ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿರುತ್ತರ

ಕವಿತೆ ನಿರುತ್ತರ ಮಧುಸೂದನ ಮದ್ದೂರು ನಿನ್ನ ತುದಿ ಬೆರಳುಎದೆ ತಾಕಲುನೂರು ನವಿರು ಪುಳಕ ನಿನ್ನ ಮುಂಗುರುಳುಗಾಳಿ ಗಂಧ ತೀಡಲುಸಾವಿರದ ಸಂಭ್ರಮದ ಘಮಲು ನಿನ್ನ ಕೆಂದುಟಿಅರಳಿ ನಾಚಲುಲಕ್ಷದ ಲಕ್ಷ್ಯವುಅಲಕ್ಷ್ಯವು ನಿನ್ನ ಕಟಿಕುಲುಕಿ ಬಳಕಲುಕೋಟ್ಯನುಕೋಟಿಅಪ್ಸರೆಯರಿಗೂ ಮತ್ಸರ ನಾ…..ನಿರುತ್ತರನಿರಂತರ****************************************

ನಿರುತ್ತರ Read Post »

ಕಾವ್ಯಯಾನ

ದಂಡೆಯಲ್ಲಿ ಒಮ್ಮೆ ನಡೆದು..

ಕವಿತೆ ದಂಡೆಯಲ್ಲಿ ಒಮ್ಮೆ ನಡೆದು.. ಫಾಲ್ಗುಣ ಗೌಡ ಅಚವೆ ಕಾರವಾರದ ದಂಡೆಯೆಂದರೆ ನನಗೆಅದೆಂಥದೋ ಪ್ರೀತಿಸಂಜೆ ಮುಂಜಾವೆನ್ನದೇಸದಾ ಗಿಜುಗುಡುವ ಜನರುಈ ದಂಡೆಯಲ್ಲಿ ನಡೆದುಅದರ ಜೊತೆ ಒಬ್ಬೊಬ್ಬರೇಸಂಭಾಷಿಸಿಸುತ್ತಾರೆ ಮತ್ತುಹಗುರಾಗುತ್ತಾರೆ. ದಿಗಂತದಿಂದೋಡಿ ಬರುವ ಅಲೆಗಳುನಡೆವ ಪಾದಗಳ ತಂಪುಗೊಳಿಸಿಎಂತೆಂಥದೋ ಒತ್ತಡಗಳಿಂದ ವ್ಯಗ್ರವಾದವರಿಗೆಸಾಂತ್ವನ ನೀಡುತ್ತವೆ. ದಂಡೆಯಲ್ಲಿ ಸಿಗುವ ಪರಿಚಿತ ಕೊಂಕಣಿಗರು‘ ನಂಗೆ ಅಷ್ಟಾಗಿ ಕನ್ನಡ್ ಬರುದಿಲ್ಲ ಹಾಂ’ಎಂದು ಕನ್ನಡದಲ್ಲಿಯೇ ಮಾತಿಗಿಳಿಯುತ್ತಾರೆಕನ್ನಡ ದ್ವೇಶಿಸದ ಆ ಕೊಂಕಣಿಗರ ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ.ಯಾಕೆಂದರೆ, ಯಾರ ಸುದ್ದಿಗೂ ಹೋಗದ ಅವರು‘ತಾವಾಯಿತು ತಮ್ಮ ಕೆಲಸಾಯಿತು’ ಅಷ್ಟೇ! ನೀವು ಎಲ್ಲಿಂದಲೇ ಬಂದು ಕೆಲಸ ಮಾಡಿದರೆ ನೀವು ಅಲ್ಲೇ ನೆಲೆಗೊಳ್ಳುತ್ತೀರಿಅಲ್ಲಿಯವರೇ ಆಗಿಬಿಡುತ್ತೀರಿಅದಕ್ಕೆ ಕಾರಣ ಅವರ ಪ್ರೀತಿಪ್ರತಿ ಸಂಜೆ ಎದುರಾಗುವ ಈದಂಡೆಯ ಮಮತೆ! ದಂಡೆಯ ಉಸುಕು ಸದಾ ಗಾಳಿಯೊಂದಿಗೆಗಾಳಿ ಮರದ ಮೇಲೆ ಕೂತು ಪಿಸುಗುಡುವ ಬೆಳ್ಳಕ್ಕಿಗಳುಮೀನು ಕಂಡಲ್ಲಿ ತೇಲುವ ಕಡಲ ಹಕ್ಕಿಗಳುಆಗಾಗ ದಂಡೆಯ ಸಮೀಪ ಬಂದು ಪಾನಿಪುರಿಗೆ ಆಸೆಪಟ್ಟುಮುಳುಗೇಳುವ ಡಾಲ್ಫಿನ್ ಬಗ್ಗೆಯೇ ಗಂಟೆಗಟ್ಟಲೆಮಾತಾಡುತ್ತಿರುತ್ತವೆ. ಬೆಳದಿಂಗಳು ಬಂತೆಂದರೆ ಉಕ್ಕೇರುವ ಅಲೆಗಳುಬೇರೆ ಸಮಯದಲ್ಲಿ ಮಂದ್ರಸ್ಥಾಯಿಯಲ್ಲಿ ಮಿಂದಂತಿರುತ್ತದೆ. ಈ ದಂಡೆಯ ಉಸುಕಿನಲ್ಲಿ ಹಬ್ಬಿದ ಗಿಡಗಳು ಹೂ ಬಿಟ್ಟರೆಸಿಕ್ಕಾಪಟ್ಟೆ ಬಂಗಡೆ ಬೀಳುವುದಂತೆ! ಸಮುದ್ರದ ಮಧ್ಯೆ ನಿಂತ ಒಂಟಿ ದೀಪ ಸ್ಥಂಭಇಡೀ ಕಾರವಾರಿಗರ ಮನಸ್ಸನ್ನುಪ್ರತಿನಿಧಿಸುತ್ತದೆ!ಸಂಜೆ ಆರಾದರೆ ಕಿಲೋಮೀಟರುಗಳ ದೂರದ ಮೀನು ಹಡಗುಗಳ ಕಾಯುತ್ತಸುರಕ್ಷಿತ ದಡ ಸೇರಿಸುತ್ತದೆ.! ಸಂಜೆಯಾದರೆ ಮೀನ ಖಂಡಗಳ ಹೊಳೆಸುವಹುಡುಗಿಯರನ್ನು ಸಾಲು ಹೊರಟ ಬೆಳ್ಳಕ್ಕಿಗಳು ಒಮ್ಮೆ ಇಣುಕಿ ನಡುವ ಬಳಸಿದಂತೆಸುಳಿದು ಹೋಗುತ್ತವೆ. ಎಂದೋ ಈ ದಂಡೆಯಲ್ಲಿ ನಡೆದು ಹೋದ ಕವಿ ರವೀಂದ್ರರು ಈಗಲೂ ಇಲ್ಲೆಲ್ಲೋ ಸುತ್ತುತ್ತಿರುವಂತೆ ಭಾಸವಾಗುತ್ತದೆ.ಅವರು ಕಂಡ ಸಂಜೆ ಇನ್ನೂ ಎನೂ ಬದಲಾಗಿಲ್ಲ! ಲಂಗರು ಹಾಕಿದ ಹಡಗುಗಳು ಸಂಜೆಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ಚಿತ್ರಗೀತೆಗಳ ಆಲಿಸಿ ತಲೆಯಾಡಿಸುತ್ತಿವೆ! ಇಲ್ಲಿನ ಆಹ್ಲಾದಕರ ಸಂಜೆಅಲೆವ ಅಲೆಗಳ ಹೃದಯದ ಮಿಡಿತದಂಡೆಯ ಮರಳ ಮಧುರ ಸಂಗೀತಬೆಳ್ಳಕ್ಕಿ ಹೂ ಮುಡಿದ ಬೈತ್ಖೋಲಿನ ಮರ ನೋಡುತ್ತಲೆನನಗೂ ದಂಡೆಗೆ ಮತ್ತೆ ವಾಪಾಸಾಗಬೇಕೆಂಬ ಅಸೆ ಹುಟ್ಟುತ್ತದೆದಂಡೆಯ ವಿರಹ ನನ್ನೆದೆ ದಿಗಂತದಲ್ಲಿ ಮಡುಗಟ್ಟುತ್ತದೆ! *************************************

ದಂಡೆಯಲ್ಲಿ ಒಮ್ಮೆ ನಡೆದು.. Read Post »

ಕಾವ್ಯಯಾನ

ಗೋವು ಮತ್ತು ರೈತ

ಕವಿತೆ ಗೋವು ಮತ್ತು ರೈತ ಡಾ.ಶಿವಕುಮಾರ್ ಮಾಲಿಪಾಟೀಲ ಗೋವು ಪುಣ್ಯಕೋಟಿರೈತ ಪುಣ್ಯಾತ್ಮಗೋವು ತ್ಯಾಗಿರೈತ ಯೋಗಿ ಗೋವು ಬೀದಿಪಾಲಾಗಿದೆರೈತ ಗುಳೆ ಹೊರಟಿದ್ದಾನೆ ಇಬ್ಬರೂ ಮೂಖರೆಇಬ್ಬರೂ ಅಮಾಯಕರೆ ರೈತ ಕಷ್ಟ ಪಡುತ್ತಾನೆಹಗಲು ರಾತ್ರಿ ಎನ್ನದೆಜಗಕೆ ಅನ್ನ ಕೊಡಲುಜಾತಿ ಧರ್ಮ ನೋಡದೆ ಎತ್ತು ಕಷ್ಟ ಪಡುತ್ತದೆರೈತ ಮಿತ್ರನಾಗಿ ಉಳಿಮೆಮಾಡುತ ಮಳೆ ಬಿಸಿಲು ಲೆಕ್ಕಿಸದೆ, ಬಾರಕೊಲು ಏಟುತಿಂದರೂ ಒಮ್ಮೆಯೂ ಎದುರಾಡದೆ ಗೋವಿನ ಹಾಲು ಮೊಸರುತುಪ್ಪ ನೀಡುತ್ತದೆ ಮಕ್ಕಳಿಂದಮುದುಕರವರೆಗೆಜಾತಿ ಧರ್ಮ ಕೇಳದೆ ಹೌದುಗೋವಿನ ಹೊಟ್ಟೆಯಲ್ಲಿ ಬಂಗಾರವಿದೆರೈತನ ಬೆನ್ನಿನ ಮೇಲೆದೇಶ ನಿಂತಿದೆ ಗೋವಿನ ಹೊಟ್ಟೆ ಕೊಯ್ಯತ್ತಿದ್ದಾರೆ ಬಂಗಾರ ಹುಡುಕಲು ರೈತನ ಬೆನ್ನು ಮುರಿಯುತ್ತಿದ್ದಾರೆ ಅಧಿಕಾರ ಪಡೆಯಲು ಯಾರು ರಾಜನಾದರೂಬಡವನಿಗೆ ಹೊಡೆಯುವುದೆ ಕಾಯಕಇದು ಶತ ಶತಮಾನದ ಬಳುವಳಿ ಪ್ರತಿ ಚುನಾವಣೆಯಲ್ಲಷ್ಟೆರೈತನ ಮೂಳೆಗಳುಗೋವಿನ ಮಾಂಸಕಾಣುತ್ತದೆನಂತರ ಮತ್ತೆರೈತಮಾರಾಟವಾಗುತ್ತಾನೆಗೋವು ರಪ್ತಾಗುತ್ತದೆ ಜನರಿಗೂ ಗೋವು ಬೇಕುಗೃಹ ಪ್ರವೇಶಕ್ಕೆ ಹೋಮ ಹವನಕ್ಕೆ ನಂತರ ಬೀದಿಪಾಲು ರೈತನೂ ಬೇಕು ಸಭೆ ಸಮಾರಂಭಗಳಿಗೆ ,ನಾಯಕರಭಾಷಣಕ್ಕೆ ನಂತರ ಸಾಲದ ಪಾಲು ಪ್ರಕೃತಿ ,ಸಮಾಜದ ಜೊತೆಗೆಹೋರಾಡಿ ಸೋತು ಗೋವಿನಹಗ್ಗ ರೈತನ ಕೊರಳಲಿ ಅಂತ್ಯ ಆಗುತ್ತಿದೆ ಹೌದು ,ಈಗೀಗ ಹಳ್ಳಿಗಳಲ್ಲಿಗೋವು ಅಂಬಾ ಅನ್ನುತ್ತಿಲ್ಲರೈತ ಉಳಿಮೆ ಮಾಡುತ್ತಿಲ್ಲ ರೈತ ,ಗೋವಿನ ಬೆಲೆ ಬಾರಿ ಕುಸಿದಿದೆಆದರೆ ಮಣ್ಣಿಗೆ ,ಮರಳಿಗೆಭೂಮಿಯ ಬೆಲೆ ಏರುತ್ತಿದೆ ಗೋವಿನ ಹಾಲು ಕುಡಿದವರುವಿಷ ಕಕ್ಕುತ್ತಿದ್ದಾರೆರೈತನ ಅನ್ನ ತಿಂದವರುರೈತನಿಗೆ ,ರೈತನ ಬೆಳೆದ ಬೆಳೆಗೆಬೆಲೆ ನಿಗದಿ ಪಡಿಸುತ್ತಿದ್ದಾರೆ ಹಾಲಿನ ಡೈರಿಯ ಹಾಲುಕುಡಿಯುವವರಿಗೆಪುಡ್ ಬಜಾರ್ ನಲ್ಲಿ ಪುಡ್ತಿನ್ನುವವರಿಗೆ ರೈತ ,ಗೋವು ಯಾಕೆ ಬೇಕು??? **********************************************

ಗೋವು ಮತ್ತು ರೈತ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವೀರಅಮರಸುತೆ ಮನದೊಳಗಿನ ಕಿಚ್ಚಿನಿಂದ ದೀಪ ಹೊತ್ತಿಸಬೇಡ ಗೆಳೆಯನಿರ್ಮಲ ಜ್ಯೋತಿ ಬೆಳಗಿಸು ಅಶಾಂತಿಯ ಕದವ ತಟ್ಟಬೇಡ ಗೆಳೆಯ ಇನ್ನೆಷ್ಟು ದಿನ ಹಗೆಯ ಸಾಧಿಸುವೆ ಹೊಗೆಯ ಹೊತ್ತಿಸುವೆಶರಣಾಗು ಸ್ನೇಹಕೆ ‌ಕರಿನೆರಳ ಗತವನು ಮರುಕಳಿಸಬೇಡ ಗೆಳೆಯ ಇರುವ ಸೇತುವೆಯ ಬೀಳಿಸುವೆ ಮನಸ್ಸು ದೂರ ಮಾಡುವೆ ಏಕೆಬಂಧ ಬೆಸೆಯುವ ನಾವು ಅಡ್ಡಗೋಡೆ ಕಟ್ಟಬೇಡ ಗೆಳೆಯ ತೋರಿಕೆಗೆ ಹಣತೆ ಎಣ್ಣೆಯಾಗೋಣ ಎಂಬ ಜಂಭವೇಕೆಶಮಭಾವಬತ್ತಿಯಾಗಿ ಬೆಳಕ ಬೆಳಗುವ ಬಿರುಗಾಳಿ ಬೀಸಬೇಡ ಗೆಳೆಯ ಸಕಲರ ಬಾಳಿಗೆ ಭಾಗ್ಯಜ್ಯೋತಿಯಾಗುವ ಬಯಕೆ ಎನಗೆ ಸಾಕಿನಂದಾದೀಪಕೆ ತೈಲವಾಗುವ ಪ್ರೀತಿ ಪ್ರಣತಿಯ ಒಡೆದು ಹಾಕಬೇಡ ಗೆಳೆಯ ************************************************************************

ಗಜಲ್ Read Post »

ಕಾವ್ಯಯಾನ

ಕಾರ್ತಿಕದ ಮುಸ್ಸಂಜೆ

ಕವಿತೆ ಕಾರ್ತಿಕದ ಮುಸ್ಸಂಜೆ ಅಕ್ಷತಾ ರಾಜ್ ಕಾರ್ತಿಕದ ಸಂಜೆಯಲಿ ಹಚ್ಚಿಟ್ಟ ದೀಪದಲಿನಿಂತಿದ್ದೆ ನೀ ಬಂದು ಬಾಗಿಲಿನ ಹೊಸಿಲಿನಲಿಬೀಸುಗಾಳಿಗೆ ಹೊನ್ನಬಣ್ಣದ ಮುಂಗುರುಳುಮೆಲ್ಲುಸಿರ ಲೇಖನಿಯಲಿ ಗೀಚಿತ್ತು ನಿನ್ನ ಹೆಸರು || ಕತ್ತಲೆಯು ಆವರಿಸೆ ಬೆಳಕ ದೀವಿಗೆ ಎಲ್ಲೋಅರೆಕ್ಷಣದ ಮಬ್ಬಿಗೆ ಮಂದಬೆಳಕಿನ ಛಾಯೆಬೆಳಕು ಹೊತ್ತಿಹ ತೇರು ಸಾಗುತಿಹ ಬೀದಿಯಲಿನೀನು ನಿಂತಿಹುದಹುದೇ ಮುಂದಿದ್ದ ಸಾಲಿನಲಿ || ಹಾಡು ಕೂಜಣದ ಆ ದನಿಯ ಇಂಪಿನಲಿನಿನ್ನ ಮಾತಿನ ಒನಪು ಒಲ್ಲೆನೆನ್ನಲೇ ನಾನುಇಂದೇಕೋ ಕಾಡುತಿಹ ರಾಗ ತಾಳದ ಮೈತ್ರಿಮುನಿಸ ಸರಿಸಿ ಒಂದಿನಿತು ಬಹುದೇ ಬಳಿಗೆ || ಈ ಬೆಳಕು ಸಂಜೆಯಲಿ ಕಾಣದಿಹ ಇರುಳಿನಲಿಆ ಕನಸ ರಥವೊಂದು ಹೊರಟಿಹುದೆ ದಿಬ್ಬಣವುಬರೆದುಬಿಡು ಮೌನದಲಿ ಮುಚ್ಚಿಟ್ಟ ಭಾವವನುತಿರುವಿ ಓದುವೆನೊಮ್ಮೆ ಹಚ್ಚಿಟ್ಟ ಬೆಳಕಿನಲಿ || ***********************************

ಕಾರ್ತಿಕದ ಮುಸ್ಸಂಜೆ Read Post »

ಕಾವ್ಯಯಾನ

ನೇಗಿಲಿನ ಒಂದು ಸಾಲು

ಕವಿತೆ ನೇಗಿಲಿನ ಒಂದು ಸಾಲು ವಿಠ್ಠಲ ದಳವಾಯಿ ಶತಮಾನಗಳ ಇತಿಹಾಸ ಹೊಸೆದಿದೆ ನೇಗಿಲಿನ ಒಂದು ಸಾಲುಆತುಮಗಳ ಆಲಿಂಗನ ಬೆಸೆದಿದೆ ನೇಗಿಲಿನ ಒಂದು ಸಾಲು ಜೀವಜಾತ್ರೆಯ ಜಾಡಿನಲಿ ಅಡಿಗಡಿಗೂ ಸವಾಲಿನ ಹೊನಲುಹೂವಕಂಪನೆ ಹರಡುತ ಸಾಗಿದೆ ನೇಗಿಲಿನ ಒಂದು ಸಾಲು. ಹರಕುವಸ್ತ್ರ, ಮುರುಕು ಗುಡಿಸಲು, ಹಸಿದ ತೊಟ್ಟಿಲುಜಗದ ಕಣ್ಣೀರಿಗೆ ಮರುಗಿದೆ ನೇಗಿಲಿನ ಒಂದು ಸಾಲು. ಬೆವರು, ನೆತ್ತರು ಬಿತ್ತಿ ಅನ್ನವನು ಉಣಿಸಿದೆ ಲೋಕದ ಹಸಿವಿಗೆ.ತಣ್ಣೀರುಪಟ್ಟಿ ಕಟ್ಟಿ ಮಲಗಿದೆ ನೇಗಿಲಿನ ಒಂದು ಸಾಲು. ಹೆದ್ದಾರಿಯ ಹಿರಿಯಾಸೆ, ಸುಂದರ ನಗರಿಯ ಕನಸಿಗೆಒದ್ದೆಮನದಲೆ ಕನಿಕರಿಸಿದೆ ನೇಗಿಲಿನ ಒಂದು ಸಾಲು. ಅನ್ನದ ಬಟ್ಟಲಿನಲಿ ಮಣ್ಣು ಸುರಿಯಬೇಡ ‘ದೊರೆ’ಮಣ್ಣು, ಅನ್ನ ಕೊಟ್ಟೇ ಸಾಗುತ್ತದೆ ನೇಗಿಲಿನ ಒಂದು ಸಾಲು. *****************************************

ನೇಗಿಲಿನ ಒಂದು ಸಾಲು Read Post »

ಕಾವ್ಯಯಾನ

ದೂರ ದೂರದತೀರ

ಕವಿತೆ ದೂರ ದೂರದತೀರ ಶಾಂತಲಾ ಮಧು ದೂರ ದೂರದ ತೀರತೀರದೀದೂರಹಾಲ ಬೆಳದಿಂಗಳುನಕ್ಷತ್ರದಾ ಸರತಬ್ಬಿಮುದ್ದಾಡಿದಾ ನೆಲಬರ ಸಿಡಿಲು ಗುಡುಗುಮಳೆ ಅಪ್ಪಳಸಿ ಆಲಂಗಿಸಿ…ನಲಿದು ಹರಿದಾಡಿ ನೆಲ ದೂರ ದೂರದ ತೀರತೀರದೀ ದೂರ ತೆಂಗು ಅಡಕೆ ಮರತಬ್ಬಿದಾ ಬಳ್ಳಿಗಳುಹೂವಾಗಿ ಹಣ್ಣು ಕಾಯಾಗಿಮಣ್ಣಿನವಾಸನೆಗೆಮರುಳಾಗಿ ಸುಕಿಸಿದಾ ನೆಲ ದೂರ ದೂರದ ತೀರತೀರದೀ ದೂರ ಹಸಿರಿನಂಗಳಕೆ ಅದೆಕನಸಿನ ಚಾವಡಿ ಹೊದೆಸಿಲಕ್ಷಣ ವಿತ್ತ ಮೂರ್ತಿಕೆತ್ತಿಟ್ಟು ಜೀವದಾಳದಪ್ರಿತಿ ಸಂಸ್ಕೃುತಿಯಬೆೇರನಾಳದಲಿಹೂತ್ತಿಟ್ಟ ಆ ನೆಲ ದೂರ ದೂರದ ತೀರತೀರದೀ ದೂರ ಗುಡ್ಡ ಬೆಟ್ಟದಸಾಲುಪಶು ಪಕ್ಷಿ ಇಂಚರಒಡನಾಟ, .ಹಳ್ಳ ಕೊಳ್ಳದ ಸ್ಪರ್ಷಜೀವ ಚೇತನವಾಗಿಪಾಠ ಕಲಿಸಿದ ನೆಲ ದೂರ ದೂರದ ತೀರತೀರದೀ ದೂರ ಹಸುಳೆಯಾಗಿಸಿಮತ್ತೆ ಸಿಹಿ ಕಹಿಯನೆನಪಿಸುತ ಜೀವ ನಾಡಿಯಮೀಟಿ ಮಯ್ ಮರೆಸುತಕತ್ತಲ ಕವಡೆ ಯಾಟದಲಿಸೋಲು ಗೆಲುವಲಿಮಿಂದೆಂದಾ ನೆಲ ದೂರ ದೂರದ ತೀರತೀರದೀ ದೂರ ಕಾನನದ ಕಪ್ಪೆಯಾಟದಕೊಳದಲ್ಲಿನೀರ ನೆರಿಗೆಯಲಿಪ್ರತಿಬಿಂಬ ಹೆಣೆದುದಿನಒಂದು ಕ್ಷಣವಾಗಿಕ್ಷಣಿಕತೆಯನೆ ಮರೆತ ನೆಲ ದೂರ ದೂರದ ತೀರತೀರದೀ ದೂರ ಸಂಭ್ರಮದ ಕಡಲಲ್ಲಿನೆನಪ ದೋಣಿಯ ನಡೆಸಿಅಲೆಯ ಏರಿಳಿತಕೆಚೀರಿ ಚೀತ್ಕರಿಸಿನೀರ ದಾರಿಯಲಲ್ಲಲ್ಲಿಪ್ರತಿಬಿಂಬ ಹುಡುಕಿತಡಕಾಡಿ ದಾ ನೆಲ ದೂರ ದೂರದ ತೀರತೀರದೀ ದೂರ ಅವಳ ಮಾಸಿದಸೆರಗುಬಿದ್ದಿಹುದು ನೆಲದಲ್ಲಿಕೆಂಪು ಮಣ್ಣನು ತಬ್ಬಿಅಲ್ಲಿ ಮಾಗಿದ ಪ್ರೀತಿಹಸಿರಿನ ಹುಲ್ಲುಅವಳುಸಿರ ಬಸಿರನಲೆಯನೆಲ ದೂರ ದೂರದ ತೀರತೀರದೀ ದೂರ ***********************

ದೂರ ದೂರದತೀರ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಕೆ.ಸುನಂದಾ ಗೆಳತಿ ನಿನ್ನಸೌಂದರ್ಯ ಯಾವ ಶಿಲ್ಪಿಕೈ ಚಳಕವೊ ?** ವಿದ್ಯೆ ದುಡಿಮೆತಾಳ್ಮೆ ; ಇದ್ರೆ ಎಲ್ಲವೂಜಯಶೀಲವು** ಮನತಟ್ಟದೆಹುಟ್ಟೀತೇನು ; ಸ್ವಂತಿಕೆಮರೆತ ಕಾವ್ಯ** ಕಾವ್ಯ ಲಹರಿಬಸಿರಲ್ಲಿ ಪಳಗಿಜನ್ಮಿಸಬೇಕು** ಪಕ್ಟವಾಗದೇಕಿತ್ತರೆ ರುಚಿಸದುಸಾಹಿತ್ಯ ರಸ ** ತಾಳದು ಮನಬರೆದೆ ಕಾವ್ಯ ; ಉಕ್ಕಿಹೊರಹೊಮ್ಮಿತು** ಭವ್ಯತೆಯಲಿಹುಟ್ಟಿದ್ದು ಶಾಸ್ವತದಮಧುರ ಗೀತೆ** ಪಲ್ಲವಿಸಿತುಆತ್ಮದಿಂದ ; ಕಾವ್ಯದಸತ್ವ ಶಕ್ತಿಯು** ಭಾವ ಗರ್ಭದಿಕಾವ್ಯ ಕಟ್ಟಿ ; ಹುಟ್ಟಿದ್ದುರಸ ಭರಿತ**************************************

ಹಾಯ್ಕುಗಳು Read Post »

ಕಾವ್ಯಯಾನ

ಅನ್ನ ಕೊಟ್ಟವರು ನಾವು.

ಕವಿತೆ ಅನ್ನ ಕೊಟ್ಟವರು ನಾವು. ಅಲ್ಲಾಗಿರಿರಾಜ್ ಕನಕಗಿರಿ ನೆನಪಿರಲಿ ನಿಮಗೆ.ನೀವು ದೆಲ್ಲಿಯ ರಸ್ತೆ ಮುಚ್ಚಿಕೊಂಡರೆ,ನಾಳೆ ನಾವು ಹಳ್ಳಿ ಹಳ್ಳಿಯರಸ್ತೆ ಮುಚ್ಚುತ್ತೇವೆ. ಆಗ ಶುರುವಾಗುತ್ತದೆ ನೋಡಿ ಅಸಲಿ ಯುದ್ಧ. ಸರ್ಕಾರ ಎಂದರೆ ಸೇವಕ ಎನ್ನುವುದು ಮರೆತ್ತಿದ್ದಿರಿ ನೀವು.ಸಾಕುಮಾಡಿ ನೇತಾರರ ಹೆಸರಲ್ಲಿ ಬೂಟಾಟಿಕೆಯ ಕೆಲಸ. ಇಂದಲ್ಲ ನಾಳೆ ಪಾರ್ಲಿಮೆಂಟ್ ನಲ್ಲಿ,ಮನುಷ್ಯ ಪ್ರೀತಿಯ ಬೀಜ ಬಿತ್ತುತ್ತೇವೆ ನಾವು.ಮೊದಲು ಧರ್ಮದ ಅಮಲಿನಿಂದ ಹೊರ ಬನ್ನಿ ನೀವು. ಹೋರಾಟದ ನದಿ ಕೆಂಪಾಗುವ ಕಾಲ ಬಂತು.ನಿಮ್ಮ ಮುಖವಾಡ ಕಳಚಿ ಬಿಡಿನೇಗಿಲ ಯೋಗಿ ಮುಂದೆ…….. ನೆನಪಿರಲಿ ಅನ್ನ ಕೊಟ್ಟವರು ನಾವು.ವಿಷ ಬೀಜ ಬಿತ್ತಬೇಡಿ ನೀವು. ******************************************

ಅನ್ನ ಕೊಟ್ಟವರು ನಾವು. Read Post »

ಕಾವ್ಯಯಾನ

ಮಾಗಿ ಕಾಲ

ಕವಿತೆ ಮಾಗಿ ಕಾಲ ಡಾಲಿ ವಿಜಯ ಕುಮಾರ್. ಕೆ.ವಿ ಆವರಿಸಿದ ಚಳಿನನ್ನ ಮೈತಾಕದಂತೆಎದೆಯ ಚಿಪ್ಪಿನೊಳಗೆ ಕಾದನಿನ್ನ ಬಿಸಿ ಅಪ್ಪುಗೆಯ ಹಿತಕ್ಕೆಬರುವ ಮಾಸಗಳೆಲ್ಲಮಾಘಮಾಸವನ್ನೇಹೊತ್ತಿರಬಾರದೆ ಅನ್ನಿಸುತ್ತೆ… ಒಲಿದ‌ ಮನಸುಗಳಮಾಗಿಸಿ.ಬಿಗಿಯಾಗಿ ಬೆಸೆದುಬಲಿತ ಕನಸುಗಳಮಿಲನವಾಗಿಸುವಶಿಶಿರ ಋತುಪರಿಪೂರ್ಣತೆಯ ಭಾವಗಳಪೂರ್ಣವಿರಾಮದಂತೆ.ನನಗೆ… ಮನದ ಮಾತುಗಾರನಮಂತ್ರಿಸಿ ವಶೀಕರಿಸುವಮಾಘಮಾಸಮಡದಿ ಮನದರಸರಮನಸುಗಳ ಹೊಸೆದುಪ್ರತಿ ಹೊತ್ತಿನ ಪಾಲುದಾರಿಕೆಯಪರಮ ಸುಖಕೆಮುತ್ತುಗಳ ಮಳೆಗರೆಸುವಪ್ರತಿ ಮಾಗಿಯೂಇಲ್ಲಿ ಹೊಸ ವಸಂತಗಳೇ…… ಕಿಟಕಿಯಿಂದತೂರಿ ಬರುವಹೊಂಗಿರಣಗಳ ಅಲ್ಲೇತಡೆದು ನಿಲ್ಲಿಸುವೆ.ಇನಿಯನಮುದ ನೀಡುವಮುದ್ದು ಪ್ರೀತಿಯಕದ್ದು ನೋಡದಿರಲೆಂದು…. ಅಂತದ್ದೊಂದುಸವಿ ಸಾಕಾಗುವಷ್ಟುಸವಿದೇಬಿಡುವೆ.ಸುಮ್ಮನಿರಿಚಿಲಿಪಿಲಿ ರಾಗಗಳೇ.ಬೆಳಗಿನ ಕಾತರಿಕೆ ನನಗಿಲ್ಲ. ಇಂದಿನಕನಸುಗಳ ಕೈಚೆಲ್ಲಿದರೆಮನಮುಂದಿನ ಮಾಗಿಕಾಲಕ್ಕಾಗಿಕಾದು ಕೂರಬೇಕು….ಹೆಪ್ಪುಗಟ್ಟಿದ ಹಲವು ನೆನಪುಗಳಜೊತೆಗೆ…… ಮಾಗಿ-ಶಿಶಿರ-ಚಳಿಗಾಲ *******************************

ಮಾಗಿ ಕಾಲ Read Post »

You cannot copy content of this page

Scroll to Top