ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪ್ರಬಂದ

ವಾಕಿಂಗ್..

ಇನ್ನು 10 ನಿಮಿಷದ ದಾರಿಯಲ್ಲಿರುವ ಅಕ್ಕನ ಮನೆಯಲ್ಲಿದ್ದ ಎಂಟು ತಿಂಗಳ ಮರಿ ಡೋರ , ಕೆಲ ತಿಂಗಳ ಹಿಂದೆ ಅನಾರೋಗ್ಯ ದಿಂದ ಇಹಲೋಕ ತ್ಯಜಿಸಿದ್ದಳು. ಡೋರಗೆ ಡ್ರಿಪ್ ಹಾಕಿ ಮಲಗಿ ಸಿದ್ದಾಗ, ಸೋನು ಅವಳ‌ ಪಕ್ಕನೇ ಇರುತ್ತಿದ್ದ. ಈಗಲೂ ವಾರಕ್ಕೊಮ್ಮೆಯಾದರೂ ಅಕ್ಕನ‌ ಮನೆ ತನಕ ವಾಕಿಂಗ್ ಹೋಗಿ ಡೋರ ಳ ಹುಡುಕಾಡಿ ಮನೆಯವರನ್ನೆಲ್ಲ ಕರುಣಾಪೂರಿತ ಕಣ್ಣು ಗಳಿಂದ ನೋಡಿ ಸುಮ್ಮನೆ ಹೊರಹೋಗುತ್ತಾನೆ.

ವಾಕಿಂಗ್.. Read Post »

ಇತರೆ, ಪ್ರಬಂದ

ಹಾಲು ಎಲ್ಲಿ ಕೊಳ್ಳುವುದು?

ಅಪರೂಪಕ್ಕೊಮ್ಮೆ ಹಸುಕರು ಹಾಕಿದಾಗ ಗಿಣ್ಣು ಹಾಲು ಉಚಿತವಾಗಿ ವರ್ತನೆಯವರು ಕೊಡುತ್ತಿದ್ದರು.ಮನೆಯ ಕ್ಯಾಲೆಂಡರ್ ನಲ್ಲಿ ನೆಂಟರು ಬಂದಾಗ ಹೆಚ್ಚಿಗೆ ತೊಗೊಂಡ ಹಾಲಿನ ಲೆಕ್ಕ ಗುರುತಿಸುವ ಕೆಲಸ ಮಕ್ಕಳಿಗೆ.ತಿಂಗಳ ಕೊನೆಗೆ ಲೆಕ್ಕ ಹಾಕಿ ಚುಕ್ತಾ ಮಾಡಿದರಾಯಿತು.

ಹಾಲು ಎಲ್ಲಿ ಕೊಳ್ಳುವುದು? Read Post »

ಇತರೆ, ಪ್ರಬಂದ

ಬಸ್ ಪಯಣ

ಬಸ್ ಪಯಣ ಬಸ್ ಪಯಣ ಎಂ. ಆರ್. ಅನಸೂಯ ನನಗೆ ಬಸ್ ಪ್ರಯಣ ಅಂದ್ರೆ ಇಷ್ಟವೇ ಆಗುತ್ತದೆ . ಅಲ್ಲಿ ನಮಗೆದುರಾಗುವ ವೈವಿಧ್ಯಮಯ ಪ್ರಸಂಗಗಳು ಬಹು ಸ್ವಾರಸ್ಯಕರವಾಗಿದ್ದು ಒಂಥರಾ ನಮ್ಮ ಲೋಕಾನುಭವ  ಹೆಚ್ಚಿಸುತ್ತವೆ.ಕಾರಣ ವಿವಿಧ ರೀತಿಯ ಜನರೊಡನಾಟ !  ಬಹುಶಃ ವೈವಿಧ್ಯತೆ ಕೊಡುವಷ್ಟು ಅನುಭವವನ್ನು ಬೇರೆ ಯಾವುದೂ ಕೊಡಲಾರದು. ಆದ್ದರಿಂದಲೆ ನಾವು ಅಂದ್ರೆ ಭಾರತೀಯರಿಗೆ ಸಿಗುವಷ್ಟು ಅನುಭವ ಇನ್ಯಾವ ದೇಶದ ಪ್ರಜೆಗಳಿಗೆ ಸಿಕ್ಕಲಾರದು. ಬಸ್ ಪಯಣವೆಂದರೆ ಒಂಥರ ಜನ ಧ್ವನಿಯೇ ಸರಿ. ಜನರ ನಾಡಿ ಮಿಡಿತ ! ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಘಟನೆ. ಒಮ್ಮೆ ಬಸ್ ನಲ್ಲಿ   ಪ್ರಯಾಣಿಸುತ್ತಿದ್ದೆ‌. ಸಾಮಾನ್ಯವಾಗಿ ನಾನು ಪ್ರಯಾಣ ಮಾಡುವಾಗ ನಿದ್ದೆ ಮಾಡುವುದಿಲ್ಲ. ಅದು ಹಳ್ಳಿಗಳನ್ನು ಸುತ್ತಿಕೊಂಡು ಹೋಗುವಂಥ ಖಾಸಗಿ ಬಸ್.ಬಸ್ ನಲ್ಲಿ ಎಲ್ಲಾಆಸನಗಳು ಭರ್ತಿಯಾಗಿದ್ದವು ಎನ್ನುವುದಕ್ಕಿಂತ ಬಸ್ನಲ್ಲಿ ಜನರನ್ನು ತುಂಬಿದ್ದರು ಎಂಬ ಹೇಳಿಕೆಯೇ ಸೂಕ್ತ.  ತುಂಬಿದ ಬಸುರಿ ಹೆಣ್ಣಿನಂತೆ ಗಜ ಗಮನೆಯಂತೆ ಬಸ್ ಚಲಿಸತೊಡಗಿತು. ದಾರಿ ಸಾಗುತ್ತ ಹಳ್ಳಿಗಳು ಬಂದಾಗ ಜನರಿಳಿದಂತೆ ಬಸ್ಸಲ್ಲಿದ್ದವರೆಲ್ಲಾ ಸಾವಕಾಶವಾಗಿ ಕುಳಿತರು. ಇದ್ದಕ್ಕಿದ್ದಂತೆಯೇ ” ಅಣ್ಣಾ ಡ್ರೈವರಣ್ಣ ಬಸ್ ನಿಲ್ಲಿಸಣ್ಣ” ಎಂದು ಮಹಿಳೆಯೊಬ್ಬರು ಜೋರಾಗಿ ಕೂಗಿಕೊಂಡಳು. ಡ್ರೈವರ್ ನೊಂದಿಗೆ ಮಾತು ಕತೆಯಲ್ಲಿ ಮಗ್ನನಾಗಿದ್ದ  ಬಸ್ ಕಂಡಕ್ಟರ್ “ಯಾಕೆ, ಏನು ಏನಾಯ್ತು “ಎಂದು ಗಾಬರಿಯಾಗಿ  ಕೇಳಿದ. ಎಲ್ಲರೂ ಆ ಧ್ವನಿ ಬಂದ ಕಡೆಗೆ ತಿರುಗಿದರು. ಆ ಹೆಣ್ಣುಮಗಳೊಬ್ಬಳು   ಡ್ರೈವರ್ ಹತ್ತಿರ ಬಂದು,”ಅಣ್ಣ,ಬಸ್ ನಿಲ್ಲಿಸಣ್ಣ ನನ್ನ ಈ ಕಿವಿದು ವಾಲೆ( ಓಲೆ)ಕಳೆದು ಹೋಗೈತೆ. ಹುಡುಕ್ತೀನಣ್ಣ”  ಕೈಮುಗಿಯುತ್ತ ಅವಳು ಅಂಗಲಾಚಿ ಬೇಡಿಕೊಂಡಳು. ತಕ್ಷಣವೆ ಬಸ್ ನಿಂತಿತು. ಅವಳು ಹಾಕಿಕೊಂಡಿದ್ದ ಎರಡು ಕಿವಿಯೋಲೆಯಗಳಲ್ಲಿ ಒಂದು ವಾಲೆಯು ಎಲ್ಲೋ ಬಿದ್ದು ಹೋಗಿದ್ದು ಈಗ ಅದು ಅವಳ ಅರಿವಿಗೆ ಬಂದಿತ್ತು.ತಕ್ಷಣ ಗಾಬರಿಯಿಂದ  ಕೂಗಿಕೊಂಡಿದ್ದಳು. ಆ ಹೆಣ್ಣು ಮಗಳು ಕಣ್ಣೀರು ಹಾಕುತ್ತಲೇ ಡ್ರೈವರ್ ಕಡೆ ಬಂದಳು.ಸುಮಾರು ನಲವತ್ತರ ವಯೋಮಾನ. ಆಗ ಕಂಡಕ್ಟರ್ “ಎಲ್ಲಿ ಬಿತ್ತೊ ಏನು ಕತೆನೋ ನೀನು ಮನೆಯಿಂದ ಬರುವಾಗ ಕಿವಿಲೇ  ಇತ್ತೇನಮ್ಮ ಎಲ್ಲಿ ಅಂತ ಹುಡುಕ್ತೀಯ ಎಂದಾಗ  “ಅಣ್ಣ ನಾನು ಕುಂತಿರ  ಸೀಟ್  ಹಿಂದೆ ಮುಂದೆಲ್ಲ ಹುಡುಕ್ತೀನಿ” ಎಂದು ಹೇಳಿದಳು. ಬಸ್ ನಲ್ಲಿದ್ದವರು ಅವಳ ಮನವಿಗೆ ಸ್ಪಂದಿಸಿ ಬೇಗನೆ ಕೆಳಗಿಳಿದು ಸಹಕರಿಸಿದರು “ಬೇಗ ಬೇಗ ನೋಡ್ಬೇಕಮ್ಮ” ಕಂಡಕ್ಟರ್ ಹೇಳಿದಾಗ “ಅಣ್ಣ ನಾನಿವತ್ತು  ವಾಲೆ ಕಳ್ಕೊಂಡು ಮನೆಗೆ ಹೋದ್ರೆ ನನ್ನ ಗಂಡ ಹೊಡೆದು ಸಾಯಿಸಿಬಿಡ್ತಾನೆ” ಎಂದು ಹೇಳಿದಾಗ  ಎಲ್ಲರು ಅಯ್ಯೋ  ಪಾಪ ಎಂದು ಮರುಗುತ್ತ ಕೆಲವರು ಅವಳೊಡನೆ  ತಾವು ಸಹಾ ಹುಡುಕಿದರು.ಅದು ಬಸ್ನಲ್ಲೆ  ಬಿತ್ತೋ ಅಥವ ಬಸ್  ಹತ್ತುವ ಮೊದಲೇ ಬಿದ್ದಿತ್ತೊಎಂಬ ಬಗ್ಗೆ ಅವಳಿಗೂ ಸಹ ಖಾತ್ರಿಯಿರಲಿಲ್ಲ  ಒಂದು ಇಪ್ಪತ್ತು ನಿಮಿಷ ಹುಡುಕಿದ್ರೂ ಸಿಗಲಿಲ್ಲ.ಆಗ ಕಂಡಕ್ಟರ್ “ಅದೆಲ್ಲಿ ಬಿದ್ದೋಯ್ತೋ ಏನೋ ಸಿಗಲ್ಲ. ಬಸ್ ಬಹಳ ಹೊತ್ತು ನಿಲ್ಲಿಸಕ್ಕಾಗಲ್ಲಮ್ಮ. ಎಲ್ಲರು ಬನ್ರಿ. ಕುಳಿತ್ಕಳಿರಿ” ಎಂದಾಗ ಎಲ್ಲರೂಬಸ್ ನಲ್ಲಿ ಬಂದು ಕೂತರು. ನಿಲ್ಲದ ಆ ಹೆಂಗಸಿನ ಅಳುವನ್ನು ಕಂಡು ಎಲ್ಲರ ಮನ ಕರಗಿತ್ತು. ಅವಳ ದು:ಖ  ನೋಡಲಾಗದೇ ಹಿರಿಯ ವ್ಯಕ್ತಿಯೊಬ್ಬರು “ಹೋಗ್ಲಿ ಬಿಡಮ್ಮ ಆಗಿದ್ದು ಆಗೋಯ್ತು ಸಮಾಧಾನ ಮಾಡ್ಕಳಮ್ಮ”ಎಂದು  ಹೇಳಿದಾಗ ಅವಳು “ನನ್ನ ಗಂಡನ ಬುದ್ಧಿ ನಿನಗೆ ಗೊತ್ತಿಲ್ಲಪ್ಪ. ನನ್ನ ಹೊಡೆದು ಸಾಯಿಸಿಬಿಡ್ತಾನೆ” ಎನ್ನುತ್ತ ಕಣ್ಣೀರು ಹಾಕಿದಳು. ವಾಲೆ ಕಳೆದುಕೊಂಡ ದುಃಖಕ್ಕಿಂತ ಹೆಚ್ಚಾಗಿ ತನಗೆ ಬೀಳಲಿರುವ ಗಂಡನ ಬಡಿತಗಳಿಗೆ ಬೆಚ್ಚಿ ಬಿದ್ದಂತೆ ಕಂಡಳು. ಸುಮ್ಮನೇ ಮೌನವಾಗಿ ತನ್ನ ಸೀಟ್ ನಲ್ಲಿ ಕುಳಿತು ಬಿಟ್ಟಳು.ಏನಾದ್ರು ಆಗಲಿ ಎಲ್ಲದಕ್ಕೂ ತಾನೂ ಸಿದ್ದವಾಗಿದ್ದೇನೆಂಬಂತಿದ್ದ ಆ ಹೆಣ್ಣುಮಗಳು ಅಸಹಾಯಕತೆಯ ಪರಮಾವಧಿಯಂತೆ ಕಂಡಳು.ಆಕೆ ಬಸ್ ಇಳಿದು ಹೋಗುವಾಗ “ಏನು ಆಗಲ್ಲ ಧೈರ್ಯವಾಗಿರಕ್ಕ. ದೇವರ ಮೇಲೆ ಭಾರ ಹಾಕಕ್ಕ’ ಎಂದು ಕಂಡಕ್ಟರ್ ಧೈರ್ಯ ಹೇಳಿದನು.ಅವಳ ಸಿಡುಕ ಗಂಡನಿಗೆ  ಕೆಟ್ಟಸಿಟ್ಟು ಬಾರದಂತೆ ಮಾಡಪ್ಪ ದೇವರೇ ಎನ್ನುವುದನ್ನು  ಬಿಟ್ಟರೆ ಮತ್ತೇನನ್ನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದು. ಅವಳ ಮನೆಯಲ್ಲಿ ಮಂದೆ ನಡೆಯಲಿರುವ ಎಲ್ಲಾ ಸನ್ನಿವೇಶಗಳನ್ನು ನನ್ನದೇ ಆದ ರೀತಿಯಲ್ಲಿ ಕಲ್ಪನೆ  ಮಾಡಿಕೊಂಡು ಮನೆ ಸೇರಿ ಆ ಗುಂಗಿನಲ್ಲೇ ಎರಡು ದಿನ ಕಳೆದಿದ್ದೆ. ಉದ್ದೇಶಪೂರ್ವಕವಾಗಿ ತಾನು ಮಾಡದಿದ್ದರೂ ತನಗರಿವಿಲ್ಲದೆ ಆಕಸ್ಮಿಕವಾಗಿ ಆದ ತಪ್ಪಿನಿಂದ ಆ ಹೆಣ್ಣು ಮಗಳು ಎಂಥಾ ಶಿಕ್ಷೆ ಅನುಭವಿಸಿದಳೋ ಆ ದೇವರಿಗೇ ಗೊತ್ತು! ಅಷ್ಟೊಂದು ಭಯ ಬಿದ್ದ ಅವಳಿಗೆ ಅವಳ ಕೆಟ್ಟ ಗಂಡನ ಹೊಡೆತಗಳು ಅದೆಷ್ಟು ನೋವು ಕೊಟ್ಟಿರಬೇಕು !  ನಮ್ಮ ಹೆಣ್ಣುಮಕ್ಕಳ ಮೇಲಿನ ಕೊನೆಯಿಲ್ಲದ ಕ್ರೌರ್ಯದ ಶೋಷಣೆಯ ನಾನಾ ರೂಪಗಳು! ಆದೆಷ್ಟು ವರ್ಷಗಳು  ಕಳೆದರೂ ಆ ಘಟನೆ ಮಾತ್ರ ನನ್ನ ಚಿತ್ತದಲ್ಲಿ ಹಾಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ ! ಇಂತಿಪ್ಪ ಬಸ್ ಪಯಣದಲ್ಲೇ,ಒಮ್ಮೆ ನಾನೂ ಸಹ  ನನ್ನ ರಿಸ್ಟ್ ವಾಚ್ ಕಳೆದುಕೊಂಡಿದ್ದೆ. ಅದು ನನ್ನ ಮಗ ನನಗೆ ತನ್ನ ಮೊದಲ ಸಂಬಳದಲ್ಲೇ ಕೊಡಿಸಿದ್ದ ಬೆಲೆ ಬಾಳುವ ವಾಚು.ಕಳೆದುಕೊಂಡ ಬೇಸರದಲ್ಲಿ ಬೇಸರದಲ್ಲೆ ನಾನು ವಿಷಯವನ್ನು ಮಗನಿಗೆ ತಿಳಿಸಿದೆ. ಇದನ್ನು ಕೇಳಿಧ ನನ್ನ ಮಗನು ಒಂದಿಷ್ಟೂ ಬೇಸರ ಪಡದೆ “ಹೋಗ್ಲಿ ಬಿಡಮ್ಮ” ಎಂದು ಸಲೀಸಾಗಿ ಹೇಳಿದ್ದಲ್ಲದೆ ಅಂತಹದೆ ಮತ್ತೊಂದು ವಾಚ್ ಕೊಡಿಸಿದ್ದನು.ಎಲ್ಲವು ಅಷ್ಟೆ ಅವರವರ ಭಾವಕ್ಕೆ! ನಾನು ಬಿ.ಇಡಿ. ಓದುವಾಗ ಪ್ರತಿದಿನ ಬಸನಲ್ಲಿ ದುರ್ಗಕ್ಕೆ ಪಯಣ ಮಾಡುತ್ತಿದ್ದೆ. ಒಂದು ರೀತಿಯಲ್ಲಿ ಆ  ಸರ್ಕಾರಿ ಬಸ್ ವಿದ್ಯಾರ್ಥಿಗಳಿಗೆಂದೇ ಮೀಸಲಾದಂತಿತ್ತು. ಆ ದಿನ ನಮಗೆ ಪ್ರಾಕ್ಟಿಕಲ್ ಎಕ್ಸಾಂ ಇತ್ತು. ನಿಯೋಜಿಸಲ್ಪಟ್ಟಿದ್ದ ಶಾಲೆಗೆ ನಾವು ಸರಿಯಾದ ವೇಳೆಗೆ ತಲುಪಬೇಕಾಗಿತ್ತು.  ರೋಡ್ ಬ್ಲಾಕ್ ಆದ ಕಾರಣ ಬಸ್ ಇದ್ದಕ್ಕಿದ್ದಂತೆ ನಿಂತು ಬಿಟ್ಟಿತು. ಕಾರಣ ಕೆಲವೇ  ಕ್ಷಣಗಳ ಹಿಂದೆ ಅಲ್ಲೊಂದು ಅಪಘಾತವಾಗಿತ್ತು. ರಾಷ್ಟೀಯ ಹೆದ್ದಾರಿ ಬೇರೆ ನಮಗೆ ಆತಂಕ ಶುರು ಆಯಿತು. ಸಮಯಕ್ಕೆ  ಸರಿಯಾಗಿ ಶಾಲೆ ತಲುಪಲು ಸಾಧ್ಯವೇ ಎಂದು. ನಾವು ಡ್ರೈವರ್ ಅವರನ್ನ  ಕೇಳಿದೆವು. ಹತ್ತಿರದ ಇನ್ನೊಂದು ದಾರಿಯಲ್ಲಿ ಹೋಗಿರಿ  ನಮಗೆ ಎಕ್ಸಾಂ ಇದೆ. ಅವರು ಇಲ್ಲ ಅದು ಸಾಧ್ಯವಾಗಲ್ಲ ಎಂದರು. ಆಗ ನಾವು ಪೆಚ್ಚು ಮೋರೆ ಹಾಕಿಕೊಂಡೆವು. ಆಗ ಅವರು ಸಾವಧಾನವಾಗಿ ಅವರದೇ ಆದ ಕೆಲವು  ಸಮಸ್ಯೆಗಳನ್ನು ಹೇಳಿಕೊಂಡರು. ಜನರ ಒತ್ತಾಯಕ್ಕೆ  ಮಣಿದು ಅವರು ಬೇರೆ ರೂಟ್ ನಲ್ಲಿ ಹೋದಾಗ ಅಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದರೂ ಅವನ ತಪ್ಪೆಂದು ಪರಿಗಣಿಸಿ ಅವನನ್ನು  ಕರ್ತವ್ಯದಿಂದ ಸಸ್ಪೆಂಡ್ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದರು. ಯಾವುದೇ ಕ್ಷೇತ್ರ ಇರಬಹುದು, ಅಲ್ಲಿನ ಒಳ ಹೊರಗು  ಅಲ್ಲಿ ಇರುವವರಿಗೆ ತಿಳಿದಿರುವುದೆ ಹೊರತು ದೂರದಲ್ಲಿ ನಿಂತು ಮಾತನಾಡುವವರಿಗಲ್ಲ. ಇದು ಎಲ್ಲಕ್ಕು ಅನ್ವಯ ಆಗುತ್ತದೆಯಲ್ಲವೇ ? ನಾವು ತರಗತಿಗಳನ್ನು ತೆಗೆದುಕೊಳ್ಳಲು ನಿಯೋಜಿಸಿದ ಶಾಲೆಗೆ ನಾವು ಹೋಗಬೇಕಿತ್ತು. ಅಂತಹ ದಿನಗಳಲ್ಲಿಯೇ ಅನಿವಾರ್ಯ ಕಾರಣಗಳಿಂದ ನಮಗೆ ಬಸ್ ಸಿಗುವುದು ತಡವಾಗುತ್ತಿತ್ತು.ಮಾಗಿ ಕಾಲದ ದಿನಗಳಾಗಿದ್ದರೆ ಬೇಗನೆ ಕತ್ತಲು ಕವಿದು ಬಿಡುತ್ತಿತ್ತು  ಕೆಲವು ಬಸ್ ನಿರ್ವಾಹಕರು ಪಾಸ್ ಸೌಲಭ್ಯ ಹೊಂದಿದ ನಮ್ಮ ಮೇಲೆ ಸಿಡುಕುತ್ತಾ ಸಹನೆಯಿಲ್ಲದೆ ನೀವೆಲ್ಲಾ ಮ್ಯಾಟ್ನಿ ( ಮಧ್ಯಾನ್ಹದ ಚಲನ ಚಿತ್ರ ಪ್ರದರ್ಶನ )ಸಿನಿಮಾ ನೋಡಿಕೊಂಡು ಬರ್ತಿರಾ ಎಂದು ಗೊಣಗುತ್ತಾ ಪೂರ್ವಾಗ್ರಹ ಪೀಡಿತ ತೀರ್ಪನ್ನು ಕೊಟ್ಟೇ ಬಿಡುತ್ತಿದ್ದರು.ಆಗ ನಾವು ನಮಗೇನೂ ಕೇಳಿಸೇ ಇಲ್ಲವೆಂಬಂತೆ ಇರುತ್ತಿದ್ದೆವು.ಒಮ್ಮೆ ಹೀಗೆ ತಡವಾಗಿ ಬಸ್ ಹತ್ತಿ ಕೂತು ಅಂದಿನ ತರಗತಿ ಹಾಗೂ ವಿಷಯದ ಬಗ್ಗೆ ಮಾತನಾಡುತ್ತಾ ಅಂದಿನ ಬಸ್ ಕಂಡಕ್ಟರ್ ಗೆ ಪಾಸ್ ತೋರಿಸಿದಾಗ”ನೀವೆಲ್ಲಾ ಬಿ.ಇಡಿ. ಓದುತ್ತಿದ್ದೀರಾ?ನೀವು ಸ್ಕೂಲ್ ಗಳಿಗೆ ಹೋಗಿ ಪಾಠ ಮಾಡಬೇಕು ಅಲ್ವೇನ್ರಮ್ಮ. ನನ್ನ ಮಗಳೂ ಬಿ. ಇಡಿ. ಮಾಡ್ತಾ ಇದಾಳೆ ‘ ಎಂದವರು ಹೇಳಿದಾಗ ಒಬ್ಬ ಸಹೃದಯ ಸಜ್ಜನರಂತೆ ಕಂಡುಬಂದರು ಕಾಲೇಜು ವಿದ್ಯಾರ್ಥಿಗಳಿದ್ದ ಆ ಬಸ್ನಲ್ಲಿ ಜೋರು ಮಾತು ಕತೆ, ವಿನಾಕಾರಣ ನಗು,ಸಿನಿಮಾ,ರಾಜಕೀಯ,ಕಾಲೇಜ್  ಟೀಕೆ ಟಿಪ್ಪಣಿ, ತರಲೆ ತುಂಟಾಟಗಳ ಲವಲವಿಕೆ ತುಂಬಿದ ಉತ್ಸಾಹ ಪುಟಿಯುತ್ತಿತ್ತು ! ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಗೆ ಪ್ರತಿದಿನ ನಾವು ಬಸ್ ನಲ್ಲಿ ಹೋಗಬೇಕಿತ್ತು. ಹದಿನೈದುನಿಮಿಷದ ಅಲ್ಲಿನ ಪ್ರಯಾಣಕ್ಕೆ ಅರ್ಧಗಂಟೆಗೂ ಹೆಚ್ಚಿನ ಸಮಯವೆ ಬೇಕು ಪ್ರತಿಯೊಂದು ಹಳ್ಳಿಯಲ್ಲೂ ಹತ್ತಿ ಇಳಿಯುವವರಿಂದಾಗಿ ಅದು ಅನಿವಾರ್ಯ ಸಹ. ಒಮ್ಮೆಬಸ್ನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆಯೇ ಗದ್ದಲ ಎದ್ದಿತು. ಏನೋ ದುರ್ವಾಸನೆ ಬರುತ್ತಿದೆ ಎಂದು ಎಲ್ಲರು ಜೋರಾಗಿ ಹೇಳತೊಡಗಿದರು  ದುರ್ವಾಸನೆ ಬೀರುವ ವಸ್ತುವನ್ನು ಬಸ್ಸಲ್ಲಿ ಇಡಲಾಗಿದೆ  ಎಂದು ಜನರು ಗುಮಾನಿ ಪಟ್ಟರು.ಆಗ ಬಸ್ ಕಂಡಕ್ವರ್ ( ಖಾಸಗಿ ಬಸ್) ಅಂತಹುದೇನೂ ಇಟ್ಟಿಲ್ಲ ಎಂಬುದಾಗಿ ಸ್ವಷ್ಟಪಡಿಸಿದನು. ಆಗ ಬಸ್ ನಲ್ಲಿದ್ದ ಯಾರೋ ಒಬ್ಬರು   ಮತ್ತೊಬ್ಬನ ಕಡೆ ಕೈ ತೋರಿಸುತ್ತ “ಅಗೋ ಅವನಿಂದಲೇ ಆ ಕೆಟ್ಟ ದುರ್ವಾಸನೆ ಬರ್ತಾ ಇರೋದು ಅವನ ಕಾಲಿಗೆ ಕೊಳಕು ಮಂಡಲ(ಒಂದು ರೀತಿಯಹಾವು) ಕಚ್ಚಿಬಿಟ್ಟಿದೆ ಅದಕ್ಕೆ ಈ ವಾಸನೆ”ಎಂದರು ಬಹಳಷ್ಟು ಜನರು ವಾಸನೆ  ತಡಯಕಾಗ್ತಿಲ್ಲ ಅವನನ್ನು ಕೆಳಗಿಳಿಸಿ ಎಂದಾಗ ಅವನು ತಾನೇ ತಾನಾಗಿ ಮುಖಕ್ಕೆ ಟವಲ್ ಮುಚ್ಚಿಕೊಂಡು ಕೆಳಗೆಇಳಿದು ಬಿಟ್ಟ. ಅಬ್ಬಾ! ಎಷ್ಟೊಂದು ಅವಮಾನ ! ಎಷ್ಟು ತಿರಸ್ಕಾರ ! ನನಗಂತು ಆ ರೀತಿಯ ಹಾವಿನ ಕಡಿತದ ಬಗ್ಗೆ ಅದರ ಪರಿಣಾಮ ಏನೂ ಗೊತ್ತಿಲ್ಲ ಎಲ್ಲವೂ ಹೊಸದೇ  ಅದು ನಿಜ ಅಥವ ಸುಳ್ಳೇಎಂಬುದು ಸಹ ತಿಳಿದಿರಲಿಲ್ಲ  ಅವನಿಗೆ ಅಂಥ ಅವಮಾನ ಮಾಡಿ ನಿರ್ದಯಿಗಳಾದ ಕಟುಕರಂತೆ ಕೆಳಗೆ ಇಳಿಸಿದ್ದು ಮಾತ್ರ ಅಮಾನುಷ ಕೃತ್ಯ ಎನಿಸಿತು. ಅಂತಹದೊಂದು ಹೀನಾಯ ಕ್ರಿಯೆಗೆ ನಾನು ಮೂಕ ಪ್ರೇಕ್ಷಕಳಂತೆ ಇದ್ದದ್ದು ತುಂಬಾನೇ ಕೆಡುಕೆನಿಸಿತು. ಕೆಲವೊಮ್ಮೆ ಜನರು ಸಮೂಹ  ಸನ್ನಿಗೊಳಗಾದವರಂತೆ ವರ್ತಿಸುತ್ತಾರೆ ಅನಿಸಿತು.  ನಾನು ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮ ಶಾಲೆಗೆ ಅಕ್ಕಪಕ್ಕ ಅಕ್ಕಪಕ್ಕದ ಗ್ರಾಮಗಳಿಂದ ಬರುವ  ವಿದ್ಯಾರ್ಥಿಗಳಿದ್ದರು. ಆಗ ಸರ್ಕಾರಿ ಬಸ್ ಗಳ ಸ್ಟಾಪ್ ಇರಲಿಲ್ಲ.ಖಾಸಗಿ ಬಸ್ಗಳೆ ನಮ್ಮಆಪತ್ಬಾಂಧವರು ಹತ್ತು ಗಂಟೆಗೆ ಸರಿಯಾಗಿ ನಾವು ಶಾಲೆಯಲ್ಲಿರ ಬೇಕಿತ್ತು. ಒಂಭತ್ತು ಗಂಟೆಗೆ ಹೊರಡುತ್ತಿದ್ದ  ಏಕೈಕ ಬಸ್ “ರಾಘವೇಂದ್ರ’ ನಮ್ಮನ್ನು ಹಾಲಲ್ಲಾದರೂ ಹಾಕು ನೀರಲ್ಲಾದರು ಹಾಕು ರಾಘವೇಂದ್ರ !  ಎಂಬಂತೆ ನಾವು ಅದನ್ನೇ ನಂಬಿದ್ದೆವು. ಪ್ರತಿಯೊಂದು ಸ್ಟಾಪನಲ್ಲೂ ನಮ್ಮವಿದ್ಯಾರ್ಥಿಗಳು ಹತ್ತುತ್ತಿದ್ದರು. ವಿದ್ಯಾರ್ಥಿನಿಯರು ಮಾತ್ರ ನಿಲ್ಲುವಷ್ಟು ಜಾಗ ಸಿಕ್ರೆ ಸಾಕು ಎಂದು ಬಸ ನಲ್ಲಿ  ತೂರಿ ಬಿಡುತ್ತಿದ್ದರು.ಆದ್ರೆ ನಮ್ಮ ಹುಡುಗ್ರು ಮಾತ್ರ ಬಸ್ ನಿಂತಾಕ್ಷಣ ಚಕ್ಕನೆ ಬಸ್ ಮೇಲೆ ಹತ್ತಿ ಕೂತುಬಿಡುತ್ತಿದ್ದರು  ಜಾಗ ಇಲ್ಲದಿದ್ದರೆ ಅವರು ತಾನೇ ಏನು ಮಾಡಿಯಾರು! ಆ ಬಸ್ ಬಿಟ್ಟರೇ ನಮಗೆ ಬೇರೆ ಬಸ್ ಇಲ್ಲ. ಹುಡುಗರು ಬಸ್ ಮೇಲೆ ಹತ್ತುವಾಗ ಸುಮ್ಮನಿರುತ್ತಿದ್ದ ಕಂಡಕ್ಟರಪ್ನ ಅವರೆಲ್ಲ ಇಳಿಯುವಾಗ ಅವರನ್ನು ಬೈಯುತ್ತಾ”ಇದೇ ಏನ್ರೋ ನೀವು ಸ್ಕೂಲಲ್ಲಿ ಕಲಿಯೋದು?” ಪರೋಕ್ಷವಾಗಿ ನಮ್ಮ ಮೇಲೆ ಆರೋಪ ಹೊರಿಸಿ ಕೂಗಾಡುತ್ತಿದ್ದ. ಆಗೆಲ್ಲ ಬೇಸರವಾದರೂ ಸಹ ನಮ್ಮ ಮಕ್ಕಳದೇ ತಪ್ಪಾಗಿರುತ್ತಿದ್ದ ಕಾರಣ ನಾವೂ ಸುಮ್ಮನಿರುತ್ತಿದ್ದೆವು. ದಿನಾ ಅದೇ ರಾಗ ಆಗಿದ್ದರಿಂದ ನಾವು ನಮ್ಮ ಮಕ್ಕಳು ಮೊಂಡು ಬಿದ್ದಿದ್ದೆವು ದಿನದಲ್ಲಿ ಎಂಟು ಗಂಟೆ ಮಾತ್ರ ಮಕ್ಕಳು ಶಿಕ್ಷಕರೊಂದಿಗೆ ಇರುತ್ತಾರೆ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರವೂ ಹಿರಿದೆಂಬುದರಲ್ಲಿ ಎರಡು ಮಾತಿಲ್ಲ. ಅದರೂ  ಮಕ್ಕಳ ಬದುಕಿನಲ್ಲಿ ತಂದೆತಾಯಿಗಳ ಪಾತ್ರವೇನೂ ಇಲ್ಲ ಎಂಬಂತೆ ಆಡುವ ಮಾತುಗಳನ್ನು ಕೇಳಿದಾಗ  ಶಿಕ್ಷಕರಿಗೆ ಬೇಸರವಾಗುವುದು ಸಹಜವೇ ಆಗಿದೆ. ಒಮ್ಮೊಮ್ಮೆ ವಿಚಿತ್ರವಾದರೂ ನಿಜವೆನಿಸುವಂಥ ಅನೇಕ ಪ್ರಸಂಗಗಳಿಗೆ ಪ್ರತ್ಯಕ್ಷದರ್ಶಿಗಳಾಗುತ್ತೇವೆ. ಶಿಕ್ಷಕರೆ ಹೆಚ್ಚು ಹೋಗುವ

ಬಸ್ ಪಯಣ Read Post »

ಇತರೆ, ಪ್ರಬಂದ

ಪಾತ್ರೆಗಳ ಲೋಕದಲ್ಲಿ..

ಲಲಿತ ಪ್ರಬಂಧ ಪಾತ್ರೆಗಳ ಲೋಕದಲ್ಲಿ.. ಜ್ಯೋತಿ ಡಿ.ಬೊಮ್ಮಾ. ಹಬ್ಬಗಳಲ್ಲೆ ದೊಡ್ಡ ಹಬ್ಬ ದಸರಾ .ನಮ್ಮ ಉತ್ತರ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಕಡೆ ಈ ಹಬ್ಬವನ್ನು ಅಂಬಾ ಭವಾನಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಪ್ರತಿಯೊಬ್ಬರ ಮನೆಗಳು ದಸರಾ ಹಬ್ಬಕ್ಕೆ ಸುಣ್ಣ ಬಣ್ಣ ಬಳಿದುಕೊಂಡು ದೇವಿಯ ಪ್ರತಿಷ್ಟಾಪನೆಗೆ ಸಜ್ಜುಗೊಳ್ಳುತ್ತವೆ. ನಾವು ಚಿಕ್ಕವರಿದ್ದಾಗ ಮನೆಗೆ ಸುಣ್ಣ ಬಣ್ಣ ಮಾಡುವ ಸಂದರ್ಭ ತುಂಬಾ ಸಂತೋಷದಾಯಕವಾಗಿರುತಿತ್ತು.ಆ ಸಂದರ್ಭ ದಲ್ಲಿ ಮನೆಯೊಳಗಿನ ಎಲ್ಲಾ ವಸ್ತುಗಳು ಅಂಗಳಕ್ಕೆ ಬಂದು ಬೀಳುತಿದ್ದವು. ಮನೆಯ ಹಿರಿಯರು ಡಬ್ಬದೊಳಗಿನ ದವಸ ಧಾನ್ಯಗಳನ್ನು ಒಣಗಿಸಿ ಪಾತ್ರೆಗಳನ್ನು ತೊಳೆಯುವಲ್ಲಿ ವ್ಯಸ್ತರಾದರೆ , ಚಿಕ್ಕವರು ಕೈ ಕಾಲಿಗೆ ತೊಡರುವ ಪಾತ್ರೆಗಳ ನಡುವೆ ಸಂಭ್ರಮ ದಿಂದ ಓಡಾಡುತ್ತ ಎನೋ ಖುಷಿ ಅನುಭವಿಸುತ್ತಿದ್ದೆವು.ತಮ್ಮ ಮುರಿದ ಹೋದ ಆಟಿಕೆಗಳು ಹಳೆ ಪುಸ್ತಕಗಳು ಎಂದೋ ಕಳೆದು ಹೋದ ಪೆನ್ನು ಪೆನ್ಸಿಲ್ ಗಳು ಸಿಕ್ಕಾಗ ಅವನ್ನು ಹೆಕ್ಕಿ ತೆಗೆದು ಜೋಪಾನವಾಗಿ ಎತ್ತಿಕ್ಕಿಕೊಂಡು ಸಂಭ್ರಮಿಸುತಿದ್ದೆವು.ಆಗ ಆ ಹಳೆಯ ಮುರಿದ ವಸ್ತುಗಳಲ್ಲಿ ಕಂಡುಕೊಳ್ಳುತ್ತಿದ್ದ ಖುಷಿ ಈಗಿನ ಯಾವ ವಸ್ತುವಿನಲ್ಲು ದೊರಕದು. ಮನೆ ಕ್ಲೀನ್ ಮಾಡುವ ಸಂದರ್ಭದಲ್ಲಿ ಹಿರಿಯರು ಕಿರಿಯರು ಎಲ್ಲರೂ ಸಕ್ರಿಯವಾಗಿ ಭಾಗವಹಿಸುವವರೆ.ಕೆಲಸದ ಒತ್ತಡದ ನಡುವೆಯೂ ಏನೋ ಸಂಭ್ರಮ. ಮನೆಯ ಮೂಲೆ ಮೂಲೆಗಳನ್ನೆಲ್ಲ ಸ್ವಚ್ಛಗೊಳಿಸಿ ಮನೆಗೆ ಸುಣ್ಣದ ಬಿಳಿಯ ಹೊಳಪು ಕೊಟ್ಟಾಗ ಮನೆಯೊಂದಿಗೆ ಮನೆಯವರಲ್ಲೂ ಹೊಸತನದ ಅನುಭೂತಿ ಮೂಡುತಿತ್ತು. ಅಟ್ಟದ ಮೇಲಿನ ಬಳಸದೆ ಇರುವ ತಾಮ್ರ ಹಿತ್ತಾಳೆ ಪಾತ್ರೆಗಳನ್ನೆಲ್ಲ ತೆಗೆದು , ಉಪ್ಪು ಹುಣಸೆಹಣ್ಣಿನಿಂದ ತಿಕ್ಕಿ ಹೊಳಪು ಬರಿಸಿ ಬಿಸಿಲಿಗೆ ಒಣಗಿಸಿ ಮತ್ತೆ ಅಟ್ಟದಲ್ಲೆ ವಿರಾಜಮಾನವಾಗಿಸುವದು ಒಂದು ಮಹತ್ಕಾರ್ಯವೆ .ಮನೆಯೊಳಗಿನ ಹೊಸ ಹಳೆ ಪಾತ್ರೆಗಳನ್ನು ತಿಕ್ಕುತ್ತ ಅಮ್ಮ ಅಜ್ಜಿಯರು ತಮ್ಮ ಜೀವಮಾನದೊಂದಿಗೆ ಸಾಗಿ ಬಂದ ಪಾತ್ರೆಗಳ ಲೋಕದಲ್ಲಿ ವಿಹರಿಸುತಿದ್ದರು. ಎಷ್ಟೊ ವರ್ಷದಿಂದ ಬಳಸಿ ಸವಕಲಾದ , ಹಿಡಿಕೆ ಮುರಿದ ,ನೆಗ್ಗು ಬಡಿದ ಪಾತ್ರೆಗಳು ಉಪಯೋಗಕ್ಕೆ ಬರದಿದ್ದರು ಬಿಸಾಡುವ ಮನಸ್ಸಾಗದೆ ಒಂದು ದೊಡ್ಡ ಡಬ್ಬದಲ್ಲಿ ತುಂಬಿಡಲಾಗುತಿತ್ತು.ಜೀವಮಾನದ ಇಡುಗಂಟಿನಂತೆ. ನನಗೆ ತಿಳುವಳಿಕೆ ಬಂದ ನಂತರ ಮನೆಯ ಅನುಪಯುಕ್ತ ಪಾತ್ರೆಗಳನ್ನೆಲ್ಲ ಗುಜರಿಗೆ ವರ್ಗಾಯಿಸಿದಾಗ ನನಗೂ ಅಮ್ಮನಿಗೂ ರಂಪಾಟವೆ ಆಗಿತ್ತು.ಹಳೆತನವೆಂದರೆ ಹಾಗೆ ಎನೋ ,ಇಟ್ಟುಕೊಳ್ಳಲು ಆಗದೆ ಬಿಸಾಡಲು ಆಗದೆ ಇಬ್ಬಂದಿತನ.ಆದರೂ ವಸ್ತುಗಳೆ ಆಗಲಿ ವ್ಯಕ್ತಿಯೆ ಆಗಲಿ ಹಳತಾದಂತೆ ನಮ್ಮೊಂದಿಗೆ ಬೆಸೆದು ಬಿಡುತ್ತವೆ.ನಮ್ಮೊಂದಿಗೆ ಒಂದಾಗಿ ಬಿಡುತ್ತವೆ. ನಿರ್ಜೀವ ಪಾತ್ರೆಗಳು ಒಂದೊಂದು ಪದಾರ್ಥಗಳ ಹೆಸರಿನಿಂದ ಕರೆಸಿಕೊಳ್ಳುತ್ತವೆ.ಹಾಲಿನ ಪಾತ್ರೆ ಮೊಸರಿನ ಗಿಂಡಿ ,ಮಜ್ಜಿಗೆ ಗ್ಲಾಸ್ , ಅನ್ನದ ತಪ್ಪಲೆ ,ಸಾರಿನ ಬೋಗುಣಿ ,ಪಲ್ಯದ ಕಡಾಯಿ ಇನ್ನೂ ಅನೇಕ..ಪ್ರತಿ ಮನೆಯಲ್ಲೂ ಪಾತ್ರೆಗಳು ಕೇವಲ ಪಾತ್ರೆಗಳಾಗಿರದೆ ಆ ಮನೆಯ ಗೃಹಿಣಿಯರ ಒಡನಾಡಿಗಳಾಗಿರುತ್ತವೆ.ಮನೆಯವರ ಹಸಿವು ತಣಿಸುವ ಅಕ್ಷಯ ಪಾತ್ರೆಗಳಾಗಿರುತ್ತವೆ. ಮನೆಯಲ್ಲಿರುವ ಹಣ ಒಡವೆಯ ನಿಖರವಾದ ಸಂಖ್ಯೆಯ ನೆನಪು ಇರದಿರಬಹುದು.ಆದರೆ ತಮ್ಮ ಮನೆಯಲ್ಲಿರುವ ಪಾತ್ರೆಗಳ ತಟ್ಟೆ ಲೋಟಗಳು ಎಷ್ಟಿವೆ ಎಂದು ನೆನಪಿರದ ಗೃಹಿಣಿ ಇರಲಿಕ್ಕಿಲ್ಲ.ಸಾಕಷ್ಟು ಪಾತ್ರೆಗಳಿದ್ದರು ಅದರಲ್ಲಿ ಒಂದು ಕಾಣೆಯಾದರು ಅಥವಾ ಪಕ್ಕದ ಮನೆಯವರಿಗೆ ಕೊಟ್ಟಿದ್ದರು ಅವರು ವಾಪಸು ಕೊಡುವದು ಸ್ವಲ್ಪ ತಡವಾದರು ನೆನಪಿಸಿ ಪಡೆದುಕೊಳ್ಳುವದರಲ್ಲಿ ಮುಜುಗುರ ಪಟ್ಟುಕೊಳ್ಳಲಾರೆವು. ನಾಗರಿಕತೆ ಬದಲಾದಂತೆಲ್ಲ ಪಾತ್ರೆಗಳು ಬದಲಾದವು.ಈಗ ಇರುವ ನಾನ್ ಸ್ಟಿಕ್ ಪಾತ್ರೆಗಳು ಮುಟ್ಟಿದರೆ ಜರುಗುವಂತಹವು.ನನಗೆ ಸ್ಟೀಲ್ ಮತ್ತು ಅಲೂಮಿನಿಯಮ್ ಪಾತ್ರೆಗಳ ಮೇಲೆ ಇರುವ ಮಮತೆ ಈ ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಮೂಡಲೆ ಇಲ್ಲ. ಈಗ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಆಹಾರ ಹೊರಗಿನಿಂದ ಕಟ್ಟಿಸಿಕೊಂಡು ಬಂದು ಬಿಚ್ಚಿ ಅದರಲ್ಲೆ ಊಟ ಮಾಡುವ ಧಾವಂತದ ಜನರಿಗೆ ಪಾತ್ರೆಗಳ ಅವಶ್ಯಕತೆಯು ಅಷ್ಟಾಗಿ ಕಾಣದು. ಹಿಂದಿನವರಂತೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಬೇಯಿಸುವ ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ .ಇಬ್ಬರು ನಾಲ್ವರು ಇರುವ ಮನೆಗಳಲ್ಲಿ ಇರುವ ಪಾತ್ರೆಗಳು ಅವರ ಎರಡರಷ್ಟೆ. ಕೆಲವರು ಪಾತ್ರೆಗಳನ್ನು ತೊಳೆಯುವ ತಾಪತ್ರಯ ತಪ್ಪಿಸಿಕೊಳ್ಳಲು ಬಳಸಿ ಬಿಸಾಡುವ ತಟ್ಟೆ ಲೋಟಗಳನ್ನೆ ದಿನಾಲು ಉಪಯೋಗಿಸುವರು. ಕೆಲಸದ ಹೊರೆ ಕಡಿಮೆಯಾದಷ್ಟೂ ಮಾಲಿನ್ಯ ಹೆಚ್ಚುತ್ತಲೆ ಇದೆ. ಮಹಿಳೆಯರಿಗೂ ಮತ್ತು ಪಾತ್ರೆಗಳಿಗೂ ಇರುವ ನಂಟು ನಿರಂತರ ಬೆಸೆದಿರುವದು.ಬೆಳಗಾದರೆ ಗೃಹಿಣಿಯರ ಕೈಯಲ್ಲಾಡುವ ಪಾತ್ರೆಗಳ ಟಿನ್ ಟಿನಿ ನಾದ ಪ್ರತಿ ಮನೆಯ ಸುಪ್ರಭಾತ.ಅದರೊಂದಿಗೆ ಮನೆಯವರ ಮತ್ತೊಂದು ಭರವಸೆಯ ಬೆಳಕಿನ ಉದಯ. ******************************************************

ಪಾತ್ರೆಗಳ ಲೋಕದಲ್ಲಿ.. Read Post »

ಇತರೆ, ಪ್ರಬಂದ

ಅಳುವನ್ನು ಅನುಸರಿಸಿ ಹೋಗುವವನೇ ಕವಿ

ಪ್ರಬಂಧ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಸರಿತಾಮಧು ಹಕ್ಕಿಯಂಥ ಸಣ್ಣ ಜೀವಿಯೊಂದರ ಅಳುವಿಗೂ ಕಿವಿಯಾಗಬಲ್ಲವನೇ ಕವಿ ಎಂಬ ಮಾತು ಅಕ್ಷರಶಃ ಸತ್ಯ. “ರುದಿತಾನುಸಾರಿ ಕವಿಃ ” ಎಂಬುದಾಗಿ ಮಹರ್ಷಿ ವಾಲ್ಮೀಕಿಯನ್ನು ಕಾಳಿದಾಸ ಕವಿ ಹೆಸರಿಸಿ, ಹಕ್ಕಿಯ ಶೋಕ ಹಾಗೂ ಸೀತೆಯ ಪ್ರಲಾಪ ಎರಡನ್ನೂ ಹೃದ್ಯವಾಗಿಸಿಕೊಂಡ ಮಹಾನ್ ಕವಿ , ಅಂದರೆ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಎಂದರ್ಥ. ನವರಸಗಳಲ್ಲಿ ಕರುಣ ರಸವೊಂದೇ ಇರುವುದು ಎಂಬ ಮೀಮಾಂಸೆಗೂ ಪಾತ್ರನಾದ ಕವಿ ವಾಲ್ಮೀಕಿ.      ಸ್ವತಃ ಬೇಡ ನಾಗಿದ್ದು ರತ್ನಾಕರ ಎಂಬ ಪೂರ್ವಾಶ್ರಮದ ನಾಮಧೇಯದ ವಾಲ್ಮೀಕಿ ನಾರದ ಮುನಿಗಳ ಉಪದೇಶದಿಂದ ರಾಮ ನಾಮ ಜಪದಲ್ಲಿ ತೊಡಗಿ  , ಧ್ಯಾನಾಸಕ್ತನಾಗಿ ಮನಃಪರಿವರ್ತನೆಯಾದ ಕಥೆ ಎಲ್ಲರಿಗೂ ಗೊತ್ತಿರುವಂಥದ್ದು. ಹೀಗಿರುವಾಗ ಒಮ್ಮೆ ವಾಲ್ಮೀಕಿ ಮಹರ್ಷಿಗಳು ತಮಸಾ ನದೀ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿ ಜೋಡಿಯೊಂದನ್ನು ಆನಂದತುಂದಿಲರಾಗಿ ವೀಕ್ಷಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಬೇಡನೊಬ್ಬನು ತನ್ನ ಬಾಣದಿಂದ ಗಂಡುಹಕ್ಕಿಯನ್ನು ಕೊಲ್ಲುತ್ತಾನೆ. ಆ ಸಮಯಕ್ಕೆ ಅದರ ಸಂಗಾತಿ ಹೆಣ್ಣು ಹಕ್ಕಿಯು ವಿರಹದಿಂದ ಪ್ರಲಾಪಿಸುವುದು.ಇಂತಹ ಹೃದಯ ವಿದ್ರಾವಕ ಸನ್ನಿವೇಶವನ್ನು ಕಂಡು ಮಹರ್ಷಿಗಳು ಕರುಣೆ ಹಾಗೂ ಅತೀವ ದುಃಖದಿಂದ ಬೇಡನನ್ನು ಶಪಿಸುತ್ತಾರೆ: “ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ  ಸಮಾಃ ಯತ್ರ್ಕೌಂಚ ಮಿಥುನಾದೇಕ ಮವಧೀಃ  ಕಾಮಮೋಹಿತಮ್” ಅಂದರೆ ಕಾಮಮೋಹಿತವಾದ ಈ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ ಶಾಂತಿ ಲಭಿಸಲಾರದು ಎಂಬ ಶೋಕದ ನುಡಿಯೇ ಶೋಕವಾಯಿತು. ಬ್ರಹ್ಮದೇವನ ಇಚ್ಛೆಯಂತೆ ನಾರದರು ತನಗೆ ಹೇಳಿದ್ದ ರಾಮನ ಕಥೆಯನ್ನು ೨೪೦೦೦ ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು. ಹೀಗೆ ಸಂಕಟಕ್ಕೆ ಮಿಡಿದ ಮನಸ್ಸೊಂದು ಬೃಹತ್ ಕಾವ್ಯದ ಉಗಮಕ್ಕೆ ಪ್ರೇರಣೆಯಾಯಿತು. ಅಲ್ಲಿಯವರೆಗೂ ವಾಲ್ಮೀಕಿಯಲ್ಲಿ ಹುದುಗಿದ್ದ ಕಾವ್ಯ ಶಕ್ತಿ ಪ್ರಕಟವಾಯಿತು ಅವನ ಕಾವ್ಯ ಪ್ರೌಢಿಮೆಯು ನಂತರದ ಕವಿಗಳಿಗೆ ದಾರಿದೀಪವಾಯಿತು.     ಆಂಜನೇಯನಿಗೂ ಅವನ ಶಕ್ತಿ ಸಾಮರ್ಥ್ಯಗಳ  ಅರಿವು ಇರಲಿಲ್ಲವಂತೆ. ತನ್ನಿಂದೇನಾಗದು , ತಾನು ಯಶಸ್ವಿಯಾಗುವುದಿಲ್ಲ ,ತಾನೊಬ್ಬ ಸಾಧಾರಣ ವ್ಯಕ್ತಿ ಎಂದೇ ಆತ ತಿಳಿದಿರುತ್ತಾನೆ.ಇತರರು ಹೇಳಿ , ನೀನು ಮಾಡಬಲ್ಲೆ ಎಂದು ಹುರಿದುಂಬಿಸಿದರೆ ಮಾತ್ರ , ಅವನ ಶಕ್ತಿ ಸಾಮರ್ಥ್ಯ ಬೆಳಕಿಗೆ ಬರುತ್ತದೆ. ಇದು ಅವನಿಗೆ ಸೂರ್ಯದೇವನಿತ್ತ ಶಾಪ! ಅಂದರೆ ಈ ಕಥೆಯಂತೆ ವಾಲ್ಮೀಕಿಯಲ್ಲಿ ಸುಪ್ತ ವಾದ ಕಾವ್ಯಶಕ್ತಿಗೆ   ಶೋಕ ಪ್ರಚೋದನೆ ನೀಡಿತು. ಕ್ಕೊಕ್ಕರೆ, ಸಾರಸ, ಬೆಳ್ಳಕ್ಕಿ ಎಂದೂ ಕರೆಯಲ್ಪಡುತ್ತದೆ ಈ ಕ್ರೌಂಚ ಹಕ್ಕಿ.  ಸಂಸ್ಕೃತ ದಲ್ಲಿ ಸಾರಸ ಎಂದರೆ ಕೆರೆಯ ಹಕ್ಕಿ ಎಂದರ್ಥ. ಇದನ್ನು ಸಾರಂಸ ಎಂದೂ ಕರೆಯಲಾಗುತ್ತದೆ. ಯುರೋಪ್, ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಾಣಬರುವ ಸಾರಸ್ ಕೊಕ್ಕರೆ ಬಗ್ಗೆ ನನ್ನ ಗಮನ ಸೆಳೆದ ಪದ್ಯ ಪಂಜಾಬಿನ ಕವಿ ಮನಮೋಹನ ಸಿಂಗ್ ( ಮಾಜಿ ಪ್ರಧಾನಿ ,ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಲ್ಲ) ರವರು ಬರೆದಿರುವ “To a pair of sarus cranes”. ವಾಲ್ಮೀಕಿ ಮಹರ್ಷಿಗಳನ್ನು ಕಾಡಿದಂತಹ ಭಾವವೊಂದು ಪುನರಾವರ್ತನೆ ಆಗಿರುವಂತೆ ಇದೆ ಈ ಪದ್ಯದ ಸಾಲುಗಳಲ್ಲಿ. The male was shot as he necked to pull the reluctant sun out from the rim of horizon She flew crying As he was picked up hands and jaws And a proud neck was humbled to lie like dirty linen in a coarse washing bag  She circled the sky In movements of grace over his disgraceful end The killers went away and she returned to the death’s scene With grief that inscribed its intensity in dots and pits Like the Morse code of bird’s sorrow Transmitted to the air With her beak she kissed a few feathers Picked the ones that wind had not taken away and sat to hatch The blood stained feathers into a toddling chick A wave of the seas she had never seen Came to her from far away ಈ ಪದ್ಯದ ಮೊದಲ ಸಾಲುಗಳಲ್ಲಿ ಸೂರ್ಯೋದಯ ಸಮಯಕ್ಕೆ ಗೂಡಿನಾಚೆ ತನ್ನ ಉದ್ದನೆಯ ಕತ್ತು ಚಾಚುವಷ್ಟರಲ್ಲಿ ಬೇಡನೊಬ್ಬನ ಬಾಣದ ಗುರಿಗೆ ಗಂಡುಹಕ್ಕಿ ಬಲಿಯಾಗಿಬಿಟ್ಟಿತು.  ಹೆಣ್ಣು ಕೊಕ್ಕರೆಯು ಪ್ರಲಾಪಿಸುತ್ತಾ ಅತ್ತ ಧಾವಿಸುತ್ತಿರಲು ಬೇಡನು ಇದಾವುದನ್ನು ಲೆಕ್ಕಿಸದೇ ತನ್ನ ಹಳೆಯ ಕೈಚೀಲದೊಳಗೆ ಸತ್ತ ಗಂಡು ಕೊಕ್ಕರೆಯನ್ನು ನಿರ್ದಾಕ್ಷಿಣ್ಯವಾಗಿ ಎಳೆದುಕೊಂಡು ಹೊರಟೇಬಿಟ್ಟನು. ಆಕಾಶದಲ್ಲಿ ಪ್ರದಕ್ಷಿಣೆ ಹಾಕುತ್ತಾ ತನ್ನ ಸಂಗಾತಿ ಬಿದ್ದ ಜಾಗಕ್ಕೆ ಬರಲು , ರಕ್ತ ಸಿಕ್ತವಾಗಿ ಬಿದ್ದ ಪುಕ್ಕಗಳನ್ನು ಕೊಕ್ಕಿನಿಂದ ಎತ್ತಿ ಮುದ್ದಿಸಿ, ತನ್ನೆಲ್ಲಾ ಗರಿಗಳನ್ನು ಅದರ ಮೇಲೆ ಮುದುಡಿ ಮೊಟ್ಟೆ ಇಡುವಂತೆ ಕುಳಿತು ಬಿಟ್ಟಿತು.  ಸಮುದ್ರದಲೆಗಳ ಮೇಲಿಂದ ತೇಲಿ ಬರುವ ಬಿರುಗಾಳಿಗೆ ಆ ದುಃಖ ತಪ್ತ ಹೆಣ್ಣು ಹಕ್ಕಿಯನ್ನು ಗಂಡು ಹಕ್ಕಿಯ ಸಮೀಪಕ್ಕೆ ಕರೆದೊಯ್ದಿತು.   ಕವಿ ಇಲ್ಲಿ ಹೇಳುವುದೆಂದರೆ ಹೆಣ್ಣು ಹಕ್ಕಿಯ ಪ್ರೀತಿ ಮನುಷ್ಯರಿಗೂ ಮಿಗಿಲಾದದ್ದು. ಯಕಃಶ್ಚಿತ್ ಪಕ್ಷಿ ಅಥವಾ ಪ್ರಾಣಿ ಎಂದು ಬೇಟೆಯಾಡುವ ಮಾನವನಿಗೆ ಅವುಗಳ ಮೂಕವೇದನೆ ಅರಿವಾಗುವುದೆಂದಿಗೆ? ಹಾಗಾಗಿಯೇ ಮಹಾತ್ಮ ಗಾಂಧಿಯವರು ಹೇಳುತ್ತಾರೆ : “The greatness of nation and it’s moral progress can be judged by the way its animals are treated” ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಅಲ್ಲವೇ? ಮೋಜಿಗಾಗಿ, ಆಹಾರಕ್ಕಾಗಿ, ವಿಹಾರಕ್ಕಾಗಿ ಹೇಯಕೃತ್ಯ ಪಕ್ಷಿ- ಪ್ರಾಣಿಗಳ ಬೇಟೆ. ಒಂದುವೇಳೆ ಮಾನವರಾದ ನಮ್ಮ ಚರ್ಮವನ್ನು ಸುಲಿದು ರಸ್ತೆ ಬದಿಯ ಅಂಗಡಿಗಳಲ್ಲಿ ತೂಗುಹಾಕಿದ್ದರೆ, ಬೆನ್ನಟ್ಟಿ ಬೇಟೆ ಆಡಿದ್ದರೆ, ಹರಕೆಯ ನೆಪದಲ್ಲಿ ಬಲಿ ಕೊಡುವಂತಿದ್ದರೆ ಮಾತು ಬರುವ ನಾವು ಸುಮ್ಮನಿರುತ್ತಿದ್ದೆವಾ? ಅವುಗಳು ಕೂಡಾ ನಮ್ಮಂತೆಯೇ ಅಥವಾ ನಮಗಿಂತಲೂ ಮಿಗಿಲು ಎನ್ನುವ ಭಾವನೆ ನಮ್ಮದಾಗಲಿ. ಪ್ರಾಣಿ ಪಕ್ಷಿಗಳ ಮೂಲಕವೇ ಹೆಣೆದಿರುವ ಸಾವಿರಾರು ಮೌಲ್ಯಯುತ ಕಥೆಗಳಿವೆ.ಅವುಗಳೊಡನೆ ನಮ್ಮ ಸಾಂಗತ್ಯ ಚಿರಂತನ. **************************************************************

ಅಳುವನ್ನು ಅನುಸರಿಸಿ ಹೋಗುವವನೇ ಕವಿ Read Post »

ಇತರೆ, ಪ್ರಬಂದ

ಲಲಿತ ಪ್ರಬಂಧ

ಲಲಿತ ಪ್ರಬಂಧ ನನ್ನ ಲಿಯೋ ಸಮತಾ ಆರ್.   ಒಂದು ದಿನ ಎಂದಿನಂತೆ ಶಾಲೆಗೆ ಹೊರಟು ಸಿದ್ದಳಾಗಿ ಹೊರಬಂದು ಕಣ್ಣಾಡಿಸಿದರೆ, ಲಿಯೋ ಅವನಿರುವ ಜಾಗದಲ್ಲಿ ಇಲ್ಲ!”ಲಿಯೋ ರೆಡಿ ಏನೋ, ಎಲ್ಲಿದ್ದೀಯೋ’?”ಎಂದಾಕ್ಷಣ”ನಾನಾಗಲೇ ರೆಡಿಯಾಗಿ ನಿಂತಿದ್ದೀನಿ ಬಾರಕ್ಕ”ಎಂಬ ಉತ್ತರ ಕೇಳಿಸಿತು, ಆದರೆ ಕಾಣಲಿಲ್ಲ. “ಲೋ, ಎಲ್ಲೋ ಇದಿಯಾ, ಇರೋ ಜಾಗದಲ್ಲಿರೋಕೆ ನಿಂಗೇನೋ ಕಾಯಿಲೆ! ಈಗ್ಲೇ ಲೇಟಾಗಿದೆ ,ಇನ್ನು ನಿನ್ನನ್ನು ಹುಡುಕಿಕೊಂಡು ಬೇರೆ ಸಾಯ್ಬೇಕು” ಎಂದು ಸಿಟ್ಟಿನಿಂದ ಕಿರುಚಿದಾಗ,” ಅಕ್ಕ ಒಂಚೂರು ಈ ಕಡೆ ನೋಡು”ಎಂದು ನನ್ನ ಬಲಬದಿಯ ಹತ್ತು ಮಾರು ದೂರದಿಂದ ಉತ್ತರ ಬಂತು.”ಅಯ್ಯೋ ದೇವರೇ! ಯಾಕೆ ನಿಂತಿದ್ದೀಯ ಮರದ ಕೆಳಗೆ? ಯಾವುದಾದರೂ ಕಾಗೆ ನಿನ್ನ ಮೇಲೆ ಹೇತರೆ ಅದನ್ನು ತೆಗೆಯಲು ಇನ್ನೂ ಐದು ನಿಮಿಷ ಹಾಳು, ಈಗ್ಲೇ ಲೇಟಾಗಿದೆ, ಬಸ್ ಹೊರಟು ಹೋದರೆ ಸ್ಕೂಲಿಗೆ ಲೇಟಾಗ ಲ್ವೇನೋ? ಒಂದಿಷ್ಟಾದರೂ ಕಾಮನ್ ಸೆನ್ಸ್ ಇದೆಯಾ ನಿನಗೆ”, ಎಂದು ಗೊಣಗುತ್ತಾ ಅವನನ್ನು ಎಳೆದುಕೊಂಡು ಧಾವಿಸಿದೆ. “ಅಕ್ಕ, ನಾನೇನ್ ಮಾಡ್ಲಿ, ನಿನ್ನ ಗಂಡನೇ ನನ್ನ ಸುಮ್ಮನೆ ಇರೋ ಜಾಗದಲ್ಲಿ ಇರಲು ಬಿಡದೆ,’ ನಿಮ್ಮಕ್ಕ ಬರೋ ಗಂಟ ಬಿಸಿಲಲ್ಲಿ ಯಾಕೋ ಒಣಗುತ್ತಿಯಾ? ಮರದ ಕೆಳಗೆ ನೆರಳಿನಲ್ಲಿ ಇರಬಾರದ’ ಅಂತ ಅಲ್ಲಿ ನಿಲ್ಲಿಸಿದ, ನಂಗ್ಯಾಕೆ ಸುಮ್ಮನೆ ಬೈದೆ ನೀನು”, ಎಂದು ಗುರ್ ಗುಟ್ಟಿದ.      “ಲೋ, ಮೊದಲು ಸರಿಯಾಗಿ ರಸ್ತೆ ನೋಡಿಕೊಂಡು ಹೋಗೋದು ಕಲಿ, ಎಷ್ಟೊಂದು ಟ್ರಾಫಿಕ್ ಇದೆ, ನಿನ್ನತಂಟೆಗೆ ಹೋಗಬೇಡ ಅಂತ ನನ್ ಗಂಡಂಗೆ ನಾನು ಹೇಳಿಕೊಳ್ಳುತ್ತೇನೆ, ಈಗ ನನಗೆ ತೊಂದರೆ ಆಗದ ಹಾಗೆ ಸುಮ್ನೆ ಬಾ,” ಎಂದಿದ್ದಕ್ಕೆ” ಅಕ್ಕ ಇದೇನು ನಾನು ಕಾಣದೇ ಇರೋ ಟ್ರಾಫಿಕ್ ಅಲ್ಲ, ಹೆದುರ್ಕೋಬೇಡಾ ಬಾ, ನಾನೆಲ್ಲ ಮ್ಯಾನೇಜ್ ಮಾಡ್ತೀನಿ “ಎಂದು ನನ್ನನ್ನು ತನ್ನ ಹೆಗಲಿನಲ್ಲಿ ಹೇರಿಕೊಂಡು ಮುನ್ನುಗ್ಗಿದ.       ಬಸ್ ಸೇರುವ ಮುನ್ನ ಲಿಯೋನನ್ನ  ಮಾಮೂಲಿನಂತೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಅವನ ಬಾಯಿಗೆ ಬೀಗ ಹಾಕಿ, ಓಡೋಡುತ್ತ ,ಆಗಲೇ ಹೊರಟು ನಿಂತಿದ್ದ ಬಸ್ ಹತ್ತಿದ್ದಾಯಿತು. ಬಸ್ನಲ್ಲಿ ಕುಳಿತು ಒಂದಿಷ್ಟು ಸುಧಾರಿಸಿಕೊಂಡು ಯೋಚಿಸುತ್ತಿರುವಾಗ ಒಮ್ಮೆಗೆ ಲಿಯೋನ ಬಗ್ಗೆ ಅಪಾರ ಪ್ರೀತಿ ಉಕ್ಕಿಬಂತು .”ಅಯ್ಯೋ ಪಾಪ ಅವನಿಲ್ಲದೇ ಹೋಗಿದ್ದರೆ ನನ್ನ ಕಥೆ ಏನಾಗುತ್ತಿತ್ತು ?ಎಲ್ಲಿಗೆ ಕರೆದರೂ ಜೊತೆಯಲ್ಲಿ ಬರ್ತಾನೆ ,ಎಷ್ಟು ಭಾರ ಹೇರಿ ದರೂಸುಮ್ನೆ ಹೊರುತ್ತಾನೆ ,ಆಗಾಗ ಚೆನ್ನಾಗಿ ಹೊಟ್ಟೆ ತುಂಬಿಸಿ ,ಮೈತೊಳೆದು ಕೊಟ್ಟರೆ ಅದೇ ಅವನಿಗೆ ಸ್ವರ್ಗ. ಈ ಶನಿವಾರ ಅವನಿಗೊಂದು ಒಳ್ಳೆ ಸರ್ವಿಸ್ ಕೊಡಿಸ ಬೇಕು” ಅಂದುಕೊಂಡೆ.     ಅದರಂತೆ ಆ ಶನಿವಾರ ಲಿಯೋನನ್ನು ಹೊರಡಿಸಿ ಕೊಂಡು, ಗರಾಜಿಗೆ ಹೋಗಿ ಅಲ್ಲಿಯ ಮೆಕ್ಯಾನಿಕ್ ಕೈಗೆ ಒಪ್ಪಿಸಿದಾಗ ಆತ ,”ಪರ್ವಾಗಿಲ್ಲ ಮೇಡಂ ,ಸ್ಕೂಟಿ ಚೆನ್ನಾಗಿ ಇಟ್ಟುಕೊಂಡಿದ್ದೀರಾ, ಅಂತ ಏನು ತೊಂದರೆ ಕಾಣಿಸ್ತಿಲ್ಲ ,ನಾಳೆ ಬಂದ್ ತಗೊಂಡು ಹೋಗಿ ,ಸರ್ವಿಸ್ ಮಾಡಿ ಇಟ್ಟಿರುತ್ತೇನೆ ,ಇನ್ನೊಂದು ವರ್ಷ ಯಾವ ಯೋಚನೆ ಇರಲ್ಲ “ಎಂದ.     ಅಲ್ಲಿಂದ ಹೊರಟು ಮನೆಯ ಕಡೆಗೆ ಕಾಲೆಳೆದುಕೊಂಡು ಹೋಗುವಾಗಲೂ ಲಿಯೋನದೇ ಯೋಚನೆ. ನನ್ನ ಲಿಯೋನನ್ನು ಯಾರಾದರೂ ಸ್ಕೂಟಿ ಗೀಟಿ ಎಂದರೆ ನನಗೆಕೆಟ್ಟ ಕೋಪ ಬರುತ್ತದೆ. ಆತ ನನ್ನ ತಮ್ಮ ,ನನ್ನ ಆತ್ಮಬಂಧು, ನನ್ನೆಲ್ಲಾ ಗುಟ್ಟುಗಳ ಕಿವಿ, ಎಲ್ಲಿಗೆ  ಬೇಕಾದರೂ ಯಾವಾಗ ಬೇಕಾದರೂ ಕರೆದೊಯ್ಯುವ ವೀರ ,ಎಲ್ಲದಕ್ಕಿಂತ ಮುಖ್ಯವಾಗಿ ಪತಿಯ ಅವಲಂಬನೆಯನ್ನು ತಪ್ಪಿಸಿ ರುವ ಪರದೈವ.     ಈಗ ಒಂದೈದು ವರ್ಷಗಳ ಹಿಂದೆ, ಕೆಲಸಕ್ಕೆ ಸೇರಿ ಎಂಟು ವರ್ಷ ಸೇವೆ ಸಲ್ಲಿಸಿದ್ದ ಶಾಲೆಯಿಂದ ವರ್ಗವಾಗಿ ಮನೆಗೆ ಸಮೀಪದಲ್ಲಿದ್ದ ಶಾಲೆಗೆ ಬಂದದ್ದಾಯಿತು. ಮೊದಲಿದ್ದ ಶಾಲೆ ಮನೆಯಿಂದ ದೂರ ಎಂದು ದಿನವೂ ಬಸ್ಸಿನಲ್ಲೇ ಅಲೆದಾಡಿದ್ದೆ. ಈಗಿನ ಹೊಸ ಶಾಲೆ ಮನೆಗೆ  ಕಿಲೋಮೀಟರ್ ಗಳ ಲೆಕ್ಕದಲ್ಲಿ ಹತ್ತಿರವಿದ್ದರೂ , ಮನೆಯಿಂದ ದೂರವಾಗಿದ್ದ ಆಟೋ ನಿಲ್ದಾಣಕ್ಕೆ ನಡೆದುಹೋಗಿ ,ಅಲ್ಲಿ ನಿಮಿಷ ಗಟ್ಟಳೆ ಶಾಲೆ ಇರುವ ಏರಿಯಾಗೆ ಹೋಗುವ ಆಟೋವನ್ನು ಕಾಯಬೇಕಿತ್ತು. ಆಟೋ ಸಿಕ್ಕರೂ ಶಾಲೆಯಿಂದ 2 ಪರ್ಲಾಂಗು ದೂರದಲ್ಲಿ ಇಳಿದುಕೊಂಡು, ನಡೆದುಕೊಂಡು ಶಾಲೆ ತಲುಪುವಷ್ಟರಲ್ಲಿ ಸಾಕಾಗುತ್ತಿತ್ತು.ಇದೆಲ್ಲಾ ರಗಳೆಯೇ ಬೇಡವೆಂದು ಸಹೋದ್ಯೋಗಿಗಳಲ್ಲಿ  ಇಬ್ಬರುತಮ್ಮ ತಮ್ಮ ಸ್ಕೂಟಿ ಗಳನ್ನು ಏರಿ ಆರಾಮಾಗಿ ಓಡಾಡುತ್ತಿದ್ದರು.    ಸ್ವಲ್ಪ ದಿನ ಆಟೋದಲ್ಲಿ ಹೈರಾಣಾದ ನಂತರ ನನಗೂ ನಾನ್ಯಾಕೆ ಸ್ಕೂಟಿ ತಗೊಂಡು ಆರಾಮಾಗಿ ಸುಯ್ ಎಂದು ಶಾಲೆಗೆ ಬರಬಾರದು ಎನಿಸಿತು. ಜೊತೆಗೆ ಎಲ್ಲಿಗೆ ಹೋಗಬೇಕಾದರೂ ನನ್ನ ಗಂಡನನ್ನು” ರೀ “ಎನ್ನುತ್ತಾ ಅವನ ಹಿಂದೆಯೇ ಸುತ್ತ ಬೇಕಿತ್ತು. ಈಗ ನಾನೇ ನಾನಾಗಿ ,ನನಗೆ ಬೇಕಾದ ಕಡೆಗೆಲ್ಲ ಸುತ್ತುವ ಸಲುವಾಗಿ ಲೋನ್ ಮಾಡಿಸಿಕೊಂಡು ಸ್ಕೂಟಿ ಖರೀದಿಸಲು ನಿರ್ಧರಿಸಿದೆ.    ” ಇದೊಂದು ಅವತಾರ ಬೇರೆ ಬಾಕಿ ಇತ್ತು” ಎಂದ ಮಾತು ಕೇಳಿಸಲಿಲ್ಲ   ನಂತರ ಎದುರಾದದ್ದು ಆಯ್ಕೆಯ ಪ್ರಶ್ನೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ತರಹೇವಾರಿ ಮಾದರಿಯ, ಬೆಲೆಯ ,ಸ್ಕೂಟಿ ಗಳ ಲೋಕದಿಂದ ಯಾವುದನ್ನು ಮನೆಗೆ ತರುವುದು? ಶೋರೂಮ್ ನಿಂದ ಶೋ ರೂಂಗೆ ಅಲೆದಾಡಿ ,ನನ್ನ ಬಜೆಟ್ ಗೆ ಹೊಂದಬೇಕು, ಓಡಿಸಲು ಹಗುರವಾಗಿ ಇರಬೇಕು ಎಂದು ಹುಡುಕಾಡಿದೆ. ಆಗ ನನಗೆ ಶೋ ರೂಂ ಒಂದರಲ್ಲಿ ಹಳದಿ ಬಣ್ಣದ ಸುಂದರಾಂಗ ವಿದೇಶಿ ಸ್ಕೂಟಿ ಒಬ್ಬನ ಮೇಲೆ ಕಣ್ಣುಬಿತ್ತು. ಟೆಸ್ಟ್ ರೈಡ್ ಎಂದು ಓಡಿಸಿಯೂ ನೋಡಿಯಾಯಿತು. ಎಷ್ಟು ಹಗುರ !ಎಂತಹ ರೋಡ್ ಗ್ರಿಪ್! ಎಂತಹ ಚೆಲುವ! ಎಂದು ಅವನ ಮೇಲೆ ಆಸೆಯಾಯಿತು. ಆದರೆ ಅವನ ದರ ಕೇಳಿದಾಗ ಧರೆಗಿಳಿದು ಹೋಗಿ ,ಅವನೊಬ್ಬ ಕೈಗೆಟುಕದ ನಕ್ಷತ್ರ ಎಂದುಕೊಂಡು ಸುಮ್ಮನಾದೆ. ಹಾಗೆ ಹುಡುಕಿದಾಗ ಕಪ್ಪು ಬಣ್ಣದ, ಸಾಕಷ್ಟು ಸ್ಟೈಲಿಶ್ ಆಗಿದ್ದ ,ಹಗುರವಾಗಿ ತೇಲುವ ಹಾಗೆ ಓಡುವ, ಜೊತೆಗೆ ನನ್ನ ಪರ್ಸುನಲ್ಲೂ ಹಿಡಿಯುವಂತಹ ನನ್ನ ಲಿಯೋ ಒಂದು ಹೊಸ ಶೋರೂಂನಲ್ಲಿ ಸಿಕ್ಕ. ಸರಿ ,ಖರೀದಿಸಿ ಮನೆಗೆ ತಂದ ದಿನವೇ ಮಕ್ಕಳಿಬ್ಬರನ್ನು ಕೂರಿಸಿಕೊಂಡು ನಮ್ಮ ಬಡಾವಣೆಯಲ್ಲಿ ನಾಲ್ಕು ಐದು ಸುತ್ತುಸುತ್ತಿಸಿ ಖುಷಿ ಪಟ್ಟಿದ್ದಾಯಿತು.    ಚಿಕ್ಕಂದಿನಲ್ಲಿ ಶಾಲೆಗೆ ವರುಷಗಟ್ಟಲೆ ಸೈಕಲ್ ಹೊಡೆದದ್ದು ಈಗ ಬಳಕೆಗೆ ಬಂತು. ನೀರಿಗಿಳಿದ ಮೀನಿನಂತೆ ಸಲೀಸಾಗಿ ಲಿಯೋ ಎರಡೇ ದಿನಗಳಲ್ಲಿ ನನ್ನ ಹಿಡಿತಕ್ಕೆ ಬಂದ.ಸರಿ, ಮೊದಮೊದಲು ಇಪ್ಪತ್ತು ಮೂವತ್ತು ಕಿಲೋಮೀಟರ್ ಪ್ರತಿ ಗಂಟೆಗೆ ಸ್ಪೀಡಿನಲ್ಲಿಓಡಿಸಿದ್ದಾಯಿತು.ಸಹೋದ್ಯೋಗಿಗಳು ,”ಮೇಡಂ ನಿನ್ನೆ 1 ಸೈಕಲ್ ನಿಮ್ಮನ್ನು ಓವರ್ಟೇಕ್ ಮಾಡಿದ್ದು ನೋಡಿದೆ ಎಂದು ಕಿಚಾಯಿಸಿದರೂ “ಅರೆ, ಸ್ಪೀಡಾಗಿ ಓಡಿಸಿ ಎಲ್ಲೋ ಸೇರಿಕೊಳ್ಳುವ ಬದಲು, ನಿಧಾನವಾಗಿ ಓಡಿಸಿಮನೆಸೇರಿಕೊಳ್ಳುತ್ತೇನೆ ಬಿಡ್ರಿ” ಎಂಬ ಭಂಡತನದ ಉತ್ತರ ನನ್ನಿಂದ. ಲಿಯೋ ನನ್ನು ಏರಿದ ಬಳಿಕ ನನ್ನ ಮತ್ತು ಅವನ ಇಬ್ಬರ ಬೇರೊಂದು ಲೋಕತೆರೆದುಕೊಳ್ಳುತ್ತದೆ .ಮೊದಮೊದಲು ಮಾತನಾಡಲು ಹಿಂಜರಿದರೂ, ನಂತರ ನಿಧ ನಿಧಾನವಾಗಿ ನನ್ನನ್ನು ಕೇಳಲಾರಂಭಿಸಿದ. ಮನದಲ್ಲಿರುವ ಎಲ್ಲವೂ ,ಹೇಳಲಾಗದ್ದು ಹೇಳಬಾರದ್ದು,ಎಲ್ಲವನ್ನು ಲಿಯೋನ ಕಿವಿಗೆ ತುಂಬಿ ನಿರಾಳವಾಗುತ್ತೇನೆ.     ದಿನವೂ ಶಾಲೆಗೆ ಸರಿಯಾದ ಸಮಯಕ್ಕೆ ಹೋಗಬೇಕ? ಮಕ್ಕಳನ್ನು ಶಾಲೆಗೆ ಬಿಡಬೇಕ? ಡ್ಯಾನ್ಸ್ ಕ್ಲಾಸಿಂದ ಕರೆತರಬೇಕ? ಸುಮ್ಮನೆ ಊರು ಸುತ್ತಬೇಕ? ಆಸ್ಪತ್ರೆಯಲ್ಲಿರುವ ನೆಂಟರನ್ನು ನೋಡಬೇಕ?ಎಟಿಎಂನಿಂದ ಹಣ ತರಬೇಕ? ಎಲ್ಲದಕ್ಕೂ”ನಡಿಯಕ್ಕ” ಎಂದು ಈತ ಸಿದ್ಧ.ಒಂದು ದಿನ ಸಿಗ್ನಲ್ ನಲ್ಲಿ ಕೆಂಪುದೀಪ ಹಸಿರಾಗಿ ಇನ್ನೇನು ನುಗ್ಗಲು ಸಿದ್ಧರಾದಾಗ ಪಕ್ಕದ ಬೈಕ್ ನ ಪಿಲಿಯನ್ ನಲ್ಲಿದ್ದವ “ಗಾಡಿ ಒಳ್ಳೆ ಸಕ್ಕತ್ತಾಗಿದೆ”ಎನ್ನುತ್ತಾ ಹೋಗಬೇಕ!”ಲಿಯೋ ನಡಿಯೋ, ಆ ನನ್ ಮಗನ್ನ ಗುದ್ದಿ ಬೀಳಿಸಿ ,ಸರ್ಯಾಕ್ಬುದ್ಧಿ ಕಲಿಸೋಣ” ಎಂದರೆ “ಹೋಗ್ಲಿ ಬಿಡಕ್ಕ,  ಹುಡುಗರೇ ಹಂಗೆ ,ಯಾಕೆ ನೀನೇನು ಚೆನ್ನಾಗಿಲ್ವಾ ?”ಎಂದು ರೇಗಿಸಬೇಕೆ?    ಮತ್ತೊಂದು ದಿನ ರಾತ್ರಿ ಗಂಡನೊಂದಿಗೆ ಸಿಕ್ಕಾಪಟ್ಟೆಜಗಳವಾಡಿ ,”ಇನ್ನು,ನಾನಿರಲಾರೆ” ಎಂದು ಕೂಗಾಡಿ ಲಿಯೋಜೊತೆರಾತ್ರಿಯ ತಂಗಾಳಿಯಲ್ಲಿ ಮೈ ನೆನೆ ಸುತ್ತ ಹೋಗುತ್ತಿರುವಾಗ,” ಅಕ್ಕ ,ಮಕ್ಕಳಿಗೆ ಎನ್ ಅಡಿಗೆ ಮಾಡಿದ್ದೀಯ”ಎಂದ ಮಾತಿಗೆ ಮನೆಗೆ ಹಿಂದಿರುಗಿ ಮಕ್ಕಳನ್ನು ತಬ್ಬಿ ಕೊಂಡಿದ್ದಾಯಿತು.    ಹೀಗಿರುವಾಗ ಒಂದು ದಿನ ಹೋಗುವಾಗ “ಅಕ್ಕ ಒಂದು ಹಾಡು ಹೇಳಕ್ಕ” ಎಂದು ಕೇಳಿಕೊಂಡಾಗ ,ನನ್ನ ಕತ್ತೆರಾಗವನ್ನು ನಾನೇ ಮೆಚ್ಚಿಕೊಳ್ಳುತ್ತಾ, ಹಾಡುತ್ತ ,ತೇಲುತ್ತಾ ಹೋಗುತ್ತಿರುವಾಗ ಅದ್ಯಾವ ಮಾಯದಲ್ಲೋ ಹಿಂದಿನಿಂದ ಒಂದುಹೊಟ್ಟೆ ಡುಮ್ಮ ,ಕುಂಡಿ ಎತ್ತರದ ಬೈಕೊಂದು ಬಂದು, ಗುದ್ಧಿ ,ಮಿಂಚಿನಂತೆ ಪಕ್ಕದಲ್ಲೇ ಸುಳಿದು, ಕ್ಷಣಾರ್ಧದಲ್ಲಿ ನುಗ್ಗಿ ನುಸುಳಿ ಓಡಿ ಮಾಯವಾದ. ಗುದ್ದಿದ ಕ್ಷಣವೇ “ಅಯ್ಯೋ, ಅಕ್ಕ ಮೊದಲು ನನ್ನಿಂದ ದೂರ ನೆಗೆಯೇ” ಎನ್ನುತ್ತಾ ನನ್ನ ಲಿಯೋ ಹಾರಿ ಬಿದ್ದು ನೆಲಕಚ್ಚಿದ .ಅವನು ಹೇಳಿದಾಕ್ಷಣವೇನೆಗೆದಿದ್ದಕ್ಕೆನಾನುಬದುಕಿದೆ. ಆದರೆ ಅವನು ತನ್ನ ಕೈಕಾಲುಮುರಿದುಕೊಂಡು, ದೀಪದ ಕಣ್ಣೋಡಕೊಂಡು ಬಿದ್ದಿದ್ದನ್ನು ನೋಡಿದಾಗ ನನಗೆ ಅಳುವೋ ಅಳು.ಅಷ್ಟರಲ್ಲಿ ಸುತ್ತಮುತ್ತ ನೆರೆದ ಜನ ನಮ್ಮಿಬ್ಬರನ್ನು ಎತ್ತಿ ನಿಲ್ಲಿಸಿ ಸಾಂತ್ವನ ಹೇಳಿದರು.ನನಗೇನು ಹೆಚ್ಚು ಪೆಟ್ಟಾಗಿರಲಿಲ್ಲ. ಆದರೆ ತೀವ್ರವಾಗಿ ಜಖಂಗೊಂಡಿದ್ದ ಲಿಯೋ ರಿಪೇರಿಯಾಗಿ ಮನೆಗೆ ಬರುವಷ್ಟರಲ್ಲಿ ತಿಂಗಳು ಕಳೆದಿತ್ತು. ನಂತರವೂ ಅಪಘಾತದ ನೆನಪಿನಿಂದ ಹೊರಬರದ ನಾನು, ಲಿಯೋ ಎಷ್ಟೇ ಕರುಣಾಜನಕ ನೋಟವನ್ನು ನನ್ನತ್ತ ಬೀರಿದರೂ, ಅವನೆಡೆಗೆ ನೋಡದೆ, ನನ್ನ ಕಣ್ಣೀರು ಅವನಿಗೆ ಕಾಣದಂತೆ ಮುಖತಿರುಗಿಸಿ, ಹಲ್ಲು ಕಚ್ಚಿ, ನನ್ನ ನೋವು ನಾನು ನುಂಗಿದೆ. ಗಂಡನ ಸುಪರ್ದಿಗೆ ಅವನನ್ನು ಒಪ್ಪಿಸಿ ,ದಿನವೂ ಆಟೋದಲ್ಲಿ ಶಾಲೆಗೆ ತಿರುಗ ತೊಡಗಿದೆ. ಹಾಗಿದ್ದಾಗ ನನ್ನ ಗಂಡ ಹೊಸ ಕಾರ್ ಖರೀದಿಸಿ ಝುಮ್ಮೆಂದು ತಿರುಗಲು ಶುರುಮಾಡಿದರು.”ಸ್ಕೂಟಿಗಿಂತ ಕಾರ್ ಸೇಫ್ ಅಲ್ವಾ ,ಒಳಗೆ  ಕುತ್ಕೊಂಡು ಓಡಿಸುವುದಲ್ಲ, ಏನು ಆಗಲ್ಲ’ ಎಂದುಕೊಂಡು, ಕಾರ್ ಓಡಿಸಲು ಕಲಿಯುವ ಹಂಬಲದಿಂದ ಡ್ರೈವಿಂಗ್ ಕ್ಲಾಸ್ ಗೆ ಸೇರಿದ್ದಾಯ್ತು.ಡ್ರೈವಿಂಗ್ ಕ್ಲಾಸ್ ನಲ್ಲಿ ನನ್ನ ಟೀಚರ್ ಇನ್ನೂ ಚಿಕ್ಕ ವಯಸ್ಸಿನ ಒಬ್ಬ ಹುಡುಗ. ಡ್ರೈವಿಂಗ್ ಕಲಿಸುವುದರ ಜೊತೆಗೆ ಆತನ ಕುತೂಹಲದ 108 ಪ್ರಶ್ನೆಗಳ ಬಾಣ ಬೇರೆ! “ಮೇಡಂ ಏನ್ ಮಾಡ್ಕೊಂಡಿದ್ದೀರಾ? ಓಹ್ ಟೀಚರ! ಸ್ಕೂಲಿಗೆ ದಿನ ಹೇಗೆ ಹೋಗ್ತೀರಾ? ಸ್ಕೂಟಿ ಇಲ್ವಾ ಮನೇಲಿ? ಆಟೋದಲ್ಲಿ ಯಾಕೆ? ಕಾರ್ನಲ್ಲಿ ಸ್ಕೂಲಿಗೆ ಹೋಗ್ಬೇಕು ಅನ್ನೋ ಆಸೆನಾ?” ಇತ್ಯಾದಿ, ಇತ್ಯಾದಿ, ಕೇಳಿ ಕೇಳಿ ನಾನು ಸಾಕಾಗಿ ಲಿಯೋ ಮತ್ತು ನನ್ನ ಅಪಘಾತದ ಸುದ್ದಿಯನ್ನೆಲ್ಲ ಬಿಚ್ಚಿಟ್ಟೆ. ನಮ್ಮ ಕಥೆ ಕೇಳಿ ಅವನಿಗೆ ನಗುವೋ ನಗು.”ಅಲ್ಲಾ ಮೇಡಂ ಒಂದ್ಸಾರಿ ಬಿದ್ದಿದ್ದಕ್ಕೆ ಸ್ಕೂಟಿ ಓಡ್ಸೋದೆ ಬಿಟ್ ಬಿಡೋದೇ?ಎಡವಿ ಬೀಳ್ತಿವಿ ಅಂತ ನಡೆಯೋದೆನ್  ನಿಲ್ಲಿಸ್ತಿವ? ರಸ್ತೇಲಿ ಹೋಗೋ ವೆಹಿಕಲ್ ನವ್ರೆಲ್ಲ ‘ ಇವತ್ತು ಮೇಡಂ ಸ್ಕೂಟಿಏರಿ ಹೋಗ್ತಿರುವಾಗ ನಾವು ಅವ್ರನ್ನ ಗುದ್ದಿ ಬಿಳಿಸ್ಬೇಕು’ಅಂತ ಸ್ಕೆಚ್ ಏನಾದ್ರೂ ಹಾಕ್ಕೊಂಡು ಬರ್ತಾರ? ಸುಮ್ನೆ ಸ್ಕೂಟಿ ಆಚೆ ತಗೀರಿ “ಅಂತ ಧೈರ್ಯ ಕೊಟ್ಟ.  ಮತ್ತೆ ಮನೆಗೆ ಬಂದು” ಲಿಯೋ “ಎಂದು ಕರೆದಾಗ ಒಂದೇ ಕಿಕ್ ಗೆ ಹಾರಿ ನೆಗೆದು “ಅಕ್ಕ” ಎಂದ ಅವನನ್ನು ನೋಡಿ ಕಣ್ಣೀರು ಉಕ್ಕಿ ಬಂತು.ಹಲವು ದಿನಗಳಿಂದ ನೀರು ನಿಡಿ ಕಾಣದೇ,ತಲೆಕೂದಲುಕೆದರಿಕೊಂಡು, ಗೊಣ್ಣೇ ಸುರಿಸಿಕೊಂಡು ದಿಕ್ಕೆಟ್ಟು ನಿಂತಿರುವ ತಬ್ಬಲಿ ಮಗುವಿನಂತೆ ಕಂಡ ಆತನನ್ನು ನೋಡಿ ನನ್ನ ಹೃದಯ ಬಾಯಿಗೆ ಬಂತು.ಆತನನ್ನು ಚೆನ್ನಾಗಿ ತೊಳೆದು ಒಂದು ಒಳ್ಳೆ ಸರ್ವಿಸ್ ಮಾಡಿಸಿ, ಹೊಟ್ಟೆ ತುಂಬಾ ಪೆಟ್ರೋಲ್ ಹಾಕಿಸಿ ಒಂದು ದಾರಿಗೆ ತಂದೆ.   ಅಲ್ಲಿಂದ ಮತ್ತೆ ಶುರುವಾದ ನನ್ನ ಮತ್ತು ಅವನಒಡನಾಟಇನ್ನೂಮುಂದುವರೆದಿದೆ.ಅನಿವಾರ್ಯ ಕಾರಣಗಳಿಂದ ಶಾಲೆಯಿಂದ ಮನೆಗೆ ದೂರವಾಗಿ ,ದಿನವೂ ಬಸ್ ನಲ್ಲಿ ತಿರುಗುವ ಹಾಗಾದರೂ, ಬಸ್ ನಿಲ್ದಾಣದ ವರೆಗಾದರೂ ಜೊತೆಯಲ್ಲೇ ಬರುತ್ತಾನೆ.ಹೇಗಿದ್ದರೂ ಬೇರೆಲ್ಲೆಡೆಗೆ ತಿರುಗಾಡುವುದು ಇದ್ದೇ ಇದೆಯಲ್ಲ.ಆಗಾಗ್ಗೆ ದಾರಿಯಲ್ಲಿ ಕಾಣ ಸಿಗುವ ಆ ಹಳದಿ ಬಣ್ಣದ ಸುಂದರಾಂಗ

ಲಲಿತ ಪ್ರಬಂಧ Read Post »

You cannot copy content of this page

Scroll to Top