ಕಾವ್ಯಯಾನ
ಗೆಳೆಯನೊಬ್ಬನ ಸ್ವಗತ ನಟರಾಜು ಎಸ್. ಎಂ. ಊರ ಮಾರಿ ಗುಡಿಯ ಮುಂದೆಆಡುತ್ತಿದ್ದ ಗೆಳೆಯರ ಜೊತೆಗೂಡಿಆಟದ ಮಧ್ಯೆ ಟೈಂ ಪಾಸ್ ಎಂದಾಗಬಸವೇಶ್ವರ ಗುಡಿಯ ಜಗುಲಿಯ ಮೇಲೆಗೆಳೆಯರ ಮಧ್ಯೆ ಕಾಲು ಇಳಿಬಿಟ್ಟು ಕುಳಿತ್ತಿದ್ದ ತಮ್ಮ ಹುಡುಗರ ಜೊತೆ ಕುಳಿತಆ ಹುಡುಗನ ನೋಡಿ‘ಯಾರ್ ಮಗಾನ್ಲಾ ನೀನುನೋಡ್ದಾ ನಿನ್ ದೈರ್ಯಾನಾ?’ಗದರಿದ್ದರು ಅವನ ಗೆಳೆಯನೊಬ್ಬನ ತಾಯಿತನ್ನ ಗೆಳೆಯರ ಜೊತೆ ಆಟವಾಡೋದು ತಪ್ಪಾ?ಅವರ ಪಕ್ಕ ಕುಳಿತುಕೊಳ್ಳೋದು ತಪ್ಪಾ?ಎಂದೆಣಿಸುತಾ ಎದ್ದು ಮೌನವಾಗಿಆ ಹುಡುಗ ಮನೆ ಕಡೆಗೆ ನಡೆದಿದ್ದ ಸ್ಕೂಲಿನಲಿ ಮಧ್ಯಾಹ್ನದ ಬಿಸಿಯೂಟಕೆಗೆಳೆಯರೊಡಗೂಡಿ ಮಿಲ್ಲಿನಲಿಗೋಧಿ ನುಚ್ಚು ಮಾಡಿಸಿದಗೋಧಿ ನುಚ್ಚಿನ ಮೂಟೆಯನ್ನೊತ್ತುಖುಷಿಯಾಗಿ ನುಚ್ಚು ಬೇಯಿಸುವ ಕೋಣೆಗೆ ನುಗ್ಗಿದ್ದ ‘ಲೋ ನೀವು ಅಡುಗೆ ಮನೆಗೆ ಬರಬಾರ್ದು ಕಣ್ಲಾತಣಿಗೆ ತಪ್ಲೆ ಮುಟ್ ಬಾರ್ದು ಅಂದಿದ್ದರು ಅವನ ಮೇಷ್ಟ್ರುಯಾಕ್ ಸಾರ್ ಬರಬಾರ್ದು ಯಾಕ್ ಮುಟ್ ಬಾರ್ದುಎಂದು ತನ್ನ ಗುರುಗಳ ಕೇಳುವ ಮನಸಾದರೂಯಾಕೋ ಮತ್ತೆ ಮೌನವಾಗಿ ತನ್ನ ಮನೆ ಕಡೆಗೆ ನಡೆದಿದ್ದ ಮೌನವಾಗಿ ನಡೆದಿದ್ದವನ ಮನದಲಿಅದೆಷ್ಟು ನೋವಿನ ಮಾತುಗಳಿದ್ದವೋಆಡಲಾರದ ಮಾತಿಗೆ ಪದಗಳ ರೂಪ ನೀಡಿ‘ಜಾತಿಯಲಿ ಹೊಲೆಯನಾದರೂನಾನು ನಿಮ್ಮ ಗೆಳೆಯನಲ್ಲವೇ?’ ಎಂದುಸಾಲೊಂದನು ಬರೆದು ಮತ್ತೆ ಮೌನಿಯಾದ…************









