ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹೈಕುಗಳು

ಹೈಕುಗಳು ಕೆ.ಸುನಂದಾ. ಬಾನಲ್ಲಿ ನಕ್ಕಶಶಿ ; ಕಂಡು ತಂಪಾಯ್ತುನೊಂದ ಮನಕ್ಕೆ* ತಳಮಳವತಾಳೆನಾ ; ಕೇಳು ಸಖಿಯಾರಿ ಸುಂದರಿ* ಅಡವಿಯಲ್ಲಿಬಿರಿದ ಮಲ್ಲೆ ಕಾಯ್ವೆನೀ ಯಾರಿಗಿಲ್ಲಿ* ವೃಕ್ಷಗಳಲ್ಲಿಸಾಕ್ಷಾತ್ ದೇವನಿಹನುಎಲ್ಲರ ಭಾಗ್ಯ * ಕಾಣೋ ಕಣ್ಣಿಗೆಸಂಭ್ರಮ ; ಈ ನಿಸರ್ಗಬೇಕು ಜೀವಿಗೆ* ಸೃಷ್ಟಿಯೇ ದೈವತಿಳಿದಂತೆ ಇರುವನಮ್ಮಂತೆ ಅವ* ಪ್ರೀತಿಯ ಗೂಡುಅನುಭವಿಸಿ ಹಾಡುಎನಿಲ್ಲ ನೋಡು ************************************

ಹೈಕುಗಳು Read Post »

ಕಾವ್ಯಯಾನ

ಜೀವನ

ಕವಿತೆ ಜೀವನ ಭಾರತಿ ರವೀಂದ್ರ ನೋವು ನಲಿವುಗಳನೆರಳು ಬೆಳಕಿನ ಜೋಕಾಲಿ ಈ ಜೀವನ. ಹುಣ್ಣಿಮೆಯ ಕಂಡುಉಕ್ಕಿ ಬರುವ ಸಾಗರ ದಷ್ಟೇ ಅಗಾಧ ಈ ಜೀವನ. ಸುರಿಯೋ ಸೋನೆಗೆಹೆಜ್ಜೆ ಹಾಕೋ ನವಿಲಿನಕಾಲ್ಗೆಜ್ಜೆಯ ದನಿಯ ಹಾಗೆಸದ್ದೇ ಇಲ್ಲದ ಹೆಜ್ಜೆಯಸಂಗೀತ ದಂತೆ ಈ ಜೀವನ. ಬಡತನದ ಬೇಗೆ ಇರಲಿಸಿರಿತನದ ಸೊಬಗಿರಲಿಪ್ರೀತಿಯ ಹೊನಲಾಗಲಿಈ ಜೀವನ. ಸಂತೃಪ್ತಿಯ ಮನಕೆಸಿರಿತನದ ಸೋಗು ಇರದು ಒಲವೇ ನಲಿವುಈ ಜೀವನ **********************************

ಜೀವನ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಶಾಲಿನಿ ಆರ್. ಅನುರಾಗ ಆರಾಧನೆಯಿದೆ ಕಣ್ಣಂಚಿನ ಕೊನೆಯಲಿ ಮಿಂಚು ಸುಳಿದಿದೆ ನಾ ನಿನ್ನೆನೆವಾಗ/ಮನದಾಳದ ಮಾತಲ್ಲಿ ನವಿರಾದ ಭಾವೋತ್ಕರ್ಷ ಸಂಚು ಅಡಗಿದೆ ನಾ ನಿನ್ನ ನೆನೆವಾಗ// ನೆನೆದಷ್ಟು ಮನ ಮೃದುಲತೆಯ ತವರು,ಪೇಮ ಫಲದ ಗೊಂಚಲು/ರಾಗದೊಲವ ಎಲರು ಹಾದಿಗುಂಟ ತೂಗುತಿದೆ  ನಾ ನಿನ್ನ ನೆನೆವಾಗ//. ಬಾನಲಿ ಹೊಳೆವ ತಾರೆಗಳ ಕಾಂತಿಗೆ ನಿನ್ನ ವದನ ಚಂದಿರನ ಪ್ರತಿಫಲನವು/ಆಹಾ! ಮನವದು ನಿಲುಕದೆ ಒಲವಿನಂಕಣಕ ಬರೆಯುತಿದೆ, ನಾ ನಿನ್ನ ನೆನೆವಾಗ// ತಂಪೆಲರ ಒಲವಿಗೆ ಮನವು ಆರ್ದ್ರಗೊಂಡು  ಕರಗುತಿದೆ/ತನುವದು ಮುದದಿ ತಣಿದುಚರ್ವಿತ ಒಲವು ಹೊನಲಾಗಿದೆ, ನಾ ನಿನ್ನ ನೆನೆವಾಗ// ಭಾವಲೋಕದೀ ಸರಿತ ಸಲ್ಲಲಿತ ಕವನ ಮರುಳಿರಿಸಿ ಹರಿಯುತಿದೆ /ಶಾಲಿನಿಯ ಬಂಧದಲೀ ಒಲವ ಸಿಂಚನ ಕಚಗುಳಿಯಿಡುತಿದೆ ನಾ ನಿನ್ನ ನೆನೆವಾಗ// ********************************************************

ಗಜಲ್ Read Post »

ಕಾವ್ಯಯಾನ

ಕಾವ್ಯಯಾನ

ಮತ್ತೆ ನೆನಪಾಗುತ್ತಿದೆ ಚಂದ್ರು ಪಿ ಹಾಸನ್ ಮತ್ತೆ ನೆನಪಾಗುತ್ತಿದೆ, ನನ್ನ ಬಾಲ್ಯದೊಳುಕಳೆದ ದಿನಗಳು ಸುಂದರ ಆ ಮಧುರ ಕ್ಷಣಗಳುಕೆದಕಿದೆನು ನಾ ಇಂದು ಒಂದೊಂದು ಮನದೊಳುಚಿತ್ರಿಸಲೊರಟೆ ಸಾಲುಗಳಲ್ಲಿ ಆಕ್ಷಣಗಳ ಮುದದೊಳು ಮತ್ತೆ ನೆನಪಾಗುತ್ತಿದೆ, ನಾಲ್ಕೆಜ್ಜೆಯ ಮುಗ್ದ ಸಾಲುಅಮ್ಮನ ತೋಳು ಅದು ಸಂತಸದ ಸಾಲುರಾಜ ಸಿಂಹಾಸನ ನನ್ನ ತಾಯಿಯ ಮಡಿಲುಕುಣಿದು ಕುಪ್ಪಳಿಸಿದೆ ಪಡೆದೆ ಕೈತುತ್ತು ಅಲ್ಲಿ ನೆನಪಾಗುತ್ತಿದೆ ವಿದ್ಯಾರ್ಜನೆಯ ಆರಂಭಪ್ರಾಥಮಿಕ ಶಾಲೆಯ ಗಂಟೆ ಸದ್ದುಕೇಳಿದೊಡನೆ ಅಡ್ಡಗದ್ದೆ ಬಯಲಲ್ಲಿಓಡುತ್ತಿದ್ದೆವು ಗುಂಪಾಗಿ ಎದ್ದು-ಬಿದ್ದು ಮತ್ತೆ ನೆನಪಾಗುತ್ತಿದೆ, ಶಾಲೆಯ ಸಂಜೆಗಳುಅಣ್ಣನ ತೋಳು ಪ್ರತಿಸಂಜೆ ನಾ ಕೊಟ್ಟ ಗೋಳುದಿನಂಪ್ರತಿ ಅವಂಗೆ ನನ್ನ ಕಾಯುವ ಕಾರ್ಯರಸ್ತೆಬದಿ ಶುದ್ಧಕ್ಕಾಗಿ ನನ್ನ ಚಡ್ಡಿ ಹಿಡಿವಾಗ ಶೌರ್ಯ ಮತ್ತೆ ನೆನಪಾಗುತ್ತಿದೆ ರಾತ್ರಿಯ ಊಟಸಂಜೆಗೆ ಬಂದ್ ಆಗ್ತಿತ್ತು ಎಲ್ಲ ಆಟ-ಪಾಠಅಜ್ಜಿ ಹಾಸಿಗೆಯಲ್ಲಿ ನುಸುಳಿ ಗೊರಕೆ ಗೋಟರ್ ಗೊಟಮುಂಜಾನೆ ನಾಲ್ಕ್ಘಂಟೆಗೆ ಅಮ್ಮಂಗೆ ಗಿಳಿಪಾಠ ಮತ್ತೆ ನೆನಪಾಗುತ್ತಿದೆ, ಶಾಲೆಯ ಅಡ್ಡರಸ್ತೆಆ ಹಾದಿಯಲ್ಲಿ ಸಾಗಿದರೆ ಕಳೆಯುವುದೆಲ್ಲಾ ಸುಸ್ತುಅಲ್ಲೊಂದಿತ್ತು ಹುಣಸೆ, ಮಾವು, ನೇರಳೆ ಮರಪ್ರತಿ ಸೀಜನ್ ನಲ್ಲೂ ನಮ್ಮದೇ ರಾಜ್ಯಭಾರ ಮತ್ತೆ ನೆನಪಾಗುತ್ತಿದೆ, ಪರೀಕ್ಷೆಗಳ ಪ್ರಗತಿ ಪತ್ರಮಾರ್ಕ್ಸ್ ಕಾರ್ಡ್ ನಲ್ಲಿ ಅಂಕಗಳು ಕಡಿಮೆ ಬಂದದ್ದುಎಷ್ಟು ಬಾರಿ ಅಪ್ಪನ ಭಯದಲ್ಲಿ ತೋರಿಸದೆ ಕುಳಿತದ್ದುಬೆಳಗ್ಗೆ ಹೊರಡುವ ಸಮಯದಲ್ಲಿ ಅಮ್ಮನ ಕಾಲಿಡಿದಿದ್ದು ಮತ್ತೆ ನೆನಪಾಗುತ್ತದೆ, ಗದ್ದೆಯಲ್ಲಿನ ಆಟೋಟಭಾನುವಾರದಿ ನಡೆಯುತ್ತಿತ್ತು ನಮ್ಮದೇ ಒಂದು ಕೂಟಮುಂದಾಳತ್ವ ಸಿಗುತ್ತಿತ್ತು ಮಾಡಿಸಿದಂತೆ ಮಾಟಯಾಕಂದ್ರೆ ನಾ ಆಡ್ತಿದ್ದೆ ಚೆನ್ನಾಗಿ ಮರಕೋತಿಯಾಟ ಮತ್ತೆ ನೆನಪಾಗುತ್ತಿದೆ, ಜಾತ್ರೆ ಹಬ್ಬಗಳುಬಗೆಬಗೆಯ ತಿಂಡಿಗಳ ಬಿಡ ಬಿಡದೆ ಸವಿದಿದ್ದುಬಚ್ಚಿಟ್ಟಿದ್ದ ತಿನಿಸುಗಳ ಒಂದೊಂದೇ ಕದ್ದದ್ದುಎಂಟಾಣೆ ಹಿಡಿದು ಜಾತ್ರೆಯೆಲ್ಲಾ ಸುತ್ತಿದ್ದು ಮತ್ತೆ ನೆನಪಾಗುತ್ತಿದೆ ಕಾಲೇಜಲ್ಲಿ ನನ್ನ ಸ್ಥಿತಿಗತಿಅಲ್ಲಿ ಕಾಡಿತು ಪ್ರತಿದಿನ ವಿಜ್ಞಾನ ಕೋರ್ಸ್ನ ಭೀತಿಪ್ರಾರಂಭದಲ್ಲಿ ಹೃದಯದಲ್ಲಿ ಅಡಗಿಸಿದ್ದೆ ಚೊಚ್ಚಲ ಪ್ರೀತಿನಿಧಾನ ಹಂತದಲ್ಲಿ ಪಡೆದು ಜೀವನದಿ ಪ್ರಗತಿ ಮತ್ತೆ ಮತ್ತೆ ನೆನಪಾಗುತ್ತಿದೆ ಕಾಲೇಜು ಪಯಣಬಸ್ಸಿನಲ್ಲಿ ರಶ್ಶಾದರೆ ಬಾಗಿಲಲ್ಲಿ ನೇತಾಡ್ತಾ ನಮನಗೆಳತಿಯರ ಸೆಳೆಯಲು ಮಾಡ್ತಿದ್ದೆ ಆರೋಗ್ಯಕರ ಗಮನಸ್ನೇಹದ ಕಡಲಲ್ಲಿ ಹೇಗೋ ಸಾಗಿಸಿದ ಪಾರ್ವತಿರಮಣಾ ಮತ್ತೆ ನೆನಪಾಗುತ್ತಿದೆ ಪ್ರತಿ ಹೆಜ್ಜೆಗಳಲ್ಲಾಟಒಂದೊಂದು ಪರಿಸರದಲ್ಲೂ ಅನುಭವದ ಪಾಠಶಿಕ್ಷಕನಾಗಿ ಕಲಿಸಿದ ಕಂಡದ್ದೆಲ್ಲ ಬರೆಯುವ ಚಟಪರ ವಾಯಿತು ವಿಧಿಯಾಟ ಕಲಿಸಿತು ನೀತಿಪಾಠ ಮತ್ತೆ ನೆನಪಾಗುತ್ತಿದೆ ಬಾಲ್ಯದ ಸ್ನೇಹಜೀವಿಗಳುಕಂಡಾಗ ಹಾಯ್ ಹೋಗುವಾಗ ಬಾಯ್ ಅನ್ನೋ ಸಿಹಿ ಕ್ಷಣಗಳುಕಾಲಚಕ್ರವು ಎಲ್ಲವ ತಿರುಗಿಸಿ ಮರೆಸಿತುಆದರೆ ಮನಸ್ಸಿನ ಪುಟದಲ್ಲಿ ಅಚ್ಚರಿಯಾಗಿವೆ ನೆನಪುಗಳು ಮತ್ತೆ ನೆನಪಾಗುತ್ತಿದೆ ನೆನಪುಗಳ ನೆನಪುಗಳು ****************************************

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ನಾ ನಿನ್ನ ಎಷ್ಟು ಪ್ರೇಮಿಸುತ್ತಿರುವೆನೆಂದು ನನಗೆ ಸರಿ ಗೊತ್ತಿಲ್ಲನೀ ಇಲ್ಲದೇ ನಾ ಬದುಕಿರಲಾರೆನೆಂದಿಗೂ ಅನ್ನೋದು ಸುಳ್ಳಲ್ಲ ನಿನ್ನನ್ನು ಬೇರೆಯವರು ಒಲಿಸಿಯಾರೆಂದು ಸದಾ ಭಯವಿದೆ ಈ ಹೃದಯಕೆಬಹು ಕಷ್ಟದಿ ಮತ್ತೆ ಮತ್ತೆ ಸಮಾಧಾನಿಸುವೆ ಹಾಗೇನು ಆಗಲಿಕ್ಕಿಲ್ಲ ಏನೇನು ಕಾಳಜಿ ಮಾಡಿ ಸಂಭಾಳಿಸಿಕೊಳ್ಳುವೆ ಅಂತ ನಿನಗೇನು ಗೊತ್ತುಈ ಮನಸ್ಸು ತಕರಾರಿಲ್ಲದೆ ಒಳಗೆ ನೊಯ್ಯುತ್ತಿದೆ ನಿನಗೆ ಅರಿವಿಲ್ಲ ಬೇಡವೆ ಮುಗಿಸು ಈ ಕಣ್ಣುಮುಚ್ಚಾಲೆಯಾಟ ಕಳೆಯಲಿ ಮಧು ಬಟ್ಟಲಲ್ಲಿಎಷ್ಟು ಸಲ ಮನದ ಮಾತು ಹೇಳಿದರೂ ನಿನ್ನ ಮನದ ಹಾಡೇ ನೀ ಹಾಡುತ್ತಿಲ್ಲ ಇಷ್ಟು ಗೊತ್ತಿರಲಿ ನೀನಿಲ್ಲದೆ ಬದುಕಿರಲಾರದು ಈ ಜೀವ ಇನ್ನೆಂದಿಗೂ‘ಹೊನ್ನು’ಪ್ರೀತಿಯಲ್ಲಿ ಬಿದ್ದಾಗಿದೆ ನೀ ತಬ್ಬದೆ ಗತಿಯಿಲ್ಲ ಮತಿಯಿಲ್ಲ ಸಿದ್ಧರಾಮ ಹೊನ್ಕಲ್ (ಹಿಂದಿ ಗೀತೆಯೊಂದರ ಪ್ರಭಾವದಿಂದ (ಹಿಂದಿ ಗೀತೆಯೊಂದರ ಪ್ರಭಾವದಿಂದ) *********************************************

ಗಜಲ್ Read Post »

ಕಾವ್ಯಯಾನ

ಅರಿವೇ ಗುರು

ಕವಿತೆ ಅರಿವೇ ಗುರು ವಸುಂಧರಾ ಕದಲೂರು ದೀಪ ಆರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ- ಕತ್ತಲೀಗಒಳಹೊರಗೂ.. ಮೌನಕ್ಕೆ ಶರಣಾದೆ, ಕಿವುಡುತನದಲಿ.ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ.. ಇತಿಮಿತಿಗಳ ಅರಿವಾಯ್ತು,ನನ್ನದೂ ಮತ್ತವರಿವರದು.ಜಾಗರೆಂದರೆ ಜಾಗರೂಕಳೀಗ.ಒಳಹೊರಗೂ.. ಮಮತೆಯ ಕಣ್ತೆರೆದು, ಒಲವಿನಲಿನೋಡಿ ನುಡಿದೆ. ಹರುಷವೆಂದರೆಹರುಷವೀಗ. ಒಳಹೊರಗೂ.. ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದುಬಂದ. ಬೆಳಕೆಂದರೆ ಬೆಳಕೀಗಒಳಹೊರಗೂ.. **************************************

ಅರಿವೇ ಗುರು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮುಂಗಾರು ಮುಗಿಲೇ ಆರ್ಭಟಿಸುತ ಮಳೆ ಸುರಿಸದಿರು ಇನಿಯ ಬರುವಆಷಾಡದ ಬಿರುಸು ಗಾಳಿಯೇ ಮಣ್ಣು ತೂರದಿರು ಇನಿಯ ಬರುವ ನೂರು ಕನಸುಗಳ‌ ಜಾತ್ರೆ ಮಾಡಿಸುವ ಮೋಜಗಾರ ಅವನುಮುದ್ದಿನ ಗಿಳಿ ಸವಿಮಾತಿನಲಿ ಹಾದಿಯ ಕಟ್ಟದಿರು ಇನಿಯ ಬರುವ ವಿರಹದ ದಳ್ಳುರಿ ಆರಿಸುವ ಸುಂದರ ಶೀತಲ ಕುಮಾರ ಅವನುಬನದ ನವಿಲೆ ಗರಿಗಳ ಬಿಚ್ಚಿ ದಾರಿ ತಪ್ಪಿಸದಿರು ಇನಿಯ ಬರುವ ಬೆಂದ ಹೃದಯಕೆ ಒಲವಿನ ಅಧರ ಮುಲಾಮ ಹಚ್ಚುವ ವೈದ್ಯ ಅವನುಕೆಂಡ ಸಂಪಿಗೆ ಘಮ ಹರಡಿ ನಿನ್ನ ಕಡೆ ಸೆಳೆಯದಿರು ಇನಿಯ ಬರುವ “ಪ್ರಭೆ” ಎದೆಯಲಿ ಅನುರಾಗದ ಕಡಲನು ಉಕ್ಕಿಸುವ ಚಂದಿರ ಅವನುಚಕೋರ ಬೆಳದಿಂಗಳ ನುಂಗಿ ಕತ್ತಲು ಮಾಡದಿರು ಇನಿಯ ಬರುವ. *******

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರತಿಮಾ ಕೋಮಾರ ಈರಾಪುರ ಬದುಕು ಬಯಲಾಗಿದೆ  ಭರವಸೆ ಮೂಡಿಸುವವರು ಕಾಣುವುದಿಲ್ಲ ಏಕೆ?ಕಾಲ ಹಂಗಿಸುತ್ತಿದೆ ಕಾರಣ ಹುಡುಕುವವರು ತೋಚುವುದಿಲ್ಲ ಏಕೆ? ತನ್ನ ಅಸ್ತಿತ್ವಕ್ಕಾಗಿ ಹೋರಾಟ ಬಡಿದಾಟ ಸರಿಬಿಡುತನ್ನವರ ಬೆಳಕಿಗಾಗಿ ಹಣತೆ ಹೊತ್ತಿಸುವವರು ಸಿಗುವುದಿಲ್ಲ ಏಕೆ? ಕೆಂಡದುಂಡೆ  ಉರುಳುವಾಗ ಸುತ್ತಲೆಲ್ಲ ಸುಡುತ್ತಲೇ ಉರುಳುವುದುತುಪ್ಪ ಸುರಿಯುವವರ ಬಿಟ್ಟು ಬೆಂಕಿ ಆರಿಸುವವರು ಗೋಚರಿಸುವುದಿಲ್ಲ ಏಕೆ? ತನ್ನ ಅಂಗೈ ಹುಣ್ಣು ನೋಡಲು ಕನ್ನಡಿಯನ್ನು  ಹುಡುಕುತ್ತಿದ್ದಾರೆ ಇಲ್ಲಿಪರರ ಹುಣ್ಣಿಗೆ  ಯಾರು ಮುಲಾಮು ಹಚ್ಚುವವರು? ಅಥ೯ವಾಗುವುದಿಲ್ಲ  ಏಕೆ? “ಪ್ರತಿ “ಉರುಳುವ ದಿನದ ಲೆಕ್ಕಾಚಾರ ಯಾರು ಹಾಕುವರುಕಳೆವ ಘಳಿಗೆಯಲಿ ಕೆಲವರು ಬದುಕ ಪಾಠ ಕಲಿಸುವವರು ಮರೆಯಲಾಗುವುದಿಲ್ಲ ಏಕೆ? *******************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್‌

ಗಜಲ್‌ ರತ್ನರಾಯ ಮಲ್ಲ ನಿನ್ನ ಬೆಳದಿಂಗಳಿನಂಥ ಕಂಗಳ ನೋಟದಲ್ಲಿ ಕಳೆದು ಹೋಗುತ್ತಿರುವೆನಿನ್ನ ಕಣ್ರೆಪ್ಪೆಯ ಪ್ರೇಮದ ಜೋಕಾಲಿಯಲ್ಲಿ ಸಂಭ್ರಮ ಪಡುತ್ತಿರುವೆ ಚಂದ್ರಬಿಂಬದಂಥ ನಿನ್ನ ಮುಖ ಕಂಡು ನೇಸರನು ಗೂಡು ಸೇರಿಹನುನಿನ್ನ ವದನವನ್ನು ಹತ್ತಿರದಿಂದ ಕಾಣುತ್ತ ಪ್ರೀತಿಯಲ್ಲಿ ಮುಳುಗುತ್ತಿರುವೆ ಕಾಮನಬಿಲ್ಲಿನಂತ ಆಭರಣಗಳ ಕಾಂತಿ ನಿನ್ನ ಅಂದವನ್ನು ಹೆಚ್ಚಿಸುತ್ತಿವೆನಿನ್ನ ಸಾನಿಧ್ಯದಿ ಒಲವಿನ ಪುತ್ಥಳಿಯನ್ನು ಚುಂಬಿಸುತ್ತ ನಲಿಯುತ್ತಿರುವೆ ರಸದೌತಣಕೆ ಆಮಂತ್ರಿಸುತಿವೆ ನಿನ್ನ ವೈಯ್ಯಾರದ ಮೈ ಮಾಟಗಳುಕಲ್ಪವೃಕ್ಷದ ಕೊಂಬೆಗಳಂಥ ಆ ನಿನ್ನ ತೋಳುಗಳನ್ನು ಬಯಸುತ್ತಿರುವೆ ಸುಗಂಧದಂತ ನಿನ್ನ ಉಸಿರಿನಲ್ಲಿ ‘ಮಲ್ಲಿ’ ಬೆರೆತು ಹೋಗುತಿರುವನುಮೆದುವಾದ ನಿನ್ನ ಮಡಿಲಲ್ಲಿ ಹಗಲು-ರಾತ್ರಿಗಳನ್ನು ಎಣಿಸುತ್ತಿರುವೆ **********************************************

ಗಜಲ್‌ Read Post »

ಕಾವ್ಯಯಾನ

ಕನಸಿನ ಕೊನೆ

ಕವಿತೆ ಕನಸಿನ ಕೊನೆ ನೀ.ಶ್ರೀಶೈಲ ಹುಲ್ಲೂರು ಬೇಗುದಿಯ ಬೆಂಗೊಡದಕರಿಕಾಯದೀ ಕಥೆಗೆನೂರೆಂಟು ಕನಸು…ಅವಳ ಮುಡಿಗೆ ಚಿನ್ನದ ಹೂಕೊರಳಿಗೆ ಮುತ್ತಿನ ಹಾರಮೈಗೆ ಅಂದದ ರೇಷ್ಮೆ ಸೀರೆಬತ್ತಿದೆದೆಗೊಂದು ಚೆಂದದ ರವಿಕೆ! ಮಕ್ಕಳಾಟಕೆ ಬುಗುರಿ ಪೀಪಿತೂಗುಕುದುರೆ ಓಡಲೊಂದುಕಬ್ಬಿಣದ ಗಾಲಿಪಡೆವಾತುರಕೋ ಒಡಲ ತುಂಬಆಸೆಗಳ ನೂರು ಕಟ್ಟು!ಅಂದವಾದ ಈ ಮೈಕಟ್ಟಿನೊಡೆಯನ ತುಡಿತಕೆಯಾವಾಗಲೂ ಚಿಗುರು! ಧಣಿಯ ದಪ್ಪ ಚರ್ಮದಮೇಲೂ ಅದೆಂಥದೋ ಮಮತೆಬಿಡಿಗಾಸು ನೀಡದವನಅಡಿದಾಸನಾಗಿ ಹರೆಯಸವೆಸುವ ಅಪೂರ್ವ ಸಂತಸಅವಳಿತ್ತ ಬೇಡಿಕೆಯಅಕ್ಷಯಾಂಬರಕೆ ಬೆನ್ನು ತಿರುಗಿಸಿದುಡಿಯುವ ನಗ್ನ ಸತ್ಯ! ಸಂಜೆ ಮನೆಯ ದಾರಿಯಲಿಕಸುವು ಕಳೆದುಕೊಂಡ ದೇಹದಜೊತೆಗೆ ಅದೇ ಖಾಲಿ ಕೈಜೋಮುಗೊಂಡ ಕಾಲಿಗೆ ಬುದ್ಧಿಹೇಳಿ ಹೊಡೆಯುತ್ತಾನೆ ಜೋಲಿಓಣಿಯ ತುಂಬಾ ಕೊಳೆತುಸೀತು ಹೋದ ಚರ್ಮದ ದುರ್ನಾತತಿಪ್ಪೆಗುಂಡಿಯ ಸಂಗ ಮಾಡಿದನೀರು ನಿಂತು ಮಲೆತ ಕೆಸರ ಕುಂಡ! ಎಲುಬೆಣಿಸುವ ತನ್ನ ಪ್ರೀತಿ ನಾಯಿಯಮೈತುಂಬಾ ಕಜ್ಜಿ ಗಾಯ ಕೀವುಅರಿಷಿಣ ಸವರಲು ಬಿಡದ ಅದರರೋಷಕೆ ಇವನು ತಬ್ಬಿಬ್ಬುಮಕ್ಕಳ ರೆಪ್ಪೆ ತುಂಬಾ ಪಿಚ್ಚುಸೋರುತಿಹ ಕಟಬಾಯಿ ಜೊಲ್ಲುಗುಂಡು ಹಾಕಲು ಅಂಗಡಿಯವನಜೊತೆ ಮಾಡಿದ ಗಿಲೀಟು ಠುಸ್! ಝಗಮಗಿಸುವ ಈ ಕಾಲದಲೂಮನೆ ಕತ್ತಲೆಯ ಕೂಪಎಣ್ಣೆಯನ್ನು ಬಿಡದೆ ಬಾಟಲಿಯಚಿಮಣಿಯನ್ನೂ ನುಂಗಿದ ಬೆಂಕಿ ಬತ್ತಿಇಲ್ಲಗಳನೆಲ್ಲ ಎದೆಯ ಮೇಲೇಹೇರಿಕೊಂಡು ನಡೆದವನ ಹಿಂದೆಹೊರಟರು ಕೇರಿಯ ಜನ ಅನ್ನುತ್ತಿದ್ದರುಏನೋ ಮಣಮಣ!ಉಳಿದ ಅವಳೆದೆ ಮಾತ್ರಈಗಲೂ ಭಣಭಣ!! *******************************************

ಕನಸಿನ ಕೊನೆ Read Post »

You cannot copy content of this page

Scroll to Top