ವಿಶಾಲಾ ಆರಾಧ್ಯ ಕಾವ್ಯಗುಚ್ಛ
ವಿಶಾಲಾ ಆರಾಧ್ಯ ಕಾವ್ಯಗುಚ್ಛ ಬುದ್ಧನೊಂದಿಗೊಂದು ದಿನ ನಿನ್ನಂತಾಗಲೂನಾನೇನು ಮಾಡಬೇಕು ?ಕತ್ತಲ ಬದುಕಿನಿಂದೊಡನೆನಡೆದುಬಿಡಲೇ?ಓ..ಓಹ್ಎಂದಾದರೂ ಉಂಟೆ ಬುದ್ಧ ?ಯಶೋಧರೆ ಏನಾದರೂ ನಿನ್ನ ಬಿಟ್ಟು ರಾಹುಲನ ದಾಟಿ ಬಂದಿದ್ದರೆಕಥೆ ಏನಾಗಿರುತ್ತಿತ್ತು..??ನೀನೇನೋ ಸಿದ್ಧಾರ್ಥನಿಂದಬುದ್ಧನಾಗಿ ಹೋದೆಯಶೋಧರೆಗೆಂತೆಂಥಹ ಪದವಿಬಿರುದು ವಿಜೃಂಭಿಸುತ್ತಿದ್ದವುಬಲ್ಲೆ ಏನು?ಸಾಧ್ವಿ ಸೀತೆಯ ಶೀಲಕೆ ಬೆಂಕಿಯಿತ್ತ ಜನಸಾವಿತ್ರಿಯ ಸೋಲಿಸೆ ನಿಂದಸಿದ ಯಮಕೃಷ್ಣೆಗೆ ಹೊರಗಿನರಲ್ಲ ಅರಮನೆಯಲೇಅಂಬರವ ಹರಿದ ಬಣ!ಯಶೋಧರೆಯ ಬೇರಾವ ಅಗ್ನಿನುಡಿಗೀಡುಮಾಡುತ್ತಿದ್ದರೋ..ನಿನಗೆ ಒಮ್ಮೆಯಾದರೂ ಪತ್ನಿ ಬೇಡ..!ಪುತ್ರನ ನೆನಪೇನಾದರೂ ಸುಳಿಯಿತೇ?ಊರಿಗೇ ಬೆಳಕಿತ್ತ ಪುಣ್ಯಾತ್ಮ ನೀನುಒಳಗೊಳಗೇ ನೀನು ಕತ್ತಲಾಗಲಿಲ್ಲವೇ? ದೀಪದ ಕೆಳಗಿನ ಕತ್ತಲಂತೆ..!! ಎಲ್ಲೆ ದೇವರು ದಿಕ್ಕರಿಸಿ ಗಡಿಪಾರಾಗಿದ್ದಾನೆಮಾಡಿದ ಸೈಟು ಬೇಡಿದ ಕಾರುಮಾಡಿದ ಕಾರುಬಾರೆಲ್ಲಾಅವನ ಕೃಪೆಯೇ !ಗೋಡೆಯಲಿ ಇದ್ದಾಗಅಮ್ಮ ಅಪ್ಪನೇ ಗುರುವೇ ಎಂದುವಾರ ಮಾಡಿ ಪಕ್ಷ ಮಾಡಿ ಬೇಡಿ ಕಾಡಿ ಪಡೆದವರೇ .!ಕಾಯಿ ಹೊಡೆದು ಹಣ್ಣನಿತ್ತುದೀಪ ಧೂಪ ಹಚ್ಚಿ ಇಟ್ಟು ವಸ್ತ್ರ ದಕ್ಷಿಣೆಗಳನಿಟ್ಟುಕೈ ಜೋಡಿಸಿ ಬೇಡಿದವರೇ..!ಅವನಿಗಾಗಿ ಜಾತ್ರೆ ಮಾಡಿಅವನ ಹೆಸರಲೇ ಯಾತ್ರೆ ಮಾಡಿದಂಡಿ ದಂಡಿ ದಂಡವಿಟ್ಟುಹರಕೆ ಹೊತ್ತು ಉರುಳಿ ಬಂದು ದೀರ್ಘ ದಂಡ ಹಾಕಿದವರೇ ..!ಅಂಬರಕ್ಕೇ ಅಂಬರವನಿತ್ತುದಯಾಮಯಿಗೇ ದಯೆ ತೋರಿನೆಲೆಯಾದವನಿಗೇ ಗುಡಿಯ ಕಟ್ಟಿಮನೋಹರನಿಗೇ ಉಪಚಾರ ಮಾಡಿ ಕಡೆಗೊಂದು ದಿನಮಾಸಿದನೆಂದೋ ಪಟ ಪಸುಗೆಯಾಯಿತೆಂದೋಮನೆಯಾಚೆ ತಳ್ಳಿ ಜಗನ್ನಾಥನನ್ನೇಅನಾಥಗೊಳಿಸಿದ ಮನುಜ ಭಕ್ತಿಗೇನೆಂಬೆ? ಕುದಿ ಕುದಿಯುವ ಹೂವಿನ ಹೃದಯಗಳಲಿನಗುವಿನ ಆವಿಯ ಚಿತ್ರಣ ತೋರಿಕೆಅಂತರಂಗದ ಕತ್ತಲಾಮಿಷ ಕೋಣೆಗೆಬಹಿರಂಗದಿ ಕಾಣುವ ಬೆಳಕಿನ ಜವನಿಕೆ ಹೂವಿನ ಹುಡುಗನು ಕಟ್ಟುವ ನೂಲಲೇಕೊರಳುಸಿರಿನ ಇರಿತದ ಮತ್ಸರವಿಹುದುಕಸಾಯಿಕಾನೆಯ ಕಟುಕನ ಕಣ್ಣಲೂಕರುಣೆಯ ಕರುಳಿನ ಕರೆಯಿರಬಹುದು ಕಣ್ಣಿಗ್ಹಬ್ಬವಾಗೋ ಅಂದದ ಕಡಲೊಳುಜೀವ ತೆಗೆಯುವ ಸುಂದರ ಜಲಚರಕಸವನೇ ನುಂಗಿದ ಕೆಸರಿನ ಹೊಂಡದಿಪೂಜೆಗೆ ಒದಗುವ ಕಮಲದ ಹಂದರ ಸುಂದರ ಗೋಕುಲ ವೃಂದಾವನದಿ ಗೂಡೊಳಗೊಂದು ವ್ಯಾಘ್ರ ನುಗ್ಗಿದೆಅಂದದೊಂದಿಗೆ ಚಂದದ ಮನದಿಮನದೊಳಗೆ ವಿಷವನೇ ಬಸಿದಿದೆ————- *********************
ವಿಶಾಲಾ ಆರಾಧ್ಯ ಕಾವ್ಯಗುಚ್ಛ Read Post »









