ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಗಝಲ್ ಪ್ರಭಾವತಿ ಎಸ್ ದೇಸಾಯಿ ಅರಳಿದ ಸುಮ ದೇವರಿಗೆ ಅಪಿ೯ತವಾಗಲಿ ಬಾಡುವ ಮುನ್ನವೀಣೆ ತಂತಿ ಮೀಟಿ ಶ್ರುತಿ ಸರಾಗವಾಗಲಿ ಹಾಡುವ ಮುನ್ನ ಜಗದ ನಿಂದೆ ಅಪಹಾಸ್ಯ ಗಳಿಗೆ ನೊಂದು ಅನುಮಾನಿಸದಿರುಜೀವಿಗಳ ಪ್ರೀತಿ ಬೆಸುಗೆ ಗಟ್ಟಿಯಾಗಲಿ ಕೂಡುವ ಮುನ್ನ ನೆರಳಿರದ ಹಾದಿಯಲಿ ಬದುಕಿನ ಬಂಡಿ ಸಾಗಿದೆ ಅನವರತಬಾಳಿನ ಕಹಿ ನೆನಪ ದಿನಗಳು ಮರೆಯಾಗಲಿ ಕಾಡುವ ಮುನ್ನ ವಿರಹ ದಳ್ಳುರಿಯಲಿ ನಿತ್ಯ ದಹಿಸುತಿವೆ ಪ್ರೇಮಿಗಳ ಉಸಿರುಅನುರಾಗ ಚುಂಬನಕೆ ಹೃದಯ ಹಗುರಾಗಲಿ ಬೇಡುವ ಮುನ್ನ ಕೋಶ ಕೀಟಕೆ ರೆಕ್ಕೆಗಳ ಹಚ್ಚಿ ಕೊಂಡು ಹಾರುವ ಆತುರಪ್ರಭೆಯ ಮೋಹ ಇರುಳ ಧ್ಯಾನ ದೂರಾಗಲಿ ಹೊರಡುವ ಮುನ್ನ *************************************************

ಗಝಲ್ Read Post »

ಕಾವ್ಯಯಾನ

ನನ್ನಮ್ಮ

ಕವಿತೆ ನನ್ನಮ್ಮ ಶೃತಿ ಎಸ್.ಗೌಡ ನನ್ನಮ್ಮ ಸೀತೆಯಲ್ಲ ಸಾವಿತ್ರಿಯಲ್ಲಕೈ ಹಿಡಿದ ಪತಿಯೊಡನೆವನವಾಸಕ್ಕೂ ಹೋಗಲಿಲ್ಲಅವನಿಗಾಗಿ ಯಮನನ್ನು ಅಡ್ಡಗಟ್ಟಲಿಲ್ಲ ಇದ್ದಲ್ಲಿಯೇ ವನವಾಸ ಮಾಡಿದವಳು ಕುಡಿದ ಮತ್ತಿನಲ್ಲಿ ನಡೆಯಲಾರದೆ ಎಡವಿ ಬಿದ್ದ ಅಪ್ಪನಿಗೆ ತನ್ನ ಹೆಗಲನ್ನು ಆಸರೆಯಾಗಿ ನೀಡಿದವಳು ನನ್ನಮ್ಮ ಆಸರೆ ಬಯಸಲಿಲ್ಲಸಂಸಾರದ ನೊಗ ಹೊತ್ತುನಮಗಾಸರೆಯಾದವಳುತಾನು ನಿಂತು ನಮ್ಮ ನಡೆಸಿತಾನು ಹಸಿದು ನಮಗುಣಿಸಿತನ್ನ ಕಣ್ಣುಗಳಲ್ಲಿಅವಳ ಕನಸುಗಳ ಕಂಡವಳುಸಂಸಾರದ ಹಾದಿಯಲ್ಲಿ ನಿಲ್ಲದೆ ನಡೆದವಳು ನನ್ನಮ್ಮ ಹೆಚ್ಚು ಕಲಿಯಲಿಲ್ಲಗುಡಿಗಳ ಗುಂಡಾರವ ಸುತ್ತಲಿಲ್ಲಸ್ವರ್ಗ ನರಕಗಳ ಕಲ್ಪನೆಯೂ ಅವಳಿಗಿಲ್ಲ ಇರುವಷ್ಟು ದಿನಬಾಳ ಕುಲುಮೆಯಲಿ ಬೆಂದವಳು ಕುಡಿತಕ್ಕೆ ಶರಣಾಗಿ ಬದುಕನ್ನೇ ಬಲಿ ಕೊಟ್ಟ ಅಪ್ಪನ ಕಂಡು ಸತ್ತು ಬದುಕಿದವಳುದೇವರು ಕೊಟ್ಟ ಆಯಸ್ಸುಮುಗಿಯುವ ಮುನ್ನವೇ ಬದುಕು ಭಾರವೆಂದುನೊಂದವಳು ******************

ನನ್ನಮ್ಮ Read Post »

ಕಾವ್ಯಯಾನ

ತಲೆದಿಂಬಿನೊಳಗೆ ಅವಿತ ನಾ

ಕವಿತೆ ತಲೆದಿಂಬಿನೊಳಗೆ ಅವಿತ ನಾ ಡಾ. ರೇಣುಕಾ ಅರುಣ ಕಠಾರಿ ಈಗೀಗ ಸಾಕ್ಷಿಯ ಪ್ರಜ್ಞೆ ಮರೆತ ನಾಸದ್ದಿಲ್ಲದೆ ತಲೆದಿಂಬಿನೊಳಗಿನಿಂದಎದ್ದು ಎದ್ದು ಬರುವ ಕನಸಗಳಿಗೆ ಉತ್ತರ ಕೊಡಬೇಕಿದೆಪ್ರತಿ ಪ್ರಶ್ನೆಗೂ ಅದೇ ಉತ್ತರವೆಂದು ಹೇಳಿದಾಗಲೂ.ಮತ್ತೆ ಅಂತರಾತ್ಮದ ಹೊನಲು ಕೇಕೆ ಹಾಕುತ್ತದೆ. ಕಾಡುವ ಕನಸುಗಳು ಘಳಿಗೆಗೆ ಒಮ್ಮೆನೆನಪಿನ ನೀರುಣಿಸಿ ಈಗೀಗ ಸಾಕುತ್ತಿದ್ದೇನೆ.ಹರಿದು ಬರುವ ನೀರಿಗೆ ಆಣೆಕಟ್ಟು ಕಟ್ಟಿದಂತೆ,ನದಿಯನ್ನು ದಾಟಲು ಸೇತುವೆಯಂತೆ,ಕ್ಷಣಕ್ಷಣವೂ ಉಸಿರು ನುಂಗಿ, ಜೀವಿಸಿ.ಮೊಳಕೆ ಒಡೆದ ಸಸಿಯಂತೆ, ಹೂವು ಅರಳಿಸುವಂತೆಮತ್ತೆ ನನಗೆ ನಾನೇ ಸಾಕ್ಷಿ ರೂಪವಾಗಿ ಬದುಕುತ್ತಿದ್ದೇನೆ ಕನಸಿಗಾಗಿ. ಜೊತೆಯಾಗಿ ಬರುತ್ತೇನೆ,ಉಸಿರಿಗೆ ಉಸಿರಾಗಿ ಇರುತ್ತೇನೆನಿನ್ನ ತಲೆ ಬೆನ್ನಿಗೆ ಬಿಂಬವಾಗಿರುತ್ತೇನೆ, ಎಂದುಬಂದವನು ನಿನ್ನ ಋಣ ತೀರಿತ್ತೆಂದುಬಂದ ದಾರಿಗೆ ನಡೆದು ಬಹುದೂರ ಹೋಗಿದ್ದಾಯಿತು.ಆಗ ಕಟ್ಟಿದೆಲ್ಲವೂ ಬರೀ ಉಳಿದ ಖಾಲಿ ಕನಸುಗಳು. ಬಯಲು ಆಲಯವು ಒಂದಾದಂತೆಆ ಬೇಸುಗೆಯೂ ಬೇಸತ್ತು ಕಂಗಾಲಾಗಿಸಾಗಿ ಸಾಗಿ ಹಾರಿ ಹೋದಿದ್ದಾಯಿತು.ನನ್ನ ಪ್ರಜ್ಞಾಪೂರಿತ ಸಾಕ್ಷಿಯ ಕನಸು,ವಾಸ್ತವಿಕತೆಯೂ ಮನಸುನನ್ನ ತಲೆದಿಂಬಿನೊಳಗೆ ಜೋಪಾನವಾಗಿಯೇ ಮಲಗಿತ್ತು. *****************************************

ತಲೆದಿಂಬಿನೊಳಗೆ ಅವಿತ ನಾ Read Post »

ಕಾವ್ಯಯಾನ

ಮರ್ದಿನಿ ಆಗಲಿಲ್ಲ

ಕವಿತೆ ಮರ್ದಿನಿ ಆಗಲಿಲ್ಲ ಡಾ.ಶಿವಕುಮಾರ್ ಮಾಲಿಪಾಟೀಲ ನಾಲ್ಕಾರು ಜನರು ಅತ್ಯಾಚಾರಕ್ಕೆ ಮುಂದಾದಾಗಮನಿಷಾ,ಮಹಿಷಾಸುರ ಮರ್ದಿನಿ ಆಗಲಿಲ್ಲ ನಿನ್ನ ಗರ್ಭದಲ್ಲಿ ಹುಟ್ಟಿದರೂನಿನ್ನನ್ನು ಗರ್ಭಗುಡಿಗೆ ನಿಷೇಧಿಸಿದಾಗ ಹೆಣ್ಣುಕಾಳಿಯಾಗಲಿಲ್ಲ ವರದಕ್ಷಿಣೆಗಾಗಿ ಅವಮಾನಿಸಿಹಿಂಸೆ ಕೊಟ್ಟುಕೊಲೆ ಮಾಡುವಾಗ ಹೆಣ್ಣುದುರ್ಗೆ ಆಗಲಿಲ್ಲ ಹೆಣ್ಣು ಬೇಡವೆಂದುಭ್ರೂಣವನ್ನು ಗರ್ಭದಲ್ಲೇಕತ್ತರಿಸಲು ಬಂದಾಗ ಹೆಣ್ಣು ಚಾಮುಂಡಿ ಆಗಲಿಲ್ಲ ಮಹಾ ಗ್ರಂಥಗಳಲ್ಲಿ ಮರುಳಾಗಿಕಲೆ ,ಶಿಲೆಗಳಲ್ಲಿ ಗೊಂಬೆಯಾಗಿಗುಡಿ ಗುಂಡಾರದಲ್ಲಿ ಕುಂಕುಮ ಭಂಡಾರವಾಗಿ ಹೆಸರಿಗೆಅರ್ಧ ನಾರೇಶ್ವರಿ…ಆಗಿದ್ದು ಮಾತ್ರ ದೇವದಾಸಿ. ಕಾಡು ಮೇಡುಗಳಲ್ಲಿಚೆಲ್ಲಿದ ಹೆಣ್ಣಿನ ರಕ್ತದ ಕಲೆಗಳನ್ನು ನೋಡಿಭೂ ತಾಯಿ ಬಿರುಕೊಡೆಯಲಿಲ್ಲಗಂಗೆ,ತುಂಗೆ,ಕಾವೇರಿ,ಗೋದಾವರಿ ಎಲ್ಲಾ ಹೆಣ್ಣುಹೆಸರಿನ ನದಿಗಳು ಬರಿದಾಗಲಿಲ್ಲ ಸಾಕ್ಷಿಗಳಿದ್ದರೂಅಪರಾಧಿಗಳಿಗೆ ಶಿಕ್ಷೆ ಇಲ್ಲ..ನಿರಪರಾಧಿಯಾಗಿ ಬಂದವರನ್ನುನೋಡಿ ಓಡುತ್ತಿವೆ ಪ್ರಾಣಿಗಳುಮೃಗಗಳು ಬಂದವೆಂದು… ಮಹಾಭಾರತದಲ್ಲಿ ಅವಮಾನರಾಮಾಯಣದಲ್ಲಿ ಅನುಮಾನನವಭಾರತದಲ್ಲಿ ಅತ್ಯಾಚಾರದ ಬಹುಮಾನ ? ನಾಗರೀಕರಾಗದೆಎಷ್ಟು ಮುಂದುವರಿದರೇನು?ಮನುಷ್ಯತ್ವ ಇರದಯಾವ ರಾಜ್ಯ ಕಟ್ಟಿದರೇನು? ಹೆಣ್ಣು ನಿಜ ದುರ್ಗೆ,ಚಾಮುಂಡಿ,ಕಾಳಿ,ಮರ್ದಿನಿಯಾಗದೆಶತ ಶತಮಾನದ ಈ ಅನ್ಯಾಯ ತಪ್ಪಿದ್ದಲ್ಲ.. **********************************

ಮರ್ದಿನಿ ಆಗಲಿಲ್ಲ Read Post »

ಕಾವ್ಯಯಾನ

ಮನಿಷಾ

ಕವಿತೆ ಮನಿಷಾ ವೀಣಾ ನಿರಂಜನ್ ಮೊದಲೇ ಕುರುಡಿಯಾಗಿದ್ದನ್ಯಾಯ ದೇವತೆಯಮೂಗಿಯನ್ನಾಗಿಸಿದರು ಮಗಳೇನಿನ್ನ ನಾಲಿಗೆ ಕತ್ತರಿಸಿಅವರ ಗಂಡಸುತನಕ್ಕೆ ಧಿಕ್ಕಾರವಿರಲಿ ಅವರ ಬೆಚ್ಚನೆಯ ಮನೆಗಳಲ್ಲಿಬಚ್ಚಿಟ್ಟ ನಿಧಿಯಂತೆ ನೀನೂ ಕೂಡಅರಿತಿದ್ದರೆ ಸಾಕಿತ್ತು ಅವರುಹತ್ತೂ ಕಡೆ ಚಾಚಿದ ವಿಷ ಸರ್ಪಗಳಹೆಡೆ ಮುರಿದು ಕಟ್ಟುತ್ತಿದ್ದರು ಅರಿಯದಾದರೆ ಅವರುನಿನ್ನೊಳಗಿನ ಕುಡಿಯನ್ನುಹೊರಲಾರದಷ್ಟು ಪಾಪದಮೂಟೆ ಹೊತ್ತು ನಡೆದರುಸಾವೂ ಕೂಡ ಸಹಜವಾಗಿಸುಳಿಯಲಾರದಿನ್ನು ಅವರ ಬಳಿ ಇಲ್ಲಿ ವಿಲ ವಿಲ ಒದ್ದಾಡುತ್ತಿದ್ದಾಳೆನ್ಯಾಯ ದೇವತೆನಿನ್ನ ನೆತ್ತರ ಬಿಸಿಯ ಸೋಕಿಉರಿಯುತ್ತಿದ್ದಾಳೆ ನಖಶಿಖಾಂತಸತ್ಯದ ನಾಲಿಗೆಯು ನೇತಾಡುತ್ತಿದೆನಿನ್ನ ನಾಲಿಗೆಯ ಹಾಗೇ ತೀರ್ಪು ಏನಾದರೇನು ಮಗಳೇನಿನ್ನ ಜೀವಕ್ಕೆ ಬೆಲೆ ಕಟ್ಟಲಾದಿತೇಬೇಡ ಮಗಳೇನಿನ್ನ ಪಾಡು, ನಿನ್ನ ನೋವು ಮುಂದೆಂದೂಬಾರದಿರಲಿ ನಿನ್ನಕ್ಕ ತಂಗಿಯರ ಪಾಲಿಗೆ ಎಲ್ಲರೊಳಗಿನ ತಾಯಿ, ತಂಗಿ, ಅಕ್ಕ, ಮಗಳುಪ್ರಜ್ವಲಿಸುತಿರಲಿ ಸದಾಅವರ ಎದೆಯೊಳಗೊಂದು ಸೂಜಿಇರಿಯುತಿರಲಿ ಮೊನಚಾಗಿಕಳಚಿ ಬೀಳಲಿ ಪಾಪದ ಕೊಂಡಿಹರೇ ರಾಮ್ ಹರೇ ರಾಮ್ ******************************                

ಮನಿಷಾ Read Post »

ಕಾವ್ಯಯಾನ

ಹೊತ್ತು ಬಂದಿದೆ

ಕವಿತೆ ಹೊತ್ತು ಬಂದಿದೆ ಗಾಂಧಿ ನೀನುದಿಸಿದನಾಡಿನಲೀ… ತೊನೆವ ತರುಗಳಕತ್ತು ಹಿಚುಕಿಜಲದ ಕಣ್ಣಿಗಿರಿವ ಹೊತ್ತು ಬಂದಿದೆ ಹರಿವರಿವ ನದಿಯದಿಕ್ಕು ದಿವಾಳಿಯಾಗಿಸಿಬರಿದಾಗಿಸುವ ಹೊತ್ತು ಬಂದಿದೆ ಖಗ ಮೃಗ ಹುಳ ಹುಪ್ಪಟೆಗಳನ್ನು ಬಿಡದೇ ಹುರಿದುರಿದು ಮುಕ್ಕುವ ಹೊತ್ತು ಬಂದಿದೆ ಸಾವಿರಾರು ವರುಷಗಳ ತಪೋನಿರತ ಶಿಲಾತಪಸಿಗಳಎದೆಗೆ ಮದ್ದಿಕ್ಕುವ ಹೊತ್ತು ಬಂದಿದೆ ಕಿವಿಗಡಚಿಕ್ಕುವಬೈರಿಗೆಗಳನ್ನಿಕ್ಕಿನೆಲದೊಡಲ ರಕ್ತ ಬಸಿವ ಹೊತ್ತು ಬಂದಿದೆ ಹೊತ್ತಿಗೊತ್ತಿಗೆ ಉರಿವ ದಿನಕರನ ಸಖ ಓಜೋನನ ಛಿದ್ರವಾಗಿಸುವ ಹೊತ್ತು ಬಂದಿದೆ ಚಂದಿರನ ಅಂಗಳದಲ್ಲಿಳಿವಮಂಗಳನ ಕೇರಿಯಲ್ಲಿಸುತ್ತುವ ಹೊತ್ತು ಬಂದರೂ… ವಿಜ್ಞಾನ ಜ್ಞಾನವೋ,ಅಜ್ಞಾನವೋ ಮಂಕುಗವಿದ ಬುದ್ದಿಗೆ ಲದ್ದಿ ಮೇಯುವ ಹೊತ್ತು ಬಂದಿದೆ ನಿನ್ನ ಮೂರು ಮಂಗಗಳು ಖಾದಿ ವೇಷತೊಟ್ಟುಅಧಿಕಾರದ ದರ್ಪದಲ್ಲಿದಿಮಿ ದಿಮಿ ಕುಣಿದುಮಾನವೀಯತೆಯನ್ನುನುಂಗಿ ನೊಣೆಯುವ ಹೊತ್ತ್ತು ಬಂದಿದೆ ಮಂದಿರವಿತ್ತೆಂಬ ಸಾಕ್ಷ್ಯ ಹುಡುಕಿದವರಿಗೆಗುಮ್ಮಟ ಉರುಳಿಸಿದವರ ನಿರ್ದೋಷದ ಹುಸಿನಗೆಯು ಕಾಣದಹೊತ್ತು ಬಂದಿದೆ ಬಾಪೂಜಿ ನೀ ಕೊನೆಯುಸಿರೆಳೆಯುವಾಗಹೇ ರಾಮ್ ಎಂದು ಉಸಿರು ಚೆಲ್ಲಿದೆಯೋ ನಾ ಕಾಣೆಇದೀಗಅಯ್ಯೋ ರಾಮ ಎಂದೆನುತ ಗೋರಿಯಲ್ಲಿ ನಿಡುಸುಯುವಹೊತ್ತಂತು ಬಂದಿದೆ…ಬಂದೇ ಇದೆ.. *****************************

ಹೊತ್ತು ಬಂದಿದೆ Read Post »

ಕಾವ್ಯಯಾನ

ಫಿವಟ್ ಕವಿತೆ…

ಕವಿತೆ ಫಿವಟ್ ಕವಿತೆ…. ಹುಳಿಯಾರ್ ಷಬ್ಬೀರ್ 01 ಬರೆಯಲೆಂದುಕುಳಿತಾಗಅವಳನ್ನು ಬರೆದೆನನ್ನನ್ನು ನಾನೇಮರೆತೆ….! 02 ಕಣ್ಣಲ್ಲಿ ಕದ್ದುಮನಸ್ಸಲ್ಲಿಇಳಿಯುವ ಮುನ್ನಗಂಟಲಿಗೆಇಳಿಸಿದ್ದೆನೀ ಕೊಟ್ಟದೊಡ್ಡ ವರ…! 03 ಗುಂಡು ಅವಳುಇಬ್ಬರೂ ನಶೆಯೇಗುಂಡು ತಾತ್ಕಾಲಿಕ ನಶೆಅವಳು ನಶೆಯಪರಾಕಾಷ್ಠೆ….! 04 ಮನಸ್ಸಿಗೆನೈವೇದ್ಯ ಎಣ್ಣೆಯಲ್ಲಿಆಗಬೇಕಂತೆನೋವುನಿರಾಳವಾಗಲುಲೋಟ ಚಿಯರ್ಸ್ಎನ್ನಲು…! 05 ಕುಡಿದಷ್ಟುಮಾತು ಜಾಸ್ತಿ ಆಯಿತುಪದೇ ಪದೇಅವಳ ನೆನಪುಆಯಿತು…! **************************

ಫಿವಟ್ ಕವಿತೆ… Read Post »

ಕಾವ್ಯಯಾನ

ಗಾಯ

ಕವಿತೆ ಗಾಯ ಕಾತ್ಯಾಯಿನಿ ಕುಂಜಿಬೆಟ್ಟು ನಾನೇ ಒಂದು ಗಾಯ!ಆಳವಾಗುತ್ತಲೇ ಇರುತ್ತೇನೆಹೃದಯದ ತಳದವರೆಗೂ…!ನೋವಿನ ಹಲ್ಲಿಗೇ ನಾಲಗೆಯುಮತ್ತೆ ಮತ್ತೆ ತುಡಿಯುವಂತೆತಾನೇ ತಾನಾಗಿ ನೊಂದು ಕೀವಾಗಿ ನವೆಯಾಗಿಬೆರಳುಗಳನ್ನು ತುಡಿಸುತ್ತದೆನಿದ್ದೆಯಲ್ಲೂ ಅಭ್ಯಾಸವಾಗಿ! ” ಉಬ್ಬಸಕ್ಕಾದರೂ ಮದ್ದುಂಟು… ಅಭ್ಯಾಸಕ್ಕಿಲ್ಲ!” ಎ೦ದುಬಿಟ್ಟರುಹಾಗನ್ನುವುದೇ ಅಭ್ಯಾಸವಾಗಿದ್ದಗೀಳುತಜ್ಞರು! ಬದುಕಿನ ಕಷ್ಟಗಳನ್ನು ಹಾಡುಹಗಲಲ್ಲೇ ಕಂಡುಹನಿಹನಿದು ಬತ್ತಿವೆ ಕಂಗಳ ಕೆರೆಗಳು !ವಿಲಿವಿಲಿ ಒದ್ದಾಡುತ್ತಿವೆ ಕಣ್ಣ ಮೀನುಗಳು!ನಿದ್ದೆಯಲ್ಲಿ ನಕ್ಷತ್ರ ಸುಟ್ಟುಕಣ್ಣಬೊಂಬೆಗಳು ಉರುಳಿಬಾಯಿಯ ವಸಡಿಗೆ ಬೀಳುತ್ತವೆಹಲ್ಲುಗಳು ಕಳಚಿ ಹೃದಯಕ್ಕೇ ಉದುರಿಕಚ್ಚಿ ಕಚ್ಚಿ ಕಿತ್ತು ತಿನ್ನತೊಡಗುತ್ತವೆ!ಕೈಗಳು ತಲೆಯನ್ನೇ ಕಿತ್ತುಪಕ್ಕಕ್ಕೆ ಎಸೆಯುತ್ತವೆಮೆದುಳನ್ನೇ ಗೆದ್ದಲು ತಿನ್ನುವನೋವನ್ನು ಸಹಿಸಲಾಗದೆ ಚೀರಿ!ಮುಂಡವು ಮಂಡೆಯಿಲ್ಲದೆಯೇಆಗ ಹಾಯಾಗಿ ಊರೂರು ಸುತ್ತುತ್ತದೆ!ನೀನಾಗ ಬಂದು ನನ್ನ ರುಂಡವನ್ನುಮುಂಡಕ್ಕೆ ಜೋಡಿಸುತ್ತಿ” ಹೀಗೆಲ್ಲ ರುಂಡವಿಲ್ಲದೆ ಅಲೆಯಬೇಡ!” ಅನ್ನುತ್ತಿ! ನನ್ನ ರುಂಡ ಈಗಾಗಲೇಆಕ್ಷೋಹಿಣಿ ಚತುರಂಗ ಬಲಗಳಬಬ೯ರ ಕುರುಕ್ಷೇತ್ರ ಯುದ್ಧವನ್ನೇ ನೋಡಿಬಿಟ್ಟಿದೆಘಟೋತ್ಕಚನ ಮಗ ಬಬ೯ರಿಕನಂತೆಮು೦ಡವಿಲ್ಲದೆಯೇ… ಈಗ ಮತ್ತೆ ಬಾಳ ಪಯಣಮೊದಲoತೆಯೇನೀನು ಅಂದದ್ದಕ್ಕೆಅನ್ನಲಾರದ್ದಕ್ಕೆ!ಈ ಮೆದುಳು ಹೃದಯವೆಂಬಎರಡು ಗಾಯಗಳಿಗೆಮದ್ದೇ ಇಲ್ಲದ್ದಕ್ಕೆ.. ನಾನೇ ಒಂದು ಗಾಯ!ಇನ್ನೂ ಎಷ್ಟು ಆಳ! **************************************

ಗಾಯ Read Post »

You cannot copy content of this page

Scroll to Top