ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟನೋಟ ~ ೨೦ ಮೊಗೆದಷ್ಟೂ ನೆನಪುಗಳು. ಹೀಗೆ ಸ್ನೇಹಿತರೊಂದಿಗೆ ಜಾಲಿಯಾಗಿ ಪ್ರಯಾಣ ಮಾಡುತ್ತಾ ಆಫೀಸಿನಲ್ಲಿ ಹೊಸ ವ್ಯವಹಾರ ವಿಭಾಗದಲ್ಲಿ ಕೆಲಸ ಕಲಿಯುತ್ತಾ ದಿನಗಳು ಬಹಳ ಬೇಗನೆ ಓಡಿ ಹೋದ ಹಾಗೆ ಅನಿಸುತ್ತಿತ್ತು. ಆಗ ಬಹಳ ಜನ ಅವಿವಾಹಿತ ಸಹೋದ್ಯೋಗಿಗಳು ಇದ್ದುದರಿಂದ ಅವರ ಮದುವೆ ಸಮಾರಂಭಗಳು ಆಗಾಗ ಆಗುತ್ತಿದ್ದವು. ಅಲ್ಲದೆ ಅವರ ಸೋದರ ಸೋದರಿಯರ ಮದುವೆಗಳು ನಡೆಯುತ್ತಿದ್ದವು .ಹಾಗೆ ನಂಜನಗೂಡಿನಲ್ಲಿ ಇದ್ದಾಗ ಹೋದ ಮದುವೆ ಸಮಾರಂಭಗಳಲ್ಲಿ ಮೊದಲನೆಯದು ಗಾಯತ್ರಿ ದೇವಿ ಅವರ ಅಕ್ಕನ ಮದುವೆ. ಅಂದು ಭಾನುವಾರವಾಗಿದ್ದರಿಂದ ಎಲ್ಲರೂ ಮಾತನಾಡಿಕೊಂಡು ಕೇಂದ್ರ ಬಸ್ ನಿಲ್ದಾಣದಲ್ಲಿ ಸೇರಿ ಅಲ್ಲಿಂದ ಮತ್ತೊಂದು ಬಸ್ನಲ್ಲಿ ಹೋಗಿ ಮದುವೆ ಸಮಾರಂಭ ಮುಗಿಸಿ ಬಂದಿದ್ದೆವು. ಈ ಮೊದಲೇ ಹೇಳಿದ ಹಾಗೆ ಮಂಡ್ಯದಲ್ಲಿ ಸಹೋದ್ಯೋಗಿಯಾಗಿದ್ದು ಈಗ ನಂಜನಗೂಡಿಗೆ ಬಂದಿದ್ದ ಮಂಜುಳಾ ಅವರ ಮದುವೆ ನಮ್ಮದೇ ಶಾಖೆಯ ರೇವಣ್ಣ ಅವರೊಂದಿಗೆ ನಿಶ್ಚಯವಾಗಿದ್ದು ಮೈಸೂರಿನಲ್ಲಿ ಮದುವೆ ಇತ್ತು. ಅದು ಜುಲೈ ಒಂದರಂದು. ನಮಗೆ ಆಗ ಸಾಂದರ್ಭಿಕ ರಜೆ, ಜುಲೈನಿಂದ ಆರಂಭವಾಗಿ ಜೂನ್ ಗೆ ಕೊನೆಗೊಳ್ಳುತ್ತಿತ್ತು ಹಾಗಾಗಿ ಆ ರಜೆ ವರ್ಷದ ಮೊದಲ ದಿನವೇ ರಜೆ ಹಾಕಲು ಯಾರಿಗೂ ಇಷ್ಟ ಇರಲಿಲ್ಲ. ಬೆಳಿಗ್ಗೆ ಬೇಗ ಹೋಗಿ ಮದುವೆ ಮಂಟಪಕ್ಕೆ ಹಾಜರಾತಿ ಹಾಕಿ 11:30ಗೆ ಶಾಖೆಗೆ ವಾಪಸ್ ಆಗಿದ್ದೆವು. ಹಾಗೆಯೇ ಗೆಳತಿ  ಸರಸ್ವತಿಯ ಮದುವೆಯು ಒಂದು ವಾರ ಬಿಟ್ಟು ಜುಲೈ 8ಕ್ಕೆ ಇದುದರಿಂದ ಅವಳ ಮದುವೆಗೆ ಸಹ ಹಾಗೆಯೇ ಬೆಳಿಗ್ಗೆಯೇ ಹೋಗಿ ಆಫೀಸಿಗೆ ಬಂದಿದ್ದೆವು. 11:30ಗೆ ಬಂದೆವು ಎಂದು ಹೇಳಿದೆನಲ್ಲ ಅದರ ವಿವರ ಹೇಳುತ್ತೇನೆ ಕೇಳಿ. ನಮ್ಮ ಉದ್ಯೋಗಿಗಳ ನಿಯಮಾವಳಿ Staff Regulation ಅನುಸಾರ ತಿಂಗಳಿನಲ್ಲಿ ಎರಡು ಬಾರಿ ಬೆಳಗ್ಗಿನ ಹೊತ್ತು ಒಂದು ಗಂಟೆ ಕಾಲ ಪರ್ಮಿಷನ್ ಹಾಗೂ ಸಂಜೆಯ ಹೊತ್ತು ಒಂದು ಗಂಟೆಕಾಲ ಪರ್ಮಿಷನ್ ತೆಗೆದುಕೊಳ್ಳಲು ಅವಕಾಶವಿದೆ .ಅಂದರೆ ತಿಂಗಳಲ್ಲಿ ಎರಡು ಬಾರಿ ಬೆಳಿಗ್ಗೆ 11:30ಗೆ ಬರಬಹುದು ಹಾಗೂ ಎರಡು ಬಾರಿ ನಾಲ್ಕು ವರೆಗೆ ಹೋಗಬಹುದು ಹಾಗೆ ಹೋಗಿದ್ದನ್ನು ಹಾಜರಾತಿ ಪುಸ್ತಕದಲ್ಲಿ ಬರೆಯುತ್ತಾರೆ ಏನಾದರೂ ಅನಿವಾರ್ಯ ತುರ್ತಿನ ಪರಿಸ್ಥಿತಿ ಇದ್ದಲ್ಲಿ ಆ ರೀತಿಯ ಅವಕಾಶವನ್ನು ಬಳಸಿಕೊಳ್ಳಬಹುದು. ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ಮೈಸೂರಿಗೆ ಬರುವ ಮತ್ತು  ವಾಪಸು ಹೋಗುವ ಸಂದರ್ಭದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳುತಿದ್ದೆ. ನಂಜನಗೂಡಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದುದರಿಂದ ಆ ಸಮಯ ಈ ರೀತಿಯ ಅರ್ಲಿ ಪರ್ಮಿಷನ್ ಮತ್ತು ಲೇಟ್ ಪರ್ಮಿಷನ್ ಗಳಿಗೆ ಹೊಂದದೆ ಇದ್ದದರಿಂದ ಅಲ್ಲಿ ಹೆಚ್ಚು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿರಲಿಲ್ಲ ಒಮ್ಮೊಮ್ಮೆ ದೇವಸ್ಥಾನಕ್ಕೆ ಹೋಗುವಾಗ ಬಳಕೆಯಾಗುತ್ತಿತ್ತು ಅಷ್ಟೇ. ಮತ್ತೊಂದು ಸಮಾರಂಭದ ನೆನಪು ಎಂದರೆ ಸಹೋದ್ಯೋಗಿ ಪ್ರಕಾಶ್ ಅವರ ಮನೆಯ ಗೃಹಪ್ರವೇಶದ ಸಂದರ್ಭ ಅವರ ಮನೆ ಶ್ರೀ ರಾಮಪುರದ ಮಧುವನ ಲೇಔಟ್ ನಲ್ಲಿ ಕಟ್ಟಿದ್ದರು. ಅರ್ಧ ದಿನ ರಜೆ ಹಾಕಿ ನಾವು ಎಂಟು ಹತ್ತು ಜನದ ಗುಂಪು ಆ ಸಮಾರಂಭಕ್ಕೆ ಬಂದಿದ್ದೆವು. ವಾಪಸ್ ಹೋಗುವಾಗ ಅಲ್ಲಿಂದ ವಿವೇಕಾನಂದ ನಗರಕ್ಕೆ ಬಂದು ಅಲ್ಲಿಂದ ಬಸ್ ಹಿಡಿದು ಹೋಗಿದ್ದು.  ಬರೀ ಬಯಲೇ ಕಾಣುತ್ತಿದ್ದ ಆ ಜಾಗ ಈಗ ಅದೆಷ್ಟು ಬ್ಯುಸಿ ಆಗಿದೆ ಎಂದರೆ ನಂಬಲು ಅಸಾಧ್ಯ. ಈ ಮಧ್ಯೆ ಗೆಳತಿ ಕೃಪಾಳ ಮದುವೆ ನಿಶ್ಚಯವಾಗಿ ನಿಶ್ಚಿತಾರ್ಥವು ಸಹ ನಡೆಯಿತು. ಅವರ ಮನೆಯಲ್ಲೇ ನಡೆದ ನಿಶ್ಚಿತಾರ್ಥಕ್ಕೆ ನಾನು ಮತ್ತು ಶೈಲಾ ಹೋಗಿದ್ದೆವು. ನಗದು ಗುಮಾಸ್ತೆಯಾಗಿ ಕೆಲಸ ಮಾಡಿದ್ದು ಸಹ ನಂಜನಗೂಡು ಶಾಖೆಯಲ್ಲಿ ಪ್ರಪ್ರಥಮ ಬಾರಿಗೆ. ಸಾಮಾನ್ಯವಾಗಿ ನಿಗಮದ ಎಲ್ಲಾ ಶಾಖೆಗಳಲ್ಲೂ ಕಾಯಂ ಆದ ಕ್ಯಾಶಿಯರ್ ನಗದು ಗುಮಾಸ್ತೆ ಇರುತ್ತಾರೆ. ಅವರು ರಜೆ ಹೋದಾಗ ಮಿಕ್ಕ ಸಹಾಯಕ ಹುದ್ದೆಯಲ್ಲಿರುವ ಉದ್ಯೋಗಿಗಳನ್ನು ಅವರ ಸೀನಿಯಾರಿಟಿ ಪ್ರಕಾರ ಪಟ್ಟಿ ಮಾಡಿ ಒಬ್ಬರಾದ ನಂತರ ಒಬ್ಬರ ಪಾಳಿ ಬರುವಂತೆ ಮಾಡಿರುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ಖಾಯಂ ಕ್ಯಾಶಿಯರ್ ಹೆಚ್ಚು ರಜೆ ಹೋಗುತ್ತಿರಲಿಲ್ಲ. ಅಲ್ಲದೆ ಮೊದಲ ಆರು ತಿಂಗಳು ನಮ್ಮನ್ನು ಕ್ಯಾಶಿಯರ್ ಹುದ್ದೆಯಲ್ಲಿ ಕೂಡಿಸುತ್ತಿರಲಿಲ್ಲ. ಹಾಗಾಗಿ ನನಗೆ ಒಂದು ದಿನವೂ ನಗದುಗುಮಾಸ್ತೆಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ನಂಜನಗೂಡಿನಲ್ಲಿ ಆಗ ವೇಣುಗೋಪಾಲ್ ಎನ್ನುವವರು ಕ್ಯಾಶಿಯರ್ ಆಗಿದ್ದರು. ಅವರ ವೈಯುಕ್ತಿಕ ಕಾರಣಗಳಿಂದಾಗಿ ಅವರು ದೀರ್ಘ ರಜೆ ಹೋಗಿದ್ದರಿಂದ ನಮ್ಮೆಲ್ಲರಿಗೂ ನಗದು ಗುಮಾಸ್ತೆಯ ಸರದಿ ಬಂದಿತ್ತು. ನನಗೋ ನೋಟುಗಳನ್ನು ಕೈಯಲ್ಲಿ ಸರಿಯಾಗಿ ಹಿಡಿಯಲು ಸಹ ಬರುತ್ತಿರಲಿಲ್ಲ. ಅಲ್ಲದೆ ಒಂದು ರೀತಿಯ ಅಂಜಿಕೆ ಬೇರೆ ಆದರೆ ನನ್ನ ಸಹೋದ್ಯೋಗಿಗಳು ತುಂಬಾ ಸಹಕಾರ ನೀಡಿ ನನಗೆ ರಶೀದಿ ಬರೆಯುವ ಕೆಲಸ ಮಾತ್ರ ಬಿಟ್ಟು ರೂಢಿಯಾಗುವವರೆಗೆ ಬೇರೆಯವರೇ ಒಬ್ಬರಾದ ನಂತರ ಒಬ್ಬರು ಬಂದು ಹಣ ಎಣಿಸಿಕೊಳ್ಳುತ್ತಿದ್ದರು. ಇಲ್ಲಿನ ಅನುಭವದ ಮೇಲೆ ಇತ್ತೀಚೆಗೆ ಸಾಹಿತ್ಯ ರಂಗಕ್ಕೆ ಬಂದ ನಂತರ ಒಂದು ಕಥೆ ಬರೆದಿದ್ದೆ. ಕ್ಯಾಶ್ ಕೌಂಟರ್ ಎಂದಾಗ ಮತ್ತೊಂದು ಘಟನೆ ನೆನಪಿಗೆ ಬರುತ್ತದೆ. ಆಗ ಕ್ಯಾಶ್ ಕೌಂಟರ್ ಗಳಲ್ಲಿ ನಗದು ಗುಮಾಸ್ತೆಯ ಜೊತೆಗೆ ಒಬ್ಬರು ಉನ್ನತ ಶ್ರೇಣಿ ಸಹಾಯಕರು ಸಹ ಇರುತ್ತಿದ್ದರು. ರಶೀದಿಗಳಿಗೆ ಸಹಿ ಹಾಕುತ್ತಿದ್ದು ಅವರೇ. ನಾವು ನಂಜನಗೂಡಿನಲ್ಲಿ ಇದ್ದಾಗ ಮಲಿಕ್ ಅನ್ನುವವರು ಕ್ಯಾಷ್ ಕೌಂಟರಿನ ಉನ್ನತ ಶ್ರೇಣಿ ಸಹಾಯಕರು. ಬೆಂಗಳೂರಿನವರನ್ನು ನಂಜನಗೂಡಿಗೆ ಪೋಸ್ಟ್ ಮಾಡಿದ್ದರು. ಅದು ಮೈಸೂರು ಬೆಂಗಳೂರು ವಿಭಾಗಗಳು ಪ್ರತ್ಯೇಕವಾಗುವ ಮೊದಲು. ಈಗ ಅವರು ಬೆಂಗಳೂರಿಗೆ ವರ್ಗಾವಣೆ ಕೇಳಿದ್ದರು. ಆದರೆ ವಿಭಾಗಗಳು ಬದಲಾಗಿದ್ದರಿಂದ ಸ್ವಲ್ಪ ತಡವಾಗಿತ್ತು. ಅವರು  ಪ್ರತಿ ಶನಿವಾರ ಮಧ್ಯಾಹ್ನ  ಬೆಂಗಳೂರಿಗೆ ತೆರಳಿ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ನಂಜನಗೂಡಿಗೆ ಬರುತ್ತಿದ್ದರು. ಹೀಗೆ ಒಮ್ಮೆ ಬರುವಾಗ ಅವರ ಬಳಿ ಇದ್ದ ಕ್ಯಾಶ್ ಬಾಕ್ಸ್ ನ ಕೀ ಕಳೆದುಕೊಂಡು ಬಿಟ್ಟಿದ್ದರು. ಅದಕ್ಕೆ ತಗಲುವ ವೆಚ್ಚ ಅವರಿಂದ ವಸೂಲು ಮಾಡಿದ್ದು ಅಲ್ಲದೆ ಶಿಸ್ತಿನ ಕ್ರಮ ತೆಗೆದುಕೊಂಡು ಆಗ ಅವರಿಗೆ ಎರಡು ಇಂಕ್ರಿಮೆಂಟ್ ಗಳನ್ನು ಕಡಿತ ಮಾಡಲಾಗಿತ್ತು. ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎನ್ನುವ ಎಚ್ಚರಿಕೆಯನ್ನು ನಾವು ಕಲಿತದ್ದೇ ಆಗ. ಈಗಲೂ ಕ್ಯಾಶ್ ಕೀ ನನ್ನ ಬಳಿ ಇರುವಾಗ ತುಂಬಾನೇ ಜಾಗ್ರತೆ ವಹಿಸುತ್ತೇನೆ. ಆ ಘಟನೆ ಮನಸ್ಸಿನಿಂದ ಮಾಸಿಯೇ ಇಲ್ಲ. ಹಾಗೆ ಹೀಗೆ ನೋಡನೋಡುತ್ತಲೇ ನಂಜನಗೂಡಿಗೆ ಬಂದು ಒಂದು ವರ್ಷ ಕಳೆದೇ ಬಿಟ್ಟಿತು.1991 ಅಕ್ಟೋಬರ್  ಒಂದು ವರ್ಗಾವಣೆ ಪಟ್ಟಿ ಬಿಡುಗಡೆಯಾಗಿ ಕೆಲವು ಜನರಿಗೆ ಮೈಸೂರು ನಗರದ ಶಾಖೆಗಳಿಗೆ ವರ್ಗಾವಣೆ ಸಿಕ್ಕಿತು. ಮಧ್ಯೆ ಮಂಡ್ಯಗೆ ಹೋಗಿ ಬಂದಿದ್ದರಿಂದ ನಾನು ಒಂದು ತಿಂಗಳು ತಡವಾಗಿ ನಂಜನಗೂಡಿಗೆ ಬಂದಿದ್ದೆ. ಹಾಗಾಗಿ ನನಗೆ ಆ ಪಟ್ಟಿಯಲ್ಲಿ ಮೈಸೂರಿಗೆ ವರ್ಗಾವಣೆ ಸಿಕ್ಕಿರಲಿಲ್ಲ. ಮತ್ತೊಂದು ವರ್ಷ ಕಾಯಬೇಕಾಗಿತ್ತು. ಆದರೆ ನಂಜನಗೂಡು ಓಡಾಟ ಹೋಗಿದ್ದರಿಂದ ಅಷ್ಟೇನೂ ಬೇಸರ ಆಗಲಿಲ್ಲ. ಈ ಮಧ್ಯೆ ಗೆಳತಿ ಶೈಲಾಳಿಗೆ ವಿವಾಹವಾಗಿ ಮೈಸೂರಿಗೆ ವರ್ಗಾವಣೆ ಸಿಕ್ಕಿತು. ನಿಗಮದ ನೀತಿಯ ಪ್ರಕಾರ ಕೆಲಸ ಸಿಕ್ಕ ನಂತರ ಮದುವೆಯಾದರೆ ಪತಿ ಇರುವ ಜಾಗಕ್ಕೆ ಆದಷ್ಟು ಬೇಗ ವರ್ಗಾವಣೆ ಸಿಗುತ್ತದೆ. ಹಾಗಾಗಿ ಅವಳ ಪತಿ ಮೈಸೂರಿನಲ್ಲಿ ಇದ್ದಿದ್ದರಿಂದ ತಕ್ಷಣವೇ ಅವಳಿಗೆ ವರ್ಗಾವಣೆ ಸಿಕ್ಕಿತ್ತು. ಹಾಗೆಯೇ ಗೆಳತಿ ಸರಸ್ವತಿಯೂ ಸಹ ವಿವಾಹವಾದ ಒಂದೆರಡು ತಿಂಗಳಲ್ಲಿಯೇ ಮೈಸೂರಿಗೆ ವರ್ಗಾವಣೆ ಹೊಂದಿ ಹೋಗಿದ್ದಳು. ವಿಭಾಗಿಯ ಕಚೇರಿಗಳಿಂದ ಶಾಖಾ ಕಚೇರಿಗಳಿಗೆ ವರಿಷ್ಠರು ಬಂದು ಇಲ್ಲಿನ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿದೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಏನಾದರೂ ಮಾರ್ಗದರ್ಶನ ಬೇಕಾದರೆ ಕೊಡುತ್ತಾರೆ. ಹಾಗೆ ನಾನು ಹೊಸ ವ್ಯವಹಾರ ವಿಭಾಗದಲ್ಲಿ ಇದ್ದಾಗ ಆಗ ಅಲ್ಲಿನ ಮ್ಯಾನೇಜರ್ ಆಗಿದ್ದ ಆಚಾರ್ಯ ಎನ್ನುವವರು ಮತ್ತು ಆಡಳಿತ ಅಧಿಕಾರಿ ಆಗಿದ್ದ ಎಸ್ಎಂಎಸ್ ಗೋಪಾಲನ್ ಅವರು ಕಚೇರಿಗೆ ಬಂದಿದ್ದರು. ಕೆಲವೊಂದು ಕೆಲಸಗಳು ಮಾಡದೆ ಪೆಂಡಿಂಗ್ ಉಳಿದಿದ್ದನ್ನು ನನಗೆ ಹೇಗೆ ಮಾಡಬೇಕೆಂದು ಹೇಳಿಕೊಟ್ಟು ಮುಗಿಸಲು ಹೇಳಿದ್ದರು. ಹಾಗೆಯೇ ನಾನು ಮಾಡಿ ಮುಗಿಸಿದ್ದೆ ಮತ್ತೆ ಅದಕ್ಕಾಗಿ ಶಾಖಾಧಿಕಾರಿಗಳ ಕೋಣೆಗೆ ಫೋನ್ ಮಾಡಿ ಕರೆಸಿ, ಒಳ್ಳೆಯ ಪ್ರೋತ್ಸಾಹದ ನುಡಿಗಳನ್ನು ಆಡಿದ್ದರು ನಮ್ಮ ನಿಗಮದಲ್ಲಿ ಯಾವುದೇ ವರ್ಗದಲ್ಲೂ ಬೇರೆ  ಹೊಸಬರು ವರ್ಗಾವಣೆಯಾಗಿ ಬಂದಾಗ ಮೊದಲಿನಿಂದ ಶಾಖೆಯಲ್ಲೇ ಇರುವವರಿಗೆ ವಿಭಾಗಗಳಲ್ಲಿ ಬದಲಾವಣೆ ಬೇಕಾಗಿದ್ದರೆ ಮೊದಲ ಆದ್ಯತೆ ಕೊಡುತ್ತಾರೆ. ಹಾಗಾಗಿ ನಾನು ಹೊಸ ವ್ಯವಹಾರ ವಿಭಾಗವನ್ನು ಬಿಟ್ಟು ಪಾಲಿಸಿ ಸೇವೆ ವಿಭಾಗಕ್ಕೆ ಬದಲಾವಣೆ ಕೋರಿಕೊಂಡೆ. ಪಾಲಿಸಿಗಳ ಪುನರುಜ್ಜೀವನ‌ revival ಮಾಡುವ ವಿಭಾಗಕ್ಕೆ ನನಗೆ ಬದಲಾವಣೆ ಸಿಕ್ಕಿತು. ಮೊದಲಿನಿಂದ ನನಗೆ ಪಾಲಿಸಿ ಸೇವಾ ವಿಭಾಗ ಎಂದರೆ ಒಂದು ರೀತಿಯ ಆಕರ್ಷಣೆ ಆದರೆ ಮಂಡ್ಯದಲ್ಲಿ ಅವಕಾಶ ಸಿಕ್ಕಿದ್ದರೂ ಹೆಚ್ಚು ದಿನ ಆ ವಿಭಾಗದಲ್ಲಿ ಕೆಲಸ ಮಾಡಲು ಆಗಿರಲಿಲ್ಲ ಈಗ ನನ್ನಿಷ್ಟದ ವಿಭಾಗ ಸಿಕ್ಕಿತು ಎಂಬ ಖುಷಿಯಿಂದ ಹೊಸ ಕೆಲಸ ಕಲಿಯಲು ಆರಂಭಿಸಿದೆ. ಪಾಲಿಸಿಗಳ ಪ್ರೀಮಿಯಂ ಕಟ್ಟದೆ 6 ತಿಂಗಳುಗಳ ಕಾಲ ಆಗಿ ಹೋದರೆ ಪಾಲಿಸಿಗಳು ಲ್ಯಾಬ್ಸ್ ಆಗುತ್ತದೆ ಹಾಗೆ ಲ್ಯಾಪ್ಸ್ ಆದ ಪಾಲಿಸಿಗಳನ್ನು ಗೊಳಿಸಲು ಅವರ ಆರೋಗ್ಯದ ಬಗ್ಗೆ ಒಂದು ಡಿಕ್ಲರೇಷನ್ ಅದರಲ್ಲಿ ಏನಾದರೂ ಋಣಾತ್ಮಕ ಸಂಗತಿಗಳು ಇದ್ದರೆ ಅದಕ್ಕೆ ಸಂಬಂಧಿಸಿದ ಮೆಡಿಕಲ್ ರಿಪೋರ್ಟ್ ಇವೆಲ್ಲವನ್ನು ತೆಗೆದುಕೊಂಡು ಮತ್ತೆ ಪ್ರೀಮಿಯಂ ಪಡೆದುಕೊಳ್ಳಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ನಂತರ ಪ್ರೀಮಿಯಂ ಕಟ್ಟಿ ಅದನ್ನು ಚಾಲ್ತಿಗೆ ತರಬೇಕು. ಹಾಗೆ ಪರಿಶೀಲಿಸುವ ಕೆಲಸ ನನ್ನದು. ಮತ್ತೆ ಕೆಲವೊಮ್ಮೆ ಚೆಕ್ ಮುಖಾಂತರ ಅಥವಾ ಪೋಸ್ಟ್ ನಲ್ಲಿ ಕಳಿಸಿದ ಚೆಕ್ಗಳ ಮೊತ್ತಗಳು ತಾಳೆ ಯಾಗದೆ ಅವುಗಳನ್ನು ಪ್ರೀಮಿಯಂಗೆ ಸರಿದೂಗಿಸಲು ಆಗುವುದಿಲ್ಲ ಕೆಲವೊಮ್ಮೆ ಹಣ ಹೆಚ್ಚಾಗಿ ಅದನ್ನು ಡಿಪಾಸಿಟ್ ಎಂದು ಪರಿಗಣಿಸಿ ಇಡಲಾಗುತ್ತದೆ ಆ ತರಹದ ಕೇಸುಗಳನ್ನು ಪರಿಶೀಲಿಸಿ ಮುಂದಿನ ಪ್ರೀಮಿಯಂ ಗಳಿಗೆ ಅಡ್ಜಸ್ಟ್ ಮಾಡುವುದು ಅಥವಾ ಪಾಲಿಸಿದಾರರಿಗೆ ಹಣ ಹಿಂತಿರುಗಿಸುವುದು ಎಂಬುದನ್ನು ನಿರ್ಧರಿಸಿ ಹಾಗೆ ಮಾಡಬೇಕಿತ್ತು ಹಾಗೆಲ್ಲ ಮೊತ್ತಗಳು ಬಹಳ ಕಡಿಮೆ ಇದ್ದುದರಿಂದ ಮನಿ ಆರ್ಡರ್ ಮೂಲಕವೇ ಪಾಲಿಸಿದಾರರಿಗೆ ಹೆಚ್ಚಿನ ಹಣ ಇದ್ದಲ್ಲಿ ಹಿಂದಿರುಗಿಸಲಾಗುತ್ತಿತ್ತು.  8/10 ರೂಪಾಯಿಗಳನ್ನು ಸಹ ಆಗ ಮನಿ ಆರ್ಡರ್ ಮಾಡುತ್ತಿದ್ದೆವು. 40 ಗಳಿಗಿಂತ ಹೆಚ್ಚಾಗಿ ಇದ್ದರೆ ಚೆಕ್ ಮೂಲಕ ವಾಪಸ್ ಮಾಡಲಾಗುತ್ತಿತ್ತು. ಹೊಸ ವಿಭಾಗಕ್ಕೆ ಬಂದು 15 ದಿನ ಆಗಿತ್ತು ಅಷ್ಟೇ ಒಂದು ದಿನ ಪ್ರಸಾದ್ ಅವರು ಶಾಖೆಗೆ ಬಂದು ಮತ್ತೊಂದು ಪಟ್ಟಿ ಸಹಾಯಕರ ವರ್ಗಾವಣೆಗೆ ಸಿದ್ಧವಾಗುತ್ತಿದೆ ಆ ಪಟ್ಟಿಯಲ್ಲಿ ನನಗೂ ಮೈಸೂರಿಗೆ ವರ್ಗಾವಣೆ ಸಿಕ್ಕಬಹುದು ಎಂಬ ವಿಷಯ ತಿಳಿಸಿದರು ಇದು ತುಂಬಾ ಅನಿರೀಕ್ಷಿತವೇ ಆಗಿತ್ತು ಆದರೆ ಹೆಚ್ಚಿನ ಖುಷಿ ಸಹ ತಂದಿತ್ತು. ಅಂತೆಯೇ ಪಟ್ಟಿ ಬಿಡುಗಡೆಯಾಗಿತ್ತು. ನನಗೆ ಮೈಸೂರಿನ ವಿಭಾಗ ಕಚೇರಿಯ ಹೊಸ ವ್ಯವಹಾರ ವಿಭಾಗದ ಸಹಾಯಕಳಾಗಿ ವರ್ಗಾವಣೆ ಸಿಕ್ಕಿತು .ನಂತರ ತಿಳಿದ ವಿಷಯ ನನ್ನ ಕಾರ್ಯ ವೈಖರಿ ನೋಡಿದ ಮ್ಯಾನೇಜರ್ ಹಾಗೂ ಆಡಳಿತ ಅಧಿಕಾರಿ ಅವರು ನನ್ನ ಹೆಸರನ್ನು ಅವರ ವಿಭಾಗಕ್ಕೆ ಸೂಚಿಸಿದ್ದರು ಎಂದು. ಕೃಪಾಳಿಗೆ ಮೈಸೂರು ಶಾಖೆ 4 ಸಿಕ್ಕಿತ್ತು ನನ್ನ ತಂಗಿ ಛಾಯಾಳಿಗೆ ಮೈಸೂರು ಶಾಖೆ ಎರಡಕ್ಕೆ ವರ್ಗಾವಣೆ ಸಿಕ್ಕಿತು. ಒಂದು ರೀತಿಯ ನೆಮ್ಮದಿಯ ಭಾವ. ಒಟ್ಟು ನಾವು ಎಂಟು ಜನ ನಂಜನಗೂಡಿನಿಂದ ವರ್ಗಾವಣೆಯಾಗಿ ಮೈಸೂರಿಗೆ ಬಂದದ್ದು. ನಮ್ಮದೇ ಬ್ಯಾಚ್ನ ಪ್ರಕಾಶ್ ಶ್ರೀಹರಿ ಸುಬ್ರಮಣ್ಯ ನಾನು ಎಲ್ಲಾ ಮೈಸೂರಿಗೆ ವರ್ಗಾವಣೆ ಕೋರಿದ್ದರೂ ಪ್ರಸಾದ್ ಒಬ್ಬರು ಮಾತ್ರ ವರ್ಗಾವಣೆ ಬಯಸದೆ ನಂಜನಗೂಡಿನಲ್ಲಿಯೇ ಉಳಿದುಕೊಂಡಿದ್ದರು. ಮೊದಲಿನಿಂದ ಬಂದ ಅಭ್ಯಾಸದಂತೆ

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ ನೋಟ–17 ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಮೊದಲೇ ಹೇಳಿದಂತೆ ಅಕ್ಟೋಬರ್ ಒಂದು 1990 ಸೋಮವಾರ ಮಂಡ್ಯ ಶಾಖೆಯಿಂದ ರಿಲೀವ್ ಆದೆ. ಅಕ್ಟೋಬರ್ 2 ಗಾಂಧಿ ಜಯಂತಿ ರಜೆ .ಬುಧವಾರದ ದಿನ ಅಕ್ಟೋಬರ್ ಮೂರರಂದು ನಂಜನಗೂಡಿಗೆ ಹೊರಟೆವು ನಮ್ಮ ಮನೆಗೆ ರೈಲ್ವೆ ನಿಲ್ದಾಣ ಹತ್ತಿರ ಇದ್ದುದರಿಂದ ನಾನು ಮತ್ತು ರವೀಶ್ ರೈಲಿನಲ್ಲಿಯೇ ಹೊರಟೆವು. ಆಗ ಇನ್ನು ನಂಜನಗೂಡು ಶಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಬಜಾರು ರಸ್ತೆ ಅಂದರೆ ರೈಲ್ವೆ ನಿಲ್ದಾಣದಿಂದ ದೇವಸ್ಥಾನಕ್ಕೆ ಹೋಗುವ ಜನನಿಬಿಡ ದಾರಿಯಲ್ಲಿ ಎಡಗಡೆಯ ಪಕ್ಕದ ಒಂದು ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು . ಮೊದಲಿಗೆ ಶಾಖೆಗೆ ಹೋದಾಗ ಅಲ್ಲಿನ ಶಾಖಾಧಿಕಾರಿ ಅಶ್ವತ್ಥ ನಾರಾಯಣ ರಾವ್ ಅವರು ಮೊದಲು ದೇವಸ್ಥಾನಕ್ಕೆ ಹೋಗಿ ಬಂದು ನಂತರ ರಿಪೋರ್ಟ್ ಮಾಡಿಕೊಳ್ಳಿ ಎಂದರು. ಅಂತೆಯೇ ಅಲ್ಲಿಂದ ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು 11 ಗಂಟೆಯ ವೇಳೆಗೆ ಶಾಖೆಗೆ ವಾಪಸಾದೆವು.  ಮೊದಲಿನಂತೆಯೇ ಒಂದು ಕೈಯಲ್ಲಿ ರಿಪೋರ್ಟ್ ಆಗುವ ಲೆಟರ್ ಮತ್ತೊಂದು ಕೈಯಲ್ಲಿ ಮೈಸೂರಿಗೆ ವರ್ಗಾವಣೆ ಕೋರಿ ಬರೆದ ಅರ್ಜಿ. ಎರಡನ್ನು ಕೊಟ್ಟು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಆಯಿತು. ಇಲ್ಲಿ ನನಗೆ ಕೊಟ್ಟಿದ್ದು ಹೊಸ ವ್ಯವಹಾರಗಳ ವಿಭಾಗ. ನನ್ನನ್ನು ರಿಪೋರ್ಟ್ ಮಾಡಿಸಿ ರವೀಶ್ ವಾಪಸ್ಸು ಹೋದರು. ಊಟದ ಡಬ್ಬಿ ತಂದಿದ್ದರಿಂದ ಯೋಚನೆ ಇರಲಿಲ್ಲ. ನಿಗಮದ ಪದ್ಧತಿಯಂತೆ ಶಾಖಾ ಪ್ರಬಂಧಕರ ಕೋಣೆಯಲ್ಲಿ ಕಾಫಿ ಬಿಸ್ಕೆಟ್ ಆತಿಥ್ಯ ಮುಗಿದಿತ್ತು.  ಹಾಗಾಗಿ ಅಂದು ಬೆಳಿಗ್ಗೆ ಕಾಫಿಗೆ ಹೋಗುವ ಪ್ರಮೇಯ ಬರಲಿಲ್ಲ. ಪಕ್ಕದಲ್ಲಿಯೇ ಒಂದು ಸುಮಾರಾದ ಹೋಟೆಲ್ ಇದ್ದು ಮೂರು ಅಥವಾ ನಾಲ್ಕು ಜನ ಗುಂಪು ಮಾಡಿಕೊಂಡು ಹತ್ತು ನಿಮಿಷಗಳ ಕಾಲ ಕಾಫಿಗೆ ಹೋಗಿ ಬರುವ ವಾಡಿಕೆ ಇತ್ತು ಅಲ್ಲಿ. ಆಗ ಅಲ್ಲಿನ ಉಪ ಆಡಳಿತ ಅಧಿಕಾರಿಯಾಗಿ ರಾಜೇಗೌಡ ಸರ್ ಅವರು ಇದ್ದರು. ನನ್ನ ಪತಿ ರವೀಶ್ ಅವರ ಊರಿನ ಸಮೀಪದ ಹಳ್ಳಿ ಮೈಸೂರು ಅವರ ಊರು. ಹಾಗಾಗಿ ರವೀಶ್ ಅವರ ಜೊತೆ ತುಂಬಾ ಕಾಲ ಮಾತನಾಡುತ್ತಿದ್ದರು. ರಾಜಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಅವರ ಹೇರ್ ಸ್ಟೈಲ್ ಉಡುಗೆ ತೊಡುಗೆಗಳು ರಾಜಕುಮಾರ ಅವರನ್ನೇ ಅನುಸರಿಸುತ್ತಿದ್ದವು ಎಂದು ಗಮನಿಸಿದ್ದೆ. ತುಂಬಾ ಸ್ನೇಹಜೀವಿ ನಗುಮುಖದ ಅವರು ಕೆಲಸದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟು ಸಹ . ಅವರು ಸಹ ಮೈಸೂರಿನಿಂದಲೇ ಓಡಾಡುತ್ತಿದ್ದರು. ಮುಂದೆ ತುಂಬಾ ಉನ್ನತ ದರ್ಜೆಗೆ ಪದೋನ್ನತಿ ಹೊಂದಿದ ಅವರು ಅಂದಿನ ಅದೇ ಸ್ನೇಹ ವಿಶ್ವಾಸವನ್ನು ಎಂದಿಗೂ ತೋರಿಸುವುದು ಅವರ ನಿಗರ್ವಿ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ. ನನಗೆ ವಹಿಸಿದ ಹೊಸ ವ್ಯವಹಾರಗಳ ವಿಭಾಗಕ್ಕೆ ರಾಜೇಗೌಡ ಅವರು ಅಧಿಕಾರಿ ಕೆ ಎಸ್ ಜಗದೀಶ್ ಎನ್ನುವವರು ಉನ್ನತ ದರ್ಜೆ ಸಹಾಯಕರು ನಾನು ಮತ್ತು ಕೃಪ ಅಲ್ಲಿನ ಸಹಾಯಕರು. ತುಂಬಾ ಒಳ್ಳೆಯ ವಾತಾವರಣ ಇತ್ತು. ಜಗದೀಶ್ ಅವರು ಸಹ ಪದೋನ್ನತಿ ಹೊಂದಿ ತುಂಬಾ ಎತ್ತರದ ದರ್ಜೆಗೆ ಏರಿದವರು ಆದರೂ ಈಗಲೂ ಸಹ ಅದೇ ನಗುಮುಖದ ಸ್ನೇಹಮಯಿ ವ್ಯಕ್ತಿ. ಆಗಾಗ ಸಮಾರಂಭಗಳಲ್ಲಿ ಭೇಟಿಯಾದಾಗಲೂ ಆತ್ಮೀಯತೆಯಿಂದ ಮಾತನಾಡುತ್ತಾರೆ. ಅಲ್ಲದೆ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿಯೂ ಸದಾ ಸಂಪರ್ಕದಲ್ಲಿ ಇದ್ದಾರೆ. ಕೃಪಾ ಸಹ ಅಷ್ಟೇ ಮದುವೆಯಾದ ನಂತರ ಈಗ ಹುಬ್ಬಳ್ಳಿಯಲ್ಲಿ ನೆಲೆಸಿದ್ದರೂ ಮಧ್ಯೆ ಫೋನ್ ಸಂಪರ್ಕವಿಲ್ಲದೆ ಬಿಟ್ಟು ಹೋಗಿದ್ದ ಸ್ನೇಹ ಮೊಬೈಲ್ ಬಂದ ನಂತರ ಮತ್ತೆ ಚಿಗುರಿದೆ. ಇತ್ತೀಚೆಗೆ ಅವಳ ಮಗನ ಮದುವೆಗೂ ಸಹ ಆಹ್ವಾನ ಇತ್ತು .ಆದರೆ ಗುಜರಾತ್ ಪ್ರವಾಸಕ್ಕೆ ಹೊರಟಿದ್ದರಿಂದ ಮದುವೆಗೆ ಹೋಗಲಾಗಲಿಲ್ಲ. ಅವಳ ನಿಶ್ಚಿತಾರ್ಥ ಮತ್ತು ಮದುವೆ ಸಮಯದಲ್ಲಿ ನಾವೆಲ್ಲ ತುಂಬಾ ಎಂಜಾಯ್ ಮಾಡಿದ್ದು ಇನ್ನು ನೆನಪಿನಲ್ಲಿ ಇದೆ. ಹೊಸ ವ್ಯವಹಾರಗಳ ವಿಭಾಗ ಎಂದರೆ ಪಾಲಿಸಿಗಾಗಿ ಬಂದ ಪ್ರೊಪೋಸಲ್ ಅರ್ಜಿಗಳನ್ನು ಪರಿಶೀಲಿಸಿ ಅವು ವಿಮೆ ಸೌಲಭ್ಯಕ್ಕೆ ಅರ್ಹವೇ, ಯಾವುದೇ ಒಂದು ಸಂಶಯಾಸ್ಪದ ಸಂಗತಿಗಳು ಇಲ್ಲವೇ ಎಂಬುದನ್ನು ಪರಿಶೀಲಿಸಿ ನಂತರ ಅವು ಯೋಗ್ಯ ಎನಿಸಿದಾಗ ಮೊದಲ ಕಂತಿನ ಪ್ರೀಮಿಯಂ ಅನ್ನು ಸ್ವೀಕರಿಸಬೇಕು. ಆ ರೀತಿಯ  ನಗದು ವಿಭಾಗದಿಂದ ಸ್ವೀಕರಿಸಿದ ರಶೀದಿಗಳನ್ನು B O C ಎಂದು ಕರೆಯುತ್ತಾರೆ ಹಾಗೂ ಅವುಗಳಿಗೆ ಒಂದು ಕ್ರಮ ಸಂಖ್ಯೆ ಇರುತ್ತದೆ. ವಿಮೆಗೆ ಯೋಗ್ಯವೇ ಎಂದು ಪರಿಗಣಿಸುವ ಪ್ರಕ್ರಿಯೆಗೆ underwriting ಎಂದು ಹೆಸರು. ಆ ಕೆಲಸ ತುಂಬಾ ಪ್ರಾಮುಖ್ಯವಾದದ್ದು ಎಂದು ಪರಿಗಣಿಸಿದ್ದು ಅಧಿಕಾರಿ ಅಥವಾ ಉನ್ನತ ದರ್ಜೆ ಸಹಾಯಕರು ಆ ರೀತಿ ಅಂಡರ್ ರೈಟಿಂಗ್ ಮಾಡಿ ಕೊಟ್ಟ ಪ್ರಪೋಸಲ್ ಗಳಿಗೆ ಬಿ ಓ ಸಿ ಗಳನ್ನು ಸೇರಿಸಿ ಅವುಗಳಿಗೆ ಪಾಲಿಸಿ ಸಂಖ್ಯೆಗಳನ್ನು ಕೊಡಬೇಕು .ಹೀಗೆ ಪಾಲಿಸಿ ಸಂಖ್ಯೆಯನ್ನು EAL ಎಂಬ ದೊಡ್ಡ ಆಕಾರದ ಶೀಟ್ಗಳಲ್ಲಿ ಮೂರು ಕಾಪಿ ಮಾಡಿ ಬರೆಯಬೇಕಿತ್ತು. ಲೆಡ್ಜರಿನ ಹಾಗೆ ಅದರಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಎರಡು ಭಾಗಗಳು ಇರುತ್ತಿದ್ದವು ಪಾಲಿಸಿ ಸಂಖ್ಯೆ ಪ್ರಪೋಸಲ್ನ ಸಂಖ್ಯೆ ಪಾಲಿಸಿದಾರರ ಹೆಸರು ಬಿ ಓ ಸಿ ಸಂಖ್ಯೆ ಈ ಎಲ್ಲಾ ಅಂಶಗಳನ್ನು ಬರೆದ ನಂತರ ಡೆಬಿಟ್ ಸೈಡ್ ನಲ್ಲಿ ಅದನ್ನು ಹೇಗೆ ಸ್ವೀಕರಿಸಿದವು ಎಂಬ ವಿವರ. ಮೊದಲ ಪ್ರೀಮಿಯಂ ಮೊದಲ ವರ್ಷದ ಪ್ರೀಮಿಯಂ ಬಡ್ಡಿ ಏನಾದರೂ ಇದ್ದರೆ ಅದು ಇವೆಲ್ಲ ವಿವರಗಳು ಇರುತ್ತಿದ್ದು ಕ್ರೆಡಿಟ್ ಸೈಡ್ ನಲ್ಲಿ ಬಿ ಓ ಸಿ ಯ ಮೊತ್ತ ಇರುತ್ತಿತ್ತು ಹೀಗೆ ಎರಡು ಸೈಡ್ ನ ಮೊತ್ತಗಳು ತಾಳೆ ಆಗಬೇಕಿತ್ತು.  ಹೀಗೆ ಒಂದು ಶೀಟ್ ನಲ್ಲಿ ಏಳು ಪಾಲಿಸಿ ನಂಬರ್ ಗಳನ್ನು ಬರೆಯಬಹುದಿತ್ತು ನಂತರ ಹಿಂದಿನ ಪುಟದ ಮೊತ್ತವನ್ನು ಬರೆದುಕೊಂಡು ಎರಡರ ಮೊತ್ತವನ್ನು ಕಡೆಯ ಕಾಲಂನಲ್ಲಿ ಹಾಕಬೇಕಿತ್ತು. ಆ ಮೊತ್ತ ಮುಂದಿನ ಪುಟಕ್ಕೆ ಕ್ಯಾರಿ ಫಾರ್ವರ್ಡ್ ಆಗುತ್ತಿತ್ತು. ಒಂದು ರೀತಿ ಆಸಕ್ತಿದಾಯಕ ಕೆಲಸವೇ ಹೀಗೆ ಇ ಎ ಎಲ್ ಬರೆಯುವುದರ ಜೊತೆಗೆ ಬಿ ಓ ಸಿ ಗಳ ರಿಜಿಸ್ಟರ್ ನಲ್ಲಿ ಸಹ ಅದನ್ನು ಬರೆದು ಪ್ರತಿ ತಿಂಗಳು ಈ ರೀತಿಯ ಉಳಿದ ಡೆಪಾಸಿಟ್ಗಳ ಷೆಡ್ಯೂಲ್ ತಯಾರಿಸಬೇಕಿತ್ತು.  ಆಗ ಎಲ್ಲವೂ ನಾವೇ ಮ್ಯಾನುಯೆಲ್ ಆಗಿ ಮಾಡಬೇಕಿದ್ದು ಒಂದು ರೀತಿಯ ಖುಷಿ ಇರುತ್ತಿತ್ತು. ಇದರ ಜೊತೆಗೆ ಹೊಸ ವ್ಯವಹಾರ ವಿಭಾಗದಲ್ಲಿ ಬಾಂಡ್ ಗಳ ಪ್ರಿಂಟ್ ಆದ ನಂತರ ಅದರಲ್ಲಿನ ಮೊದಲ ಪ್ರೀಮಿಯಂ ರಶೀದಿಯನ್ನು ಸೇಲ್ಸ್ ವಿಭಾಗಕ್ಕೆ ಕಳಿಸಬೇಕಿತ್ತು ಈ ಮೊದಲೇ ಹೇಳಿದಂತೆ ಕಮಿಷನ್ ವಿಭಾಗದಲ್ಲಿ ಇವುಗಳ ಆಧಾರದ ಮೇಲೆ ಏಜೆಂಟ್ಸ್ ಗಳ ಕಮಿಷನ್ ಬಿಲ್ ತಯಾರಿಸಲಾಗುತ್ತಿತ್ತು. ಸಂಬಳ ಉಳಿತಾಯ ವಿಭಾಗದ ಪಾಲಿಸಿಗಳ ಆದರೆ ಅವುಗಳ ಪ್ರೀಮಿಯಂ ಅನ್ನು ಸಂಬಳದಲ್ಲಿ ಹಿಡಿದುಕೊಳ್ಳುವಂತೆ ಪೇಯಿಂಗ್ ಅಥಾರಿಟಿಗಳಿಗೆ ಆದೇಶ ಕೊಡುವ ಲೆಟರ್ ಸಹ ಇಲ್ಲಿಯೇ ತಯಾರಾಗುತ್ತಿದ್ದುದು. ಇದಕ್ಕೆ ಆಥರೈಸೇಷನ್ ಲೆಟರ್ ಎಂದು ಹೆಸರು. ಇವುಗಳನ್ನು ಸರಿಯಾಗಿ ಸರಿಯಾದ ಸಂಸ್ಥೆಗೆ ಕಳಿಸಿದರೆ ಮಾತ್ರ ಸಂಬಳದಲ್ಲಿ ಪ್ರೀಮಿಯಂ ನ ರಿಕವರಿ ಆಆರಂಭವಾಗುತ್ತಿದ್ದುದು. ಬಾಂಡ್ ಗಳ ತಯಾರಿ ಆಗ ಅಡೆರಿಮ ಮೆಷಿನ್ ನಲ್ಲಿ ಆಗುತ್ತಿದ್ದು ಅವುಗಳನ್ನು ಪಾಲಿಸಿ ದಾರರಿಗೆ ಕಳುಹಿಸಬೇಕಿದ್ದು ಹೊಸ ವಿಭಾಗದವರ ಕೆಲಸವೇ. ಹಾಗೆ ಏನಾದರೂ ಬಟವಾಡೆ ಆಗದೆ ಹಿಂದಿರುಗಿದ ಬಾಂಡುಗಳನ್ನು ಮತ್ತೊಂದು ರಿಜಿಸ್ಟರ್ ನಲ್ಲಿ ಬರೆದು ಅವುಗಳನ್ನು ಜೋಪಾನವಾಗಿ ಎತ್ತಿಡಬೇಕಿತ್ತು.  ಕೆಲವೊಮ್ಮೆ ಬಿ ಓ ಸಿ ಮೊತ್ತಗಳು ಬೇಕಾದ ಮೊತ್ತಕ್ಕಿಂತ ಹೆಚ್ಚು ಇರುತ್ತಿದ್ದು ಉಳಿದ ಮೊತ್ತವನ್ನು ಪಾಲಿಸಿದಾರೆರಿಗೆ ವಾಪಸ್ಸು ಮಾಡಬೇಕಿತ್ತು ಅದನ್ನು ಮನಿ ಆರ್ಡರ್ ಮೂಲಕ ವಾಪಸ್ಸು ಮಾಡಲಾಗುತ್ತಿತ್ತು ಆಗ. ನಂಜನಗೂಡಿನಲ್ಲಿ ಇದ್ದ ಸಹೋದ್ಯೋಗಿಗಳೆಲ್ಲ ಮನೆಗೆ ಊಟಕ್ಕೆ ಹೋಗುತ್ತಿದ್ದರು. ಮೈಸೂರಿನಿಂದ ಓಡಾಡುತ್ತಿದ್ದ ನಾವೆಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು. ಅಂದು ಮಧ್ಯಾಹ್ನದ ಕಾಫಿಗೆ ಪಕ್ಕದ ಹೋಟೆಲಿಗೆ ಕೃಪಾ ಹಾಗೂ ಇನ್ನಿಬ್ಬರು ಗೆಳತಿಯರೊಂದಿಗೆ ಹೋಗಿಬಂದೆವು. ವಾಪಸ್ಸು ಬರಲು ರೈಲು ೫_೫೫ ಕ್ಕೆ ಇದ್ದದ್ದು . ಹಾಗಾಗಿ ಸಂಜೆ ವಾಪಸ್ಸು ಹೋಗುವಾಗ ನಮ್ಮ ಹೂವು ಹಣ್ಣು ತರಕಾರಿಗಳ ಖರೀದಿ ನಡೆಯುತ್ತಿತ್ತು. ಅಲ್ಲಿ ತುಂಬಾ ತಾಜಾ ಆಗಿ ಎಲ್ಲವೂ ಸಿಕ್ಕುತ್ತಿದ್ದುದರಿಂದ ಬೇಕೆನಿಸಿದ್ದನ್ನು ಖರೀದಿಸಿ ರೈಲು ನಿಲ್ದಾಣಕ್ಕೆ ಬರುತ್ತಿದ್ದೆವು .ಆದರೆ ಆ ರೈಲು ಆಗ ಚಾಮರಾಜನಗರದಿಂದ ಬರುತ್ತಿದ್ದು ಸಾಮಾನ್ಯ ನಮಗೆ ಸೀಟ್ ಸಿಗುತ್ತಿರಲಿಲ್ಲ. ನ್ಯೂಸ್ ಪೇಪರ್ ಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡಿದ್ದು ಬಾಗಿಲಿನ ಬಳಿ ಹಾಕಿಕೊಂಡು ಕಾಲು ಇಳಿಬಿಟ್ಟು ಕುಳಿತುಕೊಳ್ಳುತ್ತಿದ್ದೆವು. ಆದರೆ ಹಾಗೆ ಕುಳಿತ ಒಬ್ಬರಿಗೆ ರೈಲ್ವೆ ನಿಲ್ದಾಣದ ಕಟ್ಟೆ ತಗಲಿ ಕಾಲೇ ಹೋದ ವಿಷಯ ನಂತರದಲ್ಲಿ ತಿಳಿದು ಆ ಕೆಟ್ಟ ಅಭ್ಯಾಸವನ್ನು ಬಿಟ್ಟುಬಿಟ್ಟೆವು. ನಿಂತರೂ ಪರವಾಗಿಲ್ಲ ಅಪಾಯ ಬೇಡ ಅಂತ. ಬೆಳಿಗ್ಗೆ 9:15ಕ್ಕೆ ಅಶೋಕ ಪುರಂ ನಿಂದ ರೈಲು ಇದ್ದದ್ದು ಅರ್ಧ ಗಂಟೆ ನಡೆಯಲು ಬೇಕೇ ಬೇಕಿತ್ತು .ಹಾಗಾಗಿ 8:15 8:20ಕ್ಕೆ ಮನೆ ಬಿಡುತ್ತಿದ್ದು ಅಲ್ಲಿಂದ ನಡೆದು ಅಶೋಕಪುರಂ ನಿಲ್ದಾಣಕ್ಕೆ ಬಂದರೆ ಕ್ರಾಸಿಂಗ್ ಅಲ್ಲಿ ಆರಾಮವಾಗಿ ರೈಲು ಸಿಗುತ್ತಿತ್ತು .ರವೀಶ್ ಏನಾದರೂ ಡ್ರಾಪ್  ಕೊಡುತ್ತೇನೆ ಎಂದರೆ ಚಾಮರಾಜಪುರಂ ರೈಲ್ವೆ ನಿಲ್ದಾಣಕ್ಕೆ ಹೋಗಿ ಹತ್ತುತ್ತಿದ್ದುದು. ಬರುವಾಗ ಮಾತ್ರ ಚಾಮರಾಜಪುರಂ ನಿಲ್ದಾಣದಲ್ಲಿ ಇಳಿಯುತ್ತಿದ್ದು. ಅಶೋಕಪುರಂ ನಿಲ್ದಾಣದಿಂದ ಕುವೆಂಪು ನಗರಕ್ಕೆ ಬರುವ ಹಾದಿ ಆಗ ಕೆರೆಯ ಏರಿ ಮತ್ತು ಕಾಡು ಇದ್ದ ಹಾಗೆ ಇತ್ತು. ಬೆಳಗಿನ ಹೊತ್ತು ನಡೆದು ಹೋಗಬಹುದಿತ್ತು ಆದರೆ ಸಂಜೆ ಕತ್ತಲಾದ ಮೇಲೆ ಓಡಾಡಲು ಆಗುತ್ತಿರಲಿಲ್ಲ ಹಾಗಾಗಿ ಚಾಮರಾಜಪುರಂ ನಿಲ್ದಾಣದಲ್ಲಿ ಇಳಿದು ನಾನು ಕೃಪ ಜೊತೆಗೆ ಬರುತ್ತಿದ್ದೆವು. ನಂತರ ಅವಳು ನೇರ ಹೋದರೆ ನಾನು ಆದಿಚುಂಚನಗಿರಿ ರಸ್ತೆಗೆ ತಿರುಗಿ ನಡೆದು ಬರುತ್ತಿದೆ ಅದು ಮುಖ್ಯರಸ್ತೆ ಆದ್ದರಿಂದ ಹೆದರಿಕೆ ಇರಲಿಲ್ಲ ಈಗ ಯೋಚಿಸಿದರೆ ಎಷ್ಟು ದೂರ ನಡೆಯುತ್ತಿದ್ದೆವಲ್ಲ ಹಾಗಾಗಿಯೇ ಆಗ ಅರೋಗ್ಯ ಚೆನ್ನಾಗಿತ್ತು ಎನಿಸುತ್ತದೆ ಬಸ್ ಸೌಲಭ್ಯವು ಅಷ್ಟೇನೂ ಚೆನ್ನಾಗಿರಲಿಲ್ಲವಾದ್ದರಿಂದ ಆಗ ನಡಿಗೆಯನ್ನೇ ಆಶ್ರಯಿಸುತ್ತಿದ್ದದು. ತೀರಾ ಕಾಲು ನೋವು ಅಥವಾ ಮೈ ಸರಿ ಇಲ್ಲದಿದ್ದಾಗ ಮಾತ್ರ ಆಟೋ ಬಳಸುತ್ತಿದ್ದುದು. ತುಂಬಾ ನೆನಪಿನಲ್ಲಿ ಇರುವ ಒಂದು ಸ್ವಾರಸ್ಯಕರ ಘಟನೆ ಹೇಳುತ್ತೇನೆ. ಮೊದಲ ಎರಡು ದಿನ ಟಿಕೆಟ್ ತೆಗೆದುಕೊಂಡೇ ಪ್ರಯಾಣಿಸಿದ ನಾನು ಮೂರನೆಯ ದಿನ ಮೂರು ತಿಂಗಳ ಪಾಸ್ ಮಾಡಿಸಿದೆ. ಆಗ ಮೂರು ತಿಂಗಳ ಪಾಸ್ಗೆ 45 ರೂಪಾಯಿ ಮಾತ್ರ ತಿಂಗಳ ಪಾಸಾದರೆ 20 ರೂಪಾಯಿ ಅನಿಸುತ್ತೆ. ಇಳಿಯುತ್ತಿದ್ದು ಚಾಮರಾಜಪುರಂನಲ್ಲೆ ಆದ್ದರಿಂದ ಚಾಮರಾಜಪುರಂನಿಂದ ನಂಜನಗೂಡಿಗೆ ಪಾಸ್ ಮಾಡಿಸಬೇಕಿತ್ತು. ಹಾಗಾಗಿ ಅಂದು ಸ್ವಲ್ಪ ಬೇಗ ಹೋಗಿ ಚಾಮರಾಜಪುರಂ ಸ್ಟೇಷನ್ ನಲ್ಲಿ ಮೂರು ತಿಂಗಳ ಪಾಸ್ ತೆಗೆದುಕೊಂಡ ತಕ್ಷಣವೇ ರೈಲು ಬಂತು ದಡಬಡ ಎಂದು ಹತ್ತಿ ಇನ್ನೂ ಕುಳಿತುಕೊಂಡಿಲ್ಲ ಆಗಲೇ ಚೆಕಿಂಗ್ ನವರು ಬಂದರು. ಪಾಸ್ ನ ಹಿಂದೆ ನನ್ನ ಸಹಿ ಮಾಡಬೇಕಿತ್ತು ಆದರೆ ಆ ಗಡಿಬಿಡಿಯಲ್ಲಿ ಇನ್ನು ಮಾಡಲು ಆಗಿರಲಿಲ್ಲ ಮಾಡುವಷ್ಟರಲ್ಲಿ ಅದನ್ನು ತೆಗೆದುಕೊಂಡು ಫೈನ್ ಹಾಕಿಯೇ ಬಿಟ್ಟರು. ನೂರು ರೂಪಾಯಿ. ಫೈನ್ ಅಲ್ಲದೆ ಎಜುಕೇಟೆಡ್ ಆಗಿ ನೀವು ಹೀಗೆ ಮಾಡುವುದ ಅನ್ನೋ ಮಾತು ಬೇರೆ. ಈಗ ತಾನೇ ತೆಗೆದುಕೊಂಡು ಹತ್ತಿದೆ ಎಂದರು ಅವರು ಕೇಳಲು ರೆಡಿ ಇರಲಿಲ್ಲ. ಆರು ತಿಂಗಳ ಪಾಸ್ ಗೆ ಆಗುವಷ್ಟು ದುಡ್ಡನ್ನು  ದಂಡ ಕಟ್ಟಿ ಐದು ದಿನಗಳ ಕಾಲ ಕೊರಗಿದೆ ಅನ್ನಿ. ಆಗಿನ ಕಾಲದಲ್ಲಿ ನೂರು ರೂಪಾಯಿಗೆ ತುಂಬಾ

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಒಂದು ಹತ್ತು ನಿಮಿಷ ಮಾತನಾಡುತ್ತಾ ಟೀ ಕುಡಿದು ಮತ್ತೆ ಕೆಲಸ ಆರಂಭಿಸುತ್ತಿರುವುದು .ಮಧ್ಯಾಹ್ನ ಊಟದ ಸಮಯದಲ್ಲಿ ಮಂಜುಳಾ ಮತ್ತು ಗಾಯತ್ರಿ ಮಹಡಿಯ ಮೇಲೆ ನನ್ನ ಸೀಟ್ ಬಳಿಗೆ ಬರುತ್ತಿದ್ದರು ಒಟ್ಟಿಗೆ ಊಟ ಮಾಡುತ್ತಿದ್ದೆವು.
ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ–16

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಸುಜಾತಾ ರವೀಶ್‌ ಅವರ ಅಂಕಣ ವೃತ್ತಿ ವೃತ್ತಾಂತ
ಈ ಮುಂಚೆ ಹೇಳಿದಂತೆ ಊರ ಆಚೆಗೆ ಯಾವಾಗಲೂ ನಮ್ಮ ಕಚೇರಿಗಳು ಕಟ್ಟಲ್ಪಡುವುದು
ಆದರೆ ನಂತರದಲ್ಲಿ ಊರೇ ಬೆಳೆದು ಶಾಖೆ ಊರಿನ ಮಧ್ಯ ಸೇರಿಕೊಂಡು ಬಿಡುವುದು ನಾನು ಗಮನಿಸಿದ ಸಂಗತಿ.

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ–14
ಅವರು ಕೊಟ್ಟ ಮತ್ತೊಂದು ಸಲಹೆ ಎಂದರೆ ಪ್ರತಿ ತಿಂಗಳು ನೂರು ರೂಪಾಯಿನ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ತೆಗೆದುಕೊಳ್ಳುವುದು. ಐದು ವರ್ಷಕ್ಕೆ ಅದು ಆಗ ದುಪ್ಪಟ್ಟಾಗಿ ಬರುತ್ತಿತ್ತು

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ–12

ಮೊದಲ ಮೈಸೂರು ಭೇಟಿ
ಪ್ರತಿನಿಧಿಗಳ ಮುಖ್ಯ ಆದಾಯ ಎಂದರೆ ಅದು ಕಮಿಷನ್.  ಮೊದಲಿಗೆ ಅವರು ಮಾಡಿಸಿದ ಪಾಲಿಸಿಗಳಿಗೆ ಪ್ರೀಮಿಯಂ ಮೊತ್ತದ ಮೇಲೆ ಅನುಗುಣವಾಗಿ ಒಂದು ಕಮಿಷನ್ ನೀಡಲಾಗುತ್ತದೆ ಇದು ಮೊದಲ ಕಮಿಷನ್ ಎಂದು ಕರೆಯಲ್ಪಡುತ್ತದೆ

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ-11

ಹೊಸ ಮನೆಯಲ್ಲಿ
ಮೈಸೂರಿಗೆ ವರ್ಗಾವಣೆ ಸಿಗುತ್ತದೆ ಎಂದು ತಿಳಿದಿದ್ದರಿಂದ ಸೋಮವಾರಪೇಟೆಗೆ ಹೋಗುವ ಅವಕಾಶವನ್ನು ನಿರಾಕರಿಸಿದೆ ಅದಕ್ಕಾಗಿ ನನಗೇನು ಇಂದಿನ ದಿನದವರೆಗೂ ಪಶ್ಚಾತಾಪ ಖಂಡಿತ ಇಲ್ಲ.

Read Post »

You cannot copy content of this page

Scroll to Top