ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮನದ ಹನಿಗಳು ಅನಿತ ಕೃಷ್ಣಮೂರ್ತಿ ಸಿದ್ದವಾದ ಸೆಳೆತದ ಹೊಸ್ತಿಲು ಸದ್ದಿರದೆ ಸುಳಿದಾಡಿದೆ ಸ್ನೇಹ ಸೇತುವೆ ಹತ್ತಲು ಸಾಧಿಸಲು ಗುರಿ ಮುಂದಿನ ಹಾದಿ ನೂರಾರು ಬಾಧಿಸಲು ಕಾಯಬಹುದು ಆಲೋಚನೆಯ ಕರಾರು ಮನಸಲಿ ಕತ್ತಲಿರುವಾಗ ಕಣ್ಣಿನ ಹೊಳಪು ಬೆಳಕಾಗಿ ಸುತ್ತಲಾಗಲಿಲ್ಲ ನಾನೇಕೆ ಹುಡಕಲಿ ನಿನ್ನ ಅಲ್ಲಿ ಇಲ್ಲಿ ಮಾಸದಂತೆ ಉಳಿದಿದೆ ನಿನ್ನದೇ ಚಿತ್ರ ಮನದ ಭಿತ್ತಿಯಲಿ ಹಟದ ಬೇಲಿಯನ್ನೇ ಸುತ್ತಿಕೊಂಡಿದ್ದ ಮನಸು ದಾಟಿ ಬಂದಿತ್ತು ಕಂಡು ನಿನ್ನ ಮಂದಸ್ಮಿತದ ಸೊಗಸು ಕಾದಿದೆ ತೆಪ್ಪವೊಂದು ಸೇರಿಸಲು ದೂರ ತೀರವನು ಕಾಡಿದೆ ನೆನಪೊಂದು ಹೊರಲಾರದೆ ದೂರಿನ ಭಾರವನು ನಾನೇಕೆ ಸ್ಪರ್ಧಿಸಲಿ ನಿನ್ನೊಂದಿಗೆ ಹೂವೇ ನಮ್ಮಿಬ್ಬರ ಗುರಿ ಒಂದೇ… ಒಲವೇ… ಅಲ್ಲವೆ! ಬೊಗಸೆಯಲ್ಲಿ ಹಿಡಿದ ಪ್ರೀತಿಗೂ ಕಣ್ಣ ರೆಪ್ಪೆಯಂತೆ ಕಾಪಾಡುವ ಮಮತೆಗೂ ಪೈಪೋಟಿಯೇ?  ಎಷ್ಟು ಮಾತನಾಡಿದೆನೋ ಹೊರಗೆ ಅಷ್ಟು ಮುಚ್ಚಿಟ್ಟಿರುವೆನು ಮೌನದೊಳಗೆ

ಕಾವ್ಯಯಾನ Read Post »

ಅಂಕಣ ಸಂಗಾತಿ

ಕಾಡುವ ಹಾಡು

ಈ ಬಾರಿ ರಾಜ್ಯೋತ್ಸವ ವಿಶೇಷಕ್ಕೆ ಕಾಡುವ ಹಾಡು “ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ” ಸುಜಾತ ರವೀಶ್ ಕನ್ನಡ ಭಾಷೆ ನಾಡು ಸಂಸ್ಕೃತಿಯನ್ನು ಹೊಗಳುವ ವರ್ಣಿಸುವ ಬಿಂಬಿಸುವ ಹಾಡುಗಳು ಸಾವಿರಾರು. ಆದರೂ ಚಿಕ್ಕಂದಿನಲ್ಲಿ ಆಕಾಶವಾಣಿಯಲ್ಲಿ ಕೇಳುತ್ತಿದ್ದ ಈ ಹಾಡು ಅಂದಿನಿಂದಲೂ ಮನದಲ್ಲಿ ಬೇರೂರಿದೆ. ನಿಜವಾದ ಅರ್ಥದಲ್ಲಿ ಕಾಡುವ ಹಾಡಾಗಿದೆ .ಯಾವುದು ಅಂತೀರಾ ?ಅದೇ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಂಗಮ ಚಿತ್ರದ ಈ ಹಾಡನ್ನು ವಿವಿ ಶ್ರೀನಿವಾಸ್ ಮತ್ತು ಸಿಕೆ ರಾದವರು ಹಾಡಿದ್ದಾರೆ ಬರೆದವರು ಸಿವಿ ಶಿವಶಂಕರ್ ಮತ್ತು ಸಂಗೀತ ಕೆಪಿ ಸುಖದೇವ್ ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ ಅನ್ನಿಸುತ್ತೆ ಆದರೆ ಹಾಡು ಅಬ್ಬಾ ಸೂಪರ್ ಡೂಪರ್ !!!!!! ಸಿರಿವಂತ/ತೆ ಆದರೂ ಭಿಕ್ಷುಕ/ಕಿ ಯಾದರೂ ಕನ್ನಡ ನಾಡಲ್ಲೇ ಇರುವ ಅಭೀಷ್ಟ ವ್ಯಕ್ತಪಡಿಸಿ ಅದನ್ನು ವಿವಿಧ ರೀತಿಗಳಲ್ಲಿ ವರ್ಣಿಸುತ್ತಾ ಹೋಗುತ್ತದೆ ಈ ಹಾಡು .ವೀಣೆಯ ಗೆ ಶೃಂಗೇರಿ ಶಾರದೆಯ ಕೈಯಲ್ಲಿ ನಲಿವ ವೀರ ಖಡ್ಗ ವಾಗಿ ಚಾಮುಂಡಿಯ ಕೈಯಲ್ಲಿ ಹೊಳೆವ ಅಭಿಲಾಷೆ ಶರಣರ ವಚನದ ಗಾನ ಮಾಧುರ್ಯ ಹಂಪೆಯ ಕಲ್ಲುಗಳ ಗಾಂಭೀರ್ಯ ಇಲ್ಲಿ ನೆನೆಯ ಪಟ್ಟಿಗೆ ದಾಸ ಸಾಹಿತ್ಯವೇ ಮೊದಲಾದ ಕನ್ನಡ ಸಾಹಿತ್ಯವೇ ನನ್ನ ಆಸ್ತಿ ಎನ್ನುತ್ತದೆ ಪಾತ್ರ ಮೀರುವುದಿದೆ ಕಾವೇರಿ ತುಂಗೆಯ ಮಡಿಲಲ್ಲಿ ಎಂದು ಸಾರುತ್ತದೆ ಇಡೀ ಗೀತೆಯ ಮುಕುಟ ಪ್ರಾಯವೇ ಕಡೆಯ ಸಾಲುಗಳು ಮೈ ಜುಮ್ಮೆನ್ನಿಸಿ ಪರವಶಗೊಳಿಸುವ ಕಣ್ಣಂಚಿನಲ್ಲಿ ಹನಿಯುತ್ತದೆ ಭಾವೋತ್ಕಟತೆ ದಾರಿ ಮಾಡುತ್ತದೆ ಮರುಜನ್ಮ ಪಡೆಯುವುದಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗುವ ಮಹದಾಸೆ ಎಂತಹ ಉದಾತ್ತ ಚಿಂತನೆ ಇದಕ್ಕಿಂತ ಮಿಗಿಲು ಇನ್ನೇನಾದರೂ ಇದೆಯೇ ಇಂದಿನ ಪೀಳಿಗೆಯ ಬಹಳ ಜನ ಈ ಹಾಡು ಕೇಳಿರುವುದಿಲ್ಲ ಹೀಗಾಗಿ ನನ್ನ ಮೆಚ್ಚಿನ ಹಾಡಿನ ಪೂರ್ಣ ಸಾಹಿತ್ಯ ಹಾಗೂ ಲಿಂಕ್ ನಿಮಗಾಗಿ . ಓದಿ ಕೇಳಿ ನಿಮ್ಮ ಅಮೂಲ್ಯ ಅಭಿಪ್ರಾಯ ವ್ಯಕ್ತಪಡಿಸುತ್ತೀರ ಅಲ್ವಾ? ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ. ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ ಶೃಂಗೇರಿ ಶಾರದೆ ಮಡಿಲಲ್ಲಿ ನಲಿದೆ ವೀರ ಖಡ್ಗವ ಝಳುಪಿಸುವ ಧೀರ ನಾನಾದರೆ ಚಾಮುಂಡಾಂಬೆಯ ಕರದಲ್ಲಿ ಹೊಳೆವೆ. ಶರಣಗೆ ವಂದಿಪ ಶರಣೆ ನಾನಾದೊಡೆ ವಚನವೆ ಬದುಕಿನ ಮಂತ್ರವೆನುವೆ. ವೀರಗೆ ವಂದಿಪ ಶೂರ ನಾನಾದೊಡೆ ಕಲ್ಲಾಗಿ ಹಂಪೆಯಲ್ಲಿ ಬಹುಕಾಲ ನಿಲ್ಲುವೆ . ದಾಸರಿಗೆ ವಂದಿಪ ಅಭಿಮಾನಿಯಾದೊಡೆ ಕನ್ನಡ ಸಾಹಿತ್ಯ ನನ್ನಾಸ್ತಿ ಎನ್ನುವೆ ಪುಣ್ಯ ನದಿಯಲ್ಲಿ ಮೀಯುವೆನಾದೊಡೇ ಕಾವೇರಿ ತುಂಗೆಯರ ಮಡಿಲಲ್ಲಿ ಮೀಯುವೆ. ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲ್ಲುವೆ. https://youtu.be/ycZUf5IbNug ===========================

ಕಾಡುವ ಹಾಡು Read Post »

ಇತರೆ

ಅನುಭವ

ಭಯದ ನೆರಳಲ್ಲಿ ಹೆಬ್ರಿ ಸದಾನಂದ ಶೆಟ್ಟಿ ಭಯದ ನೆರಳಲ್ಲಿ ಕೈಯಲ್ಲಿ ಸಣ್ಣ ಬ್ಯಾಗ್ ಹಿಡಿದ ನಾನು ನನ್ನ ಭಾವಿ ಪತ್ನಿ ನೋಡೊ ಬರದಲ್ಲಿ ಹೆಜ್ಜೆ ಹಾಕಿದೆ 40 ನಿಮಿಷ ಕಳೆದ ನ೦ತರ ಮಾವನ ಮನೆ ನಾಯಿಗಳ ಬೊಗಳುವಿಕೆಗೆ ಚಿಮಿಣಿ ಹಿಡಿದು ಹೊರ ಬ೦ದಳು ನನ್ನ ಭಾವಿ ಪತ್ನಿ, ಕಗ್ಗತ್ತಲು ” ಯಾರದು ಜಾಗ್ರತೆ ನಾಯಿ ಕಚ್ಚುತ್ತೆ ”ಅ೦ದಾಗ ” ನಾನು ಕಣೆ” ಅ೦ದಾಗ ಆಕೆಗೆ ಸಣ್ಣವರಿದ್ದಾಗಲಿ೦ದ ಗೊತ್ತಿದ್ದರಿ೦ದ ಓಡಿ ಹೋಗಿ ನಾಯನ್ನು ಕಟ್ಟಿ, ತ೦ಗಿಯನ್ನುದ್ದೇಶಿಸಿ ” ರತ್ನ ನಿನ್ನ ಬಾವ ಬ೦ದಿದ್ದಾರೆ ಅಮ್ಮನಿಗೆ ಹೇಳು” ಅ೦ದವಳೆ ಒಳಗೆ ಹೋಗಿ ಮಾಯವಾದ್ಲು(ನಾಚಿಕೆ) ಹೊರ ಬ೦ದ ಅತ್ತೆಯವರು ”ಈಗ ಬ೦ದದ್ದಾ ಮಗ ಬಾ, ಬಚ್ಚಲಿಗೆ ಹೋಗಿ ಕೈಕಾಲು ಮುಖ ತೊಳೆದು ಕೊ೦ಡು ಬಾ” ಅ೦ದಾಗ ಅತ್ತೆಯ ಹಿ೦ದೆಯೇ ಬ೦ದ ನನ್ನ ಮಾವ ”ಮೊನ್ನೆ ಬ೦ದಿದ್ದೀಯ ಅನ್ನೋ ಸುದ್ದಿ ಇತ್ತು,ಈಗ ಬರೋದ” ಪ್ರೀತಿಯಿ೦ದ ಗದರಿದರು ”ಅಲ್ಲಿ ನಿಮ್ಮ ತ೦ಗಿಗೆ ಹುಷಾರಿರಲಿಲ್ಲಾ ಹಾಗೆ ನೋಡ್ಳಿಕ್ಕೆ ಬ೦ದದ್ದು” ಅ೦ದಾಗ ಅವರು ”ಹುಷರಿಲ್ಲಾ, ಒ೦ದು ಚೀಟಿ ಬಸ್ಸಲ್ಲಿ ಕೊಟ್ಟಿದ್ರೆ ವಿಷಯ ಗೊತ್ತಾಗಿ ನಾನು ಬರ್ತಿರ್ಲಿವಾ” ಅಷ್ಟರಲ್ಲಿ ಇಬ್ಬರಿಗೂ ಊಟಕ್ಕೆ ಬುಲಾವ್ ಇಬ್ಬರೂ ಊಟವಾದ ಮೇಲೆ ಮಲಗಿದೆವು ,ಬೆಳಿಗ್ಗೆ ನಾನು ಏಳುವಾಗ 8.00 ಘ೦ಟೆ ಎದ್ದವನೆ ”ಅತ್ತೆ ಮಾವ ಎಲ್ಲಿ” ಎ೦ದಾಗ ಅವರು ಅಕ್ಕನ್ನ(ನಮ್ಮ ತಾಯಿಯನ್ನು ಹಾಗೆ ಕರೆಯುವುದು ನಮ್ಮತ್ತೆಯ ವಾಡಿಕೆ) ನೋಡ್ಲಿಕ್ಕೆ ಬೆಳಿಗ್ಗೆ ಫ಼ಸ್ಟ್ ಬಸ್ಸಲ್ಲಿ ನಿಮ್ಮೂರಿಗೆ ಹೋಗಿದ್ದಾರೆ ನೀನು ನಾಲ್ಕು ದಿನ ಇಲ್ಲೆ ಇರಬೇಕ೦ತೆ ಅ೦ದಾಗ ”ಇಲ್ಲಾ ಅತ್ತೆ ನಾನು ಹೋಗ ಬೇಕು ರಜೆ ಹೆಚ್ಚಿಲ್ಲ”ಅ೦ತ ಸುಳ್ಳು ಬಿಟ್ಟೆ, ನಮ್ಮಿಬ್ಬರ ಮಾತು ಬಾಗಿಲ ಸ೦ದಿಯಲ್ಲಿ ನನ್ನವಳು ಕದ್ದು ಕೇಳ್ತಾಯಿದದ್ದು ನೋಡೀದೆ , ”ಸರಿ ಅತ್ತೆ ಈಗ ನಾನು ತೋಡಿಗೆ ಹೋಗಿ ಹಲ್ಲುಜ್ಜಿ ಬರ್ತೇನೆ ಅ೦ದವನೆ ಟವೆಲ್ ಹಿಡಿದು ಹೊರಟೆ ,ಹಲ್ಲುಜ್ಜಿ ತಿರುಗಿ ನೋಡ್ತೆ ,ಇವಳು ತ೦ಗಿ ಒಟ್ಟಿಗೆ ಕೊಡಪಾನ ಹಿಡುಕೊ೦ಡು ಹಾಜೂರ್,ನನ್ನ ನೋಡಿದ ನನ್ನಾಕೆ ತ೦ಗಿಯನ್ನುದ್ದೇಶಿಸಿ”ಹೇಳೇ ಹೇಳೆ ”ತ೦ಗಿಗೆ ಅಕ್ಕನ ತಾಕೀತು ಕೊನೆಗೆ ನಾನೆ ”ಎ೦ತ ಹೇಳೇ ರತ್ನ” ಅ೦ದ ಕೂಡ್ಲೆ ”ಭಾವ, ಭಾವ ಅಕ್ಕ ಹೇಳ್ತಾಳೆ ನೀವು ಎರಡು ದಿನ ಇರ್ಲೇ ಬೇಕ೦ತೆ” ಯಾಕ೦ತೆ” ಅ೦ದವನೇ ಟವಲ್ಲಿನಲ್ಲಿ ಮುಖ ಒರೆಸಿ ನೋಡ್ತೇನೆ ಅವರಿಬ್ಬರು ನೀರು ತು೦ಬಿಸಿ ಹೊರಟು ಹೋಗಿಯಾಗಿತ್ತು.

ಅನುಭವ Read Post »

ಇತರೆ

ಲಹರಿ

ಜೀವನ ಅನ್ನೋ ಸೈಕಲ್ ಶಂಭುಗೌಡ ಆರ್.ಜಿ. ಹುಟ್ಟೆಂಬುದ ಹುಟ್ಟಿದಾಗಿಂದ ಜೀವನ ಅನ್ನೋ ಸೈಕಲ್ ಹತ್ತಿ ಪೆಟಲ್ ತುಳ್ದಿದ್ದೋ ತುಳಿದಿದ್ದು…ಮಾರ್ಗ ಮಧ್ಯದಲ್ಲಿ ಹೆಸರಿಲ್ಲದ ಕಾಣದ ಕೈ ಒಂದು ಬೀಸಾಕಿದ ಬಿಕನಾಸಿ ಮುಳ್ಳು ಅಂಟಿಲ್ಲದಿದ್ದರೂ ಅಂಟ್ಕೊಂಡು ಪಂಚರ್ ಆಗಿ ಪಂಚರಂಗಿ ಟೈಟಲ್ ಇರೋ ಪಂಚರ್ ಅಂಗಡಿಯವರೆಗೂ ನಟರಾಜ ಸರ್ವಿಸ್ ನಲ್ಲಿ ನಡೆದು ರಿಪೇರಿ ಮಾಡಿಸಿ ಮತ್ತದೇ ಸೈಕಲ್ ಹತ್ತಿ ಕಾಣದ ಕನಸುಗಳ ಮೂಟೆಗಳನ್ನ ಹೊತ್ತು ಮತ್ತದೇ ಹೆಸರಿಲ್ಲದ ನನಸಿನ ನಗರಿಯತ್ತ ಪಯಣ ಶುರು.ಮಾರ್ಗ ಮಧ್ಯದಲ್ಲಿ ಬೇಟಿಯಾಗೋ ಅಪರಿಚಿತ ಮುಖಗಳನ್ನ ಪರಿಚಯಕ್ಕೂ ಪರಿಚಿತರಾದಾಗ ಸ್ನೇಹಿತರು ಅನ್ನೋ ಹಣೆಪಟ್ಟಿ ಕೊಟ್ಟು ಮಾಡಬೇಕಾಗಿರೋ ಕ್ಯಾಮೆಗಳಿಗೆಲ್ಲ ಸಾತ್ ಕೊಡ್ತಾ ಬಿಟ್ಟಿ ಬಿಕನಾಸಿ ಕನಸುಗಳಿಗೆಲ್ಲ ನನಸಿನ ಬಣ್ಣ ಹಚ್ಚೋ ಜಿದ್ದಿಗೆ ಬಿದ್ದು ನಾನ್ ಸ್ಟಾಪ್ ಜರ್ನಿ ಬೆನ್ನತ್ತಿ ರೂಲ್ಸ್ ಗಳಿರೋದೆ ಬ್ರೇಕ್ ಮಾಡೋಕೆ ಅನ್ನೋ ಮಾಡರ್ನ್ ಗಾಧೆಯನ್ನ ಜಪಿಸ್ತಾ ಸಿಗ್ನಲ್ ಜಂಪ್ ಮಾಡಿ ಗಾಡ್ ಅನ್ನೋ ಟ್ರಾಪಿಕ್ ಪೋಲಿಸ್ ಹತ್ರ ಸಿಕ್ ಹಾಕೊಂಡಾಗ ಹಿಂದಿರುಗಿ ನೋಡಿದ್ರೆ ಜೊತೆಗಿದ್ದವರು ಅಡ್ರಸ್ ಇಲ್ಲದಂಗೆ ಮಾಯಬಜಾರ್ ಅತ್ತ ಮುಖ ಮಾಡಿ ಮಾಯ ಆಗಿರ್ತಾರೆ. ಕಾಲಿಯಾಗಿರೋ ನಮ್ ಹಣೆ ಮೇಲೆ ಹೆಸರಿಲ್ಲದವ ಗೀಚಿ ಹೋದದ್ದು ಇದೇ ಇರಬಹುದೇನೋ ಅಂದ್ಕೊಂಡು ಜೇಬಲ್ಲಿದ್ದಷ್ಟು ಪೈನ್ ಕಟ್ಟಿ ಶಾತಂ ಪಾಪಂ ಅಂತ ನಮಗ ನಾವೇ ಕೆನ್ನೆಗೆ ಹೊಡೆಕೊಂಡು ತಿರುಗಿ ಬಂದು ಮತ್ತದೇ ಸೈಕಲ್ ಹತ್ತುವಾಗಲೇ ನಾವೆಲ್ಲಿಗೆ ಹೋಗಬೇಕಾಗಿತ್ತು ಅನ್ನೋ ಕಾಣದಿರೋ ಅಡ್ರಸ್ ಒಂದು ಕಾಣೋಕ ಶುರು ಆಗುತ್ತೆ ನೋಡಿ.ಆದ್ರೇನು ಪ್ರಯೋಜನ,ನಾವು ಹೋಗಬೇಕಾದ ಊರಿಂದ ನಾವಿರೋ ಊರು ಅದೆಷ್ಟೋ ಮೈಲುಗಟ್ಟಲೆ ದೂರ.ಹಿಂದಿರುಗಿ ನೋಡಿದ್ರೆ ಅಯ್ಯೋ ಸಾವು ಅನ್ನೋ ದಪ್ಪ ಅಕ್ಷರದಲ್ಲಿರೋ ಊರಿನ ಹೆಸರಿನ ಫಲಕ ಕಣ್ಣಿಗೆ ನಾಟೋ ತರ..ಭಯಾನಕ ಸನ್ನಿವೇಷದ ಪರದೆ ಯಾವ ದಾರಿ ಹಿಡಿದು ಬಂತೋ ಅದೇ ದಾರಿಯಲ್ಲಿ ಬಂದಷ್ಟೇ ವೇಗದಲ್ಲಿ ಮೈ ಕೊರಿಯೋ ಚಳಿಯಲ್ಲೂ ಬೆವರ ಹನಿಗಳ ಕಾಣಿಕೆ ಕೊಟ್ಟು ಕಾಣೆಯಾಗಿ ಬಿಡುತ್ತೆ.ಕೀಸೆಯಿಂದ ಕರ್ಚಿಪ್ ತೆಗೆದು ಬೆವರ ಹನಿಗಳನ್ನೆಲ್ಲ ಸಾವಕಾಶವಾಗಿ ನೇವರಿಸಿ ಅವುಗಳ ಮೈ ತೊಳೆದು ಅದೇ ಕರ್ಚಿಪ್ನಲ್ಲಿ ನೀಟಾಗಿ ಕೀಸೆಯಲ್ಲೆತ್ತಿಟ್ಕೊಂಡು ಬಂದ ದಾರಿಗೆ ಸುಂಕವಿಲ್ಲದವರಂತೆ ಕಣ್ ಮುಂದಿರೋ ದಾರಿ ಹಿಡಿದು ಜೀವನದಲ್ಲಿ ಆಡೋರ ಬಾಯಿಗೆ ಸಿಕ್ಕಿ ದಂಡಪಿಂಡ ಅನ್ನೋ ಬಿರುದಾಂಕಿತರಾಗೋ ಬದಲು ಹುಟ್ಟೆಂಬ ನೆಪ ದ ನೆನಪಾಗಿ ಏನಾದ್ರೂ ಒಸಿ ಕಿಸಿಯೋಣ ಅಂತ ಅಂದ್ಕಂಡು ಅಂದ್ಕೊಳ್ಳದೇ ಇರೋದನ್ನ ಲೈಪ್ ನಲ್ಲಿ ಅಂದ್ಕೊಂಡದ್ದಕ್ಕಿಂತ ಹೆಚ್ಚಾಗಿ ಕಾಣದಿರೋ ಕನಸನ್ನ ಕಸಿ ಮಾಡಿ ನನಸೆಂಬ ಹಣ್ಣನ್ನ ಕೈಯಲ್ಲಿ ಹಿಡಿದುಕೊಂಡು ವಿಜಯಶಾಲಿಯಾಗಿರೋ ಸಾರ್ಥಕತೆಯ ಭಾವ ನಮ್ಮೊಳಗೆ,ನಮ್ಮಷ್ಟಕ್ಕೆ ಮಾತ್ರ ಹುಟ್ಟಿದಂತೆ.ಸ್ವಲ್ಪ ವರುಷಗಳು ಹೊರಳಿದ ಮೇಲೆ ಜೀವನದಲ್ಲಿ ನಮಗಿಂತ ಹೆಚ್ಚಾಗಿ ಕಿಸಿದವರ ಪೋಟೋ ಪೇಪರ್ನಲ್ಲೋ, ಟೀವಿಯಲ್ಲೋ,ಅಕ್ಕ-ಪಕ್ಕದ ಮನೆಯವರ ನಾಲಿಗೆಯಲ್ಲಿ ಹೊರಳಾಡ್ತಿರೋದನ್ನ ಮುಚ್ಚಿಕೊಳ್ಳೋಕೆ ಬಾಗಿಲಿಲ್ಲದ ಕಿವಿಯಲ್ಲಿ ಇಷ್ಟ ಇರದಿದ್ದರೂ ಕಷ್ಟವಾಗದೇ ಸರಾಗವಾಗಿ ಕೇಳಿಸಿಕೊಂಡಾಗ ಚಾಪೆ ಸುತ್ತಿ ಹೊಡೆದಂಗಾಗಿರುತ್ತೆ.ಅವಾಗಲೇ ಗೊತ್ತಾಗಿದ್ದು ಜೀವನದಲ್ಲಿ ಯಾರೂ ಕಿಸಿಲಾರದ ಮಹಾನ್ ಏನನ್ನೂ ನಾವು ಕಿಸಿದಿಲ್ಲ ಅಂತ.ಮನುಷ್ಯನ ಈ ಸಹಜ ಯೋಚನೆಗೆ ಅಸೂಯೆ ಅಂತ ಕರಿಬೇಕೋ?? ಅಥವಾ ನಮ್ಮಷ್ಟಕ್ಕೆ ನಮಗೇ ಇರೋ ಅಸಮಧಾನ ಅಂತ ಕರಿಬೇಕೋ?? ಗೊತ್ತಿಲ್ಲ.ಆದ್ರೆ ಒಂದಂತೂ ಸತ್ಯ. ಅಂದ್ಕೊಂಡಂತೆ ಆದೋರು ಬೆರಳೆಣಿಕೆಯಾದರೆ ಅಂದ್ಕಂಡಿದ್ ಒಂದಾದ್ರೆ ಆಗಿದ್ದೇ ಮತ್ತೊಂದ್ ಅಂತಿರೋರು ಸಾಕಷ್ಟು. ಈ ರೀತಿಯ ಲೆಕ್ಕಾಚಾರದಲ್ಲಿ ನಾವೇನೋ ಒಂದು ಆಗಿದೀವಿ ಅನ್ನೋದನ್ನೇ ಮರೆತು ಬಿಟ್ಟಿರ್ತೀವಿ.ಪಾಲಿಗೆ ಬಂದಿದ್ ಪಂಚಾಮೃತ ಅಂತ ಕಣ್ಣಿಗ್ ಒತ್ಕಂಡು ನಮ್ಮಷ್ಟಕ್ಕೆ ನಾವ್ ನಮ್ಮದೆಷ್ಟೋ ಅಷ್ಟನ್ನ ನಮ್ಮ ಮತಿಯ ಮಿತಿಯೊಳಗೆ ಮಾಡ್ತಾ ಸಾಗಿದ್ರೆ ಈ ಜೀವನ ಸರಾಗವಾಗಿ ಸಾಗುತ್ತೆ.ಜೀವನ ಕಲ್ಪವೃಕ್ಷವಾಗುತ್ತದೆ.

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಮುಖವಾಡ ಸುಜಾತ ರವೀಶ್ ಮುಖವಾಡ *** ಕಿತ್ತೊಗೆಯಬೇಕೆನಿಸುತಿದೆ ಅಂಟಿಕೊಂಡಿರುವ ಈ ಮುಖವಾಡಗಳ ಬಿಸಿ ಧಗೆಯ ಕುಲುಮೆಯಲ್ಲಿ ಉಬ್ಬೆಗೆ ಹಾಕಿದಂತಿದೆ ನೈಜತೆಯ ಶುದ್ದ ಹವೆಯಲ್ಲಿ ಮನ ಉಸಿರಾಡಬಯಸುತಿದೆ. ಮನದಲ್ಲಿ ಜ್ವಾಲಾಮುಖಿ ಸಿಡಿಯುವಂತಿದ್ದರೂ ಲಾವಾರಸ ಹೊರಚಿಮ್ಮದಂತೆ ಜಾಗೃತಿ ವಹಿಸಬೇಕಾಗಿದೆ ಶಾಂತತೆಯ ಮುಖವಾಡ ತೊಟ್ಟು ಬದುಕು ದೂಡಬೇಕಾಗಿದೆ. ಗೋಸುಂಬೆಯ ಹಾಗೆ ಬಣ್ಣ ಬದಲಿಸುತಿರುವವರ ನೋಡಿದಾಗೆಲ್ಲ ಮುಖಕ್ಕೆ ರಾಚುವಂತೆ ಬೈದುಬಿಡಬೇಕೆಂದೆನಿಸಿದರೂ ಸಭ್ಯತೆಯ ಮುಖವಾಡ ಧರಿಸಬೇಕಾಗಿದೆˌನಟಿಸಬೇಕಾಗಿದೆ. ಪರಂಪರಾನುಗತ ಉರುಳುಗಳಿಂದ ಬಿಡಿಸಿಕೊಳ್ಳಬೇಕೆನಿಸಿದರೂ ಹಕ್ಕಿಯಂತೆ ಸ್ವೇಚ್ಛೆಯಾಗಿ ನೀಲನಭದಿ ವಿಹರಿಸಬೇಕೆಂದರೂ ಮತ್ತೆ ಸಂಪ್ರದಾಯದ ಮುಖವಾಡದ ಹಿಂದೆ ನಿಲ್ಲಬೇಕಾಗಿದೆ. ಆಸೆ ಅಕಾಂಕ್ಷೆ ಅಭಿಪ್ರಾಯದ ಹೊರೆ ಬಲವಂತವಾದಾಗಲೆಲ್ಲಾ ಎಲ್ಲವನೂ ಬಿಸುಟು ಸ್ವಚ್ಛಂದವಾಗಿಬಿಡಬೇಕೆನ್ನಿಸಿದರೂ ಸಂಬಂಧಗಳ ಮುಖವಾಡದ ಮರೆಯಲಿ ನಗಲೇಬೇಕಾಗಿದೆ. ಇದು ನಮಗೇನೂ ಹೊಸದಲ್ಲˌಕಷ್ಟವೂ ಅಲ್ಲ ಬಿಡಿ ಮುಖವಾಡಗಳ ತಯಾರಿˌಧರಿಸಲು ತರಬೇತಿ ಬಾಲ್ಯದಿಂದಲೇ ತೊಟ್ಟಿದ್ದೇವೆ ತೊಡುತ್ತಲೇ ಇರುತ್ತೇವೆ ಮುಖವಾಡಗಳ ಬೇಡಿ. ಕನ್ನಡಿಯ ಮುಂದೆ ಮುಖವಾಡವಿರದೆ ನಿಂತಾಗಲೆಲ್ಲಾ ನನ್ನ ಮುಖ ನನದೆನಿಸುವುದಿಲ್ಲˌಯಾವುದೋ ಅಪರಿಚಿತತೆ ನನ್ನತನ ಉಳಿಯಲು ಸಮಯವೇ ಇಲ್ಲವೆಂಬ ವಿಷಣ್ಣತೆ ಬರುತಿದೆ ಕರೆˌಮುಖವಾಡ ಧರಿಸಿ ಹೊರಟೆˌಬರಲೇ? ===============================

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕೃತಿ: ಭಾವಗಳು ಬಸುರಾದಾಗ. ಕವಿ:ಅರುಣ್ ಕೊಪ್ಪ ವಿಮರ್ಶೆ: ಜಿ.ವಿ.ಕೊಪ್ಪಲತೋಟ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಶ್ರಿÃ ಜಯರಾಮ ಹೆಗಡೆ ಶಿರಸಿ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿಯಲ್ಲಿ ಸಾಹಿತಿ ಡಾ|| ಬೇರ್ಯರಾಮಕುಮಾರ ಅವರು ಅರುಣಕೊಪ್ಪ ಅವರನ್ನು ಪರಿಚಯಿಸಿದ್ದಾರೆ. ಸಾಲದೂ ಎಂಬಂತೆ ಡಾ|| ಅಜಿತ್ ಹೆಗಡೆ ಹರೀಶಿಯವರೂ ಕೂಡಾ ಇವರನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇವರ ಮೊದಲ ಕವನ ಸಂಗ್ರಹ ಹನಿಗಳ ಹಂದರ ಎರಡನೆ ಸಾಹಿತ್ಯ ಕೃತಿಯೇ ಭಾವಗಳು ‘ಬಸುರಾದಾಗ’ (ಕವನ ಸಂಕಲನ) ಈ ಸಂಕಲನದಲ್ಲಿ ಸಣ್ಣದು ದೊಡ್ಡದು ಸೇರಿ ಒಟ್ಟೂ ೭೬ ಕವನಗಳಿವೆ. ಭಾವಗಳು ಬಸುರಾದಾಗ ಏನಾಗುತ್ತದೆ? ಎಂಬುದಕ್ಕೆ ಕವಿ ಅರುಣ ನಾಯ್ಕ ಕೊಪ್ಪದವರ ಈ ಕವನ ಸಂಕಲನವನ್ನು ಓದಿದರೆ ಎಲ್ಲವೂ ಗೊತ್ತಾಗುತ್ತದೆ. ಎಂದು ಒಂದೇ ಮಾತಿನಲ್ಲಿ ಇದಕ್ಕೆ ವಿಮರ್ಶಿಸಬಹುದು. ಆದರೆ ಅದು ವಿಮರ್ಶಕನ ತರ್ಕಬದ್ಧ ಲಕ್ಷಣವಲ್ಲ ಮತ್ತು ಔಚಿತ್ಯವೂ ಅಲ್ಲ. ಮತ್ತು ಕವಿ ಇಟ್ಟುಕೊಂಡ ವಿಶಾಲ ಆಸೆ, ಆಕಾಂಕ್ಷೆ ಹರವನ್ನು ಮೊಟಕುಗೊಳಿಸಿದಂತಾಗಬಹುದೇನೂ?! ಅಲ್ಲದೇ ಬೆಳೆವ ಸಿರಿ ಮೊಳಕೆಯಲಿಯೇ ಚಿವುಟುವುದು ವಿಮರ್ಶೆ ಆಗಲಾರದು. ಕಾವ್ಯದ ಸಾರ, ಅದು ಸಾಗಿದ ಸತ್ಪಥ ಮತ್ತು ಕಾವ್ಯದ ಓದು ಅದು ಹೇಳುವ ಫಲಶ್ರುತಿ ಮತ್ತು ಅದರ ಒಳಧ್ವನಿ ಏನು ಎಂಬುದನ್ನು ತೆರೆದಿಡುವುದೇ ಒಂದು ವಿಮರ್ಶೆ ಎನಿಸಿಕೊಳ್ಳುತ್ತದೆ. ಕಾವ್ಯ ಅಥವಾ ಕವನ ಅದೇನು ಅಷ್ಟು ಸುಲಭವೇನಲ್ಲ. ಹೀಗೆ ಕಾವ್ಯ ರೂಪದಲ್ಲಿ ಹೇಳುವಾಗ ವಿಷಯದ ಪ್ರತಿಪಾದನೆ ಇಟ್ಟುಕೊಂಡಿರುವ ವಸ್ತುವಿನ ಅಸ್ತಿತ್ವ ಮತ್ತು ಭಾವ ಪ್ರತಿಮೆಗಳ ತುಲನಾತ್ಮಕ ಚಿಂತನೆ ಮಾಡುವದು, ಕಾವ್ಯ ರಚನೆಯ ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ರಚಿಸುವುದೇ ಕವಿಯ ಮೇಧಾಶಕ್ತಿಗೆ ಒಡ್ಡುವ ಸವಾಲಾಗಿರುತ್ತದೆ. ಒಳ ಮನಸ್ಸಿನ ಆಳದಲ್ಲಿ ಹುದುಗಿದ ಯೋಚನೆಯನ್ನು ಭಾವನಾತ್ಮಕವಾಗಿ ಹೊರಹಾಕುವ ಮುನ್ನ ಅದು ಬಸುರಲ್ಲಿ ಬೆಳೆಯುತ್ತಿರುವ ಮಗುವಂತೆಯೇ ಎಂಬುದನ್ನು ಶ್ರಿÃ ಕೊಪ್ಪರÀವರು ತಮ್ಮದೇ ಆದ ಶೈಲಿಯಲ್ಲಿ ಸಾಕಷ್ಟು ಅರ್ಥಪೂರ್ಣವಾಗಿ ಹೇಳಿದ್ದಾರೆ. ಉದಾ :- ಕವನ ೧ ಅವ್ವನ ಕನಸು ಪ್ರಿÃತಿ ಪಾತ್ರ ನಾ ಇಷ್ಟಿತ್ತು ಮಮತೆಯ ಘನತೆ ಸಲ್ಲಿಸುವ ಗೌರವಕೆ ಕಿಂಚಿತ್ತು ಹೆಚ್ಚಲ್ಲ ಈ ಹೃದಯದಿಂದ ಹಸಿವಾದ ಈ ಮನಸ್ಸಿಗೆ ನೀಗಲು ಸಾಕು ನನ್ನ ಅವ್ವನ ಕನಸು ಹೇಗೆ ತಮ್ಮ ಮನಸನ್ನು ಕಾವ್ಯಾತ್ಮಕವಾಗಿ ಮಾರ್ಪಡಿಸಿಕೊಳ್ಳುವ ರೀತಿ ತುಂಬಾ ಹರಿತ ಮತ್ತು ಮೇಲ್‌ಸ್ತರದ ವಿಚಾರಗಳಾಗಿವೆ. ಕವನ ೬ ವೇದಿಕೆ : ಒಂದೇ ಬೇರು ಒಂದೇ ಕೊಂಬೆ ಹಸಿರು ಹಲವು ಸದಾ ಏಕತೆಯ ಉಸಿರು ರಂಗು ಈ ಸಂಜೆ ಹೀಗೆ ಹಲವು ಹತ್ತು ಕವನಗಳ ಸಾಲಿನಲ್ಲಿ ಶೃಜನಶೀಲತೆ ಇದೆ. ಉದಾ : ಕವನ ೮ :- ಮೂಡುವ ಕಾಡುವ ಮನಗಳ ಮಾತಿಗೆ ಹಾಡು ಪಾಡುವ ಒಲವಿನ ಗಡಿಬಿಡಿಗೆ ನಾ ಹೇಗೆ ಹೋಗಿ ಸಹಿಸಲಿ ನೀ ಹೇಳು ಹೇಗೆ ಮನಸ್ಸಿನ ಭಾವನೆಗಳನ್ನು ಭಾವನೆಯ ಬಸುರಲ್ಲಿಟ್ಟು ಹೇಳುವ ಅವರ ಮನಸ್ಸಿನ ಸ್ಥಾಯಿ ಸ್ಥಿತಿ ಅದರ ಮೇರು ವಿಚಾರಕ್ಕೆ ಮೆರಗು ತಂದಿದೆ. ಉದಾಃ ಕವನ ೬೦ : – ಶೀರ್ಶಿಕೆಯ ಕವನ “ಭಾವಗಳ ಬಸುರಾದಾಗ” ಇದರಲ್ಲಿ ಭಾವಗಳು ಬಸುರಾದಾಗ ಹರಿಸುವುದು ಸಂಗೀತ ಸಾಹಿತ್ಯದ ಕಾವ್ಯ ರಸದೌತಣ ಎಂದಿದ್ದಾರೆ. ಭಾವದ ಅಭಿವ್ಯಕ್ತಿಗೆ ಸಾಹಿತ್ಯ ಸಂಗೀತಕಲೆ ಎಲ್ಲವೂ ಲೀನವಾಗುತ್ತದೆ ಎಂಬುದನ್ನು ಸಾರವತ್ತಾಗಿ ಬಣ್ಣಿಸಿದ್ದಾರೆ. ಕವಿಯನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೆÃರಿಸುವುದು ವಿಮರ್ಶೆಯೆ ಸರಿ ಸಮರ್ಪಕ ಪರಿಕಲ್ಪನೆಯಾಗಲಾರದು. ಕೆಲವು ಕವಿತೆಗಳು ಪ್ರಾಸರಹಿತವಾಗಿ ಅತಿ ಉದ್ದುದ್ದ ಸಾಲುಗಳಾಗಿ ಗದ್ಯದ ರೂಪ ತಳೆದಿರುವುದು ಓದುಗನ ಸಹನೆಯನ್ನು ಪರೀಕ್ಷಿಸುವಂತಿದೆ. ಉದಾ ಹರಿಸಬೇಕೆಂದರೆ : ನಿನ್ನ ನೆನಪಲಿ, ಗುಬ್ಬಿಗೂಡು, ನಮ್ಮ ಭಾರತ ಸಂವಿಧಾನ, ಹೀಗೆ ಕೆಲವಷ್ಟು ಕವನಗಳು ಮಿತಿಮೀರಿ ಬೆಳೆದು ನಿಂತಿವೆ. ಇವುಗಳು ಕಾವ್ಯಕ್ಕೆ ಭೂಷಣವಲ್ಲ ಎಂದೆನಿಸುತ್ತದೆ. ಕಲ್ಪನೆಯನ್ನು ಕವನವನ್ನಾಗಿಸುವ ಶಕ್ತಿ ಈ ಕವಿಗೆ ಚೆನ್ನಾಗಿದೆ. ತುಂಬಾ ಭಾವಾಭಿವ್ಯಕ್ತಿಯಲ್ಲಿ ಅಭಿವ್ಯಕ್ತಿಸುವ ರೀತಿಯಲ್ಲಿ ಸುತ್ತು ಬಳಸದಿರುವುದು ಒಳ್ಳೆಯದು. ಉದಾ : ನಾನು ಕವಿಯಲ್ಲ ಕವನ ೯ : ಮೂಡಿದ ಮನದ ಮರದಿ ಭಾವವೆಂಬ ಕೊಂಬೆ ! ಎತ್ತರದಿ ಸಿಗದ ಹಾಗೆ ಹಸಿರು ಎಲೆಗಳ ಚಪ್ಪರ ಮುಗಿಯದ ಹಕ್ಕಿ ಸಾಲಿನ ಆಸನ ನೋಡಿದಾಕ್ಷಣ ಕವನ ನಾನು ಕವಿಯಲ್ಲ ಕವಿಯ ವಿಚಾರಧಾರೆ ಹರಿತವಾಗಿದೆ. ವೈಚಾರಿಕತೆಯ ಹರವು ವಿಷಾಲವಾಗಿದೆ. ಸಂವೇದನಾ ಶೀಲತೆ ಎಲ್ಲ ಕವನದಲ್ಲಿಯೂ ಇದೆ. ಮನಸ್ಸಿಗೆ ಮುದ ನೀಡುವ ಶಕ್ತಿ ಕವನಗಳಿಗಿದೆ. ಬಸಿರು ಎನ್ನುವ ಶಭಾರ್ಥವೇ ಹಡೆಯುವ ಮೊದಲು ಇರುವ ತಾಯಿಯ ಸ್ಥಿತಿ. ಹುಟ್ಟುವ ಮಗುವಿನ ಬಗ್ಗೆ ತಾಯಿ ಏನೆಲ್ಲ ಚಿಂತಿಸುತ್ತಾಳೆ. ಏನೆಲ್ಲ ಕನಸು ಕಾಣುತ್ತಾಳೆ. ಹೇಳತೀರದು. ಹುಟ್ಟುವ ಮಗುವಿನ ಬಗ್ಗೆ ತರತರದ ಕನಸು ಕಾಣುತ್ತಾಳೆ. ಸರ್ವಾಂಗ ಸುಂದರವಾಗಿ ಮಗು ಹುಟ್ಟಲಿ ಎಂದು ಹಾರೈಸುತ್ತಾಳೆ. ಈ ಕವಿಯ ಎಲ್ಲ ಕವಿತೆಯಲ್ಲಿಯೂ ಇಂತ ಹಾರೈಕೆ ಎದ್ದು ಕಾಣುತ್ತದೆ. ಶಬ್ದಗಳ ಕೊರತೆ ಈ ಕವಿಗೆ ಇಲ್ಲ. ವಸ್ತುವನ್ನು ಹುಡುಕುವ ದಿವ್ಯ ಶೋಧಕ ಶಕ್ತಿ ತುಂಬಾ ಇದೆ. ಗೂಡ ನಿಗೂಡವಾಗಿ ವಿಷಯವನ್ನು ಸಾದರಪಡಿಸುವ ರೀತಿ ಓದುಗನಿಗೆ ಸ್ವಲ್ಪ ಕಬ್ಬಿಣದ ಕಡಲೆಯಾದರೂ ಪ್ರಬುದ್ಧ ಓದುಗನಿಗೆ ಏನೂ ಕಷ್ಟವೆನಿಸಲಾರದು. ಇವರ ಬರಹ ಪ್ರಬುದ್ಧತೆಯ ಪ್ರಬಲ ಪ್ರತಿಬಿಂಬ ಇವರ ಮನಸ್ಸು ಎನ್ನಬಹುದು. ಕವಿಗೆ ತುಂಬಾ ಭವಿಷ್ಯವಿದೆ. ವಿಚಾರದ ಅರಿಕೆ ಸಾಕಷ್ಟು ಮನಸ್ಸಿನ ಆಳಕ್ಕಿಳಿದಾಗಲೇ ಚಿಗುರುವ ಸಾಹಿತ್ಯದ ಕೊಂಬೆ ಬಲಿಷ್ಠವಾಗುತ್ತದೆ. ಕಾವ್ಯಕ್ಕೆ ಗಟ್ಟಿತನ ಬರುತ್ತದೆ. ವಿಚಾರವ ಅದುಮಿ ಹಿಡಿದಾಗ ಭಾವನೆಗಳು ಸ್ಪೊÃಟಗೊಳ್ಳುತ್ತವೆ ಎಂಬುದನ್ನು ಕೆಲವು ಕವನಗಳು ಸಾಬೀತುಪಡಿಸಿವೆ. ಕಾವ್ಯವೆಂದರೆ ಕಲ್ಪನೆ ಮತ್ತು ಭಾವಗಳ ಸಂಗಮ (ಹ್ಯಾಜ್‌ಲೀಟ್) ಇಂಗ್ಲಿÃಷ್ ಕವಿ ಕಾವ್ಯವೆಂದರೆ ಸೌಂದರ್ಯದ ಲಯಬದ್ಧ ಸೃಷ್ಟಿ ಎಂದಿದ್ದಾರೆ. (ಕೆಬ್ಲ) ಕವಿ ಅಚಿಡಿಟಥಿಟe ಹೇಳಿದ್ದಾರೆ. Poeಣಡಿಥಿ ತಿe ತಿiಟಟ ಛಿಚಿಟಟ musiಛಿಚಿಟ ಣhough ಎohಟಿsoಟಿ ಸಂಗೀತಮಯ ಚಿಂತನೆಯೇ ಕಾವ್ಯ ಹೇಳುತ್ತಾರೆ. ಎohಟಿsoಟಿ ಹೇಳುತ್ತಾರೆ. Poeಣಡಿಥಿ is meಣಡಿiಛಿಚಿಟ ಛಿomಠಿosiಣioಟಿ (ಕಾವ್ಯವೆಂದರೆ ಚಂದೋಬಂದ ರಚನೆ) ಎರ್ಡಸ್ ವಿತ್ರ ಹೇಳುತ್ತಾನೆ (Poeಣಡಿಥಿ is ಣhe bಡಿeಚಿಣh ಚಿಟಿಜ ಜಿiಟಿeಡಿ sಠಿiಡಿiಣ oಜಿ ಚಿಟಟ ಞಟಿoತಿಟeಜge ) ಕಾವ್ಯವು ಎಲ್ಲ ಜ್ಞಾನಕ್ಕಿಂತ ಮಿಗಿಲಾದ ಚೈತನ್ಯ ಉಸಿರು. ಮೇಲೆ ಹೇಳಿದ ಈ ಎಲ್ಲ ಅಂಶಗಳನ್ನು ಈ ಕವಿ ತಿಳಿದುಕೊಂಡು ಮುನ್ನಡೆಯಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಕವಿ ದೃಷ್ಟಿ ಹಾಯಿಸಿದರೆ ಒಳಿತು. ಒಟ್ಟಾರೆ ಕವಿಯ ಈ ಎರಡನೆ ಹೆಜ್ಜೆ ಗಟ್ಟಿತನದ ದಿಟ್ಟ ಹೆಜ್ಜೆಯಾಗಿದೆ. ಕವಿಯ ಭವಿಷ್ಯ ಉಜ್ವಲವಾಗಲಿ, ಸಾಹಿತ್ಯಯಾನ ಚೆನ್ನಾಗಿ ಸಾಗಲಿ ಎಂದು ಹಾರೈಸುವೆ. ==============================================

ಪುಸ್ತಕ ವಿಮರ್ಶೆ Read Post »

You cannot copy content of this page

Scroll to Top