ಸತ್ಯಕ್ಕೆ ಸಾಕ್ಷಿ ಬೇಕಾಗಿದೆ
ಕವಿತೆ ಸತ್ಯಕ್ಕೆ ಸಾಕ್ಷಿ ಬೇಕಾಗಿದೆ ಆರ್.ಉಷಾ ಸತ್ಯ ಸುಳ್ಳುಗಳ ಮಧ್ಯೆ ಬೆಸುಗೆ ಬೆಳೆದುಸುಳ್ಳು ಎಲ್ಲೆಲ್ಲೂ ಝೇಂಕರಿಸಿ ವಾಮನನಂತೆ ಬೆಳೆದುಬಲಿಗೊಟ್ಟು ಸತ್ಯವನುಮೋಸದ ಜೊತೆ ಒಡನಾಡಿಯಾಗಿದ್ರೋಹದ ಜೊತೆ ಸ್ನೇಹ ಪಲ್ಲವಿಸಿಅಪನಂಬಿಕೆಯ ಮಿತ್ರನ ನೆರವು ಪಡೆದುದ್ರೋಹದ ಬಲೆಯಲ್ಲಿ ಸತ್ಯವನು ಮೂಲೆಗುಂಪು ಮಾಡಿಕಾರ್ಗತ್ತಲಿನ ಖೋಲಿಯಲ್ಲಿ ಬಂಧಿಯನ್ನಾಗಿಸಿತು ಸುಳ್ಳು ಕಟ್ಟಿದ ಅರಮನೆಯಲ್ಲಿ ಕೂಪಮಂಡೂಕದಂತೆಸೂರ್ಯೋದಯವನ್ನೇ ಕಾಣದ ಸತ್ಯಕತ್ತಲಲ್ಲೇ ಕುರುಡಾಗಿಇರುಳ ಕರುಳ ಬಗೆದುಬಟ್ಟ ಬಯಲಾಗಲಾರದೆಸುಳ್ಳಿನ ವಿದ್ರೋಹದ ಮುಳ್ಳು ಬೇಲಿಯಲಿ ಸಿಲುಕಿನರಳಿ ನರಳಿ ನರ ಸತ್ತು ಗಂಟಲ ಪಸೆ ಆರಿಬೊಬ್ಬಿರಿಯಲಾಗದೆ ಕಗ್ಗತ್ತಲ ಕೂಪದಲಿ ಬೆಂದು ಒಂಟಿಯಾಗಿ ಸಾಕ್ಷಿಯ ಸಹಚರನಿಲ್ಲದ ಸತ್ಯ ಕಾಯುತಿದೆ ಬಿಡುಗಡೆಗಾಗಿಅರಸುತ್ತಿದೆ ತನ್ನ ಪರ ವಕಾಲತ್ತು ವಹಿಸುವ ಮಿತ್ರನನ್ನುತನ್ನ ಅಸ್ತಿತ್ವ ನಿರೂಪಿಸಲು ಇಂದಿಗೂ ಚಾತಕಪಕ್ಷಿಯಂತೆ *************************************************
ಸತ್ಯಕ್ಕೆ ಸಾಕ್ಷಿ ಬೇಕಾಗಿದೆ Read Post »









