ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅರಿವೇ ಗುರು

ಕವಿತೆ ಅರಿವೇ ಗುರು ವಸುಂಧರಾ ಕದಲೂರು ದೀಪ ಆರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ- ಕತ್ತಲೀಗಒಳಹೊರಗೂ.. ಮೌನಕ್ಕೆ ಶರಣಾದೆ, ಕಿವುಡುತನದಲಿ.ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ.. ಇತಿಮಿತಿಗಳ ಅರಿವಾಯ್ತು,ನನ್ನದೂ ಮತ್ತವರಿವರದು.ಜಾಗರೆಂದರೆ ಜಾಗರೂಕಳೀಗ.ಒಳಹೊರಗೂ.. ಮಮತೆಯ ಕಣ್ತೆರೆದು, ಒಲವಿನಲಿನೋಡಿ ನುಡಿದೆ. ಹರುಷವೆಂದರೆಹರುಷವೀಗ. ಒಳಹೊರಗೂ.. ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದುಬಂದ. ಬೆಳಕೆಂದರೆ ಬೆಳಕೀಗಒಳಹೊರಗೂ.. **************************************

ಅರಿವೇ ಗುರು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮುಂಗಾರು ಮುಗಿಲೇ ಆರ್ಭಟಿಸುತ ಮಳೆ ಸುರಿಸದಿರು ಇನಿಯ ಬರುವಆಷಾಡದ ಬಿರುಸು ಗಾಳಿಯೇ ಮಣ್ಣು ತೂರದಿರು ಇನಿಯ ಬರುವ ನೂರು ಕನಸುಗಳ‌ ಜಾತ್ರೆ ಮಾಡಿಸುವ ಮೋಜಗಾರ ಅವನುಮುದ್ದಿನ ಗಿಳಿ ಸವಿಮಾತಿನಲಿ ಹಾದಿಯ ಕಟ್ಟದಿರು ಇನಿಯ ಬರುವ ವಿರಹದ ದಳ್ಳುರಿ ಆರಿಸುವ ಸುಂದರ ಶೀತಲ ಕುಮಾರ ಅವನುಬನದ ನವಿಲೆ ಗರಿಗಳ ಬಿಚ್ಚಿ ದಾರಿ ತಪ್ಪಿಸದಿರು ಇನಿಯ ಬರುವ ಬೆಂದ ಹೃದಯಕೆ ಒಲವಿನ ಅಧರ ಮುಲಾಮ ಹಚ್ಚುವ ವೈದ್ಯ ಅವನುಕೆಂಡ ಸಂಪಿಗೆ ಘಮ ಹರಡಿ ನಿನ್ನ ಕಡೆ ಸೆಳೆಯದಿರು ಇನಿಯ ಬರುವ “ಪ್ರಭೆ” ಎದೆಯಲಿ ಅನುರಾಗದ ಕಡಲನು ಉಕ್ಕಿಸುವ ಚಂದಿರ ಅವನುಚಕೋರ ಬೆಳದಿಂಗಳ ನುಂಗಿ ಕತ್ತಲು ಮಾಡದಿರು ಇನಿಯ ಬರುವ. *******

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರತಿಮಾ ಕೋಮಾರ ಈರಾಪುರ ಬದುಕು ಬಯಲಾಗಿದೆ  ಭರವಸೆ ಮೂಡಿಸುವವರು ಕಾಣುವುದಿಲ್ಲ ಏಕೆ?ಕಾಲ ಹಂಗಿಸುತ್ತಿದೆ ಕಾರಣ ಹುಡುಕುವವರು ತೋಚುವುದಿಲ್ಲ ಏಕೆ? ತನ್ನ ಅಸ್ತಿತ್ವಕ್ಕಾಗಿ ಹೋರಾಟ ಬಡಿದಾಟ ಸರಿಬಿಡುತನ್ನವರ ಬೆಳಕಿಗಾಗಿ ಹಣತೆ ಹೊತ್ತಿಸುವವರು ಸಿಗುವುದಿಲ್ಲ ಏಕೆ? ಕೆಂಡದುಂಡೆ  ಉರುಳುವಾಗ ಸುತ್ತಲೆಲ್ಲ ಸುಡುತ್ತಲೇ ಉರುಳುವುದುತುಪ್ಪ ಸುರಿಯುವವರ ಬಿಟ್ಟು ಬೆಂಕಿ ಆರಿಸುವವರು ಗೋಚರಿಸುವುದಿಲ್ಲ ಏಕೆ? ತನ್ನ ಅಂಗೈ ಹುಣ್ಣು ನೋಡಲು ಕನ್ನಡಿಯನ್ನು  ಹುಡುಕುತ್ತಿದ್ದಾರೆ ಇಲ್ಲಿಪರರ ಹುಣ್ಣಿಗೆ  ಯಾರು ಮುಲಾಮು ಹಚ್ಚುವವರು? ಅಥ೯ವಾಗುವುದಿಲ್ಲ  ಏಕೆ? “ಪ್ರತಿ “ಉರುಳುವ ದಿನದ ಲೆಕ್ಕಾಚಾರ ಯಾರು ಹಾಕುವರುಕಳೆವ ಘಳಿಗೆಯಲಿ ಕೆಲವರು ಬದುಕ ಪಾಠ ಕಲಿಸುವವರು ಮರೆಯಲಾಗುವುದಿಲ್ಲ ಏಕೆ? *******************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್‌

ಗಜಲ್‌ ರತ್ನರಾಯ ಮಲ್ಲ ನಿನ್ನ ಬೆಳದಿಂಗಳಿನಂಥ ಕಂಗಳ ನೋಟದಲ್ಲಿ ಕಳೆದು ಹೋಗುತ್ತಿರುವೆನಿನ್ನ ಕಣ್ರೆಪ್ಪೆಯ ಪ್ರೇಮದ ಜೋಕಾಲಿಯಲ್ಲಿ ಸಂಭ್ರಮ ಪಡುತ್ತಿರುವೆ ಚಂದ್ರಬಿಂಬದಂಥ ನಿನ್ನ ಮುಖ ಕಂಡು ನೇಸರನು ಗೂಡು ಸೇರಿಹನುನಿನ್ನ ವದನವನ್ನು ಹತ್ತಿರದಿಂದ ಕಾಣುತ್ತ ಪ್ರೀತಿಯಲ್ಲಿ ಮುಳುಗುತ್ತಿರುವೆ ಕಾಮನಬಿಲ್ಲಿನಂತ ಆಭರಣಗಳ ಕಾಂತಿ ನಿನ್ನ ಅಂದವನ್ನು ಹೆಚ್ಚಿಸುತ್ತಿವೆನಿನ್ನ ಸಾನಿಧ್ಯದಿ ಒಲವಿನ ಪುತ್ಥಳಿಯನ್ನು ಚುಂಬಿಸುತ್ತ ನಲಿಯುತ್ತಿರುವೆ ರಸದೌತಣಕೆ ಆಮಂತ್ರಿಸುತಿವೆ ನಿನ್ನ ವೈಯ್ಯಾರದ ಮೈ ಮಾಟಗಳುಕಲ್ಪವೃಕ್ಷದ ಕೊಂಬೆಗಳಂಥ ಆ ನಿನ್ನ ತೋಳುಗಳನ್ನು ಬಯಸುತ್ತಿರುವೆ ಸುಗಂಧದಂತ ನಿನ್ನ ಉಸಿರಿನಲ್ಲಿ ‘ಮಲ್ಲಿ’ ಬೆರೆತು ಹೋಗುತಿರುವನುಮೆದುವಾದ ನಿನ್ನ ಮಡಿಲಲ್ಲಿ ಹಗಲು-ರಾತ್ರಿಗಳನ್ನು ಎಣಿಸುತ್ತಿರುವೆ **********************************************

ಗಜಲ್‌ Read Post »

ಕಾವ್ಯಯಾನ

ಕನಸಿನ ಕೊನೆ

ಕವಿತೆ ಕನಸಿನ ಕೊನೆ ನೀ.ಶ್ರೀಶೈಲ ಹುಲ್ಲೂರು ಬೇಗುದಿಯ ಬೆಂಗೊಡದಕರಿಕಾಯದೀ ಕಥೆಗೆನೂರೆಂಟು ಕನಸು…ಅವಳ ಮುಡಿಗೆ ಚಿನ್ನದ ಹೂಕೊರಳಿಗೆ ಮುತ್ತಿನ ಹಾರಮೈಗೆ ಅಂದದ ರೇಷ್ಮೆ ಸೀರೆಬತ್ತಿದೆದೆಗೊಂದು ಚೆಂದದ ರವಿಕೆ! ಮಕ್ಕಳಾಟಕೆ ಬುಗುರಿ ಪೀಪಿತೂಗುಕುದುರೆ ಓಡಲೊಂದುಕಬ್ಬಿಣದ ಗಾಲಿಪಡೆವಾತುರಕೋ ಒಡಲ ತುಂಬಆಸೆಗಳ ನೂರು ಕಟ್ಟು!ಅಂದವಾದ ಈ ಮೈಕಟ್ಟಿನೊಡೆಯನ ತುಡಿತಕೆಯಾವಾಗಲೂ ಚಿಗುರು! ಧಣಿಯ ದಪ್ಪ ಚರ್ಮದಮೇಲೂ ಅದೆಂಥದೋ ಮಮತೆಬಿಡಿಗಾಸು ನೀಡದವನಅಡಿದಾಸನಾಗಿ ಹರೆಯಸವೆಸುವ ಅಪೂರ್ವ ಸಂತಸಅವಳಿತ್ತ ಬೇಡಿಕೆಯಅಕ್ಷಯಾಂಬರಕೆ ಬೆನ್ನು ತಿರುಗಿಸಿದುಡಿಯುವ ನಗ್ನ ಸತ್ಯ! ಸಂಜೆ ಮನೆಯ ದಾರಿಯಲಿಕಸುವು ಕಳೆದುಕೊಂಡ ದೇಹದಜೊತೆಗೆ ಅದೇ ಖಾಲಿ ಕೈಜೋಮುಗೊಂಡ ಕಾಲಿಗೆ ಬುದ್ಧಿಹೇಳಿ ಹೊಡೆಯುತ್ತಾನೆ ಜೋಲಿಓಣಿಯ ತುಂಬಾ ಕೊಳೆತುಸೀತು ಹೋದ ಚರ್ಮದ ದುರ್ನಾತತಿಪ್ಪೆಗುಂಡಿಯ ಸಂಗ ಮಾಡಿದನೀರು ನಿಂತು ಮಲೆತ ಕೆಸರ ಕುಂಡ! ಎಲುಬೆಣಿಸುವ ತನ್ನ ಪ್ರೀತಿ ನಾಯಿಯಮೈತುಂಬಾ ಕಜ್ಜಿ ಗಾಯ ಕೀವುಅರಿಷಿಣ ಸವರಲು ಬಿಡದ ಅದರರೋಷಕೆ ಇವನು ತಬ್ಬಿಬ್ಬುಮಕ್ಕಳ ರೆಪ್ಪೆ ತುಂಬಾ ಪಿಚ್ಚುಸೋರುತಿಹ ಕಟಬಾಯಿ ಜೊಲ್ಲುಗುಂಡು ಹಾಕಲು ಅಂಗಡಿಯವನಜೊತೆ ಮಾಡಿದ ಗಿಲೀಟು ಠುಸ್! ಝಗಮಗಿಸುವ ಈ ಕಾಲದಲೂಮನೆ ಕತ್ತಲೆಯ ಕೂಪಎಣ್ಣೆಯನ್ನು ಬಿಡದೆ ಬಾಟಲಿಯಚಿಮಣಿಯನ್ನೂ ನುಂಗಿದ ಬೆಂಕಿ ಬತ್ತಿಇಲ್ಲಗಳನೆಲ್ಲ ಎದೆಯ ಮೇಲೇಹೇರಿಕೊಂಡು ನಡೆದವನ ಹಿಂದೆಹೊರಟರು ಕೇರಿಯ ಜನ ಅನ್ನುತ್ತಿದ್ದರುಏನೋ ಮಣಮಣ!ಉಳಿದ ಅವಳೆದೆ ಮಾತ್ರಈಗಲೂ ಭಣಭಣ!! *******************************************

ಕನಸಿನ ಕೊನೆ Read Post »

ಕಾವ್ಯಯಾನ

ನೆರಳಿಲ್ಲದ ಜೀವ

ಕವಿತೆ ನೆರಳಿಲ್ಲದ ಜೀವ  ಆನಂದ ಆರ್ ಗೌಡ ಬಿರುಕು ಬಿಟ್ಟ ಅದೇ ಗೋಡೆಯೊಳಗೆಹಸಿದ ಕಣ್ಣುಗಳು ಇಣುಕಿನೋಡುತ್ತಿದ್ದವುಅವ್ವನ ಹೆಜ್ಜೆ ಗುರುತುಗಳನು ಒಡಲೊಳಗಿನ ಬಸಿರಲಿಪಿಸುಮಾತು ಮೇಯ್ದ ಕರುಳ ಕುಡಿಗಳಿಗೆನೊಂದ ಬೇಗೆಯಲಿ ಗಳಿಸಿದ ತುತ್ತುಜೋಗುಳವ ಹಾಡುತ್ತಿತ್ತು ! ಮಾಂಗಲ್ಯ ತೊಡಿಸಿದ ಕೈಯ ಅಗ್ನಿಯಲಿಸುಟ್ಟ ಸೀರೆ ಇನ್ನೂ ಅವಳ ಬಿಟ್ಟಿಲ್ಲತವರು ಅರಸಿ ಬಂದ ಕಣ್ಣವೆಗಳುಹಸುಳೆಗಳ ಪಿಡುಗು ಇಂಗಿಸಿಲ್ಲ ಅನ್ನ ಅರಸಿದ ಪಾದ ಮಾಸದ ಗಾಯಕರುಣೆ ಕನಿಕರ ಕಾಣದ ತನ್ಹಸಿವುಹೊದ್ದು ಮಲಗಿದ ಪರಿಯುಎಲ್ಲವ ಮರೆಸಿ ನಿಶ್ಯಬ್ಧವಾಗಿಸಿದೆ ಘಾಸಿಗೊಂಡ ಮನಸುಹೊನ್ನು ಮಣ್ಣು ಮೋಹಿಸಿಲ್ಲನೆರಳಿಲ್ಲದ ಜೀವ ಕನಸುಗಳನು ಹೊತ್ತುಮತ್ತೆ ಹೆಜ್ಜೆಯಿಟ್ಟಿದೆ ಹೊಟ್ಟೆ ತುಂಬಲು !! ******************************

ನೆರಳಿಲ್ಲದ ಜೀವ Read Post »

ಕಾವ್ಯಯಾನ

ಕನಸುಗಳ ದೊಂಬರಾಟ

ಕವಿತೆ ಕನಸುಗಳ ದೊಂಬರಾಟ ಸುಮನಸ್ವಿನಿ. ಎಂ ನೀ ಮರಳುವೆಯೆಂಬಪವಾಡವೊಂದು ಘಟಿಸಿಯೇತೀರುತ್ತದೆಂದು ನನ್ನ ನಂಬಿಸಲುಹರಸಾಹಸ ಪಡುವಕನಸುಗಳ ದೊಂಬರಾಟಕ್ಕೆನಕ್ಕುಬಿಡುತ್ತೇನೆ ಈಗೀಗ..ಹೊರಳಿ ನೋಡಿದರೂ ಸಹಕಾಣದಷ್ಟು ದೂರದಲ್ಲಿ ನೀನನ್ನಿರಿಸಿಬಿಟ್ಟಿರುವುದರಿಂದ! ದಿನಕ್ಕೆರಡು ಬಾರಿಯಾದರೂಕಣ್ತುಂಬಿ ತುಳುಕಿ ಉರುಳಿಹೋಗಲು ನಿನ್ನ ನೆನಪುಗಳುನನ್ನೊಂದಿಗೆ ಜಿದ್ದಿಗೆ ಬೀಳುತ್ತವೆ..ಎದೆಯೊಳಗೆ ಹನಿಯೊಡೆದುಹರಡಿಕೊಂಡಂತೆಲ್ಲಾ ಜಾಗಸಾಲದಾದಾಗ, ಪಾಪ!ಅಮಾಯಕ ನೆನಪುಗಳುತಾನೇ ಏನು ಮಾಡಿಯಾವು? ಏಳುಸಮುದ್ರಗಳಾಚೆಗಿನಏಳುಸುತ್ತಿನ ಏಕಾಂತ ಕೋಟೆಯತುತ್ತತುದಿಯ ಕೋಣೆಗೂ ನುಗ್ಗಿ‘ರಾಜ’ಕುಮಾರನೊಬ್ಬ ಬರುತ್ತಾನೆಂಬನಿರೀಕ್ಷೆಯ ಅದಮ್ಯ ನಂಬಿಕೆಗೆಬೆರಗಾಗುತ್ತೇನೆ ಬಹಳವೇ,ಮುಗಿದ ದಾರಿಯ ಕಡೆಯಲ್ಲೊಂದುಹೊಸ ತಿರುವು ಸೃಷ್ಟಿಯಾಗುವಭ್ರಮೆಯ ‘ಬಗೆ’ಗೆ ಸೋಜಿಗಪಡುತ್ತಾ! *************************************

ಕನಸುಗಳ ದೊಂಬರಾಟ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ವಿ.ಹರಿನಾಥ ಬಾಬು ಒಲೆಯ ಮುಂದೆಕರುಳ ಸುಟ್ಟ ಅಮ್ಮತಾಯ ಮಮತೆ* ಕುದಿ ಎಸರುತಾಯಿಯ ಎದೆಹಾಲುಕಟ್ಟಿದ ಬಾಯಿ* ಅಳುವ ಮಗುನಿಷ್ಕರುಣಿ ಜಗತ್ತುತಬ್ಬಲಿ ತಾಯಿ* ಕರುಳ‌ ಕುಡಿಭಯ ಭೀತಗೊಂಡಿದೆಕತ್ತಲ ರಾಜ್ಯ* ರಸ್ತೆಯ ಮೇಲೆಎಳೆದು ನಿಂತ ತೇರುಜೀವನ ಮುಕ್ತಿ* ಕಡಲ ನೀರುಸವಿಯಲೊಲ್ಲೆ ಉಪ್ಪುಸಪ್ಪೆ ಬದುಕು* ಓಡಿದ ನದಿಸೇರಿತು ಕಡಲನುಬದುಕು ಅಂತ್ಯ* ಮೇಲೆ ಚಂದಿರಈಕೆ ಬೆಳದಿಂಗಳುಬಾಳು ಹುಣ್ಣಿಮೆ* ಬೀಸುವ ಗಾಳಿಉದುರಿದವು ಎಲೆಅಪ್ಪಿತು ಮುಪ್ಪು* ಗುಡಿಯ ಮುಂದೆಭಿಕ್ಷುಕರದೇ ಸಾಲುಭಕ್ತಿ ಕುರುಡು* ದೇವನಿರದಗುಡಿಯೊಳಗೆ ನಾನುಅನಾಥ ಪ್ರಜ್ಞೆ* ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ* ಉರಿವ ಬೆಂಕಿಒಲೆಯ ಮೇಲೆ ಅನ್ನಹಸಿದ ಕಂದ* ಸಿಟ್ಟಾದ ಸೂರ್ಯಭೂಮಿ ಬಳಲಿ ಬೆಂಡುಹಾಳಾದ ರೈತ* ಜೋರಾದ ಮಳೆಕೊಚ್ಚಿಹೋದ ಫಸಲುಹತಾಷ ರೈತ* ತುಂತುರು ಹನಿಪುಲಕಗೊಂಡ ಭೂಮಿಪ್ರಸನ್ನ ಜನ* ಮೌನದ ಕಾಡುಅಲ್ಲಿ‌ ಮನುಷ್ಯರಿಲ್ಲಸುಂದರ‌ ಲೋಕ* ಕಣ್ಣ ಕಂಬನಿಅವಳ ಖಾಲಿ ನೋಟಎದೆಯ ಗಾಯ* ಅವಳ ಅಳುಆಕಾಶದ ಕಾರ್ಮೋಡನನ್ನೆದೆ ನೋವು* ನಕ್ಕಳು ನಲ್ಲೆಅರಳಿದವು ಹೂವುಮನಸು ತೋಟ**********************

ಹಾಯ್ಕುಗಳು Read Post »

ಕಾವ್ಯಯಾನ

ಆಧುನಿಕ ವಚನಗಳು

ಆಧುನಿಕ ವಚನಗಳು ರತ್ನಾ ಕಾಳೇಗೌಡ ಅರಮನೆಯ ರಾಜನಾದರೇನು?ಬಡವ ಭಿಕ್ಷುಕನಾದರೇನು?ಇಬ್ಬರಿಗೂ ಒಂದೇ ರೀತಿಯ ಹಸಿವುಅನ್ನವೇ ಇಬ್ಬರ ಹೊಟ್ಟೆ ತುಂಬಿಸುವುದುಅರಮನೆಯಲ್ಲಿ ಮಲಗುವುದಕ್ಕೆ ಮಂಚಭಿಕ್ಷುಕರಿಗೆ ಪಾರ್ಕಿನ ಕಲ್ಲು ಬೆಂಚೇಮಂಚ:ಇಬ್ಬರೂ ಮಾಡುವುದು ನಿದ್ದೆ ಎಂಬುದತಿಳಿದು ಬಾಳಯ್ಯ — ರತ್ನದೀಪ ನಿರ್ಗತಿಕ ಮಾಡಿ ಬಂಧುಗಳ ಮನೆಗೆಹೋದಾಗ ಗುರುತಿಲ್ಲದವರಂತೆ ಮುಖತಿರುಗಿಸಿಕೊಂಡು ಸೋದರತ್ತೆಧನಿಕಳೆಂದು ತಿಳಿದಾಗ ಮುಗಿ ಬಿದ್ದುಬಂದಿರಯ್ಯಎತ್ತೆತ್ತಲೂ ನನ್ನದೆ ಗುಣಗಾನಮಾಡುತಿಹರಯ್ಯಗುಣ ನಡೆ ನುಡಿಯಿಂದಲೇ ಸಮಾಜದಲ್ಲಿಸ್ಥಾನ ಮಾನ ದೊರೆಯುವುದೆಂದುತಿಳಿಯರಯ್ಯಗುಣ ನಡತೆಯನ್ನು ಮೂಲೆಗೆ ತಳ್ಳಿ ಹಣಕ್ಕೆಬೆಲೆ ಕೊಡುವ ದಾನ ದಾಹಿಗಳನು ಮನೆಗೆಹೇಗೆ ಸೇರಿಸಲಯ್ಯ –ರತ್ನದೀಪ ಗಜನ ಮಣಿಸಿ ದಂತ ಪಡೆಯಬಹುದುವ್ಯಾಘ್ರನ ಒಲಿಸಿ ಉಗುರು ಹಲ್ಲುಪಡೆಯಬಹುದುಮೊಸಳೆಯ ಮರ್ದಿಸಿ ಪಾರಾಗಬಹುದುಉರುಗ ಕಚ್ಚಿದರೆ ಬದುಕಿಸಬಹುದುನೆರೆ ಉಕ್ಕಿದರೆ ಈಜಿ ದಡ ಸೇರಬಹುದುಮನೆಗೆ ಬೆಂಕಿ ಬಿದ್ದರೆ ನುಸುಳಿಬರಬಹುದುಕಾಲು ಕೆರೆದು ನಿಂತ ಗೂಳಿಯನುಬಗ್ಗಿಸಬಹುದುಜ್ಞಾನದ ಬಡತನವಿರಲು ಎಲ್ಲದರಲ್ಲೂಬೋರಯ್ಯ —ರತ್ನದೀಪ ಒಪ್ಪಿ ಭಜಿಸುವ ಮನಸ್ಸಿರಬೇಕುಒಪ್ಪದಿಂದ ಅರಿವ ಗುಣ ಸಂಪತ್ತುಇರಬೇಕುನಿತ್ಯ ಪೂಜೆಗೈಯಲು ನಿರ್ಮಲಚಿತ್ತವಿರಬೇಕುಭಕ್ತನ ಮನಸು ಏಕಾಗ್ರತೆಯಿಂದಿರಬೇಕುಭಕ್ತಿ ತಾನೆಂದು ಹುಂಬಿನಲಿ ಪೂಜೆಗೈಯಲುಒಲಿಯುವನೆ ಶಿವನು ಮುನಿದೋಡುನಾನಯ್ಯ –ರತ್ನದೀಪ ಕನ್ನಡಿಯೊಳಗಿನ ಬಿಂಬ ಕಂಡುಬೀಗದಿರು ತರುಣಿಅಮೂಲ್ಯ ವೇಳೆಯನ್ನು ಕಬಳಿಸುವುದುಕನ್ನಡಿಯೊಳಗಿನ ಬಿಂಬನಿನ್ನ ಗುರಿಯನ್ನು ನುಂಗಿಸೌಂದರ್ಯದ ಹುಚ್ಚು ಹಿಡಿಸಿ.ಅಲಂಕಾರದ ಅಮಲೇರಿಸಿನಿತ್ಯ ಕಾಯಕದ ಕರ್ತವ್ಯ ಮರೆಸಿದುಃಖದ ಮೂಲಕ್ಕೆ ಹೊಯ್ಯುವುದುಎಚ್ಚರವಿರಲಿ —ರತ್ನದೀಪ ಕಾಮ ಕಿಡಿಯಾಗಬಹುದುಕೋಟಿ ಕುರಿತಾಗಿ ಬಹುದುಹರಿಯಬಿಟ್ಟು ಮನಸು ಹಾವಾಗಬಹುದುಮೋಹ ಮನದ ಪರದೆ ಮುಚ್ಚಬಹುದುಕಾಮ ದಾಹಕ್ಕೆ ಕುರುಡಾಗದಿರುವಂದಿಸಿದವಳನುಳಿದು ಉಳಿದವರುತಾಯಂದಿರು ಸೋದರಿಯರೆಂದೆಣಿಸುನಿನ್ನ ಕಣ್ತೆರೆಯುವುದು —ರತ್ನದೀಪ ಅಗಸನಿಗೆ ಯಾರು ಬಟ್ಟೆಯಾದರೇನು?ಒಗೆಯುವುದು ಅವನ ಕಾಯಕಕತ್ತೆಗೆ ಯಾವ ಹೊರೆಯಾದರೇನುಹೊರುವುದು ಅದರ ಕಾಯಕಅಗಸನಿಗಿಲ್ಲ ಅದರ ಚಿಂತೆ ಮೌಢ್ಯ ತುಂಬಿದ ಮನಕೆಜ್ಞಾನ ನೀಡಯ್ಯಕತ್ತಲು ತುಂಬಿದ ಮನಕೆಅರಿವಿನ ಬೆಳಕು ನೀಡಯ್ಯಕತ್ತಲಲ್ಲಿ ಹುದುಗಿರುವ ಭಾವನೆಗಳಿಗೆಬೆಳಕು ನೀಡಯ್ಯಬೆತ್ತಲಾದ ಮನಕೆವಚನದ ಬಟ್ಟೆ ತೊಡಿಸಯ್ಯಬೆತ್ತಲಾದ ಮನದಲ್ಲಿ ವಚನಗಳುಅರಳುವಂತೆ ಮಾಡಯ್ಯ – ರತ್ನದೀಪ ಕಾಯಕ ಮಾಡಿದೆಕೈಲಾಸಂ ಬೇಡಿದರೆಂತಯ್ಯ?ಮೋಹ ತೊರೆಯದೆಮೋಕ್ಷ ಬೇಡಿದರೆಂತಯ್ಯ?ಸೌಹಾರ್ದತೆ ಇಲ್ಲದೆಸಂಭ್ರಮ ಬೇಡಿದರೆಂತಯ್ಯ?ಸಂಬಂಧದ ಮೌಲ್ಯವನರಿಯದೆಸ್ನೇಹ ಬೇಡಿದರೆಂತಯ್ಯ?ಎಲ್ಲರೊಳಗೆ ಒಂದಾಗಿ ಬೆರೆಯದಿರಲುಏನಿದ್ದರೂ ಫಲವಿಲ್ಲಯ್ಯ – ರತ್ನದೀಪ ಅರಗಿನ ಮನೆಯೊಳಗಿದ್ದುಅಗ್ನಿಗೆ ಅಂಜಿದೊಡೆಂತಯ್ಯ?ಅಂದರೆ ಮಡದಿಯನು ಕೂಡಿನಿಂದನೆಗೆ ಅಂಜಿದೊಡೆಂತಯ್ಯ?ಸಾಕುವ ಶಕ್ತಿಯಿಲ್ಲದೆ ಕಂದನ ಪಡೆದುನಾಡಿನ ಮೇಲೆ ಬಿಸುಟರೆಂತಯ್ಯ ?ಕೈಯಲ್ಲಿ ಖಡ್ಗವಿದ್ದರೂ ರಕ್ಷಿಸಿಕೊಳ್ಳಲುಹಿಂಜರಿದರೆಂತಯ್ಯ? – ರತ್ನದೀಪ************************

ಆಧುನಿಕ ವಚನಗಳು Read Post »

ಕಾವ್ಯಯಾನ

ಮುಂಜಾವಿನ ಬೆರಗು

ಕವಿತೆ ಮುಂಜಾವಿನ ಬೆರಗು ಡಾ.ಪ್ರೀತಿ ಕೆ.ಎ. ಅದೊಂದು ತಿಳಿ ಮುಂಜಾವುಎದ್ದಿದ್ದೆ ನಿನ್ನ ನೆನಪುಗಳಿಂದಕಣ್ಣ ಮೇಲಿನ ಮುಂಗುರುಳನ್ನುಹಗೂರಕ್ಕೆ ಹಿಂದೆ ಸರಿಸಿಬೆಚ್ಚಗಿನ ಚಹಾವನ್ನು ಇಷ್ಟಿಷ್ಟೇಹೀರುತ್ತಾ ಬಾಲ್ಕನಿಯಲ್ಲಿ ನಿಂತಿದ್ದೆ ನಿನ್ನೆವರೆಗೆ ಮೊಗ್ಗಾಗಿದ್ದಕೆಲವೇ ಕೆಲವು ಗಳಿಗೆಗಳಹಿಂದಷ್ಟೇ ಹೂವಾಗಿ ಬಿರಿದಆ ಸೇವಂತಿಗೆಯ ಮೃದು ಪಕಳೆಗಳಿಗೆನಿನ್ನದೇ ಮೈಯ ಘಮ ಚೀವ್ ಚೀವ್ ಗುಬ್ಬಿಮರಿಗಳಜೊತೆ ಸೇರಿದ ಹೊಸ ಹಕ್ಕಿಗಳಸಂಗೀತ ಸುಧೆಯಲ್ಲಿನಿನ್ನದೇ ನಾದ ಮೆಲ್ಲನೇ ಬೀಸುತ್ತಿರುವತಂಗಾಳಿಗೆ ಸಾಥ್ ಕೊಡುವಂತೆಅತ್ತಿಂದಿತ್ತ ಓಲಾಡುತ್ತಿರುವಆ ಎಳೇ ಸಂಪಿಗೆ ಗಿಡಕ್ಕೆನಿನ್ನದೇ ಲಯ ನೀಲಾಕಾಶದಲ್ಲಿ ತುಸುವೇಮೊಗವನ್ನು ತೋರುತ್ತಿದ್ದಇದೀಗ ಬಂಗಾರದ ಬಣ್ಣದಿಂದಮಿರಿ ಮಿರಿ ಹೊಳೆಯುತ್ತಿರುವ ಸೂರ್ಯನಿಗೆನಿನ್ನ ಕಣ್ಣುಗಳಲ್ಲಿದ್ದಷ್ಟೇ ಪ್ರಖರತೆ ಅರೇ ! ಇದೇನಿದುನಿನ್ನ ನೆನಪುಗಳ ಬಂಧದಿಂದಬಿಡಿಸಿಕೊಂಡೆ ಎಂಬುವುದುಬರೆಯ ಭ್ರಮೆಯಲ್ಲವಷ್ಟೇ? ನನ್ನನ್ನು ನೀನು ಆವರಿಸಿಕೊಂಡಪರಿಗೆ ಬೆರಗಾಗುತ್ತಿರುವಾಗಹಿತವಾಗಿ ತಬ್ಬಿ ನಿಂತೆಇದು ಕನಸಲ್ಲವೆಂದುಸಾಬೀತು ಪಡಿಸುವನಂತೆ…! **********************

ಮುಂಜಾವಿನ ಬೆರಗು Read Post »

You cannot copy content of this page

Scroll to Top