ಕಾವ್ಯಯಾನ
ಕವಿತೆ ನನ್ನ ಶ್ರಾವಣ ಅನಿತಾ ಪಿ. ಪೂಜಾರಿ ತಾಕೊಡೆ. ಕರುಳ ನಂಟಿನ ಪ್ರೀತಿ ಪ್ರತಿರೂಪಗಳಕಂಡುಂಡು ಬೆಳೆದ ಮನೆಯಹೊಸ್ತಿಲು ದಾಟಿದೆನಲ್ಲ ಅಂದುಬಾಳಿ ಬದುಕುವ ಮನೆಗೆ ಬಲಗಾಲಿಟ್ಟು ನೆನಪಿನ್ನೂ ಹಸಿರೇ ಶ್ರಾವಣ ಸಿರಿಯಂತೆಅಂದು ಮೊದಲ ಬಾರಿ ತವರಿಗೆ ಬಂದಾಗಮುಳ್ಳನ್ನು ಬದಿಗೊತ್ತಿ ಖುಷಿಯ ಹೂವುಗಳನ್ನೇ ಬಿಡಿಸಿಟ್ಟಿದ್ದು… ಶ್ರಾವಣ ಕಳೆದುಒಲ್ಲದ ಮನಸನು ಮೆಲ್ಲನೆ ಒಲಿಸಿ ಮುಂದೆ ನಡೆದಾಗಕಳೆದ ದಿನಗಳು ಸುತ್ತ ಸುಳಿದು.ಶ್ರಾವಣವೇ ನಿಲ್ಲು ನಿಲ್ಲೆಂದು ಮರುಗಿದ್ದು ಈಗಲೂ ಶ್ರಾವಣವೆಂದರೆ ಅದೇನೋ ಸೆಳವುಅಲ್ಲಿರುವ ಸಲುಗೆ ಇಲ್ಲಿರುವ ಬೆಸುಗೆಅಲ್ಲಿರುವ ಪ್ರೀತಿ ಇಲ್ಲಿರುವ ನೀತಿಎಲ್ಲವೂ ಬೇರೆ ಬೇರೆ ಸಂಸಾರ ಸೂತ್ರದ ಹಲವ ಪಾತ್ರಗಳಜೊತೆಯಲೇ ಕಳೆದು ಹೋಗುತಿದೆ ಶ್ರಾವಣಏಗಿ ಮಾಗಿ ಬಾಗಿ ತೂಗಿ ತುಂಬಿದ ಬದುಕನುಉತ್ತು ಈಗ ನಗೆಯ ಬೀಜವನೇ ಬಿತ್ತಿದ್ದೇನೆಹಳೆಯ ನೆನಪುಗಳ ಬೇರೂ ಗಟ್ಟಿಯಾಗಿವೆ *************************************









