ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಗೂಡು ಕು.ಸ.ಮ. ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ ತಂದು ದೇವರ ಗೂಡಿನ ಪಟಗಳಿಗಿಟ್ಟು, ಗಟ್ಟಿಯಾಗಿ ಮಂತ್ರ ಹೇಳುತ್ತ ಪೂಜೆ ಮಾಡುತ್ತಿದ್ದ. ಅಷ್ಟರಲ್ಲವಳು ಬಚ್ಚಲು ಹಂಡೆಗೆ ಉರಿಹಾಕಿ,ಕಾಫಿಗಿಟ್ಟು ಕೆಲಸ ಶುರು ಮಾಡುತ್ತಿದ್ದಳು. ತಿಂಡಿ ತಿಂದವನು ಕ್ಯಾರಿಯರ್ ಹಿಡಿದು ಆಫೀಸಿಗೆ ಹೊರಟರೆ ಅವಳಿಗೆ ನಿರಾಳ. ಕೆಲಸವೆಲ್ಲ ಮುಗಿಸಿ, ಹಿತ್ತಲಿನ ನುಗ್ಗೆಮರದ ಕೆಳಗೆ ಕುಳಿತು ಕತೆ ಪುಸ್ತಕದೊಳಗೊ ಅಥವಾ ತವರಿನ ನೆನಪೊಳಗೊ ಮುಳುಗುತ್ತಿದ್ದಳು ಆ ನೆನಪುಗಳೊಳಗೆ ಸುಖವಿತ್ತು.ತವರು ಮನೆಯ ಹಿತ್ತಲಿಗೆ ಆತುಕೊಂಡಂತೆ ಹರಿಯುತ್ತಿದ್ದ ಭದ್ರಾ ನದಿ,ವಿಶಾಲವಾದ ಮನೆಯಂಗಳದಲ್ಲಿನ ಮಾವಿನ ಮರ,ಸಂಪಿಗೆಮರ,ಸೀಬೆಮರ, ತೂಗುಹಲಗೆ ಉಯ್ಯಾಲೆ,ಕಾಡು ಗಿಡಗಳಪೊದೆ,ಮಲ್ಲಿಗೆ ಹಂದರ,ಎಲ್ಲ ಅಂದರೆ ಎಲ್ಲ ನೆನಪಾಗಿ ಕಾಡುತ್ತಿದ್ದವು! ಅವಳಿಗೆ ಮಾತು ಬೇಕಿತ್ತು. ಯಾವಾಗಲೂ ಗಲಗಲ ಅನ್ನುವ ಜನರು ಸುತ್ತ ಇರಬೇಕು ಅನಿಸುತ್ತಿತ್ತು. ಸೃಷ್ಠಿಯ ಪ್ರತಿ ವಸ್ತುವಿನಲ್ಲೂ ಅವಳಿಗೆ ಅಧಮ್ಯ ಕುತೂಹಲ. ಅವಳು ಎಲ್ಲವನ್ನೂ,ಎಲ್ಲರನ್ನೂ ಪ್ರೀತಿಸುತ್ತಿದ್ದಳು.ಅವನು ಆಫೀಸಿಗೆ ಹೋದ ತಕ್ಷಣ ಮನೆಯ ೆಲ್ಲ ಕಿಟಕಿ-ಬಾಗಿಲುಗಳನ್ನು ತೆರೆದು ಒಳಬರುತ್ತಿದ್ದ ಸೂರ್ಯನ ಬೆಳಕಿನಲ್ಲಿ ಮೀಯುತ್ತ,ಹಿತವಾದ ಗಾಳಿಗೆ ಮೈಯೊಡ್ಡಿ ಕನಸು ಕಾಣುತ್ತಿದ್ದಳು.. ಆದರವನು ಇದಕ್ಕೆ ತದ್ವಿರುದ್ದ. ಮೊದಲಿನಿಂದಲೂ ಅವನು ಮಿತಬಾಷಿ. ಆಡಿದರೂ ಅಗತ್ಯವಿದ್ದಷ್ಟು. ತನ್ನ ಆಫೀಸು,ಬೆಳಗಿನ ಪೂಜೆ,ಸಂಜೆಯ ಸಂಧ್ಯಾವಂದನೆಗಳಲ್ಲಿ ಕಳೆದು ಹೋಗುತ್ತಿದ್ದ. ರಜಾದಿನಗಳಲ್ಲಿ ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಒಳಗಿನ ಧಗೆಯಲ್ಲಿ ಬೇಯುತ್ತಲೇ ನಿರಾಳವಾಗಿ ರಾಮಕೃಷ್ಣಪರಮಹಂಸರ ಪುಸ್ತಕಗಳನ್ನೊ ಭಗವದ್ಗೀತೆಯ ಸಾರವನ್ನೋ ಓದುತ್ತ ಕೂರುತ್ತಿದ್ದ. ಅವರಿಬ್ಬರೂ ಎರಡು ದೃವಗಳಾಗಿದ್ದರು. ಅವಳಿಗೆ ಅವನ ಬಗ್ಗೆ ವಿಚಿತ್ರ ಕುತೂಹಲ: ಅವನ ದೇವರ ಪೂಜೆ,ಆ ತನ್ಮಯತೆ,ಅಂತರ್ಮುಖತನ,ಪಾಪ-ಪುಣ್ಯಗಳ ಸ್ವರ್ಗ ನರಕಗಳ ಬಗೆಗಿನ ಅಪಾರ ನಂಬಿಕೆಗಳನ್ನು ಕಂಡು ಆಶ್ಚರ್ಯ! ಅವನಿಗೆ ಸಣ್ಣಪುಟ್ಟ ವಿಷಯಗಳಲ್ಲೂ ಅವಳು ಪಡೆಯುತ್ತಿದ್ದ ಸುಖದ ಬಗ್ಗೆ ತಿರಸ್ಕಾರ.ಅವಳ ಅತಿಯೆನಿಸುವಷ್ಟು ಪ್ರೀತಿ,ಜೋರಾಗಿ ಮಾತನಾಡಿದರೆ ಸಾಕು, ಕಣ್ಣು ತುಂಬಿ ಬರುವ ಸೂಕ್ಷ್ಮತೆ ಕಂಡು ಬೇಸರ. ಇಷ್ಟಿದ್ದರೂ ಅವರ ನಡುವೆ ಮಾತುಗಳಿಗೆ ನಿಲುಕದ ಪ್ರೀತಿಯಿತ್ತು. ಬದುಕು ಹೀಗೇ ಸಾಗುತ್ತಿರುವಾಗ, ಅದೊಂದು ದಿನನ ಆ ಗುಬ್ಬಚ್ಚಿಗಳು ಅವಳನ್ನು ಸೆಳೆದವು.ಅಡುಗೆ ಮನೆಯ ಪಕ್ಕದಲ್ಲಿದ್ದ ಸ್ಟೋರ್ ರೂಮಿನ ಸೂರಿನಲ್ಲಿ ಅವು ಗೂಡು ಕಟ್ಟಲು ಪ್ರಾರಂಬಿಸಿದ್ದವು. ಮೊದಮೊದಲು ಅವಳು ಅವುಗಳನ್ನು ಗಮನಿಸಿರಲಿಲ್ಲ. ಬರುಬರುತ್ತ ಅವುಗಳ ಕಿಚಕಿಚ ಶಬ್ದ ಜಾಸ್ತಿಯಾದಂತೆ ಅವಳ ಕಣ್ಣಿಗವು ಬಿದ್ದವು. ಬಂಗಾರದ ಬಣ್ಣದ ಒಣ ಹುಲ್ಲುಕಡ್ಡಿಗಳನ್ನು ಬಾಯಲ್ಲಿ ಕಚ್ಚಿತಂದು ಸೂರಿನಲ್ಲಿ ಸಿಗಿಸುತ್ತಿದ್ದವು..ಅವು ಕಿಟಕಿಯಲ್ಲಿ ಕೂತು ಅರ್ಥವಾಗದ ಬಾಷೆಯಲ್ಲಿ ಮಾತಾಡುವುದು,ಪುರ್ರನೆ ಹಾರಿಹೋಗಿ ಹುಲ್ಲು ತರುವುದು,ಕೊಕ್ಕಿನಿಂದ ೊಂದೊಂದೇ ಹುಲ್ಲು ಸೇರಿಸಿ ಕಲಾತ್ಮಕವಾಗಿ ಗೂಡು ಕಟ್ಟುವುದು,ಇವನ್ನೆಲ್ಲ ನೋಡುವುದು ಅವಳಿಗೆ ಹೊಸ ರೀತಿಯ ಅನುಭವ ಅನಿಸಿತು.ಆ ಪುಟ್ಟ ಹಕ್ಕಿಗಳ ಬದುಕು ಅದ್ಬುತವಾಗಿ ತೋರತೊಡಗಿತು.ಅವುಗಳ ನಿತ್ಯದ ಚಟುವಟಿಕೆಗಳನ್ನು ನೋಡುವುದರಲ್ಲಿ ಅವಳೆಷ್ಟು ತನ್ಮಯಳಾಗಿ ಬಿಟ್ಟಳೆಂದರೆ,ಅವನು ಆಫೀಸಿಗೆ ಹೋದ ತಕ್ಷಣ ಸ್ಟೋರಿನ ಬಾಗಿಲ ಬಳಿ ಬಂದು ಕೂರುತ್ತಿದ್ದಳು. ಪ್ರತಿನಿತ್ಯ ಅಕ್ಕಿಯ ಕಾಳುಗಳನ್ನುಅವುಗಳಿಗೋಸ್ಕರ ತಂದು ಹಾಕುವುದು,ಅದನ್ನು ತಿನ್ನುವಂತೆ ಹುಶ್ಹುಶ್ ಎಂದು ಸಂಕೇತದಲ್ಲಿ ಮಾತಾಡಿಸುವುದು ಮಾಮೂಲಿಯಾಗುತ್ತಾ ಹೋಯಿತು. ದಿನಕಳೆದಂತೆ ಗುಬ್ಬಚ್ಚಿಗಳ ಗೂಡು ಪೂರ್ಣವಾಯಿತು. ಸಂಜೆ ಅವು ಬಂದಾಗ ಸ್ಟೋರಿನ ಬಾಗಿಲು ಹಾಕಿದ್ದರೆ ಕೊಕ್ಕಿನಿಂದ ಕುಕ್ಕಿ ಶಬ್ದ ಮಾಡುತ್ತಿದ್ದವು. ಆಗವಳು ಓಡಿಹೋಗಿ ಬಾಗಿಲು ತೆಗೆದ ತಕ್ಷಣ ಗೂಡು ಸೇರುತ್ತಿದ್ದವು. ಬೆಳಿಗ್ಗೆ ಎದ್ದು ಕಿಟಕಿ ತೆಗೆಯುವುದು ಒಂದು ಕ್ಷಣ ತಡವಾದರೆ ಸಾಕು ಕಿಚಕಿಚ ೆಂದು ಹುಯಿಲೆಬ್ಬಿಸುತ್ತಿದ್ದವು. ಹೀಗವಳು ಗುಬ್ಬಚ್ಚಿಗಳ ಪ್ರಪಂಚದಲ್ಲಿ ಬೆರೆಯುತ್ತ ಹೋದಳು. ಹೀಗಿರುವಾಗ ಻ವಳು ಎರಡು ತಿಂಗಳು ಮುಟ್ಟಾಗಲಿಲ್ಲ. ಆಸ್ಪತ್ರೆಯಲ್ಲಿ ಲೇಡಿ ಡಾಕ್ಕರ್ ನಗುತ್ತಾ ನೀವು ತಂದೆಯಾಗಲಿದ್ದೀರಿ ಅಂದಾಗ ಅವನ ಮುಖ ಅರಳಿತ್ತು. ಅವು ಅಷ್ಟೊಂದು ಸಂತೋಷ ಪಟ್ಟಿದ್ದನ್ನು ಈ ಎರಡು ವರ್ಷಗಳಲ್ಲಿ ಅವಳು ಒಮ್ಮೆಯೂ ನೋಡಿರಲಿಲ್ಲ..ಆಗಿನಿಂದ ಅವನು ಬದಲಾಗತೊಡಗಿದ. ಅವಳೊಡನೆ ಹೆಚ್ಚು ಮಾತಾಡತೊಡಗಿದ. ಕಣ್ಣಲ್ಲಿ ಕಣ್ಣಿಟ್ಟು ಅವಳ ಆರೈಕೆ ಮಾಡತೊಡಗಿದ. ಅವಳ ಆರೋಗ್ಯಕಾಗಿ ಕಂಡಕಂಡ ದೇವರುಗಳಿಗೆ ಅರ್ಚನೆ ಮಾಡಿಸತೊಡಗಿದ. ಅವನ ಪ್ರೀತಿಯ ನಡವಳಿಕೆ,ಗುಬ್ಬಚ್ಚಿಗಳ ಗೂಡು ಅವಳ ಬದುಕನ್ನು ಸುಂದರಗೊಳಿಸತೊಡಗಿದವು. ಒಂದು ಬಾನುವಾರ ಮದ್ಯಾಹ್ನ ಅವನು ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ. ಒಂದು ಉದ್ದನೆಯ ಬಿದಿರು ಕಡ್ಡಿಗೆ ಪೊರಕೆ ಕಟ್ಟಿ ಸೂರಿನ ಜೇಡರ ಬಲೆಯನ್ನು ತೆಗೆಯಹತ್ತಿದ. ಸ್ಟೋರಿಗೆ ಬಂದಾಗ ಆ ಗುಬ್ಬಚ್ಚಿ ಗೂಡು ಅವನ ಕಣ್ಣಿಗೆ ಬಿತ್ತು. ಮನೆಯೊಳಗಿದಗದ ಗೂಡು ಅವನಿಗೆ ಅಸಹ್ಯವಾಗಿಯೂ ಅಪಶಕುನವಾಗಿಯೂ ಕಂಡಿತು. ಅದನ್ನು ತೆಗೆಯಲು ಪ್ರಯತ್ನಿಸಿದಾಗ ಅವಳು ತಡೆದಳು. ಆ ಗೂಡನ್ನು ಮುಟ್ಟದಂತೆ ಅವನನ್ನು ವಿನಂತಿಸಿದಳು. ಅದೇಕೋ ಅವನು ಅವಳ ಮಾತಿಗೆ ಕಿವಿಗೊಡದೆ ಗೂಡನ್ನು ಕೋಲಿನಿಂದ ತಳ್ಳಿದ. ತಳ್ಳಿದ ರಭಸಕ್ಕೆ ಗೂಡು ನೆಲಕ್ಕೆ ಬಿತ್ತು.ಅದರೊಳಗಿದ್ದ ಬಿಳಿಯ ಬಣ್ಣದ ಪುಟ್ಟಮೊಟ್ಟೆಗಳು ಒಡೆದು ಹೋದದ್ದನ್ನು ನೋಡಿದ ಻ವಳು ಬಿಕ್ಕಿಬಿಕ್ಕಿ ಅಳ ತೊಡಗಿದಳು. ಅವನ ಯಾವ ಸಮಾಧಾನವೂ ಅವಳನ್ನು ಸಣತೈಸಲಾಗಲಿಲ್ಲ.಻ವನು ಕಳಚಿ ಬಿದ್ದ ಗೂಡು ,ಒಡೆದ ಮೊಟ್ಟೆಗಳನ್ನು ಹೊರಗೆಸೆದು ಬಂದರೂ ಅವಳ ಻ಳು ನಿಂತಿರಲಿಲ್ಲ. ಬೇಸಿಗೆಯ ಧಗೆಗೆ,ಅತ್ತ ಸುಸ್ತಿಗೆ ತಲೆ ಸುತ್ತಿದಂತಾಗಿ ಕೆಳಗೆ ಬಿದ್ದಳು. ಅವಳನ್ನು ಎತ್ತಿಕೊಂಡುಹೋಗಿ ಹಾಸಿಗೆಯಲ್ಲಿ ಮಲಗಿಸಿ,ಮುಖಕ್ಕೆ ನೀರು ಚುಮುಕಿಸಿದ.ಪ್ರಜ್ಞೆ ಮರಳಿದ ಅವಳ ಕಣ್ಣುಗಳಲ್ಲಿದ್ದ ಬಾವನೆಗಳನ್ನು ಅವನಿಂದ ೋದಲಾಗಲಿಲ್ಲ. ಅವಳ ಸೂಕ್ಷ್ಮ ಮನಸ್ಸಿಗೆ ಒಡೆದ ಮೊಟ್ಟೆಗಳ ಚಿತ್ರವನ್ನು ಮರೆಯಲಾಗಲಿಲ್ಲ. ಒಂದು,ಎರಡು,ಮೂರು..ಹೀಗೆ ದಿನಗಳು ಉರುಳುತ್ತ ಹೋದವು.ಅವಳಿಗ ಮಾತು ಕಡಿಮೆ ಮಾಡಿದ್ದಳು. ಅವನ ಪ್ರಶ್ನೆಗಳಿಗೆ ಮೌನವೊಂದೇ ಉತ್ತರವಾಗ ತೊಡಗಿತ್ತು. ಅವಳ ಶೂನ್ಯದತ್ತ ನೆಟ್ಟದೃಷ್ಠಿ, ಅನ್ಯಮನಸ್ಕತೆಯಿಂದಾಗಿ ಅವನ ಻ಸಹನೆ ಹೆಚ್ಚುತ್ತ ಹೋಯಿತು. ಮನಸ್ಸು ಸ್ಥಿಮಿತದಲಿಟ್ಟುಕೊಳ್ಳಲು ಮತ್ತಷ್ಟು ಪೂಜೆ-ಪುನಸ್ಕಾರಗಳಲ್ಲಿ ಹೊತ್ತು ಕಳೆಯ ತೊಡಗಿದ. ಻ವನ ಮೌನಕ್ಕೆ ಅವಳಮೌನವೂ ಸೇರಿ ಆ ಮನೆಯಲ್ಲಿ ಶಬ್ದಗಳು ಕಳೆದುಹೋದವು. ಹೀಗಾಗಲೆ ಅವಳಿಗೆ ನಾಲ್ಕು ತಿಂಗಳು ತುಂಬುತ್ತ ಬಂದಿತ್ತು.ಒಂದು ಸಂಜೆ ಅವನು ಆಫೀಸಿನಿಂದ ಬಂದಾಗವಳು ಸ್ಟೋರ್ ರೂಮಿನ ಬಾಗಿಲಲ್ಲಿ ಬಿದ್ದಿದ್ದಳು. ಅವಳನ್ನು ಎತ್ತಕೊಂಡು ಆಸ್ಪತ್ರೆಗೆ ಓಡಿ ಹೋದ. ಡಾಕ್ಟರ್ ಅವಳಗೆ ಗರ್ಬಪಾತವಾಗಿದೆ, ತಕ್ಷಣಕ್ಕೆ ಮತ್ತೆ ಗರ್ಬಿಣಿಯಾದರೆ ಅಪಾಯವಿದೆ ಹುಶಾರಾಗಿ ನೋಡಿಕೊಳ್ಳಿ ಅಂದರು. ಒಂದಷ್ಟು ದಿನಗಳ ಾಸ್ಪತ್ರೆಯ ವಾಸದ ನಂತರ ಮತ್ತೆ ಮನೆಗೆಬಂದವಳೆಷ್ಟು ಕಂಗೆಟ್ಟಿದ್ದಳೆಂದರೆ ಯಾವಾಗಲೂ ಸೂರು ನಿಟ್ಟಿಸುತ್ತ ಮಲಗಿರುತ್ತಿದ್ದಳು. ಕಣ್ಣು ಬಿಟ್ಟರೆ ಸಾಕು ಅವನು ಗೂಡು ಕಿತ್ತೆಸೆದಂತೆ,ಸಂಜೆ ಗೂಡು ಕಾಣದೆ ತಾರಾಡುತ್ತಿದ್ದ ಗುಬ್ಬಚ್ಚಿಗಳ ದೃಶ್ಯವೇ ಕಾಣುತ್ತಿತ್ತು. ಹಗಲು-ರಾತ್ರಿ ಬಾಗಿಲುಕಿಟಕಿಗಳನ್ನು ಹಾಕಿಕೊಂಡೇ ಮಲಗಿರುತ್ತಿದ್ದಳು. ರಾತ್ರ ಻ವನು ದೀಪ ಹಾಕಿದರೆ ಅವಳದನ್ನು ಆರಿಸಿ ಮಾತಾಡದೆ ಮಲಗುತ್ತಿದ್ದಳು. ಅವಳೀಗ ಕತ್ತಲನ್ನು ಆರಿಸಿಕೊಂಡಿದ್ದಳು. ಅವಳ ಪರಿಸ್ಥಿತಿಯನ್ನು ಕಂಡು ಅವನು ದಿಗ್ಬ್ರ್ರಮೆಗೊಳಗಾಗಿದ್ದ. ಻ವಳ ೀ ಸ್ಥಿತಿಗೆ ತಾನೇಕಾರಣವೇ ಎಂಬ ಪ್ರಶ್ನೆ ಅವನನ್ನ ಕಾಡತೊಡಗಿತು. ಪಾಪಪುಣ್ಯಗಳ ಬೀತಿಯಲ್ಲೇ ಬೆಳೆದವನಿಗೆ ತಾನು ಒಡೆದ ಮೊಟ್ಟೆಗಳಿಗೂ,ಅವಳ ಗರ್ಬಪಾತಕ್ಕೂ ಸಂಬಂದವಿರಬಹುದೆನಿಸಿ ಪಾಪಪ್ರಜ್ಞೆಯಲಿ ನರಳತೊಡಗಿದ. ಮಾತಾಡಲು ಪ್ರಾರಂಬಿಸಿದವನು ಮತ್ತೆ ಮೌನಿಯಾದ. ಾ ಪುಟ್ಟ ಮನೆಯೊಳಗೆ ಮಾತುಗಳಿಲ್ಲವಾಗಿ ವಿಷಾದದ ನೆರಳು ಆವರಿಸ ತೊಡಗಿತು. ಅವನೀಗ ಮನೆಯ ಎಲ್ಲ ಕೆಲಸಗಳನ್ನೂ ತಾನೇ ಮಾಡುತ್ತಾನೆ. ಬೆಳಿಗ್ಗೆ ಅವಳಿಗೆ ತಿಂಡಿ ಕೊಟ್ಟು ಆಫೀಸಿಗೆ ಹೋಗುತ್ತಾನೆ. ಹೋಗುವ ಮುಂಚೆ ಸ್ಟೋರಿನ ಕಿಟಕಿ ಬಾಗಿಲುಗಳನ್ನು ತೆರೆದಿಡುತ್ತಾನೆ. ಸಂಜೆ ತಿರುಗಿ ಬಂದವನು ಅವಳಿಗೆ ತಿನ್ನಲು ಏನಾದರು ಕೊಟ್ಟು ಸ್ಟೋರ್ ರೂಮಿಗೆ ಹೋಗುತ್ತಾನೆ,ತಾನೇ ಕಿತ್ತು ಹಾಕಿದ ಗೂಡಿನ ವಾರಸುದಾರ ಗುಬ್ಬಚ್ಚಿಗಳ ಹಾದಿ ಕಾಯುತ್ತಾನೆ. ಪ್ರತಿನಿತ್ಯವೂ ಅವನು ಹಾಕಿಟ್ಟ ಅಕ್ಕಿ ಕಾಳುಗಳು ಹಾಗೆ ಬಿದ್ದಿವೆ. ಓ! ದೇಚರೆ ,ಮತ್ತೆ ಆಗುಬ್ಬಚ್ಚಿಗಳು ಬರಲಿ, ಈ ಮನೆಯೊಳಗೆ ಗೂಡು ಕಟ್ಟಲಿ ಎಂದು ಪ್ರಾರ್ಥಿಸುತ್ತಾನೆ. ಆದರೆ, ತೆರೆದ ಕಿಟಕಿಗಳು ತೆರೆದೇ ಇವೆ! *******************************************************

ಕಥಾಯಾನ Read Post »

ಕಥಾಗುಚ್ಛ

ವ್ಯಾಲಂಟೈನ್ಸ್ ಡೇ ವಿಶೇಷ

ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ. ಪ್ರಮಿಳಾ ಎಸ್.ಪಿ. ಈಗ್ಗೆ ಹನ್ನೆರೆಡು ವರ್ಷಗಳ ಕೆಳಗೆ ಕಾಲೇಜಿನ ಗೆಳತಿಯರೆಲ್ಲ ಗುಂಪು ಸೇರಿ ಒಂದು ತೀರ್ಮಾನ ಕ್ಕೆ ಬಂದರು.ಯಾರಿಗೆಲ್ಲಾ ಪ್ರೇಮಿ ಇದ್ದಾನೋ ಅವರು ಹಸಿರು ಬಟ್ಟೆ ತೊಡುವುದು…ಯಾರಿಗೆ ಪ್ರಿಯತಮ ಇಲ್ಲವೋ ಅವರು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬರುವುದು ಎಂದು.ನಾಳೆ ಪ್ರೇಮಿಗಳ ದಿನ ಹೀಗೆ ಆಚರಿಸೋಣ ಎಂದರು.ಹಳ್ಳಿ ಹುಡುಗಿ ನಾನು.ಅದರ ಕಲ್ಪನೆ ಇಲ್ಲದ ನಾನು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬಂದೆ.ಇಡೀ ದಿನ ಹಾಡು ಆಟ ಪಾಠ ಮುಗಿಸಿ ಹೊರ ಬರುವ ವೇಳೆಗೆ ಎದುರಿಗಿದ್ದ ಕಾರ್ ಶೋ ರೂಮಿನ ಯುವಕ ಕೈ ನೀಡಿ ಕೆಂಪು ಗುಲಾಬಿ ಚಾಚಿದ. ನಗುತ್ತಾ ತೆಗೆದುಕೊಂಡೆ.ಗುಲಾಬಿ ಸ್ವೀಕರಿಸಿ ದರೆ ಅವನ ಪ್ರೀತಿಯನ್ನು ಸ್ವೀಕರಿಸಿದಂತೆ ಎಂಬ ಕನಿಷ್ಠ ಆಲೋಚನೆ ನನಗೆ ಬರಲಿಲ್ಲ. ಕೆಂಪು ಗುಲಾಬಿಯ ಇವನೊಂದಿಗೆ ಮಾತು,ಸ್ನೇಹ,ಪ್ರೇಮ ,ಸುತ್ತಾಟ ಪ್ರಾರಂಭವಾಯಿತು.ಜಗತ್ತಿನ ಕಣ್ಣಿಗೆ ನಾವು ಕಾಣಿಸಿದರೂ ನಮ್ಮ ಕಣ್ಣಿಗೆ ಜಗತ್ತು ಕಾಣಲಿಲ್ಲ. ಅಪ್ಪನ ಸಾವಿನಿಂದಾಗಿ ಅಮ್ಮ ಸಂಸಾರದ ನೊಗ ಹೊತ್ತಿದ್ದಳು.ಇಬ್ಬರು ಅಕ್ಕಂದಿರ ಮದುವೆ ಮುಗಿದಿತ್ತು.ಅಕ್ಕ ಭಾವ ಸೇರಿ ಬೇರೆ ಕಡೆಗೆ ನನ್ನ ಮದುವೆ ಒಪ್ಪಂದ ಮಾಡಿಕೊಂಡರು.ನಾನು ಇವನೇ ಪ್ರೇಮ…ಪ್ರೇಮವೇ ಇವನು ಎಂದು ಭಾವಿಸಿ ಈಗ್ಗೆ ಹನ್ನೊಂದು ವರ್ಷದ ಕೆಳಗೆ “ಪ್ರೇಮಿಗಳ ದಿನ”ವೇ ಉಟ್ಟ ಬಟ್ಟೆಯಲ್ಲಿ ಹೊರಟು ಬಂದೆ.ಅಂದಿಗೆ ಅಮ್ಮನ ಮತ್ತು ಅಮ್ಮನ ಕಡೆಯ ಎಲ್ಲರೂ ಹರಿದ ಚಪ್ಪಲಿ ಎಸೆದಂತೆ ಮನಸ್ಸಿನಿಂದ ತೆಗೆದುಬಿಟ್ಟರು. ಇವನ ನಂಬಿ ಹಿಂದೆ ಬಂದೆ.ಕಾಫಿ ತೋಟದ ಬೆಟ್ಟದ ಮೇಲೊಂದು ಒಂಟಿಯಾದ ಪುಟ್ಟ ಮನೆ.ಮುಖ್ಯ ರಸ್ತೆಗೆ ಐದು ಕಿಲೋಮೀಟರ್ ದೂರ.ಅಕ್ಕ ಪಕ್ಕದಲ್ಲಿ ಮನೆಗಳ ಸುಳಿವೂ ಇಲ್ಲ.ಅತ್ತೆ ಮಾವ ಅತ್ತಿಗೆ ಮನೆ ತುಂಬಿಸಿಕೊಂಡರು.ಇವನ ಹೆಜ್ಜೆಗೆ ಗೆಜ್ಜೆಯ ನಾದವಾದೆ. ಉಸಿರಿಗೆ ದ್ವನಿಯಾದೆ.ನನ್ನೊಳಗೆ ನಾನೇ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದೆ.ಹೊಸತನ… ಹೊಸಬಾಳು ಖುಷಿ ನೀಡಿತು.ಎರೆಡು ಮುದ್ದಾದ ಗಂಡು ಮಕ್ಕಳು ಹುಟ್ಟಿದವು.ತಾಯ್ತನ ತೃಪ್ತಿ ತಂದಿತ್ತು. ದಿನ ಕಳೆದಂತೆ ಅತ್ತೆ ಅತ್ತಿಗೆ ನಾನು ಕಾರಣ ಎಂದು ತೋರಿಸುತ್ತಾ ಕುಡಿಯಲು ಶುರುವಿಟ್ಟು ಕೊಂಡ.ಸಿಗರೇಟು ಹೊಗೆ ಆವರಿಸಿತು.ಕುಟುಂಬ ಕಲಹ ಹೆಚ್ಚಾಗಿ… ನನ್ನ ಬೆನ್ನು ಬಾಸುಂಡೆಗಳಿಗೆ ಜಾಗ ನೀಡಿತು.ತಲೆ ಕೂದಲು ತೆಳ್ಳಗಾದವು.ಕೆನ್ನೆಗಳ ಮೇಲೆ ಕಪ್ಪು ಮಚ್ಚೆಗಳು ದೊಡ್ಡವಾದವು.ಈಗ ನನ್ನ ಪಾಲಿಗೆ ಜಗತ್ತು ಕತ್ತಲಾಯಿತು. ಕಾಡಿನ ಹಸಿರು ಬೇಡವಾಯಿತು.ದಿನೇ ದಿನೇ ಹಕ್ಕಿಗಳ ಹಾಡು ಬೋರೆನಿಸಿತು. ಕುಡಿದವನು ವಾಪಸ್ಸು ಮನೆಗೆ ಬರುವುದನ್ನು ಮರೆತುಹೋದ.ನಾನು ಒಂಟಿಯಾದೆ.ಅತ್ತೆ ಅತ್ತಿಗೆ ಮಾವ ಸೇರಿ ನನ್ನನ್ನು ಇಲ್ಲಿಂದಲೂ ಎಸೆದರು. ಈಗ ನಾನು ಬೀಳುವುದಾದರೂ ಎಲ್ಲಿಗೆ…? ಎರೆಡು ಮಕ್ಕಳನ್ನು ಏನು ಮಾಡಲಿ…? ಉದ್ಯೋಗ ಕ್ಕೆ ಎಲ್ಲಿಗೆ ಹೋಗಲಿ…? ಅರ್ಧಕ್ಕೆ ನಿಂತ ಓದಿಗೆ ಯಾವ ಕೆಲಸ ಸಿಕ್ಕೀತು…? ನನ್ನ ಪಾಲಿಗೆ ಯಾರಿದ್ದಾರೆ…? ಯಾರ ಪ್ರೇಮಕ್ಕೆ ನಾನು ಕಾಯಲಿ..? ಮುದ್ದಾದ ಮಕ್ಕಳನ್ನು ಅವನ ಮನೆಯಲ್ಲೇ ಬಿಟ್ಟು ದೂರ ಹೊರಟು ಬಂದು ಹಾಸ್ಟೆಲ್ ಸೇರಿದ್ದೇನೆ.ಗಾರ್ಮೆಂಟ್ಸ್ ಗೆ ಕಾಲಿಟ್ಟು ಕೆಲಸ ಮಾಡಲು ನಿಂತಿದ್ದೇನೆ. ರಾತ್ರಿಗೂ…ಹಗಲಿಗೂ ವ್ಯತ್ಯಾಸ ಇಲ್ಲವಾಗಿದೆ.ಇವನ ಪ್ರೇಮವೂ ಇಲ್ಲ.ಮಕ್ಕಳಿಗೆ ವಾತ್ಸಲ್ಯ ನೀಡಲೂ ಆಗುತ್ತಿಲ್ಲ. ಅಮ್ಮನ ಮನೆಯ ಮೆಟ್ಟಿಲೂ ತುಳಿಯಲಾಗುತ್ತಿಲ್ಲ. ಹಾಸ್ಟೆಲ್ ಹಾಸಿಗೆಯ ಮೇಲೆ ಜೀವಂತ ಶವದಂತೆ ಮಲಗಿದ್ದೇನೆ. ನಾಳೆ ಮತ್ತೊಂದು “ಪ್ರೇಮಿಗಳ ದಿನ” ಬಂದು ನಿಂತಿದೆ.ಹಸಿರು ಬಟ್ಟೆ,ಕೆಂಪು ಗುಲಾಬಿ ಕಾಣದಷ್ಟು ನೀರು ತುಂಬಿದೆ ನನ್ನ ಕಣ್ಣಿನೊಳಗೆ.ಕನಸಿನ ಮೂಟೆಗೆ ನೋವಿನ ದಾರ ಬಿಗಿದು ಆ ಮೂಟೆಯ ಮೇಲೆ ನಿಂತು ಹೇಳಲೇ…. “ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ”…ಎಂದು…!!? *************************

ವ್ಯಾಲಂಟೈನ್ಸ್ ಡೇ ವಿಶೇಷ Read Post »

ಕಥಾಗುಚ್ಛ

ಮಕ್ಕಳ ಕಥೆ

ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ. ವಿಜಯಶ್ರೀ ಹಾಲಾಡಿ ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ……(ಮಕ್ಕಳ ಕತೆ) ಅವತ್ತು ಬೆಳಗ್ಗೆ ಚಳಿ. ಇಬ್ಬನಿ ಹನಿ ಕೂತ ನಾಚಿಕೆ ಮುಳ್ಳಿನ ಗಿಡ ಮತ್ತಷ್ಟು ನಾಚಿ ಮಣ್ಣ ಹೆಗಲಿಗೆ ತಲೆ ಇಟ್ಟಿತ್ತು. ಸುತ್ತ ಕಣ್ಣರಳಿಸಿ ನೋಡಿದ ಬೆಳ್ಳಿಬೆಕ್ಕು ಬಾಳೆಗಿಡದ ಬುಡದಲ್ಲಿ ಶ್ರದ್ಧೆಯಿಂದ ಗುಂಡಿ ತೋಡತೊಡಗಿತ್ತು. ನಿನ್ನೆ ಪುಟ್ಟ ಹೇಳುತ್ತಿದ್ದ ‘ಬೆಳ್ಳಿಯ ಬಾಲ ಟಿಶ್ಯೂ ಪೇಪರ್, ಸುಸ್ಸು ಮಾಡಿ ಅದರಲ್ಲೇ ಒರೆಸಿಕೊಳ್ಳೋದು.’ ಅಂತ! ಬೆಳ್ಳಿಗೆ ನಗು ಬಂತು. ಹಾಗೆ ಒಂದು ಹಾಡು ಗುನುಗತೊಡಗಿತು. ‘ಅದ್ಸರಿ ಪ್ರತಿ ದಿನ ನೋಡ್ತೀನಿ ಈ ಬಾಗಾಳು ಮರ ಬೆಳ್‌ಬೆಳಗ್ಗೆ ಒಂದಷ್ಟು ಹೂ ತಯಾರಿಸಿ ಎಸೆದಿರುತ್ತಲ್ಲ, ಏನು ಸೊಕ್ಕು ಅಂತೀನಿ’ !! ಬೆಳ್ಳಿಬೆಕ್ಕಿಗೆ ಒಬ್ಬೊಬ್ನೆ ಮಾತಾಡೋ ಚಟ! ‘ನಮ್ಮ ಪುಟ್ಟನ ಶಾಲೆಯಲ್ಲಿ ಸಿ.ಸಿ. ಕ್ಯಾಮರಾ ಅಂತೆ.. ಕಥೆ ಪಡ್ಚ ಆಯ್ತು. ಆ ಕ್ಯಾಮರಾದಡಿ ಓದುವುದು ಹೇಗಪ್ಪ, ಹರಟೆ ಹೊಡೆಯುವುದು ಹೇಗೆ, ಹುಣಸೇಬೀಜ ತಿನ್ನೋದು ಹೇಗೆ, ಕದ್ದು ಆಡೋವಾಗ ಕ್ಯಾಮರಾ ಆಫ್ ಮಾಡ್ತಾನಾ ಹೇಗೆ, ” ” “’ ನಗು ಬಂದು ಉರುಳಿ ಉರುಳಿ ನಕ್ಕು ಬಿಟ್ಟಿತ್ತು.‘ಹೂ ಗುಂಡಿ ಸರಿ ಹೋಗಿಲ್ಲ ಇನ್ನು’ ತನ್ನ ತಲೆಗೆ ತಾನೇ ಹೊಡೆದುಕೊಂಡು ಮಿದು ಪಂಜದಲ್ಲಿ ಮಣ್ಣು ಹೊರ ಹಾಕತೊಡಗಿತು. ‘ಹೂಂ ಬೆಳ್ಳಿ ಶಹಭಾಷ್ ಈಗ ಸರಿ ಹೋಯ್ತು’ ಪಟಪಟ ಬಾಲ ಬಡಿದು ಗುಂಡಿ ಮೇಲೆ ಕೂರಬೇಕೆನ್ನುವಾಗ..‘ಇದೆಂತದಪ್ಪ ಆ ಹಲಸಿನ ಮರದ ಮೇಲೆ?’ ಥಟ್ಟ ಎದ್ದು ಹಲಸಿನ ಮರದ ಕಡೆಗೆ ನೆಗೆಯಿತು. ನೋಡುವುದೆಂತ !! ಅಲ್ಲೂ ಒಂದು ಸಿ.ಸಿ. ಕ್ಯಾಮರಾ! ‘ಹಾಂ ಇದೆಂತ ಕಥೆಯಪ್ಪ ಪುಟ್ಟನ ಅಪ್ಪ ಹಾಕಿಸಿದ್ದ ಅಂತ’. ಬೆಳ್ಳಿ ಮೂಗಿನ ಮೇಲೆ ಬೆರಳಿಟ್ಟು ಬಾಲದ ಮಣ್ಣನ್ನು ಕೊಡವಿತು. ‘ಅಯ್ಯೋ ಕ್ಯಾಮರಾ ನಾನು ತೋಡಿದ ಗುಂಡಿಯನ್ನೇ ನೋಡುತ್ತಿದೆ ಥೂ. ಕಕ್ಕ ಮಾಡೋದು ಹೇಗೆ ಈಗ?’ ಯೋಚಿಸುತ್ತಾ ಬೆಳ್ಳಿಗೆ ಸಿಟ್ಟು ಬಂದು ಬಿಳಿಯ ಮುಖ ಕೆಂಪಾಯಿತು.ಧಪಧಪ ಕಾಲು ಬಡಿಯುತ್ತಾ ಮನೆಯೊಳಗೆ ಓಡಿ ಕಂಪ್ಯೂಟರ್ ಹತ್ತಿ ಹೊದಿಕೆಯೊಳಗೆ ತಲೆ ಹಾಕಿ ಮಲಗಿತು. ‘ಎಲ್ಲರೂ ಕೇಳಿಸಿಕೊಳ್ಳಿ ಇನ್ನು ನಾಲ್ಕು ದಿನ ಕಕ್ಕ ಮಾಡೋಲ್ಲ, ಐದನೇ ದಿನ ಆ ಸಿ.ಸಿ. ಕ್ಯಾಮರಾ ಅಲ್ಲಿಂದ ಹೋದರೆ ಸರಿ ಇಲ್ಲಾ ಅಂದ್ರೆ ಅಷ್ಟೆ! ಪುಟ್ಟ ನನ್ನನ್ನು ಕಳಕೋಬೇಕಾಗುತ್ತೆ, ನಂಗೇನೂ ಬೇರೆ ಮನೆ ಸಿಗಲ್ವ..’ !?ತಿರುತಿರುಗಿ ಗೊಣಗಿತು. ಹೆದರಿಕೆ ಏನೀಗ ಜೋರಾಗೇ ಅರಚಿತು. ಪುಟ್ಟನ ಅಮ್ಮ ಬಂದು ‘ಈ ಬೆಕ್ಕಿಗೆ ಏನಾಯ್ತಪ್ಪ ಪೋಕಾಲ’ ಎಂದು ತಲೆಗೆ ಮೊಟಕಿದರು. ಬೆಳ್ಳಿ ಸುಯ್ಯನೆ ಬಾಲ ಮಡಚಿ ಚಳಿ ಚಳಿ ಎನ್ನುತ್ತ ನಿದ್ದೆಯ ನಾಟಕ ಮಾಡಹತ್ತಿತು!*****************************

ಮಕ್ಕಳ ಕಥೆ Read Post »

ಕಥಾಗುಚ್ಛ

ಕಥಾಯಾನ

ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಟಿ. ಎಸ್.‌ ಶ್ರವಣ ಕುಮಾರಿ ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಕಾಗಕ್ಕ ಇನ್ನೂ ಬೆಳಗಾಗ ಗೂಡಿನ ಬಾಗಿಲು ತೆರೆಯುತ್ತಿರುವಾಗಲೇ ತನ್ನ ಗೂಡಿನ ಮುಂದೆ ಆಗಲೇ ರಂಗೋಲಿ ಇಡುತ್ತಿದ್ದ ಗುಬ್ಬಕ್ಕ ಇವಳನ್ನೇ ಕಾಯುತ್ತಿದ್ದವವಂತೆ ಶಬ್ದ ಮಾಡಿ ಗಮನ ಸೆಳೆದಳು.  ಬಲಗೈಲಿದ್ದ ಪೊರಕೆಯನ್ನು ಎಡಗೈಗೆ ಬದಲಾಯಿಸಿಕೊಂಡ ಕಾಗಕ್ಕ ಏನು ಎನ್ನುವಂತೆ ಸನ್ನೆ ಮಾಡಿದಳು. “ತುಂಬಾ ವಿಷಯ ಇದೆ ಮಾತಾಡಕ್ಕೆ; ಗಂಡ ಮಕ್ಕಳು ಹೊರಟ ಮೇಲೆ ಬರ್ತೀನಿ” ಎನ್ನುವಂತೆ ಸಂಜ್ಞೆ ಮಾಡಿ ಕಾಗಕ್ಕನೊಂದಿಗೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಂಡು ರಂಗೋಲಿ ಡಬ್ಬಿಯನ್ನೆತ್ತಿಕೊಂಡು ಗೂಡೊಳಗೆ ಹೋದಳು. ಕಾಗಕ್ಕನಿಗೋ ಆಗಿನಿಂದಲೇ ಕದನ ಕುತೂಹಲ ಶುರುವಾಯಿತು. ಬೆಳ್ಳಂಬೆಳಗ್ಗೆಯೇ ತನಗಾಗಿ ಕಾದು ನಿಂತು ಕತೆಯ ಪ್ರೋಮೋದ ಮೊದಲ ಕಾರ್ಡ್ ತೋರಿಸಿ ಹೋಗಿದ್ದಾಳೆಂದರೆ ವಿಷ್ಯ ಸಖತ್ತಾಗೇ ಇದ್ದಿರಬೇಕು.  ಯಾವುದಕ್ಕೂ ಇಬ್ಬರ ಗೂಡಿಂದಲೂ ಎಲ್ಲರೂ ಹೊರಡುವುದಕ್ಕೆ ಕಾಯಬೇಕಲ್ಲ ಎಂದುಕೊಂಡು ಆತುರಾತುರವಾಗೆ ಬೆಳಗಿನ ಸ್ನಾನ, ತಿಂಡಿ, ಅಡುಗೆ ಎಲ್ಲವನ್ನೂ ಮುಗಿಸಿ ಗಡಿಯಾರದ ಮುಳ್ಳು ಮುಂದೆ ಸಾಗುವುದನ್ನೇ ನಿರೀಕ್ಷಿಸುತ್ತಾ ನಿಂತವಳಿಗೆ ಇಂದೇಕೋ ಅದು ಬಲು ನಿಧಾನವಾಗೇ ಚಲಿಸುತ್ತಿದೆ ಅನ್ನಿಸಹತ್ತಿತು. ಅಂತೂ ಕಡೆಗೆ ಗಂಡ, ಮಕ್ಕಳೆಲ್ಲರೂ ತಿಂಡಿ ತಿಂದು, ಊಟದ ಡಬ್ಬಿ ಹಿಡಿದು ಹೊರಟ ತಕ್ಷಣ ಹೊರಗೆ ಬಂದು ಗುಬ್ಬಕ್ಕನ ಗೂಡಿನ ಕಡೆ ನೋಡಿದರೆ ಅಲ್ಲಿ ಇನ್ನೂ ಯಜಮಾನರ ಸವಾರಿ ಹೊರಟಂತಿರಲಿಲ್ಲ. ಅವರ ವಾಹನ ಮುಂದೇ ನಿಂತಿತ್ತು.  ಯಾರೋ ಬಂದಿರಬಹುದೇನೋ… ಅವರ ಗಾಡಿಯೂ ಅಲ್ಲೇ ನಿಂತಿದೆ. ಎಷ್ಟು ಹೊತ್ತಿಗೆ ಹೊರಡುತ್ತಾರೋ… ಇವಳ ಕಾತರ ಹೆಚ್ಚಾಗತೊಡಗಿ, ಅದನ್ನು ತೋರಿಸುವಂತಿಲ್ಲದೆ ಆ ಬಿಸಿಲಲ್ಲೂ ಮುಂದಿನ ಕೈತೋಟದ ಗಿಡಗಳ ಒಣಗಿದೆಲೆಯನ್ನು ಕೀಳುತ್ತಾ, ಬಿದ್ದಿರುವ ಒಣ ಹೂವುಗಳನ್ನೂ, ಕಸಕಡ್ಡಿಗಳನ್ನೂ, ತರಗೆಲೆಗಳನ್ನೂ ಹೆಕ್ಕಿ ತೆಗೆಯುತ್ತಾ ಕಾಲ ಕಳೆಯ ತೊಡಗಿದಳು. ಅಂತೂ ಇಂತೂ ಕಡೆಗೆ ಎರಡು ಗಾಡಿಗಳೂ ಗುಬ್ಬಕ್ಕನ ಗೂಡಿನ ಮುಂದಿನಿಂದ ಹೊರಟ ಶಬ್ಧ ಕೇಳಿ ಪರಮಾನಂದವಾಯಿತು. ಹೊರಗೆ ತಲೆ ಹಾಕಿದ ಗುಬ್ಬಕ್ಕ ʻಐದು ನಿಮಿಷ ತಡಿ ಬಂದೆʼ ಎನ್ನುವಂತೆ ಇಷಾರೆ ಮಾಡಿ ಮತ್ತೆ ಒಳಹೊಕ್ಕಳು.  ಬಾಗಿಲನ್ನು ತೆರೆದಿಟ್ಟೇ ಒಳಬಂದ ಕಾಗಕ್ಕನಿಗೋ ಒಂದೊಂದು ನಿಮಿಷವೂ ಗಂಟೆಯಂತೆ ತೋರುತ್ತಿದ್ದರೆ, ತನ್ನ ತಲೆಯಲ್ಲಿ ಹುಳ ಬಿಟ್ಟು ಗುಬ್ಬಕ್ಕ ಆರಾಮಾಗಿ ಇದ್ದಾಳೆ ಅನ್ನಿಸಿ ಅವಳ ಮೇಲೆ ತುಸು ಕೋಪವೇ ಬಂದರೂ, ಮಾತಿನ ಮಧ್ಯ ತಿನ್ನಲು ಒಂದಷ್ಟು ಹಚ್ಚಿದ ಕಳ್ಳೆಪುರಿಯನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಬಂದು ಟೇಬಲ್ಲಿನ ಮೇಲೆ ಇರಿಸಿದಳು. ಕಾಫಿ ಡಿಕಾಕ್ಷನ್ ಇದೆ ತಾನೇ ಎಂದು ಫಿಲ್ಟರ್‌ನ ಕೆಳಗಿನ ಬಟ್ಟಲನ್ನು ಮತ್ತೊಮ್ಮೆ ನೋಡಿ ಸಮಾಧಾನಗೊಂಡಳು.  ಇವಳ ಐದು ನಿಮಿಷ ಇನ್ನೂ ಆಗಲಿಲ್ಲವೇ ಎಂದು ಸಿಡಿಮಿಡಿಗೊಳ್ಳುತ್ತಿರುವಾಗಲೇ ಅಂತೂ ಗುಬ್ಬಕ್ಕ “ಉಸ್ಸಪ್ಪ.  ಸಾಕಾಯ್ತು…” ಎನ್ನುತ್ತಾ ಒಳಬಂದು ಸೋಫಾದ ಮೇಲೆ ಕಾಲು ಚಾಚಿ ಕುಳಿತುಕೊಂಡು ಕಣ್ಣು ಮುಚ್ಚಿಕೊಂಡು ಹಿಂದಕ್ಕೆ ಒರಗಿಕೊಂಡಳು.  ಕಾಗಕ್ಕನಿಗೋ ಅವಳ ತಲೆಯ ಮೇಲೆ ಮೇಜಿನ ಮೇಲಿದ್ದ ವೇಸನ್ನೆತ್ತಿ ಕುಟ್ಟಿಬಿಡುವಷ್ಟು ಕೋಪ ಬಂದರೂ ತಡೆದುಕೊಂಡು “ಏನೋ ದೊಡ್ಡದಾಗಿ ಕತೆ ಹೇಳೋ ಸಸ್ಪೆನ್ಸ್ ತೋರ್ಸಿ ಈಗ ಇಲ್ಲಿ ಆರಾಮಾಗಿ ಊಟ ಮಾಡಿದ್ಮೇಲೆ ಮಲಗೋ ತರ ತಣ್ಣಗೆ ಕಣ್ಣು ಮುಚ್ಚಿಕೊಂಡು ಆರಾಮ್ ತೊಗೋತಾ ಇದೀಯಲ್ಲ. ಎದ್ದೇಳು” ಎಂದು ಮಾತಲ್ಲೇ ತಿವಿದಳು. “ಏ… ಸ್ವಲ್ಪ ಇರು ಬೆಳಗಿಂದ ದಡಬಡಾಂತ ಕೆಲ್ಸ ಮಾಡಿ ಸುಸ್ತಾಗಿದೆ”. “ನಾನೇನು ಸುಮ್ನೆ ಕೂತಿದ್ನಾ. ನಿನ್ನಷ್ಟೇ ಕಷ್ಟ ಪಟ್ಟು ಮಾಡಿದೀನಿ. ಎದ್ದೇಳು ಮೇಲೆ. ಅದೇನು ಕತೆಯೋ ಬೇಗ ಹೇಳು.  ಬೆಳಗಿಂದ ನಾಲಕ್ಕು ಕಿವಿಯಾಗಿ ಕೇಳಕ್ಕೆ ಕೂತಿದೀನಿ. ಸ್ವಲ್ಪ ಹೊತ್ತಾದ ಮೇಲೆ ಬೇಕಾದ್ರೆ ಸ್ವಲ್ಪ ಕಾಫಿ ಮಾಡ್ಕೊಂಡು ಬಂದು ಕೊಡ್ತೀನಿ” ಎನ್ನುತ್ತಾ ಅವಳು ಒರಗಲಿಕ್ಕೆ ಬಿಡದೇ ಮಾತಿಗೆಬ್ಬಿಸಿದಳು. “ಆದೇನಾಯ್ತಪ್ಪಾ ಅಂದ್ರೇ ….” ಎನ್ನುತ್ತಾ ಹೆಚ್ಚು ಕಡಿಮೆ ಮಲಗಿದಂತೇ ಕುಳಿತಿದ್ದವಳು ಯಾರೋ ಎಳೆಯುತ್ತಿದ್ದಾರೇನೋ ಎನ್ನುವಂತೆ ಎದ್ದು ಕುಳಿತಳು. “ನಿನ್ನೆ ನಮ್ಮಮ್ಮನ ಮನೇತ್ರ ಹೋಗಿದ್ನಾ…” “ಅಲ್ಲೇನಾಯ್ತು?” “ಸ್ವಲ್ಪ ತಡಕೋ. ಅದ್ನೇ ಅಲ್ವಾ ಹೇಳ್ತಿರೋದು. ಅಲ್ಲಿಂದ ಎರಡೇ ಮರದಾಚೆ ಅಲ್ವಾ ನಿಮ್ಮಣ್ಣನ ಬೀಗರಿರೋದು.. ಅವ್ರಲ್ಲೂ ನಮ್ಮಮ್ಮನ ಮನೇಲೂ ಗೀಜಕ್ಕನೇ ಕೆಲಸ ಮಾಡೋದು. ಅವ್ಳೇಳಿದ್‌ ವಿಷ್ಯ… ಮೊನ್ನೇ ಅಲ್ಲಿ ಗಂಡ ಹೆಂಡ್ತಿ ಮಧ್ಯ ಜೋರು ಜೋರು ಮಾತುಕತೆ ನಡೀತಾ ಇತ್ತಂತೆ. ಮಗಳು ಗಿಣಿಮರಿ ಹತ್ರ ಫೋನಲ್ಲಿ ಮಾತಾಡ್ತಿದ್ರಂತೆ. “ನಿನ್ ಗಂಡ ಎನಂತ ತಿಳ್ಕೊಂಡಿದಾನೆ, ನೀನೇನು ಗತಿಗೆಟ್ಟೋರ ಕಡೆಯಿಂದ ಹೋಗಿಲ್ಲ. ನಿನ್ ಸಂಬಳದಿಂದಾನೇ ಅಲ್ವಾ ಅವರಪ್ಪ ತನ್ ಮರಿಗಳ್ನ ಓದುಸ್ತಿರೋದು. ನಿನ್ನ ಹೊಡೆಯೋ ಅಷ್ಟು ಮುಂದುವರೆದ್ನ?  ಮುಂದಿನ್ವಾರ ನಾವಿಬ್ರೂ ಬರ್ತೀವಿ. ಅಲ್ಲೀವರ್ಗೆ ತಡಕೋ. ಬಂದು ವಿಚಾರಿಸಿಕೋತೀವಿ.” ಅಂತ. ಮೈನಕ್ಕ ಮಾತಾಡ್ತಿರೋವಾಗ್ಲೇ ಅವಳ್ಗಂಡ ಪಾರ್ವಾಳಪ್ಪ ಫೋನ್ ಕಿತ್ಕೊಂಡು “ಗೊರವಂಕಂಗೆ ತಲೆಗೆ ಏರಿರೋ ಪಿತ್ತ ಇಳಿಸ್ತೀನಿ. ಕೆಲ್ಸ ಇಲ್ದೇ ಬಿದ್ದಿದ್ದಾಗ ಯಾರ್ಯಾರ ಕೈಯಿ ಕಾಲು ಕಟ್ಟಿ ಅವನಿಗೆ ಕೆಲ್ಸ ಕೊಡಿಸಿದ್ದು.  ಜೊತೆಗೆ ಬಾಳ್ವೆ ಮಾಡು ಅಂತ ಮುದ್ದಿಂದ ಸಾಕಿದ ಮಗ್ಳುನ್ನೂ ಕೊಟ್ರೆ ಬಾಳ್ವೆ ಮಾಡಕ್ಕೆ ಯೋಗ್ಯತೆ ಇರಬೇಕಲ್ವಾ. ನೀನು ಬೇಜಾರು ಮಾಡ್ಕೋಬೇಡ ಪುಟ್ಟ. ನಾನೆಲ್ಲ ನೋಡ್ಕೋತೀನಿ” ಅಂತ ಮಗ್ಳಿಗೆ ಸಮಾಧಾನ ಹೇಳ್ತಿದ್ರಂತೆ. “ಇನ್ನೂ ಏನೇನು ಮಾತಾಡ್ತಿದ್ರೋ… ಗೀಜಕ್ಕ ಎಷ್ಟು ಹೊತ್ತೂಂತ ಕಸ ಬಳಿಯೋ ನಾಟಕ ಆಡ್ತಾಳೆ. ಅವ್ಳಿಗೆ ತಿಳಿದಷ್ಟನ್ನ ನಮ್ಮಮ್ಮನ ಹತ್ರ ಹೇಳಿದ್ಳಂತೆ. ನಮ್ಮಮ್ಮ ನನ್ನತ್ರ ಹಂಗಂದ್ರು. ನಿಂಗೇನಾದ್ರೂ ನಿಮ್ಮಣ್ಣನಿಂದಾನೋ ಅತ್ಗೇಂದಾನೋ ಏನಾದ್ರೂ ಸಮಾಚಾರ ಬಂದಿರ್ಬೋದೇನೋ ಅಂದುಕೊಂಡೆ.” ಎನ್ನುತ್ತಾ ಕಾಗಕ್ಕನ ಮುಖ ನೋಡಿದಳು.  “ಹಂಗಾ.. ನಿಜವಾ ನೀ ಹೇಳ್ತೀರೋದು…” ಕಾಗಕ್ಕನ ಮುಖ ಅಚ್ಚರಿಯಿಂದ ಅರಳಿತು.  “ಯಾವ್ಮುಖ ಇಟ್ಕೊಂಡು ಹೇಳ್ತಾರೆ ಹೇಳು? ಎನ್ ಸುಖದ್ ಸಮಾಚಾರಾನಾ ಬಿಂಕವಾಗಿ ಹೇಳಕ್ಕೆ. ನನ್ ಮಗ್ಳುನ್ನ ಸೊಸೆ ಮಾಡ್ಕೊಳ್ಳೋ ಅಣ್ಣಾ, ತೌರುಮನೇಗೆ ನಮ್ಮನೇ ಬಳ್ಳಿ ಸುತ್ಕೊಳತ್ತೆ ಅಂದ್ರೇ, “ನಿಂಗೊತ್ತಿಲ್ಲಾ ಕಾಗೀ,  ಬಳಗದಲ್ಲಿ ಮದ್ವೆ ಮಾಡ್ಕೊಂಡ್ರೆ ಉಟ್ಟೋ ಪಿಳ್ಳೆಗಳು ರೋಗವಾಗಿ ಉಟ್ಟುಟ್ವೆ. ನಿನ್ನ ಮಗ್ಳೂ ನನ್ನ ಮಗಳಾಂಗೇ ಅಲ್ವಾ.  ಸಂಬಂಧ ಬೆಳಸೋದು ಬೇಡ. ಇರೋ ಸಂಬಂಧ ಚೆನ್ನಾಗಿಟ್ಕೋಣೋಣ’ ಅಂದ. ಅತ್ಗೇ… “ಕಾಗೀ ನಿನ್ನ ಮಗ್ಳು ಕಪ್ಪಿದ್ರೂ ಕಡಿದ ಶಿಲೆ ಹಾಗಿದಾಳೆ. ಯಾರಾದ್ರೂ ಹುಡುಕ್ಕೊಂಡು ಬಂದು ಮಾಡ್ಕೋತಾರೆ. ಯೋಚ್ನೇನೇ ಮಾಡ್ಬೇಡ’ ಅಂತ ವೈಯ್ಯಾರವಾಗಿ ನನ್ನ ಮಗ್ಳ ಬಣ್ಣಾನ ಎತ್ತಿ ಅಡೋದ! ಆಗ್ಬೇಕು ಆವಂಗೆ ಹಿಂಗೆ” ಕೂತಲ್ಲೇ ನೆಟಿಕೆ ಮುರಿದವಳು “ಸ್ವಲ್ಪ ತಡೀ ಕಾಫಿ ತರ್ತೀನಿ ಅಲ್ಲೀವರ್ಗೂ ಕಳ್ಳೇಪುರಿ ತಿಂತಿರು ಎಂದು ಬಟ್ಟಲನ್ನ ಮುಂದು ಸರಿಸಿದಳು. ಅದರಲ್ಲಿಂದ ಒಂದೊಂದೇ ಕಡಲೇಕಾಯಿ ಬೀಜವನ್ನು ಹೆಕ್ಕುತ್ತಾ ಗುಬ್ಬಕ್ಕ ಬಾಯಾಡಿಸ ತೊಡಗಿರುವಾಗಲೇ “ಮುಂದೇನಾಯ್ತಂತೆ?” ಎನ್ನುತ್ತಾ ಕಾಗಕ್ಕ ಕಾಫಿಯ ಬಟ್ಟಲನ್ನು ತೆಗೆದುಕೊಂಡು ಬಂದಳು.  ಕಾಫಿ ಹೊಟ್ಟೆಗೆ ಬಿದ್ದ ಮೇಲೆ ಇನ್ನೂ ಏನಾದ್ರೂ ಒಳಗೆ ಇರೋ ವಿಷ್ಯಾ ಹೊರಕ್ಕೆ ಕಾರುತ್ತೇನೋ ಅಂತ ಗುಬ್ಬಕ್ಕನ ಮುಖವನ್ನೇ ನೋಡತೊಡಗಿದಳು.  ನಿಧಾನವಾಗಿ ಗುಟುಕರಿಸುತ್ತಾ ಏನೋ ಗಹನವಾದ ಆಲೋಚನೆಯಲ್ಲಿರುವಂತೆ ಮುಖ ಮಾಡಿಕೊಂಡ ಗುಬ್ಬಕ್ಕ “ಒಂದ್ಕೆಲ್ಸ ಮಾಡೋಣ” ಎನ್ನುತ್ತಾ ಬಟ್ಟಲನ್ನು ಕೆಳಗಿಟ್ಟಳು.  `ಏನು?’ ಎನ್ನುವಂತೆ ನೋಡಿದ ಕಾಗಕ್ಕನ ಮುಖವನ್ನೇ ನೋಡುತ್ತಾ ನಾಳೇನೋ ನಾಡಿದ್ದೋ ಹಂಸನ ಹತ್ರ ಹೋಗೋಣ.  ಅವ್ಳ ಮಗ್ಳೂ, ಈ ಅರಗಿಣೀನೂ ಗೆಳ್ತೀರು. ಅಂದ್ಮೇಲೆ ಏನೋ ಒಂದಷ್ಟು ವಿಷ್ಯ ಗೊತ್ತೇ ಇರತ್ತಲ್ವ.  ಏನಾದ್ರೂ ಅವರಮ್ಮನ ಹತ್ರ ಹೇಳಿರ್ಬೋದು. ಹೋದ್ರೆ ಗೊತ್ತಾಗುತ್ತೆ.  ಫೋನ್ ಮಾಡಿ ಕೇಳಕ್ಕಾಗಲ್ಲ”.  “ನಾವು ಹೋಗಿ ಕೇಳಿಬಿಟ್ರೆ ಅವ್ಳು ಹೇಳಿಬಿಡ್ತಾಳೋ” ಕಾಗಕ್ಕ, ಹಂಸ ಹೇಳ್ಳಿಕ್ಕಿಲ್ಲ ಎನ್ನುವ ಭಾವ ವ್ಯಕ್ತಪಡಿಸಿದಳು. “ಕೇಳೋ ತರ ಕೇಳಿದ್ರೆ ಹೇಳ್ತಾಳೆ.  ಅವ್ಳಿಗೆ ಗೊತ್ತಿರೋ ವಿಷ್ಯ ಕಕ್ಸೋ ಭಾರ ನಂದು. ಯಾವಾಗ ಹೋಗೋಣ ಹೇಳು” ಎಂದ ಗುಬ್ಬಕ್ಕನಿಗೆ “ಇವತ್ತಿನ್ನೂ ಮಂಗಳ್ವಾರ.  ನಾಳೆ ಬುಧವಾರ. ಎರ್ಡು ದಿನ್ವೂ ಇವ್ರು ಬೇಗ ಬರ್ತಾರೆ. ಎಲ್ಲೂ ಹೋಗೋ ಹಂಗಿಲ್ಲ. ಈ ವಿಷ್ಯಕ್ಕೆ ಅಂತೇನಾದ್ರೂ ತಿಳಿದ್ರೆ ಅಷ್ಟೇ ಬಡದು ಬಲಿ ಹಾಕ್ಬಿಡ್ತಾರೆ. ಶುಕ್ರವಾರದ ಪೂಜೇಗೆ ಕರೆಯೋ ನೆಪ ಮಾಡ್ಕೊಂಡು ಗುರುವಾರ ಹೋಗೋಣ” ಎಂದಳು.  “ಆದೇನ್ ನಿನ್ನ ಗಂಡನ ಕೆಲಸ್ವೋ. ವಾರಕ್ಕೆ ಮೂರ್ ದಿನ ನಾಲಕ್ಕುಗಂಟೇಗೇ ಬಂದು ಕೂತ್ಕೋತಾರೆ. ದೂರ್ವಾಸನ್ ಸಾವಾಸ ನಿಂಗೆ. ನನ್ನ ಗಂಡ ನೋಡು ರಾತ್ರಿ 9 ಗಂಟೇಗ್ ಮುಂಚೆ ಬರಲ್ಲ. ಇನ್ನೇನ್ಮಾಡೋದು? ಗುರ್ವಾರವೇ ಹೋಗೋಣ. ಈಗ ಅಲ್ಲೀವರ್ಗೂ ತಡ್ಕೊಂಡು ಕೂತಿರ್ಬೇಕಲ್ಲಾ ನಾವು…  ಹೊಸತರಲ್ಲಿರೋ ಮಜಾ ಅಮೇಲಿರಲ್ಲ. ಏನ್ ಮಾಡೋದು.. ಸರಿ ..  ಅಷ್ಟರಲ್ಲಿ ಇನ್ನೇನಾದ್ರೂ ವಿಷ್ಯ ಗೊತ್ತಾದ್ರೆ ನೀನೂ ಹೇಳು; ನಾನೂ ಹೇಳ್ತೀನಿ” ಎನ್ನುತ್ತಾ ಅಂದಿನ ಮೀಟಿಂಗ್ ಭರ್ಕಾಸ್ತ್ ಮಾಡಿ ಗುಬ್ಬಕ್ಕ ಹೊರಟಳು. ಕಾಗಕ್ಕನಿಗೋ ಒಂದ್ಕಡೆ ಖುಷಿ, ಇನ್ನೊಂದ್ಕಡೆ ಕುತೂಹಲ ಎನಾಗಿರ್ಬೋದು?  ಯಾಕೆ ಗಂಡ ಹೆಂಡ್ತಿ ಮಧ್ಯ ಈ ಮಟ್ಟಕ್ಕೆ ಜಗಳ ಆಯ್ತು…  ಈ ಗುಬ್ಬಕ್ಕನ್ ಮಾತನ್ನ ಪೂರಾ ನಂಬಕ್ಕಾಗಲ್ಲ; ಇನ್ಯಾರನ್ನ ಕೇಳಿದ್ರೆ ಸರಿಯಾಗಿ ಏನು ನಡೀತು ಅಂತ ತಿಳಿಯತ್ತೆ … ಏನೂ ತೋಚದೆ ತಲೆಯನ್ನ ಪರಪರ ಕೆರೆದುಕೊಂಡ್ರೂ ಯಾರೂ ತಲೆಗೆ ಬರ್ಲಿಲ್ಲ.  ಮಧ್ಯಾನ್ಹದ ಊಟಾನೂ ಸರಿಯಾಗಿ ಸೇರ್ಲಿಲ್ಲ. ಒಂದ್ ಗಳಿಗೆ ಕಣ್ಣುಮುಚ್ಚಿಕೊಳ್ಳೋಣ ಅಂತ ಉರುಳಿಕೊಂಡ್ರೂ ಸಮಾಧಾನವಿಲ್ಲ. ಹಿಂಗೇ ಯೋಚ್ನೇ ಮಾಡ್ತಾ ಒಂದ್ ಕಣ್ ಹತ್ತಿತ್ತೋ ಏನೋ ಅಷ್ಟರಲ್ಲೇ ಬಾಗಿಲು ಡಬಡಬ ಬಡ್ಕೊಂತು. `ಯಾರ್ಬಂದ್ರೋ ಪಾಪಿಗ್ಳು ನಿದ್ದೇಗೆ ಎರವಾಗಿ’ ಎಂದು ಬೈದುಕೊಳ್ಳುತ್ತಾ ಕಷ್ಟ ಪಟ್ಟು ಎದ್ದು ಹೋಗಿ ಬಾಗಿಲು ತೆರೆದಳು.`ವಿಷ್ಯಾ ಗೊತ್ತಾಯ್ತಾ…’ ಆತಂಕದಿಂದ ಒಳ ಬಂದಳು ಕುಕ್ಕುಟಕ್ಕ… ಅತ್ತಿಗೆಯ ಅತ್ತಿಗೆ. “ಏನತ್ಗೆ.. ಬಾ.. ಕೂತ್ಕೋ  ಎನ್ನುತ್ತಾ ಸೋಫಾ ತೋರಿದಳು.  “ಇಲ್ಬೇಡಾ.. ನಮ್ಮನೇಗ್ ಬಾ” ಎಂದಳು.  “ಆಯ್ ಇವತ್ತು ಇವ್ರು ಇನ್ನೊಂದು ಗಂಟೇಗೆಲ್ಲಾ ಬಂದು ಎಲ್ಲೋ ಓಗ್ಬೇಕಂತೆ.  ಇನ್ನೂ ತಿಂಡಿ ಮಾಡ್ಬೇಕು.. ಮಕ್ಳೂ ಐದು ಗಂಟೆಗೆಲ್ಲಾ ಬಂದ್ಬಿಡ್ತಾವೆ. ಬರಕ್ಕಾಗಲ್ಲ. ಇಲ್ಲೇ ಹೇಳು ಮತ್ತೆ.’  “ಇಲ್ಲ; ನಾನು ಬರುವಾಗ ಗುಬ್ಬಕ್ಕ ನೋಡಿದ್ಳು.  ಅವ್ಳಿಗೆ ತಿಳಿಯೋದು ಬೇಡ.  ನೀನೊಬ್ಳೇ ಮಂಗಳ ಗೌರಿ ಪೂಜೆ ಅರಿಶಿನ ಕುಂಕುಮಕ್ಕೆ ಕರೆದೆ ಅನ್ನೋ ನೆಪ ಮಾಡಿಕೊಂಡು ಬಾ. ನಾನು ಇನ್ನೊಂದು ನಿಂಷ ಇಲ್ಲಿದ್ರೆ ಅವ್ಳು ಬಂದ್ಬಿಡ್ತಾಳೆ. ಏಳು ಗಂಟೇಗೆ ಕಾಯ್ತಿರ್ತೀನಿ” ಎನ್ನುತ್ತಾ ಹೊರಟೇಬಿಟ್ಟಳು. `ಅಯ್ಯೋ ದೇವ್ರೆ.  ಏನು ಇವ್ಳ ಕತೆ.  ಈ ಥರ ಸಸ್ಪೆನ್ಸ್ ಹುಟ್ಟು ಹಾಕಿ ಹೋಗೋದ…’ ಎಂದು ಕೊಳ್ಳುತ್ತಿರುವಾಗಲೇ ಗುಬ್ಬಕ್ಕ ನುಸುಳಿದಳು “ಏನಂತೆ ಕುಕ್ಕುಟಕ್ಕನ ಕತೆ…” ರಾಗವಾಗಿ ಕೇಳಿದಳು.  ಏನೋ ಖಂಡಿತವಾಗಿ ಇದೆ ಎನ್ನುವಂತೆ.  “ಮಂಗಳ ಗೌರಿ ಪೂಜೆಯಂತೆ. ಸಂಜೇಗೆ ಅರಿಶ್ನ ಕುಂಕ್ಮಕ್ಕೆ ಬಂದೋಗು ಅಂತ ಕರಿಯಕ್ಕೆ ಬಂದಿದ್ಲು.”  “ಅಂಗಾ.. ಗೊತ್ತಾಯ್ತು ಬಿಡು.. ನಂಗ್ ಹೇಳ್ದೇ ಹೋದೀಯ” ಕಣ್ಣು ಮಿಟುಕಿಸಿದಳು.  “ಏ… ವಿಷ್ಯ ಇದ್ರೆ ನಿಂಗೆ ಹೇಳ್ದೇ ಇರ್ತೀನಾ.  ನಿಜವಾಗೂ ಕರೆಯಕ್ಕೇ ಬಂದಿದ್ಳು” ಕಾಗಕ್ಕ ವಿಷಯದ ತಿಂಡಿಯ ಮೇಲೆ ಮುಸುಕು ಹಾಕಲು ನೋಡಿದಳು. “ಸರಿ ಸರಿ ಹೋಗು…  ಆಮೇಲೆ ಸಿಗ್ತೀನಿ” ಎನ್ನುತ್ತಾ ಅವಳು ಹೊರಟರೂ ತನ್ನ ಮಾತನ್ನ ಅವಳು ನಂಬಿಲ್ಲ ಎನ್ನುವುದು ಕಾಗಕ್ಕನಿಗೆ ಗೊತ್ತಾಗಿ ಹೋಯಿತು. ಸಂಜೆ ಗಂಡ ಮಕ್ಕಳು ಬಂದ ಮೇಲೆ, ರಾತ್ರಿ ಆಡುಗೇನೂ ಮಾಡಿಟ್ಟು ʻಕುಕ್ಕುಟಕ್ಕನ ಮನೆಗೆ ಅರಿಶ್ನ ಕುಂಕ್ಮಕ್ಕೆ ಹೋಗ್ಬರ್ತೀನಿʼ ಅಂತ ಹೇಳಿ ಹೊರಟಳು.  ಬಾಗಿಲಲ್ಲೇ ಕಾಯ್ತಾ ನಿಂತಿದ್ದ ಕುಕ್ಕುಟಿ “ಬಂದ್ಯಾ ಬಾ ಬಾ” ಎನ್ನುತ್ತಾ ಒಳಗೆ ಎಳೆದುಕೊಂಡಂತೇ ಕರೆದುಕೊಂಡು ಹೋದಳು.  ಸೋಫಾದ ಮೇಲೆ ಇನ್ನೂ ಊರುತ್ತಿದ್ದ ಹಾಗೇ “ಗೊತ್ತಾ ವಿಷ್ಯ…” ಆತಂಕದಿಂದ ಕೇಳಿದ್ಳು. ಏನೂ ಗೊತ್ತಿಲ್ಲದ ಸೋಗು ಹಾಕಿಕೊಳ್ಳುತ್ತ “ಏನತ್ತಿಗೆ… ಏನಾಯ್ತು?” ಆತುರದಿಂದ ಕೇಳಿದಳು. “ಏನ್ ಗೊತ್ತಾ ಕಾಗಿ, ನಿಮ್ಮಣ್ಣನ ಮಗನ

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಮೇರಿಯ ಮಕರಸಂಕ್ರಮಣ ವೇಣುಗೋಪಾಲ್ ಸ್ನಾನ ಮುಗಿಸಿ ಉದ್ದ ಕೂದಲಿಗೆ ಟವಲ್ ಸುತ್ತುಕಟ್ಟಿ ಕನ್ನಡಿಯ ಎದುರು ಬೆತ್ತಲೆ ನಿಂತವಳಿಗೆ ನವಯೌವನದ ಉಮ್ಮಸ್ಸೊಂದು ದೇಹದ ಪ್ರತಿ ಅಂಗಗಳಲ್ಲೂ ಹೊಮ್ಮಿದಂತೆ ಕಾಣುತಿತ್ತು. ಆ ಅನಿರೀಕ್ಷಿತ ಮಿಲನದ ಘಳಿಗೆಯನ್ನು ಮೆಲುಕು ಹಾಕುತ್ತ ನಿಂತುಬಿಟ್ಟಳು, ಕೆಲವು ವರ್ಷಗಳೇ ಕಳೆದಿದ್ದೋ ಗಂಡನ ಅಗಲಿಕೆಯ ನಂತರ ದೇಹ ಸುಖ ಕಂಡು.! ಅನಿರೀಕ್ಷಿತವೆಂಬಂತೆ ವಾರಪೂರ್ತಿ ಸುರಿದ ಇಳೆ ಮಳೆಯಾಟದೊಳಗೆ ಅವರಿಬ್ಬರ ರತಿಕಾಮದಾಟವೂ ಮುಗಿದಿತ್ತು..! ಅವನು ಎಂದಿನಂತೆ ಸಂಜೆಯ ನಾಲ್ಕು ಘಂಟೆಗೆ ಬರುತ್ತಿದ್ದವನು ಸ್ವಲ್ಪತಡವಾಗಿ ಬಂದಿದ್ದ..! ಮೊಗವೇಕೋ ಬಾಡಿದಂತಿತ್ತು.! ಹೊರಗೆ ಕಟ್ಟಿದ್ದ ‘ಮುನ್ನಿ’ ಯಾಕೋ ಇಂದು ಹುಚ್ಚು ಬಂದವಳಂತೆ ಬೊಗುಳುತ್ತಿದ್ದಳು.! ಎಷ್ಟು ಸಾಮಧಾನಿಸಿದರು ಬೊಗಳುವುದು ಮಾತ್ರ ನಿಲ್ಲಿಸಲಿಲ್ಲ.. ಆಗಸ ಪೂರ್ತಿಯಾಗಿ ಕಡುಕಂದು ಬಣ್ಣದ ಮೋಡಗಳಿಂದ ಅವಕುಂಠನವಾಗುತ್ತಿತ್ತು. ಮೋಡದ ಸಂಧುಗಳಲ್ಲಿ ಸಣ್ಣನೆಯ ಮಿಂಚುಗಳಿಂದ ಶುರುವಾದ ತಿಳಿಮಳೆ ಸಿಡಿಲಿಗೆ ತಿರುಗಿ ಜೋರಾಗಿ ಧರೆಗೆ ಎರಗುತ್ತಿತ್ತು. ಇವನು ಮಾತ್ರ ಸದ್ದಿಲ್ಲದೆ ಮೌನಕ್ಕೆ ಶರಣಾಗಿದ್ದ.! ಟೀ ತಂದುಕೊಟ್ಟೆ ಹೀರುತ್ತ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ, ನಾನು ಅವನನ್ನೇ ನೋಡುತ್ತಾ ಕುಳಿತುಬಿಟ್ಟೆ ಹೊರಗಿನ ಚಳಿಯಿಂದ ಮೈ ಕಂಪಿಸುತ್ತಿತ್ತು.! ಇಂದೆಕೋ ಅವನ ಕಣ್ಣುಗಳು ಮಾದಕವಾಗಿ ಕಾಣುತ್ತಿತ್ತು, ನಾನೇ ಎದ್ದು ದಿನವೂ ಆಡುತ್ತಿದ್ದ ಚದುರಂಗದ ಬೋರ್ಡ್ ಅನ್ನು ಅವನ ಮುಂದಿಟ್ಟೆ..! ಏನು ಮಾತನಾಡದೆ ಆಟದ ಒಳಗಿಳಿದು ಮಗ್ನನಾದ.! ಈ ಮಳೆಯ ಚಳಿಗೆ ನನ್ನ ಭಾವನೆಗಳು ಸಣ್ಣಗೆ ಅರಳುತ್ತ ಅವನ ಉಸಿರಿನ ಬಿಸಿಗೆ ಬಿರಿದು ಕಟ್ಟದಾಚೆ ಮುಗುಚುವ ನೀರಿನಪಾತದಲ್ಲಿ ಉದುರಿ ಸತ್ತ ಹೂಗಳಂತೆ..! ಅವನ ಶುಭ್ರವಾದ ಕಡುಕಪ್ಪಿನ ಕಣ್ಣುಗಳ ನೋಟಕ್ಕೆ ನೋಟ ಬೆಸೆಯಾಲಾಗದೆ ಆಸೆಗಳು ಸಾಯುತ್ತಿದ್ದವು..! ಪ್ರತಿ ಬಾರಿಯ ಚದುರಂಗದ ನಡೆಯಲ್ಲಿ ನನ್ನ ಕಾಲಾಳು ಬಲಿಯಾದಾಗಲು ನಾನು ಅವನ ಕಂಗಳನ್ನು ನೋಡುತ್ತಿದ್ದೆ.! ಅವನು ಮಾತ್ರ ಆ ನೋಟದ ಸೆಳೆತಕ್ಕೆ ಸಿಗುತ್ತಿರಲಿಲ್ಲ, ಆಟವು ಕೊನೆಹಂತಕ್ಕೆ ತಲುಪಿತ್ತು.! ನಾನು ಕೂಡ..! ರಾಜನನ್ನು ಅಲುಗದಂತೆ ಕಟ್ಟಿಹಾಕಿ ‘ಚೆಕ್ಮೇಟ್’ ಹೇಳಿ ಮುಗುಳುನಗುತ್ತ ನನ್ನ ಮೊಗನೋಡಿದ. “ಹೌದು” ಆ ಘಳಿಗೆಯಲ್ಲಿ ಅವನನ್ನು ನನ್ನ ನೋಟದ ಸೆಳೆವಿನಲ್ಲಿ ಸಿಕ್ಕಿಸಿಕೊಂಡುಬಿಟ್ಟೆ; ನೋಟ ಕದಲದಂತೆ. ಅವನು ಸಣ್ಣಗೆ ಕಂಪಿಸಿದ್ದ.! ನನ್ನ ಎದೆಯ ಏರಿಳಿತ ಹೆಚ್ಚಾಗುತ್ತಿತ್ತು.! ಮಳೆಯ ಅಬ್ಬರವು ಹೆಚ್ಚಾಗುತ್ತಿತ್ತು.! ಮುನ್ನಿಯ ಬೊಗಳುವಿಕೆ ಕೂಡ ಹೆಚ್ಚಾಗುತ್ತಿತ್ತು.! ಕಂದರದ ಒಡಲಾಳದಿಂದ ಭಾರಿ ಸಿಡಿಲೊಂದು ಢಮ್ ಎಂದು ಭೂಮಿಗೆ ಅಪ್ಪಳಿಸಿತು. ಬೆಚ್ಚಿಹೋದೆ.! ಅವನ ಮಗುಲಿಗೆ ಬಂದು ಭುಜವಿಡಿದು ಕುಳಿತೆ, ಮತ್ತೊಂದು ಮೊಗದೊಂದು ಬಡಿಯುತ್ತಲಿವೆ..! ಅವನು ನನ್ನ ಬೆನ್ನ ಮೇಲೆ ಭಯ ನೀಗಿಸಲು ಕೈಇಟ್ಟ.! ಆ ಕೈಗಳನ್ನಿಡಿದು ತುಟಿಗೆ ಒತ್ತಿಹಿಡಿದೆ.! ಪ್ರತಿರೋಧಿಸುತ್ತಿದ್ದ ಇಷ್ಟು ವರ್ಷಗಳಿಂದ ಕಟ್ಟಿದ್ದ ಬಯಕೆ ಇಂದು ಬೋರ್ಗರೆದು ಸುರಿಯುತ್ತಿರುವ ಮಳೆಗೆ ತುಂಬಿ ಕೋಡಿಯೊಡೆದಿತ್ತು.! ಹೌದು ನನ್ನ ಬಯಕೆಯ ಪಾತಕ್ಕೆ ಸಿಕ್ಕಿ ಮಗುಚಿ ಬಿದ್ದು ತೋಯ್ದು ಹೋದ..! ನನ್ನ ಪ್ರತಿ ಮುತ್ತಿನಲ್ಲೂ ಕರಗಿ ಶರಣಾಗತನಾದ.! ಇಬ್ಬರೂ ಶೃಂಗಾರದ ಕಡಲೊಳಗೆ ಈಜುವ ಮೀನುಗಳಾಗಿದ್ದರೂ ಅವನ ಪ್ರತಿ ಸ್ಪರ್ಶದಲ್ಲೂ ಅವಳ ಹೆಣ್ಣತನದ ಆಸೆಯೆಲ್ಲ ಜಿನುಗಿ ನೀರಾಗಿ ಅವನ ಆಗಮನಕ್ಕೆ ಅಣಿಯಾಗಿ ಸುಖದ ತುತ್ತತುದಿಗೆ ತಲುಪಿದ್ದಳು.! ಇಬ್ಬರೂ ಮಳೆಯೊಳಗೆ ಬಿಸಿಯಾದ ಹನಿಗಳಾಗಿ ಕರಗಿ ಹೋಗಿದ್ದರು ಆಸೆಯೂ ಕೂಡ ಬೆವರಾಗಿ ಬಸಿದು ಇಂಗಿಹೋಗುತ್ತಿತ್ತು.! ವಾರಪೂರ್ತಿ ಅಖಂಡ ಕಾಮದೊಳೊಗೆ ಮುಳುಗಿ ವಿಧ ವಿಧವಾಗಿ ಈಜಿದ್ದರು.! ಈ ಅಖಂಡ ಮಿಲನದಿಂದ ಅವಳ ಕಾಮದಸಿವು ಇಂಗಿತ್ತ…!? ಅಥವಾ ಅವನ ನಿರ್ಮಲ ಪ್ರೇಮವೂ ಸತ್ತು ಅವಳ ಕಾಮದಸಿವಿಗೆ ಆಹಾರವಾಗಿತ್ತ..!? ಇಲ್ಲಾ ಪ್ರೇಮವೂ ಕೊನೆಯ ಹಂತ ತಲುಪಿ ಮಿಲನವಾಗಿ ಅವಳಲ್ಲಿ ಕರಗಿತ್ತ..!? ಹತ್ತು ವರುಷಗಳ ಹಿಂದೆ ರಂಗನಾಥಗುಡಿಯ ಹೊರಭಾಗದ ಒಂಟಿ ಅರಳಿಮರದ ಕೆಳಗೆ ಜನಿವಾರವಾಕಿದ್ದ ಈ ಸತ್ಯ ಕುಳಿತಿದ್ದ, ವಸಂತನ ಹಾವಳಿಗೆ ಬದಲಾಗುತ್ತ ಹಚ್ಚ ತಿಳಿಹಸಿರಿನಿಂದ ಚಿಗುರೊಡೆಯುತ್ತಿರುವ ಅರಳಿಮರ ಹಿಂಬದಿಗಿತ್ತು, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಗಿದ್ದ ಸೂರ್ಯ ಎದುರಿಗಿದ್ದ ರೇಖಾಳಿಂದ ಬದಲಾಗಿದ್ದ ಈ ಮೇರಿ ಅವನ ಪಕ್ಕದಲ್ಲೇ ಕುಳಿತ್ತಿದ್ದಳು, ಬದಲಾವಣೆ ಈ ಜಗದ ನಿಯಮ ಹೊಸದೊಂದು ಹುರುಪಿನೊಂದಿಗೆ ಹೊಸತನ ಆಗಮಿಸಲೇ ಬೇಕು, ಹಾಗೆ ಆಗಮನವಾಗಿದ್ದು ಕೂಡ ನಿರ್ಗಮಿಸಲೇ ಬೇಕು.! ಇದು ಕೂಡ ಜಗದ ನಿಯಮವೇ.! ಆದರೆ ಅಂದು ನನಗೆ ತಿಳಿಯಲೇ ಇಲ್ಲ.! ಅವನು ಮೌನವಾಗಿ ಕುಳಿತಿದ್ದ ಸಣ್ಣಗೆ ಗಾಳಿ ಬೀಸಿದರು ಸತ್ತುಬಿದ್ದ ಎಲೆಗಳ ಜೂರ್ಗುಟ್ಟುವ ಶಬ್ದಮಾತ್ರ ಕೇಳುತ್ತಿತ್ತು..! ಇದೆ ಎಲೆಗಳು ಚಿಗುರೊಡೆದು ಬೆಳೆದು ಬಲಿಯುವಾಗ ಮೌನವಾಗಿರುತ್ತವೆ ಆದರೆ ಸತ್ತು ಬಿದ್ದಿರುವಾಗ ಸದ್ದುಮಾಡುತ್ತಿವೇ.! ಮನುಷ್ಯಮಾತ್ರ ಇದರ ತದ್ವಿರುದ್ಧ..! ನಾನೇ ಆ ಮೌನ ಒಡೆದು ‘ಸತ್ಯ’ ಎಂದೇ ಅವನು ಮಾತನಾಡಲಿಲ್ಲ.! ಮತ್ತೊಮ್ಮೆ ಏರುಧನಿಯಲ್ಲಿ ‘ಹೇ ಸತ್ಯ’ ಎಂದೇ ‘ಹೂ’ ಎಂದ.. ಆದರೆ ನನ್ನೆಡೆಗೆ ತಿರುಗಲಿಲ್ಲ ನನ್ನ ಸಂಭ್ರಮಕ್ಕೆ ಅಷ್ಟೇ ಸಾಕಿತ್ತು.! ನನ್ನ ಮದುವೆಯ ಬೆಳವಣಿಗೆಯನ್ನೆಲ್ಲ ಮತ್ತು ಹುಡುಗನ ಬಗ್ಗೆ ಗೊತ್ತಿದ್ದಷ್ಟು.! ನಾನು ಸೃಷ್ಟಿಸಿಕೊಂಡಿದಷ್ಟು.! ಇಲ್ಲದಷ್ಟು.! ಇರುವುದಕ್ಕಿಷ್ಟು.! ಸೇರಿಸಿ ಅವನು ಕರುಬುವಂತೆ ಗುಣಗಾನ ಮಾಡಿ ಹೇಳುತ್ತಿದ್ದೆ, ಅವನ ಮುಖದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ, ಶಿಲುಬೆ ಏರಿದ ಏಸುವಿನಂತಿತ್ತು.! ನಾನು ನಿರುತ್ಸಾಹಳಾದೆ, ಸಿಕ್ಕಾಗಲೆಲ್ಲ ನನ್ನ ಧರ್ಮದ ಬಗ್ಗೆ ಹೀಯಾಳಿಸುವ ಮಾತನಾಡುತ್ತಿದ್ದ.! ಎಲ್ಲಾ ಧರ್ಮಗಳ ಲೋಪಗಳನ್ನೆಲ್ಲ ತೆಗಳಿ ಉಗಿಯುತ್ತಿದ್ದ.! ತನ್ನ ಧರ್ಮವೇ ಮೇಲೆಂದು ಎಂದು ಹೇಳಿದವನಲ್ಲ.! ಮನುಷ್ಯನ ಸುಖ ಜೀವನಕ್ಕೆ ಈ ಧರ್ಮಗಳೇ ಬೇಲಿ ಎನ್ನುತ್ತಿದ್ದ.! ಅವನು ಹೇಳುವುದು ಸರಿ ಎನಿಸಿದರೂ ಸೋಲುವಂತ ಹೆಣ್ಣು ನಾನಾಗಿರಲಿಲ್ಲ; ಪ್ರತಿವಾದಿಸುತ್ತಿದ್ದೆ. ವಿತಂಡವಾದಕ್ಕಿಳಿಯುತ್ತಿದ್ದೆ.! ನಂತರ ಇಬ್ಬರು ಜಗಳವಾಡಿ ಸುಮ್ಮನಾಗುತ್ತಿದ್ದೆವು.. ಇಂದು ನಾನು ಅಷ್ಟು ಮಾತನಾಡಿದರು ಪ್ರತಿಮಾತನಾಡಲಿಲ್ಲ, ನಿರ್ಲಿಪ್ತತತೆಯಿಲ್ಲದ್ದಿದ್ದರು ಅವನು ಗೊಂದಲದಲ್ಲಿದ್ದ, ‘ಏನು ಹೇಳು ಸತ್ಯ ಏತಕ್ಕಾಗಿ ಈಗಿದ್ದಿಯ ಮಾತನಾಡು’ ಎಂದೇ ಮುಖ ನೋಡಿದ. ಎದ್ದು ನಿಂತ. ಅವನು ಕೇಳುವ ಪ್ರಶ್ನೆಗಳಿಗೆಲ್ಲ ನನ್ನಿಂದ ಆಗಲೇ ಉತ್ತರ ಸಿಕ್ಕಿವೆಂಬಂತೆ! ನಾಳೆಯಿಂದ ನಾನು ಊರಿನಲ್ಲಿ ಇರುವುದಿಲ್ಲವೆಂದ. ಎಷ್ಟು ದಿನ ಸತ್ಯ.? ‘ಗೊತ್ತಿಲ್ಲ’ ‘ಎಲ್ಲಿಗೆ ಹೋಗುತ್ತಿಯ.? ‘ನಿನಗೆ ಬೇಡದ ವಿಷಯ’, ಧನಿಯಲ್ಲಿ ತಿರಸ್ಕಾರವಿತ್ತು. ‘ನನ್ನ ಮದುವೆಗಾದರು ಬರುತ್ತಿಯ ತಾನೇ’ ಎಂದೆ. ಅವನು ಮಾತನಾಡಲಿಲ್ಲ… ಆ ಮೌನ ಅವನ ಮಾತಿಗಿಂತ ಕಠಿಣವಾಗಿತ್ತು . ಹಾಗೆ ಹೊರಟುಹೋದ. ಮೌನದಲ್ಲಿ ಮುಳುಗಿದ ಸೂರ್ಯನಂತೆ ಗುಡಿಯ ಒಳಗೆ ಸಂಕ್ರಮಣ ಪೂಜೆಯ ಘಂಟವಾದ್ಯಗಳು ಮೊಳಗಿದ್ದವು, ಸಂಕ್ರಮಣದ ಸೂರ್ಯಕೂಡ ಎದುರಿನ ಚಿಕ್ಕ ಬೆಟ್ಟದ ಕೆಳಗೆ ಮುಳುಗಿದ್ದರು ಅವನ ಇರುವಿಕೆಯ ಬೆಳಕು ಮಾತ್ರ ಮೋಡಗಳಿಂದ ಗೆರೆ ಗೆರೆಯಾಗಿ ಸೀಳಿ ಪ್ರಕಾಶಿಸುತ್ತಿತ್ತು.. ಅವಳು ಸ್ವಲ್ಪ ಸಮಯ ಅಲ್ಲೇ ನಿಂತು ಸೂರ್ಯ ಮುಳುಗಿದ ದಿಕ್ಕಿನೆಡೆಗೆ ಹೊರಟುಹೋದಳು.. ಇಬ್ಬರ ಬದುಕಿಗೂ ವಸಂತನ ಆಗಮನವಾಗಿತ್ತು ಅವಳು ಚಿಗುರೆಲೆಯ ಹುರುಪಿನಲ್ಲಿದ್ದಳು.! ಅವನು ಉದುರಿಬಿದ್ದ ಎಲೆಯಂತಿದ್ದ..! ಮದುವೆಯ ಹಿಂದಿನ ದಿನಕೂಡ ಅರಳಿಮರದ ಬಳಿ ಬಂದು ಹೋಗಿದ್ದಳು ಬೃಹದಾಕಾರದ ದೈತ್ಯಮರ ಮಾತ್ರ ಹಸಿರೋದ್ದು ನಿಂತಿತ್ತು..! ಸತ್ಯ ಕಾಣಲಿಲ್ಲ.! ಅವನೆದೆಯ ಕಗ್ಗತ್ತಲ ಕಮರಿಯೊಳಗೆ ದಾರಿ ತಪ್ಪಿದವನಂತೆ ಅಲೆಯುತ್ತಿದ್ದ ಕಿರುಚುತ್ತಿದ್ದ ಅಳುತ್ತಿದ ಸುತ್ತಲೂ ನೋಡುತ್ತಿದ್ದ ಗವ್ವೆನುವಷ್ಟು ಅಂಧಕಾರ ಬೆಳಕಿಲ್ಲ.! ಸೂರ್ಯನಿಲ್ಲ.! ಚಂದ್ರನಿಲ್ಲ..! ಚುಕ್ಕಿಗಳಿಲ್ಲ.! ತಂಪಾದ ಗಾಳಿಯೂ ಇಲ್ಲ..! ಆ ಗಾಢಾಂಧಕಾರದಲ್ಲಿ ಸತ್ಯ ಸಣ್ಣಗೆ ಜರ್ಜರಿತನಾಗಿ ನಲುಗುತಿದ್ದ.! ಇದ್ದ ಊರೆಕೋ ನರಕವಾಗುತ್ತಿತ್ತು ಆ ಮರ ಮುಂದಿನ ದೇವಸ್ಥಾನ ಇಬ್ಬರು ನೆಡೆದ ಹಾದಿಗಳು.. ಮರಕೋತಿ ಆಡುತ್ತಿದ್ದ ಜಾಗ, ಮಾವಿನ ಹಣ್ಣು ಕದ್ದು ತಿನ್ನುವಾಗ ಸಿಕ್ಕಿಬಿದ್ಧ ತೋಟಗಳು ಎಲ್ಲವೂ ಈಗ ಅವನಿಗೆ ನರಕದ ರಾಯಭಾರಿಗಳಗಿದ್ದವು ಊರುಬಿಟ್ಟವನೆ, ಅಕ್ಕನ ಮನೆಯ ಮಹಡಿಸೇರಿ ಮಲಗಿಬಿಟ್ಟ ಸತ್ಯನ ಆ ಮಹಡಿಯ ಮನೆಗೂ ಮನಕ್ಕೂ ಸೂತಕ ಬಂದು ಒಳಹೊಕ್ಕಿ ಮಲಗಿ ಬಿಟ್ಟಿದೆ ಎಚ್ಚರವಾದಗ ಸಾವಾಗಬಹುದು….. ಕುಡಿದ ಅಮಲಿನಲ್ಲಿ ರಾತ್ರಿ ಹಗಲುಗಳ ಪರಿವಿಲ್ಲದಂತೆ ನಶೆಯಲ್ಲಿ ಮುಳುಗಿ ಮೌನವಾಗಿ ಹಳೆಯದನ್ನೆಲ್ಲ ಕ್ಷಣಕಾಲ ಮರೆತು ಮತ್ತೊಮ್ಮೆ ದೈತ್ಯಕಾರವಾಗಿ ಸೃಷ್ಟಿಸಿಕೊಂಡು ಮನದ ಒಳಗೂ ಹೊರಗೂ ಕಾದಾಡುತ್ತಿದಾನೆ.. ಆತ ಮನೆಯ ಹೊರಗಿನ ಬೆಳಕನ್ನು ಕಾಣುವುದು ಕೂಡ ವಾರಕೊಮ್ಮೆ ಅಷ್ಟೇ..! ತನ್ನ ಬಳಿ ಇದ್ದ ತುಂಬಿದ ಬಾಟಲುಗಳು ಖಾಲಿಯಾದಗ ಮಾತ್ರ ಮಹಡಿಯ ಒಂದೊಂದೇ ಮೆಟ್ಟಿಲುಗಳನ್ನ ತಡವರಿಸಿಕೊಂಡಿಳಿದು ಗೇಟಿನ ಬಾಗಿಲು ತೆಗೆಯುವ ಸದ್ದಿಗೆ ತನ್ನ ಅಕ್ಕನ ಬೈಗುಳ ಕೇಳುತ್ತವೆ ಆದರೆ ಅವು ಅವನ ಒಳ ತಾಕುವುದಿಲ್ಲ, ಆತುರ ಆತುರದಲ್ಲೇ ನೆಡೆದು ಬೇಕಾದಷ್ಟನ್ನು ತಂದು ಮಹಡಿ ಹತ್ತಿ ಬಾಗಿಲು ಮುಚ್ಚಿ ಕುಳಿತು ಬಿಡುತ್ತಾನೆ..! ಊಟ ತಿಂಡಿಗಳು ಅಕ್ಕನ ಮನೆಯಿಂದಲೇ ಮೆಟ್ಟಿಲನತ್ತಿ ಬರುತ್ತವೆ.. ಕೆಲವು ಬಾರಿ ಖಾಲಿಯಾಗುತ್ತದೆ ಕೆಲವೊಮ್ಮೆ ಹಾಗೆ ಒಣಗಿಯೋ ಹಳಸಿಯೋ ವಾಪಸಿಳಿದು ಕಸದ ಬುಟ್ಟಿ ಸೇರುತ್ತವೆ. ಇತ್ತ ಮೇರಿಯ ಸಂಸಾರದ ಸಂತೋಷದ ದಿನಗಳೆಲ್ಲ ಮುಗಿದ್ದುಹೋಗಿದ್ದೊ, ಸೂತಕವು ಇವಳ ಮನೆಯ ಬಾಗಿಲನ್ನು ಬಂದು ಬಡಿಯಿತು ಅವಳ ಗಂಡನೆಂಬ ಜೀವ ಸತ್ತುಬಿತ್ತು.. (ಸಾವಿಗೆ ಸಾವಿರ ಕಾರಣಗಳು ಇರುತ್ತವೆ.ಇಲ್ಲಿ ಈ ಸಾವಿಗೆ ಕಾರಣದ ಅವಶ್ಯಕತೆ ಇಲ್ಲ ಹೆಸಲಿಲ್ಲದ ಪಾತ್ರ ಸಾಯಬೇಕು) ಇವಳು ಕೂಡ ಕೆಲವು ತಿಂಗಳುಗಳು ನಲುಗಿದ್ದಳು ಆದರೆ ಸೋಲುವ ಹೆಣ್ಣಲ್ಲ ಬದುಕಿನ ಸವಾಲುಗಳನ್ನೇ ತುಳಿದು ನೆಡೆಯುತ್ತಿದಳು. ಇಂದಿಗೂ ಅವಳನ್ನು ಸೆಣಸಿ ಸೋಲಿಸಿ ಕಣ್ಣೀರಿಡಿಸುವ ಕೊರತೆಯೆಂದರೆ ಮಕ್ಕಳದ್ದು ಮಾತ್ರ. ಭಾನುವಾರದಂದು ಚರ್ಚೆಗೆ ಬರುವ ಮಕ್ಕಳೊಂದಿಗೆ ಆಟವಾಡಿ ನಲಿಯುತ್ತ ಆ ಕೊರತೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾಳೇ. ಇಲ್ಲದನೆಲ್ಲ ತನ್ನೊಳಗೆ ಸೃಷ್ಟಿಸಿಕೊಂಡು ಬದುಕುತ್ತಿದ್ದಾಳೆ, ಹೀಗೆ ಇಬ್ಬರ ದಿನಗಳು ಕಳೆಯುತ್ತಿವೆ…..(ಈ ಕಥೆಯಲ್ಲಿ ಇಬ್ಬರೂ ಮತ್ತೊಮ್ಮೆ ಭೇಟಿಯಾಗಬೇಕು ಆಗಾಗಿ ಇಬ್ಬರನ್ನು ಒಂದೇ ರಸ್ತೆಗೆತಂದುಬಿಟ್ಟೆ) ಮೇರಿಗೆ ತನ್ನ ಸತ್ಯನ ದರ್ಶನವಾಯಿತು ಆದರೆ ಸತ್ಯ ಅವಳನ್ನು ಗಮನಿಸಲಿಲ್ಲ ಅವನು ಹಾಗೆ ನೆಡೆದ ಹಿಂಬಾಲಿಸಿದಳು ಮಹಡಿ ಹತ್ತಿ ಒಳಹೋದ ಸಲ್ಪ ಸಮಯಕಾದಳು ಮತ್ತೆ ಹೊರಬರಲಿಲ್ಲ ಅವಳು ಕೂಡ ಮಹಡಿ ಹತ್ತಿ ಬಾಗಿಲು ತೆರೆದು ಒಳ ಹೋದಳು. ಸಿಗರೇಟಿನ ಗಾಟು ಎಣ್ಣೆಯ ಕಮಟುಮಿಶ್ರಿತವಾಸನೆ ರಪ್ಪೆಂದು ಮೂಗಿಗೆ ಬಡಿಯಿತು, ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದ ಮನೆಯೊಳಗೆ ನಿಂತ ಗೋಡೆಗಳು.! ಮೌನವಾಗಿ ಬಿಗಿದುನಿಂತ ಕಿಟಕಿಗಳು.! ಚಾವಣಿಗೂ ಗೋಡೆಗಳ ಮೂಲೆಗೂ ಸೇರಿಸಿ ಎಣೆದ ಜೇಡರ ಬಲೆಯೊಳಗೆ ಸತ್ತ ಹುಳಗಳು.! ನೆಲದ ಮೇಲೆಲ್ಲ ಬಿದ್ದ ಸಿಗರೇಟಿನ ಫಿಲ್ಟರಗಳು.! ಕದದಮೂಲೆಯಲ್ಲಿದ್ದ ಖಲಿಬಾಟಲ್ಗಳು.! ಗಾಢಮೌನದೊಳಗೆ ಅಲಲ್ಲಿ ತೂತುಬಿದ್ದ ಬನಿಯನ್ ಮತ್ತು ಲುಂಗಿ ತೊಟ್ಟು ದಿಂಬನ್ನೂರಗಿ ಕುಡಿಯುತ್ತ ಕುಳಿತ್ತಿದ್ದ ಸತ್ಯ.! ಕೃಷವಾದ ದೇಹ ವಯಸ್ಸಿಗಿಂತ ಹೆಚ್ಚಾಗಿ ಕಾಂತಿಗುಂದಿದ ಚರ್ಮ.! ಅಡ್ಡದಿಡ್ಡಿ ಬೆಳೆದ ಗಡ್ಡ ಮೀಸೆಗಳು.! ಅವನ ಕಣ್ಣಗಳಲ್ಲಿ ಜೀವಚೈತನ್ಯದ ಬೆಳಕಿಲ್ಲ ಶವವೊಂದು ಕುಡಿಯುತ್ತಿದ್ದಂತಿತ್ತು..! ಇಬ್ಬರ ನೋಟಗಳು ಸಂಧಿಸಿದವು ಕುಶೋಲೋಪರಿಯ ಅಗತ್ಯವಿರಲಿಲ್ಲ.! ಇಬ್ಬರ ಕಣ್ಣುಗಳಲ್ಲೂ ಸಿಕ್ಕ ಸಂತೋಷವಿರಲಿಲ್ಲ.! ಕೆಲವೇ ಕ್ಷಣಗಳಲ್ಲಿ ಮೌನ ಮನೆಕಟ್ಟಿತ್ತು ಮಾತಿನ ಪೆಟ್ಟು ಬೇಕಿತ್ತು ಮೌನ ಒಡೆಯಲು.! ಅವನೇ ಆ ಮೌನ ಒಡೆದ ಮಾತಿಗಿಳಿದ.! ಮತ್ತಿನಲ್ಲಿದ್ದ.! “ಈ ಕಾಲವೇ ಹೀಗೆ ಹಳೆಯದೆಲ್ಲ ಕಳೆದುಹೋಗಿದ್ದರು ಸಾಕ್ಷಿಗಳನ್ನು ಮಾತ್ರ ನಿಲ್ಲಿಸಿ ಹೋಗುತ್ತವೆ ನಿನ್ನ ಜೊತೆ ಕಳೆದ ಬಾಲ್ಯದ ದಿನಗಳು ಯೌವನದ ಕ್ಷಣಗಳನೆಲ್ಲ ಸಾಯಿಸಬೇಕೆಂದು ಈ ಅಮಲಿಗೆ ದಾಸನಾಗಿಬಿಟ್ಟೆ.! ಅಮಲು ಹೆಚ್ಚಾದಗಳಲೇಲ್ಲ ನೀ ನನ್ನೊಳಗೆ ಇರುವಂತೆ ಮುದ್ದಿಸಿದಂತೆ ತಾಯಿತನದ ಸುಖ ನೀಡಿದಂತೆ ಅನಿಸುತ್ತದೆ ರೇಖಾ..! ಈ ಅಮಲು ಎಷ್ಟು ನೆಮ್ಮದಿಕೊಡುತ್ತದೆ ಗೊತ್ತಾ..! ಆ ಯೌವನದ ದಿನಗಳಲ್ಲಿ ನಾನು ನಿನ್ನ ಹತ್ತಿರಕ್ಕೆ ಬರಲು ಪ್ರತಿ ಹೆಜ್ಜೆ ಮುಂದಿಟ್ಟಗಾಲು ನೀನು ಮಾತ್ರ ಅದರ ಹತ್ತುಪಟ್ಟು ದೂರವಾಗುತ್ತಿದ್ದೆ.! ನಾನು ಈ ಧರ್ಮವೆಂಬ ಮುಳ್ಳುಪೊದೆಗಳ ದಾಟಿ ಪ್ರೀತಿಯ ಬೋರೆಮೇಲೆ ಬಂದುನಿಂತು ನೀನಗಾಗಿ ಕನವರಿಸಿದೆ ನೀನು ಮಾತ್ರ ಆ ಧರ್ಮಗಳ ಬೇಲಿಯಿಂದಾಚೆ ಬರಲೇ ಇಲ್ಲಾ..! ಮೂಲಕ್ರಿಶ್ಚಿಯನ್ನರು ಪಾಲಿಸದಷ್ಟು ನಿನ್ನ ಧರ್ಮನಿಷ್ಠೆಗಳು ಅತಿರೇಖವಾಗಿದ್ದವು ರೇಖಾ..! ನೀನು ನಿನ್ನ ಧರ್ಮದ ಹೆಸರಿನಲ್ಲಿ ಕೃತಕಗೋಡೆಯೊಂದನ್ನು

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ರಾಮರಾಯರು ಜಿ. ಹರೀಶ್ ಬೇದ್ರೆ  ರಾಮರಾಯರು ರಾಮರಾವ್ ಹಾಗೂ ಸುಲೋಚನ ರವರಿಗೆ ಮೂರು ಹೆಣ್ಣು, ಒಂದು ಗಂಡು ಮಗು. ಹೆಣ್ಣುಮಕ್ಕಳೇ ಹಿರಿಯರು, ಮಗ ಕೊನೆಯವನು. ರಾಯರು ಅತ್ಯಂತ ನೇರ ನುಡಿಯ ವ್ಯಕ್ತಿ. ಸರಿ ಇದ್ದರೆ ಸರಿ, ತಪ್ಪಾಗಿದ್ದರೆ ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರು ಮುಲಾಜು ನೋಡದೆ ತಪ್ಪನ್ನು ಹೇಳಿ ನೀರಿಳಿಸುತ್ತಿದ್ದರು. ರಾಯರದು ಖಾಸಗಿಯವರ ಬಳಿ ಕೆಲಸ, ಆದಾಯ ಕಡಿಮೆ. ಆದರೂ ನಾಲ್ಕು ಮಕ್ಕಳನ್ನು ಚೆನ್ನಾಗಿಯೇ ಓದಿಸಿದ್ದರು.  ಮೂರನೆಯವಳ  ಮದುವೆಯಾಗಲಿಕ್ಕೂ  ಇವರ ಆರೋಗ್ಯ ಕೈಕೊಟ್ಟು ಮನೆಯಲ್ಲೇ ಉಳಿದರು. ಮಗನ ಓದು ಆಗಷ್ಟೇ ಮುಗಿದಿದ್ದು, ಕೆಲಸಕ್ಕೆ ಪ್ರಯತ್ನಿಸುತ್ತಿದ್ದ. ಸ್ಥಳೀಯವಾಗಿ ಅಂದುಕೊಂಡ ಒಳ್ಳೆಯ ಕೆಲಸ ಸಿಗದೆ ಬೆಂಗಳೂರಿಗೆ ಹೋದ.  ಹೊಸದಾಗಿ ಕೆಲಸಕ್ಕೆ ಸೇರಿದ್ದರಿಂದ ತಿಂಗಳಿಗೊ, ಎರಡು ತಿಂಗಳಿಗೊ ಒಮ್ಮೆ ಬಂದು ಹೋಗುತ್ತಿದ್ದ. ರಾಮರಾಯರು ಸದಾ ನಾಲ್ಕು ಜನರ ನಡುವೆ ಇದ್ದು ಕೆಲಸ ಮಾಡುತ್ತಿದ್ದವರು, ಈಗ ಎಲ್ಲಾ ಬಿಟ್ಟು ಮನೆಯಲ್ಲೇ ಇರಬೇಕು ಎಂದರೆ ಬಹಳ ಕಷ್ಟವಾಗುತ್ತಿತ್ತು.  ಹೊರಗಡೆ ಹೋದರೂ, ಸುಮ್ಮನೆ ಹರಟೆ ಹೊಡೆದು ಕಾಲ  ಕಳೆಯುವ ಅಭ್ಯಾಸ ಇರದ ಅವರಿಗೆ ಅಲ್ಲಿರಲು ಸಾಧ್ಯವಾಗದೆ ಮನೆಗೆ ಮರಳಿ ಬರುತ್ತಿದ್ದರು.  ಒಂದು ಕಡೆ ಅನಾರೋಗ್ಯ ಜೊತೆಗೆ ಕೆಲಸವಿಲ್ಲದೆ ಹೆಂಡತಿ ಮುಖ ನೋಡಿಕೊಂಡು ಮನೆಯಲ್ಲಿರುವುದು ಅಸಾಧ್ಯವಾಯಿತು. ಇದೇ ಚಿಂತೆಯಲ್ಲಿ ಬಿ.ಪಿ.ಯ ಜೊತೆ ಶುಗರ್ ಸಮಸ್ಯೆಯೂ ಆರಂಭವಾಯಿತು. ಅವರು ಯಾವಾಗ ಯಾವ ವಿಷಯಕ್ಕೆ ಸಿಟ್ಟಾಗುತ್ತಾರೆ, ಯಾವುದಕ್ಕೆ ಸುಮ್ಮನಿರುತ್ತಾರೆ ಎನ್ನುವುದು ಸುಲೋಚನರವರಿಗೆ ತಿಳಿಯದಾಯಿತು.  ಮೊದಲೇ ಮಿತಭಾಷಿಯಾದ ಅವರು ಮತ್ತಷ್ಟು ಮೌನಕ್ಕೆ ಶರಣಾದರು.ಅದೊಂದು ದಿನ ಸಂಜೆ ಇದ್ದಕ್ಕಿದ್ದಂತೆ ರಾಮರಾಯರು ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣವೇ ಸುಲೋಚನಾ ಪಕ್ಕದ ಮನೆಯವರು ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷೆ ಮಾಡಿದ ವೈದ್ಯರು, ಬಿ.ಪಿ. ಹಾಗೂ ಶುಗರ್ ಎರಡೂ ಹೆಚ್ಚಾಗಿದೆ, ಒಂದೆರೆಡು ದಿನ ಇಲ್ಲೇ ಇರಲೆಂದರು.  ವಿಚಾರ ತಿಳಿದ ಮಕ್ಕಳು ತಂದೆಯನ್ನು ನೋಡಲು ಒಂದೇ ಉಸಿರಿಗೆ ಇದ್ದ ಊರುಗಳಿಂದ ಓಡಿ ಬಂದರು. ಇದಾದ ಮೇಲೆ ತಮ್ಮದೇ ಅಸಡ್ಡೆಯಿಂದ ರಾಯರು ವರುಷದಲ್ಲಿ ಹಲವು ಬಾರಿ ಆಸ್ಪತ್ರೆಗೆ ಸೇರಿದರು. ಇದರಿಂದ ಬೇಸತ್ತ ಮಗ, ಹಗಲೆಲ್ಲ ರಜ ಹಾಕಿ ಊರಿಗೆ ಬರಲು ಸಾಧ್ಯವಿಲ್ಲ ಎಂದು ಬಲವಂತವಾಗಿ ತಂದೆ ತಾಯಿ ಇಬ್ಬರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ಅವನಿಗೆ ಬರುವ ಸಂಬಳಕ್ಕೆ ತಕ್ಕಂತಹ ಸಣ್ಣ ಮನೆಯೊಂದನ್ನು ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ತೆಗೆದುಕೊಂಡಿದ್ದ.    ಅವನು ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ಮತ್ತೆ ಸೇರುತ್ತಿದ್ದದ್ದು ರಾತ್ರಿ ಎಂಟು ಗಂಟೆಗೆ. ಅಲ್ಲಿಯವರೆಗೆ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿ ಇರಬೇಕಿತ್ತು. ಇದು ರಾಮರಾಯರಿಗೆ ಮತ್ತಷ್ಟು ವಿಚಲಿತರಾಗುವಂತೆ ಮಾಡಿತ್ತು. ಊರಲ್ಲಾದರೆ, ಮನೆಯ ಮುಂಬಾಗಿಲಿಗೆ ಬಂದು ನಿಂತರೆ ಸಾಕು, ಹೋಗಿ ಬರುವ ಪರಿಚಿತರು ಮುಗುಳ್ನಕ್ಕು, ಅದು ಇದು ಮಾತನಾಡುತ್ತಾ ಮುಂದೆ ಸಾಗುತ್ತಿದ್ದರು. ಇಷ್ಟಕ್ಕೆ ಅವರಿಗೆ ಎಷ್ಟೋ ಹಿತವೆನಿಸಿಸುತ್ತಿತ್ತು. ಆದರೆ ಇಲ್ಲಿ ಮನೆಗಳು ನೂರಿದ್ದರೂ ಎಲ್ಲಾ ಅಪರಿಚಿತರು. ಅದೇಷ್ಟೋ ದಿನಗಳ ನಂತರ ಒಂದಿಬ್ಬರು ಪರಸ್ಪರ ಮಾತನಾಡಿಸುವಂತಾಗಿದ್ದರು. ಅದೂ ಹೆಸರಿಗೆ ಮಾತ್ರ ಅನ್ನುವಂತಿತ್ತು. ಹಾಗಾಗಿ ಹೊತ್ತು ಹೋಗದೆ ರಾಮರಾಯರು, ತಾವು ಊರಿಗೆ ಹಿಂದಿರುಗುವುದಾಗಿ ಹೇಳುತ್ತಿದ್ದರು. ಆದರೆ ಅಲ್ಲಿ ಇವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದೆ ಎಲ್ಲಾ ಜವಾಬ್ದಾರಿಯನ್ನು ತಾಯಿಯ ಮೇಲೆ ಹಾಕಲು ಮನಸ್ಸು ಒಪ್ಪದೆ ಮಗ ಬೇಡ ಅನ್ನುತ್ತಿದ್ದ. ಒಂದು ದಿನ ರಾಯರು ಹಟ ಮಾಡಿದಾಗ ಕಡ್ಡಿ ಮುರಿದಂತೆ ಎಲ್ಲಿಗೂ ಕಳಿಸುವುದಿಲ್ಲ ಎಂದು ಸ್ವಲ್ಪ ಒರಟಾಗಿಯೇ ಹೇಳಿದ.  ಇದು ಮೊದಲೇ ಕುಗ್ಗಿ ಹೋಗಿದ್ದ ರಾಮರಾಯರು ಮತ್ತಷ್ಟು ಕುಗ್ಗುವಂತೆ ಮಾಡಿತು. ಬರಬರುತ್ತಾ ಅವರ ನಡವಳಿಕೆಯಲ್ಲಿ ಏರುಪೇರಾಗತೊಡಗಿತು. ಒಮ್ಮೊಮ್ಮೆ ಏನಾದರು ಬಡಬಡಿಸಿದರೆ ಮತ್ತೆ ಕೆಲವೊಮ್ಮೆ ದಿನಗಟ್ಟಲೆ ಒಂದೇ ಒಂದು ಪದವನ್ನು ಆಡದೆ ಎಲ್ಲೋ ನೋಡುತ್ತ ಮೈಮರೆತು ಕುಳಿತುಬಿಡುತ್ತಿದ್ದರು. ಊಟ ತಿಂಡಿಯ ಪರಿವೆಯೂ ಇರುತ್ತಿರಲಿಲ್ಲ, ಒಂದು ಎರಡು ಇದ್ದ ಜಾಗದಲ್ಲೇ ಆಗಿರುತ್ತಿತ್ತು. ಇದನ್ನು ನೋಡಿ ಮಗ, ಹಲವಾರು ಡಾಕ್ಟರುಗಳಿಗೆ ತೋರಿಸಿದರೂ ಏನೂ ಉಪಯೋಗವಾಗಲಿಲ್ಲ.   ಈ ಪರಿಸ್ಥಿತಿಯಲ್ಲಿ ತಂದೆಯನ್ನು ಅಮ್ಮನೊಂದಿಗೆ ಊರಿಗೆ ಕಳಿಸಲು ಸಾಧ್ಯವಿಲ್ಲ. ಹಾಗೊಮ್ಮೆ ಕಳೀಸಲೇ ಬೇಕೆಂದರೆ ತಾನೂ ಅವರೊಂದಿಗೆ ಹೋಗಬೇಕು. ಆದರೆ ಕೈಯಲ್ಲಿರುವ ಕೆಲಸ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಮಗನೂ ತುಂಬಾ ಒದ್ದಾಡುತ್ತಿದ್ದ. ಗಂಡ ಹಾಗೂ ಮಗನ ಪರಿಸ್ಥಿತಿ ಅರ್ಥವಾದರೂ ಸುಲೋಚನಾ ಏನೂ ಮಾಡುವಂತಿರಲಿಲ್ಲ.  ಹೊತ್ತು ಹೊತ್ತಿಗೆ ಸರಿಯಾಗಿ ಗಂಡನ ಬೇಕು ಬೇಡಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದರು. ಆದಷ್ಟು  ಅವರ ಒದ್ದಾಟ ಮಗನಿಗೆ ತಿಳಿಯದಿರಲೆಂದು ಕಷ್ಟ ಪಡುತ್ತಿದ್ದರು. ತೀರಾ ಅನಿವಾರ್ಯ ಎಂದಾಗ ಮಾತ್ರ ಮಗನ ಗಮನಕ್ಕೆ ತರುತ್ತಿದ್ದರು. ಮಗನಿಗೆ ಎಲ್ಲವೂ ಅರ್ಥವಾಗುತ್ತಿತ್ತು ಆದರೆ ತನಗೆ ಗೊತ್ತಿದೆ ಎಂದು ತೋರಿಸಿಕೊಂಡರೆ ಅಮ್ಮ ಮತ್ತಷ್ಟು ನೊಂದುಕೊಳ್ಳಬಹುದೆಂದು ತಾನು ಆರಾಮಾವಾಗಿ ಇರುವಂತೆ ನಡೆದು‌ಕೊಳ್ಳುತ್ತಿದ್ದ. ಅಲ್ಲದೆ ಅಪ್ಪನಿಗಾಗಿ ಊರಿಗೆ ಹಿಂದಿರುಗಬೇಕೆಂದು ಅಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದ. ಅದೊಂದು ದಿನ ಮನೆಯ ಎಲ್ಲಾ ಹೆಣ್ಣುಮಕ್ಕಳು ತಮ್ಮ ಗಂಡ, ಮಕ್ಕಳೊಂದಿಗೆ ಅಪ್ಪನನ್ನು ನೋಡಲು ಬೆಂಗಳೂರರಿಗೆ ಬಂದರು. ಅವರು ರಾಮರಾಯರಿಗೆ ಎಷ್ಟೇ ಮಾತನಾಡಿಸಿದರೂ ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವರನ್ನು ಗುರುತೂ ಹಿಡಿಯಲಿಲ್ಲ. ರಾಮರಾಯರಿಗೆ, ಮಗ ಹಾಗೂ ಹೆಂಡತಿಯ ಹೊರತಾಗಿ ಎಲ್ಲರೂ ನೆನಪು ಅಳಿಸಿಹೋಗಿತ್ತು. ಇದು ಸುಲೋಚನಾ ಮತ್ತು ಮಗನ ಗಮನಕ್ಕೆ ಬಂದೇ ಇರಲಿಲ್ಲ.  ಇದು ತಿಳಿದೊಡನೆ ಕುಸಿಯುವ ಸರದಿ ಮಗನದಾಯಿತು. ಮನೆಗೆ ಬಂದ ಹೆಣ್ಣುಮಕ್ಕಳು , ಕೆಲಸಕ್ಕೆ ಕಾಯದೆ ತಕ್ಷಣ ಅಪ್ಪನನ್ನು ಅವರ ಆಸೆಯಂತೆ ಊರಿಗೆ ಕರೆದುಕೊಂಡು ಹೋಗು. ನಿನಗೆ ಕೆಲಸ ಸಿಗುವ ವರೆಗೂ ನಾವು ಸಹಾಯ ಮಾಡುತ್ತೇವೆ ಎಂದು ತಮ್ಮನಿಗೆ ಹೇಳಿದರು. ಇದು ಅವನಿಗೂ ಸರಿ ಎನಿಸಿ,  ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೊರಡುಸುವುದಾಗಿ ಹೇಳಿದ.  ಹೇಳಿದಂತೆ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ. ಆದರೆ ಅಲ್ಲಿನ ನಿಯಮಗಳ ಪ್ರಕಾರ ಅವನು ಒಂದು ತಿಂಗಳ ನಂತರವಷ್ಟೇ ತನ್ನ ಕೆಲಸದಿಂದ ಬಿಡುಗಡೆ ಹೊಂದಬೇಕಾಗಿತ್ತು.    ಅಷ್ಟರೊಳಗೆ ಊರಲ್ಲಿ ಇರಲು ಬೇಕಾದ ವ್ಯವಸ್ಥೆಗಳನ್ನು ಮಾಡಿ ಕೊಳ್ಳತೊಡಗಿದ. ಇದ್ದ ಕೆಲಸದಿಂದ ಬಿಡುಗಡೆ ಆಗಲು ಎರಡು ದಿನ ಬಾಕಿ ಇರುವಾಗ ಅದೃಷ್ಟ ಎನ್ನುವಂತೆ ಊರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಕರೆ ಬಂತು. ಇದು ತಾಯಿ ಮಗ ಇಬ್ಬರಿಗೂ ತುಂಬಾ ಸಮಾಧಾನ ತಂದಿತ್ತು. ಕೊನೆಯ ದಿನದ ಕೆಲಸ ಮುಗಿಸಿ ಮಾರನೇ ದಿನವೇ ಊರಿಗೆ  ಹೋಗುವುದೆಂದು ಮನೆಯ ಎಲ್ಲಾ ವಸ್ತುಗಳನ್ನು ಗಂಟು ಕಟ್ಟಿ, ಅದನ್ನು ಸಾಗಿಸಲು ಬೇಕಾದ ಲಾರಿಯನ್ನು ಗೊತ್ತು ಮಾಡಿದ್ದ.  ಹಿಂದಿನ ದಿನ ರಾತ್ರಿ ಪಕ್ಕದ ಮನೆಯವರು ಕೊಟ್ಟಿದ್ದನ್ನೇ ಮೂವರು ಊಟ ಮಾಡಿ, ನಾಳೆಯಿಂದ ಸ್ವಂತ ಊರಲ್ಲಿ ವಾಸವೆಂದು ಸಂತೋಷದಿಂದ ಬಹಳ ಹೊತ್ತು ತಾಯಿ ಮಗ ಮಾತನಾಡುತ್ತಿದ್ದರು. ರಾಮರಾಯರು ಏನೊಂದೂ ಮಾತನಾಡದಿದ್ದರೂ ಅವರ ಮುಖದಲ್ಲಿ ಹಿಂದೆಂದೂ ಕಾಣದ ತೇಜಸ್ಸು ಕಾಣುತ್ತಿತ್ತು.  ತಾಯಿ ಮಗ ಮಾತನಾಡುತ್ತಾ ಯಾವಾಗ ಮಲಗಿದರು ಅವರಿಗೇ ಗೊತ್ತಿಲ್ಲ. ಬೆಳಿಗ್ಗೆ ಯಾರೋ ಜೋರಾಗಿ ಬಾಗಿಲು ಬಡಿದಾಗಲೇ ಅವರಿಗೆ ಎಚ್ಚರವಾಗಿದ್ದು. ಇಬ್ಬರೂ ಲಾರಿಯವನು ಬಂದಿರಬೇಕೆಂದು ದಡಬಡಾಯಿಸಿ ಎದ್ದು  ಬಾಗಿಲು ತೆರೆದರು.  ಅಲ್ಲಿ ಮೇಲಿನ ಮನೆಯವರು ಇವರಿಗೆ ಕುಡಿಯಲು ಕಾಫಿಯನ್ನು ತಂದಿದ್ದರು. ಅವರೊಂದಿಗೆ ನಾಲ್ಕು ಮಾತನಾಡಿ ಒಳಬಂದ ಸುಲೋಚನಾ, ರಾಮರಾಯರು ಕಾಫಿ ಕುಡಿಯಲೆಂದು ಎಬ್ಬಿಸತೊಡಗಿದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಹೆದರಿಕೆಯಾಗಿ ಮಗನನ್ನು ಕೂಗಿದಾಗ, ಅವನೂ ಓಡೋಡಿ ಬಂದು ತಂದೆಯನ್ನು ಎಬ್ಬಿಸಲು ಎಷ್ಟೇ ಪ್ರಯತ್ನ ಪಟ್ಟರೂ ರಾಮರಾಯರು ಏಳಲೇ ಇಲ್ಲ. ರಾತ್ರಿ ಅವರ ಮುಖದಲ್ಲಿ ಕಂಡ ತೇಜಸ್ಸು ಈಗಲೂ ಹಾಗೇ  ಇತ್ತು………. *********

ಕಥಾಯಾನ Read Post »

ಕಥಾಗುಚ್ಛ

ಕಥಾಗುಚ್ಛ

ಒಂದು ಸಾವಿನ ಸುತ್ತಾ ವೇಣುಗೋಪಾಲ್ ಕೆಲಸ ಮುಗಿದು ಮನೆಗೆ ಬರುವ ಹೊತ್ತಿಗೆ ರಾತ್ರಿ ಎಂಟು ಗಂಟೆಯಾಗಿತ್ತು. ಬಟ್ಟೆ ಬದಲಿಸಿ ಮುಖ ತೊಳೆದು, ಫ್ರಿಡ್ಜ್ನಲ್ಲಿದ್ದ ಎರಡು ಮೊಟ್ಟೆಗಳನ್ನ ತೆಗೆದುಕೊಂಡು ಬೆಳಗ್ಗಿನ ತಂಗಳಿಗೆ ಎಗ್ರೈಸ್ ಮಾಡಲು ಈರುಳ್ಳಿ ಕತ್ತರಿಸುತ್ತಿದ್ದೆ ಫೋನ್ ರಿಂಗಣಿಸಿತು ಅಪ್ಪನ ಫೋನ್ ಹಲೋ ಹೇಳಣ್ಣ.? ಎಲ್ಲಿದ್ದಿಲಾ.? ಇವಾಗ ಬಂದೆ ಮನೆಗೆ ಏನು ಹೇಳು.? ಮಾಗಡಿ ನಿಮ್ಮತ್ತೆ ಮಗ ಕೆರೆಗೆ ಬಿದ್ದನಂತೆ.. ಪೊಲೀಸೆರೆಲ್ಲ ಬಂದು ಹುಡುಕಿದರೂ ಸಿಕ್ಕಿಲ್ಲವಂತೆ ಅಲ್ಲಿ ಯಾರು ಇರೋದು ಕಾಣೆ..!? ಹೋಗು ಅದೇನ್ ವಿಚಾರಿಸು ಒಂದೇ ಸಮನೆ ಅಳುತ್ತ ಕುತ್ತಿದ್ದಾಳೆ..! ಯಾರು..? ಕಿರಣನ ಅರುಣನ..? ಇನ್ಯಾರು ಆ ತರ್ಲೆ ನನ್ನ ಮಗ ಕಿರಣ ಇರ್ತಾನೆ..! ಹಾಸನದಿಂದ ಯಾರು ಬಂದಿಲ್ವಾ..? ನಿಮ್ಮ ಚಿಕ್ಕಪ್ಪ ಹೊರ್ಟಿರ್ಬೇಕು ನೀನು ಹೋಗವತ್ತಿಗೆ ಬಂದಿರ್ತಾನೆ ಹೋಗು ಮೊದ್ಲು.. ಅದೇನು ವಿಚಾರಿಸು.. ಆಯ್ತು ಅಂತ call cut ಮಾಡಿ ಇದ್ದ ತಂಗಳನ್ನೇ ಬಿಸಿ ಮಾಡಿ ತಿನ್ನುವಷ್ಟರಲ್ಲಿ ಒಂಬತ್ತು ಗಂಟೆಯಾಗಿತ್ತು.. ಅತ್ತೆಯ ವಿಚಾರಿಸಲು call ಮಾಡ್ದೇ ಮೊಬೈಲ್ ಸ್ವಿಚ್ ಆಫ್ ಆಗಿತ್ತು.! ಹಾಗೆ ಹೋಗುವುದು ಬೇಡವೋ ಎಂಬ ಯೋಚನೆಯಲ್ಲಿ ಇನ್ನು ಹದಿನೈದು ನಿಮಿಷ ಕಳೆದೆ.. ಯಾಕೋ ಮನಸ್ಸು ಇಲ್ಲೇ ಇರಲು ಬಿಡಲಿಲ್ಲ ಲೈಟ್ ಆಫ್ ಮಾಡಿ ಲಾಕ್ ಹಾಕಿ ಮೆಟ್ಟಿಲು ಇಳಿದು ಕಾರನ್ನ ಪಾರ್ಕಿಂಗ್ನಿಂದ ತೆಗೆದು ಹೊರಟೆ. ಸುಂಕದಕಟ್ಟೆ ಬಿಡುವ ಹೊತ್ತಿಗೆ ಹತ್ತುಗಂಟೆ ದಾಟಿತ್ತು.. ಮಾಗಡಿಯಿಂದ ಐದು ಕಿಲೋಮೀಟರ್ ಇರುವ ತೂಬಿನಕೆರೆ ಅದೇ ಊರಿನ ಕೆರೆಯಲ್ಲೇ ಬಿದ್ದಿರ್ಬೇಕು..! ಶವ ಸಿಕ್ಕಿದಿಯೋ ಇಲ್ವೋ ಗೊತ್ತಿಲ್ಲಾ.? ಅರುಣನಿಗೊಮ್ಮೆ ಫೋನ್ ಹಾಯಿಸಿದೆ ಅವನ ಫೋನ್ ಕೂಡ ಸ್ವಿಚ್ ಆಫ್..! ನಲವತ್ತು ಕಿಲೋಮೀಟರ್ ಪಯಣ.. ಆ ರಾತ್ರಿಯ ಚಿಕ್ಕ ರಸ್ತೆ.. ಎದುರಿಗೆ ಅತ್ತೆಯ ಜೀವನ ಕಣ್ಣು ಮುಂದೆ ಬಂದು ಹೋಗುತ್ತಿದೆ. ಗಂಗಾತ್ತೆ ನನ್ನ ಸೋದರತ್ತೆಯೇನು ಅಲ್ಲ..! ನನ್ನಜ್ಜಿಯ ತಂಗಿಯ ಮಗಳು.. ಮಕ್ಕಳು ಚಿಕ್ಕವರಿದ್ದಾಗಲೇ ಗಂಡನನ್ನು ಕಳೆದುಕೊಂಡವಳು ಆ ಕಷ್ಟದಲ್ಲೂ ಒಂದುದಿನವೂ ತವರುಮನೆಗೆ ಹೋಗಿ ಕುಳಿತವಳಲ್ಲ ಅಣ್ಣ ಎಷ್ಟೇ ಕರೆದರು ನೆಂಟರಂತೆ ಹಬ್ಬಕ್ಕೆ ಹೋಗಿಬರುತ್ತುದ್ದವಳು.! ಎರಡು ಅವಳಿ ಮಕ್ಕಳು ಸ್ವಲ್ಪ ವ್ಯತ್ಯಾಸವಿದ್ದರು ಹೊಸಬರಿಗೆ ಇಬ್ಬರು ಒಂದೇರೀತಿಯಾಗಿ ಕಾಣುತ್ತಿದ್ದರು.! ಕಿರಣ ಇತ್ತೀಚೆಗೆ ಮಾಗಡಿಯ ಗ್ಯಾಂಗ್ವಾರ್ನಲ್ಲಿ ಸಿಕ್ಕಿ ಇಪ್ಪತ್ತೆರಡನೆ ವಯಸ್ಸಿಗೆ ಪೊಲೀಸ್ ಸ್ಟೇಷನ್ನು ಜೈಲ್ ಮೆಟ್ಟಿಲು ಹತ್ತಿ ಬಂದಿದ್ದ.! ಅರುಣ ತುಂಬಾ ಸೈಲೆಂಟ್ ಹುಡುಗ ಫೋಟೋ ಗ್ರಾಫರ್ ಕೆಲಸ ಮಾಡುತ್ತಿದ್ದ. ಗಂಡ ಸತ್ತ ನಂತರ ಇವೆರಡು ಮಕ್ಕಳನ್ನ ಸಾಕುವುದಕ್ಕೆ ಅದೆಷ್ಟು ಕಷ್ಟ ಪಟ್ಟಿದ್ದಳೋ ಆ ದೇವರಿಗೆ ಗೊತ್ತು ಅಂಗನವಾಡಿಯ ಕೆಲಸದ ನಂತರ ಅವರಿವರ ಮನೆಯಲ್ಲಿ ಮುಸುರೆ ತಿಕ್ಕಿ ಬಟ್ಟೆ ಹೊಗೆದು ತಾನು ತಿನ್ನುವುದು ಒಂದೊತ್ತು ಕಡಿಮೆಯಾದರೂ ಅವರನ್ನ ಖಾಲಿಯೊಟ್ಟೆಯಲ್ಲಿಟ್ಟವಳಲ್ಲ.! ತೇವಳುತ್ತಿದ್ದ ಮಕ್ಕಳನ್ನ ತನ್ನೆತ್ತರಕ್ಕೆ ಬೆಳೆಸಿದ್ದಳು.. ಆಕೆ ಮೇಲೆ ನನಗೆ ತುಂಬಾ ಅನುಕಂಪ ಯಾಕೆ ಗೊತ್ತೇ..!? ಆಕೆ ಹುಟ್ಟುಕುಂಟಿ ಇಷ್ಟೆಲ್ಲ ತನ್ನ ದೇಹದ ವೈಪಲ್ಯ ಬದುಕಿನ ವೈಫಲ್ಯದಲ್ಲೂ ಆಕೆಯ ಆಗಾದ ಎತ್ತರದ ಮನಸ್ಥಿತಿ ಅದೆಷ್ಟು ಗಟ್ಟಿಯಾಗಿತ್ತು ಅವಳು ಬದುಕನ್ನು ಕಟ್ಟಿಕೊಂಡ ಅವಳ ವಾಸ್ತವ ದೃಢ ನಿರ್ಧಾರಗಳು ಅದೆಷ್ಟು ಗಟ್ಟಿಯಾಗಿರಬೇಡ.! ಇನ್ನೇನು ಸುಖವಾಗಿರ ಬೇಕು ಅನ್ನುವಷ್ಟುರಲ್ಲಿ ಇನ್ನೊಂದು ಆಘಾತ.! ಯಾಕೋ ಗೊತ್ತಿಲ್ಲ ಆ ದೇವರು ಆಕೆಯ ಹಣೆಯಲ್ಲಿ ಸುಖವನ್ನ ಬರೆದಿಲ್ಲವೋ.. ಇಲ್ಲಾ ಅವಳು ಬದುಕನ್ನ ಗೆದ್ದರೀತಿಗೆ ದೇವರು ಸೋತು ಜಿದ್ದಿಗಿಳಿದ್ದಿದ್ದಾನೋ..!? ಅನಿಸುತ್ತಿದೆ.. ಕಾರು ಮಾಗಡಿ ಕೋಟೆಯ ಎದುರಿನ ರಸ್ತೆಗೆ ತಿರುಗಿತು ಬಲಭಾಗಕ್ಕೆ ಸಣ್ಣ ಕೆರೆಬಿಟ್ಟೋಡನೆಯೇ ಮಗ್ಗುಲಿಗೆ ಒಂದು ಸಣ್ಣ ಹಳ್ಳಿ ಅದನ್ನ ದಾಟಿ ಮುಂದೆ ಹೋಗುತ್ತಿದೆ ವಿದ್ಯುತ್ ಬೇಳಕಿಲ್ಲದ ಗುಂಡಿ ತುಂಬಿರುವ ರಸ್ತೆಗಳು ಎಡಭಾಗಕ್ಕೆ ಹೊಲದ ಸಾಲು ಬಲಭಾಗಕ್ಕೆ ಬಂಡೆ ಗುಡ್ಡ ಹಾಗೆ ಅಲ್ಲಲ್ಲಿ ಬೆಳೆದಿದ್ದ ದೊಡ್ಡಮರಗಳು ಗುಚ್ಚಿಗಳ ಸಾಲು..! ಕುಲುಕುತ್ತ ಹೋಗುತ್ತಿದ್ದ ಕಾರಿನ ಎದುರಿಗೆ ಹುಡುಗನೊಬ್ಬ ನೆಡೆದು ಹೋಗುತ್ತಿದ್ದಾನೆ ಸಮಯ ಹನ್ನೊಂದು ಇಪ್ಪತ್ತು. ಇಷ್ಟುಹೊತ್ತಿನಲ್ಲಿ ಯಾರಿರಬಹುದೆಂದು ಅವನ ಪಕ್ಕಕ್ಕೆ ಹೋಗಿ ಗಾಡಿ ನಿಲ್ಲಿಸಿ ನೋಡಿದರೆ ಅರುಣ.! ಅವನನ್ನ ಕೂರಿಸಿಕೊಂಡು ಮಾತನಾಡಲು ಮನಸ್ಸಿಲ್ಲದೆ ಗಾಡಿ ಸ್ಟಾರ್ಟ್ ಮಾಡಿ ಮುಂದೆ ಗುಂಡಿಗಳ ನೋಡುತ್ತಾ ಎರಡನೇ ಗೇರಿನಲ್ಲೇ ಡ್ರೈವ್ ಮಾಡುತ್ತಿದ್ದೆ.. ಅವನೇ ಇಷ್ಟೋತ್ತಿನಲ್ಲಿ ನಮ್ಮೂರಕಡೆ ಹೊರಟಿದ್ದಿಯಲ್ಲ ಅಣ್ಣ ಏನು ಸಮಾಚಾರ ಅಂದ..! ತಿರುಗಿ ಅವನನ್ನೇ ನೋಡುತ್ತಾ ನಿನ್ನ ಮೊಬೈಲ್ ಏನು ಆಯ್ತು ಅಂದೆ.? ಬಸ್ನಲ್ಲಿ ಕದ್ದುಬಿಟ್ರು ಅಣ್ಣ.. ಇಸ್ಟು ಹೊತ್ತಿನವರೆಗೂ ಏನು ಮಾಡ್ತಿದ್ದೆ..? ಫೋನ್ ಇಲ್ಲದೆ ಪರದಾಡಿ. ಕೆಲಸ ಮುಗಿಸಿಕೊಂಡು ಬರುತ್ತಿದ್ದೀನಿ.! ಇವನಿಗೆ ಕಿರಣ ಸತ್ತಿರುವ ವಿಚಾರ ಗೊತ್ತಿಲ್ಲ.. ಹೇಳೋದು ಬೇಡ ಅನಿಸಿ ಸುಮ್ಮನಾದೆ ಅವನೇ ಮತ್ತೆ ಮಾತಿಗಿಳಿದ ಅಣ್ಣಾ ಈ ರೋಡ್ನಲ್ಲಿ ಈ ಟೈಂ ನಲ್ಲಿ ಬರೋಕೆ ಹೋಗ್ಬೇಡಿ ಅಣ್ಣ ಜಾಗ ಸರಿ ಇಲ್ಲಾ.. ಅಂದ..! ನಗುತ್ತ ನೀನು ಬರ್ತಿದ್ದಿಯಲ್ಲೋ ಅಂದೆ. ನಾನು ಹಳಬ ಓಡಾಡಿ ಅಭ್ಯಾಸವಿದೆ ಇವತ್ತು ನಾನು ಬಂದಿದ್ದಕ್ಕೆ ಸರಿಹೋಯ್ತು.. ಇಲ್ಲಾ ಅಂದ್ರೆ ಕಷ್ಟ ಆಗ್ತಿತ್ತು ಅಂದ..! ನಗುತ್ತಲೇ ಸುಮ್ಮನಾದೆ ಊರು ಹತ್ತಿರವಾಗುತ್ತಿದೆ ಆ ಊರಿನಲ್ಲೂ ವಿದ್ಯುತ್ ಬೆಳಕಿಲ್ಲ ಮನೆಯೊಳಗೆ ಉರಿಯುತ್ತಿದ್ದದ್ದು ಚರ್ಚ್ ಲೈಟ್ಗಳು ಮಾತ್ರ.. ಮತ್ತೆ ಅವನತ್ತ ತಿರುಗಿದೆ ಅವನ ಕೈನಲ್ಲಿ ಟ್ಯಾಟು #GK ಅಂತ ಡಿಸೈನ್ ಆಗಿ ಟ್ಯಾಟು ಹಾಕಿದ್ದ ಏನು ಇದು ಅಂದೆ ಗಂಗಮ್ಮ ಕಿರಣ ಅಂದ..! ಆ ಮಾತು ಕೇಳಿ ಗಂಟಲು ಬಿಗಿಯಾಯ್ತು.. ಕಣ್ಣುಗಳು ನೀರು ತುಂಬುತ್ತಿದೇ ಭಾವನೆಗಳ ತೊಳಲಾಟವಾಗುತ್ತಿದೆ.. ಅಣ್ಣಾ ಇಲ್ಲೇ ನಿಲ್ಲಸಿ ಕಾರು ಒಳಗೆ ಬರೋಕೆ ಆಗಲ್ಲ ಬಂದ್ರೆ ವಾಪಸ್ ತಿರುಗಿಸೋದು ಕಷ್ಟ ಅಂತ ಹೇಳಿ ಎದುರಿಗೆ ಖಾಲಿ ಜಾಗದಲ್ಲಿ ಹಾಕುವುದಕ್ಕೆ ಹೇಳಿ ಹೊರಟುಹೋದ.. ನಾನು ಗಾಡಿಯನ್ನ ಪಾರ್ಕ್ ಮಾಡಿ ಬೇಕಂತಲೇ ಸ್ವಲ್ಪ ಸಮಯ ಬಿಟ್ಟು ಹೋದೆ.. ಇನ್ನು ಶವ ಸಿಕ್ಕಿರಲಿಲ್ಲ ಅರುಣ ಮೂಲೆಯಲ್ಲಿ ಕುಳಿತಿದ್ದ ಅತ್ತೆ ಅತ್ತು ಅತ್ತು ಸುಸ್ತಾಗಿ ಕುಸಿದು ಕುಳಿತ್ತಿದ್ದಳು ಹಾಸನದ ಚಿಕ್ಕಪ್ಪ ಆಗಲೇ ಬಂದಿದ್ದರು ಸ್ವಲ್ಪ ಹೊತ್ತು ಹಾಗೆ ಮೌನ ಅತ್ತೆ ಕತ್ತೆತ್ತಿ ನೋಡಿದಳು ಸಣ್ಣ ಬೆಳಕಲ್ಲೇ ಮುಖ ಗುರುತು ಹಿಡಿದವಳೇ ಅಳಲು ಶುರುವಾದಳು ಸ್ವಲ್ಪ ಹೊತ್ತು ಸಮಾಧಾನದ ಮಾತುಗಳನ್ನಾಡಿ ಹೊರ ಬಂದೆ ಚಿಕ್ಕಪನು ಹೊರ ಬಂದರು.. ‘ಬಾಡಿ ಸಿಕ್ಕಿಲ್ಲ ಕಾಣೋ.. ಬೆಳಗ್ಗೆ ಬಂದು ಹುಡುಕ್ಕುತ್ತಾರಂತೆ.! ಬೆಳಗ್ಗೆ ಊರಿನಿಂದ ಸಂಬಂಧಿಕರು ಬರ್ತಾರೆ ನೋಡೋಣ ಏನು ಮಾಡಬೇಕು ಅಂತ ಮುಂದಿನದ್ದು ಯೋಚನೆ ಬೆಳಗ್ಗೆ ಮಾಡೋಣ’.. ಅಂದ್ರು ‘ಯಾಕೆ ಸತ್ತ ಅಂತ ಗೊತ್ತಿಲ್ವ.?’ ‘ಇಲ್ಲಾ ಪಾಪ’ ಮುಂದೆ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಅನಿಸಿ ಮತ್ತೆ ಏನನ್ನು ಮಾತನಾಡದೆ ಸುಮ್ಮನೆ ಹೊರಗೆ ಕುಳಿತೆ.. ಒಳಗೆ ಬಾ ಅಂದ್ರು ಇಲ್ಲಾ ಕಾರಲ್ಲಿ ಇರ್ತೀನಿ ಅಂತ ಹೋಗಿ ಸ್ವಲ್ಪ ಹೊತ್ತು ಮಲಗಿದೆ. ಬೆಳಕ್ಕಾಗಿ ಉರಿನವರೆಲ್ಲ ಕೆರೆಯ ಬಳಿ ಹೋಗುತ್ತಿದ್ದರು ಹಾಗೆ ನಾನು ಹೊರಟೆ ಹಿಂದೆಯೇ ಪೊಲೀಸ್ ಗಾಡಿ ಬಂತು ನೇರ ಕೆರೆಯ ಬಳಿ ಹೋದೆ ವಿಶಾಲವಾದ ದೊಡ್ಡ ಕೆರೆ ಈ ವರ್ಷದ ಮಳೆಗೆ ತುಂಬಿದೇ ಒಂದು ಮಗ್ಗುಲಿಗೆ ಸಣ್ಣ ಸಣ್ಣ ಗುಡ್ಡಗಕಿದ್ದವು.. ಇಷ್ಟು ದೊಡ್ಡ ಕೆರೆಯಲ್ಲಿ ಹುಡುಕುವುದು ಕಷ್ಟ ಇದೆ ಕಣ್ರಿ ಅಂತ ಪೊಲೀಸ್ ನವರು ಮಾತನಾಡಿಕೊಳ್ಳುತ್ತಿದ್ದರು.! ತೆಪ್ಪದಲ್ಲಿ ಸ್ಥಳೀಯ ಈಜುಗಾರರು ಹುಡುಕಲು ಇಳಿದರು.. ಮಧ್ಯಾಹ್ನ ಮೂರರವೊತ್ತಿಗೆ ಶವ ಸಿಕ್ಕಿತು ಜುಟ್ಟು ಹಿಡಿದುಕೊಂಡು ಒಬ್ಬ ಎಳೆದುಕೊಂಡು ಬಂದ..! ದಡಕ್ಕೆ ತಂದು ಮಲಗಿಸುವ ಹೊತ್ತಿಗೆ ಅಲ್ಲೇ ಕುಳಿತ್ತಿದ್ದ ಅತ್ತೆ ಅವರ ಜೊತೆಯಲ್ಲಿದ್ದ ಅರುಣ ಕಿರುಚ್ಚುತ್ತ ಅಳುತ್ತಿದ್ದಾರೆ.. ಸಂಬಂಧಿಕರು ಕೂಡ ಅವನ ಗೆಳೆಯರು ಎಲ್ಲರೂ ಸುತ್ತ ನಿಂತು ಬಿಟ್ಟರೂ.. ಸ್ವಲ್ಪ ಹೊತ್ತಿನ ನಂತರ ಪೊಲೀಸ್ನೊಬ್ಬ ಎಲ್ಲರನ್ನು ದೂರ ಹೋಗುವಂತೆ ಹೇಳಿ ಪೋಸ್ಟ್ ಬರ್ಟಮ್ ಗೆ ಮಾಗಡಿದೆ ತೆಗೆದುಕೊಂಡು ಹೋಗಬೇಕೆಂದು ಹೇಳಿದ ಚಿಕ್ಕಪ್ಪ ಮತ್ತು ಅತ್ತೆಯ ಬಳಿ ಸಹಿ ತೆಗೆದುಕೊಳ್ಳುತ್ತಿದ್ದ. ಇದನ್ನೆಲ್ಲ ದೂರದಿಂದಲೇ ನೋಡುತ್ತಾ ನಿಂತಿದ್ದೆ ಚಿಕ್ಕಪ್ಪ ಸುತ್ತ ತಿರುಗಿ ನೋಡಿ ನನ್ನನ್ನು ಕರೆದರು ನಾನು ಹೊರಟೆ ಗಾಡಿತೆಗಿ ಮಾಗಡಿಗೆ ಹೋಗಿ ಬರೋಣ ಅಂತ ಹೇಳಿ ಗಾಡಿ ಬಳಿ ಹೊರಟರು.! ಆಂಬ್ಯುಲೆನ್ಸ್ ಶವವವನ್ನು ಹೊತ್ತು ವೇಗವಾಗಿ ಹೊರಟು ಹೋಯ್ತು ಹಿಂದೆ ನಮ್ಮ ಕಾರು ಜೊತೆಗೆ ಅಲ್ಲಿನ ಮುಖಂಡರು ಮಾಗಡಿ ಸರಕಾರಿ ಆಸ್ಪತ್ರೆಯ ಬಂದು ನಿಂತೆವು ಒಳ ಹೋದವರೆ ಡಾಕ್ಟರ್ ಗೆ ಸ್ವಲ್ಪ ದುಡ್ಡುಕೊಟ್ಟು ಬೇಗ ಪೋಸ್ಟ್ ಬರ್ಟಮ್ ಮಾಡಿಸವ ಆತುರದಲ್ಲಿದ್ದರು. ನಾನು ಶವದ ಬಳಿ ನಿಂತೆ ಕೈ ಕಾಲುಗಳು ಸೆಳೆತುಕೊಂಡಿದ್ದವೇನೋ ಮುರಿದು ನೇರ ಮಾಡಿದ್ದರು.. ಆ ಕೈಗಳನ್ನೊಮ್ಮೆ ನೋಡಿದೆ..! ರಾತ್ರಿ ಅರುಣನ ಕೈಯಲ್ಲಿದ್ದ #GK ಟ್ಯಾಟು ನನಗೆ ಕಾನ್ಫ್ಯೂಸ್ ಆಗೋಕೆ ಶುರುವಾಯ್ತು..! ಶವ ಸಿಕ್ಕ ಮೇಲೆ ಅತ್ತೆ ಕೂಡ #ಅರುಣ ಅಂತ ಕಿರುಚುತ್ತಿದ್ದಳು.. ಈಗ ಸತ್ತವನು ಅರುಣ ಎಂದ ಮೇಲೆ ರಾತ್ರಿ ಸಿಕ್ಕವನು ಅರುಣ..! ಮನಸ್ಸು ಗೊಂದಲದಲ್ಲಿ ಸಿಕ್ಕಿಬಿತ್ತು.! ಡಾಕ್ಟರ್ ಬಂದು ಶವಗಾರದೊಳಗೆ ಹೋದರು ಜೊತೆಗೆ ಇಬ್ಬರೂ ಹೆಣ ಕುಯ್ಯುವವರು ಖಾಕಿ ಬಟ್ಟೆ ಹಾಕಿದ್ದವರ ಬಾಯಲ್ಲಿ ಆಗಲೇ ಎಣ್ಣೆಯ ಕಮಟು ರಾಚುತ್ತಿತ್ತು.. ಸ್ವಲ್ಪ ಸಮಯದ ನಂತರ ಮುಖ ಕಾಣುವಂತೆ ಮಾತ್ರ ಬಿಟ್ಟು ಪೂರ್ತಿ ಪ್ಯಾಕ್ ಮಾಡಿದ ದೇಹ ಹೊರಗೆ ಬಂತು.. ಅವರಿಬ್ಬರು ಸಹಾಯಕರಿಗೂ ಚಿಕ್ಕಪ್ಪ ಕೊಟ್ಟಿದ್ದ ಎರಡು ಸಾವಿರದ ಒಂದು ನೋಟುಕೊಟ್ಟೆ..! “ಪ್ರೀತಿ ಪ್ರೇಮ ಯಾಕೆ ಬೇಕು ಈ ಹುಡುಗರಿಗೆ ಅವ್ವ ಅಪ್ಪನ್ನ ಚನ್ನಾಗಿ ನೋಡ್ಕೊಂಡು ಅವರ ಯಣಕ್ಕೆ ಬೆಂಕಿ ಇಕ್ರೋ ಅಂದ್ರೆ ಇವೇ ಸಾಯ್ಬರದ ವಯಸ್ಸಲ್ಲಿ ಸಾಯ್ತಾವೇ.. ಅಂತ ಕಣ್ಣೀರು ತುಂಬುಕೊಂಡು ಹೋರಾಟ ಹೋದ” ಮಾಜರ್ ಮಾಡ್ತಿದ್ದ ಪೊಲೀಸ್ ನವರು ಸಾಕ್ಷಿಗೆ ಸಹಿ ಹಾಕಲು ಕರೆದರು ಸತ್ತವನು ಅರುಣ ಅಂತ ಸ್ಪಷ್ಟವಾಗಿ ಬರೆದಿತ್ತು ಸಹಿ ಹಾಕಿದೆ ಸತ್ತವನ ಯಾರು ಎಂಬ ಗೊಂದಲ ಸ್ಪಷ್ಟವಾಗಿತ್ತು.. ಪ್ಯಾಕ್ ಆದ ಶವ ಮತ್ತೆ ತುಬಿನಕೆರೆಯತ್ತ ಆಂಬ್ಯುಲೆಸ್ನಲ್ಲಿ ಹೊರಟಿತು.. ನಾವು ಹೊರಟೆವು ಊರು ಮುಟ್ಟುವ ಹೊತ್ತಿಗೆ ಚಿತೆಯೊಂದು ಅಣಿಯಾಗಿತ್ತು.! ಅತ್ತು ಸುಸ್ತಾಗಿದ್ದವರೆಲ್ಲ ಹೂವು ಹಾಕಿ ಹೋಗುತ್ತಿದ್ದರು.. ಕೆಲವರು ಊರಿಗೆ ಹೋಗುವ ಗಡಿಬಿಡಿಯಲ್ಲಿದ್ದರು ಅನಿಸುತ್ತದೆ.. ಬೇಗನೆ ಚಿತೆಯ ಮೇಲೆ ಮಲಗಿಸಿ ಕಿರಣನ ಕೈಯಲ್ಲಿ ಕೊಳ್ಳಿಕೊಟ್ಟುರು ಅವನು ಕಿರುಚುತ್ತಲೇ ಇದ್ದ ಅವನು ಕೈಯಲ್ಲಿ ಕೊಳ್ಳಿ ಹಿಡಿದಾಗ ಅವನ ಕೈಯನ್ನೊಮ್ಮೆ ಗಮನಿಸಿದೆ ಬೋಡು ಕೈಗಳು ಯಾವುದೇ ಟ್ಯಾಟು ಇರಲಿಲ್ಲ..! ಎಲ್ಲರನ್ನು ಮಾಗಡಿಗೆ ಬಿಟ್ಟು ಬಂದೇ ಅತ್ತೆ ಸುದಾರಿಸಿಕೊಂಡಿದ್ದಳು ಬಲವಂತ ಮಾಡಿ ಊಟ ಮಾಡಿಸುತ್ತಿದ್ದರು.. ಕಿರಣ ಕೂಡ ಊಟ ಮಾಡುತ್ತಿದ್ದ. ನೆನ್ನೆ ನಿನ್ನ ಮೊಬೈಲ್ ಏನಾಗಿತ್ತು ಎಂದೇ..? ಬಸ್ನಲ್ಲಿ ಯಾರೋ ಕದ್ದು ಬಿಟ್ಟರು.. ಎಷ್ಟು ಗಂಟೆಗೆ ಬಂದೆ ..? ಏಳು ಗಂಟೆಯಾಗಿತ್ತು ಮಾಗಡಿಗೆ ಬಂದೆ ಫ್ರೆಂಡ್ ಸಿಕ್ಕಿ ಹೇಳಿ ಕರೆದುಕೊಂಡು ಬಂದ..! ಮತ್ತೆ ಮಾತನಾಡಲು ಏನು ಇರಲಿಲ್ಲ.. ನೀನಾದ್ರು ಅತ್ತೆನ ಚನ್ನಾಗಿ ನೋಡ್ಕೋ.. ಎಂದು ಹೇಳಿ ಹೊರ ಬಂದೆ ಚಿಕ್ಕಪ್ಪ ಮಾತಿಗೆ ಕುಳಿತರೂ ಹುಡ್ಗಿಗೋಸ್ಕರ ಸತ್ತವನೆ ದರಿದ್ರ ನನ್ನ ಮಗ ಕರೆದುಕೊಂಡು ಬಂದಿದ್ರೆ ಮದ್ವೆ ಮಾಡೋಲ್ಲ ಅಂದಿರೋಳ ಅವರಮ್ಮ.. ಪ್ರಾಣ ಕಳೆದುಕೊಳ್ಳೋದು ಏನಿತ್ತು.. ಇವಕ್ಕೆಲ್ಲ ಅವರಮ್ಮ ಕಷ್ಟಬಿದ್ದು ಸಾಕಿದ್ದು ನೆನಪಿಗೆ ಬರೋಲ್ವ… ನಾನು ಸುಮ್ಮನೆ ಕುಳಿತ್ತಿದ್ದೆ..! ರಾತ್ರಿ ಹತ್ತುಗಂಟೆಯ ಹೊತ್ತಿಗೆ ಹೊರಟೆ ಅದೇ ಗುಂಡಿಗಳಿರುವ ದಾರಿ ಬೆಂಗಳೂರು ನಲವತ್ತು ಕಿಲೋಮೀಟರ್.. ಮಾಗಡಿ ಐದು ಕಿಲೋಮೀಟರ್ ಅದೇ ಎರಡನೇ ಗೇರ್ನಲ್ಲಿ ಗಾಡಿ ನಿಧಾನವಾಗಿ ಚಲಿಸುತ್ತಿದೆ

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಗುಚ್ಛ

ನನ್ನ ಅಪ್ಪ ಹೇಡಿಯಾಗಿಬಿಟ್ಟಿದ್ದ..! ವೇಣುಗೋಪಾಲ್ ನನ್ನ ಅಪ್ಪ ಹೇಡಿಯಾಗಿಬಿಟ್ಟಿದ್ದ..! ಬಡತನವನ್ನೇ ಬುನಾದಿಯಾಗಿ ಮೆಟ್ಟಿ ಸಿರಿತನದ  ಒಂದೊಂದು ಇಟ್ಟಿಗೆಯನ್ನು ಹೆಕ್ಕಿತಂದು ಬೆವರರಿಸಿ ನೆಮ್ಮದಿಯ ಬದುಕನ್ನು ಕಟ್ಟಿಕೊಡುತ್ತಿದ್ದ ಅಪ್ಪ ಹೇಡಿಯಾಗಿಬಿಟ್ಟಿದ್ದ..! ನಾ ಕಂಡ ಅಪ್ಪ ಹೀಗಿರಲಿಲ್ಲ.! ಉರಿಯುವ ಸೂರ್ಯನಂತೆ ಎಂತಹ ಕಷ್ಟಗಳ ಮೋಡಗಳನ್ನ ಕರಗಿಸಿ ಬಿಡುತ್ತಿದ್ದ.. ಅವನ ಪ್ರೀತಿಯು ಅಷ್ಟೇ ಆಗತಾನೆ ಕರೆದ ಹಾಲಿನಂತಹ ಸಿಹಿ ನಿಷ್ಕಲ್ಮಶವಾದ ತ್ಯಾಗವೆತ್ತ ಸಾಕಾರಮೂರ್ತಿ.. ಅಮ್ಮನ ಪ್ರಿತೆಯೇ ಕಾಣದ ನನಗೆ ಅವನ ಬೆಚ್ಚನೆಯ ತೋಳುಗಳೇ ಎಲ್ಲವೂ ಆಗಿತ್ತು ಮರಿಗುಬ್ಬಿಗೆ ಗೂಡಿನಂತೆ..! ಅವನಿಗೂ ಅಷ್ಟೇ ನಾನೆಂದರೆ ಪ್ರೀತಿ ನಾನೆಂದರೆ ಅಮ್ಮನ ಪ್ರತಿರೂಪು.! ನಾನೆಂದರೆ ಅಮ್ಮನ ನೆನಪು.! ನಾನೆಂದರೆ ಅವನ ಮೊಗದ ನಗು.! ನಾನೆಂದರೆ ಅವನ ತೋಳುಗಳಲ್ಲಿನ ಬಲ.!  ನಾನೆಂದರೆ ಅವನ ಬಲಿಷ್ಠ ತೋಳುಗಳನ್ನೇ ಸುತ್ತಿಕೊಂಡು ಬೆಳೆಯುತ್ತಿರುವ ಬಳ್ಳಿ..! ನಾನೆಂದರೆ ಅವನಿಗೆ ಜೀವ…! ಅಮ್ಮನಿಲ್ಲದ ನನಗೆ ಅಮ್ಮನಾಗಿದವನು.! ಸಂಬಂಧಿಗಳೆಲ್ಲ ಇನ್ನೊಂದು ಮದುವೆಗೆ ಒತ್ತಾಯಿಸಿದರು ಒಪ್ಪದೆ  ತನ್ನ ಯೌವನದ ದಿನಗಳನ್ನ ನನ್ನ ನಗುವಿಗಾಗಿ ತೆಯುತ್ತಿದ್ದ.. ಹೀಗೆ ದಿನಗಳು ಕಳೆಯುತ್ತಿತ್ತು ನನ್ನ ಮನಸ್ಸಿನಲ್ಲಿ ಅಪ್ಪನ ಅಭಿಮಾನದ ಪುತ್ತಳಿಯೊಂದು ಮುಗಿಲೆತ್ತರಕ್ಕೆ ಬೆಳೆದು ನಿಂತಿತ್ತು..! ನಾನು ಕೂಡ ಅವನ ಹೆಗಲಮೀರಿ ಬೆಳೆದು ನಿಂತಿದ್ದೆ..! ನನ್ನೂರಿಗೆ ಬರ ಬಡಿದು ಹಲವು ವರ್ಷಗಳು ಕಳೆದಿದ್ದೋ… ಹನಿ ಕಾಣದ ಹಳ್ಳಿಗೆ ಕಳೆದ ಎರಡು ದಿನಗಳಿಂದ ಮಳೆಯು ಬಿಡುವಿಲ್ಲದಂತೆ  ಸುರಿದು ರಾತ್ರಿಕೂಡ ತೊಯ್ದು ನಿಂತಿತ್ತು  ಭಾನುವಾರ ಬೆಳ್ಳಂಬೆಳಗ್ಗೆ ಸೂರ್ಯಕಿರಣಗಳು ಸೋನೆ ಮಳೆಯೊಡನೆ ಸರಸಕ್ಕಿಳಿದಿದ್ದೋ.. ನೀಲಿ ಆಕಾಶದಲ್ಲಿ ರಾತ್ರಿಯೆಲ್ಲಾ ಮಳೆಯಾಗಿ ಕರಗಿದ ಕಂದುಮೋಡಗಳೆಲ್ಲ ಅಲ್ಲಲ್ಲಿ ಸಣ್ಣಗೆ ಚದುರಿ ಹರಡಿದ್ದೋ.. ನೆಂದು ತೇವವಾಗಿದ್ದ ರಸ್ತೆಗಳು ಹೊಲದ ಕಿದ್ದಾರೆಯಲ್ಲಿ ತುಂಬಿ ನಿಂತಿದ್ದ ನೀರು..  ಬತ್ತಿದ್ದ ಹಳ್ಳಗಳೆಲ್ಲ ತುಂಬಿನಿಂತಿವೆ ಹಳ್ಳದ ಬದಿಗಿದ್ದ ಬಿದಿರುಮಳೆಗಳು ಹೊಂಗೆಮರಗಳೆಲ್ಲ ಹೊಸ ಹುರುಪಿನಿಂದ ಕಂಗಳಿಸುತ್ತಿವೆ. ಕಂಗಳಿಗೆ ರಸದೌತಣ  ನೀಡುವ ಪ್ರಕೃತಿಯೊಂದಿಗೆ ವಾರದ ರೂಢಿಯಂತೆ ಅಪ್ಪನೋಡನೆ ಬಿಳೆಕಲ್ಲು ಬೆಟ್ಟವತ್ತಿ ಊರ ಸುತ್ತಲಿನ ಹೊಲ ತೋಟ ಕೆರೆಗಳನ್ನೆಲ್ಲ ನೋಡುತ್ತಾ ಸಣ್ಣಗೆ ಹರಿಯುವ ಜರಿಗಳಲ್ಲಿ ಕಾಲಿಟ್ಟು ನೆಗೆದು ಸಣ್ಣ ಮಗುವಿನಂತೆ ಆಟವಾಡುತ್ತಾ  ನೆಡೆಯುತ್ತಿದ್ದೆ  ನನ್ನ ಜೊತೆಗಿದ್ದ ಅಪ್ಪ ಮಾತ್ರ ಪ್ರಕೃತಿ ಸೊಬಗು  ಸವಿಯದೆ..! ತನಗೆ ಸಂಬಂಧವಿಲ್ಲದಂತೆ ಮೌನಿಯಾಗಿದ್ದ ಕಡಿದಾದ ಆ ಬಂಡೆಯನ್ನು ನಿಧಾನವಾಗಿ ಏರುತ್ತ ಬರುತ್ತಿದ್ದವನು.. ಹರಿ ಜಾಗ್ರತೆ ಬಿದ್ದಿಯಾ..!  ಎಂದು ಹೇಳುತ್ತಿದ್ದಂತೆಯೇ ಬಾರೆಯ ಇಳಿಜಾರಿನಲ್ಲಿ ಜಾರಿ ಎರಡೂರುಳು ಬಿದ್ದೆ  ಕೈ ಹಿಡಿದು ಎತ್ತಿ. ಹರಿ ಈ ಹಳ್ಳಿ ಜೀವನವೇ ಹೀಗೆ.!  ಹೊಲ ಗದ್ದೆ ತೋಟ ಈ ಹಳ್ಳಿ ಇಲ್ಲಿನ ಜೀವನದ ಆಸೆಗಳನ್ನೆಲ್ಲ ಬಿಟ್ಟುಬಿಡು.. ಈ ಜೀವನ ನೋಡುವುದಕ್ಕೆ ಈ ಪ್ರಕೃತಿಯಷ್ಟೇ ಸುಂದರ ಅನಿಸುತ್ತದೆ  ಆದರೆ ಕಾಲುಜಾರಿಬಿದ್ದರಂತೂ ಮೇಲೆ ಹೇಳಲಾರದಷ್ಟು ಪ್ರಪಾತಕ್ಕೆ ತಳ್ಳಿ ಬಿಡುತ್ತದೆ..! ಯಾರು ಕೈಹಿಡಿದು ಎತ್ತಲಾರದಷ್ಟು ಕೆಳಕ್ಕೆ.! ಕಗ್ಗತ್ತಲಿಗೆ..! ನಿನಗೆ ಅತ್ತಿಬರಬೇಕೆಂಬ ಹಂಬಲವಿದ್ದರು ಕತ್ತಲು ನಿನ್ನ ಇರುವಿಕೆಯನ್ನೇ ನುಂಗುವಷ್ಟು ಆಳಕ್ಕೆ ನೂಕಿಬಿಡುತ್ತದೆ..! ಈ ವ್ಯವಸಾಯವೇ ಹೀಗೆ ಮಳೆಯೊಂದಿಗೆ ಬಿಸಿಲಿನೋದಿಂಗೆ ಬರದೊಂದಿಗೆ ಮನುಷ್ಯನ ದೂರಸೆಗಳೊಂದಿಗೆ ಸರಕಾರದ ನಿರಾಸಕ್ತಿಯೊಂದಿಗೆ ಇಡೀ ಪ್ರಕೃತಿಯೊಂದಿಗೆ ಆಡುವ ಜೂಜು ..! ಇದನ್ನೆಲ್ಲ ಎದುರಿಸಿ ಜಯಿಸಿದರಷ್ಟೇ ನಿನಗೆ ಉಳಿಗಾಲ.. ಸೋತರಂತೂ ಇದೆ ಪ್ರಕೃತಿಯ ಒಡಲಾಳಕ್ಕೆ ಕಸವಾಗಿ ಕೊಳೆತು ಹೋಗುತ್ತಿಯ ಹರಿ..! ಈ ವರ್ಷ ನಿನ್ನ ಇಂಜಿನಿಯರಿಂಗ್ ಮುಗಿದ ನಂತರ ಇಲ್ಲಿ ಬಂದು ನೆಲೆಸುವುದ ಬಿಟ್ಟು  ಬೆಂಗಳೂರಿನಲ್ಲಿ  ಕೆಲಸವಿಡಿದು ಬದುಕ ಕಟ್ಟಿಕೊಂಡುಬಿಡು ಹರಿ. ಅಪ್ಪನ ಈ ಮಾತುಗಳು ನನ್ನ ಕನಸ್ಸಿಗೆ ತಣ್ಣೀರೆರೆಚ್ಚಿದ್ದವು.. ಅಪ್ಪ ಇಲ್ಲಿ ಈ ಜಮೀನನ್ನೆಲ್ಲ ಬಿಟ್ಟು  ನಾನು ಅಲ್ಲಿದ್ದು ಗಳಿಸುವುದಾದರು ಏನು.? ಹತ್ತಿರದ ಹಾಸನದಲ್ಲಿ ಸಣ್ಣ ನೌಕರಿಹಿಡಿಯುತ್ತೇನೆ ನಿನ್ನೊಂದಿಗೆ ನಾನು ಇಲ್ಲೇ ಇದ್ದು ಎಲ್ಲವನ್ನು ನೋಡಿಕೊಂಡು ಆರಾಮಾಗಿ ಇದ್ದುಬಿಡೋಣ..! ಇಲ್ಲಾ  ಹರಿ ನೀನು ಬೆಂಗಳೂರಿನಲ್ಲೇ ಇರಬೇಕು ಒಂದು ಒಳ್ಳೆಯ ಕೆಲಸವಿಡಿದು ಕೂಡಿಟ್ಟ ಹಣದಲ್ಲಿ ಇಲ್ಲಿ  ಉಳಿದದ್ದನ್ನೆಲ್ಲ ಮಾರಿ ಬಂದ ಹಣದಲ್ಲಿ ಸ್ವಂತಕ್ಕೊಂದು ಮನೆಮಾಡಿಕೊಂಡು ನೆಮ್ಮದಿಯಿಂದ ಇದ್ದುಬಿಡು..! ಅಪ್ಪ ಮತ್ತೆ ನೀನು ಬರುವುದಿಲ್ಲವೇ.!? ಬರುತ್ತೇನೆ ಹರಿ ನಿಜಕ್ಕೂ ಬರುತ್ತೇನೆ ನನ್ನ ಸೋಲುಗಳನ್ನೆಲ್ಲ ಮರೆತು ನಿನ್ನ ಗೆಲುವಿನ ಹೆಗಲ ಮೇಲೆ ಮಗುವಾಗಿ ನಿನ್ನ ಜೋತೆಗಿರಲು ಬಂದೆ ಬರುತ್ತೇನೆ ಹರಿ.. ಹೀಗೆ ಹೇಳಿ ಮನೆಗೆ ಬಂದು ಒಂದು ಖಾಲಿ ವಿಷದ ಬಾಟಲಿಯನ್ನು ಮಗ್ಗುಲಲ್ಲಿಟ್ಟು ನಿದ್ರೆಗೆ ಜಾರಿದ್ದ ಎಂದಿನಂತೆ ಸಂಜೆಗೆ ಎಚ್ಚರವಾಗುವ ನಿದ್ರೆಗಲ್ಲ..!  ಹಸಿವು ಬಾಯರಿಕೆಗಳೆನ್ನದ ರಾತ್ರಿ ಹಗಲೆನ್ನದ ಬಾಯಿತುಂಬ ಮತ್ತೆ “ಹರಿ” ಎಂದು ಕೂಗದ ಚಿರನಿದ್ರೆಗೆ ಜಾರಿಬಿಟ್ಟಿದ್ದ..! ಹೌದು ಅವನು ಬೆಳಗ್ಗೆ ನನ್ನೊಂದಿಗೆ ಆಡಿದ ಪ್ರತಿಮಾತು ಒಡೆದ ಅರ್ಥಗಳೆಲ್ಲ ನನ್ನೆದೆಗೆ ಇರಿಯುತ್ತಿದ್ದೋ..! ನಿಜಕ್ಕೂ ಅಪ್ಪ ಸಾವಿನ ನಿರ್ಧಾರವನ್ನು ಮೊದಲೇ ಮಾಡಿಬಿಟ್ಟಿದ್ದನೆ.!?  ಈ ಕೃಷಿ ಈ ನಾಲ್ಕೈದು ವರ್ಷದ ಬರ ನನ್ನ ಓದಿನ ಖರ್ಚು ಇವೆಲ್ಲವೂ ಅವನನ್ನ ಸಾಲಗಾರನಾಗಿಸಿತ್ತ.? ಅವನ ಮುಗಿಲೆತ್ತರದ ಪ್ರತಿಮೆಯೊಂದು ಅವನ ದೇಹವ ದಹಿಸುತ್ತಿರುವ ಚಿತೆಯ ತಾಪಕ್ಕೆ ನನ್ನ ಕಣ್ಗಳ ಹನಿಗಳ ಕೋಪಕ್ಕೆ ಕರಗುತ್ತಿತ್ತು…! ನನ್ನಪ್ಪ ಹೆಗಲೆತ್ತರದ ಮಗನಿದ್ದರೂ ಸಾಲಕ್ಕೆದರಿಯೋ..? ನನ್ನ ಸಂತೋಷಕ್ಕೆದರಿಯೋ..? ಅಪ್ಪ ಹೇಡಿಯಾಗಿಬಿಟ್ಟಿದ್ದ..! *********

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಗುಚ್ಛ

ಒಂದೇ ಮನಸ್ಸಿನಿಂದ ಹರೀಶ್ ಬೇದ್ರೆ ಕೈಮುಗಿದು ಕೇಳ್ತಿನಿ, ದಯವಿಟ್ಟು ಇದೊಂದು ವಿಚಾರದಲ್ಲಿ ನನ್ನ ಇಷ್ಟದಂತೆ ನಡೆಯಲು ಬಿಡು. ಚಿಕ್ಕ ಹುಡುಗಿ ಇರುವಾಗಿನಿಂದ ಈಗಿನವರೆಗೂ ನೀನು ಹೇಳಿದ್ದನ್ನೇ ಕೇಳಿರುವೆ. ಇದು ನನ್ನ ಭವಿಷ್ಯದ ಪ್ರಶ್ನೆ.  ನೀನು ಏನೇನೋ ಹೇಳಿ ನನ್ನ ಇಷ್ಟದ ವಿರುದ್ಧ ನಡೆದುಕೊಳ್ಳುವಂತೆ ಮಾಡಬೇಡ… ಆಯ್ತು, ನಾನು ಇಲ್ಲಿಯವರೆಗೆ ಏನೇ ಹೇಳಿದ್ದರೂ ಅದು ನಿನ್ನ ಒಳ್ಳೆಯದಕ್ಕಾಗಿ ತಾನೇ…?ಹೌದು, ಅದಕ್ಕೆ ನಾನು ನಿನ್ನ ಮಾತು ಕೇಳಿದೆ. ಆದರೆ ಇದೊಂದು ವಿಚಾರಕ್ಕೆ ನನ್ನ ಇಷ್ಟದಂತೆ ಬಿಡು. ಅದು ಹೇಗೆ ಸಾಧ್ಯ , ಹೊರಗೆ ನಿನ್ನನ್ನು ನೋಡಲು ಬಂದಿದ್ದಾರೆ.ಅವರಿಗೆ ನಾನೇನೂ ಬರಲು ಹೇಳಿಲ್ಲ.ನಿನ್ನ ಈ ಮಾತು ಕೇಳಿದರೆ ಬಂದವರಿಗೆ ಬೇಜಾರಾಗುತ್ತೆ.ಹಾಗಂತ ಮನಸ್ಸಿನ ವಿರುದ್ಧ ಹೋಗಬೇಕಾ…?ಯಾರು ಹೇಳಿದ್ದು ಹಾಗೆ ಮಾಡು ಅಂತ..ಈಗ ನೀನೇ ಹೇಳುತ್ತಿರುವೆಯಲ್ಲ… ನಾನು ಹೇಳೋದನ್ನ ಸರಿಯಾಗಿ ಅರ್ಥ ಮಾಡಿಕೊ, ನಿನಗೆ ತಿಳಿಯುತ್ತೆ.ಏನೂ, ಮನಸ್ಸಲ್ಲಿ ನೀನೇ ಇದ್ದರೂ ಅದನ್ನು ಹಾಗೇ ಮುಚ್ಚಿಟ್ಟುಕೊಂಡು,  ಈಗ ನೋಡಲು ಬಂದವನನ್ನು ಒಪ್ಪಿಕೊಳ್ಳಬೇಕಾ? ಖಂಡಿತಾ ಒಪ್ಪಿಕೊ, ಏಕೆಂದರೆ ಜನ್ಮ ಕೊಟ್ಟು ಸಾಕಿ ಬೆಳೆಸಿದ ತಂದೆ ತಾಯಿ ಯಾವತ್ತೂ ಮಕ್ಕಳ ಹಿತವನ್ನೇ ಬಯಸುತ್ತಾರೆ. ಅವರಿಗಲ್ಲದೇ ಮತ್ಯಾರಿಗೆ  ನಿನ್ನ ಒಳಿತು ಕೆಡುಕು ತಿಳಿಯುತ್ತೆ ಹೇಳು.  ಅವರಿಗೆ ನೋವು ಕೊಟ್ಟರೆ ನಿನಗೆ ಒಳ್ಳೆಯದಾಗುತ್ತಾ…ನಾನೇನಾದರೂ ಅವರಿಗೆ ಗಂಡು ನೋಡಲು ಹೇಳಿದ್ದೇನೆ, ನನಗೆ ಕೇಳದೆ ಅವರು ಹುಡುಗನನ್ನು ಮನೆಗೆ ಕರೆದರೆ ನಾನೇನು ಮಾಡಲಿ? ಹೆಣ್ಣು ವಯಸ್ಸಿಗೆ ಬಂದ ಮೇಲೆ ಎಲ್ಲಾ ತಂದೆತಾಯಿ ಏನು ಮಾಡುತ್ತಾರೋ ಇವರು ಅದನ್ನೇ ಮಾಡಿದ್ದಾರೆ,  ಅಷ್ಟೇ..ಇವತ್ತು ನೀನು ಏನೇ ಹೇಳಿದರೂ ನಿನ್ನ ಮಾತನ್ನು ಕೇಳುವುದಿಲ್ಲ. ಮನಸ್ಸು ಒಬ್ಬರಿಗೆ, ಮದುವೆ ಮತ್ತೊಬ್ಬರೊಂದಿಗೆ ಸಾಧ್ಯವೇ ಇಲ್ಲ.  ಹುಚ್ಚಿ ಹಾಗೆ ಮಾತನಾಡಬೇಡ, ಸುಮ್ಮನೆ ಹೋಗಿ ಬಂದವರಿಗೆ ಕಾಫಿ ತಿಂಡಿ ಕೊಟ್ಟು ಹುಡುಗನನ್ನು ನೋಡು.ಈ ಮಾತು ಹೇಳಲು ನನ್ನನ್ನು ಅಂದು ಕಾಪಾಡಿದ್ದ?ಯಾವಾಗ? ನಾನು  ಆಯಾ ತಪ್ಪಿ ನೀರಲ್ಲಿ ಬಿದ್ದಾಗ.ನಿನ್ನ ಜಾಗದಲ್ಲಿ ಯಾರೇ ಇದ್ದಿದ್ದರೂ ನಾನು ಅದನ್ನೇ ಮಾಡುತ್ತಿದ್ದೆ.  ಅದಕ್ಕೂ ಇದಕ್ಕೂ ಸಂಬಂಧವಿಲ್ಲ.ಹೌದಾ, ಹಾಗಾದರೆ ನಾನು ಪಿ.ಯು. ಓದುವಾಗ  ನನ್ನನ್ನು ಇಷ್ಟಪಟ್ಟು ಹೂ ಕೊಟ್ಟ ಹುಡುಗನನ್ನು ಬೇಡ ಎಂದು ಒಪ್ಪಿಸಿದೆ ಏಕೆ? ಅವನು ಸರಿ ಇರಲಿಲ್ಲ ಅದಕ್ಕೆ.ಅವನು ಸರಿಯಿರಲಿಲ್ಲ ಅಂದರೆ ನಿನಗೇನು ತೊಂದರೆ ಆಗುತ್ತಿತ್ತು? ನನಗೇನೂ ಆಗುತ್ತಿರಲಿಲ್ಲ ಆದರೆ ನಿನಗೆ ತೊಂದರೆ ಆಗುತ್ತಿತ್ತು, ಅದಕ್ಕೆ ಒಪ್ಪಬೇಡ ಅಂದೆ. ಅದು ನನಗೆ ತಾನೇ, ನೀನು ಸುಮ್ಮನೆ ಇರಬೇಕಿತ್ತು.ಗೊತ್ತಿದ್ದೂ ಹೇಗೆ ಸುಮ್ಮನಿರಲಿ…ಹಾಗಿದ್ದರೆ ಈಗ ಬಂದ ಹುಡುಗ ಸರಿ ಇದ್ದಾನಾ?ಹೌದು, ಅದಕ್ಕೆ ಒಪ್ಪಿಕೊ ಅಂದಿದ್ದು.ನಿನಗೆ ಹೇಗೆ ಗೊತ್ತು?ನನಗೆ ಗೊತ್ತು, ಅದಕ್ಕೆ ಹೇಳುತ್ತಿರುವೆ ಸುಮ್ಮನೆ ನನ್ನ ಮಾತನ್ನು ಕೇಳು.ಹೌದೌದು, ನಿನಗೆ ಏನು ಗೊತ್ತಿಲ್ಲ ಹೇಳು?  ಎಷ್ಟೆಂದರೂ ನೀನು ಜಗವ ಕಾಯುವ ಪರಮಾತ್ಮ ಅಲ್ಲವೇ.  ದೇವರು ಮನುಷ್ಯಳೊಂದಿಗೆ ಮದುವೆ ಆಗುವುದು ಹೇಗೆ ಸಾಧ್ಯ. ಹಾಗೇನಾದರೂ ಆಗಿಬಿಟ್ಟರೆ ದೇವಕುಲದ ಮರ್ಯಾದೆಗೆ ಕುಂದುಂಟಾಗುತ್ತದೆ ಅಲ್ಲವೇ….? ನೋಡು…ಏನೂ ನೋಡುವುದು..?   ಸುಖ ದುಃಖ, ಬೇಸರ ಇನ್ನೊಂದು ಮತ್ತೊಂದು ಏನೇ ಇರಲಿ, ಅಪ್ಪ ಅಮ್ಮ, ಗೆಳೆಯರು, ಯಾರೆಂದರೇ ಯಾರ ಬಳಿಯೂ ಹೇಳಿಕೊಳ್ಳದೆ ಕೇವಲ ನಿನ್ನನೇ ನಂಬಿ, ನಿನ್ನ ಬಳಿ ಮಾತ್ರ ಕೇಳುತ್ತಿದ್ದೆ. ಆಗ ನಿನಗೆ, ನಾನು ಕೇವಲ ಮನುಷ್ಯಳಾಗಿ ಕಾಣಲಿಲ್ಲ. ಪ್ರತಿಯೊಂದನ್ನೂ ನಗುನಗುತ್ತಾ ಕೇಳಿದೆ, ಸಮಾಧಾನ ಮಾಡಿದೆ, ಪ್ರೀತಿಯಿಂದ ಸ್ಪಂದಿಸಿದೆ.  ಈಗ..………ನನ್ನ ಅಣುಅಣುವಿನಲ್ಲೂ ನೀನೇ ತುಂಬಿರುವೆ, ಪ್ರತಿದಿನ ಪ್ರತಿಕ್ಷಣ ನಿನ್ನನೇ ನಂಬಿರುವೆ. ಇದ್ದರೂ ನಿನಗಾಗಿ, ಹೋದರೂ ನಿನಗಾಗಿ ಎಂದು ನಿನ್ನನ್ನೇ ಆರಾಧಿಸಿ, ಪೂಜಿಸಿ ಬದುಕುತ್ತಿರುವ ನನಗೆ ಅನ್ಯರೊಂದಿಗೆ ಮದುವೆ ಆಗಲು ಹೇಳುವೆಯ?ಎಲ್ಲಾ ಗೊತ್ತು ಎನ್ನುವ ನಿನಗೆ, ನನ್ನೊಳಗಿನ ಪ್ರೀತಿ ಕಾಣಲಿಲ್ಲವೇ? ಅದು ಚಿಗುರೊಡೆದು ಹೆಮ್ಮರವಾಗಲು ಏಕೆ ಬಿಟ್ಟೆ?  ಇಲ್ಲಿಯವರೆಗೆ ಏಕೆ ಬಿಟ್ಟೆ ಹೇಳು?  ನಾನೆಲ್ಲಿ ನಿನಗೆ, ನಿನ್ನ ಪ್ರೀತಿ ಕಾಣಲಿಲ್ಲ ಎಂದು ಹೇಳಿದೆ.  ಇನ್ನೂ ಮುಂದೆಯೂ, ಮದುವೆಯ ನಂತರವೂ ಹೀಗೇ ಇರಬಹುದಲ್ಲ.ಅದು ಹೇಗೆ ಸಾಧ್ಯ? ಅಸಾಧ್ಯದ ಮಾತು. ಏಕೆ ಸಾಧ್ಯವಿಲ್ಲ ಹೇಳು.ನೀನು ಬಿಡಪ್ಪ ದೇವರು, ನಿನಗೆ ಎಲ್ಲಾ ಸಾಧ್ಯ. ಆದರೆ ನನ್ನಿಂದ ಖಂಡಿತಾ ಸಾಧ್ಯವಿಲ್ಲ.ಹೋಗಿ ಹುಡುಗನ ನೋಡು.ನಿನ್ನ ಹೊರತು ಬೇರೆ ಯಾರೂ ಬೇಡ ಎನ್ನುವಾಗ ಅವನನ್ನು ಏಕೆ ನೋಡಲಿ? ಒಮ್ಮೆ ನೋಡುಇಲ್ಲ ನೋಡುವುದಿಲ್ಲ.ನನಗೊಸ್ಕರಖಂಡಿತಾ ಇಲ್ಲ, ಬೇಕೆಂದರೆ ಸಾಯಲು ಹೇಳು ಸಂತೋಷವಾಗಿ ಹಾಗೇ ಮಾಡುವೆ.ನಿನ್ನ ಪ್ರಾಣ ತೆಗೆದುಕೊಂಡು ನಾನೇನು ಮಾಡಲಿ, ನಿಜವಾಗಿಯೂ ನಿನಗೆ, ನನ್ನ ಮೇಲೆ ಪ್ರೀತಿ ಇದ್ದರೆ ಹೋಗಿ ಹುಡುಗನನ್ನು ನೋಡು. ನೋಡಿದ ಮೇಲೂ ನಿನಗೆ ಅವನು ಬೇಡವೆನಿಸಿದರೆ ನಾನು ಮತ್ತೆಂದಿಗೂ ಮದುವೆಯ ಬಗ್ಗೆ ಮಾತನಾಡಲಾರೆ.ಇದೆಂತಹ ಮಾತು, ಏಕೆ ನನ್ನನ್ನು ಪರೀಕ್ಷೆ ಮಾಡುವೆ.ನನಗಾಗಿ ಒಮ್ಮೆ ನೋಡು.ಸರಿ ಕೇವಲ ಬಂದ ಹುಡುಗನನ್ನು ನೋಡಿ ಬರಬೇಕು ಅಷ್ಟೇ ತಾನೇ, ಹೋಗಿಬರುವೆ. ನೀನು ನಿನ್ನ ಮಾತನ್ನು ಉಳಿಸಿಕೊಳ್ಳಬೇಕು.ಆಗಲಿ, ಈಗ ಅಪ್ಪ ಅಮ್ಮ ನಿನಗಾಗಿ ಕಾಯುತ್ತಿದ್ದಾರೆ ಹೋಗಿ ಬಾ…                           ——*—–ಹುಡುಗನನ್ನು ನೋಡಿದೆಯಾ?………ನಿನಗೆ ಕೇಳಿದ್ದು, ಹುಡುಗನನ್ನು ನೋಡಿದೆಯಾ?ಹೂಂ…..ಮತ್ತೆ?ಏನು ಹೇಳಲಿ, ತಿಳಿಯುತ್ತಿಲ್ಲ…ಏಕೆ?ನನ್ನನ್ನು ನೋಡಲು ಬಂದಿರುವುದು ನೀನೇನೋ ಅಥವಾ ನಿನ್ನ ಪ್ರತಿರೂಪವೋ….ಮುಂದೆ..,.?ತಿಳಿಯುತ್ತಿಲ್ಲ…,ಹೋಗಿ ಅಪ್ಪ ಅಮ್ಮನಿಗೆ ಒಂದೇ ಮನಸ್ಸಿನಿಂದ ಹೇಳು…,..,.

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಯಾನ

ತ್ರಿಶಂಕು ಟಿ.ಎಸ್.ಶ್ರವಣಕುಮಾರಿ ತ್ರಿಶಂಕು ಹಪ್ಪಳ ಒತ್ತುತ್ತಿದ್ದ ಸೀತಮ್ಮ, ಬಟ್ಟಲಿಗೆ ಮುಚ್ಚಿದ್ದ ಒದ್ದೆ ಬಟ್ಟೆಯನ್ನು ಸರಿಸಿ ಉಳಿದ ಉರುಳಿಗಳ ಲೆಕ್ಕ ಹಾಕಿದರು. ಇನ್ನು ಹದಿನೈದು ಉಂಡೆಗಳಿವೆ. ಬೆಳಗ್ಗೆಯೇ ಮಹಡಿಯ ಮೇಲೆ ಹಪ್ಪಳ ಒಣಗಿ ಹಾಕಲು ಸವರಿಸುತ್ತಿದ್ದುದನ್ನು ನೋಡಿದ್ದ ಧೀರಜನ ಫ್ರೆಂಡ್ಸ್ “ಅಜ್ಜಿ ನಾವೆಲ್ಲಾ ಶಾಲೆಯಿಂದ ಬಂದಮೇಲೆ ತಿನ್ನಕ್ಕೆ ಹಪ್ಪಳದ ಹಿಟ್ಟು ಕೊಡಬೇಕು” ಅಂತ ತಾಕೀತು ಮಾಡಿ ಹೋಗಿದ್ದರು. ಧೀರಜ್ ಅಮೆರಿಕಕ್ಕೆ ಹೋದಮೇಲೆ ಈ ಮಕ್ಕಳು ಮನೆಗೆ ಬರುವುದೂ ಅಪರೂಪವೇ. ಯಾವಾಗಾದರೂ ಒಮ್ಮೊಮ್ಮೆ ಇಂಥದೇನಾದರು ಇದ್ದಾಗಷ್ಟೆ ಬರುತ್ತಾರೆ. ಪಾಪ ಅವರಾದರೂ ಯಾಕೆ ಬರುತ್ತಾರೆ? ಮುದುಕರೊಂದಿಗೆ ಆಡಲು ಸಾಧ್ಯವೇ? ಅವನಿದ್ದಾಗಾದರೆ ಮಲಗುವ ಹೊತ್ತು, ಶಾಲೆಗೆ ಹೋಗುವ ಸಮಯ ಬಿಟ್ಟರೆ ಮಿಕ್ಕಷ್ಟು ಹೊತ್ತೂ ನಮ್ಮ ಮನೆಯಲ್ಲೇ ಠಿಕಾಣಿ. ಧೀರಜನೇ ಇವರಿಗೆಲ್ಲಾ ಇಂತಹ ರುಚಿಯನ್ನು ಕಲಿಸಿರೋದು. ಮೊಮ್ಮಗನ ನೆನಪು ಬಂದ ತಕ್ಷಣ ಮುಖದ ಮೇಲೆ ತಂತಾನೇ ಒಂದು ಮುಗುಳ್ನಗು ಮೂಡಿತು. ʻಸರಿ, ಆ ಮಕ್ಕಳು ಶಾಲೆಯಿಂದ ಬಂದ ಮೇಲೆ ಒಬ್ಬೊಬ್ಬರೂ ಎರಡೂ, ಮೂರೋ ಉರುಳಿಯನ್ನು ತಿನ್ನುವುದಾದರೆ ಇಷ್ಟು ಸರಿಹೋಗುತ್ತದೆ. ಇನ್ನು ನಿಲ್ಲಿಸೋಣʼ ಎಂದುಕೊಳ್ಳುತ್ತಾ ಗಂಡನನ್ನು ಕರೆದರು. “ಇದಿಷ್ಟು ಹಪ್ಪಳ ಒಣಗಿ ಹಾಕಿ ಬಂದುಬಿಡಿ. ಅಲ್ಲಿಗೆ ಆಯ್ತು”. ಪೇಪರ್ ಓದುತ್ತಿದ್ದ ರಾಮಣ್ಣನವರು ಪಕ್ಕಕ್ಕಿಟ್ಟು ಎದ್ದರು. ಎರಡು ಮೂರು ಗಂಟೆಗಳ ಕಾಲ ಒಟ್ಟಿಗೆ ಕೂತಿದ್ದು, ಸೀತಮ್ಮನವರಿಗೆ ತಕ್ಷಣ ಎದ್ದು ನಿಲ್ಲಲಿಕ್ಕೆ ಆಗಲಿಲ್ಲ. ಸಾವರಿಸಿಕೊಳ್ಳುತ್ತಿರುವಾಗ ತಡೆಯಲಾಗದೇ ರಾಮಣ್ಣನವರು ಅಂದರು. “ಅದಕ್ಕೇ ಹೇಳಿದ್ದು. ಅಡಿಗರ ಅಂಗಡಿಯಿಂದ ತಂದಿಡ್ತೀನಿ. ತೊಂದರೆ ತೊಗೋಬೇಡ ಅಂತ. ನನ್ನ ಮಾತೆಲ್ಲಿ ಕೇಳ್ತಿ ನೀನು” ಲಟ್ಟಿಸಿದ ಹಪ್ಪಳದ ತಟ್ಟೆಯನ್ನು ಹಿಡಿದುಕೊಂಡು ಮೆಟ್ಟಿಲ ಕಡೆ ನಡೆಯುತ್ತಾ. “ಅಂಗಡಿಯಿಂದ ತಂದರೆ ಮನೇಲಿ ಮಾಡಿದ ಹಾಗೆ ಆಗುತ್ತೇನೂ. ಆ ಮಗೂ ಫೋನ್ ಮಾಡಿದಾಗೆಲ್ಲಾ ಕೇಳತ್ತೆ. ಅಜ್ಜಿ ಹಪ್ಪಳ ಮಾಡಿದೀ ತಾನೆ, ಉಪ್ಪಿನಕಾಯಿ ಹಾಕಿದೀ ತಾನೆ, ನಾ ಬರ್ತಾ ಇದೀನಿ. ನಂಗೆಲ್ಲಾ ಬೇಕು ಅಂತ. ಏನೋ ಈ ವರ್ಷಕ್ಕೆ ಇಷ್ಟಾಯ್ತು” ಎನ್ನುತ್ತಾ ಸೀತಮ್ಮ ಸೀರೆ ಕೊಡವಿಕೊಂಡು, ಲಟ್ಟಣಿಗೆ, ಮಣೆ, ಎಲ್ಲವನ್ನೂ ಒಂದೊಂದಾಗಿ ಅಡುಗೆ ಮನೆಗೆ ತೆಗೆದುಕೊಂಡು ಹೋಗಿ ಇಟ್ಟರು. ಆಗಲೇ ಹನ್ನೆರಡು ಘಂಟೆಯಾಗಿರಬೇಕು. ತಣ್ಣಗೆ ಏನಾದರೂ ಕುಡಿಯೋಣವೆನ್ನಿಸಿ, ಕಡೆದು ಇರಿಸಿದ್ದ ಮಜ್ಜಿಗೆಯನ್ನು ಎರಡು ಲೋಟಕ್ಕೆ ಬಗ್ಗಿಸಿಕೊಂಡು ಪಡಸಾಲೆಗೆ ಬಂದರು. “ಎಷ್ಟಾಯ್ತು ಅಂತ ಎಣಿಸಿದ್ರಾ” ಕೆಳಗೆ ಬಂದ ಗಂಡನ ಕೈಯಲ್ಲಿ ಮಜ್ಜಿಗೆಯ ಲೋಟವನ್ನಿಡುತ್ತಾ ಕೇಳಿದ್ರು. “ಆಗ್ಲೇ ಎಣಿಸಿದಾಗ ಎಂಭತ್ತೈದು ಆಗಿತ್ತು. ಈಗ ಎಷ್ಟಿತ್ತು” ಅಂದರು. “ಸರಿ ಹತ್ತಿರ ಹತ್ತಿರ ನೂರು ಆಗಿರತ್ತೆ ಬಿಡಿ” ಅನ್ನುತ್ತಾ ಮಜ್ಜಿಗೆಯ ಲೋಟವನ್ನು ಹಿಡಿದುಕೊಂಡು ಅಲ್ಲೇ ಸೋಫಾದ ಮೇಲೆ ಕುಳಿತವರು, “ದಿನಕ್ಕೆ ಇನ್ನೂರು, ಮುನ್ನೂರು ಹಪ್ಪಳ ಸಲೀಸಾಗಿ ಮಾಡ್ತಾ ಇದ್ದೆ. ಈಗ ನೂರು ಮಾಡೋಷ್ಟರಲ್ಲೇ ಸೋತು ಹೋಗೋ ಹಾಗಿದೆ” ನಿಟ್ಟುಸಿರು ಬಿಟ್ಟರು. “ಇನ್ನೇನು ಒಂದು ವಾರದಿಂದ ಒಂದೇ ಸಮ ಸಂಡಿಗೆ, ಉಪ್ಪಿನಕಾಯಿ, ಬಾಳಕ ಅಂತ ಏನೇನೋ ಮಾಡ್ಕೊಂಡು ಕುಣೀತಿದೀಯ. ವಯಸ್ಸು ಹಿಂದ್ಹೋಗತ್ತಾ? ಇನ್ನೇನೂ ಹಚ್ಚಿಕೊಳ್ಳಕ್ಕೆ ಹೋಗ್ಬೇಡ. ಇವತ್ತಾಗಲೇ ಗುರುವಾರ. ಭಾನುವಾರ ಅವರೆಲ್ಲಾ ಬಂದೇ ಬಿಡ್ತಾರೆ. ಇನ್ನೆರಡು ದಿನ ಸ್ವಲ್ಪ ಸುಧಾರಿಸ್ಕೋ. ಈಗ ಬೇಕಾದ್ರೆ ನಾನೇ ಅಡುಗೆ ಮಾಡ್ತೀನಿ” ಅಕ್ಕರೆಯಿಂದ ನುಡಿದರು. “ಬೆಳಗ್ಗೇನೇ ಕುಕ್ಕರ್ ಇಟ್ಟಾಗಿದೆ. ಸಾರಿಗೊಂದು ಕೂಡಿಟ್ರೆ ಆಯ್ತು. ಊಟಕ್ಕೆ ಕೂತುಕೊಳ್ಳೋಕೆ ಮುಂಚೆ ಮಾಡಿದ್ತಾಯ್ತು ಬಿಡಿ” ಎನ್ನುತ್ತಾ ಮಜ್ಜಿಗೆಯ ಲೋಟ ಕೆಳಗಿಟ್ಟು ಅಲ್ಲೇ ಸೋಫಾದಲ್ಲಿ ಹಿಂದಕ್ಕೆ ಒರಗಿದರು. “ಸರಿ. ನೀನು ಸ್ವಲ್ಪ ಸುಧಾರಿಸ್ಕೋ. ನಾನು ಹೋಗಿ ಎಲೆಕ್ಟ್ರಿಸಿಟಿ ಬಿಲ್ಲು ಕಟ್ಟಿ ಬರ್ತೀ ನಿ” ಎನ್ನುತ್ತಾ ಮೇಲಕ್ಕೆದ್ದರು. “ಹೊರಗಡೆ ಏನು ಬೆಳದಿಂಗಳೇ? ಈ ಸುಡುಸುಡು ಬಿಸಿಲಲ್ಲಿ ಹೊರಗೆ ಹೊರಟಿದೀರಲ್ಲ, ನಾಳೆ ಹೋದ್ರಾಯ್ತು ಬಿಡಿ” ಎಂದರೂ “ಇಲ್ಲ ನಾಳೆ ಗುಡ್ ಫ್ರೈಡೆ ರಜ. ಇನ್ನು ಶನಿವಾರವೊಂದೇ ಉಳಿಯೋದು. ಆಗ್ಲಿಲ್ಲ ಅಂದ್ರೆ ಕಷ್ಟ. ಭಾನುವಾರ ಅವರೆಲ್ಲಾ ಬಂದು ಬಿಟ್ರೆ, ಆಮೇಲೆ ಹೋಗೋಕಾಗೋದೇ ಇಲ್ಲ” ಎನ್ನುತ್ತಾ ಕೊಡೆ ಹಿಡಿದುಕೊಂಡು ಹೊರಟೇ ಬಿಟ್ಟರು ರಾಮಣ್ಣನವರು. ʻಸುಮ್ನೆ ನನ್ನ ಕಕ್ಕುಲಾತೀಗೆ ಹೇಳಬೇಕಷ್ಟೇ. ಅವರಿಗನ್ನಿಸಿದ್ದನ್ನೇ ಮಾಡೋದುʼ ಎಂದುಕೊಳ್ಳುತ್ತಾ “ಸರಿ ಬಾಗಿಲೆಳೆದುಕೊಂಡು ಹೋಗಿ; ಕೀ ನಿಮ್ಮ ಹತ್ರ ಇದೆ ತಾನೇ” ಎನ್ನುತ್ತಾ ಹಾಗೆಯೇ ಕಣ್ಣು ಮುಚ್ಚಿಕೊಂಡು ಒರಗಿಕೊಂಡರು ಸುಧಾರಿಸಿಕೊಳ್ಳಲೆಂಬಂತೆ….. ಅತ್ತೆಯಿದ್ದಾಗ ಇಬ್ಬರೂ ಸೇರಿ ಅದೆಷ್ಟು ಹಪ್ಪಳ ಸಂಡಿಗೆ ಮಾಡುತ್ತಿದ್ದದ್ದು… ಶಿವರಾತ್ರಿ ಕಳೆಯಿತೆಂದರೆ ಸಾಕು ಇದೇ ಕೆಲಸ. ಇದ್ದದ್ದು ಶಿವಮೊಗ್ಗದ ಹತ್ತಿರದ ಊರಗಡೂರಿನಲ್ಲಿ. ದೊಡ್ಡ ಮನೆ, ಅಡಿಕೆ ತೋಟ, ಮನೆಯ ತುಂಬಾ ಹತ್ತಾರು ಆಳು ಕಾಳು, ಕೊಟ್ಟಿಗೆಯ ತುಂಬಾ ದನ ಕರುಗಳು. ಕೆಲಸ ಒಂದೇ ಎರಡೇ. ಮದುವೆಯಾದ ಹೊಸತರಲ್ಲಿ ಅಷ್ಟು ದೊಡ್ಡ ಮನೆಯ ನೆಲವನ್ನೆಲ್ಲಾ ಸಗಣಿ ಹಾಕಿ ಸಾರಿಸಬೇಕಿತ್ತು. ಆಮೇಲಾಮೇಲೆ ಗಾರೆ ಮಾಡಿಸಿದ ಮೇಲೆ ಆ ದೊಡ್ಡ ಕೆಲಸ ತಪ್ಪಿತ್ತು. ರಾಶಿ ರಾಶಿ ಕೆಲಸ – ಆದರೆ ಅದೆಷ್ಟು ಹುರುಪು, ಉತ್ಸಾಹ! ಮಾವನವರಿಗೆ ಮೂವರು ಗಂಡು ಮಕ್ಕಳು, ಹೆಣ್ಣು ಮಕ್ಕಳಿರಲಿಲ್ಲ. ಇವರೇ ಕಡೆಯವರು. ತಾನು ಮದುವೆಯಾಗಿ ಮನೆಗೆ ಬರುವಾಗ ಎಲ್ಲರ ಜವಾಬ್ದಾರಿಯೂ ಕಳೆದಿತ್ತು. ದೊಡ್ಡ ಮಗ ಇಂಜಿನಿಯರಾಗಿ ಪಿ.ಡಬ್ಲು.ಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಊರೂರು ಅಲೆಯುತ್ತಿದ್ದು, ಮಕ್ಕಳಿಗೆ ಓದಲಿಕ್ಕೆ ಅನುಕೂಲವೆಂದು ಬೆಂಗಳೂರಿನಲ್ಲಿ ಮನೆಮಾಡಿ ತಮ್ಮ ಸಂಸಾರವನ್ನು ಅಲ್ಲೇ ಸ್ಥಾಪಿಸಿದ್ದರು. ಎರಡನೆಯವರು ಅಡ್ವೋಕೇಟು. ಅವರ ಮಾವನವರು ಚಿತ್ರದುರ್ಗದಲ್ಲಿ ಅದೇ ಕೆಲಸ ಮಾಡುತ್ತಿದ್ದವರು. ನಮ್ಮ ಮಾವನವರಿಗೂ ಮೊದಲಿಂದಲೇ ಗೆಳೆಯರಂತೆ. ಅವರ ಬಳಿಯೇ ಜೂನಿಯರ್ ಆಗಿ ಕೆಲಸ ಮಾಡಲು ಮಗನನ್ನು ಕಳಿಸಿಕೊಟ್ಟಿದ್ದರು. ಕಡೆಗೆ ಅವರ ಒಬ್ಬಳೇ ಮಗಳನ್ನೇ ಮದುವೆಯಾಗಿ ಅದಾಗಲೇ ಚೆನ್ನಾಗಿ ಕುದುರಿಕೊಂಡಿದ್ದ ಕೆಲಸವನ್ನು ಮುಂದುವರೆಸಿಕೊಂಡು ಅಲ್ಲೇ ಮನೆ ಹೂಡಿಕೊಂಡರು. ಇವರು ಓದಿದ್ದು ಶಿವಮೊಗ್ಗೆಯ ಕಾಮರ್ಸ್ ಕಾಲೇಜಿನಲ್ಲಿ ಬಿ. ಕಾಂ. ಮದುವೆಯಾಗುವಾಗ ಅಂತಹ ಕೆಲಸವೇನೂ ಇರಲಿಲ್ಲ. ಸುಮ್ಮನೆ ಹೊತ್ತು ಕಳೆಯುವುದಕ್ಕೆ ಎಲ್. ಐ. ಸಿ. ಏಜೆಂಟರಾಗಿದ್ದರು. ಅನುಕೂಲವಾದ ಮನೆಯಾದ್ದರಿಂದ ತನ್ನ ತವರು ಮನೆಯವರೂ ಇವರ ಕೆಲಸದ ಬಗ್ಗೆ ಅಷ್ಟೇನೂ ಚಿಂತಿಸಿರಲಿಲ್ಲ. ಆದರೆ ಇವರ ಮನಸ್ಸಿನಲ್ಲಿ ತಾನೂ ಅಣ್ಣಂದಿರ ಹಾಗೆ ದುಡಿಯಬೇಕು ಎಂದು ಆಶೆಯಿತ್ತೋ ಏನೋ – ಯಾವ ಯಾವುದೋ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದರು. ನಾನು ಮದುವೆಯಾಗಿ ಬಂದು ಒಂದಾರು ತಿಂಗಳಾಗಿತ್ತೇನೋ. ಬ್ಯಾಂಕಲ್ಲಿ ಕೆಲಸ ಸಿಕ್ಕೇ ಬಿಟ್ಟಿತು. ಮೊದಲ ಕೆಲಸ ಹುಬ್ಬಳ್ಳಿಯಲ್ಲಿ. ಇವರಿಗದೆಷ್ಟು ಸಂತೋಷವೋ… “ನಿನ್ನ ಕಾಲ್ಗುಣದಿಂದ ನನಗೆ ಈ ಕೆಲಸ ಸಿಕ್ಕಿದ್ದು. ನಾನು ಹೋಗಿ ಕೆಲಸಕ್ಕೆ ಸೇರಿಕೊಂಡು ಆದಷ್ಟು ಬೇಗಲೇ ಮನೆ ಮಾಡಿ ನಿನ್ನನ್ನೂ ಕರೆಸಿಕೊಳ್ಳುತ್ತೇನೆ. ಅಲ್ಲಿಯವರೆಗೆ ಇಲ್ಲೇ ಅಪ್ಪ ಅಮ್ಮನ ಜೊತೆಯಲ್ಲೇ ಇರು” ಎನ್ನುತ್ತಾ ಹೊರಟೇ ಬಿಟ್ಟರಲ್ಲ. ಅತ್ತೆ ಮಾವಂದಿರೂ ಸಂತೋಷವಾಗೇ ಕಳಿಸಿಕೊಟ್ಟರು. ತನಗೋ ಒಬ್ಬಳೇ ಇರುವುದಕ್ಕೆ ಬೇಸರ, ಆದರೆ ವಿಧಿಯಿಲ್ಲ. ಇನ್ನು ಸ್ವಲ್ಪವೇ ದಿನವಲ್ಲವಾ ಎನ್ನುವ ಸಮಾಧಾನ. ರಾಶಿ ರಾಶಿ ಕೆಲಸದಲ್ಲಿ ಹೊತ್ತು ಹೇಗೋ ಹೋಗುತ್ತಿತ್ತು. ಅತ್ತೆಗೂ ನನ್ನ ಬೇಸರ ಅರ್ಥವಾಗುತ್ತಿತ್ತೇನೋ. ಆದಷ್ಟೂ ನನ್ನ ಜೊತೆಯೇ ಕಾಲ ಕಳೆಯುತ್ತಿದ್ದರು. ಕೆಲಸಕ್ಕೆ ಸೇರಿದ ಹೊಸದಾದ್ದರಿಂದ ಇವರಿಗೆ ಅಷ್ಟು ರಜೆಯೂ ಸಿಕ್ಕುತ್ತಿರಲಿಲ್ಲ. ಅಪರೂಪಕ್ಕೊಂದೊಂದು ಭೇಟಿ. ಒಂದಾರು ತಿಂಗಳು ಕಳೆದಿತ್ತೇನೋ. ಅಂತೂ ಒಂದು ಮನೆ ಮಾಡಿಕೊಂಡು ನನ್ನನ್ನು ಕರೆದುಕೊಂಡು ಹೋಗಲು ಬಂದರು. ಹೊಸ ಸಂಸಾರ ಹೂಡಿಕೊಡಲು ಅತ್ತೆಯೂ ಜೊತೆಗೆ ಬಂದರು. ಯಾಕೋ ಬಂದ ಎರಡು ದಿನಕ್ಕೇ ಅವರಿಗೆ ಹುಶಾರು ತಪ್ಪಿತು. ಹೊಸ ಜಾಗ. ಅವರಿಗೆ ಸರಿ ಹೊಂದಲೇ ಇಲ್ಲ. ವಾಪಸ್ಸು ಊರಿಗೆ ಹೊರಟೇ ಬಿಟ್ಟರು. ವಾರದ ಕೊನೆಯಲ್ಲಿ ಇಬ್ಬರೂ ಅವರನ್ನು ಊರಿಗೆ ಬಿಡಲಿಕ್ಕೆ ಬಂದದ್ದಾಯಿತು. ಜ್ವರ ಹೆಚ್ಚಾಗುತ್ತಾ ಹೋಯಿತು. ಡಾಕ್ಟರು ಮಲೇರಿಯಾ ಅಂದರು. ಸರಿ, ಇವರೊಬ್ಬರೇ ಹುಬ್ಬಳ್ಳಿಗೆ ವಾಪಸ್ಸು ಹೋದರು. ತಾನು ಅತ್ತೆಯ ಶುಶ್ರೂಷೆಗೆ ನಿಂತೆ. ಬರೀ ಒಂದು ವಾರವಷ್ಟೇ. ಇವರು ಮತ್ತೆ ಊರಿಗೆ ಬರುವಂತಾಯಿತು ಸತ್ತ ಅಮ್ಮನನ್ನು ನೋಡಲು…. ಎಲ್ಲ ಕರ್ಮಾಂತರಗಳೂ ಮುಗಿದವು. ಎಲ್ಲರೂ ಹೊರಟು ನಿಂತರು. `ಅಪ್ಪನಿಗೇನು ಮಾಡುವುದು?’ ಎಲ್ಲರ ಮುಂದಿದ್ದ ಪ್ರಶ್ನೆ. ಯಾರು ಬೇಕಾದರೂ ಅವರನ್ನು ಕರೆದುಕೊಂಡು ಹೋಗಲು ತಯ್ಯಾರಿದ್ದರು. ಆದರೆ ಅವರು ಬರುವರೆ? ಬೆಕ್ಕಿಗೆ ಗಂಟೆ ಕಟ್ಟುವ ಪ್ರಶ್ನೆ. ಮಾವನವರಿಗೂ ಇದು ಅರ್ಥವಾಯಿತೇನೋ. ಮಧ್ಯಾನ್ಹ ಊಟ ಮುಗಿದ ನಂತರ ಅವರೇ ಮಕ್ಕಳೆಲ್ಲರಿಗೂ ಹೇಳಿದರು. “ಇನ್ನೆಷ್ಟು ದಿನ ನೀವಿಲ್ಲಿ ಇರಕ್ಕಾಗತ್ತೆ ಕೆಲಸ ಬಿಟ್ಟು. ನಿಮ್ಮ ಪಾಡಿಗೆ ಹೊರಡಿ”. “ಹಾಗಲ್ಲ, ಹೀಗೆ ನಿಮ್ಮೊಬ್ಬರನ್ನೇ ಬಿಟ್ಟು..” ದೊಡ್ಡವರು ಕೇಳಿದರು. “ನೀವೂ ನಮ್ಮ ಜೊತೆಗೇ ಬಂದರೆ ನಮಗೂ ಸಮಾಧಾನವಾಗತ್ತೆ” ಎಲ್ಲ ಮಕ್ಕಳೂ ಹೇಳಿದರು. “ಅದು ಸಾಧ್ಯವಾಗದ ಮಾತು. ಇದು ನಾನು ಹುಟ್ಟಿದಾಗಿಂದ ಇರುವ ಮನೆ. ನಾನು ಸಾಯುವವರೆಗೂ ಇದೇ ನನ್ನ ಮನೆ. ನಿಮ್ಮ ನಿಮ್ಮ ಜೀವನ ನಿಮ್ಮದು. ನೀವು ಹೊರಡಿ” ಎಂದರು ಮುಂದಿನ ಮಾತಿಗೆ ಅವಕಾಶವಿಲ್ಲವೆಂಬಂತೆ. ಯಾರಿಗೂ ಸಮಾಧಾನವಿಲ್ಲ. ಈ ವಯಸ್ಸಲ್ಲಿ ಅಪ್ಪ ಒಬ್ಬರನ್ನೇ ಬಿಟ್ಟು. ಹಾಗಂತ ತಾವು ಇಲ್ಲಿ ಬಂದಿರುವುದೂ ಸಾಧ್ಯವಿಲ್ಲ. ಏನು ಮಾಡುವುದು. ಆಗ ಇವರೆಂದರು – “ಈ ಕೆಲಸ ನನಗೆ ಸಿಕ್ಕುತ್ತೆ ಅಂತ ಅಂದುಕೊಂಡಿರಲಿಲ್ಲ. ಈಗಲೂ ಏನೂ ಪರವಾಗಿಲ್ಲ. ನಾನು ಇಲ್ಲೇ ಅಪ್ಪನ ಜೊತೆಗೇ ಇರ್ತೀನಿ. ಇಲ್ಲಿ ಎಲ್.ಐ.ಸಿ. ಏಜೆನ್ಸೀನೋ, ಇನ್ನೊಂದು ಏನು ಸಾಧ್ಯವೋ ಅದನ್ನೇ ಮಾಡ್ತೀನಿ. ನೀವು ಹೊರಡಿ. ನಿಮ್ಮದಾಗಲೇ ಬೇರು ಬಿಟ್ಟ ಸಂಸಾರ. ನಾನು ಈಗ ತಾನೇ ಕಣ್ಣು ಬಿಡ್ತಿದೀನಿ”. ಬೇರೆ ಇನ್ನೇನಾದರೂ ಹೇಳಲೂ ಯಾರಿಗೂ ಯಾವ ಉಪಾಯವೂ ಇಲ್ಲ. ನಮ್ಮ ಹುಬ್ಬಳ್ಳಿಯ ಸಂಸಾರ ಬರೀ ಒಂದು ವಾರದ್ದಾಯಿತು. ಎಲ್ಲರನ್ನೂ ಕಳಿಸಿಕೊಟ್ಟು ಜಗಲಿಯಲ್ಲಿ ನೋಡುತ್ತಾ ನಿಂತಿದ್ದ ಇವರ ಹೆಗಲ ಮೇಲೆ ಮಾವನವರು ಬಂದು ಕೈಯಿಟ್ಟರು. ಇವರು ತಿರುಗಿ ನೋಡುವಾಗ ಅವರಿಂದ ಏನನ್ನೂ ಹೇಳಲಾಗಲಿಲ್ಲ… ಸುಮ್ಮನೆ ತಮ್ಮ ಶಲ್ಯದ ತುದಿಯಿಂದ ಕಣ್ಣೊರಸಿಕೊಂಡರು….. ಅಪ್ಪನನ್ನು ಬಳಸಿ ಹಿಡಿದುಕೊಂಡು ಮನೆಯೊಳಗೆ ಬಂದರು… ಏಕೋ ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಥಟ್ಟನೆ ಕಣ್ಣು ಬಿಟ್ಟು ನೋಡಿದರೆ ಆಗಲೇ ಘಂಟೆ ಒಂದೂವರೆ. ಇವರೇನು ಇಷ್ಟು ಹೊತ್ತಾದರೂ ಬರಲಿಲ್ಲ. ಬಾಗಿಲು ತೆರೆದು ಮೆಟ್ಟಿಲ ಕಡೆ ನೋಡಿದರು ಸೀತಮ್ಮ. ಎಲ್ಲೋ ಕೆಳಗಡೆ ಶ್ರೀನಿವಾಸರ ಹತ್ತಿರ ಮಾತಾಡುವ ಶಬ್ದ ಕೇಳಿಸುತ್ತಿದೆ. ಇನ್ನೇನು ಮೇಲೆ ಬಂದಾರು. ಅಷ್ಟರಲ್ಲಿ ಸಾರು ಕೂಡಿಡೋಣ ಎಂದು ಅಡುಗೆ ಮನೆಗೆ ಹೊರಟರು. ಬರೀ ಸಾರಾಯಿತಲ್ಲ ಎಂದುಕೊಂಡು ಸ್ವಲ್ಪ ಸಂಡಿಗೆಯಾದರೂ ಕರೆಯಲೇ ಅಂದುಕೊಂಡವರು, ಇಲ್ಲ ಅದನ್ನು ಧೀರಜನೇ ಮೊದಲು ರುಚಿ ನೋಡಬೇಕು ಎಂದುಕೊಂಡು ಜಾಡಿಯಲ್ಲಿದ್ದ ಉಪ್ಪಿನಕಾಯನ್ನು ಸ್ವಲ್ಪ ತೆಗೆದು ಒಗ್ಗರಣೆ ಹಾಕಿದರು. ತಟ್ಟೆ ಹಾಕುವಷ್ಟರಲ್ಲಿ ರಾಮಣ್ಣನವರೂ ಒಳಗೆ ಬಂದಿದ್ದರು. ಊಟಕ್ಕೆ ಕುಳಿತಾಗ ಕೇಳಿದರು “ಯಾಕಿಷ್ಟು ಹೊತ್ತಾಯಿತು” “ಹಾಗೇ ಬ್ಯಾಂಕಿಗೂ ಹೋಗಿ ಬಂದೆ. ಪಾಸ್ ಬುಕ್ಕನ್ನು ತುಂಬಿಸಿಕೊಂಡು ಬಂದೆ. ವಿಪರೀತ ರಷ್ಷು. ಏನು ಮಾಡೋದು. ಶಂಕರ ಬಂದರೆ ಅವನಿಗೆ ನೋಡಲು ಬೇಕಲ್ಲ” ಎನ್ನುತ್ತಾ ತಟ್ಟೆಗೆ ಕೈಯಿಟ್ಟರು. ಊಟವಾದ ಬಳಿಕ ನಿದ್ರೆ ಬರುತ್ತೋ ಇಲ್ಲವೋ ಅಂತೂ ಒಂದು ಗಂಟೆ ಹೊತ್ತು ಸ್ವಲ್ಪ ಉರುಳಿಕೊಳ್ಳುವ ಅಭ್ಯಾಸ. ಈದಿನ ಎಷ್ಟು ಆಯಾಸವಾಗಿದ್ದರೂ ಸೀತಮ್ಮನಿಗೆ ನಿದ್ರೆ ಬರುತ್ತಿಲ್ಲ. ಏನೋ ಹಳೆಯ ನೆನಪುಗಳು ಬಾಧಿಸುತ್ತಲೇ ಇವೆ… ತಮ್ಮ ಸಂಸಾರ ಊರಗಡೂರಿನಲ್ಲೇ ಮುಂದುವರೆದಾಗ ಸ್ವಲ್ಪ ಬೇಸರವಾದರೂ, ಮಾವನವರೊಬ್ಬರನ್ನೇ ಬಿಟ್ಟು ಹೋಗುವ ಮನಸ್ಸಂತೂ ಆಗಲಿಲ್ಲ. ಗೇಣಿದಾರರ ಗಲಾಟೆಯಲ್ಲಿ ಇದ್ದ ಜಮೀನೆಲ್ಲಾ ಹೋಯಿತು. ಉಳಿದದ್ದು ನಾಲ್ಕೆಕರೆ ತೋಟ ಮತ್ತು ಊರಗಲದ ಮನೆ ಮಾತ್ರ. ದೊಡ್ಡವರಿಬ್ಬರೂ ತಮ್ಮೆಲ್ಲಾ ಪಾಲನ್ನೂ ಇವರಿಗೇ ಬಿಟ್ಟುಕೊಟ್ಟರು. ಹುಟ್ಟಿದ್ದು ಒಬ್ಬನೇ

ಕಥಾಯಾನ Read Post »

You cannot copy content of this page

Scroll to Top