ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಮಲ್ಲಿಗೆ ಸಿಂಚನ (ಗಜಲ್ ಹೂದೋಟ

ಪುಸ್ತಕ ಸಂಗಾತಿ ಮಲ್ಲಿಗೆ ಸಿಂಚನ (ಗಜಲ್ ಹೂದೋಟ) ಕೃತಿ ಹೆಸರು…. ಮಲ್ಲಿಗೆ ಸಿಂಚನ (ಗಜಲ್ ಹೂದೋಟ)ಲೇಖಕರು…ಡಾ.ಮಲ್ಲಿನಾಥ ಎಸ್ ತಳವಾರಪ್ರಕಾಶಕರು…ಅನ್ನಪೂರ್ಣ ಪ್ರಕಾಶನ.ಸಿರಿಗೇರಿ ತಾ.ಸಿರುಗುಪ್ಪ ಜಿಲ್ಲಾ ಬಳ್ಳಾರಿ ಮೊ೮೭೬೨೪೭೯೨೧೬ಪ್ರಕಟಿತ ವರ್ಷ ೨೦೨೧ ಸತತವಾದ ಅಧ್ಯಯನ ಶೀಲತೆ,ಉತ್ತಮವಾದ ಬರಹಗಳು,ಹಾಗೂ ಗಜಲ್ ಸಾಹಿತ್ಯ ಬಗ್ಗೆ ಆಳವಾದ ಅಭ್ಯಾಸ, ಗೂಗಲ್ ಮೀಟಗಳಲ್ಲಿ ಗಜಲ್ ಸಾಹಿತ್ಯ ಬಗ್ಗೆ ನಿರರ್ಗಳವಾಗಿ  ಉಪನ್ಯಾಸ ನೀಡಿ ಮೆಚ್ಚಿಗೆಯನು ಗಳಿಸಿದ ಡಾ,ಮಲ್ಲಿನಾಥ ಎಸ್ ತಳವಾರ ಇವರು ಕನ್ನಡ ಉಪನ್ಯಾಸಕರಾಗಿ ನೂತನ ಪದವಿ ಕಾಲೇಜ ಗುಲಬರ್ಗಾ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಪ್ರವೃತ್ತಿ ಯಲ್ಲಿ ಸಾಹಿತಿಗಳಾಗಿ ವಿವಿಧ ಪ್ರಕಾರದ ೧೨ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.ಇವರ ಕಾವ್ಯ ನಾಮ “ರತ್ನರಾಯಮಲ್ಲ” ಎಂದಿ ಇದ್ದು ಗಜಲ್ ನಲ್ಲಿ “ಮಲ್ಲಿ” ಎಂಬ ತಖಲ್ಲುಸ್ ಬಳಸುತ್ತಿದ್ದಾರೆ.ಗಜಲ್ ಎಂಬುವುದು ಇವರ ಹೃದಯದ ಮಿಡಿತವಾಗಿದೆ ,ಸ್ವಭಾವತಃ ಮೃದು ಸ್ವಭಾವದವರಾಗಿದ್ದು ಗಜಲ್ ಸಾಹಿತ್ಯ ಕ್ಕೆ ಮೋಹಿತರಾಗಿದ್ದಾರೆ.ಮಿರ್ಜಾ ಗಾಲಿಬ್ ಇವರ ನೆಚ್ಚಿನ ಗಜಲ್ ಕವಿಯಾಗಿದ್ದಾರೆ,ಸಂಗಾತಿ ಆನ್ಲೈನ್ ಪತ್ರಿಕೆಯಲ್ಲಿ ಗಜಲ್ ಅಂಕಣಕ್ಕೆ ಲೇಖನಗಳನ್ನು ಬರೆಯುತ್ತಿದ್ದಾರೆ. ಗಜಲ್ ಎಂಬುವುದು ಉದು೯ ಸಾಹಿತ್ಯ ದ ಕಾವ್ಯ ರಾಣಿಯಾಗಿದೆ,ಹೃದಯದ ಭಾವನೆಗಳಾದ ನೋವು ನಲಿವು  ,ಮುನಿಸು,ಕಾಯುವಿಕೆ ಯನ್ನು ವ್ಯಕ್ತ ಪಡಿಸುವ ಕೋಮಲ ಕಾವ್ಯ ಪ್ರಕಾರವಾಗಿದೆ.ಪ್ರೀತಿ ,ಪ್ರೇಮ,ವಿರಹ,ಪ್ರಣಯ ಗಳೊಂದಿಗೆ ನಿರಾಕಾರ ರೂಪಿಯೊಂದಿಗೆ ಮಾತಾಡುವ ,ಲೌಕಿಕ ಪ್ರೇಮ ದಿಂದ ಅಲೌಕಿಕ ಪ್ರೀತಿಯೊಂದಿಗೆ ಮೇಲೇರುವುದು ,ಆಧ್ಯಾತ್ಮಿಕ, ದೇವರೊಂದಿಗೆ ಸಂವಾದಕ್ಕೆ ಇಳಿಯುವುದು ,ಕಾಣದ ಚೇತನವನ್ನು ಹೊಂದುವ ಹಂಬಲ ಇವೆಲ್ಲವೂ ಗಜಲ್ದ ಒಳ ತಿರುಳಾಗಿವೆ.ಇವೆಲ್ಲವನ್ನು  ಧ್ಯಾನಿಸಿ ಡಾ.ಮಲ್ಲಿನಾಥ ಎಸ್ ತಳವಾರ ಅವರು ಗಜಲ್ ಗಳನ್ನು ರಚನೆಮಾಡುತ್ತಿದ್ದಾರೆ.ಈಗಾಗಲೆ “ಗಾಲಿಬ್ ಸ್ಮೃತಿ” ಎಂಬ ಪ್ರಥಮ ಗಜಲ್ ಸಂಕಲನ ಕಳೆದ ವರ್ಷ ಪ್ರಕಟವಾಗಿದೆ.ಇತ್ತೀಚಿಗೆ “ಮಲ್ಲಿಗೆ ಸಿಂಚನ” ಎಂಬ ಗಜಲ್ ಸಂಕಲನವು ಪ್ರಕಟವಾಗಿ ಲೋಕಾರ್ಪಣೆ ಯಾಗಿದೆ. “ಮಲ್ಲಿಗೆ ಸಿಂಚನ” (ಗಜಲ್ ಹೂದೋಟ)ವು ಡಾ.ಮಲ್ಲಿನಾಥ ಎಸ್ ತಳವಾರ ಅವರ ಎರಡನೇ ಗಜಲ್ ಸಂಕಲನ ವಾಗಿದೆ .  ೬೦ ಗಜಲ್ ಗಳ ಗುಲ್ದಸ್ತ ವಾಗಿದೆ.ಇದು ಗಜಲ್ ಬರೆಯುವ ಆಸಕ್ತರಿಗೆ  ಹಾಗೂ ನಿಯಮ ಬದ್ಧವಾಗಿ ರಚಿಸುವವರಿಗೆ  ಇದು ಕಲಿಯುವವರಿಗೆ ಮನದಟ್ಟವಾಗುವಂತೆ ಒಂದು ಉತ್ತಮವಾದ ಮಾರ್ಗದಶಿ೯(ಕೈಪಿಡಿ) ಯಾಗಿದೆ.ಸಂಕಲನದ ಪ್ರಾರಂಭದಲ್ಲಿ ಭಾಷಾ ಬೆಳವಣಿಗೆ ,ಉದು೯ ಸಾಹಿತ್ಯ ದಲ್ಲಿ ಗಜಲ್ ಕಾವ್ಯ ದ ಬೆಳವಣಿಗೆ ಮತ್ತು ಗಜಲ್ ನಲ್ಲಿ ಬಳಿಸುವ “ಗಜಲ್ ಪಾರಿಭಾಷಿಕ ಪದಗಳಾದ” ಮತ್ಲಾ ,ಮಕ್ತಾ,ರದೀಫ್, ಕಾಫಿಯಾನ,ರವಿ,ಮುಂತಾದವುಗಳ ಅರ್ಥ ವಿನ್ಯಾಸ ,ಪದಬಳಿಕೆಯ ಕ್ರಮಗಳ ಬಗ್ಗೆ ಹಿರಿಯ ಗಜಲ್ ಕಾರರ ಗಜಲ್ಗಳನ್ನು ಉದಾಹರಣೆ ಯಾಗಿಸಿಕೊಂಡು ನಿಯಮಗಳನ್ನು ಹೇಗೆ ಪಾಲಿಸಬೇಕೆಂದು,ವಿಧದ ಪ್ರಕಾರಕದ ಗಜಲ್ ಗಳನ್ನು ಹೇಗೆ  ರಚಿಸಬೇಕೆಂದು ಶಿಕ್ಷಕ ವೃತ್ತಿಯ ಅನುಭವದಿಂದ  ಕಲಿಯುವವರಿಗೆ ಮನದಟ್ಟ ವಾಗುವಂತೆ ,ಉಪಯೋಗವಾಗುವಂತೆ ವಿವರವಾಗಿ ವಿವರಿಸಿದ್ದಾರೆ. “ಮಲ್ಲಿಗೆ ಸಿಂಚನ” ಕೃತಿಯು ಸಂಗ್ರಹಣೆಗೆ ಮತ್ತು ಓದಲು ಯೋಗ್ಯವಾಗಿದೆ. “ಮಲ್ಲಿಗೆ  ಸಿಂಚನ” ಗಜಲ್ ಹೂ ದೋಟದಲ್ಲಿ ೬೦ ವಿವಿಧ ಮಲ್ಲಿಗೆ ಸುಮ ಗಳು ತಮ್ಮ ಘಮಲನ್ನು ಹರಡಿ  ಓದುಗರನ್ನು ಮೈಮರೆಸುತಾ ಬಾನಲ್ಲಿ ತೇಲಾಡಿಸುತ್ತವೆ ,ಬಹುಭಾಷಾ ಕವಿ,ಗಜಲ್ ಕಾರರು,ಗಾಯಕರು ಆದ  ಶ್ರೀ. ಪ್ರಕಾಶ್ ಸಿಂಗ್ ರಜಪೂತ್ ವಿಜಯಪುರ ಇವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ. ಸಂಕಲನದ ಗಜಲ್ ಗಳು ಓದುಗರಿಗೆ ಮುದನೀಡುತ್ತಾ ಓದಿಸಿಕೊಂಡು ಹೋಗುತ್ತವೆ.ಮಲ್ಲಿನಾಥ ಇವರ ಗಜಲ್ ಗಳಲ್ಲಿ ಗೇಯತೆ ,ಲಯಾ,ಭಾವತೀವ್ರತೆ,ಮೃದು ಭಾಷಾ ಪ್ರಯೋಗ,ಸಮಾಜಿಕ ಕಳಕಳಿ,ಅಧ್ಯಾತ್ಮಿಕ ಚಿಂತನೆ,ಮಹಿಳಾ ಸಂವೇದನೆ,ತಾಯಿಗೆ ಗಜಲ್ ಮೂಲಕ ಕೃತಜ್ಞತೆ ಹೇಳಿದ್ದಾರೆ, ಹಿರಿಯ ಮಹಿಳಾ ಸಾಹಿತಿ ಡಾ.ಗೀತಾ ನಾಗಭೂಷಣ ಮತ್ತು ಹಿಂದಿ ಚಲನಚಿತ್ರ ನಟ ರಷಿ ಕಪೂರ್ ಅವರಿಗೆ ಗಜಲ್ ಮೂಲಕ ಶ್ರದ್ಧಾಂಜಲಿ ಅಪಿ೯ಸಿದ್ದಾರೆ.ಹಿರಿಯ ಗಜಲ್ ಕಾರರ ಸಾನಿ ಮಿಸ್ರಾ ತೆಗೆದುಕೊಂಡು ತರಹೀ ಗಜಲ್ ಗಳನ್ನು ಭಾವಕ್ಕೆ ಧಕ್ಕೆ ಬರದಂತೆ ರಚಿಸಿದ್ದಾರೆ. ಇವು ಅಲ್ಲದೆ ಈ ಸಂಕಲನದಲ್ಲಿ  ಸ್ವರ ಕಾಫಿಯಾ ಗಜಲ್,ಜುಲ್ ಕಾಫಿಯಾ ಗಜಲ್,ಸಂಪೂರ್ಣ ಮತ್ಲಾ ಗಜಲ್,ಸೆಹ್ ಗಜಲ್,ಮಾತ್ರಾಯಾಧಾರಿತ ಗಜಲ್, ಹೀಗೆ ವಿವಿಧ ಪ್ರಕಾರದ ಗಜಲ್ ಗಳನ್ನು ಬರೆದಿದ್ದಾರೆ. ವಿವಿಧ ರೀತಿಯ ಮಲ್ಲಿಗೆ ಹೂ ಗಳನ್ನು ಸೇರಿಸಿ ಒಂದು ಸುಂದರವಾದ ಮಲ್ಲೆ ಮಾಲೆ ತಯಾರಿಸಿ ಓದಿಗರಿಗೆ ಆಸ್ವಾದಿಸಲು ಕೊಟ್ಟಿದ್ದಾರೆ. ನನಗೆ ಇಷ್ಟವಾದ ಕೆಲವು ಗಜಲ್ ಗಳ ಮಿಸ್ರಾ ಗಳು ನನ್ನ ಪ್ರೀತಿ ಯನು ಅರಿಯದೆ ಹೋದೆನೀನು ಅದೃಷ್ಟವನ್ನು ನಂಬಿ ನಿನಗಾಗಿ ಕಾಯುತಿರುವೆ  (ಗ ೨) ಇದು ಒಂದು ಭಗ್ನ ಪ್ರೇಮಿಯ ಹೃದಯದ ಅಳಲನ್ನು ಬಿತ್ತರಿಸುವ ಗಜಲ್ ಆಗಿದೆ ನೋವಿನ  ತೀವ್ರತೆ ಎದ್ದು ಕಾಣುತ್ತದೆ, ಪ್ರೀತಿಸಿದ ಹುಡುಗಿ(ಹುಡುಗ) ನಿಜವಾದ ಪ್ರೀತಿಯನು ಅರಿಯದೆ ಪ್ರೇಮಿಯನ್ನು ಧಿಕ್ಕರಿಸಿ ಹೋದಾಗ ಆಗುವ ನೋವಿನ ಪರಿ ಇದು ,ಅವಳು ತೊರೆದು ಹೋಗಿದ್ದರೂ ಹುಚ್ಚು ಮನಸ್ಸು ಬರುವಿಗಾಗಿ ಕಾಯುತ್ತದೆ ,ಅದು ಅದೃಷ್ಟವನ್ನು ನಂಬಿ,ಸುತ್ತೆಲ್ಲಾ ಕತ್ತಲೆ ಇದ್ದರೂ ಮಿಂಜು ಹುಳುವಿನ  ಮಿಣುಕು ಬೆಳಕನು ನಂಬಿ ಮತ್ತೆ ಮತ್ತೆ ಪ್ರೇಮಿಗಾಗಿ ಕಾಯುವುದು…… ಅದೃಷ್ಟವನ್ನು ನಂಬುವುದು ಪ್ರೇಮಿಗಳ ಹುಚ್ಚು . ಮಧು ಬಟ್ಟಲು ಕೈಯಿಂದ ಜಾರುತಿದೆ ಅವಳಲ್ಲಿ ಮಹೆಂದಿ ಕುಣಿಯುತಿದೆ ಸಾಕಿ   (ಗಜಲ್೯) ತಾ ಪ್ರೀತಿಸಿದ ಹುಡುಗಿ ತನಗೆ ಸಿಗದೆ  ಇನ್ನೊಬ್ಬನ ಮಡದಿ ಆಗುವುದು ತಿಳಿದ,  ಪ್ರೇಮಿ ಮಧುಶಾಲೆಗೆ ಹೋಗಿ ಅವಳನ್ನು ಮರೆಯಲು ಮಧು ಬಟ್ಟಲಿಗೆ ಶರಣಾಗುತ್ತಾನೆ,ಆದರೆ ಅವಳ ನೆನಪು ಬಂದು ಕೈಯಿಂದ ಮಧು ಬಟ್ಟಲು ಜಾರಿ ಬೀಳುತ್ತದೆ,ಅದಕ್ಕೆ ಕಾರಣ ಅವನ ಪ್ರೇಮಿಯ ಮುಂದೆ ಇನ್ನೊಬ್ಬನ ಹೆಸರಿನ ಮದರಂಗಿ ಕುಣಿಯುತಿದೆ ಸಾಕಿ ಹೇಗೆ ಮಧು ಕುಡಿಯಲಿ ಎಂದು ಮಧುಶಾಲೆಯಲ್ಲಿ ಕನವರಿಸುವ ಭಗ್ನ  ಪ್ರೇಮಿಯ ನೋವಿನ ಗಜಲ್ ಇದು ಹಗಲಿರುಳು ಒಂದೇ ಆಗುತಿದೆ ದುಡ್ಡಿಗಾಗಿ ಶಾಂತಿ–ನೆಮ್ಮದಿ ಹರಾಜಾಗುತಿದೆ ದುಡ್ಡಿಗಾಗಿ  (ಗಜಲ್೧೯) ಈ ಗಜಲ್ ಇಂದಿನ ವಾಸ್ತವಿಕ ಜಾಗತೀಗ ಜಗದ ಬದುಕನ್ನು ಬಿತ್ತರಿಸುತಿದೆ.ಕೇವಲ ದುಡ್ಡಿನಲ್ಲಿಯೇ ಮನುಷ್ಯ ಬದುಕುತ್ತಿದ್ದಾನೆ,ದುಡ್ಡು ಗಳಿಸುವುದಕ್ಕಾಗಿ ಇಂದು ಮನುಷ್ಯ ಹಗಲು ಇರುಳು ಅಂತರ ಮರೆತು ದುಡಿಯುತ್ತಿದ್ದಾನೆ ದುಡ್ಡಿಗಾಗಿ,ಮನ ಶಾಂತಿ ,ಮನೆ ನೆಮ್ಮದಿ ,ಸಂಬಂಧಗಳ ಪ್ರೀತಿ, ಗಂಡ ಹೆಂಡತಿ ಸಂಬಂಧ, ಎಲ್ಲಾ ಹರಾಜಾಗುತ್ತಿವೆ ದುಡ್ಡಿಗಾಗಿ,ದುಡ್ಡೇ ದೊಡ್ಡಪ್ಪ ಎಂಬುದನ್ನು ಗಜಲ್ ಕಾರರು ಒತ್ತಿ ಹೇಳಿದ್ದಾರೆ. ಬೆವರ ಹನಿಯ ರುಚಿ ಸವಿಯದವರು ಮನುಷ್ಯರೇ ಅಲ್ಲ ಉಪ್ಪು ನೀರಿನ ಜಳಕ ಮಾಡದವರು ಮನುಷ್ಯರೇ ಅಲ್ಲ    (ಗಜಲ್೨೫) ಇದು ವಿಶ್ವ ಕಾಮಿ೯ಕರ ದಿನಾಚರಣೆ ಯಂದು ಬರೆದ ಗಜಲ್ ಕಾಣುತ್ತದೆ.ಕಾಯಕದ ಬಗ್ಗೆ ಬರೆದ ಗಜಲ್  ,ನಮ್ಮ ಶರಣರು ಹೇಳಿದಂತೆ ಕಾಯಕ ಮಾಡದವನು ಊಟಕ್ಕೆ ಯೋಗ್ಯನಲ್ಲ,ದುಡಿದು ತಿನ್ನುತಾ ದಾಸೋಹ ಮಾಡುವವನು ನಿಜ  ಶರಣ,ಎಂಬಂತೆ ಬೆವರ ಹನಿ ಹರಿಸದೆ ಉಣ್ಣುವವನು ಮನುಷ್ಯನಲ್ಲ,ಬೆವರಿನ ಜಳಕ ಮಾಡದವನು ಮನುಷ್ಯನೇ ಅಲ್ಲ ವೆಂದು ಹೇಳುವ ಗಜಲ್ ಕಾಯಕದ ಮಹತ್ವ ಸಾರುತ್ತದೆ. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡುತ್ತಿದ್ದಳು ತನ್ನದೇ ಲೋಕವನ್ನು ರೂಪಿಸಿ ಕೊಂಡಿದ್ದಳು   (ಗಜಲ್೩೦) ಈ ಗಜಲ್ ದಲ್ಲಿ ಮನೆಯ ಹೆಣ್ಣು ಮಗಳ ಬೆಳವಣಿಗೆಯ ಬಗ್ಗೆ ,ಅವಳ ನಗು ಮನೆಯ ನಂದಾ ದೀಪವಾಗಿತ್ತು,ಹೆತ್ತವರ ಮುದ್ದಿನ ತುಂಟಾಟದ ಚಿನಕುರುಳಿ ಯಾಗಿದ್ದಳು,ಎಂದು ಮಗಳ ಬೆಳವಣಿಗೆ  ಅವಳ ಕಾರ್ಯ ಚಟುವಟಿಕೆಗಳಲ್ಲಿ ತನ್ನನ್ನೆ ತೊಡಗಿಸಿಕೊಂಡಿದ್ದಳು ,ಮನದ ನೋವು ಮರೆಸುವ ಜೀವ ಮುಖಿಯಾಗಿದ್ದಳೆಂದು ಮಗಳ ನೆನಪನ್ನು ಮರುಕಳಿಸುವ ಗಜಲ್ ಇದು. ನೀನು ನಗುವೆಯಾದರೆ ದುಃಖ ನನ್ನೊಂದಿಗೆ ಇರಲಿ ಬಿಡು ನೀನು ಮರೆಯುವೆ ಯಾದರೆ ನೆನಪುಗಳು ನನಗೆ ಇರಲಿ ಬಿಡು  (ಗಜಲ್೫೧) ಈ ಗಜಲ್ ಓದಿದಾಗ ಈಶ್ವರ ಸಣಕಲ್ ಅವರ ಕವಿತೆ ನೆನಪಾಯಿತು,”ಜಗವೆಲ್ಲಾ ನಗುತಿರಲಿ ಜಗದ ಅಳು ನನಗಿರಲಿ” ಎಂದು ಹೇಳಿದ್ದು ನೆನಪಾಯಿತು,ಈ ಗಜಲ್ ದಲ್ಲಿ ಪ್ರೇಮಿ ತನ್ನ ಪ್ರಿಯತಮೆಗೆ ಹೇಳುತ್ತಾನೆ ನೀನು ನಗುವೆಯಾದರೆ ಜಗದ ದುಃಖ ನನ್ನೊಂದಿಗೆ ಇರಲಿ,ನೀನು ನನ್ನ ಮರೆಯುವುದಾದರೆ ಆ ಸವಿ ನೆನಪುಗಳು ನನ್ನೊಂದಿಗೆ ಇರಲಿ ,ನಿನ್ನ ಸುಖವೇ ನನ್ನ ಸುಖ ವೆಂದು ಹೇಳುತ್ತಾ ಮಕ್ತಾದಲ್ಲಿ ನಿನ್ನ ಪಡೆಯಬೇಕೆಂದು ನಾನು ಹಂಬಲಿಸುತ್ತಿಲ್ಲ ನೀನು ಎಲ್ಲಿಯಾದರೂ ಸುಖವಾಗಿರು ನಮ್ಮ ಪ್ರೀತಿಯ ಸವಿ ನೆನಪುಗಳು ನನಗೆ ಇರಲೆಂದು ಉದಾರ ಗುಣವನ್ನು ತೋರಿಸುತ್ತಾನೆ ಇದೇ ನಿಜವಾದ ಪ್ರೀತಿ. ಕಂಬನಿಯನ್ನು ಒರೆಸುವ ಬೆರಳುಗಳು ದೂರವಾಗಿವೆ ಇಂದು ಹೃದಯ ಬಡಿತ ಆಲಿಸುವ ಕಿವಿಗಳು ದೂರವಾಗಿವೆ ಇಂದು ಈ ಗಜಲ್ ಓದಿದಾಗ ಇಂದು ವಿಶ್ವದಲ್ಲಿ ಕೊರೋನಾ ಮಹಾ ಮಾರಿ ಬಂದು ಜನರ ಜೀವನ ಹೇಗೆ ಅಸ್ತವ್ಯಸ್ತ ವಾಗಿದೆಂದು ತಿಳಿಸುತ್ತದೆ,ಯಾರ ದುಃಖ ಕ್ಕೆ ಯಾರೂ ಅಳುವಹಾಗೆ ಯಿಲ್ಲ,ಯಾರನ್ನು ಯಾರು ಸಮಾಧಾನ ಪಡಿಸುವಂತಿಲ್ಲ,ಎಲ್ಲರಿಗೂ ಒಂದು ರೀತಿಯ ಭಯ ಆವರಿಸಿದೆ,ಮನುಷ್ಯ ಸ್ವಾಥಿ೯ ಯಾಗಿದ್ದಾನೆಂದು ಅನಿಸುತ್ತಿಗೆ ,ಹೆತ್ತ ಕರುಗಳ ಶವಕ್ಕೆ ಹೆಗಲು ಕೊಡಲು ಅಂಜುವ ಸ್ಥಿತಿ ಬಂದಿದೆ.ಕೊರೋನಾ ವೈರಾಣು ಜಗದಲ್ಲಿನ ಸಂಬಂಧ ಅಂತಃಕರಣ ನುಂಗಿಹಾಕಿದೆ,ಇದು ಎಂಥಹ ದುರಿತ ಕಾಲ ವೆಂದು ಗಜಲ್ ಕಾರರು ನೊಂದಿದ್ದಾರೆ. ಇಂಥಹ ಮನ ಮಿಡಿಯುವಂತಹ ಅನೇಕ ಗಜಲ್ ಗಳು ಓದುಗರಿಗೆ ಸಿಗುತ್ತದೆ .ಒಟ್ಟಿನಲ್ಲಿ ಹೇಳುವುದಾದರೆ ಮಲ್ಲಿನಾಥ ತಳವಾರ ಅವರು ಒಬ್ಬ ಪ್ರೌಢ ಗಜಲ್ ಕಾರರೆಂದು ಹೇಳಲು ಹೆಮ್ಮೆ ಯಾಗುತ್ತದೆ.ಇವರಿಂದ ಇನ್ನೂ ಒಳ್ಳೆಯ ಗಜಲ್ ಗಳು ರಚನೆಯಾಗಿ ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಕೃತಿಗಳನ್ನು ಅಪಿ೯ಸಲೆಂದು ಹಾರೈಸುತಾ ನನ್ನ ಬರಹಕ್ಕೆ ವಿರಾಮ ಕೊಡುವೆ. ****************** ಪ್ರಭಾವತಿ ಎಸ್ ದೇಸಾಯಿ

ಮಲ್ಲಿಗೆ ಸಿಂಚನ (ಗಜಲ್ ಹೂದೋಟ Read Post »

ಪುಸ್ತಕ ಸಂಗಾತಿ

ಆತ್ಮಕಥನ:ಬಾಬಾಸಾಹೇಬರ ಆಲೋಚನೆಗಳು.

ಬಾಬಾಸಾಹೇಬರ ಜೀವನ ಹೋರಾಟ ಕುರಿತು ಧನಂಜಯ ಕೀರ್ ಅವರು ಬರೆದ ಕೃತಿಯನ್ನು ನೋಡಿದ ಬಾಬಾಸಾಹೇಬರು “ಚೆನ್ನಾಗಿದೆ, ಆದರೆ ನನ್ನದು  ಸುದೀರ್ಘ ಮತ್ತು ಅಂತ್ಯ ಕಾಣದ ಜೀವನಗಾಥೆ,  ಅದು ಯಾರಿಗೂ ತಿಳಿಯದು ಬೇರಾರು ಬರೆಯುವಂತಹದ್ದಲ್ಲ” ಎನ್ನುತ್ತಾರೆ. ‘ ಆತ್ಮ ಚರಿತ್ರೆ ಬರೆಯಲು ಸಮಯ ಎಲ್ಲಿದೆ?’ ಎಂಬುದು ಅಂಬೇಡ್ಕರ್ ಅವರ ಬಗೆಹರಿಯದ ಪ್ರಶ್ನೆಯಾಗಿತ್ತು. ‘ನನ್ನ ಜನರಿಗೊಂದು  ಮಾತೃಭೂಮಿ ಇಲ್ಲ’ ಎಂದ ಬಾಬಾಸಾಹೇಬರು,ಮಾತು ಸೋತ ಎಲ್ಲರಿಗೂ ಮಾತೃಭೂಮಿಯ ಹಕ್ಕು ಕೊಟ್ಟವರು, ಅವರು ಬರೆದದ್ದೆಲ್ಲ ಆತ್ಮಚರಿತ್ರೆಯೇ ಆದೀತು.

ಆತ್ಮಕಥನ:ಬಾಬಾಸಾಹೇಬರ ಆಲೋಚನೆಗಳು. Read Post »

ಪುಸ್ತಕ ಸಂಗಾತಿ

ಆಶಾವಾದ ಹೊತ್ತು ಹರಿವ ‘ಜೀವಧಾರೆ’!!

ನೊಂದು ಅಪಮಾನಿತರಾಗಿ ಕುಗ್ಗಿದ ಹೆಣ್ಣುಮಕ್ಕಳು ಈ ಕಥಾ ಸಂಕಲನವನ್ನು ಆಪ್ತಸಂಗಾತಿಯ ಸಂತೈಕೆಯ ನುಡಿಗಳಂತೆ ಓದಿ ಸಮಾಧಾನ ಕಾಣಬಹುದು. ಡಾ. ಜಿ ಸುಧಾ ಅವರು ಸ್ವಲ್ಪವೇ ಪರಿಶ್ರಮ ಪಟ್ಟರೆ, ಅವರಿಂದ ಮತ್ತಷ್ಟು ಅನನ್ಯ ಕೃತಿಗಳನ್ನು ನಿರೀಕ್ಷಿಸಬಹುದು

ಆಶಾವಾದ ಹೊತ್ತು ಹರಿವ ‘ಜೀವಧಾರೆ’!! Read Post »

ಪುಸ್ತಕ ಸಂಗಾತಿ

ನುಡಿ- ಕಾರಣ.

“ಅನುವಾದದ ಹಿಂದೆ …….”. ಯಲ್ಲಿ ಬರುವ, ಅವರದೇ ಮಾತುಗಳಲ್ಲಿ, ” ಅವರ ಕವಿತೆಗಳಲ್ಲಿ ನವಿರಾದ ಒಲವು ಇದೆ ವಿರಹವಿದೆ , ಯುದ್ಧದ ಉನ್ಮಾದವಿದೆ, ಬಡವರ,ಬವಣೆಯಿದೆ.ದೇಶಾಭಿಮಾನ ವಿದೆ.ಕವಿತೆ ನಮ್ಮನ್ನು ಹಿಡಿದಿಡುತ್ತದೆ.ಕಾವ್ಯ ದೋಣಿಯ ಪಯಣಿಗರು”. ಎನ್ನುವ ಸಾಲುಗಳು, ಕವಿತೆಗಳನ್ನು ಓದುವ , ಓದುಗರ ಸಾಲುಗಳೂ ಆಗಿಬಿಡುತ್ತವೆ.

ನುಡಿ- ಕಾರಣ. Read Post »

ಪುಸ್ತಕ ಸಂಗಾತಿ

ʼಕನಸಿನದನಿʼ

ಪುಸ್ತತಕಪರಿಚಯ ʼಕನಸಿನದನಿʼ             ಸಾಹಿತ್ಯ ಲೋಕದ ಪಯಣ ಹಲವು ಅಚ್ಚರಿಗಳಿಗೆ ಕಾರಣ. ಹಾಗೆ ನೋಡಿದರೆ ಜೀವನವೇ ಒಂದು ಸುದೀರ್ಘ ಪ್ರಯಾಣ.ಈ ಪ್ರಯಾಣದಲ್ಲಿ ಪರಿಚಿತರು ಅಪರಿಚಿತರಾಗುವುದು ಅಪರಿಚಿತರು ಪರಿಚಿತರಾಗುವುದು ಒಂದು ಸಹಜ ಪ್ರಕ್ರಿಯೆ ಎನಿಸುತ್ತದೆ. ಆದರೆ ಇದು ಎಣಿಸಿದಷ್ಟು ಸುಲಭವೂ ಸಹಜವೂ ಅಲ್ಲ. ಇಲ್ಲಿ ಅನೂಹ್ಯವಾದುದು ಘಟಿಸುತ್ತದೆ ಊಹಿಸಿಕೊಂಡದ್ದು ನಡೆಯುವುದೇ ಇಲ್ಲ. ಪರಸ್ಪರ ಭೇಟಿಯಾಗದ ಎಷ್ಟೋ ಚೇತನಗಳು ಸ್ನೇಹ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಒಂದುವಿಶೇಷ ಪ್ರಕ್ರಿಯೆ. ಒಂದು ಸಹೃದಯ ಪರಿಚಯ ಹೇಗೆ ವಿಶ್ವಾಸವನ್ನು ಉಳಿಸಿಕೊಂಡು ಎಷ್ಟೇ ಅಂತರದಲ್ಲಿದ್ದರೂ ಸ್ನೇಹವನ್ನು ಕಾಪಿಟ್ಟುಕೊಂಡಿರುತ್ತದೆ ಎಂಬುದನ್ನು ನನಗೆ ಇಲ್ಲಿ ವಿವರಿಸಬೇಕಿತ್ತು. ಅದಕ್ಕಾಗಿ ಹೀಗೆ ಪಯಣ, ಪರಿಚಯ, ಪ್ರಕ್ರಿಯೆ ಎಂದೆಲ್ಲಾ ಕೊಂಕಣ ಸುತ್ತಿಮೈಲಾರಕ್ಕೆ ಬರಬೇಕಾಯ್ತು.             ಡಾ|| ಅಜಿತ್ ಹರೀಶಿ ಎಂಬ ಸಹೃದಯ ವ್ಯಕ್ತಿತ್ವ ನನಗೆ ಪರಿಚಯವಾದುದು ಆನ್ಲೈನ್ ಸಾಹಿತ್ಯ ವೇದಿಕೆ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ. ಪ್ರಾಮಾಣಿಕತೆಯ ಸೆಲೆ ಇರುವ ಬರವಣಿಗೆಗಳು ಮೂಲಕ ಅಜಿತರು ನನಗೆ ಪರಿಚಯವಾದರು. ಒಮ್ಮೆ ಶಿರಸಿಯಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾಗ ನೇರ ಕಾಣುವಂತಾಯಿತು.ಸಾಮಾನ್ಯ ಹಾಗೂ ಸಾಹಿತ್ಯದ ಪರಿಭಾಷೆಯಲ್ಲಿ ಹೇಳುವಂತೆ ಅಜಿತರದು ಸ್ಫುರದ್ರೂಪಿ ನಿಲವು. ಅಷ್ಟೇ ಗಾಂಭೀರ್ಯದ ನಡವಳಿಕೆ. ವಿನಯವಂತಿಕೆಬೆರೆತ ಜಾಣ್ಮೆ. ಸೌಜನ್ಯ ಪೂರ್ಣ ಸ್ನೇಹ. ಅಂದು ಮುಖಾಮುಖಿಯಾಗಿ ಭೇಟಿಯಾದ ಅನಂತರ ಫೋನಿನಲ್ಲಿ ಒಂದೆರಡು ಬಾರಿ ಮಾತನಾಡಿರಬಹುದು. ನಾಲ್ಕಾರು ಸಂದೇಶ ವಿನಿಮಯವಾಗಿರಬಹುದು. ಇಷ್ಟರ ಹೊರತು ಪರಿಸ್ಪರ ಪರಿಚಿತರಾದ ಅಪರಿಚಿತರು ನಾವಿಬ್ಬರು.             ಅಜಿತರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವುದು ನನಗೆ ಅವರ ಮೇಲಿನ ಮಮಕಾರವನ್ನು ಹೆಚ್ಚು ಮಾಡಲಿಕ್ಕೆ ಒಂದು ಕಾರಣ ಇರಬಹುದು. ಏಕೆಂದರೆ ನನ್ನ ತಂದೆಯವರೂ ಸಹ ವೈದ್ಯರೇ ಆಗಿದ್ದುದು ಅಜಿತರಲ್ಲಿ ಒಂದು ವಿಶ್ವಾಸ ಮೂಡಲು ಕಾರಣ ಇರಬಹುದು. ಉಳಿದಂತೆ ನಗರದ ಆಡಂಬರಕ್ಕೆ ಮೋಹಗೊಂಡು, ವ್ಯಾಪಾರೀ ತಂತ್ರವಾಗಿ ರೂಪಿಸಿಕೊಳ್ಳಬಹುದಾಗಿದ್ದ ತಮ್ಮ ವೃತ್ತಿಯನ್ನು ತನ್ನೂರಿನ ಜನರ ಸೇವೆಗೆ ಮೀಸಲಿರಿಸಿಕೊಂಡು ಸಹಜವಾಗಿ ಸರಳವಾಗಿ ಜೀವನ್ಮುಖಿಯಾಗಿ ಬದುಕುವ ವಿವೇಕವುಳ್ಳ ತರುಣರಾಗಿ ಕಂಡುಬರುವ ಡಾ|| ಅಜಿತರ ಬಗೆಗೆ ನನಗೆಒಂದು ಅಭಿಮಾನದ ಭಾವ ಮೂಡುತ್ತದೆ. ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಾಗಿ ಬರವಣಿಗೆ, ಓದಿನ ಹವ್ಯಾಸವನ್ನು ಹೊಂದಿರುವ ಇವರ ಸಾಹಿತ್ಯದ ಮೇಲಿನ ವ್ಯಾಮೋಹ ಸ್ವತಃ ಸಾಹಿತ್ಯದ ವಿದ್ಯಾರ್ಥಿಯಾಗಿರುವ ನನ್ನನ್ನು ಚಕಿತಗೊಳಿಸುತ್ತದೆ. ಇಂಥಾಸಾಹಿತ್ಯಪ್ರೇಮಿ, ಸಹೃದಯಿ ಸಾಹಿತಿ ಅವರ ಬರಹಗಳನ್ನು ನನಗೆ ಮರೆಯದೆ ಕಳುಹಿಸುವುದು ನನಗೆ ವಿಶೇಷ ಸಂತಸವನ್ನು ತಂದುಕೊಡುತ್ತದೆ. ಕಾವ್ಯ ರಚನೆಯಲ್ಲಿ ಆಸಕ್ತಿ ಇದ್ದ ನನ್ನನ್ನು ಕಥಾ ರಚನೆಯತ್ತಲೂ ಚಿತ್ತ ಹರಿಸುವಂತೆ ಪ್ರೋತ್ಸಾಹಿಸಿದ ಅಜಿತರು ಮೂಲತಃ ಸೊಗಸಾಗಿ, ಸಹಜ ಸರಳವಾಗಿ ಕಥೆ ಬರಯುತ್ತಾರೆ. ಕನ್ನಡ ನಾಡಿನಾದ್ಯಂತ ಬಹುತೇಕ ಎಲ್ಲ ಪ್ರಮುಖ ಪ್ರಸಿದ್ಧ ಆನ್ಲೈನ್ ಪತ್ರಿಕೆಗಳಲ್ಲಿ ಹಾಗೂ ಮುದ್ರಣ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟವಾಗಿದ್ದು, ತಮ್ಮದೇ ಆದ ಓದುಗ ವರ್ಗವನ್ನು ಅಜಿತರು ಹೊಂದಿರುತ್ತಾರೆ. ಹಾಗೆಯೇ ತಮಗೆ ದೊರೆತ ಎಲ್ಲರ ಪುಸ್ತಕಗಳನ್ನು ಓದಿ ಪ್ರತಿಕ್ರಿಯೆ ನೀಡುವ ಸಂಯಮ ಹಾಗೂ ಆರ್ದ್ರತೆ ಇರುವ ಇವರು ಈ ಕಾಲಕ್ಕೆ ಅಪರೂಪ ಎನಿಸುವಷ್ಟು ಸ್ನೇಹಜೀವಿ. ಅಜಿತರ ಬಗ್ಗೆ ಇಷ್ಟೆಲ್ಲಾ ಬರೆಯಲು ಕಾರಣ ಮೊನ್ನೆ ಅಚಾನಕ್ ಬಂದು ತಲುಪಿದ ಅವರ ಹೊಸ ಕವನ ಸಂಕಲನ ʻಕನಸಿನ ದನಿʼ.             ಒಟ್ಟು ೪೬ ಕವನಗಳುಳ್ಳ ʻಕನಸಿನ ದನಿʼಯ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆಯುತ್ತವೆ. ʻʻಕನಸು’ ಎಂದರೆ ಅದೊಂದು ಆಶಾಭಾವನೆಯೂ ಹೌದು. ಅದಕ್ಕೆ ಒಂದು ದನಿ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲʼʼ. ಎನ್ನುವ ಕವಿ ಕನಸಿನ ಮೌನದ ಸದ್ದನ್ನು ಹಿಡಿದು ಸಾಗಿಬರುವ ಹಾದಿಯಲ್ಲಿ ದೊರೆತ ಸಾಲುಗಳನ್ನೇ ಕಾವ್ಯವಾಗಿಸಿ ಈ ಕೃತಿಯಲ್ಲಿ ನೀಡಿದ್ದಾರೆ ಎನಿಸುತ್ತದೆ. ʻಹಳೆಯ ಟ್ರಂಕಿಗೂ ಮೆಟ್ರೋ ರೈಲಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ..!ʼ ಎನ್ನುವ ಸ್ವಗತವೇ ʼಕನಸಿನ ದನಿʼ ಕವನದ ಭಾವ. ಕಳೆದ ಭೂತಕಾಲ, ವಾಸ್ತವದ ವರ್ತಮಾನ ಹಾಗೂ ಕನಸಿನ ಭವಿಷ್ಯವನ್ನು ಒಂದೇ ಗುಕ್ಕಿನಲ್ಲಿ ಹಿಡಿದಿಡುವ ಕವನವಿದು. ೭೦ ರಿಂದ  ೯೦ರ ದಶಕವನ್ನು ಸಾವಕಾಶವಾಗಿ ಕಂಡ ಪೀಳಿಗೆಯವರು ಅತ್ಯಾಧುನಿಕ ಜಗತ್ತಿನೊಡನೆಯೂ ಕಲೆತು ಬದುಕುತ್ತಿದ್ದರೂ ಯಾವುದೋ ನಿಧಿಯನ್ನು ಕಳೆದು ಕೊಂಡಂತೆ, ಭವಿಷ್ಯದ ಅನಾಹುತಗಳ್ನು ನೆನೆದು ಬೆಚ್ಚಿಬೀಳುವ ಆತಂಕದ ತಲ್ಲಣದ ಚಿತ್ರಣವಿದೆ. ಜೊತೆಗೆ ಈ ಸಂಕಲನದಲ್ಲಿನ ಹಲವಾರು ಕವನಗಳು ಕವಿಯ ಹಳೆಯ ಸೊಗಸಿನ ಕನವರಿಕೆ ಹಾಗೂ ಭವ್ಯಭವಿಷ್ಯದ ಪರಿಕಲ್ಪನೆಗಳಂತೆ ಕಾಣುತ್ತದೆ. ಆಶಾವಾದಿ ಮನಸ್ಸಿನ ಅಜಿತರ ಸಾಕ್ಷಿ ಪ್ರಜ್ಞೆಯಂತೆ. ʼಹೇಳಿಕೆ ʼಕವನ ವಿಮರ್ಶೆಯನ್ನು ಒಪ್ಪದ ಜಿಗುಟು ಮನಃಸ್ಥಿತಿಯನ್ನು ಗೇಲಿ ಮಾಡುವಂತಿದೆ.                                     ʼʼಚೆನ್ನಾಗಿಲ್ಲ                                     ಅಂತಹೇಳುವಂತಿಲ್ಲ                                     ಕಳೆದುಹೋಯಿತು ಆ ಕಾಲ..ʼʼ             ಸಂಬಂಧ ಹಳಸುವುದು, ಹದಗೆಡುವುದು ದೃಷ್ಟಿಕೋನದ ಪ್ರತಿಫಲ. ಸಾವರಿಸಿಕೊಂಡು, ಸುಧಾರಿಸಿಕೊಂಡು ಹೋಗುವುದಾದರೆ ಜೀವನ ಸರಿ. ನಮ್ಮ ತಪ್ಪಿಲ್ಲದಿದ್ದರೂ ಸಾರಿ ಹೇಳಿ, ಎಲ್ಲಾ ಚೆಂದ ಎಲ್ಲಾ ಚೆಂದ ಎಂದರೆ ನೆಮ್ಮದಿ ಎನ್ನುವ ಜ್ಞಾನಮೀಮಾಂಸೆಯನ್ನು ಈ ಕಾವ್ಯ ಕಟ್ಟಿಕೊಡುತ್ತದೆ. ಸಮಾಜಕ್ಕೆ, ಸುತ್ತಲಿನ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾ ಹೋಗುವಾಗ ಒಮ್ಮೆ ಸರಿಕಂಡದ್ದನ್ನು ಮತ್ತೊಮ್ಮೆ ನಿರಾಕರಿಸುತ್ತಾ, ನಿರಾಕರಿಸಿದ್ದನ್ನು ಸ್ವೀಕರಿಸುತ್ತಾ ಕವಿ ಪರಸ್ಪರ ವೈರುಧ್ಯ ಭಾವ ಕವಿಗೆ ಸಹಜ ಎನಿಸುತ್ತಾನೆ. ʼಸವಾಲುʼ ಕವನದಲ್ಲಿ, ʼʼವಂಶವಾಹಿಯಾಗಿ ಹರಿದು ಬಂದ ಜೀವತಂತು ವಿನಕಾರಣಕ್ಕೆಲವು ನಡವಳಿಕೆ ಆತ್ಮವಿಮರ್ಶೆ ಮದ್ದು ಸ್ವಯಂಕೃತ ಅಪರಾಧಕೆ ಪಶ್ಚಾತ್ತಾಪಕ್ಕಿಂತ ಮಿಗಿಲಾದ ಶಿಕ್ಷೆಯಿಲ್ಲʼʼ ಎನ್ನುವುದು ಜೀವತಂತುವಿನ ಅಧ್ಯಯನಾ ವರದಿ ಮಾತ್ರವಲ್ಲ. ಸಾಬೀತಾದ ಸತ್ಯ! ಅಜಿತರ ಕವನಗಳು ಕೇವಲ ಕಾವ್ಯ ಭಾಷೆಯಲ್ಲಿ ಮಾತನಾಡುವ ಕ್ಲೀಷೆಗೆ ಸೇರುವುದಿಲ್ಲ. ಅವರ ವೃತ್ತಿ ಬದುಕಿನ ಪರಿಭಾಷೆಗಳು ಹಾಗೂ ಪಾರಿಭಾಷಿಕ ಪದಗಳು ಕವಿತೆಗೆ ವಿಶೇಷ ಜೀವ ತುಂಬುತ್ತವೆ. ಉದಾಹರಣೆಗೆ, ʼಭುಕ್ತಿʼ ಕವನದ ಈ ಸಾಲುಗಳು, ʼʼಎರಡು ಗೆರೆ ಬಿದ್ದಿದೆ ಡೆಲಿವರಿ ಸಂಕೇತ ಪ್ರೆಗ್ನೆನ್ಸಿ ಕಿಟ್ನಲ್ಲಲ್ಲ! ವಾಟ್ಸಾಪಿನ ವರಾತ ನೋಡಿದರೆ ನೀಲಿಗೆರೆ, ಆರೋಪ ಉತ್ತರಿಸದಿರೆ ಸಿಕ್ಕು ಸೆಟ್ಟಿಂಗ್ ಬದಲಿಸಿದರೆʼʼ ಹಾಗೂ ʼಸಾವಂಚಿನ ಕೂಗುʼ ಕವನದ, ʼʼಗಂಟಲೊಳಗೆ ತೂರಿಸಿದ ಆಳ ತೂಗಾಕಿದ ಡ್ರಿಪ್ಪು, ಕೈಗೆ ಚುಚ್ಚಿದ ಕ್ಯಾನುಲ ಆಷ್ಸಿಮೀಟರು, ಪಲ್ಸ– ಬಿಪಿಮಾನಿಟರು ಕಫದಸಕ್ಷನ್ನು, ಚೆಕ್ಕಾಗುವರಕ್ತ, ಶುಗರು ನರ್ಸು–ಇಂಟೆನ್ಸಿವಿಷ್ಟು, ಮೂತ್ರಕೆ ಕಾಥೆಟರು..ʼʼ ರೋಗಿಯೊಬ್ಬರ ವೈದ್ಯಕೀಯ ವರದಿಯನ್ನು ವೈದ್ಯರು ನೀಡುತ್ತಿರುವಂತೆ ಕಂಡರೂ, ಇದು ಕರಾಳ ಸತ್ಯದ ಅನಾವರಣ ಮಾಡುವ ಕವಿತೆಯಾಗಿದೆ. ಹೊರಗಿನ ಸೋಗು ಒಳಿನ ಕೂಗನ್ನು ಹೇಗೆ ಕಡೆಗಣಿಸಿದೆ ಎಂದು ಕವಿತೆ ವಿಶದಪಡಿಸುತ್ತದೆ. ಮಾಫಲೇಶು ಕದಾಚನ ಕವಿತೆ ನೋಡಿ, ʼʼನೋಡಿ ಪುಷ್ಪಗಳ ನೀಡುತ್ತವೆ ಉಚಿತವಾಗಿ ಪರಿಮಳ ಮಕರಂದಗಳ ಸುವಾಸನೆ ಬೀರಿ ಮುಗಿಸಿ ಕಾರ್ಯವ ತೊಟ್ಟು ಕಳಚಿ ಬಿದ್ದು ಮಾಯವಾಗಿ ಬಿಡುತ್ತವೆ ನಾವು ಹೊಲಸು ನಾರಿಯೇತೀರುತ್ತೇವೆ ತೀರಿದ ಮೇಲೂ ಹೊಲಸು ನಾರುತ್ತೇವೆ!ʼʼ ಇದನ್ನು ಕೇವಲ ನಾಕಾರು ಸಾಲಿನ ಕವಿತೆ ಎಂದು ಮೂಗು ಮುರಿಯಲಾದೀತೆ?! ಜೀವನ ಸಾರ್ಥಕತೆಯ ತತ್ತ್ವ ದರ್ಶನವನ್ನೇ ಇದು ಕಾಣಿಸುತ್ತದೆ.             ವಿದಳನ, ಊನ,  ವಜನು, ಐ ರಿಪೀಟ್, ಇಲಿ, ಬೋನು ಮತ್ತು ಸಾಬೂನು, ಶರಾವತಿಯ ಅಳಲು ಮೊದಲಾದವು ಜೀವನದ ವಿವಿಧ ಮಗ್ಗಲುಗಳ ವಿಮರ್ಶೆಯಂತಿವೆ. ಸಾಮಾನ್ಯದಂತೆ ಕಾಣುವ ಈ ಕೆಲವು ಕವಿತೆಗಳು ಗಹನವಾದ ಆಧ್ಯಾತ್ಮದ ಚಿಂತನೆಗೆ ತೊಡಗುವಂತೆ ಮಾಡತ್ತವೆ. ಮೇಲು ಮೇಲಿನ ಓದಿಗೆ ದಕ್ಕುವಂತೆ ಆಳ ವಿಶ್ಲೇಷಣೆಗೂ         ಡಾ|| ಅಜಿತರ ಕಾವ್ಯಗಳನ್ನು ಸಂಯೋಜಿಸಬಹುದು.             ಇಡೀ ಸಂಕಲನದ ಕವಿತೆಯ ವಸ್ತುಗಳಿಗಾಗಿ ಕವಿ ತಿಣುಕಾಡಿಲ್ಲ. ಸುತ್ತಲಿನ ಘಟನೆಗಳನ್ನೇ ತಮ್ಮ ಎಕ್ಸರೇ ಕಂಗಳಿಂದ ಪರೀಕ್ಷಿಸಿ ಕವಿತೆಗೆ ವಸ್ತುವಾಗಿಸಿ ಕೊಂಡಿದ್ದಾರೆ. ಇದು ಕಾವ್ಯ ರಚನೆಗೆ ಪೂರಕವಾಗಿದ್ದರೂ ಮತ್ತಷ್ಟು ವಸ್ತು ವೈವಿಧ್ಯತೆಯನ್ನು ಕವಿ ಸಮರ್ಥವಾಗಿ ಕೊಡಬಲ್ಲರೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ನಿಟ್ಟಿನಲ್ಲಿಡಾ|| ಅಜಿತರು ಹೆಚ್ಚಿನ ಗಮನ ಹರಿಸಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾ, ನನ್ನ ಒಂದು ಓದಿನ ಅಳವಿಗೆ ಸಿಕ್ಕ ಭಾವಗಳಿಗೆ, ಮಾತುಗಳಿಗೆ ಹೀಗೆ ಅಕ್ಷರ ರೂಪ ಕೊಟ್ಟಿರುತ್ತೇನೆ.             ತಮ್ಮ ಕತೆಗಳಲ್ಲಿ, ದೈನಂದಿನ ಘಟನಾವಳಿಗಳನ್ನು ಚಿತ್ತಿಸುತ್ತಲೇ ಅಚ್ಚರಿಯ ತಿರುವುಗಳನ್ನು ನೀಡುವ ಮೂಲಕ ಓದುಗರ ಗಮನವನ್ನು ಸೆಳೆಯುವ ಅಜಿತರು ಕವನ ರಚನೆಗೆ ಏಕಾಗ್ರಚಿತ್ತರಾದರೆ. ಅವರಿಂದ ಇನ್ನೂ ಮೌಲಿಖ ಕವನಗಳನ್ನು ನಿರೀಕ್ಷಿಸಬಹುದು. ಎಂದಿನಂತೆ,  ನನ್ನೊಂದಿಗಿರುವ ಅಜಿತರ ನಿರ್ಮಲ ಸ್ನೇಹಕ್ಕೆ ಹಾಗೂ ಬರಹದ ಮೇಲೆ ಅವರಿಗಿರುವ ಮೋಹಕ್ಕೆ ಖುಷಿಪಡುತ್ತಾ, ಒಂದೊಳ್ಳೆ ಕವನ ಸಂಕಲನ ಓದಿಸಿದ್ದಕ್ಕೆ ಧನ್ಯವಾದಗಳನ್ನು ಹೀಗೆ ಹೇಳಬಯಸುವೆ. . . . ************************** ವಸುಂಧರಾಕದಲೂರು.

ʼಕನಸಿನದನಿʼ Read Post »

ಪುಸ್ತಕ ಸಂಗಾತಿ

ಭಾವ ಜೀವಿ ಕಂಡ ಬಾಲ್ಕನಿಯ ನೋಟ- ಬಾಲ್ಕನಿ ಕಂಡ ಕವಿತೆಗಳು

ಪ್ರತಿಯಿರುಳು ಬೆಳದಿಂಗಳಾತ” ಈ ನುಡಿಯಲ್ಲಿ ತನ್ನೊಲವ ಪಡೆದ ಅವನನ್ನು ತಂಪು ಬೆಳದಿಂಗಳಿಗೆ ಹೋಲಿಸಿ ತನ್ನೆದೆಯ ಶುಭ್ರ ಮುಗಿಲನ್ನು ಆತ ಆವರಿಸಿಕೊಂಡ ಬಗೆಯನ್ನು ರಮ್ಯವಾಗಿಸಿದ್ದಾರೆ ವಿಭಾ. ಇಂತಹ ಮೋಹಕ ಕವಿತೆಗಳ ಜೊತೆಗೆ ಜೀವನದ ನೈಜ ವಾಸ್ತವತೆಯನ್ನು ಕಟ್ಟಿಕೊಡುವ ಕೆಲವು ಕವಿತೆಗಳು ಈ ಸಂಕಲನದಲ್ಲಿ ಕಾಣಸಿಗುತ್ತವೆ.

ಭಾವ ಜೀವಿ ಕಂಡ ಬಾಲ್ಕನಿಯ ನೋಟ- ಬಾಲ್ಕನಿ ಕಂಡ ಕವಿತೆಗಳು Read Post »

ಪುಸ್ತಕ ಸಂಗಾತಿ

ತರಹೀ ಎಂಬ ಹೆಜ್ಜೆಯ ನುಡಿಯ ಗೆಜ್ಜೆಯ ದನಿ

ಪುಸ್ತಕ ಸಂಗಾತಿ ತರಹೀಎಂಬಹೆಜ್ಜೆಯನುಡಿಯಗೆಜ್ಜೆಯದನಿ ಹಿರಿಯ ಗಜಲ್ಕಾರರಾದ ‘ಶ್ರೀಮತಿ. ಪ್ರಭಾವತಿ ಎಸ್. ದೇಸಾಯಿ’ ರವರು ಕನ್ನಡ ಗಜಲ್ ಸಾಹಿತ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡು, ಹಲವು ಕೃತಿಗಳನ್ನು ರಚಿಸಿ, ಕಿರಿಯರಿಗೆ ಮಾರ್ಗದರ್ಶನ ನೀಡುತ್ತ ಏನಗಿಂತ ಕಿರಿಯರಿಲ್ಲ ಎಂಬ ಶರಣರ ನುಡಿಯಂತೆ ನಡೆಯುತ್ತ,  ಇಳಿವಯಸ್ಸಿನಲ್ಲೂ ಹರೆಯದ ಹುಮ್ಮಸ್ಸು ತೋರುತ್ತ, ಪಕ್ವ ಮನಸ್ಸಿಗೆ ವಯಸ್ಸಿನ ಭೀತಿಯಿಲ್ಲ, ಆಸಕ್ತಿಗೆ  ಎಲ್ಲೆಗಳಿಲ್ಲ ಎಂಬುದನ್ನು “ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ಎಂಬ ‘ತರಹೀ ಗಜಲ್’ ಗಳ ಸಂಕಲನವನ್ನು ಹೊರತರುವುದರ ಮುಖಾಂತರ  ಸಾಬಿತು ಪಡಿಸಿದ್ದಾರೆ. “ಮೌನದ ಚೂರಿಯಿಂದಿರಿದು ಮಾಡಿದ ಗಾಯ ಎಂದು ಮಾಯದು ಹೃದಯಕ್ಕೆ ಚುಚ್ಚಿ ಆದ ನೋವು ಅಡಗಿಸುತ್ತ ನಡೆದು ಹೋದೆ” ಪ್ರಭಾವತಿ ದೇಸಾಯಿ ರವರು ಎಲ್ಲಿಯೂ ಹೆಜ್ಜೆ ತಪ್ಪದಂತೆ, ತುಂಬಾ ಜಾಗರೂಕತೆಯಿಂದ, ಮೂಲ ಗಜಲ್ಕಾರರ ಆಶಯಕ್ಕೆ ಚ್ಯುತಿ ಬಾರದಂತೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾರ್ಥಕತೆಯ ಕಡೆಗೆ ನಡೆದಿದ್ದಾರೆ. ಈಗಾಗಲೆ ಹಲವು ವರ್ಷಗಳ ಗಜಲ್ ಕೃಷಿಯ ಅನುಭವವುಳ್ಳ ಪ್ರಭಾವತಿ ರವರು ತರಹೀಗೆ ಆಯ್ದುಕೊಂಡ ಮಿಸ್ರಗಳ ಮಾದರಿಯಲ್ಲಿಯೇ ಸ್ವತಂತ್ರ ಗಜಲ್ಗಳನ್ನು ರಚಿಸಿ ಮತ್ತೊಂದು ಕೃತಿಯನ್ನು ತರಬಹುದಿತ್ತು. ಏಕೆಂದರೆ ಹತ್ತು ಹಲವು ಶೇರ್ಗಳನ್ನು ರಚಿಸುವ ಸಾಮರ್ಥ್ಯವಿರುವ ದೇಸಾಯಿರವರಿಗೆ  ಒಂದು ಮಿಸ್ರವನ್ನು ಬರೆಯುವುದು ಕಷ್ಟವೇನಲ್ಲ. ಆದರೆ ಹಾಗೆ ಮಾಡದೆ ಪ್ರಾಮಾಣಿಕತೆಯಿಂದ ತರಹೀಯನ್ನು ರಚಿಸಿರುವುದು ಅವರ ಮೇಲಿನ ಗೌರವ ಹೆಚ್ಚುವಂತೆ ಮಾಡಿದೆ. ಸಂಕಲನದ ಎಲ್ಲಾ ತರಹೀ ಗಜಲ್ಗಳು ಸಪ್ತ ಶೇರ್ಗಳನ್ನು ಹೊಂದಿದ್ದು, ಅವು ‘ದಾವ – ದಲೀಲ್’ ಕ್ರಮದಲ್ಲಿ, ಪ್ರಶ್ನೆಗೆ ಉತ್ತರವಾಗಿ, ನಕಾರಾತ್ಮಕ ಮತ್ತು ಸಕಾರಾತ್ಮಕವಾಗಿ, ಪರ-ವಿರುದ್ಧದ ರಚನೆಗೆ ಒಳಪಟ್ಟಿರುವುದರಿಂದ ತರಹೀಗಳಿಗೆ ಅಪ್ರತಿಮ ಶೋಭೆ ವರಿಸಿದೆ. ಇಂತಹ ಗಝಲ್ಗಳನ್ನು ಓದುವುದೇ ಒಂದು ಖುಷಿ. ಸಾಮಾನ್ಯವಾಗಿ ತರಹೀ ಮತ್ಲಾಗಳು ಹೆಚ್ಚು ಸಶಕ್ತತೆಯಿಂದ ಕೂಡಿರುತ್ತವೆ. ಆದರೆ ಅವುಗಳಿಗೆ ಅಷ್ಟೇ ಸಶಕ್ತವಾದ ಮಕ್ತಾಗಳನ್ನು ಹೊಂದಿಸುವುದು ಕಷ್ಟವೇ ಸರಿಯಾದರೂ ಪ್ರಭಾವತಿ ದೇಸಾಯಿರವರು ‘ಪ್ರಭೆ’ ಎಂಬ ತಕಲ್ಲೂಸ್ ನಾಮವನ್ನು ಇಲ್ಲಿನ ಗಜಲ್ಗಳಲ್ಲಿ ಸಮರ್ಪಕವಾಗಿ ಬಳಸಿ, ಲೌಕಿಕತೆಯಿಂದ ಪಾರಮಾರ್ಥಿಕತೆಯೆಡೆಗಿನ, ಮೂರ್ತತೆಯಿಂದ ಅಮೂರ್ತದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗಿನ ನಡಿಗೆ, ಆಧ್ಯಾತ್ಮಿಕ ಒಲವಿನ ಹೊಳಹುಗಳನ್ನು ಕಾಣುವಂತೆ ಮಾಡುತ್ತದೆ. ತರಹೀ ಎಂಬುದು ಭಾರತದ ನೆಲೆಯಲ್ಲಿ ಬೆಳಕು ಕಂಡ ಗಜಲ್ ಕಾವ್ಯದ ಒಂದು ಪ್ರಮುಖ ಪ್ರಕಾರವಾಗಿ ಗುರುತಿಸಿಕೊಂಡು,  ಗಜಲ್ ಗೋಷ್ಠಿ(ಮುಷಾಯಿರ)ಗಳ ಪರಂಪರೆಯಿಂದ ಬೆಳೆದು ಬಂದಿದೆ. ಮುಷಾಯಿರಗಳನ್ನು ‘ತರಹೀ ಮುಷಾಯಿರ’ (ತರಹಿ ಸಹಿತ)  ಮತ್ತು ಗೈರ್ ತರಹೀ ಮುಷಾಯಿರ’ (ತರಹೀ ರಹಿತ) ಎಂದು ಮುಖ್ಯವಾಗಿ ಎರಡು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯವಾಗಿ ಮುಷಾಯಿರಗಳು ಇಳಿ ಸಂಜೆಯ ಸಮಯದಲ್ಲಿ ಏರ್ಪಡಿಸಲಾಗುತ್ತಿತ್ತು, ಅಲ್ಲಿ ‘ಸಾಹಿಬ್-ಎ-ಮುಷಾಯಿರ’ ರ ಉಪಸ್ಥಿತಿಯಲ್ಲಿ ಗಜಲ್ ಕವಿಗಳು ಎದುರು ಬದುರಾಗಿ ಇಲ್ಲವೇ ಒಂದು ವೃತ್ತಾಕಾರದಲ್ಲಿ   ಪೆಹೇಲೂನಲ್ಲಿ  ಕುಳಿತುಕೊಳ್ಳುವ ಪದ್ಧತಿ ಇದ್ದು, ಶಮಾವನ್ನು ಬೆಳಗುವುದರ ಮುಖೇನ ಈ ತೆರನಾದ ಗಜಲ್ ಗೋಷ್ಠಿಗಳನ್ನು ಆರಂಭಿಸಲಾಗುತ್ತಿತ್ತು ಎಂಬುದು ಗಜಲ್ನ ಇತಿಹಾಸದಿಂದ ತಿಳಿದುಬರುತ್ತದೆ. ಆವೊಂದು ಗೋಷ್ಠಿಯ ಅಧ್ಯಕ್ಷನಾದವನು ಪ್ರಸಿದ್ಧ ಗಜಲ್ಕಾರರೊಬ್ಬರ ಇಲ್ಲವೇ ಸ್ವರಚಿತ ಗಜಲ್ನ ಒಂದು ಮಿಸ್ರಾವನ್ನು ಮುಷಾಯಿರದಲ್ಲಿ  ಭಾಗವಹಿಸುವ ಕವಿಗಳಿಗೆ ನೀಡುವ ಸಾಂಪ್ರದಾಯವಿದ್ದು, ಒಮ್ಮೊಮ್ಮೆ ತರಹೀ ಮಿಸ್ರವನ್ನು  ಮುಷಾಯಿರಕ್ಕೂ ಮುಂಚಿತವಾಗಿಯೇ ನೀಡಲಾಗುತ್ತಿತ್ತು! ಮತ್ತೆ ಕೆಲವೊಮ್ಮೆ ಗೋಷ್ಠಿಯ ಸಂದರ್ಭದಲ್ಲಿಯೇ ನೀಡಲಾಗುತ್ತಿತ್ತು. ಹೀಗೆ ನೀಡಲಾದ ಮಿಸ್ರವನ್ನು  ಅದು ಒಳಗೊಂಡ ಕಾಫಿಯಾಕ್ಕೆ ಹೊಂದಿಕೆಯಾಗುವಂತೆ ಹಾಗು ಮೂಲ ಗಜಲ್ಕಾರ ಬಳಸಿದ ರದೀಫನ್ನೆ ಎಥಾವತ್ತಾಗಿ, ಬೆಹರನ್ನು ಅಷ್ಟೇ ಮಾತ್ರಗಣಗಳಲ್ಲಿ, ಛಂದಸ್ಸಿನ ರೂಪದಲ್ಲಿ ಶೇರ್ಗಳನ್ನು ಪೂರ್ಣಗೊಳಿಸುವುದರ ಮೂಲಕ ಆಶಅರ್ ಗಳನ್ನು ತನ್ನದೇ ಭಾವಭಿವ್ಯಕ್ತಿಯಲ್ಲಿ ಗಜಲನ್ನು ರಚಿಸುವ ಪ್ರಕ್ರಿಯೆಯನ್ನು ಕಾಣುತ್ತೇವೆ. ಯಾವ ಕವಿ ತರಹೀ ರಚಿಸಿ ತನ್ನ ಗಜಲನ್ನು ವಾಚಿಸುತ್ತಾನೊ ಆ ಕವಿಯ ಮುಂದೆ ಶಮಾವನ್ನು ಇರಿಸಲಾಗುತ್ತಿತ್ತು. ಗಜಲ್ಕಾರನ  ಗಜಲಿಗನುಗುಣವಾಗಿ ಸಭೆಯಲ್ಲಿ ವಾಹ್… ವಾಹ್… ಎಂಬಿತ್ಯಾದಿ ಉದ್ಗಾರಗಳು ಹೊರಡುವುದು, ಆ ಸಾಲುಗಳನ್ನು ಇತರರು ಪುನರಾವರ್ತಿಸಿ ಮೆಚ್ಚುಗೆ ಸೂಚಿಸುತ್ತ ಹುರಿದುಂಬಿಸುವುದು ಇಂತಹ ಮುಷಾಯಿರಗಳಲ್ಲಿ ಸರ್ವೆಸಾಮಾನ್ಯವಾದ ಸಂಗತಿಯಾಗಿತ್ತು. ಹೀಗೆ ಸರತಿಯಲಿ ಮುಷಾಯಿರ ಜಾರಿಯಲ್ಲಿರುತ್ತಿತ್ತು. ಈ ತೆರನಾಗಿ ಎರವಲು ಪಡೆದ, ಪ್ರಭಾವಿಸಿದ ಒಂದು ಮಿಸ್ರದಿಂದ ಹತ್ತು ಹಲವು ಗಜಲ್ಗಳು ಏಕಕಾಲದಲ್ಲಿ ರಚನೆಯಾಗುತ್ತಿದ್ದದ್ದು ನಿಜಕ್ಕೂ  ಪ್ರಸಂಶನೀಯ ಸಂಗತಿ. ಹೀಗೆ ಅಲ್ಲೊಂದು ರಸಕಾವ್ಯ ಸಂಜೆಯ ಮಾಹೋಲ್ ಸೃಷ್ಟಿಯಾಗುತ್ತಿತ್ತು! ಹಲವು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ತರಹೀ ಗಜಲ್ ಮುಷಾಯಿರ ಸಂಸ್ಕೃತಿ ಮೊಘಲರ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂದು ಹೇಳಬಹುದು. ಈ ತೆರನಾದ ಮುಷಾಯಿರಗಳನ್ನು ಆಯೋಜಿಸಲು ಪ್ರಮುಖ ಕಾರಣಗಳೆಂದರೆ, ಗಜಲ್ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಮುಖೀನ ಪ್ರೋತ್ಸಾಹಿಸುವುದರೊಂದಿಗೆ, ಸಮಕಾಲೀನ ಗಜಲ್ಕಾರರಲ್ಲಿ ಸಹೃದಯ ಮನೋಭಾವನೆಯನ್ನು ಹಾಗು ಸಮಾನ ಮನಸ್ಕತೆಯನ್ನು ಬೆಳೆಸುವುದರ ಜೊತೆಗೆ, ಗಜಲ್ ಕವಿಗಳ ನಡುವಿನ ಅಂತರವನ್ನು  ಮತ್ತು ಮನಸ್ತಾಪಗಳನ್ನು ಕಡಿತಗೊಳಿಸುವುದರೊಂದಿಗೆ ಅವರ ನಡುವೆ ಸ್ನೇಹದ ವಾತಾವರಣವನ್ನು ಸೃಷ್ಟಿಸಿ ಆರೋಗ್ಯಕರವಾದ ಸ್ಪರ್ಧೆ ಏರ್ಪಡುವಂತೆ ನೋಡಿಕೊಳ್ಳುವುದಾಗಿತ್ತು. ಆದರೆ ಕೆಲವೊಮ್ಮೆ ಇಂತಹ ಮುಷಾಯಿರಗಳಿಂದಲೇ ಮೇಲಿನ ಅಂಶಗಳಿಗೆ ವಿರುದ್ಧವಾದ ನಡೆಗೆ ಕಾರಣವಾಗುತ್ತಿತ್ತು ಎನ್ನಲಾಗುತ್ತದೆ. ಇಂತಹ ಗಜಲ್ ಗೋಷ್ಠಿಗಳು ಶ್ರೇಷ್ಠತೆಯ ಸಂಕೇತಗಳಾಗಿ ಅಂದಿನ ಸಮಾಜದಲ್ಲಿ ಬಿಂಬಿತವಾಗುತ್ತಿದ್ದವು. ಹಾಗೆಯೇ ಇದರೊಂದಿಗೆ ವಿಶೇಷ ಸಂದರ್ಭಗಳಲ್ಲಿ ವಿಶಿಷ್ಟವಾದ ಪಾನೀಯಗಳು ಹಾಗು ಭೋಜನಕೂಟಗಳನ್ನು ಸಹ ಅಯೋಜಿಸುವುದರೊಂದಿಗೆ ಕವಿಗಳನ್ನು ಸತ್ಕರಿಸಲಾಗುತ್ತಿತ್ತು. ಹೆಚ್ಚಿನ ಮಟ್ಟಿಗೆ ಆಸ್ಥಾನದ ಕವಿಗಳಿಂದಲೇ ಮುಷಾಯಿರಗಳನ್ನು ಜರುಗಿಸುತ್ತಿದ್ದದ್ದು ಇದೆ. ಇಲ್ಲಿ ‘ತರಹೀ ಎಂದರೆ’ ಪದಶಃ ಅದೇ ತರಹದ, ಆ ಮಾದರಿಯ ಅಥವಾ ಆ ಪ್ರಕಾರದ ಎಂದು ಸರಳಿಕರಿಸಬಹುದಾಗಿದೆ.  ತರಹೀ ಗಜಲನ್ನು ರಚಿಸ ಬಯಸುವವರು ಆಯ್ದುಕೊಳ್ಳುವ ಮಿಸ್ರಾದೊಂದಿಗೆ ಮೂಲ ಗಜಲ್ಕಾರನ ಹೆಸರನ್ನು ಉಲ್ಲೇಖಿಸುವುದರೊಂದಿಗೆ ಗೌರವ ಸಲ್ಲಿಸುವ, ಸ್ಮರಿಸುವ ಪರಂಪರೆಯೂ ಜಾರಿಯಲ್ಲಿರುವುದನ್ನು ಕಾಣುತ್ತೇವೆ. ಇಂತಹ ಒಂದು ವಿಶಿಷ್ಟವಾದ, ಅಪರೂಪವಾದ ಪರಂಪರೆ ಬೇರೆಲ್ಲೂ ಕಾಣಸಿಗುವುದಿಲ್ಲ! ಹಾಗಾಗಿ ತರಹೀ ಗಜಲ್ ಅದರದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. “ಗಾಲಿಬ್ ತೇರಿ ಜಮೀನ್ ಮೆ ಲಿಖಿ ತೊ ಹೈ ಗಜಲ್ ತೇರೆ ಕದ್-ಎ-ಸುಖ ಕೆ ಬರಾಬರ್ ನಹೀ ಹುಂ ಮೈ” ಒಬ್ಬ ಕವಿಯನ್ನು ಮತ್ತೊಬ್ಬ ಕವಿ, ಆತನ ಕಾವ್ಯದ ಸಾಲಿನೊಂದಿಗೆ ನೆನೆಯುವ, ಗೌರವ ಸೂಚಿಸುವ, ಪ್ರೀತಿ ವ್ಯಕ್ತಪಡಿಸುವ ಪರಿ ನಿಜಕ್ಕೂ ಅದರಣೀಯವಾದಂತಹುದು. “ಕವಿಯಾದವನು ತನ್ನದೇ ಅದ ದಾರಿಯೊಂದನ್ನು ಆಯ್ಕೆ ಮಾಡಿಕೊಂಡು ನಡೆದು ಹೆಜ್ಜೆ ಗುರುತುಗಳನ್ನು ಬಿಟ್ಟು ಸಾಗಿರುತ್ತಾನೆ; ಅಂತಹ ಹೆಜ್ಜೆಗುರುತುಗಳನ್ನು ಬಳಸಿ ಮತ್ತೊಬ್ಬ ಕವಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಯುವ ಪ್ರಯತ್ನವೇ ತರಹೀ ಎಂದು ವ್ಯಾಖ್ಯಾನಿಸಬಹುದು.” ಇಲ್ಲಿ ಮೀರುವುದಕ್ಕೆ ಅವಕಾಶಗಳಿದ್ದರೂ ಸಹ ವಿನಮ್ರತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಅದು ಗೌರವದ ಪ್ರತೀಕವಾಗಿದೆ. ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಇಡಿಯಾಗಿ ಯಾರೂ ಈವರೆಗೆ ಒಂದು ತರಹೀ ಗಜಲ್ ಸಂಕಲನವನ್ನು ತರದಿರುವುದು ಅಚ್ಚರಿ ಮೂಡಿಸುತ್ತದೆ. ‘ಶ್ರೀ. ಗಿರೀಶ್ ಜಕಾಪುರೆ’ ರವರು ಪ್ರಪ್ರಥಮವಾಗಿ ಕನ್ನಡದಲ್ಲಿ ತರಹೀ ಗಜಲ್ ಸಂಕಲನವನ್ನು ತಂದು, ಇಂತಹದ್ದೊಂದು ಪ್ರಯೋಗ ಮಾಡಿ ಯಶಸ್ವಿಯೂ ಆಗಿರುವುದು ಹೆಮ್ಮೆಯ ಸಂಗತಿ. ಗುರು – ಶಿಷ್ಯ(ಉಸ್ತಾದ್ – ಶಾಗಿರ್ದ್)ರ  ಪರಂಪರೆಯಲ್ಲಿ ತರಹೀ ಪ್ರಕಾರಕ್ಕೆ ಪ್ರಮುಖ ಸ್ಥಾನವಿದೆ. ಗುರು ಎನಿಸಿಕೊಂಡವನು ತನ್ನ ಶಿಷ್ಯನಿಗೆ ಪ್ರಸಿದ್ಧ ಗಜಲ್ಕಾರರ  ಮಿಸ್ರವೊಂದನ್ನು ನೀಡುವುದರ ಮುಖಾಂತರ ತರಹೀ ರಚಿಸಲು, ಅದನ್ನು ಕಲಿಕೆಯ ವಸ್ತುವಾಗಿಸಿ ಬಳಸಿರುವುದು, ಹಿರಿಯ ಗಜಲ್ಕಾರರನ್ನು ಮಟ್ಟ ಅವರ ಕಲಾಂನ್ನು ಆ ಮೂಲಕ ಪರಿಚಯಿಸುವುದು, ಅರ್ಥೈಸುವುದು, ಆ ನಿಟ್ಟಿನಲ್ಲಿ ಗಜಲ್ಗಳನ್ನು ರಚಿಸಲು ಪ್ರೋತ್ಸಾಹಿಸುವ ಪದ್ಧತಿ ಪೂರ್ವದಲ್ಲಿ ಇತ್ತಾದರೂ ಕಾಲಚಕ್ರ ಉರುಳಿದಂತೆ ಈ ತೆರನಾದ ಗುರು ಶಿಷ್ಯ ಪರಂಪರೆ, ಕಲಿಕೆ ನಿಷ್ಕ್ರಿಯಗೊಂಡಿದೆ. ತಿದ್ದಿ ಕಲಿಸುವ(ಇಸ್ಲಾಹ್) ಸಮರ್ಥ ಗುರುವಿಲ್ಲದ ಕಾರಣಕ್ಕೆ , ಸೂಕ್ತ ಮಾರ್ಗದರ್ಶನದ ಕೊರತೆಯಿಂದಾಗಿ ಹಲವಾರು ಕಲಿಕಾರ್ಥಿಗಳು ಈ ದಿನಗಳಲ್ಲಿ  ಗೊಂದಲಗಳಿಗೆ ಒಳಗಾಗಿ, ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಅರಿವಿಲ್ಲದೆ ಗಜಲ್ನ ಅಮಲೇರಿಸಿಕೊಂಡವರಂತೆ ನಿಯಮ ಬಾಹಿರವಾಗಿ, ಮೃದುತವಿಲ್ಲದೆ, ಗೇಯತೆ ತರದೆ, ಮಾತ್ರಗಣಗಳ ತಿಳುವಳಿಕೆ ಇಲ್ಲದೆ, ‘ನಾವು ಬರೆದದ್ದೆ ಸರಿ’ ಎನ್ನುವ ಮನೋಧೋರಣೆಯಲ್ಲಿ ಕುರುಡಾಗಿ ಸಾಗುತ್ತಿರುವುದು ಗಜಲ್ ಕಾವ್ಯ ಪ್ರಕಾರದ ಬೆಳವಣಿಗೆಗೆ ಮಾರಕವಾಗಿದೆ. ಕನ್ನಡದಲ್ಲಿ ಗುರುಶಿಷ್ಯರ ಈವೊಂದು ಪರಂಪರೆಯನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. “ಎಲ್ಲಾ ಬಲ್ಲವರಿಲ್ಲ, ಬಲ್ಲವರೂ ಬಹಳಿಲ್ಲ.” ಗಜಲ್ ಕಲಿಕಾರ್ಥಿ ಆದವನು ಮೊದಲು ಸಮರ್ಥ ಗುರುವನ್ನು ಹುಡುಕಿಕೊಳ್ಳಬೇಕು. ಗುರುವಿನ ಗುಲಾಮನಾಗುವ ತನಕ ಸಿಗದು ಮುಕ್ತಿ ಎಂಬ  ದಾಸಶ್ರೇಷ್ಠರ ನುಡಿಯಂತೆ, ಗುರುವಿನ  ಮಾರ್ಗದರ್ಶನದಲ್ಲಿ ಕಲಿಕೆಯನ್ನು ಆರಂಭಿಸಬೇಕು. ಆಗ ಮಾತ್ರ ಯಾವ ಗೊಂದಲಗಳಿಲ್ಲದೆ ಕಲಿಕೆ ಸುಗಮವಾಗಿ ಸಾಗಬಲ್ಲದು. ಆದರೇ ಇಲ್ಲಿ ದ್ರೋಣಾರ್ಜುನರು ಕಡಿಮೆ, ಏಕಲವ್ಯರೆ ಹೆಚ್ಚು ಎಂಬಂತಾಗಿದೆ. ಕಲಿಕಾರ್ಥಿಯೊಬ್ಬ ಸಮರ್ಥ  ಗುರುವನ್ನು ಹುಡುಕಿಕೊಳ್ಳುವ ಅಗತ್ಯವಿರುವಂತೆ, ಅದೇ ರೀತಿಯಲ್ಲಿ  ಗುರುವು ಸಹ ತನ್ನ ಜ್ಞಾನವನ್ನು ಧಾರೆ ಎರೆಯಲು ಸೂಕ್ತ ಶಿಷ್ಯನೊಬ್ಬನನ್ನು ಆಯ್ದುಕೊಳ್ಳುವ ಅವಶ್ಯಕತೆಯು ಇದೆ. ಹೀಗೆ ಗುರುವೊಬ್ಬ ಎಷ್ಟು ಮಂದಿ ಶಿಷ್ಯರನ್ನಾದರು ಆಯ್ದುಕೊಳ್ಳುವ ಸಾಮರ್ಥ್ಯ ಒಬ್ಬ ಗುರುವಿಗಿರುತ್ತದೆ. ತರಹೀ ಮಿಸ್ರದ ಆಯ್ಕೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿರುವುದನ್ನು ಕಾಣುತ್ತೇವೆ. ಹೆಚ್ಚಿನ ಮಟ್ಟಿಗೆ  ಮತ್ಲಾದ ಮಿಸ್ರಗಳನ್ನೆ ತರಹೀ ರಚನೆಗೆ ಆಯ್ಕೆ ಮಾಡಿಕೊಳ್ಳುವುದಿದೆ. ಹಾಗೆಯೇ ಗಜಲ್ನ ಯಾವುದಾದರೂ ಮಿಸ್ರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವೂ ಸಹ ಇದ್ದೆ ಇದೆ. ಅಷ್ಟೇ ಅಲ್ಲದೆ, ಗಜಲ್ನ ಹೊರತಾಗಿ ನಜಮ್, ನಾತ್ ಮತ್ತಿತರೆ ಕಾವ್ಯ ಪ್ರಕಾರಗಳಿಂದಲೂ ತಮ್ಮನ್ನು ಪ್ರಭಾವಿಸಿದ ಇಲ್ಲವೇ ಇಷ್ಟವಾದ ಸಾಲುಗಳನ್ನು ತರಹೀಗೆ ಆಯ್ಕೆ ಮಾಡಿಕೊಂಡು ಗಜಲ್ ರಚಿಸಿದವರು, ರಚಿಸುವವರೂ ಇದ್ದಾರೆ. ತರಹೀ ರಚಿಸುವವರು ಆಯ್ಕೆ ಆಡಿಕೊಂಡ ಮಿಸ್ರವನ್ನು ಎಲ್ಲಿ ಮತ್ತು ಹೇಗೆ ಬಳಸಬೇಕು ಎಂಬುದು ಜಿಜ್ಞಾಸೆಯಾಗಿ ಮಾರ್ಪಟ್ಟಿದೆ. ಸರ್ವೆ ಸಾಮಾನ್ಯವಾಗಿ ಆಯ್ಕೆಯ ಮಿಸ್ರವನ್ನು ತರಹೀ ಗಜಲ್ಕಾರ ತನ್ನ ಗಜಲ್ನ ಮತ್ಲಾದ ಸಾನಿ ಮಿಸ್ರವಾಗಿಸಿ ಬರೆಯುವುದು ವಾಡಿಕೆಯಲ್ಲಿದೆ. ಆದರೆ ಅದನ್ನು ಉಲಾ ಮಿಸ್ರವಾಗಿಸಬೇಕು ಎಂಬುದು ಕೆಲವರ ವಾದವಾಗಿದೆ. ಗಜಲ್ ಸಾಧಕರಾದ ‘ಅಲ್ಲಮ’ ಗಿರೀಶ್ ಜಕಾಪುರೆ ರವರು ಹೇಳುವಂತೆ, ತರಹೀ ರಚಿಸುವ ಗಜಲ್ಕಾರನ ಮಿಸ್ರ, ತರಹೀಗೆ ಆಯ್ಕೆ ಮಾಡಿಕೊಂಡ ಮಿಸ್ರಕ್ಕಿಂತ ಉತ್ಕೃಷ್ಟವಾಗಿದ್ದರೆ  ಅದನ್ನು ಉಲಾ ಮಿಸ್ರವಾಗಿ ಹಾಗು ತರಹೀ ಮಿಸ್ರವನ್ನು ಸಾನಿ ಮಿಸ್ರವಾಗಿಸಿ ಬಳಸುವುದು ಸೂಕ್ತ ಎಂದಿದ್ದಾರೆ. ಇದಲ್ಲದೆ, ತರಹೀ ಸಾಲನ್ನು ಗಜಲಿನ ಅಶಆರ್ ಗಳಲ್ಲಿ ಹಾಗೂ ಮಕ್ತಾದಲ್ಲೂ ಬಳಸುವವರನ್ನು ಸಹ ಕಾಣಬಹುದು. ಹಾಗಾಗಿಯೇ ಇದೊಂದು ಎಂದಿಗೂ ಬಗೆಹರಿಯದ ಸಮಸ್ಯೆಯಾಗಿ/ಗೊಂದಲವಾಗಿ ಪರಿಣಮಿಸಿದೆ. ಗಜಲ್ಕಾರನೊಬ್ಬ ಮತ್ತೊಬ್ಬ ಗಜಲ್ ಕವಿಯ ಮಿಸ್ರದ ಪ್ರಭಾವದಿಂದ ತರಹೀ ರಚಿಸಲು  ಯಾರ ಪರವಾನಾಗಿಯನ್ನು ಪಡೆಯುವ ಅವಶ್ಯಕತೆ ಇಲ್ಲ. ಆದರೆ ಮೂಲ ಕವಿಯ ಹೆಸರನ್ನು ಉಲ್ಲೇಖಿಸುವುದರ ಮೂಲಕ ಗೌರವ ಸೂಚಿಸುವುದು ತರಹೀ ಪರಂಪರೆಯ ಅದರ್ಶವಾಗಿದೆ. ಆದರೆ ಈ ಪರಂಪರೆಯನ್ನು ಕನ್ನಡದ ಗಜಲ್ಕಾರರು ಅಷ್ಟಾಗಿ ಸ್ವಾಗತಿಸಿದಂತೆ ಕಾಣುವುದಿಲ್ಲ. ಏಕೆಂದರೆ ಕನ್ನಡದ ಕೆಲವು ಗಜಲ್ಕಾರರು ತಮ್ಮ ಸಾಲನ್ನು ಕೇಳದೆ ಬಳಸಿದರೆಂದು, ಬಳಸುವ ಮೊದಲು ಅನುಮತಿ ಪಡೆಯ ಬೇಕಾಗಿತ್ತೆಂದು (ಮೂಲ ಕವಿಯ ಹೆಸರನ್ನು ಉಲ್ಲೇಖಿಸಿದ್ದರೂ ಸಹ), ನೀವು ನನ್ನ ಮಿಸ್ರಕ್ಕೆ ತರಹೀ ಬರೆಯಕೂಡದೆಂದು ನಿರ್ಬಂಧ ಹೇರುವ, ಆಕ್ಷೇಪ ವ್ಯಕ್ತಪಡಿಸುವ, ಕೃತಿಚೌರ್ಯದ ಪಟ್ಟ ಕಟ್ಟಿ ಹಿಯಾಳಿಸುವ ಇಂತಹ ಕಹಿ ಅನುಭವಗಳನ್ನು ಕೆಲವು ಗಜಲ್ಕಾರರು ನೊಂದ ಮನಸ್ಸಿನಿಂದ ಗಜಲ್ ಗುಂಪುಗಳಲ್ಲಿ ಹೇಳಿಕೊಂಡಿರುವುದು, ಚರ್ಚೆಯಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ವಿಷಾದ ಅನುಭವದಿಂದ ನಾನು ಸಹ ಹೊರತಾಗಿಲ್ಲ. ಹಾಗಾಗಿ ಇಂತಹ  ಅನುಭವಕ್ಕೆ ಮುಖಾಮುಖಿಯಾದವರು ತರಹೀ ಗಜಲ್ ರಚಿಸುವತ್ತ ಆಸಕ್ತಿಯನ್ನು ಕಳೆದುಕೊಂಡಿರುವುದು ವಿಷಾದನೀಯ ಸಂಗತಿಯಾಗಿದೆ. ಮತ್ತೆ ಕೆಲವರು ಉರ್ದು/ಹಿಂದಿ ಭಾಷೆಯ ಗಜಲ್ಗಳಿಂದ ತಮಗೆ ಇಷ್ಟವಾದ ಸಾಲನ್ನು ಕನ್ನಡಕ್ಕೆ ಅನುವಾದಿಸಿಕೊಂಡು ತರಹೀ ರಚಿಸುವತ್ತ ತಮ್ಮದೇ ಮಾರ್ಗವನ್ನು ಕಂಡುಕೊಂಡಿದ್ದಾರೆ. ಆದರೆ ಈ ತೆರನಾದ

ತರಹೀ ಎಂಬ ಹೆಜ್ಜೆಯ ನುಡಿಯ ಗೆಜ್ಜೆಯ ದನಿ Read Post »

ಪುಸ್ತಕ ಸಂಗಾತಿ

ಆತ್ಮಸಖಿ ಗಜಲ್ ಗಳು

ಕೃತಿ ಶೀಷಿ೯ಕೆ…. ಆತ್ಮಸಖಿ ಗಜಲ್ ಗಳು
ಲೇಖಕರ ಹೆಸರು…… ಅರುಣಾ ನರೇಂದ್ರ ಮೊ.೭೯೨೯೦೪೬೬೯೮
ಪ್ರಕಾಶನ……. ಸಿದ್ಧಾರ್ಥ ಪ್ರಕಾಶನ ನಂದಿನಗರ ಕೊಪ್ಪಳ ಮೊ೯೮೪೫೦೧೭೩೧೬
ಪ್ರಥಮ ಮುದ್ರಣ …೨೦೨೧. ಬೆಲೆ ೧೫೦₹

ಆತ್ಮಸಖಿ ಗಜಲ್ ಗಳು Read Post »

You cannot copy content of this page

Scroll to Top