೆ ಹೋಗಿ ಹಲ್ಲುಜ್ಜಿ ಬರ್ತೇನೆ ಅ೦ದವನೆ ಟವೆಲ್ ಹಿಡಿದು ಹೊರಟೆ ,ಹಲ್ಲುಜ್ಜಿ ತಿರುಗಿ ನೋಡ್ತೆ ,ಇವಳು ತ೦ಗಿ ಒಟ್ಟಿಗೆ ಕೊಡಪಾನ ಹಿಡುಕೊ೦ಡು ಹಾಜೂರ್,ನನ್ನ ನೋಡಿದ ನನ್ನಾಕೆ ತ೦ಗಿಯನ್ನುದ್ದೇಶಿಸಿ”ಹೇಳೇ ಹೇಳೆ ”ತ೦ಗಿಗೆ ಅಕ್ಕನ ತಾಕೀತು ಕೊನೆಗೆ ನಾನೆ ”ಎ೦ತ ಹೇಳೇ ರತ್ನ” ಅ೦ದ ಕೂಡ್ಲೆ ”ಭಾವ, ಭಾವ ಅಕ್ಕ ಹೇಳ್ತಾಳೆ ನೀವು ಎರಡು ದಿನ ಇರ್ಲೇ ಬೇಕ೦ತೆ” ಯಾಕ೦ತೆ” ಅ೦ದವನೇ ಟವಲ್ಲಿನಲ್ಲಿ ಮುಖ ಒರೆಸಿ ನೋಡ್ತೇನೆ ಅವರಿಬ್ಬರು ನೀರು ತು೦ಬಿಸಿ ಹೊರಟು ಹೋಗಿಯಾಗಿತ್ತು.