ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಚಿಂತನೆ

ಇಷ್ಟಕ್ಕೆ ಹೀಗೆ ವರಿ ಮಾಡೋದಾ? ಪಿ.ಎಂ.ಇಕ್ಭಾಲ್ ಕೈರಂಗಳ ಮಾನಸಿಕವಾದ ಸಮಸ್ಯೆಗಳೇ ಹಾಗೆ‌. ಬಲು ಸಂಕೀರ್ಣ.  ಹೀಗೇ ಇರುತ್ತದೆ ಎಂಬ ನಿಯಮವಿರಲ್ಲ.  ಒಂದೊಂದು ಸಮಸ್ಯೆಯೂ ವೈವಿಧ್ಯ. ಅವುಗಳ ತೀವ್ರತೆ ಎಷ್ಟು ಎಂದು ಅವುಗಳನ್ನು ಅನುಭವಿಸುವ ನತದೃಷ್ಟರಿಗೇನೇ ಗೊತ್ತು. ಆದರೆ ಒಂದು ನೆನಪಿರಲಿ. ‘ನನ್ನ ಸಮಸ್ಯೆಗೆ ಪರಿಹಾರವಿಲ್ಲ’ ಎಂದು ತಿಳಿದು ಹತಾಶರಾದರೆ ಸಮಸ್ಯೆಯ ವ್ಯಾಪ್ತಿ ಮತ್ತಷ್ಟು ದೊಡ್ಡದಾಗುತ್ತದೆ. ಮಾನಸಿಕವಾಗಿ ಅನುಭವಿಸುವ ನೋವು, ಕೊರಗು ಅಥವಾ ಒತ್ತಡ ಸಣ್ಣ ಸಮಸ್ಯೆಯೇನಲ್ಲ. ಇತರರಿಗಾಗಿ ಅವರ ವಿಷಯದ ಆಳಕ್ಕಿಳಿದು ವಸ್ತುನಿಷ್ಠವಾಗಿ ಚಿಂತಿಸಿ ಅರ್ಥೈಸಲು ಮುಂದೆ ಬರುವವರು ಕಡಿಮೆ. ನನಗೆ ಯಾರಿಲ್ಲ ಎಂಬ ಭಾವ ಸೇಡಾಗಿ ಕನ್ವರ್ಟು ಆಗಿ  ಹಿಂಸೆಗೆ ಇಳಿಯುವವರೂ ಇದ್ದಾರೆ.  ಆತ್ಮಹತ್ಯೆಯ ದಾರಿ ಹಿಡಿದವರೂ ಇದ್ದಾರೆ. ಇವೆರಡೂ  ಪರಿಹಾರ ಅಂತೂ ಅಲ್ಲ. ಸಮಸ್ಯೆ ಎಂದರೇನೇ ಹಾಗೆ‌, ತಡೆಯಲಾಗದು. ತಡೆಯಲಾಗದಿದ್ದರೇನೇ ಅದು ಸಮಸ್ಯೆ ಎನಿಸಿಕೊಳ್ಳುವುದು. ಆದರೆ ‘ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ’ ಎಂದು ತಿಳಿದು ಪರಿಹಾರದತ್ತ ಯೋಚಿಸುವುದು ಮತ್ತು ಪ್ರಯತ್ನಿಸುವುದು ಪ್ರಬುದ್ಧತೆ. ಆಗ ಅಷ್ಟರವರೆಗೆ ನಾವಿರುವುದಕ್ಕಿಂತ ಹೆಚ್ಚಿನ ತಾಳ್ಮೆಯನ್ನು ಹೊರತರಬೇಕಾಗುತ್ತದೆ.  ಮನಸ್ಸನ್ನು ವಿಶಾಲಗೊಳಿಸಬೇಕಾಗುತ್ತದೆ. ವಿಷಯವನ್ನು ಬೇರೆ ಬೇರೆ ಕೋನಗಳಿಂದ ನೋಡುವ ಸಾಮರ್ಥ್ಯವನ್ನು ಹೊರಗೆ ತರಬೇಕಾಗುತ್ತದೆ. ಹಾಗೆ ಮಾಡಿಯೂ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲತೆ ಕಾಣಬಹುದು. ಆಗ  ಮರಳಿಯತ್ನ ಮಾಡಬೇಕು. ಪ್ರಧಾನ ವಿಷಯ ಏನು ಅಂದರೆ, ಇನ್ನಿಲ್ಲದಂತೆ ಕಾಟ ಕೊಡುತ್ತಿದ್ದ ಸಮಸ್ಯೆಯೊಂದು ಎದ್ದು ಹೋಗುವಾಗ ಅದು ಒಮ್ಮೆ ದೊಡ್ಡದಾದಂತೆ ಕಾಣಬಹುದು.  ಹಾಗಾಗುವುದು ಪರಿಹಾರದ ಒಂದು ಹಂತವಾಗಿರಬಹುದು. ಆ ಹಂತವನ್ನೇ ದೊಡ್ಡ ಸಮಸ್ಯೆಯಾಗಿ ಕಾಣಬಾರದು. ಹಾಗೆ ಹತಾಶೆ ಆದರೆ ಅದರ ಬೀಳ್ಕೊಡುವಿಕೆ ಪ್ರೊಗ್ರಾಮು ಕ್ಯಾನ್ಸಲ್ ಆಗಿಬಿಡಬಹುದು!ಎಷ್ಟೋ ಮಂದಿ ಈ ತಪ್ಪನ್ನು ಮಾಡುತ್ತಾರೆ. ಆ ಮೂಲಕ ಸಮಸ್ಯೆಗೆ ದೀರ್ಘಾಯಸ್ಸು ಕರುಣಿಸುತ್ತಾರೆ. ಇಬ್ಬರ ನಡುವಿನ ಮನಸ್ತಾಪ ಒಂದು ಸಮಸ್ಯೆಯಾದರೆ, ಒಂದೆಡೆ ಕೂತು ಸಾಧ್ಯತೆಯ ಪರಮಾವಧಿ ತಾಳ್ಮೆಯಿಂದ ಪರಸ್ಪರ ಮಾತಾಡೋದು  ಪರಿಹಾರದ ಹಂತ. ಆ ಹಂತವು ಒಂದಷ್ಟು ಕಷ್ಟಾನೇ. ಆದರೆ ಆ ಸಮಸ್ಯೆಗೆ‌ ಅದೇ ಪರಿಹಾರದದ  ಹಂತ. ಅದಲ್ಲದೆ ಬೇರೆ ಪರಿಹಾರವೇ ಇಲ್ಲ. ಅದರಿಂದ ಎಸ್ಕೇಪು ಆದಷ್ಟೂ ಆ ಸಮಸ್ಯೆ ಜೀವಂತ. ಕೆಲವೊಮ್ಮೆ ಅನಾಹುತಕ್ಕೇ ಅವಕಾಶ. ರೋಗಪೀಡಿತನಾಗುವುದು ಸಮಸ್ಯೆ. ಕೆಲವೊಮ್ಮೆ  ಅಡ್ಮಿಟು, ಇಂಜಕ್ಷನು, ಐಸಿಯು, ಅಪರೇಷನು, ಲಕ್ಷಾಂತರ ಖರ್ಚು ಇವೆಲ್ಲಾ ಅದರ ಪರಿಹಾರದ ಹಂತವಾಗುತ್ತದೆ. ಆ ಹಂತವನ್ನೇ ಸಮಸ್ಯೆಯಾಗಿ ಕಂಡು ಅದರಿಂದ ಎಸ್ಕೇಪು ಆದಷ್ಟೂ ಸಮಸ್ಯೆಯು ಜೋರಾಗುತ್ತದೆ. ರೋಗಿ ಸಾಯಬಹುದು. ಪರಿಹಾರದ ಹಂತದಲ್ಲಿ ಅಣುವಿನಷ್ಟೂ  ಹತಾಶೆರಾಗಬಾರದು. ಅಗತ್ಯವಿದ್ದರೆ ಸಹೃದಯರಾದ ಇನ್ನೊಬ್ಬರದ್ದೋ ಹೆಚ್ಚಿನವರದ್ದೋ ಸಹಾಯ ಪಡೆಯಬೇಕು. ಸಮಸ್ಯೆಯೆಯೇ ಹಾಗೆ. ಅದು ಮನುಷ್ಯನನ್ನು ಒಂಟಿ ಮಾಡುತ್ತದೆ. ಒಂದು ಉದಾಹರಣೆ ನೊಡಿ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದದ್ದಕ್ಕೆ ಆತ್ಮಹತ್ಯೆ ಮಾಡೋಕೆ ಆಲೊಚಿಸುವ ಎಸ್ಸೆಸೆಲ್ಸಿಯ ತಂಗಿಯನ್ನು ನೋಡಿ ಎಂಬಿಬಿಎಸ್ ಕಲಿಯುವ ಅಕ್ಕ ನಕ್ಕಳು. ತಾಯಿ, ತಂದೇನೂ ಆ ನಗುವಿಗೆ ಜೊತೆಗೂಡಿದರು. ಅವರಿಗೆಲ್ಲ ಅವಳು Silly ಹುಡುಗಿ ಎಂದೆನಿಸಿತು. ‘ಇಷ್ಟಕೇ ಹೀಗೆ ವರಿ ಆಗೋದಾ’ ಎಂದು  ಕೇಳಿದರು. ಇದೆಲ್ಲ ವರಿ ಮಾಡ್ಕೊಬೇಕಾದ ವಿಷಯವಾಗಿ ಅಕ್ಕನಿಗೆ, ಅಮ್ಮನಿಗೆ ಮತ್ತು ಅಪ್ಪನಿಗೆ ಕಾಣಲಿಲ್ಲ.  ಅದೇ ಅಕ್ಕ ಒಂದು ದಿನ ಹತಾಶಳಾಗಿ ಕೂರುತ್ತಾಳೆ.   ಸಹಪಾಟಿಯೊಬ್ಬನ ಇನ್ಸಲ್ಟು ಅವಳ ಮನ ಕೊರೆಯುತ್ತಿತ್ತು. ಕಣ್ಣು ಜಲಾಶಯವಾಗುತ್ತಿತ್ತು. ‘ಇಷ್ಟಕ್ಕೇ ಇಷ್ಟೆಲ್ಲ ವರಿನಾ’ ಎಂದು ತಂಗಿ, ತಾಯಿ, ಅಪ್ಪ ಅಂದುಕೊಂಡರು. ಮನಸ್ಸು ಗಟ್ಟಿಯಿರಬೇಕು ಎಂದು  ಉಪದೇಶ ಹೇಳಿದರು. ಮುಂದೊಂದು ದಿನ ತಾಯಿಯ ಸರದಿ. ಜಗಳವೊಂದರ ಮಧ್ಯೆ ಗಂಡ ‘ನಿನ್ನನು ಮದುವೆಯಾಗಿ ತಪ್ಪು ಮಾಡಿದೆ’ ಎಂದ  ಮಾತೊಂದು ಬಾಣವಾಗಿ ನಾಟಿ ಅವಳ ಎದೆಯನ್ನು ನೋಯಿಸುತ್ತಿತ್ತು. ‘ಹೀಗೆಲ್ಲ ಹೇಳಲೇಬಾರದಿತ್ತು ನಿಮ್ಮಪ್ಪ’ ಎಂದು ಮಕ್ಕಳಲ್ಲಿ ಅಳಲು ಶುರುವಿಟ್ಟುಕೊಂಡಳು.  ‘Silly mom’ ಎಂದು ಮಕ್ಕಳ ನಗು. ‘ತುಂಬಾ ವೀಕು’ ಎಂಬ ಗಂಡನ ಸರ್ಟಿಫಿಕೇಟು. ಒಂದು ದಿನ ಯಜಮಾನನೇ ಮಂಕು. ಸೋತುಬಿಟ್ಟೆ, ಇನ್ನು ಜಯವಿಲ್ಲ ಎಂಬ ಹತಾಶೆಯಲ್ಲಿ ಬಿದ್ದ. ಬಿಸಿನೆಸ್ಸಲ್ಲಿ ಆದ ಲಾಸು ಕಾಸು ಬರಿದು ಮಾಡಿಬಿಟ್ಟಾಗ ಆತ ಹಾಗಾದ. ಯಾಕೊ ಉಮ್ಮಳಿಸಿ ಬರುವ ದುಖವನ್ನು ತಡೆಹಿಡಿಯಲಾಗದೆ ಹೆಂಡ್ತಿ ಮಕ್ಕಳ ಮುಂದೆ ಮಗುವಾದ. ‘ಅಯ್ಯೋ ಅಪ್ಪ, ಇದೆಲ್ಲ ಮಾಮೂಲು. ಹತಾಶೆಯಾಗುವಂತದೇ ಅಲ್ಲ’  ಮಕ್ಕಳ ಪ್ರತಿಕ್ರಿಯೆ. ಹೆಂಡ್ತಿಗೂ ಗಂಡ ಅಷ್ಟು ದುಖ ಪಡುವಷ್ಟು Silly fellow ಆದುದಕ್ಕೆ ಸಹಮತ ಇಲ್ಲ. ಇಲ್ಲಿ ಎಲ್ಲರೂ ತೋರಿಸಿದ್ದು ಒಂದೇ ಸ್ವಭಾವ. ಇನ್ನೊಬ್ಬರ ಮಾನಸಿಕ ಸನಸ್ಯೆಗಳನ್ನು ತಮ್ಮ ಭಾಗದಿಂದ ಮಾತ್ರ ನೋಡಿದ್ದು.ಯಾರಿಗೆ ಯಾರೂ ಜೊತೆಯಾಗದೆನೇ ವರಿ ಮಾಡದಿರಲು ಉಪದೇಶಿಸಿದ್ದು. ‘ಹೌದು ಇದು ನೋವಾಗುವಂತಹದೇ ವಿಷಯ, ನನಗೆ ಅರ್ಥವಾಗುತ್ತೆ, ಸಮಾಧಾನ ಪಡು’ ಎಂದು ಯಾರೂ ಹೇಳಿಲ್ಲ. ಹೇಳಿದ್ದು, ‘ಇದು ನೋವಾಗೋ ಮ್ಯಾಟರೇ ಅಲ್ಲ’ ಎಂದು. ಸಮಸ್ಯೆಯಲ್ಲಿ ಬಿದ್ದಾಗ ಒಬ್ನೊಬ್ಬರೂ ಒಂಟಿಯಾಗಿದ್ದರು. ಒಬ್ಬರ ಸಮಸ್ಯೆ ಇನ್ನೊಬ್ನರಿಗೆ ಏನೂ ಅಲ್ಲ. ಹೆಚ್ಚಿನವರು ಇನ್ನೊಬ್ನರ ಸಮಸ್ಯೆಯನ್ನು ಮೇಲಿನ ಉದಾಹರಣೆಯಂತೆ ತಮ್ಮ ಕೋನದಿಂದ ಮಾತ್ರ ನೋಡುತ್ತಾರೆ. ಸಮಸ್ಯೆಯಲ್ಲಿ ಬಿದ್ದವರಿಗೆ ಅದು ಕೊಡುತ್ತಿರುವ ಯಾತನೆ, ಪರಿಣಾಮವು ಇನ್ನೊಬ್ಬರ ಪಾಲಿಗೆ ನಗಣ್ಯ. ಬಾಂಧವ್ಯವು ಕೂಡ ಹಳಸಿ ಹೋಗೋದು ಆಗಲೇ. ಸಮಸ್ಯೆಯನ್ನು ಅದನ್ನು ಅನುಭವಿಸುವವರ ಕೊನದಿಂದ ನೋಡಬೇಕು. ಹಾಗೆ ಮಾಡುವಷ್ಟು ನಾವು ಬೆಳೆಯಬೇಕು. ಅದವರಿಗೆ ಕೊಡುವ ನೋವನ್ನು ಅರ್ಥಮಾಡಿ  ‘ಅರ್ಥಮಾಡಿದ್ದೇನೆ’ ಎಂಬುದನ್ನು ಅವರಿಗೆ ತಿಳಿಸಬೇಕು. ಆಗ ಅದವರಿಗೆ ಮಹದುಪಕಾರ ಆಗುತ್ತದೆ. ಅವರು ಅನುಭವಿಸುವ ನೋವಿನ ಅಲೆಗಳ ಆರ್ಭಟ ಕಡಿಮೆ ಆಗುತ್ತದೆ. ಹಾಗೆ ಮಾಡಿದರೆ ಬಾಂಧವ್ಯಕ್ಕೆ ಟಾನಿಕ್ಕು. ಎಲ್ಲ ಸಮಸ್ಯೆಗಳೂ ಅನುಭವಿಸುವವರ ವೀಕುನೆಸ್ಸಿನಿಂದಾಗಿ  ದೊಡ್ಡದಾಗುವುದಲ್ಲ. ಹಾಗೆ ನೋಡೋದಾದರೆ ಕೆಲವು ವಿಷಯಗಳಲ್ಲಿ ಎಲ್ಲರೂ ವೀಕೇ. ತಿಳಿದಿರಲಿ, ಕೆಲವು ಸಮಸ್ಯೆ ಅಂತೂ ದೊಡ್ಡದೇ. ಇನ್ನೊಬ್ಬರ ಪಾಲಿಗೆ ಏನೂ ಅಲ್ಲದ ವಿಷಯದೊಳಗಡೆ ಒಂದು ಲೋಕವೇ ಅವಿತುಕೊಂಡಿರುತ್ತದೆ. ಅದನ್ನು ಅರಿಯಲು ಸಮಸ್ಯೆ ಅನುಭವಿಸುವವರ ಭಾಗದಿಂದ ವಿಷಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಹೃದಯ ವಿಶಾಲತೆ ಇದ್ದರೇನೇ ಅದು ಸಾಧ್ಯ. ಇನ್ನೊಬ್ಬರ ಸ್ಥಾನದಲ್ಲಿ ನಿಂತು ಅದನ್ನು ನೋಡಲು ತಯಾರಿರೋರು ಕಡಿಮೆ. ಕೆಲವು ಸಮಸ್ಯೆಗಳು ಇನ್ನೊಬ್ಬರ  ಭಾವನಾತ್ಮಕ ಸಾಮೀಪ್ಯಕ್ಕೆ ಮಂಜಿನಂತೆ ಕರಗಿಹೋಗುವಂತಹದ್ದು. ಅಂತಹವರು ಒಂದಷ್ಟು ಇದ್ದರೆ ಈ ಜಗದ ಆತ್ಮಹತ್ಯೆಗಳ ಪ್ರಮಾಣ ಕಡಿಮೆಯಾಗುತ್ತಿತ್ತು. ಸಮಸ್ಯೆಗೆ ಬಿದ್ದ ವ್ಯಕ್ತಿಗಳ ಭಾಗದಿಂದ ವಿಷಯವನ್ನು ನೋಡಲು ಅವರ ಆಪ್ತರೇ ತಯಾರಿರೋದಿಲ್ಲ. ಯಾವ ವ್ಯಕ್ತಿ ಸಕ್ಸಸು ಆಗಿದ್ದರೆ ಯಾರಿಗೆ ಲಾಜಿಕ್ ಬಿಟ್ಟು ಮನ-ಹಣದಿಂದ ಸಹಾಯ ಮಾಡಿ, ಕಣ್ಣರೆಪ್ಪೆಯಂತೆ ಅವರನ್ನು ಕಾಯುತ್ತಿದ್ದನೋ, ಆ ವ್ಯಕ್ತಿಯೇ ಯಾರದೋ ಸ್ವಾರ್ಥಕ್ಕೆ ಬಲಿಯಾಗಿಯೋ, ವಿಧಿಯಾಟಕ್ಕೆ ಸಿಳುಕಿಯೋ ಸೂಕ್ಷ್ಮವಾದೊಂದು ಮನಸಿನ ಸಮಸ್ಯೆಯಲ್ಲಿ ಬಿದ್ದರೆ  ಅವನಿಗೆ ಅವರೇ ಇರುವುದಿಲ್ಲ. ಸಮಸ್ಯೆಗೆ ಬಿದ್ದವರಿಗೆ ಒಂಟಿತನವು ಬೋನಸ್ಸು. ಎಷ್ಟೊ ಆತ್ಮಹತ್ಯೆಗಳು ನಡೆಯುವುದು ಅವರ ಸಮಸ್ಯೆಯಿಂದಲ್ಲ, ಆ ಸಮಸ್ಯೆ ಅವರಿಗೆ ಬೋನಸ್ಸಾಗಿ ಕೊಟ್ಟ ಲೋನ್ಲಿನೆಸ್ಸಿನ ಕಾರಣಕ್ಕಾಗಿ. ಈ ಪಾಯಿಂಟು  ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ಸಮಸ್ಯೆಗಳಲ್ಲಿ ಬೀಳದ ವ್ಯಕ್ತಿಗಳಿಲ್ಲ. ಕೆಲವು ಮೇಲೆ ಉದಾಹರಿಸಿದಂತಹುಗಳು. ಗಾಳಿ ಮಳೆಯಂತಹವು, ತಾತ್ಕಾಲಿಕ. ಕೆಲವು ಸುಂಟರಗಾಳಿಗಳಂತಹದೇ ಇರುತ್ತದೆ. ತೀವ್ರತೆ ಹೆಚ್ಚು. ಕೆಲವು ಅಂತೂ ಪಕ್ಕಾ ಸುನಾಮಿ ಅಲೆಗಳೇ. ಕೆಲವು ಸಮಸ್ಯೆಗಳು ತನ್ನಿಂದ ತಾನೇ ಪ್ರಭಾವ ಕಡಿಮೆಗೊಳಿಸಿದೆ ಎನಿಸುವುದು ಇದೆ. ಒಬ್ಬ ಸಂತನ ಬಳಿ ಒಬ್ಬ ಸಮಸ್ಯೆಯೊಂದನ್ನು ಹೇಳಿ ಗೋಳೋ ಎಂದು ಅತ್ತುಬಿಟ್ನನಂತೆ. ಸಂತ ಹೇಳಿದನಂತೆ, “ಒಂದಾರು ತಿಂಗಳು ಕಳೀಲಿ. ನಿನ್ನ ಅಳು ಮಾಯವಾಗುತ್ತದೆ” ಎಂದು. ಅವನು ಕೇಳಿದನಂತೆ, “ಆರು ತಿಂಗಳಲ್ಲಿ ನನ್ನ ಸಮಸ್ಯೆ ಇಲ್ಲವಾಗುತ್ತಾ” ಎಂದು. ಸಂತನ ಉತ್ತರ, “ಇಲ್ಲ. ಆರು ತಿಂಗಳಲ್ಲಿ  ನಿನಗೆ ಇದು ಅಭ್ಯಾಸವಾಗುತ್ತದೆ!” ಕೆಲವು ಸಮಸ್ಯೆಗಳ ಆರಂಭದಲ್ಲಿ ಮನುಷ್ಯ ಪೇಚಾಡುತ್ತಾನೆ. ಜೀವಿಸೋಕೆ‌ ಆಗಲ್ಲ ಎಂಬಂತಾಗುತ್ತಾನೆ. ಕ್ರಮೇಣ ಆ ಸಮಸ್ಯೆ ಅಭ್ಯಾಸವಾಗಿ ಸಮಸ್ಯೆನೇ ಬಲಹೀನಗೊಂಡಂತಾಗುತ್ತದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರವಿದ್ದೇ ಇದೆ. ಅಥವಾ ಹಾಗಂತನೇ ನಾವು ತಿಳಿದುಕೊಳ್ಳಬೇಕು. ಆದರೆ ಕೆಲವೊಮ್ಮೆ ಪರಿಹಾರ  ಎಂಬ ಅಸಾಮಿಯು ಪ್ರಬಲ ಇಚ್ಛಾಶಕ್ತಿ, ಅಪಾರ ತಾಳ್ಮೆ, ಬುದ್ಧಿಮತ್ತೆ ಮತ್ತು ಕಾಲಾವಕಾಶವನ್ನು ನಮ್ಮಿಂದ  ಬಯಸುತ್ತಾನೆ. ಅದ್ಯಾತ್ಮಲೋಕದಲ್ಲಿ ತನ್ನನ್ನು ತೊಡಗಿಸಿಕೊಳ್ಳೋದೂ  ಸಮಸ್ಯೆಗಳ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ. ಆಗ ಮನ ರಿಲಾಕ್ಸು ಆಗಿ ಪರಿಹಾರದ ಬಾಗಿಲು ತೆರೆಯೋದೂ ಇದೆ. ಅದಕ್ಕೇ‌ ಪಕ್ಕಾ ನಾಸ್ತಿಕ ಸೈಕಾಲಜಿ ಡಾಕ್ಟರೂ ದೇವರನ್ನು ಬಳಿ ಕೂರಿಸಲು ಸಲಹೆ ನೀಡೋದು. ಇನ್ನೊಬ್ಬರ ಪಾಲಿಗೆ ವಿಪರೀತ, ಸಹಿಸಲಾಗದು ಎಂದೆನಿಸಿದ  ಮಾನಸಿಕ ಕೊರಗು, ನೋವನ್ನು ಪರಿಗಣನೆಗೆ ಅರ್ಹ ಎಂದೇ ತಿಳಿಯಬೇಕು. ಅದೆಷ್ಟು ಸಣ್ಣದೇ ಇರಲಿ, ‘ನಮ್ಮ ಭಾಗಕ್ಕೆ ಮಾತ್ರ ಅದು ಸಣ್ಣದು, ಅವರ ಭಾಗಕ್ಕೆ ಸಣ್ಣದಲ್ಲ’ ಎಂದು ತಿಳಿಯಬೇಕು.  ಅವರ ಭಾಗದಿಂದ ವಿಷಯವನ್ನು ನೋಡಿ, ಅರ್ಥೈಸಿ ‘ಅರ್ಥಮಾಡಿದ್ದೇನೆ’ ಎಂದು ಹೇಳಬೇಕು. ಸಮಾಧಾನ ಹೇಳಬೇಕು. ಪರಿಹಾರಕ್ಕೆ ಮುಂದಾಗಬೇಕು. ಇಷ್ಟು ಮಾತ್ರ ಮಾಡದೆ ಬೇರೇನೂ ಮಾಡಿದರೂ ಸಾಕಾಗದು. ಇಷ್ಟು ಮಾಡಲಾಗದ ಹತ್ತಿರದವರು, ಬಂಧುಗಳು ಹೃದಯಹೀನರೇ ಸರಿ‌. ನಾವು ಹಾಗಾಗದಿರೋಣ. ===============================================

ಚಿಂತನೆ Read Post »

ಕಾವ್ಯಯಾನ

ಕಾವ್ಯಯಾನ

ಪ್ರಕಾಶ್ ಕೋನಾಪುರ ಬಟ್ಟೆಗೆ ಮುಕ್ತಿ ಬೇಕಿದೆ! ಈಗೀಗ ಕತ್ತಲಲ್ಲಿಯೇ ಬೆತ್ತಲಾಗಬೇಕೆಂದೇನಿಲ್ಲಬೆಳಕಿನಲ್ಲೂ ಬೆತ್ತಲಾಗಬಹುದುಬಟ್ಟೆ ಕಳಚುವವರಿದ್ದರೆ ಬೆತ್ತಲಾಗಲು ಕತ್ತಲಿಗೆ ಕಾಯುವ ಮೂರ್ಖರೇಕತ್ತಲಲ್ಲಿ ಬೆತ್ತಲಾಗುವವರನ್ನೂ ನೋಡಬಹುದೀಗತ್ರಿನೇತ್ರಿಗರು ಗೋರಿಯೊಳಗೆ ಬೆತ್ತಲಾಗಿ ಮಲಗಿದವನಿಗೆ ಪದವಿಬಿರುದುಬಾವಲಿ ಅಷ್ಟೈರ್ಯಗಳು ಬಟ್ಟೆ ಹೊದಿಸಲಾಗಲಿಲ್ಲ ಹೆರಿಗೆನೋವಿನಿಂದ ನರಳುತ್ತಿರುವ ಹೆಣ್ಣೇನಾಚದಿರು ಬೆತ್ತಲಾಗಿಹೆನೆಂದು ಹೊಸಜೀವದ ಸೃಷ್ಟಿಗೆಬಟ್ಟೆ ತೊಟ್ಟ ನೀಚರೆದರು   ಬಟ್ಟೆಗೆ ಬಸಿರು ಮುಚ್ಚಿಡಲಾಗುವುದಿಲ್ಲಹಾಗೆಯೇ ಮನುಷ್ಯನ ಹೊಲಸನ್ನೂ ಓ ಮನುಷ್ಯನೇ ಬೆತ್ತಲಾಗದಿರುನಿನ್ನ ಕೊಳಕು ದೇಹವನ್ನು ನೋಡಲಾಗುವುದಿಲ್ಲಕೊಳಕನ್ನು ಮುಚ್ಚಿಟ್ಟು ಸುಸ್ತಾದಬಟ್ಟೆಗೆ ಮುಕ್ತಿ ಬೇಕಿದೆ  ============= ಪರಿಚಯ: ಬಿ.ಎಸ್ಸಿ(ಕೃಷಿ) ಪದವೀಧರ, ಶಿಕಾರಿಪುರದಲ್ಲಿ ವಾಸ, ಜಿಲ್ಲಾ ಉಪಾಧ್ಯಕ್ಷ,ಆಮ್ ಆದ್ಮಿ ಪಾರ್ಟಿ,ಶಿವಮೊಗ್ಗ ಜಿಲ್ಲೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಚಂ ವಯಸಲ್ಲದ ವಯಸ್ಸಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕತ್ತಲೆಯ ಬೆನ್ನತ್ತಿ ಬಂದ ಓ ಬೇಳಕೆಂಬ ಕನಸೇ ಹೇಳು ನಿನೆಲ್ಲಿಗೆ ಹೋದೆ ಮನದ ಇರುಳು ತೊಲಗಲೇ ಇಲ್ಲ ನಿನ್ನ ಹೆಜ್ಜೆ ಮೂಡಲೇ ಇಲ್ಲ ಕಣ್ಣಬಿಟ್ಟು ನೋಡಿದೊಡೆ ಕಾಲವೇ ಕೇಳೇದಿತ್ತು ಕತ್ತಲೇ ಮಾತ್ರ ಉಳಿದಿತ್ತು! ಕರುಣೇ ಇಲ್ಲದ ಕಾಲದ ಬೇಳಕೇ ನೀನಾಗದಿರು ಮರಭೂಮಿಯ ನಿರ್ಗುಳ ಹುಡುಕುತ್ತಿರುವೆ ಹುಡುಕುತ್ತಿರುವೆ ನಿನ್ನ ಬಾ ಬೇಳಗೊಮ್ಮೆ ಬದುಕ ಹಬ್ಬವೆಂಬ ನೆಪಹೂಡಿ…. ಬಂದು ನಿಲ್ಲು ಬೇಳಕೇ ಕಾಲದ ಬಿರುಗಾಳಿಗೆ ಆರದೆ ನಿನ್ನ ಹಸಿವು ನನಗೂ ಇದೆ ಅರಿತು ಬಾ ನಿನೊಮ್ಮೆ ದೀಪಾವಳಿಯ ನೆಪವೊಡ್ಡಿ!?==========================

ಕಾವ್ಯಯಾನ Read Post »

ಕಥಾಗುಚ್ಛ

ಕಥಾಗುಚ್ಛ

ಜಿ.ಹರೀಶ್ ಬೇದ್ರೆ ಯಾಣ ಬಿಸಿಲು ಬೆವರಿಗೆ ಹೊಂದಿಕೊಂಡು ಬೆಳೆದಿದ್ದ ಮೈಮನಗಳಿಗೆ ಮೊದಲ ಬಾರಿಗೆ ಥರಗುಟ್ಟುವ ಚಳಿಯಲ್ಲಿ ಹೊದೆಯಲು ಏನೂ ಇಲ್ಲದೆ ರಾತ್ರಿಯೆಲ್ಲಾ ಮುದುಡಿಕೊಂಡೇ ಮಲಗಿ, ಪುಣ್ಯಾತ್ಮರ ಮನೆಯೊಂದರಲ್ಲಿ ತಾಮ್ರದ ಹಂಡೆಯಲ್ಲಿ ಹದವಾಗಿ ಕಾಯಿಸಿದ ನೀರನ್ನು  ಸ್ನಾನ ಮಾಡುವ ಅವಕಾಶ ಸಿಕ್ಕಿತು.  ಒಮ್ಮೆ ಹಬೆಯಾಡುವ ಬಿಸಿನೀರು ಮೈಮೇಲೆ ಬಿದ್ದೊಡನೆ ಹಿಂದಿನ ದಿನ ನಡೆದೂ ನಡೆದು ಸುಸ್ತಾಗಿದ್ದ ನೋವೆಲ್ಲಾ ಅರ್ಧ ಮಾಯವಾದಂತಾಗಿತ್ತು. ಬಚ್ಚಲು ಮನೆಯೂ ಹಿಂಭಾಗದಲ್ಲಿ ಇದದ್ದರಿಂದ ಎಲ್ಲರೂ ಸ್ನಾನ ಆಗುವ ತನಕ ಅಲ್ಲೇ ಹಿಂದೆ ಗಿಡಮರಗಳನ್ನು ನೋಡುತ್ತಾ, ಮಾತನಾಡುತ್ತಾ ನಿಂತಿದ್ದೆವು. ನಮ್ಮೆಲ್ಲರ ಸ್ನಾನ ಆದದ್ದನ್ನು ಗಮನಿಸಿ ಒಳಗಿನಿಂದ ತಿಂಡಿ ತಿನ್ನಲು ಕರೆ ಬಂತು. ನಾವು ಮನೆಯ ಒಳ ಹೋಗಿ ಹಾಲಿನಲ್ಲಿ ಕೂರುವ ಮೊದಲೇ ಬಾಳೆ ಎಲೆಯಲ್ಲಿ ಬಿಸಿಬಿಸಿ ಉಪ್ಪಿಟ್ಟು, ಅದರ ಮೇಲೆ ಗಟ್ಟಿಯಾದ ತುಪ್ಪ, ಜೊತೆಗೆ ಮಜ್ಜಿಗೆ ಮೆಣಸು ಮತ್ತು ಒಂದೆರಡು ಬಗೆಯ ಸಂಡಿಗೆಗಳು  ಅಲಂಕರಿಸಿದ್ದರು.  ಅದನ್ನು ನೋಡಿದೊಡನೆ ಹೆಚ್ಚುಕಮ್ಮಿ ನಿನ್ನೆ ಮಧ್ಯಾಹ್ನದಿಂದಲೇ ಖಾಲಿ ಇದ್ದ ಹೊಟ್ಟೆಗಳು ಬೇಗ ಬೇಗ ಎಂದು ಅವಸರಿಸತೊಡಗಿದವು. ಆಶ್ಚರ್ಯ ಎಂದರೆ ಇಲ್ಲಿಯವರೆಗೆ ಉಪ್ಪಿಟ್ಟು ಬೇಡವೇ ಬೇಡ ಎನ್ನುತ್ತಿದ್ದ ಇಬ್ಬರೂ ಎಲ್ಲರಿಗಿಂತ ಮೊದಲು ಎಲೆಯ ಮುಂದೆ ಕುಳಿತಿದ್ದರು. ಹಸಿದವನಿಗೆ ಹಳಸಿದ ಅನ್ನವೇ ಮೃಷ್ಟಾನ್ನ ಆಗುವಾಗ ಬಿಸಿಬಿಸಿ ಉಪ್ಪಿಟ್ಟು ಗಂಟಲಲ್ಲಿ ಇಳಿಯದೆ ಇರಲು ಸಾಧ್ಯವೇ.  ಎಲ್ಲರೂ ಗಂಟಲು ಬಿರಿಯುವಂತೆ ತಿಂದೆವು. ತಿಂಡಿ ತಿಂದು ಸ್ವಲ್ಪ ಹೊತ್ತಿನ ನಂತರ ಹೊರಡುತ್ತೇವೆ ಎಂದು ಎದ್ದಾಗ ಮನೆಯವರು ಕಾಫಿ ಕುಡಿದು ಹೊರಡುವಂತೆ ಹೇಳಿದರು. ನಮಗೂ ಇದು ಬೇಕೆನಿಸಿದ್ದರಿಂದ ದೂಸ್ರಾ ಮಾತನಾಡದೆ ಮತ್ತೆ ಕುಳಿತೆವು. ಅಡುಗೆಮನೆಯಿಂದ ನಾವು ಕುಳಿತಿದ್ದ ಹಾಲಿಗೆ ಕಾಫಿ ಬರುವ ಮುನ್ನವೇ ಅದರ ಘಮ ನಮ್ಮನ್ನು ಸುತ್ತುವರೆದಿತ್ತು.   ನಾವು ದಿನಕ್ಕೆ ನಾಲ್ಕೈದು ಬಾರಿ ಕುಡಿಯಬಹುದಾದಷ್ಟು ಕಾಫಿಯನ್ನು ಒಂದೇ ಲೋಟದಲ್ಲಿ ಕೊಟ್ಟಿದ್ದರು. ಈಗಾಗಲೇ ಅದರ ಪರಿಮಳಕ್ಕೆ ಸೋತು ಶರಣಾಗಿದ್ದರಿಂದ ಯಾರೊಬ್ಬರೂ ಬೇಡವೆನ್ನದೆ ಖುಷಿಯಿಂದ ಗುಟುಕರಿಸುವಾಗ ರಾಘು ತೋರು ಬೆರಳಿಂದ ಎದುರಿಗೆ ತೋರಿಸುತ್ತಾ ಏಯ್… ಏಯ್… ಎಂದು ವಿಚಿತ್ರವಾಗಿ ಧ್ವನಿ  ಮಾಡುತ್ತಾ ಜೋರಾಗಿ ನಡುಗತೊಡಗಿದ. ನಾವು ಇವನಿಗೆ ಏನಾಯ್ತು ಎಂದು ನೋಡುವಾಗಲೇ ಕೈಯಲ್ಲಿದ್ದ ಕಾಫಿಯನ್ನು ಮೈಮೇಲೆ ಚೆಲ್ಲಿಕೊಂಡ. ನಾವೆಲ್ಲ ತಕ್ಷಣ ಎದ್ದು ಅವನ ಬಳಿಬಂದು ಏನೂ ಎಂದು ಕೇಳಿದರೆ, ಏನೊಂದೂ ಮಾತನಾಡದೆ ಎದುರಿನ ಗೋಡೆಯನ್ನೇ ನೋಡುತ್ತಿದ್ದ. ನಾವುಗಳು ಅವನು ನೋಡುತ್ತಿದ್ದ ಕಡೆ ನೋಡಿದಾಗ ನಮ್ಮೆಲ್ಲರ ಹೃದಯಗಳ ಬಡಿತವೂ ಬುಲೆಟ್ ಟ್ರೈನ್  ವೇಗಕ್ಕಿಂತ ಜೋರಾಗಿ ಬಡಿದುಕೊಳ್ಳಲಾರಂಭಿಸಿದವು.ಸುರೇಶ್ ಹೆಬ್ಳೀಕರ್, ದೇವರಾಜ್ ಮುಂತಾದವರು ನಟಿಸಿದ್ದ ಚಿತ್ರವೊಂದು ಬಿಡುಗಡೆಯಾಗಿತ್ತು. ಅದರಲ್ಲಿ ಯಾಣವನ್ನು ಬಹಳ ಚೆನ್ನಾಗಿ ತೋರಿಸಿದ್ದರು. ಆ ಸಿನಿಮಾ ನೋಡಿದ ಮೇಲೆ ನಾವು ಒಮ್ಮೆ ಅಲ್ಲಿಗೆ ಹೋಗಿ ಬರಬೇಕು ಎಂದುಕೊಂಡಿದ್ದೆವು. ಅದೇ ಸಂದರ್ಭದಲ್ಲಿ  ನಮ್ಮ ಪರಿಚಯದ ಪದ್ಮಕುಮಾರಿಯವರು ತಮ್ಮವರೊಂದಿಗೆ ಅದೇ ತಾಣಕ್ಕೆ ಹೋಗಿ ಬಂದು ವಾರಪತ್ರಿಕೆಯೊಂದರಲ್ಲಿ ಸಚಿತ್ರ ಚಾರಣ ಬರಹವನ್ನು ಬರೆದಿದ್ದರು. ಅದನ್ನು ಓದಿದ ಮೇಲಂತೂ ಹೋಗಿಬರಲೇ ಬೇಕೆಂದು ಸಮಾನ ಮನಸ್ಕರಾದ ಎಂಟು ಜನ ಗೆಳೆಯರು ಆಗಿನ ಮೆಟಡೋರನ್ನು ಎರಡು ದಿನದ ಬಾಡಿಗೆಗೆ ಗೊತ್ತುಮಾಡಿಕೊಂಡು ಹೊರಟೆವು. ಹೊರಡುವ ಮೊದಲು ಈಗಾಗಲೇ ಅಲ್ಲಿಗೆ ಹೋಗಿಬಂದಿದ್ದ ಪರಿಚಯದ ಲೇಖಕಿಯನ್ನು ಭೇಟಿಮಾಡಿ ನಾವೂ ಹೋಗಿಬರಲು ಬೇಕಾದ ಮಾಹಿತಿಯನ್ನು ಪಡೆದಿದ್ದೆವು.ಅವರ ಮಾರ್ಗದರ್ಶನದಂತೆ ಮೊದಲ ದಿನ ಹರಿಹರದಲ್ಲಿ ಹರಿ ಮತ್ತು ಹರನನ್ನು ಒಂದೇ ಶಿಲೆಯಲ್ಲಿ ಕೆತ್ತಿರುವ ಹರಿಹರೇಶ್ವರ ದೇವಾಲಯವನ್ನು ನೋಡಿ, ಬನವಾಸಿಯಲ್ಲಿ ಮಧುಕೇಶ್ವರ ಮತ್ತು  ಮಂಜುಗುಣಿಯಲ್ಲಿ ವೆಂಕಟರಮಣನ ದರ್ಶನ ಮಾಡಿಕೊಂಡು ಶಿರಸಿ ಬಂದಾಗ ಸಂಜೆಯಾಗಿತ್ತು. ಅಲ್ಲೇ  ದೇವಸ್ಥಾನದ ಛತ್ರದಲ್ಲಿ ಉಳಿದುಕೊಂಡು, ಆ ದಿನ ಸಂಜೆಯೇ ಶಿರಸಿ ಮಾರಿಕಾಂಬೆಯ ದರ್ಶನ ಮಾಡಿ, ಪೂಜೆಯನ್ನು ಮಾಡಿಸಿದೆವು.  ಮಾರನೇ ದಿನ ಬೆಳಿಗ್ಗೆ ಬೇಗನೇ ಹೊರಟು ಯಾಣ ನೋಡಬೇಕಾದ್ದರಿಂದ ಮತ್ತು ಮುಂಜಾನೆಯಿಂದ ಚೆನ್ನಾಗಿ ಸುತ್ತಿದ್ದರಿಂದ ರಾತ್ರಿ ಬೇಗನೆ ಮಲಗಿದೆವು.ಮುಂಜಾನೆ ಆರುವರೆಗೆಲ್ಲಾ ಎಲ್ಲರೂ ಸಿದ್ದರಾಗಿ  ಹೋಟೆಲಿಗೆ ಬಂದು ಕಾಫಿ ಕುಡಿದು ಎಲ್ಲರಿಗೂ ಸಾಕಾಗುವಷ್ಟು ಇಡ್ಲಿಯನ್ನು ಕಟ್ಟಿಸಿಕೊಂಡು ಕುಮಟಾ ಮಾರ್ಗವಾಗಿ ಯಾಣದತ್ತ ಪಯಣ ಬೆಳೆಸಿದೆವು. ಸುಮಾರು ನಲವತ್ತು ಕಿ.ಮೀ. ದೂರ ಬಂದ ಮೇಲೆ ಪದ್ಮಕುಮಾರಿಯವರು ಹೇಳಿದಂತೆ ಬಲಭಾಗದಲ್ಲಿ ಯಾಣಕ್ಕೆ ದಾರಿ ಎಂಬ ಫಲಕ ಕಾಣಿಸಿತು.  ಅದು ರಸ್ತೆಯಿಂದ ಅಷ್ಟು ದೂರಕ್ಕೆ ಮಾತ್ರ ವಿಶಾಲವಾದ ದಾರಿಯಿದ್ದು, ಅಲ್ಲೇ ಎಣಿಸಿದಂತೆ ನಾಲ್ಕು ಚಿಕ್ಕಚಿಕ್ಕ ಮನೆಗಳಿದ್ದವು.  ಅಲ್ಲಿಂದ ಮುಂದೆ ಕಾಲು ದಾರಿ ಮಾತ್ರವಿದ್ದು ನಡೆದುಕೊಂಡೇ ಮುಂದೆ ಸಾಗಬೇಕಿತ್ತು.  ಲೇಖಕಿ ಇದನ್ನು ಮೊದಲೇ ತಿಳಿಸಿದ್ದರೂ, ನಾವು ಮತ್ತೊಮ್ಮೆ ಅಲ್ಲೇ ಮನೆಯ ಬಳಿಯಿದ್ದ ವಯಸ್ಕರೊಬ್ಬರನ್ನು ಯಾಣಕ್ಕೆ ಹೋಗುವ ದಾರಿ ಇದೇನಾ ಎಂದು ಕೇಳಿ ಖಾತ್ರಿ ಪಡಿಸಿಕೊಂಡು ಮುಂದಕ್ಕೆ ಹೆಜ್ಜೆ ಹಾಕಿದ್ದೇವು.  ಅವರ ಅನುಮತಿಯೊಂದಿಗೆ ನಮ್ಮ ಮೆಟಡೋರನ್ನು ಅಲ್ಲೇ ನಿಲ್ಲಿಸಿ, ಕಟ್ಟಿಸಿಕೊಂಡಿದ್ದ ತಿಂಡಿ ಪೊಟ್ಟಣಗಳೊಂದಿಗೆ ಹೊರಟೆವು.ನಮ್ಮಲ್ಲಿ ಸುತ್ತಮುತ್ತ ಎತ್ತಾ ನೋಡಿದರೂ, ಬೆಟ್ಟ ಗುಡ್ಡಗಳ ಸಾಲು, ಅಲ್ಲಿ ಚಿತ್ರವಿಚಿತ್ರವಾದ  ಕಲ್ಲು, ಬಂಡೆಗಳನ್ನು ನೋಡಿದ್ದ ನಮಗೆ, ಇಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚಹಸಿರಿನ ಗಿಡ ಮರಗಳು. ಜೊತೆಗೆ ಅದರಲ್ಲಿ ಕುಳಿತೋ ಅಥವಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ವಚ್ಛಂದವಾಗಿ ಹಾರುತ್ತಾ ಉಲಿವ ಹಕ್ಕಿಗಳ ಇಂಚರ.  ಇದರೊಂದಿಗೆ ನಾನೇನೂ ಕಮ್ಮಿ ಎನ್ನುವಂತೆ ಎಲ್ಲೆಲ್ಲಿಂದಲೋ ಜುಳುಜುಳು ಹರಿಯುವ ನೀರಿನ ನಿನಾದ.  ಇದನ್ನೆಲ್ಲ ನೋಡುತ್ತ, ಕೇಳುತ್ತಾ ಸಾಗುತ್ತಿದ್ದರೆ, ಸ್ವರ್ಗವೇ ಭೂಮಿಗಿಳಿದು ಬಂದಂತೆ ಭಾಸವಾಗುತ್ತಿತ್ತು. ಹಾಗೇ ಖುಷಿಯಿಂದ ಕೂಗುತ್ತ, ಕುಣಿಯುತ್ತಾ ಐದಾರು  ಕಿ.ಮೀ. ನಡೆದು ಸಾಗಬೇಕಾದ  ದಾರಿಯಲ್ಲಿ  ಮೂರು ಕಿ.ಮಿ. ಬಂದಾಗ ಅಡ್ಡವಾಗಿ ನದಿಯೊಂದು ಸಿಕ್ಕಿತು. ಆಗಲೇ ಸಮಯ ಹತ್ತು ಗಂಟೆಯಾಗಿತ್ತು ಜೊತೆಗೆ ಹೊಟ್ಟೆ ಚುರುಗುಡಲಾರಂಭಿಸಿತ್ತು. ಹಾಗಾಗಿ ಅಲ್ಲೇ ಕುಳಿತು ಕಟ್ಟಿಸಿಕೊಂಡು ಬಂದಿದ್ದ ತಿಂಡಿಯನ್ನು ತಿಂದು ನದಿಯ ನೀರನ್ನೇ ಕುಡಿದೆವು. ನಡೆದು ಉರಿ ಎದಿದ್ದ ಕಾಲುಗಳನ್ನು ನದಿಯ ತಣ್ಣನೇ ನೀರಲ್ಲಿ ಬಿಟ್ಟುಕೊಂಡು ಕುಳಿತ್ತಿದ್ದರಿಂದ ಮನಸಿಗೆ ಹಿತ ನೀಡುತ್ತಿತ್ತು.  ನಾವು ನೋಡಲು ಬಂದಿದ್ದ ಜಾಗ ತಲುಪಲು ಇನ್ನೂ ಎರಡರಿಂದ ಮೂರು ಕಿ.ಮಿ. ನಡೆಯಬೇಕಿತ್ತು.  ಹಾಗಾಗಿ ಅಲ್ಲಿ ತಡಮಾಡದೆ ಹೊರಟೆವು. ನದಿ ದಾಟಿ ಸ್ವಲ್ಪ ಮುಂದೆ ಬಂದನಂತರ ಕಾಲುದಾರಿಯಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ದಾರಿ ಕಾಣದಂತಾಗಿತ್ತು. ನಾವು ಹೋಗುತ್ತಿರುವ ದಾರಿ ಸರಿಯಿದೆಯೇ ಎಂದು ಕೇಳಲು ಅಲ್ಲಿ ಯಾರೆಂದರೇ ಯಾರು ಇರಲಿಲ್ಲ. ಲೇಖಕಿಯವರು ಕಾಲುದಾರಿಯಲ್ಲಿ ಸೀದಾ ನಡೆಯುತ್ತಾ ಹೋದರೆ ಆಯಿತು ಎಲ್ಲಿಯೂ ತಿರುವುಗಳು ಬರುವುದಿಲ್ಲ ಎಂದು ಹೇಳಿದ್ದರಿಂದ ಅದೇ ದಾರಿಯಲ್ಲಿ ನಡೆಯತೊಡಗಿದೆವು. ನಡೆಯುತ್ತಾ ಮೂರು ಕಿ.ಮಿ.ಗಿಂತ ಮುಂದೆ ಬಂದರು ಅಘೋರೇಶ್ವರ ದೇವಾಲಯವಾಗಲಿ, ಅದರ ಬಳಿ ಇರುವ ಶಿಖರಗಳಾಗಲ್ಲಿ ಕಾಣಲೇ ಇಲ್ಲ. ಏನು ಮಾಡುವುದೆಂದು ಯೋಚಿಸುತ್ತಾ ಹೆಜ್ಜೆ ಹಾಕುವಾಗಲೇ ಇದ್ದಕ್ಕಿದ್ದಂತೆ ಬಿಂದು ಮತ್ತು ಲೋಕು ಜೋರಾಗಿ, ವೆಂಕಣ್ಣ ಹಿಂದೆ ನಿನ್ನ ಪ್ಯಾಂಟ್ ನೋಡಿಕೋ ಎಂದರು. ನೋಡಿದರೆ, ಮಂಡಿಯಿಂದ ಕೆಳಭಾಗದಲ್ಲಿ ರಕ್ತ ಮಾಯವಾಗಿತ್ತು. ನಾವು ಏನಪ್ಪಾ ಎಂದುಕೊಳ್ಳುವಾಗಲೇ ವಾಹಿದ್, ಹೆದರಬೇಡ ವೆಂಕಣ್ಣ ಪ್ಯಾಂಟನ್ನು ಸ್ವಲ್ಪ ಮಾಡಿಸು ಎಂದವನು, ತಾನೇ ಹತ್ತಿರ ಬಂದು ಆ ಕೆಲಸಮಾಡಿ ಯಾವಾಗಲೋ ಅವನ ಮಂಡಿಯವರೆಗೆ ಹತ್ತಿ ರಕ್ತ ಹೀರುತ್ತಿದ್ದ ಜಿಗಣೆಯನ್ನು ತೋರಿಸಿ, ಅದನ್ನು ಬೆರಳಿನಿಂದ ಕೀಳಲು ನೋಡಿದ. ಅದು ಸಾಧ್ಯವಾಗದಾಗ, ತನ್ನ ಜೇಬಿನಿಂದ ಲೈಟರ್ ತೆಗೆದು ಅದರ ಬುಡಕ್ಕೆ ಉರಿ ಹಿಡಿದ.  ಆಗ ತಕ್ಷಣವೇ ಜಿಗಣೆ ಕೆಳಗೆ ಬಿತ್ತು. ಆದರೆ ವೆಂಕಟೇಶ್ ಕಾಲಿನಿಂದ ರಕ್ತ ಜಿನುಗುತ್ತಿತ್ತು. ಅದಕ್ಕೆ ಅರವಿಂದ್ ಅಲ್ಲೇ ಬೆಳೆದ ಗಿಡಗಳಲ್ಲಿ ಹುಡುಕಾಡಿ ಯಾವುದೋ ಸೋಪನ್ನು ತಂದು ಜಜ್ಜಿ ಗಾಯವಾದ ಜಾಗಕ್ಕೆ ಸವರಿದ. ಏನಾಶ್ಚರ್ಯ, ಸುರಿಯುತ್ತಿದ್ದ ರಕ್ತ ಎರಡೇ ನಿಮಿಷದಲ್ಲಿ ನಿಂತಿತು. ಆಗ ಅವನು ಮುಖದಲ್ಲಿ ಕಾಣುತ್ತಿದ್ದ ಹೆಮ್ಮೆ ನಿಜಕ್ಕೂ ನೋಡುವಂತ್ತಿತ್ತು. ಇದೆಲ್ಲಾ ಆದ ನಂತರ ಮತ್ತೆ ಮುಂದಕ್ಕೆ ಹೆಜ್ಜೆ ಹಾಕಿದೆವು. ಹೀಗೇ ನಡೆಯುತ್ತಾ ಮತ್ತೆ ಎರಡು ಕಿ.ಮಿ. ಬಂದರು, ಅಂದುಕೊಂಡ ಸ್ಥಳದ ಸುಳಿವೇ ಕಾಣಲಿಲ್ಲ. ಆಗ ಸಮಯ ಮೂರು ಗಂಟೆ. ಹೊಟ್ಟೆ ಹಸಿಯಲಾರಂಭಿಸಿತ್ತು. ಜೊತೆಗೆ ನಾವು ದಾರಿ ತಪ್ಪಿದ್ದು ಖಚಿತವಾಗಿತ್ತು. ಏಕೆಂದರೆ ಲೇಖಕಿ ಹೇಳಿದಂತೆ ಮತ್ತು ಸ್ಥಳೀಯ ಮನೆಯಾತ ಹೇಳಿದಂತೆ ನಾವು ಸರಿಯಾದ ದಾರಿಯಲ್ಲಿ ಬಂದಿದ್ದಾರೆ ಹನ್ನೊಂದುವರೆಗೆಲ್ಲಾ ಯಾಣ ತಲುಪಿ ಸಾಕೆನಿಸುವಷ್ಟು ನೋಡಿ ಊಟದ ಸಮಯಕ್ಕೆ ಶಿರಸಿಯಲ್ಲಿ ಇರಬೇಕಾಗಿತ್ತು. ಆದರೆ ಈಗ ಗಂಟೆ  ಮೂರದರೂ ನಮಗೆ ತಿಳಿಯದ ಜಾಗದಲ್ಲಿ ನಿಂತಿದ್ದೆವು.  ಮುಂದೆ ಹೋಗಬೇಕೋ, ಹಿಂದೆ ಹೋಗಬೇಕೋ ತಿಳಿಯದಂತ ಪರಿಸ್ಥಿತಿ.  ಎಲ್ಲರಿಗೂ ಇದೇ ಚಿಂತೆಯಾಗಿ ಪರಸ್ಪರ ಮಾತುಕತೆ ನಿಂತುಹೋಗಿತ್ತು. ಯಾಂತ್ರಿಕವಾಗಿ ನಿಧಾನವಾಗಿ ನಡೆಯುತ್ತಿದ್ದೆವೆ  ಹೊರತು ಯಾಣ ತಲುಪುವ ಭರವಸೆ ಇರಲಿಲ್ಲ. ಯಾವುದೋ ಚಿಂತೆಯಲ್ಲಿ ನಡೆಯುತ್ತಿದ್ದ ಜ್ಯೋತಿ ಮರದ ಬುಡವನ್ನು ಗಮನಿಸದೆ ಎಡವಿಬಿದ್ದ. ಬಿದ್ದವರನ್ನು ಎತ್ತಲು ವೆಂಕಟೇಶ್ ಮತ್ತು ಮೂಸಮಿಲ್ ಮುಂದಾದರು. ಆದರೆ ಅವರ ಸಹಾಯ ಪಡೆಯದೆ ಮೇಲೆದ್ದ ಜ್ಯೋತಿ, ಬೋಳಿ ಮಕ್ಕಳ ಯಾರ ಪ್ರಾಣ ತೆಗಿಬೇಕಂತ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ. ದಾರಿ ಗೊತ್ತಿಲ್ಲ ಅಂದ್ರು ಮುಂದೆ ಹೋಗ್ತಾನೆ ಇದೀರಾ. ಇನ್ನೂ ನನಾಂತೂ ಬರೋಲ್ಲ. ಬೇಕಿದ್ದರೆ ನೀವೇ ಹೋಗಿ ಎಂದು ಬಾಯಿಗೆ ಬಂದಂತೆ ನಮಗೆಲ್ಲಾ ಬೈಯತೊಡಗಿದ. ಸಾಮಾನ್ಯವಾಗಿ ಜ್ಯೋತಿ ಎಂದಿಗೂ ಈ ರೀತಿ ಆಡಿದವನಲ್ಲ. ಆದರೆ ಮುಂದೇನು ಎಂಬ ಚಿಂತೆ, ಜೊತೆಗೆ ಹೊಟ್ಟೆ ಹಸಿವು ಅವನನ್ನು ಕೆರಳುವಂತೆ ಮಾಡಿತ್ತು. ಅವನು ಹಾಗೆ ಮಾತನಾಡಿದೊಡನೇ ಲೋಕು ಸಿಟ್ಟಿನಿಂದ, ನಾವೇನೂ ನಿನ್ನ ಮನೆಗೆ ಬಂದು, ನೀನು ಬರಲೇ ಬೇಕೆಂದು ಆಮಂತ್ರಣ ಕೊಟ್ಟು ಕರೆದಿಲ್ಲ. ನಿಜ ಹೇಳಬೇಕೆಂದರೆ ನೀನೇ ನಮ್ಮನ್ನು ಹೊರಡಿಸಿದ್ದು ಎಂದು ಜೋರು ಮಾಡಿದ. ಇದು ಜಗಳ ಆಡುವ ಸಮಯವಲ್ಲವೆಂದು, ನಾನು, ರಾಘು, ವಾಹಿದ್, ಬಿಂದು ಎಲ್ಲಾ ಸೇರಿ ಇಬ್ಬರಿಗೂ ಸಮಾಧಾನ ಮಾಡಿದೆವು. ಅವರಿಬ್ಬರೂ ಸಮಾಧಾನವಾಗಿ, ನಾವು ಮುಂದೆ ಹೋಗುವುದೋ ಅಥವಾ ಬಂದು ದಾರಿಯಲ್ಲಿ ಹಿಂದಿರುಗುವುದೋ ಎಂದು ತೀರ್ಮಾನಿಸುವ ವೇಳೆಗೆ ಗಂಟೆ ನಾಲ್ಕಾಗಿತ್ತು. ಆಗಲೇ ಸೂರ್ಯನೂ ತನ್ನ ಅಂದಿನ ಕೆಲಸ ಮುಗಿಸಿ ಮುಳುಗುವ ಆತುರದಲ್ಲಿದ್ದಂತೆ ಕಂಡಿತು. ಏಕೆಂದರೆ ಇದು ಡಿಸೆಂಬರ್ ತಿಂಗಳಾಗಿತ್ತು ಹಾಗಾಗಿ ಬೆಳಕು ಕಮ್ಮಿಯಾಗುತ್ತಾ ಬಂದಿತ್ತು.  ಇದರಿಂದ ಎಲ್ಲರೂ ಬಂದ ದಾರಿಯಲ್ಲಿ ಹಿಂದಿರುಗುವ ನಿರ್ಧಾರಕ್ಕೆ ಬಂದೆವು. ಹಿಂದಿರುಗುವ ನಿರ್ಧಾರವಾದೊಡನೇ, ಅರವಿಂದ್ ಮತ್ತು ವೆಂಕಟೇಶ್ ಬೇಗ ಹೆಜ್ಜೆ ಹಾಕಿ ಇಲ್ಲ ಕತ್ತಲಾಗಿ ಬಿಡುತ್ತದೆ ಎಂದು ವೇಗವಾಗಿ ನಡೆಯತೊಡಗಿದರು. ಉಳಿದವರು ಅವರ ವೇಗಕ್ಕೆ ಹೆಜ್ಜೆ ಹಾಕಲು ಕಷ್ಟವಾಗುತ್ತಿತ್ತು. ಅರ್ಧ ದಾರಿಯೂ ಬಂದಿರಲಿಲ್ಲ, ರಾಘು ಬುಡಕಡಿದ ಬಾಳೆಗಿಡದಂತೆ ದಬ್ಬನೇ ಬಿದ್ದ. ಮತ್ತೆ ಎಲ್ಲರೂ ಅಲ್ಲಿ ನಿಲ್ಲಬೇಕಾಯಿತು. ಏನೆಂದು ಕೇಳಿದರೆ ತಲೆ ಸುತ್ತುತ್ತಿದೆ ಎಂದು. ಬಹುಶಃ ಹಸಿವಿನಿಂದ ಇದಾಗಿತ್ತು. ಅವನು ಸುಧಾರಿಸಿಕೊಳ್ಳುವರೆಗೂ ಉಳಿದವರು ಏನು ಮಾಡುವಂತಿರಲಿಲ್ಲ. ಹಾಗಾಗಿ ಅವನ ಸುತ್ತಲೇ ಕುಳಿತೆವು. ಪಾಪ ಬಿಂದು, ಅವನ ಕರವಸ್ತ್ರದಿಂದ  ರಾಘು ಮುಖಕ್ಕೆ ಗಾಳಿ ಹಾಕುತ್ತಿದ್ದ.  ಅಲ್ಲೇ ಹತ್ತಿರದಲ್ಲಿ ನೀರು ಹರಿವ ಸದ್ದು ಕೇಳಿ ನಾನು, ಮುಜಾ ಬಾಟಲಿ ತೆಗೆದುಕೊಂಡು ಹೋಗಿ ನೀರು ತಂದು, ರಾಘುಗೆ ಕುಡಿಸಿ ಅವನ ಮುಖವನ್ನು ತೊಳೆದೆವು. ಒಂದರ್ಧ ಗಂಟೆಯಾದಮೇಲೆ ಸ್ವಲ್ಪ ಸುಧಾರಿಸಿಕೊಂಡು ಎದ್ದುನಿಂತು ಹೋಗುವ ಎಂದ.  ಆಗಲೇ ಸೂರ್ಯ ಮರೆಯಾಗಿ ಮಸುಕು ಬೆಳಕು ಮಾತ್ರ ಉಳಿದಿತ್ತು. ಆದರೆ ಈಗ ವೇಗವಾಗಿ ನಡೆಯುವಂತಿರಲಿಲ್ಲ.ಯಾರೊಬ್ಬರ ಮುಖದಲ್ಲೂ ನಗೆ ಇರಲಿಲ್ಲ, ಮಾತುಕತೆಯೂ ನಿಂತುಹೋಗಿ, ಸುಮ್ಮನೆ ಮುಂದೆ ನಡೆಯುತ್ತಿದ್ದ ವಾಹಿದನನ್ನೇ ಎಲ್ಲರೂ ಹಿಂಬಾಲಿಸುತ್ತಿದೆವು. ಬೆಳಕು ಮಾಯವಾಗಿ ದಟ್ಟ ಕತ್ತಲಾವರಿಸಿ  ಮುಂದೆ ಹೆಜ್ಜೆ ಇಡಲು ದಾರಿ ಕಾಣದಾಯಿತು. ನೂರಕ್ಕೆ ನೂರು ಕಾಡಿನ ಕತ್ತಲಲ್ಲಿ ಬಂಧಿಯಾದದ್ದು ಖಾತ್ರಿಯಾಯಿತು.  ಎಲ್ಲಿದ್ದೇವೆ, ಅಕ್ಕಪಕ್ಕ

ಕಥಾಗುಚ್ಛ Read Post »

You cannot copy content of this page

Scroll to Top