ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿನ್ನ ಪಾಪದ ಹೆಣ

ಕವಿತೆ ನಿನ್ನ ಪಾಪದ ಹೆಣ ಬೆಂಶ್ರೀ. ರವೀಂದ್ರ ಹೇಳಿ ಬಿಡಬಹುದಿತ್ತು ಈ ಮಾತುಗಳಪ್ರತಿಮೆ ರೂಪಕಗಳಲ್ಲಿಕತೆಯೊಂದರ ಮುಸುಕಿನಲ್ಲಿಪುರಾಣಗಳ ಪುಣ್ಯಕತೆಗಳ ಅವತರಣಿಕೆಗಳಲಿಅಥವಾಆಧುನಿಕತೆಯ ಹೆಸರಿನಲಿಎಲ್ಲೆ ಮುರಿದಿದ್ದನ್ನು ತರ್ಕಿಸಿ ಸುಸಂಬದ್ಧಗೊಳಿಸಬಹುದಿತ್ತು.ಪ್ರಾಣಿಗಳ ಹುಟ್ಟುಗುಣವಿದು ಎಂದು ಮನಶ್ಶಾಸ್ತ್ರದ ಮೆರಗನೀಯಬಹುದಿತ್ತು ಹೇಳಿಬಿಡುತ್ತೇನೆ ಎಲ್ಲವೀಗಬಟಾಬಯಲಲ್ಲಿ ನಿಂದುನಿನಗೆ ನಿನ್ನಂತವರಿಗೆ ಹಿಂದಿನವರಿಗೆ ಮುಂದಿನವರಿಗೆ ಸಾಕು ಸಾಕಾಗಿದೆನಿಶಸ್ತ್ರಿಯ ಮೇಲೆ ದುರಹಂಕಾರದ ನಿನ್ನ ಶಸ್ತ್ರವ ತೂರಿ ಆಕ್ರಮಿಸುವುದನ್ನು ಸಹಿಸಹಿಸಿ. ಮತ್ತಿಂದುಪೋಲಿಸು ಠಾಣೆಗಳಲ್ಲಿ, ಪತ್ರಿಕೆಗಳಲಿ, ಮುಗಿಲಿಗೆ ಲಗ್ಗೆ ಹಾಕಿದ ಭುಗಿಲುಮಾಧ್ಯಮಗಳಲಿಗುಪ್ತ ವಿಚಾರಣೆಗಳಲಿ ನ್ಯಾಯಾಲಯಗಳಲಿ ಮತ್ತೆನನ್ನ ನಗ್ನಗೊಳಿಸಿ ಹುರಿದು ಮುಕ್ಕುವ ನಿನಗೆ ಹಳೆಯದು,ಹೊಸದಾಗಿ ಹೊಸೆದ ಹಳೆಯಶಾಸ್ತ್ರಗಳ ಧಿಕ್ಕರಿಸಿ ಹೇಳಿಬಿಡುವೆನಾನೀಗ ಬರಿಯ ಸಂತ್ರಸ್ತೆಯಲ್ಲ,ಶಸ್ತ್ರಾಸ್ತ್ರ ಸಜ್ಜಿತೆಮುರಿದುಬಿಡುವೆ ಎಲ್ಲ ಮುರಿದುಬಿಡುವೆ. ಕಾಡುಮೇಡಲಿ ಅಲೆದೆ ಕಾಡೆಂದರಿಯದೆಕಾಡು ಪ್ರಾಣಿಯೆ ನಿನ್ನ ಜಾಡನರಿಯದೆ,ಸುಖವುಂಡು ನೋವಿತ್ತು ನೀಹರಿದು ಮುಕ್ಕಿಬಿಟ್ಟೆ ; ನೆಲಕೆ ಒತ್ತಿಬಿಟ್ಟೆ ಬರೆದ ಶಾಸ್ತ್ರಗಳಲಿ ನೆಯ್ದ ಸೂತ್ರಗಳಲಿನಿಲ್ಲಿಸಿಬಿಟ್ಟೆ ಎನ್ನ ಬಾಗಿಲ ಹೊರಗೆ ಜಾಣತನದಲಿನದಿ ತಟಾಕಗಳಲಿ ನಾಗರೀಕತೆಯ ಕಟ್ಟಿದೆನೆಂಬ ಬಿಮ್ಮಲಿಬುವಿ ನದಿಗಳ ಬಳಸಿ ನನ್ನ ಹೆಸರಿಟ್ಟುಆರತಿಯ ಜ್ವಾಲೆಯಲಿ ಕರಕಾಗಿಸಿಟ್ಟೆ ಜಗದ ಉದ್ದಗಲ ಅಂಗುಲಂಗುಲ ಲಂಗುಲಗಾಮಿಲ್ಲದೆ ಹೇಸಿಗೆಯ ಮಾಡಿಮನಸು ಕೊರಾಡಾಗಿಸಿನನ್ನ ಆಳ ಹೊರಟೆ, ಮೇಲಾಳಾಗಿಆಳಕೆ ಅದುಮಿ ಆಳ ಮಾಡಿಬಿಟ್ಟೆ ನೀನು ಮಾಡಿದಯುದ್ದಗಳಿಗೆ ಶಸ್ತ್ರಾಸ್ತ್ರವೆನ್ನ ಮಾಡಿದೆಫಿರಂಗಿಗಳ ಗುಂಡುಗಳಲಿ ಸೀಳಿಬಿಟ್ಟೆಬಸಿದ ರಕ್ತವ ಕ್ಯಾನ್ವಾಸಿನಲ್ಲಿ ಚೆಲ್ಲಿ ನವ್ಯಕಲೆಯೆಂದು ಸಾರಿಬಿಟ್ಟೆ ಎದೆಯ ನುಡಿಯನು ಎರಡಾಗಿಸಿಒಳಾಂಗಳದ ಭಾನಗಡಿಯ ಬಚ್ಚಿಟ್ಟೆನನ್ನ ಚಿಟ್ಟೆಯೆಂದು ಬಿಟ್ಟೆ. ನಾನಿನ್ನು ಬಿಡುವುದಿಲ್ಲನನ್ನ ಕೈ ಕಾಲಿಗೆ ಕೋಳವಿಕ್ಕಲುಪುಕಪುಕಿಸಿಸುವ ನಿನ್ನ ಪುಕ್ಕಲುತನಕೆಸೋಗದಂಬರ ತೊಡಲುಇನ್ನು ಆಗಲಾರೆ ನಿನ್ನ ತೆಕ್ಕೆಯ ಮುಳ್ಳುಗಳಿಗೆ ಮಗ್ಗುಲು ಹಿಮಾಲಯದ ತುದಿಗೆ ಹೋಗುವೆಕನ್ಯಾಕುಮಾರಿಯ ಅಂಚಿಗೆ ಸಾಗುವೆಕೂಗಿ ಹೇಳುತ್ತೇನೆ, ಬೀಳಲಾರೆ ಸಂಚಿಗೆನೋವುಗಳ ಎದೆಯಲ್ಲಿಟ್ಟುದೈನ್ಯತೆಯ ಬೇಡಿನಿನ್ನ ಅನುಕಂಪಿತ ಕೂಸು ನಾನಾಗಲಾರೆಶಸ್ತ್ರವೆತ್ತುವೆ,ನಿನ್ನ ಪಾಪದ ಹೆಣವಾದರೂ ಸರಿಯೆ, ಸಂತ್ರಸ್ತೆಯಾಗಲಾರೆ. **************************************************

ನಿನ್ನ ಪಾಪದ ಹೆಣ Read Post »

ಕಾವ್ಯಯಾನ

ನಾವು ಮತ್ತು ಅವರು

ಕವಿತೆ ನಾವು ಮತ್ತು ಅವರು ರೇಶ್ಮಾ ಗುಳೇದಗುಡ್ಡಾಕರ್ ಇಳೆಯಿದು ಬುದ್ದನುಬದುಕಿ ಬಾಳಿದ ಬೆಳಕಿರುವದು ಭುವಿಯಿದು ಅಲ್ಲಮನಬಯಲಿಗೆ ಬೆರಗಾದ ತಾಣವಿದು ಧರಣಿಯಿದು ಅಣ್ಣ ಬಸವಣ್ಣನಕ್ರಾಂತಿಗೆ ಸಾಕ್ಷಿಯಾದ ನೆಲವಿದು ಭಾರತವಿದು ಗಾಂಧಿಯಅಹಿಂಸೆಯ ಒಲುಮೆಯಲಿಮಿಂದೆದ್ದ ಸತ್ಯವಿದು ಕತ್ತಿಯ ಅಂಚಿಗೆ ಬಲಿಯಾಗುವವೆಇವರೆಲ್ಲ ಮಾರ್ಗಗಳು ?ಉಳಿದಿಲ್ಲವೆ ಅಥವಾ ಉಳಿಸುವದುಬೇಡವೇ ನೆಮ್ಮದಿಯ ನಾಳೆಗಳನು‌? ಹಸಿದ ಒಡಲಿಗೆ ದ್ವೇಷಅನ್ನ ನೀಡುವದೇ?ಸ್ನೇಹ ಬೆಸೆಯುವದೇ?ಬಾಳಿಗೆ ಹೆಗಲಾಗುವದೇ? ಸಾಮರಸ್ಯ ಅಲೆ ಇಲ್ಲದಸೌಹಾರ್ದದತೆಯ ಕಡಲು ಇರುವುದೇ?ಸಂಕೋಲೆಗಳ ಕಿತ್ತೊಸೆದುಸಂಬಂಧಗಳ ಹೊಸೆದುನಡೆಯುವ ಬನ್ನಿರಿನಮ್ಮ ಗಳ ದಾರಿಗೆ ನಾವೇಮುಳ್ಳಾಗಿ ಭಾವನೆಗಳುಕೃಷವಾಗಿ ಜೀವಿಸುವದು ಬೇಕೆ? *******************************************

ನಾವು ಮತ್ತು ಅವರು Read Post »

ಕಾವ್ಯಯಾನ

ಅಷ್ಟೇ ಸಾಕು.

ಕವಿತೆ ಅಷ್ಟೇ ಸಾಕು. ಅಬ್ಳಿ,ಹೆಗಡೆ ಈ…ನೀರವದೊಳಗೂಸಂತೆಯ ಗಿಜಿ,ಗಿಜಿ.ಈ ರೌರವದೊಳಗೂಏನಾದರೊಂದು ಖುಷಿ,ಸಂಭ್ರಮ ನನ್ನೊಟ್ಟಿಗೆ.ಒಂಟಿತನದ ನಂಟುಬಾದಿಸುವದಿಲ್ಲ ನನ್ನ ನನ್ನೊಟ್ಟಿಗಿನ ಸಂಜೆಬಂಜೆಯಾದರೂ..ಹಗಲ ನಗು ಮಾಸಿದರೂ,ಹಿಂಬಾಲಿಸಲೊಂದುನೆರಳು,ನೋಡಿಕೊಳ್ಳಲೊಂದುಕನ್ನಡಿ,ಇಷ್ಟಿದ್ದರೂ ಸಾಕು,ನನಗೆನಾ ಒಂಟಿಯೆನಿಸುವದಿಲ್ಲ ಸಾಲದ್ದಕ್ಕೆ……ಸಾವಿನಮನೆಯ ನಿಶ್ಶಬ್ಧಕತ್ತಲಲ್ಲಿ ಹಚ್ಚಿಟ್ಟ-ಮಿಣುಕು ದೀಪವೊಂದಿದೆಯಲ್ಲ ಮಸ್ತಕದಲ್ಲಿನೆನಪಿನ ಪುಸ್ತಕತೆರೆದೋದಲು.ಅಷ್ಟೇ ಸಾಕು,ನಾಒಂಟಿಯೆನಿಸುವದಿಲ್ಲ. ಹೊತ್ತಿನ ಹೊತ್ತಿಗೆಯಲ್ಲಿರಾಶಿ,ರಾಶಿ,ಸಂಭ್ರಮಗಳನೆನಪಿನ ಚಿತ್ತಾರಗಳಿವೆ,ಚಿತ್ತವನು ಸಂತೈಲು.ಬಾಲ್ಯದಲ್ಲಿ…..ಮರಿ-ಹಾಕಲಿಟ್ಟ ನವಿಲುಗರಿ,ಮರದ ಟೊಂಗೆಯಲ್ಲಿಸಿಕ್ಕಿಬಿದ್ದ ದಾರ ಹರಿದಬಣ್ಣದ ಗಾಳಿಪಟ,ಬದುಕಿನೆಲ್ಲ ಮೊದಲುಗಳಸವಿ,ಸವಿ ನೆನಪು,ಇದ್ದೇ ಇವೆಯಲ್ಲ..ನನ್ನೊಟ್ಟಿಗೆ..!ಅಸಹ್ಯದ ಕ಼ಣಗಳನ್ನೂಸಹ್ಯವಾಗಿಸಲು.ಒಂಟಿತನ ನೀಗಿಸಲು. ಯಾವುದಿಲ್ಲವಾದರೂಕೊನೇಪಕ಼ ನನ್ನೊಳಗಿನ‘ನಾನಂತೂ’….ಇದ್ದೇ ಇದೆಯಲ್ಲ,ನನ್ನೊಟ್ಟಿಗೆ.ಅಷ್ಟೇ ಸಾಕು ಬದುಕಿಗೆ. **********

ಅಷ್ಟೇ ಸಾಕು. Read Post »

You cannot copy content of this page

Scroll to Top