ಕಾವ್ಯಯಾನ
ಹೀಗೊಂದು ಕವಿತೆ ನಾಗರಾಜ್ ಹರಪನಹಳ್ಳಿ -1-ಎರಡು ಬಾಗಿಲು ಮುಚ್ಚಿದವುಇಷ್ಟೇ ತೆರೆದ ಕಿಟಕಿಗಳುಅಲ್ಲಿ ಶಬ್ದಗಳುಮೊಳೆಯಲಿಲ್ಲ -2-ಬಾಗಿಲಿಲ್ಲದ ಊರಲ್ಲಿಬೀಗಗಳು ಕಳೆದು ಹೋಗಿವೆಶಬ್ದಗಳ ಕಳಕೊಂಡವರುದಿಕ್ಕು ದಿಶೆಯಿಲ್ಲದೇನಡೆಯುತ್ತಿದ್ದಾರೆಎಂದೂ ಸಿಗದ ಕೊನೆಗೆ -3-ಕಾಲಿಲ್ಲದವರನ್ನುಕೈಯಿಲ್ಲದವರು ಕುಣಿಸಿದರುಅನಾಥ ಬೀದಿಗಳಲ್ಲಿಮೆದುಳಿಲ್ಲದವರನ್ನುಕಣ್ಣಿಲ್ಲದವರು ಕೂಗಾಡಿಸಿದರುಹೃದಯ ಕಳೆದುಕೊಂಡದೊರೆಯ ಮಹಲಿನ ಮುಂದೆ -4-ಮುಗಿಲದುಃಖಭೂಮಿಯಬಾಯಾರಿಕೆಮುಗಿಯುವಂತಹದ್ದಲ್ಲ ಯಾಕೋ ಮನಸ್ಸು ಖಾಲಿ ಖಾಲಿಯಾಗಿದೆಆಕೆಯ ಹೆಜ್ಜೆ ಗೆಜ್ಜೆ ಸದ್ದು ಕೇಳದೇ ಹರಿವ ನದಿಗೂ ಕಳೆಯಿಲ್ಲಸಮುದ್ರ ಸೇರಿಯೂ ಸಂಭ್ರಮಿಸದ ಆಕೆಯಂತೆಮನದಲ್ಲಿ ಎದ್ದ ಭಾವಗಳ ಅಲೆ ಸದ್ದು ಅವಳ ತಟ್ಟಿದೆ**-6-ಹಿಡಿಯಷ್ಟು ಬದುಕಿನಲ್ಲಿ ಕಡಲಿನ ಪ್ರೀತಿಯ ಅರಿಯಲಾಗಲಿಲ್ಲ ದಿನವೂ ಸೂರ್ಯ ಬೆಳಗಿದರೂ ಮನುಷ್ಯ ಮನದ ಕತ್ತಲು ಅಳಿಸಲಿಲ್ಲ









