ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾಡುವ ಕನಸುಗಳು

ಕವಿತೆ ಕಾಡುವ ಕನಸುಗಳು ರಶ್ಮಿ ಹೆಗಡೆ ಒಮ್ಮೊಮ್ಮೆ ಕಾಡುವ ರಂಗುರಂಗಾದ ಕನಸುಗಳುಬಣ್ಣದಲ್ಲಿ ಮಿಂದ ಮುಸ್ಸಂಜೆಯ ರವಿಯಂತೆಕಣ್ಣಿಗೆ ಇನ್ನೇನು ಚಂದ ಎನ್ನುವಷ್ಟರಲ್ಲಿಮುಳುಗಿ ಮಂಗಮಾಯವಾಗುವುದೇಕೆ? ಯಾರಿಂದಲೋ ಬಾಡಿಗೆ ತಂದ ಭಾವನೆಗಳಲ್ಲಅವೆಲ್ಲವೂ ನನ್ನ ನೆನಪಿನ ಗರ್ಭದಲ್ಲಿಯೇ ಅಡಗಿಬೆಚ್ಚಗೆ ಕುಳಿತು ಸಮಯ ಮೀರಿದ ಮೇಲೆಎದೆಯ ಗೂಡಿನಿಂದ ಹೊರಬಂದವುಗಳೇ! ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿ ಹಾರಬೇಕಾದಆ ನೆನಪಿನ ಪಕ್ಷಿಗಳು ಇಂದು ಮತ್ತೆಮನದ ಪಂಜರದಲ್ಲೇ ಬಂಧಿಯಾಗಿವೆಅದಕ್ಕೆ ಸ್ವಾತಂತ್ರ್ಯ ಸಿಗಬೇಕಾದ್ದು ನನ್ನಿಂದಲೇ! ಶಿಥಿಲಗೊಂಡ ಭಾವಸೇತುವೆಯಲ್ಲಿಇಂದು ಹರೆಯವೂ ಇಲ್ಲ,ಹುಮ್ಮಸ್ಸೂ ಇಲ್ಲಎಂದೋ ಆಗಾಗ ನೆನಪ ಮಳೆ ಸುರಿದಾಗಎದೆಯಡಿಗೆ ನೀರು ಉಕ್ಕಿ ಹರಿವುದನು ಕಾಣುತ್ತೇನೆ ಈ ನೆನಪುಗಳೇ ಹೀಗೆ,ಕಾಡುತ್ತವೆ,ಬೇಡುತ್ತವೆಕೊನೆಗೆ ಅಸಹಾಯಕತನದಿಂದ ಮಿಡಿಯುತ್ತವೆಮರಳುಗಾಡಿನ ಮರೀಚಿಕೆಯಂತೆಆಸೆ ತೋರಿಸಿ ಕಡೆಗೊಮ್ಮೆ ಮರೆಯಾಗುತ್ತವೆ! ******************************

ಕಾಡುವ ಕನಸುಗಳು Read Post »

ಕಾವ್ಯಯಾನ

ಹೊಸ ಬಾಳಿಗೆ

ಕವಿತೆ ಹೊಸ ಬಾಳಿಗೆ ಶ್ವೇತಾ ಎಂ.ಯು.ಮಂಡ್ಯ ಹಳತು ಕಳೆದುಹೊಸ ವರ್ಷ ಮರಳಿಎಲ್ಲಿಂದಲೋ ಬಂದುಮತ್ತೆಲಿಗೋ ಸಾಗೋಈ ಬದುಕ ಹಾದಿಯಲಿಹೊಸ ಭರವಸೆಯ ಚಿಗುರಿಸಲಿ ರಾಗಯೋಗ ಪ್ರೇಮಸೌಂದರ್ಯಮೇಳೈಸಿ ಭೂರಮೆಯ ಸಿಂಗಾರಗೊಳಿಸಿರೆಂಬೆಕೊಂಬೆಗಳು ತೂಗಿ ಬಾಗಿನರುಗಂಪು ತಣ್ಣನೆಯ ಗಾಳಿ ಸೂಸಿಆನಂದವನೆ ಹಂಚಿವೆ ಈ ಹರುಷವು ಹೀಗೆ ಉಳಿಯಲಿಖಂಡ ಖಂಡಗಳ ದಾಟಿಅರೆಗೋಡೆ ಮಹಾಗೋಡೆಅರೆತಡಿಕೆ ಮಹಾಮನೆಗಳೊಳಗಿನರೋಗಗ್ರಸ್ತ ಮನಸುಗಳಲಿಸೊರಗದ ಸಂಜೀವಿನಿಯಾಗಲಿ ಮೈಮುದುಡಿ ಚಳಿಯೊಳಗೆಬಿಟ್ಟುಬಿಡದೆ ಕಾಡುವ ಶಾಪಗ್ರಸ್ತ ದಾರಿದ್ರಕ್ಕೆ ಬಲಿಯಾದ ಜೀವಗಳಿಗೆಬೇಡುವ ಕೈಗಳಿಗೆ ನೀಡುವಶಕ್ತಿಯ ನೀ ಇಂದಾದರುಹೊತ್ತು ತಾ ಹೊಸ ವರುಷವೇ ಬದುಕನ್ನೇ ಹಿಂಡಿದ ಕಾಣದ ಮುಖವುಕಾಣದೆ ಹೋಗಲಿ ಹಾಗೆಯೇಈ ಲೋಕದೊಳಗಿಂದ ಆಚೆಗೆಹೊಸ ಮುನ್ನುಡಿಹೊಸ ಕನ್ನಡಿಹೊಸ‌ಬಾಳಿನ ನಾಳೆಗೆ **************************

ಹೊಸ ಬಾಳಿಗೆ Read Post »

ಕಾವ್ಯಯಾನ

ಸಹಜ ಪ್ರೇಮ

ಕವಿತೆ ಸಹಜ ಪ್ರೇಮ ದೇವರಾಜ್ ಹುಣಸಿಕಟ್ಟಿ. ಅವಳದು ನನ್ನದು ಅಮರಪ್ರೇಮ ಅಲ್ಲವೇ ಅಲ್ಲ..ಕಾರಣ ಅವಳಿಗಾಗಿ ನಾನುಗೋರಿ ಕಟ್ಟಲಿಲ್ಲ..ವಿಷ ಉಣಿಸಲಿಲ್ಲ ಉಣ್ಣಲಿಲ್ಲ..ಇನ್ನು ಗೋಡೆ ಕಟ್ಟುವಬಾದಶಾಗಳು ಇರಲೇ ಇಲ್ಲಾ… ತಿಂಗಳಿಗೊಮ್ಮೆ ಅವಳಹೆಜ್ಜೆಗಳು ಭಾರವಾಗುತ್ತವೆ..ಆಗೆಲ್ಲ ಮನೆಯ ತುಂಬಾನನ್ನದೇ ಕಾರುಬಾರು..ಉಪ್ಪು ಹುಳಿ ಹೆಚ್ಚು ಕಡಿಮೆಆಗಿರುವ ಅನ್ನ ಸಾಂಬಾರು…ನನ್ನಂತಲ್ಲ ಅವಳು ಉಂಡು ಬಿಡುತ್ತಾಳೆತುಟಿಪಿಟಕ್ ಅನ್ನದೇ ಬಿಡದೇ ಚೂರು… ಮುನಿಸು ಬರುತ್ತೆ ಆಗಾಗ ಸಂತೆಯಲ್ಲಿಜೊತೆಯಾದ ಅಪರಿಚಿತ ಗೆಳೆಯನಂತೆಕಾರಣ ತುಸು ಹೊತ್ತಾಗಿ ರಾತ್ರಿ ಬಾರಿಂದ ಮರಳಿದ್ದು..ತುಸು ನಶೆ ಹೆಚ್ಚಾಗಿ ಪೆಚ್ಚುಪೆಚ್ಚಾಗಿ ಮಾತನಾಡಿದ್ದು..ತುಸು ಸಿಗರೇಟಿನ ಹೋಗೆಹೆಚ್ಚಾಗಿ ಉಸಿರಿದ್ದು….ಇದು ಹೆಚ್ಚೊತ್ತು ಇರದುಮತ್ತೆ ಅಪರಿಚಿತ ಗೆಳೆಯನಂತೆಯೇ ಕಾಣೆಯಾಗಿ ಬಿಡುತ್ತೆ ಸದ್ದಿಲ್ಲದಂತೆ… ಇರುಳು ಕಳೆದು ಹಗಲು ಹೊರಳುವಮುನ್ನ ಕರಗಿ ಮಂಜಿನಹನಿಯಂತೆ..ಮುಡಿಗೆ ಏರಿದ ಹಿಡಿ ಮಲ್ಲಿಗೆ…ಇಲ್ಲಾ ಒಂದ್ ಸಣ್ಣ ಬಿಗಿ ಅಪ್ಪುಗೆಸಾಕಿಷ್ಟೇ ಕಾರಣ ಅದಕೆ…ಅವಳು ಹೂವಾಗುತ್ತಾಳೆ ನಾನುದುಂಬಿ ಹೆಚ್ಚೇನು ಹೇಳಲಿ…ನಮ್ಮದು ಅಮರ ಪ್ರೇಮವಲ್ಲ..ಪ್ರೀತಿಯನೇ ಉಸಿರಾಡುವಂತೆಮಾಡಿದ್ದೇವೆ ಅಷ್ಟೇ…ಇಂಚಿಂಚು ತುಂಬಿದ್ದೇವೆ ಒಳಗೂ ಹೊರಗೂ ನಿಷ್ಠೆಯಿಂದ ಇಷ್ಟಿಷ್ಟೇ…ಹೊರಗೆ ಹೋಗಿ ಬರುವಾಗಲೆಲ್ಲ ಅವಳ ಕಂಗಳಲ್ಲಿಯ ಕಾಂತಿಯನ್ನೆ ಕನ್ನಡಿಯಾಗಿಸಿಕೊಂಡವ ನಾನುನನ್ನ ಮುಖಾರವಿಂದವನ್ನೇ ಮನೆಯ ಹೊಸ್ತಿಲ ಬೆಳೆದಿಂಗಳಾಗಿಸಿಕೊಂಡವಳು ಅವಳು..ಜೀವನದ ಸಂತೆಯಲಿ..ದಿನಗಳು ಸರಿದಿವೆ ಸದ್ದಿಲ್ಲದೆ ಮಗ್ಗುಲಲಿ…ಮತ್ತೆ ಹೇಳುತ್ತೇನೆ ನಮ್ಮದು ಅಮರ ಪ್ರೇಮವಲ್ಲ ಬಿಡಿ…ಒಂದಿಷ್ಟು ಪ್ರೀತಿ ಉಸಿರಿದ್ದೇವೆ ಹಗಲಿರುಳಿಡಿ… ನೆನಪಿದೆ ನನಗೆ ಮೊನ್ನೆ-ಮೊನ್ನೆ ಎನ್ನುವಹಾಗೆಆಗಸದ ಚಂದಿರನ ತಂದು ತೊಟ್ಟಿಲಲಿ ಇಟ್ಟಿದ್ದಾಳೆ…ನಕ್ಷತ್ರತಾರೆಗಳ ತೋರಿಸಿ ಉಣಿಸಿದ್ದಾಳೆ…ವಿಶ್ವ ವಿದ್ಯಾಲಯಗಳ ಮೀರಿದತಂದೆ ಎಂಬ ಪದವಿ ತಂದುನಿರಾಯಾಸವಾಗಿ ಮುಡಿಗೆರಿಸಿದ್ದಾಳೆ..ಅದಕ್ಕೆ ಅವಳು ವಿಶ್ವ ವಿದ್ಯಾಲಯನಾನು ನಿಷ್ಠೆಯ ವಿದ್ಯಾರ್ಥಿ…ಈಗಲೂ ಹೇಳುತ್ತೇನೆ ನಮ್ಮದುಅಮರ ಪ್ರೇಮ ಅಲ್ಲವೇ ಅಲ್ಲ….ಸಹಜ ಪ್ರೇಮ ಅಷ್ಟೇ..ನಾನು ಅವಳು ಬೆರೆತಿದ್ದೇವೆಎಷ್ಟೆಂದು ಗೊತ್ತೇ?ಹೆಚ್ಚೇನು ಅಲ್ಲ ಬರೀ ಒಂದಿಷ್ಟುಇಳಿ ಸಂಜೆಯಲಿಹಗಲು- ಇರುಳು ಬೆರೆತಂತೆ.. !!!ಕಣ್ಣು ರೆಪ್ಪೆಯನಗಲಿ ಇರದಂತೆ… !!!ಅಷ್ಟೇ ನಮ್ಮದು ಅಮರ ಪ್ರೇಮ ಅಲ್ಲವೇ ಅಲ್ಲ…ಪ್ರೀತಿಯನೆ ಉಸಿರಾಡಿದ್ದೇವೆ ಇಷ್ಟಿಷ್ಟೇ… ***************************

ಸಹಜ ಪ್ರೇಮ Read Post »

ಕಾವ್ಯಯಾನ

ಅಪ್ಪಣ್ಣನಿಗೊಂದು ಮನವಿ

ಕವಿತೆ ಅಪ್ಪಣ್ಣನಿಗೊಂದು ಮನವಿ ಎ.ಎಸ್.ಮಕಾನದಾರ ಅಪ್ಪಣ್ಣಎಷ್ಟೊಂದು ಕತ್ತಿಗಳುಸೇರಿಕೊಂಡಿವೆ ನಿನ್ನ ಹಸಬಿಯೊಳುಆ ಕತ್ತಿಗಳೇ ಮಾಡಿದ ಕ್ಷೌರಹೇಗೆ ಸೂಚಿಸಿ ಬಿಡುತ್ತವೆ. ಆ ಚಾಂದ ದಾಡಿ ಮುಸ್ಲಿಮನದೆಂದುಆ ಜುಟ್ಟು ಬ್ರಾಹ್ಮಣನನದೆಂದುಆ ಕೆಳದಾಡಿ ಸಿಖ್ಖನದೆಂದುಆ ಫ್ರೆಂಚ್ ದಾಡಿ ಕ್ರಿಶ್ಚಿಯನನದೆಂದು ಮೀಸೆ ಬಿಟ್ಟರೊಂದು ಜಾತಿಕೇಶ ಬಿಟ್ಟರೊಂದು ಜಾತಿಮುಡಿ ಕಟ್ಟಿ ದಾಡಿ ಬಿಟ್ಟರೊಂದು ಜಾತಿಎಲ್ಲವನು ಬೋಳಿಸಿಟ್ಟುಹೊಸದೊಂದು ವ್ಯವಸ್ಥೆನಿರ್ಮಿಸಬಾರದಿತ್ತೇ ಅಪ್ಪಣ್ಣ ನೀನುಅಣ್ಣ ಅಕ್ಕ ಅಲ್ಲಮರೊಂದಿಗೆಅನುಭವ ಮಂಟಪದ ಚುಕ್ಕಾಣಿಯಾಗಿದ್ದಿ ಯಾಕಣ್ಣ ಈ ವ್ಯವಸ್ಥೆಗೆಕಡಿವಾಣ ಹಾಕದೆ ಸುಮ್ಮನಾದೆಗಂಡಲ್ಲದೆ-ಹೆಣ್ಣಲ್ಲದೆ ಒಳಗಿರುವಆತ್ಮಕ್ಕೆ ಅನುಭವ ಮಂಟಪದಲಿಅಂತರಂಗ ಶುದ್ಧಿ ಮಾಡಿದ ನೀನೇಬಹಿರಂಗ ಶುದ್ಧಿಗಾಗಿಮಾಡಿದ ಈ ಕ್ಷೌರದಿಂದಅದ್ಹೇಗೆ ಅಶಾಂತಿ ತಾಂಡವವಾಡುತ್ತಿದೆ ? ಅಪ್ಪಣ್ಣನಿನಗೆ ನೆನಪಾಗಲಿಲ್ಲವೇಶೂನ್ಯನಾದ ಅಣ್ಣ ಬೆತ್ತಲಾದ ಅಕ್ಕ ಜಗದ ಕೊಳೆ ತೊಳೆಯುವ ಮಾಚಿದೇವ ತನ್ನ ಚರ್ಮವನೇ ಕತ್ತರಿಸಿ ಚಡಾವುಮಾಡಿದ ಹರಳಯ್ಯ ಕಲ್ಯಾಣಮ್ಮ ಯುದ್ಧಕ್ಕೆ ವಿದಾಯವಿತ್ತ ಅಶೋಕ ಬುದ್ಧನಾದ ಸಿದ್ಧ ಅಂತೆಯೇಎಸೆದು ಬಿಡಲು ಹೇಳುಎಲ್ಲ ಸಹೋದರರಿಗೆಈ ಜಾತಿ ಸೂಚಕ ಕತ್ತಿಗಳನು…….. **********************************

ಅಪ್ಪಣ್ಣನಿಗೊಂದು ಮನವಿ Read Post »

ಕಾವ್ಯಯಾನ

ಗಾಂಧಾರಿ ಸಂತಾನ

ಕವಿತೆ ಗಾಂಧಾರಿ ಸಂತಾನ ಕಾತ್ಯಾಯಿನಿ ಕುಂಜಿಬೆಟ್ಟು ಆ ಸೂಯ೯ ಹೆರುತ್ತಾನೆನೀಲಿ ನೀಲಿ ಮೋಡ ಪರದೆಗಳಹೆರಿಗೆ ಮನೆಯಲ್ಲಿನೀಳ ನೀಳ ಬೆಳಕು ಶಿಶುಗಳಕಣ್ಣುಗಳಿಗೆ ಕತ್ತಲ ಪಟ್ಟಿ ಕಟ್ಟಿಕೊಂಡುಈ ಗಾಂಧಾರಿಯ ಹಾಗೆ!ಹೊತ್ತದ್ದು ಹೆತ್ತು ವೀರಶತಜನನಿಹೆತ್ತದ್ದು ಸತ್ತು ದುಃಖಶತಜನನಿ!ಬಸಿರ ಹೊಸೆಹೊಸೆದು ಅತ್ತರೂಈಗ ವೇದವ್ಯಾಸನಿಲ್ಲ ಮಡಕೆಯಿಲ್ಲಮಹಾಭಾರತ ಮುಗಿದು ಹೋಗಿದೆಕುರುಕ್ಷೇತ್ರದಲ್ಲಿ ಸಾಲು ಗಭಾ೯ಪಾತ! ಆ ಸೂಯ೯ನದ್ದೋ ಅಕ್ಷಯ ಗಭ೯ !ಪ್ರಸವಬೇನೆಯೇ ಇಲ್ಲದೆ ಹೆರುತ್ತಾನೆತನ್ನ ಬೇನೆಯನ್ನೆಲ್ಲ ಭೂಮಿಯಹೆಂಗಸರ ಗಭ೯ಗಳಿಗೆ ಹಂಚಿಬಿಟ್ಟಿದ್ದಾನೆಹೆರುಹೆರುತ್ತಲೇ ಕಳೆದುಕೊಳ್ಳುತ್ತ ಬಿಕ್ಕಿಬಿಕ್ಕಿ ಕಿರಣಗಳನ್ನು ಹೆತ್ತು ಒಂದು ನಿರಾಳ ಸೊನ್ನೆಯಾಗಿಮುಳುಗುತ್ತಾನೆಇರುಳಿಡೀ ಕಡಲಿಗೆ ಪ್ರಸವ ಬೇನೆಅದರ ಕೊನೆಯ ಬಿಕ್ಕೊಂದು ಚಂದ್ರನಾಗುತ್ತದೆಹೆತ್ತು ಕೊಡುತ್ತದೆ ಸೂಯ೯ನನ್ನು ಆಗಸಕ್ಕೆಭೋಗ೯ರೆಯುತ್ತಿರುತ್ತದೆ ದಿನವಿಡೀಬಾರೋ ಬಾರೋ…. ಎಂದುಅವ ಮತ್ತೆ ಮುಳುಗುತ್ತಾನೆನಾಳೆ ಕಡಲ ಗಭ೯ದಿಂದ ಮುತ್ತಂತೆ ಎದ್ದುಕಿರಣಗಳನ್ನು ಹೆತ್ತು ಭೂಮಿಗೆ ಕೊಡಲುಭೂಮಿ ಪಡೆಯುತ್ತಾಳೆ ಹಡೆದುಕಳೆದುಕೊಳ್ಳಲು ಅವ ಹೆತ್ತ ಕಿರಣಗಳುಗಂಡು ಹೆಣ್ಣು ಜೀವ ಸಂಕುಲಗಳಗಭ೯ಗಳಲ್ಲಿ ಉರಿಯುವ ಅಂಡಾಣು ವೀರ್ಯಾಣುಗಳಾಗುತ್ತವೆಭ್ರೂಣಗಳ ಎದೆಗಳಲ್ಲಿ ಜೀವ ದೀಪಗಳಾಗಿ ಬೆಳಗುತ್ತವೆಕುಡಿದೀಪಗಳ ಆರದಂತೆ ಪೊರೆಯುತ್ತವೆ ತಾಯಿ ಹಣತೆಗಭ೯ ಕೊಳಗಳಲ್ಲಿ ತೇಲುತ್ತವೆ ಭ್ರೂಣಗಳು ಕಂಗಳಲ್ಲಿ ಕಿರಣಗಳ ಚಿಮ್ಮಿಸುತ್ತ ಬೆಳಕಿನ ಕಿರಣಗಳನ್ನುಬಲದ ಕೈಯಲ್ಲಿ ಕೊಡುತ್ತಲೇಎಡದ ಕೈಯಲ್ಲಿ ಎಳೆದು ನುಂಗುತ್ತಲೇ ಇರುತ್ತಾನೆ ಅವ ಜೀವ ದೀಪಗಳನ್ನುಪ್ರಾಣಿ ಪಕ್ಷಿ ಕ್ರಿಮಿ ಕೀಟ ಮನು ಸಂಕುಲಈ ಗಾಂಧಾರಿಯದ್ದೇ ಸಂತಾನಹೊತ್ತದ್ದನ್ನು ಹೆತ್ತು ಭೂಮಿಗೆ ತೆತ್ತು ಕಾಡ್ಗಿಚ್ಚಲ್ಲಿ ಸುಟ್ಟು ಹೋಗುತ್ತಲೇ ಇರುತ್ತವೆಆ ಸೂಯ೯ನ ಬೆಳಕಿನ ಕಿರಣವೊಂದುಬೆಂಕಿಕೊಳ್ಳಿಯಾಗಿ ಎದೆಹೊಕ್ಕಮಸಣದ ಕ್ಷಣದಲ್ಲಿ ****************************

ಗಾಂಧಾರಿ ಸಂತಾನ Read Post »

ಕಾವ್ಯಯಾನ

ಕ್ರಿಸ್ತನಿಗೆ ಒಂದು ಪ್ರಶ್ನೆ

ಕ್ರಿಸ್ತನಿಗೆ ಒಂದು ಪ್ರಶ್ನೆ ಅಕ್ಷತಾ ರಾಜ್ ನೀನಂದು ನೋಡಿದೆಯೆಂದರು….ಯಾವ ಹೊಸರೂಪವಿತ್ತು ಬಾನಿನಲ್ಲಿ?ಹೊಳೆವ ನಕ್ಷತ್ರವೇ! ಅಥವಾ ಕಾರ್ಮುಗಿಲೇ!ಇದ್ಯಾವುದೂ ಅಲ್ಲವೆಂದರೆ ಉಲ್ಕೆ ಪ್ರವಾಹವೇ?ಯಾವುದೂ ಅರ್ಥವಾಗದಿದ್ದಾಗ ನಿನ್ನ ಹುಟ್ಟೆಂದರುಹೌದೇ ! ನಿನ್ನ ಹುಟ್ಟಷ್ಟು ಅಪರೂಪವೇ ಬಿಸಿಲು ಬೆಳ್ದಿಂಗಳಂತೆ? ನೀನಂದು ಅತ್ತೆಯೆಂದರು….ಯಾವ ತಾಪದ ಹನಿ ತೋಯ್ದಿತ್ತು ನೆಲ ?ಚುಚ್ಚಿದ ಮೊಳೆಯದ್ದೇ ! ಅಥವಾ ಹೊತ್ತ ಶಿಲುಬೆಯದ್ದೇ!ಇದಾವುದೂ ಅಲ್ಲವೆಂದರೆ ಮುಳ್ಳುಕೀರೀಟದ ಭಾರವೇ?ಯಾವುದೂ ಅರ್ಥವಾಗದಿದ್ದಾಗ ತನುವಿನ ನೋವೆಂದರುಹೌದೇ ! ನಿನ್ನ ಕಂಬನಿಯಷ್ಟು ದುರ್ಬಲವೇ ಮಂಜಿನಂತೆ ? ನೀನಂದು ನಕ್ಕೆಯೆಂದರುಮತ್ತೆ ಮೂರು ದಿನದೊಳಗೆ ಎದ್ದು ಬಂದಾಗಯಾವ ಸಂತಸಕ್ಕಾಗಿ ಮುಖ ಅರಳಿತ್ತು?ತೆರೆದ ಪೆಟ್ಟಿಗೆಗಾಗಿ ! ಅಥವಾ ಮಾಸು ಗಾಯಕ್ಕಾಗಿ !ಅಲ್ಲವೆಂದರೆ ಎದುರಿದ್ದವರಿಗಾಗಿ ?ಅರಿವಾಗದೆಯೇ ಮತ್ತೆ ಹುಟ್ಟಿಬಂದ ಸಂತಸವೆಂದರುಹೌದೇ ! ನಿನ್ನ ನಗು ಅಷ್ಟು ಅಪರೂಪವೇ ಕುರುಂಜಿಹೂವಿನಂತೆ ? ತಿಳಿಯಲೇ ಇಲ್ಲ, ನೀನು ಬಂದು ಹೋಗಿರುವುದುಆದರೂ ಚರಿತ್ರೆಯಾಯಿತು ನೀನಿದ್ದ ಆ ಮಧ್ಯಕಾಲಪೂರ್ವಾರ್ಧವೋ ! ಉತ್ತರಾರ್ಧವೋ ! ಶಕೆಯಾಯಿತು ಕಾಲನಾವೂ ಇದ್ದೇವೆ ಅರ್ಥವಾಗದ ಅದೇ ಅರ್ಧದೊಳಗೆ **********************************

ಕ್ರಿಸ್ತನಿಗೆ ಒಂದು ಪ್ರಶ್ನೆ Read Post »

ಕಾವ್ಯಯಾನ

ಮುಗುಳು

ಮುಗುಳು ವೀಣಾ ರಮೇಶ್ ಇರುಳ ಸೆರಗೊಳಗೆತಿಳಿಮೌನ ಸುರಿದುಬಿಗುಮಾನ ಕಳೆದುಬೆರೆತು ಗಂಧದೊಳಗೆಈ ಮನವದು ಬಿರಿದುನಿನ್ನ ಸನಿಹದಲಿಮೌನವದು ಘಾಸಿ ಬಯಲು ಅಲಯದಲಿಹಕ್ಕಿ ಹಾರುತಿದೆನಿನ್ನನೆನಪುಗಳ ರೆಕ್ಕೆಕಟ್ಟಿ, ಪ್ರತಿದಿನವೂ ಸೋತಿದೆಹಾರಿ ಬರಲೇನು ಈಹೃದಯ ತಟ್ಟಿ ಮುಸುಕು ಬೀರಿದ ಮುಗುಳುಲಜ್ಜೆಯೊಳಗೆ ಅದೇ ನೀನುಸಜೆಯಾಗಿದೆ ಪ್ರೀತಿಯಸರಳೊಳಗೆ ನಾನು ಎಳೆದು ಬಿಡು ಮುಸುಕುಬೀರಿ ಮಲಗಿದ,ಮೌನದ ಪರದೆನಿನಗಲ್ಲವದು ಶೋಭೆನಿನ್ನ ಮುಗುಳುನಗುವದು ಹೊತ್ತು ತರದೆಮೌನ ಕೋಟೆಗೆ ಪ್ರಭೆ **************************

ಮುಗುಳು Read Post »

ಕಾವ್ಯಯಾನ

ಹಾಯ್ಕು

ಹಾಯ್ಚಳಿ! ಶಾಲಿನಿ ಆರ್. ೧)ಚಳಿ ಸುಳಿಗೆ    ಶಿಲೆಯಾದಳವಳು    ಕರಗದಂತೆ ೨)ಬೆಚ್ಚಿಸದಿರು    ಬೆಚ್ಚಗಿಡು ನೆನಪಾ    ಕೊನೆ ಚಳಿಗೆ ೩)ಮಂಜಿನ ಹನಿ    ಕರಗಲರಿಯದು    ಬೆಚ್ಚಗಾದರೂ, ೪)ಬಿರಿದ ತುಟಿ    ನೆನಪಿಸುತಿದೆಯೋ,    ವಸಂತ ಋತು, ೫)ಬಿಸಿ ಬಿಸಿ ಚಾ    ಮುಂಜಾನೆಯ ಚಳಿಗೆ    ನೀ ನೆನಪಾದೆ, ೬)ಹಗಲು ಮಾಯ    ಇರುಳ ಹಾಸಿನ ಮೇಲೆ    ಚಳಿ ಗಾಳಿಗೆ ೭)ನಮ್ಮೀ ಪ್ರೀತಿಗೆ    ಮರೆಯಾಯಿತೇನು    ಹಗಲು ನಾಚಿ, ೮)ತೇವಗೊಂಡಿದೆ    ಮತ್ತೆ ಆರುವ ಮುನ್ನ    ಹೇಮಂತ ಋತು, ೯)ಮುಗಿಯದಿದು    ಮಾಗಿ ಮುಗಿವ ಮುನ್ನ    ಮಬ್ಬಿನ್ಹಗಲು ೧೦)ಹಗಲು ನುಂಗಿ       ಬಿಗಿಯಾದವು ಇರುಳು       ಬಿಗುಮಾನದಿ ******************    

ಹಾಯ್ಕು Read Post »

ಕಾವ್ಯಯಾನ

ಯುಗ ಯುಗದ ಸೀತೆಯರು

ಯುಗ ಯುಗದ ಸೀತೆಯರು ರೇಶ್ಮಾಗುಳೇದಗುಡ್ಡಾಕರ್ ಇದು ಚರಿತ್ರೆಯ ಅವತಾರವಲ್ಲನಿತ್ಯವು ಉದ್ಭವಿಸುವಉದ್ವೇಗಗಳಿಗೆ ಇತಿಹಾಸಮರುಕಳಿಸುತ್ತಲೇತನ್ನ ಇರವ ಸಾಧಿಸುತ್ತದೆಯಲ್ಲ … ರಾಮನಿಲ್ಲದ ಸೀತೆಯರಿಗೆಕಮ್ಮಿ ಇಲ್ಲ ಈ ಜಗದಲ್ಲಿಒಡಲ ಕುಡಿಗಾಗಿ ಬದುಕಸವೆಸುವಳು ಕಂಡವರಸೆರಗಲ್ಲಿ ಗಂಡ ಬಿದ್ದರು ತನ್ನಬೆವರ ಹನಿಯ ದೀಪವಾಗಿಸಿಮನೆಯ ಬೆಳಗುವಳು …. ನೊರೆಂಟು ಮಾತುಗಳುಹಾದಿ – ಬೀದಿಯ ರಂಪಗಳುಎಷ್ಟಿದ್ದರು ಮನವದು ಗಟ್ಟಿಯಾಗುತ್ತಲೆಸಾಗುವದು ಕಲ್ಲು ಬಂಡೆಯನ್ನು ಮೀರಿಸಿಬದುಕಿನ ದಾರಿಯ ಹಿಡಿಯುವುದು ಸಮಯದೊಂದಿಗೆ ಓಡಿತಿಂಗಳ ಪಗಾರವನು ಕಾಪಿಟ್ಟುಪುಟ್ಟ ಪುಟ್ಟ ಕನಸ ನೇರವೇರಿಸಿತನ್ನ ಒಡಲ ಸಿರಿಗಾಗಿ ನಗುವ ಕಾಣುವಳುಎಲ್ಲ‌ ನೋವ ಮರೆತು ….. ತ್ರೇತಾಯುಗದ ಸೀತೆಗೆ ಕಾಡಾದರೂ ಇತ್ತು ;ನವಯುಗದ ಹೆಣ್ಣುಗಳಿಗೆಕಾಂಕ್ರೀಟ್ ಕೋಣೆಯು ದಹಿಸುವದುಅಂತರಾತ್ಮವ ಬಡಿದು ಹಿಡಿದುಹಿಪ್ಪೆಮಾಡಿ ಸಂತಸ ಪಡುವದು ..! ಸೀತೆಯ ಯುಗವು ಅಳಿಯದೆನವನವೀನ ಸಮಸ್ಯೆಗಳ ಸರಮಾಲೆಯಲ್ಲಿರೂಪಾಂತರಗೊಂಡು ಹೊಸಮನ್ವಂತರ ವಾದರೊ,ಅವಳ ನೋವಿನ ಛಾಯೇ ಉಳಿಸಿಕೊಂಡುಮತ್ತೆ ಮತ್ತೆ ಅವತರಿಸುತಿಹುದು …. *************************************

ಯುಗ ಯುಗದ ಸೀತೆಯರು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ಹಸಿದ ಕೂಸಿಗೆ ಹಾಲಿಲ್ಲದೆ ಅಳುತಿದೆ ಸಖಿಸೊಸಿದ ಹಾಲಿಗೆ ವಿಷವು ಬೆರೆತಿದೆ ಸಖಿ ದುಡಿವ ಕೈಗೆ ಕೆಲಸವಿಲ್ಲದೆ ನೊಂದಿದೆ ಬದುಕುಗಗನಕ್ಕೆರಿದ ಬೆಲೆ ಕಂಡು ಮನ ಒದ್ದಾಡುತಿದೆ ಸಖಿ ಉಳ್ಳವರ ಉಡಿ ತುಂಬಿ ತುಳುಕ್ಯಾಡಿ ಹೋಗಿವೆಬಡವರ ಮನೆ ದೀಪಕೆ ಎಣ್ಣೆಇಲ್ಲದೆ ಆರುತಿದೆ ಸಖಿ ಎಲ್ಲಿಯ ತನಕ ಹುಚ್ಚಾಟ ಕಚ್ಚಾಟ ತಿಳಿಯದುಮನು ಕುಲಕೆ ಹೊಸೆದು ಬತ್ತಿ ಇಡುತಿದೆ ಸಖಿ ಮರುಳ ನಮ್ಮನಾಳುವ ದೊರೆಗೆ ಸಿರಿವಂತರ ಚಿಂತಿನಾಡು ಹಾಳಾಗುತ ನಾಳೆ ಹತ್ತಿರ ಬರುತಿದೆ ಸಖಿ ******************************************

ಗಜಲ್ Read Post »

You cannot copy content of this page

Scroll to Top