ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮುನ್ನಡೆಗೆ ಹಿಂಬಾಗಿ

ಕವಿತೆ ಮುನ್ನಡೆಗೆ ಹಿಂಬಾಗಿ ಹರೀಶ ಕೋಳಗುಂದ ಕಣ್ಣ ಪರದೆಯ ಮೇಲೆ ಓಡುವಬಣ್ಣ ಬಣ್ಣದ ಚಿತ್ರಗಳುಉರುಳುವ ಗಾಲಿಚಕ್ರದ ಪರಿಧಿಯಲಿಸರಿದು ಮರೆಯಾಗುವ ಮೈಲುಗಲ್ಲುಗಳುದೂರ ತೀರದಲ್ಲೆಲ್ಲೋ ಇಳಿಬಿದ್ದು ನೆಲಕಚ್ಚಿದಾಕಾಶಕಾಗಜದೋಣಿಯ ಬಟ್ಟಲಿಗೆ ತೊಟ್ಟಿಕ್ಕುವ ಪಾತಾಳಗಂಗೆಭೂಮಧ್ಯರೇಖೆಗೂ ಭ್ರಮಣದ ನಶೆಇರುಳು ಬೆಳಕಿನಾಟಗೇಲಿ ನಗುವ ಕತ್ತಲುಬೆಂಕಿಯುಗುಳುವ ಮುಗಿಲುತಣ್ಣಗೆ ಸುಡುವ ಹಸಿವ ಜ್ವಾಲೆಕುದಿವ ಮೌನತುಮುಲಗಳ ಅದುಮಿಟ್ಟಂತೆಲ್ಲಾರೆಕ್ಕೆ ಬಡಿವ ತವಕಮಂಜು ಹೊದ್ದು ಮಲಗಿದ ಬೂದಿಯೊಳಗೂಹೆಪ್ಪುಗಟ್ಟಿ ಕುಳಿತ ಅಗ್ನಿಶಿಲ್ಪಜೀವದುಸಿರಿನ ಕಾತರಉರಿವ ಮಂದಾಗ್ನಿಯ ಬುತ್ತಿಗೆ ಕೈಯಿಕ್ಕುವ ತುಡಿತದೊಂದಿಯಾಗದ ಕಟ್ಟಿಗೆಯ ನಿರಾಶಾಭಾವನೋಯುವ ಕರುಳ ಕಣ್ಣ ಹನಿಗೆಚಿಗುರೊಡೆವ ಸಾಂತ್ವನದ ಬೆರಳುಒಂದೋ ಎರಡೋಒಡಕಲು ಬಿಂಬಕ್ಕೆ ಕೈ ಚಾಚಿ ಕುಳಿತ ಮನದಕ್ಕಿಸಿಕೊಂಡದ್ದು ಏನನ್ನೋಬೆನ್ ತಿರುಗಿಸಲು ಸೋಲಿನ ಭಯಅಮೆ ನಡಿಗೆಯೋಬಸವನ ಹುಳುವಿನೋಟವೋಮುನ್ನಡೆಗೆ ಹಿಂಬಾಗಿದಾರಿ ಸಾಗಲೇಬೇಕುಪಯಣ ಮತ್ತೆ ಶುರುವಾಗಲೇಬೇಕುಹೆಜ್ಜೆ ಇಟ್ಟಲ್ಲೆಲ್ಲಾ ಬೇರೂರಬೇಕುಕತ್ತರಿಸಿದಷ್ಟೂ ಮತ್ತೆ ಮತ್ತೆ ಹಬ್ಬುವಲಂಟಾನಾ ಜಿಗ್ಗಿನ ಹಾಗೆ *******************************

ಮುನ್ನಡೆಗೆ ಹಿಂಬಾಗಿ Read Post »

ಕಾವ್ಯಯಾನ

ಹೊಸದಾಗುವುದಾದರೆ…!

ಕವಿತೆ ಹೊಸದಾಗುವುದಾದರೆ…! ಅನಿತಾ ಪಿ. ಪೂಜಾರಿ ತಾಕೊಡೆ ಎರಡು ಸಾವಿರದ ಇಪ್ಪತ್ತೊಂದರ ಪುಟಗಳಲಿಏನಾದರೂ ಹೊಸದಾಗುವುದಾದರೆಆ ಹೊಸತಿನೊಳು ಬದಲಾಗುವುದಾದರೆ…! ಸ್ವಾರ್ಥದ ಕಿಚ್ಚಿಳಿದು ಸೌಹಾರ್ದತೆ ಬೆಸೆದುಕ್ರೌರ್ಯವಳಿದು ಮಾನವೀಯತೆ ಮೊಳೆಯಲಿನಾನೆಂಬ ಅಹಂ ಮರೆತು ನಾವು ನಮ್ಮವರೆಂದುಉಳ್ಳವನು ಇಲ್ಲದವನ ಆಂತರ್ಯವನು ತಿಳಿಯಲಿ ಕಾರಣಗಳು ಸಂಬಂಧಗಳ ದೂರೀಕರಿಸದೆ ಸಕಾರಣಗಳು ಒಡೆದ ಮನಸ್ಸುಗಳನು ಕೂಡಿಸಲಿಬುದ್ಧಿಯು ಅತಿಯಾಸೆಯ ಕೈಗೆ ಸಿಲುಕದೆನೆಮ್ಮದಿಯ ಬದುಕಿಗಷ್ಟೆ ಸೀಮಿತವಾಗಿರಲಿ ಬೇಕು ಬೇಡಗಳ ನಡುವೆ ಸ್ವಾರ್ಥದೆಳೆಗಳು ಬಂದು ಅಂತರ ನಿರಂತರವಾಗದಿರಲಿಆಪ್ತ ಪರಮಾಪ್ತತೆಯ ಆಂರ್ತರ್ಯದ ಒಲವುಪದಗಳಲಿ ಹೊಳೆದು ಮಾಸುವ ಬಣ್ಣವಾಗದಿರಲಿ ಈ ವರ್ಷದಲಿ ಹೊಸತು ಹೀಗೂ ಒಂದಿರಲಿವೈರಾಣುವಿನಲ್ಲಿ ವಿನಾಶದ ಗುಣವಳಿದುಜೀವಕ್ಕೆ ಜೀವ ಕೊಡುವ ಸಂಜೀವಿನಿಯಾಗಲಿಈ ಸೃಷ್ಟಿಯಲಿ ಪ್ರತಿಯೊಂದು ಜೀವಿಗೂಬದುಕುವ ಸಮಾನ ಅವಕಾಶವಿರಲಿ ಎರಡು ಸಾವಿರದ ಇಪ್ಪತ್ತೊಂದರ ಹೊಸ್ತಿಲಿಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರುವ  ****************************

ಹೊಸದಾಗುವುದಾದರೆ…! Read Post »

ಕಾವ್ಯಯಾನ

ದಾಟಿದೆವು ನಾವೂ… ಎರಡಿಪ್ಪತ್ತರ ವರುಷ

ದಾಟಿದೆವು ನಾವೂ… ಎರಡಿಪ್ಪತ್ತರ ವರುಷ ಅನಿತಾ ಪಿ. ಪೂಜಾರಿ ತಾಕೊಡೆ ಹಾಗೆಯೇ ಕಳೆದು ಹೋಗಿಲ್ಲ…!ಇದ್ದಲ್ಲಿ ಇರುವ ಹಾಗೆಯೇಇರುವಷ್ಟಕ್ಕೆ ಹೊಂದಿಸಿಕೊಳ್ಳುವ ನೆಲೆಯಲಿಚಿತ್ರ ವಿಚಿತ್ರದೊಳ ಸತ್ಯವನು ಅರುಹಿಜೀವ ಜೀವನದ ಒಳಮರ್ಮವನುಕಲಿಸಿಯೇ ತೀರಿತಲ್ಲಾ ಎರಡಿಪ್ಪತ್ತರ ಈ ವರುಷ ‘ಒಂದು ವರ್ಷದ ಲೆಕ್ಕಬಿಟ್ಟೇ ಬಿಡಬೇಕು’ ಎಂದವರೆಲ್ಲ ಕೇಳಿ…!ಹಾಗೆಯೇ ಕಳೆದು ಹೋಗಿಲ್ಲ ಈ ವರ್ಷಜಗದಗಲ ಗಣ್ಯ ನಗಣ್ಯಗಳ ಚಿತ್ರಪಟಗಳನುತಿರುಗಾ ಮುರುಗಾ ಮಾಡಿಹಿತ ಅಹಿತಗಳ ನಡುವೆ ತೂಗಿಸಿಮುಖ್ಯ ಅಧ್ಯಾಯವನೇ ತೆರೆದಿರಿಸಿತ್ತಲ್ಲಾ…! ಕಾಸು ಮೋಜಿನ ಪರಾಕಾಷ್ಠೆಯಲಿಕಳೆದು ಹೋದವರನೂಅಡ್ದ ದಾರಿಯನಪ್ಪಿಕೊಂಡು ಬೀದಿ ಬೀದಿ ಸುತ್ತುವವರನೂಅತಂತ್ರದ ಸುಳಿಯಲಿಟ್ಟು ಉಪ್ಪು ಖಾರ ಬೆರೆಸಿಎರಡಿಪ್ಪತ್ತರ ನಲುಗಿನ ಶ್ಲೇಷೆಯಲಿ ತಿಳಿ ಹೇಳದೆ ಬಿಡಲಿಲ್ಲ ಅರ್ಥ ಸ್ವಾರ್ಥಗಳು ಎಲ್ಲೆ ಮೀರದ ಹಾಗೆಇರುವಷ್ಟು ದಿನದ ಬದುಕಿನ ಮೌಲ್ಯವನುಅಳೆದಳೆದು ತೋರಿಸಿದ ರೀತಿಯ ಸಲುವಾಗಿಯೇಸೇರಿತೊಂದು ವರುಷ ಇತಿಹಾಸದ ಮುಖ್ಯ ಪುಟದೊಳಗೆ ದಾಟಿದೆವು ನಾವೂ…ಹೊಸ ಅರಿವು ಹೊಸದೊಂದು ತಿರುವಿನೊಡನೆಎರಡಿಪ್ಪತ್ತರ ವರುಷವನುಕಹಿಯನು ಮರೆತು ಸಿಹಿಯನು ನೆನೆದುಬರೀ ಇಂದಷ್ಟೆ ಅಲ್ಲ ಹೊಸದಾಗಬೇಕು ಪ್ರತಿ ನಾಳೆಯೂ **********

ದಾಟಿದೆವು ನಾವೂ… ಎರಡಿಪ್ಪತ್ತರ ವರುಷ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಶೋಕ ಬಾಬು ಟೇಕಲ್. ನೀ ಮಾಡಿದ ಒಲವಿನ ಗಾಯ ಮಾಗಿಸಿತು ಈ ಮಧು ಬಟ್ಟಲುದೂರ ತೊರೆದ ಭಾವಗಳಿಗೆ ವಿದಾಯ ಹೇಳಿಸಿತು ಈ ಮಧು ಬಟ್ಟಲು ಕ್ಷಣ ಕ್ಷಣದ ರೋದನವನ್ನು ಸಂತೈಸಿ ಲಾಲಿಸಿ ಪಾಲಿಸಿದೆಪ್ರತಿ ದಿನವೂ ಮಮತೆಯ ಮಡಿಲಾಗಿ ಆರಾಧಿಸಿತು ಈ ಮಧು ಬಟ್ಟಲು ಬಾಂದಳದಿ ಕೆಂಪ್ಹರಡುವ ರವಿಯೂ ನಾಚಿ ನಿಬ್ಬೆರಗಾಗುತಿದ್ದಇಳಿಸಂಜೆಗೂ ರಮಿಸಿ ಅಭ್ಯಂಜನ ಮಾಡಿಸಿತು ಈ ಮಧು ಬಟ್ಟಲು ಸುಯ್ ಗುಡುವ ಗಾಳಿಯೂ ಸದ್ದಡಗಿ ಪಲ್ಲಂಗದಲಿ ಮಲಗಿದೆನಿನ್ನ ಭಾವ ಭಂಗಿಯ ಕ್ಷಣ ಹೊತ್ತು ಮರೆಸಿತು ಈ ಮಧು ಬಟ್ಟಲು ಜರಿವ ಜಗಕೂ ಅರಿವಿದೆ ಅಬಾಟೇ ನೊಂದ ಜೀವವೆಂದುಮೋಹದ ಮದರಂಗಿಯ ಶಪಿಸಿತು ಈ ಮಧು ಬಟ್ಟಲು ************************************

ಗಜಲ್ Read Post »

ಕಾವ್ಯಯಾನ

ಪಯಣ

ಕವಿತೆ ಪಯಣ ಅಕ್ಷತಾ‌ ಜಗದೀಶ ಕಾನನದ ಒಡಲಾಳದಲ್ಲಿ ಹುಟ್ಟಿಕಲ್ಲು ಮಣ್ಣುಗಳ ದಾಟಿಕೆಂಪಾಗಿ ತಂಪಾಗಿ…ಕೊನೆಗೆ ಎಲ್ಲರೂ ಬಯಸುವಜಲವಾಗಿ ಹರಿದು..ಸಾಗುವ ದಾರಿಯುದ್ದಕ್ಕೂಹೊಲ ಗದ್ದೆಗಳಿಗೆ ನೀರುಣಿಸಿಮನುಕುಲದ ಮನತಣಿಸಿಜಲಧಾರೆಯಾಗಿ ಧುಮುಕಿ..ಅಂಧಕಾರಕ್ಕೆ ಬೆಳಕಾಗಿಜೀವರಾಶಿಗೆ ಉಸಿರಾಗಿಭೂಮಿ ತಾಯಿಯ ಹಸಿರುಡುಗೆಯಾಗಿಹರಿವ ಓ ನದಿಯೇ…ಏನೆಂದು ಹೆಸರಿಸಲಿ ನಾ ನಿನಗೆಗಂಗೆ, ತುಂಗಾ,ಕಾವೇರಿ, ಶರಾವತಿಸ್ವಾರ್ಥವಿಲ್ಲದ ಓ ಜಲರಾಶಿಕೂಡುವಿರಿ ಆಳವಾದ ಸಾಗರಕೆಅಗಾಧ ಜಲರಾಶಿಯ ಮಿಲನಕೆ..ನಿಸ್ವಾರ್ಥದೊಂದಿಗೆ ಓ ತೊರೆಯೆನಿನ್ನ ಜನನ..ಸಾರ್ಥಕತೆಯೊಂದಿಗೆ ಸಾಗಿತುನದಿಯಾಗಿ ನಿನ್ನ ಪಯಣ…

ಪಯಣ Read Post »

ಕಾವ್ಯಯಾನ

ಜೋಡಿ ಹೃದಯಗಳು

ಕವಿತೆ ಜೋಡಿ ಹೃದಯಗಳು ತೇಜಾವತಿ ಹೆಚ್. ಡಿ. ಆದಿಯಿಂದ ಅಂತ್ಯದವರೆಗೂಎಂದೆಂದಿಗೂ ಸಂಧಿಸದಸಮನಾನಂತರ ರೇಖೆಗಳು ಅವು ಪರಸ್ಪರ ಜೋಡಿಜೀವಗಳಂತೆಜೀವಿಸುವವು ಅನಂತದವರೆಗೆ ಒಂದನ್ನಗಲಿ ಮತ್ತೊಂದುಅರೆಘಳಿಗೆಯೂ ಬಿಟ್ಟಿರದ ಬಂಧ ಹೆಗಲಿಗೆ ಹೆಗಲು ಕೊಟ್ಟು ಬದುಕ ರಥ ಎಳೆಯುವ ಜೋಡೆತ್ತುಗಳು ಅವು ಸಮಭಾರ ಹೊತ್ತು ಸಹಜೀವನ ನಡೆಸುವಸರಳ ರೇಖೆಗಳು ಸಾಗುವ ಪಥದಲ್ಲಿ ನೂರು ಅಪಘಾತ ಸಂಭವಿಸಿದರೂನಂಬಿಕೆಯ ಹೊರೆತುಮತ್ಯಾವ ಬೇಡಿಕೆಗಳನ್ನೂನಿರೀಕ್ಷಿಸದ ನಿಸ್ವಾರ್ಥ ಜೀವಗಳು ಬೇಕಂತಲೇ ತೂರಿಬರುವ ನೆರೆಗಳೆದುರುಕೇವಲ ಆತ್ಮಶಕ್ತಿಯಿಂದಲೇ ಎದುರು ಈಜುವ ನಕ್ಷತ್ರಮೀನುಗಳು ಗಟಾರದೊಳಗಿನ ರಾಡಿಯೆಲ್ಲಾ ಮೇಲೇರಿಶನಿ ಬೇತಾಳನಂತೆ ಹೆಗಲಿಗೇರಿದರುಮೈಡೊದವಿ ಚಿಮ್ಮವ ಸಿಹಿಬುಗ್ಗೆಗಳು..ಉಸಿರುಗಟ್ಟುವ ಕೊನೆಯ ಘಳಿಗೆಯಲ್ಲೂತುಟಿ ಎರಡಾಗದ ಸ್ಥಿರ ನಾಮಗಳು.. ಕಾರ್ಮೋಡಗಳ ನಡುವೆ ಬಿಳ್ಮಿಂಚು ಹುಡುಕುತ್ತಭೂರಮೆಯ ಮಡಿಲ ಸೇರಲು ತವಕಿಸುವ ಅಮೃತ ಬಿಂದುಗಳು.. ಕೋಟಿ ಕೋಟಿ ಅವಮಾನಗಳ ಕುಲುಮೆಯಲ್ಲಿ ಕುದ್ದು ಕುದ್ದು ಪರಿಶುದ್ಧ ಬದುಕು ಕಟ್ಟಿಕೊಂಡ ಮಿಸುನಿಗಳವು.. ಅಂದಿಗೂ ಇಂದಿಗೂ ಮೈದೋರದ ವ್ಯತ್ಯಾಸ..ಆತ್ಮಗಳ ಸ್ಪರ್ಶಸಲಾಗದ ಸವಾಲುಗಳೆದುರುಶಿಲೆಗಳ ಕಡೆದಷ್ಟು ಶ್ರೇಷ್ಠತೆಗೆ ಹೆಸರಾದ ಮೂರ್ತಿಗಳು.. ಅದೇ ಸೌಮ್ಯತೆ ಅದೇ ಮಂದಹಾಸಅದೇ ಕವಿಮನ ಅದೇ ಜೀವನ..ಕಡೆಮೊದಲಿಲ್ಲದ ಹಗಲುರಾತ್ರಿಗಳು ದೂರಕ್ಕೆ ಕಣ್ಣು ಹಾಯಿಸಿದಷ್ಟು ಒಂದುಗೂಡುವರೈಲು ಹಳಿಗಳು ಅವು..ನಿತ್ಯ ನಿರಂತರವಾಗಿ ಜೊತೆಯಲ್ಲೇ ಸಾಗುವವು ಸಮಭಾರ ಹೊತ್ತು ಸಹಕಾರ ನೀಡಲು… *************************************

ಜೋಡಿ ಹೃದಯಗಳು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಮತ್ತೇರಿಸುವ ಮಧು ಇಂದು ನೆತ್ತರಿನ ಬಣ್ಣವಾಯಿತೇಕೆತುಟಿ ಸೋಕುವ ಮುಂಚೆ ಬಟ್ಟಲು ಉರುಳಿ ಹೋಯಿತೇಕೆ ಹೃದಯ ಒಡೆದು ಚೂರಾದರಾಗಲಿ ಮಧುಶಾಲೆ ಕೈ ಮಾಡಿ ಕರೆದಿದೆತುಂಬಿ ತುಳುಕುವ ಹೂಜಿ ಎದುರಿಗಿದೆ ಮುಖದ ನಗು ಮಾಯವಾಯಿತೇಕೆ ಯಾರೇನೇ ಅಡಿಕೊಳ್ಳಲಿ ಬಿಡು ನೋವು ಮರೆಸುವ ಔಷಧಿ ಜೊತೆಗಿದೆ ಗಾಲಿಬ್ಸಾಕಿ ಸುರಿದು ಕೊಟ್ಟ ಸಂಜೀವಿನಿ ಕೈ ಸೇರುವ ಮುನ್ನ ನೆಲದ ಪಾಲಾಯಿತೇಕೆ ಎಲ್ಲರೂ ನನ್ನ ನೋಡಿ ದೂರ ಸರಿಯುತ್ತಾರೆ ಸಜನಿ ಎದೆಯ ಬೇನೆ ನಿನಗಷ್ಟೇ ಗೊತ್ತುದರ್ದಿಗೆ ಮುಲಾಮು ಸವರಿ ಕೈಗಿತ್ತ ತುತ್ತು ಬಾಯಿಗೆ ಬರದಾಯಿತೇಕೆ ಮಸೀದಿಯಲಿ ಮುಲ್ಲಾ ಅಜಾ ಕೊಟ್ಟಾಗಲೇ ಇವರಿಗೆ ಬೆಳಗಾಗುತ್ತದೆ ಅರುಣಾಮೈಖಾನಾದೊಳಗೆ ನಾನಿರುವಾಗ ಕತ್ತಲೆಯಲ್ಲೂ ಒಳಗೆ ಬೆಳಕಾಯಿತೇಕೆ ***************************************************

ಗಜಲ್ Read Post »

ಕಾವ್ಯಯಾನ

ಕೆಂಪು ತೋರಣ ಕಟ್ಟುತ್ತೇವೆ

ಕೆಂಪು ತೋರಣ ಕಟ್ಟುತ್ತೇವೆ ಅಲ್ಲಾಗಿರಿರಾಜ್ ಕನಕಗಿರಿ ಈಗ ನಾವುಕಿರು ದಾರಿಯಿಂದ ಹೆದ್ದಾರಿಗೆ ಬಂದಿದ್ದೇವೆ.ರಾಜಧಾನಿಯ ಸಾಹುಕಾರರ ಮನೆಯ,ಕುಂಡಲಿಯಲ್ಲಿ ಕೆಂಪು ಗುಲಾಬಿ ಬಾಡಿಹೋಗಿವೆಯಂತೆ.ಹೂ ಗಿಡದ ಬೇರಿಗೆ ರಕ್ತ ಕುಡಿಸಲು ಹೊರಟಿದ್ದೇವೆ. ಈಗ ನಾವುಊರು ಕೇರಿ ಧಿಕ್ಕರಿಸಿ ಬಂದಿದ್ದೇವೆ.ನಮ್ಮ ಅನ್ನ ಕಸಿದು ಧಣಿಗಳಾದವರ,ಮನೆಯ ತಲ ಬಾಗಿಲು ತೋರಣ ಒಣಗಿ ಹೋಗಿವೆಯಂತೆ.ನಮ್ಮ ತೊಡೆ ಚರ್ಮ ಸುಲಿದುಕೆಂಪು ತೋರಣ ಕಟ್ಟಲು ಹೊರಟಿದ್ದೇವೆ. ಈಗ ನಾವುಜೀವದ ಹಂಗು ತೊರೆದು ಬಂದಿದ್ದೇವೆ.‘ಮರಣವೇ ಮಹಾನವಮಿಯೆಂದು’ದಿಲ್ಲಿ ಗಡಿ ಮುಚ್ಚಿಕೊಂಡವರ ಮನೆ ಮುಂದೆನಮ್ಮ ಹೋರಾಟದ ಹಾಡು ಬರೆಯಲು,ಕಳ್ಳು ಬಳ್ಳಿ ಕಟ್ಟಿಕೊಂಡು ಹೊರಟಿದ್ದೇವೆ. ನೇಗಿಲೆಂಬ ಶಿಲುಬೆ ಹೊತ್ತುಕೊಂಡು.ಕಿರು ದಾರಿಯಿಂದ ಹೆದ್ದಾರಿಗೆ ಬಂದಿದ್ದೇವೆ ನಾವು. **************************************

ಕೆಂಪು ತೋರಣ ಕಟ್ಟುತ್ತೇವೆ Read Post »

ಕಾವ್ಯಯಾನ

ಶವ ಬಾರದಿರಲಿ ಮನೆ ತನಕ

ಕವಿತೆ ಶವ ಬಾರದಿರಲಿ ಮನೆ ತನಕ ಎ. ಎಸ್. ಮಕಾನದಾರ ನಿನ್ನ ಮನೆಯ ಅಂಗಳ ತನಕವೂನನ್ನ ಶವದ ಡೋಲಿ ಬಾರದಿರಲಿ ಹೂವಿನ ಚದ್ದರಿನ ತುಂಬಾ ಗುಲಾಬಿ ಅಂಟಿಸಿತರಾವರಿ ಜರದ ರೀಲು ಸುತ್ತಿ ಮೇಲಷ್ಟು ಇತ್ತರ್ ಸುರಿಯದಿರಲಿ ಆತ್ಮ ಸಾಕ್ಷಿ ನ್ಯಾಯಾಲಯಕೆಶರಣಾಗಿದ್ದೇನೆ. ಶಿಕ್ಷೆಗೆ ಗುರಿಯಾಗಿದ್ದೇನೆ ಅವಳಿಗೆ ಪ್ರೀತಿಸಿದ್ದು ನನ್ನ ತಪ್ಪಾದರೆನನ್ನನ್ನೂ ಪ್ರೀತಿಸಿದ ಅವಳ ತುರುಬು ತುಂಬಾ ಹೂ ಆರಡಿ ಜಾಗೆ ಮೂರು ಹಿಡಿ ಮಣ್ಣಿಗಾಗಿಕಾಲುಗೆರೆ ಸವೆದಿವೆ ಮೊಣಕಾಲು ಚಿಪ್ಪು ಒಡೆದಿದೆವಚನ ಭ್ರಷ್ಟನಲ್ಲ. ದೇಶ ಭ್ರಷ್ಟನೂ ಅಲ್ಲದಅವಳ ನಲ್ಲನಿಗೆ ಪುಟ ಗಟ್ಟಲೆ ತೀರ್ಪು ಬರೆದಿದ್ದು ಸರಿಯೇ ಕಾಮಾಲೆ ಮೆದುಳು ಹಳದಿ ಕಣ್ಣಿನ ಪಕೀರಕೀವು ಹೃದಯಾಕೂ ಅಫಿಡವಿಟ್ ಹಾಕಿದ್ದಾನೆ ಪ್ರತಿ ಹುಸಿ ಮಾತಿಗೂಕವಿತೆಯ ಮುಟ್ಟು ನಿಲ್ಲುತಿದೆ ನಾಳೆ ಬರುವ ಕರುಳಿನ ಕುಡಿಗೆಅಪ್ಪನ ಕವಿತೆ ತೋರಿಸಿ ತುತ್ತು ಉಣಿಸದಿರು ನಂಜಿಲ್ಲದ ಪದಗಳಿಗೆ ಬಾಣಂತಿ ಬೇರು ಕಟ್ಟದಿರು **********************************

ಶವ ಬಾರದಿರಲಿ ಮನೆ ತನಕ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ ಹೃದಯ ಕಣ್ಣೀರು ಕೊನೆ:ಹೃದಯವು ನಿಂತಿತುದುಃಖದ ಭಾರ. ಮನಸ್ಸು ಮನಸೇ ಜೋಕೆಕದ್ದಾರು ಆತ್ಮವನುಪ್ರೀತಿ ಹೆಸರು. ಅಮ್ಮ ತೊಗಲು ಬೊಂಬೆ :ಜೀವ ಕೊಟ್ಟ ದೇವತೆಅಮ್ಮನು ತಾನೇ. ಲಜ್ಜೆ ಸಂಜೆ ಕಡಲುಬಾನು ಭೂಮಿ ಮಿಲನಲಜ್ಜೆಯ ಕೆಂಪು. ಮೌನ ಮಾತು ಮೌನಕ್ಕೆಸೋತು ಶರಣಾಯಿತುಕಣ್ಣ ಭಾಷೆಲಿ. ಶಿಲೆ ಶಿಲೆಗೂ ಪ್ರೀತಿಸುರಿಯೋ ಸೋನೆಯಲಿಕರಗೋ ಮನ ಜಾತ್ರೆ ಮಾಯೆಯ ಜಾತ್ರೆಯಾರು ಯಾವ ಪಾಲಿಗೆಸಿಕ್ಕಿದ್ದೇ ಸಿರಿ. ಬಾಳು ಬಾಳ ಹಾದಿಲಿಮುಳ್ಳು ಕೂಡಾ ಹೂವಂತೆತೃಪ್ತಿ ಮನಕೆ. ಹೂವು ಮುಳ್ಳಿನ ಭಾಸಹೂಗಳು ಚುಚ್ಚಿದಾಗಪ್ರೀತಿಯೇ ಹೀಗೆ. ಕವಿ ಕವಿ ಕನಸುಕಂಡದೆಲ್ಲ ಕವಿತೆಮೊಗ್ಗು ಅರಳಿ. ********************************

ಹಾಯ್ಕುಗಳು Read Post »

You cannot copy content of this page

Scroll to Top