ಸಂಕ್ರಾಂತಿ ಕಾವ್ಯ ಸುಗ್ಗಿ ಕನ್ನಡಿ ಟಿ ಎಸ್ ಶ್ರವಣ ಕುಮಾರಿ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅವರಜ್ಜ ತಂದದ್ದಂತೆ;ಅಜ್ಜನಜ್ಜ ಆ ಮನೆಕಟ್ಟಿದಾಗ ಗೋಡೆಗೆ ಹಾಕಿದ್ದಂತೆ. ಎರಡಡಿ ಎತ್ತರ, ಒಂದೂವರೆಯಡಿಯಗಲದ ಕನ್ನಡಿಗೆ –ಕರಿಮರದ ಕೆತ್ತನೆಯ ಚೌಕಟ್ಟು, ಹಿಂಬದಿಗೆ ಗಟ್ಟಿ ಹಲಗೆ.ಮಿರಮಿರ ಮಿಂಚುವ ಬೆಲ್ಜಿಯಂ ಗ್ಲಾಸಿನ ಕನ್ನಡಿಯಡಿಗೆ –ಮರದ ಗೂಡು, ಅದರಲ್ಲಿ ಸಾದು, ಕುಂಕುಮ, ಹಣಿಗೆ… ಬಚ್ಚಲ ಮನೆಯಿಂದ ಬಂದರೆ ಎದುರಿಗೇ ಕಾಣುವಂತೆ,ಮುಚ್ಚಟೆಯಿಂದ ಬಾಚಿ, ಹಣೆಗಿಡಲು ಅನುವಾಗುವಂತೆ,ಮಚ್ಚಿನಿಂದ ಬೀಳುತಿದ್ದ ಬೆಳಕು ಮುಖ ತೋರುವಂತೆ,ಅಚ್ಚೆಯಿಂದಿತ್ತು ಗೋಡೆಯಲಿ ಮೌನವೇ ಮಾತಾದಂತೆ! ಅಜ್ಜನಜ್ಜನ ಕಾಲದಿಂದದೆಷ್ಟು ಮುಖಗಳ ಕಂಡಿರಬಹುದು?ಲಜ್ಜೆಯ ಕಿರುನಗೆ, ಒಜ್ಜೆಯ ಭಾವಗಳ ಬಿಂಬಿಸಿರಬಹುದು!ಅಜ್ಜನಪ್ಪ ಹೊರಹೋಗುವಾಗ ಠೀವಿಯಿಂದ ನೋಡಿರಬಹುದು;ಅಜ್ಜನಮ್ಮ ಸಂಜೆಯಲಿ ಬಾಚಿ ಕುಂಕುಮ ತೀಡಿ ತಿದ್ದಿರಬಹುದು. ಅಜ್ಜನ ಕಾಲಕ್ಕೊಂದು ಕಪಾಟು, ಕನ್ನಡಿ ಪಕ್ಕಕ್ಕೆ ಬಂದಿದ್ದಂತೆ –ಅಜ್ಜಿಗೊಂದು ಗೂಡು – ಕಾಡಿಗೆ, ಚೌರಿ, ಗಂಟುಪಿನ್ನುಗಳಿಗಂತೆ.ಅಜ್ಜನಿಗೆ ದಿನವೂ ನೈಸು ದಾಡಿ ಮಾಡುವ ಅಭ್ಯಾಸವಿತ್ತಂತೆ;ಅಜ್ಜಿ ಸಂಜೆ ಮುಂದೆ ಹೆರಳುಸುತ್ತಿ ಹೂ ಮುಡಿಯುತ್ತಿದ್ದಳಂತೆ. ನಡುಮನೆಗೆ ನಡೆಯುತ್ತ ಬಂದಿತ್ತು ಕನ್ನಡಿ ಅಪ್ಪನ ಕಾಲದಲ್ಲಿ…ಅಡಿಗೊಂದು ಕಪಾಟು, ಮೂರ್ನಾಲ್ಕು ಬಿಡಿ ಖಾನೆ ಅದರಲ್ಲಿ.ಇಡಲು ಅಪ್ಪನ, ಅಮ್ಮನ, ಮಕ್ಕಳ ವಸ್ತುಗಳ ಬೇರೆಯಾಗಲ್ಲಿ.ಓಡಾಡುವಾಗೆಲ್ಲಾ ಒಮ್ಮೆ ಹಣುಕುತಿರಬಹುದಿತ್ತು ಕನ್ನಡಿಯಲ್ಲಿ. ನನ್ನ ಕಾಲಕ್ಕನ್ನಿಸಿತು ಕನ್ನಡಿ ನಡುಮನೆಯಲಿದ್ದರೇನು ಚಂದ?ನಂನಮ್ಮ ರೂಮಿನಲ್ಲಿಡಬೇಕು ನಿಲುಗನ್ನಡಿಯನೊಂದೊಂದ.ನಂನಮ್ಮ ಮುಖಭಾವ ನಮಗಷ್ಟೆ, ಬೇರೆಯವರಿಗೇನದರಿಂದ?ಇನ್ನೊಬ್ಬರೇಕೆ ತಿಳಿಯಬೇಕು ನಮ್ಮೊಳಗು, ಲಾಭವೇನದರಿಂದ! ಈಗ ಅಂತರ ಬೇಕಂತೆ, ಹಾಗೆ ಮಗ ಸೊಸೆಗೆ ಪ್ರತ್ಯೇಕ ಕೋಣೆ!ಈಗವರಿಗೆ ಅವರವರದೇ ಬೀರು, ಕನ್ನಡಿ, ಸ್ನಾನಶೌಚದ ಕೋಣೆ.ಆಗ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅಲ್ಲೇ ಇರಬಹುದೇನೋ ಕಾಣೆ?ಬೇಗ ತಂದಿರಿಸಿ ಮುಖವ ನೋಡಿಕೊಳ್ಳಬೇಕೆನಿಸಿದೆ ದೇವರಾಣೆ!! ———————————————————————-
ಶಪಥ
ಸಂಕ್ರಾಂತಿಗೆ ಸುಧಾರಾಣಿಯವರ ವಿಶೇಷ ಕವಿತೆ ಶಪಥ ಹೊಸ ವರುಷಕೆ ಒಂದುಶಪಥವಿದೆ ಸಾಕಿಮತ್ತೆಂದೂ ಎದಿರುಗೊಳ್ಳುವುದಿಲ್ಲಹನಿ ಪ್ರೀತಿಗಾಗಿಅಂಗಲಾಚುವುದೂ ಇಲ್ಲನೀ ಸಾಗಿದ ದಾರಿಯಲ್ಲಿಸಾವಿರ ಬಾರಿ ತಿರುಗಿ ತಿರಿಗಿನೋಡುವುದೂ ಇಲ್ಲ ನಿನ್ನ ನೆನಪಲಿ ಕಣ್ಣಾಲಿಗಳುಒಡ್ಡು ಕಟ್ಟಿ ನಿಂತರೂ,ಥುಳುಕಿದರೂತುಟಿ ಕಂಪಿಸಿದರೂನಿನ್ನ ಸಂತೈಸುವಿಕೆಗೆಹಾತೊರೆಯುವುದೂ ಇಲ್ಲಒರಗಿದ್ದ ನಿನ್ನೆದೆಯ ನೆನೆದುಸಂತೈಸಿಕೊಳ್ಳುವುದು ಇಲ್ಲಬಿಡು, ನಿರಾಳವಾಗಲಿ ಮನಸ್ಸು, ಅದೆಷ್ಟೂ ಖಾಲಿತನಉಸಿರು ನಿಂತ ಮೇಲೆಯಾರಿಗ್ಯಾವ ಹೆಸರು?ಹೆಣವೆಂದಷ್ಟೇ ಅಲ್ಲವೇ ಸಾಕಿಈ ವರ್ಷಕೂ ಅದೇ ಶಪಥನನ್ನಲ್ಲಿ ನೀನಿರುವವರೆಗೂಬದುಕಬೇಕುಅದಮ್ಯವಾಗಿ ಪ್ರೀತಿಸಬೇಕು
ಸಂಕ್ರಾಂತಿಕಾವ್ಯ ಸುಗ್ಗಿ ಉರಿಯುವ ಬದಲು ಬೆಳಗಬೇಕು ಸಂಗೀತ ರವಿರಾಜ್ ಸಮಾಜ ಅಭಯದ ಮುಖವಾಡ ಹಾಕಿನಲುಗಿಸುತ್ತಿದೆ ಗಳಿಸಿದ ಸ್ವಾತಂತ್ರ್ಯ ವನ್ನೇ….ಜಾತಿ ವರ್ಗಗಳಿಗೆ ಕೀಳರಿಮೆ ತೊಲಗಿಂದ ಮೇಲೆಭಯ ಮುಕ್ತ ಭಾವನೆಗೆಲ್ಲಿ ಎಲ್ಲೆ ? ಮಲ ತೆಗೆಯಲು ಒಂದುಮನುಷ್ಯ ವರ್ಗವ ಸೃಷ್ಠಿಸಿಅದಕ್ಕೊಂದು ಜಾತಿಯ ಹೆಸರು ಕೊಟ್ಟಇನ್ನೊಂದು ಮನುಷ್ಯ ಜಾತಿಗೆ ನಮ್ಮ ವಿರೋಧವಿರಲಿದೇವ ಸ್ವರೂಪ ತೋಟಿಗಳಒಳತೋಟಿಯ ಅರಿವಾಗಿಒಂದು ತೊಟ್ಟು ಕಣ್ಣೀರು ಹಾಕಿದರೆಈ ಜನ್ಮ ಸಾರ್ಥಕ. ಜಗದಲ್ಲಿ ಜಲಗಾರ ಜಾಡಮಾಲಿಯಒಡಲ ಬೇಗುದಿಯ ಉರಿಗೆತ್ಯಾಜ್ಯವೆಲ್ಲ ಉರಿದು ಬೂದಿಯಾಗುತ್ತಿದೆ!ಗುಡಿಸೆತ್ತಿ ಸ್ವಚ್ಛಗೊಳಿಸುವ ಒಂದ್ವರ್ಗವಿಲ್ಲದಿದ್ದರೆಶೋಚನೀಯ ಸ್ಥಿತಿಯ ಗತಿಗಳುಶುಭ್ರತೆ ಇರಬೇಕಾದ್ದು ಮನಸ್ಸಿನಲ್ಲಿ , ವಾಸಿಸುವಲ್ಲಿಜಲಗಾರನೆ ಜ್ವಲಂತ ಉದಾಹರಣೆಯಿಲ್ಲಿ ಸೂಟುಗಳ ಜೇಬಿನಲ್ಲಿ ಇವರ ಕನಸುಗಳೆಲ್ಲ ಬಿಕರಿಗಿವೆ!ಕೊಳ್ಳುವರಿಲ್ಲ ಕೇಳುವರಿಲ್ಲಅಲ್ಲಿಗೆ ಕನಸುಗಳು ಕಮರಿವೆಈ ಕುಲದ ದೀಪಗಳ ಬೆಳಕು ಪಸರಿಸಲುನಾವೆಲ್ಲ ದೀಪದಂತೆ ಉರಿಯುವುದಲ್ಲ ಬೆಳಗಬೇಕು !ಕನಿಷ್ಠ ಸಂಪಾದನೆಯ ಕೆಲಸಗಳಿಗೆಜಾತಿ ವರ್ಗಗಳ ನಿರ್ಮಿಸಿಟ್ಟಮಗದೊಂದು ಮನುಷ್ಯ ವರ್ಗಕ್ಕೆ ಸಹಮತವಿಲ್ಲ.
ಸಂಕ್ರಾಂತಿ ಕಾವ್ಯ ಸುಗ್ಗಿ ಸಂ-ಕ್ರಾಂತಿ! ಚೈತ್ರ ಶಿವಯೋಗಿಮಠ ಆಂತರ್ಯದಲ್ಲಿ ಭುಗಿಲೆದ್ದಿದ್ದರೂಅಸಮಾಧಾನ, ಅಶಾಂತಿಶಮನ ಮಾಡಲಿ ಅದೆಲ್ಲವಎಳ್ಳು-ಬೆಲ್ಲ ತಿನ್ನಿಸುವ ಸಂಕ್ರಾಂತಿ! ಮನದೊಳಗೆ ನಡೆದಿದ್ದರೂಭಾವನೆಗಳ ಸಂಘರ್ಷ-ಕ್ರಾಂತಿರಮಿಸಿ ತುಂಬಲಿ ಸಿಹಿ ಹರುಷವಕಬ್ಬಿನ ಜಲ್ಲೆಯ ಸಂಕ್ರಾಂತಿ! ಒಲವು ಮರೆತು, ಒಳಗೆತುಂಬಿದ್ದರೂ ಸಿರಿತನದ ಭ್ರಾಂತಿ..ಮರೆಸಿ ಭ್ರಮೆಯ, ತೆರೆಸಲಿ ಒಳಗಣ್ಣಅವರೆ, ನೆಲಗಡಲೆ ಬಿಡಿಸುವ ಸಂಕ್ರಾಂತಿ! ಮನವು ಮುದುಡಿ, ಭಾವ ಕದಡಿಹಾರಿ ಹೋಗಿದ್ದರೂ ಮನದ ಜಂತಿಅರಳಿಸಿ ಮನವ, ತುಂಬಲಿ ಸ್ಥೈರ್ಯವಬಣ್ಣದ ರಂಗವಲ್ಲಿ ಬಿಡಿಸುವ ಸಂಕ್ರಾಂತಿ!! ವರುಷವಿಡಿ ಸುಖ-ದುಃಖಗಳ ಸ್ವೀಕರಿಸಿಕೆಲವೊಮ್ಮೆ ಸಂಭ್ರಮಿಸಿ, ಮತ್ತೊಮ್ಮೆ ಕನವರಿಸಿದಣಿದು ನಲುಗಿರುವ, ಮನವೆಂಬರಾಸನ್ನ ಸಿಂಗರಿಸಿ ಬೆಂಕಿಹಾಯಿಸುವ ಸಂಕ್ರಾಂತಿ! ತಿದ್ದಿ ತೀಡಿದರೂ ಕಲಿಯದ ಮನಸಿಗೆ,ಅದೆಷ್ಟು ಬಿಗಿದರೂ ಹಿಡಿತವ ಒಲ್ಲೆಯೆನ್ನುವ ಖೋಡಿ.ಸರಿ ದಾರಿಗೆ ತರಲಿ ಮನವೆಂಬ ಮರ್ಕಟನಸೂರ್ಯ ಪಥವ ಬದಲಿಸುವ ಸಂಕ್ರಾಂತಿ ಎಳ್ಳು ಬೆಲ್ಲ ತಿಂದು, ಕಬ್ಬಿನ ಜಲ್ಲೆಯ ಜಗಿದುಬೇಯಿಸಿದ ಅವರೆ-ನೆಲಗಡಲೆ ಅಗಿದುಪಾಯಸ ಹೋಳಿಗೆಗಳ ಉಂಡುಬೇಡುವ, ಪ್ರಶಾಂತತೆಯು ಮನವ ತುಂಬಲೆಂದು!
ಸಂಕ್ರಾಂತಿ ಕಾವ್ಯ ಸುಗ್ಗಿ ಸರಳ ಸೂತ್ರ ಎಸ್ ನಾಗಶ್ರೀ ಆರುತಿಂಗಳಾದರೂ ಬಳಸದ್ದನ್ನುಬಿಸಾಡುವುದು ಕ್ಷೇಮವೆಂದರುಒಪ್ಪಿದೆಬಟ್ಟೆಬರೆಯೆಲ್ಲಾ ಹರಡಿಹತ್ತಾರು ಚೂಡಿ, ಸೀರೆ, ರವಿಕೆಫಳಗುಟ್ಟುವ ಕಿವಿಯೋಲೆಜಾಮೂನ್ ಬಟ್ಟಲುಲೆಕ್ಕವಿರದಷ್ಟು ಲೋಟ, ತಟ್ಟೆಓದಲಾಗದ ಪುಸ್ತಕರೀಫಿಲ್ಲು ತೀರಿದ, ತಿರುಪು ಗಟ್ಟಿಯಿದ್ದಪೆನ್ನುಖಾಲಿ ಹಾಳೆಯ ಪುಸ್ತಕಡೈರಿಗಳನುತಿರುಗಾಮುರುಗಾ ನೋಡಿಪೇರಿಸಿಟ್ಟೆ ಗುಜರಿಗೆ ಹಾಕಿನೂರಿನ್ನೂರು ಎಣಿಸುವುದೆಷ್ಟರ ಮಾತು?ಬಡವರಿಗೆ ಕೊಡಬೇಕುಹಬ್ಬದ ಸಂಜೆ ಅವರುಟ್ಟು ತೊಟ್ಟುಸಂಭ್ರಮಿಸಬೇಕುಕನಸುಗಳ ಮುಗುಚಿ ಹಾಕಿಮಲಗಿದ್ದು ಗೊತ್ತುಈ ನೆನಪುಗಳು ಜೀವ ತಿನ್ನುತ್ತವೆಹೊತ್ತೊಯ್ಯುತ್ತವೆ ಕಪ್ಪಿರುವೆಯಂತೆತಲೆ ಮೇಲೆ ಭಾರ ಗಂಟೊಂದನುನಜ್ಜುಗುಜ್ಜಾದ ತಟ್ಟೆಯಲ್ಲೇಅನ್ನವುಣ್ಣುವ ಅಪ್ಪಹರಿದ ಸೀರೆಯುಡುವ ಅಜ್ಜಿಬೇಯಿಸುವ ಪಾತ್ರೆಯೂ ಇಲ್ಲದೆಬೀದಿಗೆ ಬಿದ್ದಗೃಹಭಂಗದ ನಂಜಮ್ಮಹೀಗೆ ಯಾವುದೋ ನೆನಪುಗಳುಗೀಟುಗಳೆಳೆದುಕಾಟಕೊಡುತ್ತವೆತಂತಿಯ ಮೇಲಿನ ಬಟ್ಟೆಗಳಂತೆಫಟಫಟಿಸುತ್ತದೆ ಮನಸು ವರಾಂಡದ ಮೂಲೆಯಲ್ಲಿಗಂಟಾಗಿ ಕೂತ ಸಾಮಾನುಗಳನ್ನುಮತ್ತೆ ಬಿಚ್ಚಿ ಜೋಡಿಸುತ್ತೇನೆಎರಡು ಸೀರೆನಾಲ್ಕಾರು ಡಬ್ಬಆಚೆ ಹಾಕುವುದಕ್ಕೆಇಡೀ ದಿನ ಬೇಕೆಎಂದವರನ್ನುಕಣ್ಣಲ್ಲೇ ಸುಟ್ಟುಅಡುಗೆಗಿಡುತ್ತೇನೆ ಹುರಿಯುವಾಗ, ಹೆಚ್ಚುವಾಗತೊಳೆದು ಹರಡುವಾಗಸರಳ ಬದುಕಿನ ಸೂತ್ರಕಡಿಮೆ ವಸ್ತುಗಳಲ್ಲಿದೆಎಂದವರ ಮಾತು ಮಥಿಸುತ್ತಾಗಹನ ಚಿಂತನೆಗಿಳಿಯುತ್ತೇನೆಮತ್ತೆ ಮರೆಯುತ್ತೇನೆಮರೆವೊಂದೇ ಸರಳವೆನಿಸಿನಕ್ಕುಬಿಡುತ್ತೇನೆ
ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ ಕೆ.ಟಿ.ಜಯಶ್ರೀ ಮುಂಬಾಗಿಲ ತಳಿರ ಸ್ವಾಗತಪಂಚಭೂತ ತತ್ವದರಿವನುಹರವುವ ಹೊಸ ಮಡಕೆಯಲಿಘಮಘಮಿಸುತಿದೆ ಪೊಂಗಲ್ಎಳ್ಳು ಬೆಲ್ಲ ಮೆಲುನುಡಿದಿವೆ ಜರತಾರಿ ತೊಟ್ಟ ಕುವರಿಯರಮೆರವಣಿಗೆ ಸಾಗಿದೆ ಸಂಜೆಯಲಿ ಪಥ ಬದಲಿಸಿ ಸಾಗುವಾಗಸೂರ್ಯ ಸಂಭ್ರಮದಿನಗೆ ಚೆಲ್ಲಿತಾ ರಂಗಿನ ರಂಗವಲ್ಲಿಉಷೆ ಸ್ಪರ್ಶಕೆಪುಳಕಮೈಮನದಲಿ ಎಳ್ಳು ಬೆಲ್ಲ ಹಂಚುವ ಸಡಗರಕೆಲಲನೆಯರ ಲಾಲಿತ್ಯದ ಮೆರಗು ರಾಸುಗಳ ಕಿಚ್ಚಿನ ಓಟಎಳೆಯರ ಗಾಳಿಪಟದಾಟಮುಗುದೆಯರ ಕೋಲ್ಮಿಂಚಿನೋಟಹರುಷ ಉಕ್ಕಿದೆ ಸುಗ್ಗಿಕಣಿತದಿ ಸಂಕುಚಿತ ಮನದ ತಮ ಕರಗಿಸಾಗಲಿ ಸೂರ್ಯ ಅಶಾಂತಿಯ ಪಥದಿಂದ ಶಾಂತಿ ಸಾಮರಸ್ಯದ ಸಂಕ್ರಮಣ ಕಾಲದತ್ತ
ವೀಣಾ ನಿರಂಜನ ಬರೆಯುತ್ತಾರೆ
ಎದೆಯ ಕದ ಇಷ್ಟಿಷ್ಟೇ ತೆಗೆದು
ಮೌನವನ್ನು ಒಳಗೆ
ಬಿಟ್ಟುಕೊಳ್ಳುವ ಸುಖ
ದಕ್ಕಿದವರಿಗಷ್ಟೇ ಗೊತ್ತು
ಸಂಕ್ರಾಂತಿ ಕಾವ್ಯ ಸುಗ್ಗಿ ಉನ್ನತಿಯ ಕಡೆಗೆ…. ಚಂದಕಚರ್ಲ ರಮೇಶ್ ಬಾಬು ಹೊಸವರ್ಷದ ಈ ವಾರಉತ್ಥಾನದ ಕರೆಯ ವಾರ ಏಳಿ ಎದ್ದೇಳಿಗುರಿ ಮುಟ್ಟುವ ವರೆಗೆ ನಿಲ್ಲದಿರಿಎನ್ನುತ್ತ ಎಲ್ಲರಿಗುಉತ್ತೇಜನ ಕೊಟ್ಟಸಂತನೊಬ್ಬನ ಹುಟ್ಟು ದಿನ ತನ್ನ ತಳದ ಪಯಣವನ್ನು ಮುಗಿಸಿಊರ್ಧ್ವದ ಕಡೆಗೆ ನಡೆಯುತ್ತಪ್ರಗತಿಯ ದಿಸೆಯಲ್ಲಿಪಾಠ ಹೇಳುವಉತ್ತರಾಯಣದ ಸೂರ್ಯನ ಹಬ್ಬ ತನ್ನ ದಾರದ ಬೇರುಕೆಳಗಿದ್ದರೇನುತಾನು ಗಗನಕ್ಕೇರಿನಭದ ನಗರಿಯಲ್ಲಿನಗಾರೆ ಹೊಡೆಯುತ್ತಎತ್ತರಕ್ಕೇರುವ ಸಂದೇಶವೀಯುವಪತಂಗುಗಳ ಪರ್ವ ಎಲ್ಲೆಲ್ಲೂ ಹರಡುತ್ತಎಲ್ಲರನ್ನೂ ನಡುಗಿಸಿದಮಹ ಮಾರಿಯನ್ನುಮಣಿಸುವ ಲಸಿಕೆಯ ಭರವಸೆಶುರುವಾಗುವ ಶುಭದಿನ
ನಡುವೆ ಅಂತರ…
ಆಶಾ ಜಗದೀಶ್
ಇತ್ತ ನಾನು ಅತ್ತ ನೀನು…
ಕೂತ ಬೆಂಚು ಒಂದೇ ತಾನೇ!?
ಅಂತರವೆಂಬ ವಾಮನನಿಗೆ
ಅಷ್ಟೇ ಸಾಕಿತ್ತು!
ಸಂಕ್ರಾಂತಿ ಕಾವ್ಯ ಸುಗ್ಗಿ ನಂದಿನಿ ಹೆದ್ದುರ್ಗ ನನ್ನದೆಯ ಗಾಯಗಳಾವೂ ನನ್ನವಲ್ಲ..ನೀನದರ ಒಡೆಯ..ನನ್ನ ವಾಸ್ತವ ,ಭ್ರಮೆ, ಕಲ್ಪನೆಗಳೂನಿನ್ನವೇ ಕೊಡುಗೆ..ನೊಂದು ನೋಯಿಸಿದ್ದಾದ ಮೇಲೆಒಂದು ಅಂತರದಲಿ ನೀ ನಿಂತು ನೋಡುವೆ.ಈ ಕ್ರೂರ ಮೌನದೊಳಗೆಎಷ್ಟೊಂದು ಪ್ರಶ್ನೆಗಳು.. ಬಗೆದು ತೋರಬಹುದೇ ಒಲವ ಈ ಬಗೆಯನ್ನು?ಹಗಲು ಹೊಳೆಯುವುದೆ ಇರುಳ ಈ ಹುಣ್ಣಿಮೆಗೆ?ಎದೆಯೊಳಗೆ ನೋವು ಉಲಿಯುವ ಹಕ್ಕಿಗೆ ಹೆಸರಿದೆಯೇ?ನಾನು ಬರುವ ಮೊದಲು ಎಷ್ಟೊಂದು ಸುಖಿ ನೀನು!! ಮಾತು ಮಹಲುಗಳಿಗಿಲ್ಲಿ ನೋವ ಅಡಿಪಾಯಹೊರಡಲೇ ಎನುವಾಗಷ್ಟೇ ನರಳು ನಿಟ್ಟುಸಿರುಎರಡು ಹೂವೆಸಳು,ಬೆಳುದಿಂಗಳು,ಎದೆಯ ಆಲಾಪಕ್ಕೂಬಿಡುವಿಲ್ಲ ನಿನಗೆ ಶೂನ್ಯ ಹುಟ್ಟಿಸಿದ್ದೂ ನೀನೇ.ಕೋಲಾಹಲಕ್ಕೆ ಕಾರಣವೂ ನೀನೇನಾನು ಅಮಾವಾಸ್ಯೆ ಇರುಳು…ನೀನು ನಡುರಾತ್ರಿ ಎರಗುವ ನೋವುಒಲವೂ ಅಲೌಕಿಕ…!!!ದಯಮಾಡಿ ನಿನ್ನ ಬರಡು ದೇವರಿಗೆ ತಿಳಿಹೇಳು.__—————————–









