ಹಾವೇ.
ಏನೋ ಭೀತಿ! ಕಡಿದರೆ
ಪಜೀತಿ; ಮನ ಭಿತ್ತಿಯಲಿ
ಅದೇ ವಿಚಾರ ವಿಷ
ಕವಿತೆ ಹೇಗಾಯಿತು ಹೊಸ ವರುಷ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಚುಕ್ಕಿಗಳು ಕರ್ರಗಾದವೆ?ಹಕ್ಕಿಗಳು ಬೆರಗಾದವೆ?ಕತ್ತಲೆ ಥಳಥಳ ಹೊಳೆಯಿತೆ?ಬೆಳಕು ಉಮ್ಮಳದಿ ಅದುರಿತೆ?ಮೂಡಿತೇಗೆ ಹೊಸ ವರುಷ? ನೆತ್ತರು ಬಿಳಿಯಾಯಿತೆ?ಸತ್ತವರೆದ್ದು ಕುಳಿತರೆ?ಎಲೆ ಉದುರಿ ತಲೆ ಸವರಿತೆ?ಕೋಗಿಲೆ ನೇಗಿಲು ಹೂಡಿತೆ? ಬದುಕುಗಳು ಭವಣೆಗೆ ಮಿಕ್ಕವೆ?ಕೆದಕುಗಳು ಎಣಿಕೆಗೆ ಸಿಕ್ಕವೆ?ಕಳೆದ ಘಳಿಗೆ ಎದೆ ಹೊಕ್ಕಿತ್ತೆ?ಜಗದ ನಗು ಮುಗಿಲ ನೆಕ್ಕಿತೆ?ಮೂಡಿತೇಗೆ ಹೊಸ ವರುಷ? ಬೈಬಲ್ ಕಥೆ ಹೊನ್ನಾಯಿತೆ?ಕುರಾನ ನುಡಿ ಭಿನ್ನವಾಯಿತೆ?ಭಗವದ್ಗೀತೆ ಕಣ್ಣಾಯಿತೆ?ಮೂಡಿತೇಗೆ ಹೊಸ ವರುಷ? ಬಡವರ ಕೊರಗು,ಹೂವಾಯಿತೆ?ಹಸಿದ ಕೂಸು ನಕ್ಕಾಡಿತೆ?ನದಿಯ ಹರಿವು,ಕುದಿತವಾಯಿತೆ?ಗಾಳಿಯ ತುದಿ ಕಣ್ಣಿಗೆ ಕಂಡಿತಾ?ಮೂಡಿತೇಗೆ ಹೊಸ ವರುಷ? ಜಾತಿಧರ್ಮ,ಪ್ರೇಮ ಕಲಿಸಿದವೆ?ಉಸಿರು-ಬಸಿರು ಒಲುಮೆಯಾದವೆ?ಕಾಮಕ್ರೋದ ಭುವಿ ತೊರೆದವೆ?ದೀನರ ಬಾದೆ ಬದಿ ಸರಿಯಿತೆ?ಮೂಡಿತೇಗೆ ಹೊಸ ವರುಷ? ಕ್ಯಾಲೆಂಡರ್ ತಿರುವಿದೆವಷ್ಟೆಬೆಡಗು ಬಿನ್ನಾಣ ತೊರೆದು ಬದುಕಬೇಕಷ್ಟೆ. *****************************
ಕವಿತೆ ಮುಖವಾಡದ ಬದುಕು ರೇಷ್ಮಾ ಕಂದಕೂರು ಎಲ್ಲೆಲ್ಲೂ ಮುಖವಾಡದ ರಾರಾಜಿಸುವಿಕೆಎತ್ತ ನೋಡಿದರತ್ತ ಆಸೆ ಆಮಿಷ ದ ಸುಳಿಹೊರಬರಲು ಹೆಣಗುವ ಜೇಡನಂತೆಕರುಬುವರೂ ತಟಸ್ಥವಾಗಿಹರು ನಾನು ಮೊದಲಿನಂತಿಲ್ಲಗೊಂದಲದ ಗೂಡಿನಡಿ ನನ್ನ ಸೂರುಅನಿವಾರ್ಯತೆ ಬದುಕಿಗೆಸುಖ ಮಾತ್ರ ಬೇಕೆಂಬ ಅಹವಾಲು ಹಿಯಾಳಿಸುವ ಕೊಂಕು ನುಡಿಬೆನ್ನಿಗೆ ಇರಿಯಲು ಸರತಿ ಸಿಲುತೃಪ್ತಿಯಂತೂ ಹೊಸ್ತಿಲು ಆಚೆಕೃತಕತೆಯ ನಗುಮಾತ್ರ ಎದ್ದು ನಿಂತಿದೆ ತುಳಿಯುದಕೂ ದುಂಬಾಲು ಬಿದ್ದಿಹರುನೇಸರು ಉಗುಳುವ ಒಮ್ಮೊಮ್ಮೆ ಬೆಂಕಿಯುಂಡೆತಣ್ಣನೆಯ ಗಾಳಿಗೂ ಸಂಚಕಾರ ಹೂಡಿಕಟು ಮನದ ಇರಿತದಿ ಬಳಲಿ ಬೆಂಡಾಗಿಹೆ ನಾನಷ್ಟೇ ಎಂಬ ಗಿರಿಗಿಟ್ಟಲೆ ತಿರುಗಿಬಂದ ಕೆಲಸ ಮರೆತ ಹಾಗಿದೆಸವೆಯುವ ದಿನಗಳ ಆಸ್ವಾದನೆಯಹೊರಡುವ ಗಳಿಗೆಯಲಿ ಅಲ್ಲೋಲ ಕಲ್ಲೋಲ ನಗುವಿನ ಅಲೆಗೂ ಉಗ್ರ ಪ್ರಲಾಪಮಗುವಿನ ಮನಸು ವಿಶ ಪ್ರಾಶಾನಸೋಗಿಗೆ ಮಹತ್ವ ನೀಡಿಆಂತರ್ಯದ ಸಂತೋಷ ಮರೆಮಾಚಿದೆ ಮುಖವಾಡದ ಬದುಕಿದುಮೂರ್ಖರ ಮಾತಿಗೆ ಮಣೆ ಹಾಕುತಧೂರ್ತರ ಹಿಡಿತದಿ ಸಾಗಿಸುಮೂಹೂರ್ತವು ಕಾಣದಾಗಿದೆ. ಸಾವಿರಾರು ಗಾಯಗಳು ಎದೆಯ ಗೂಡಿನಡಿಕುಡಿ ನೋಟದಲಿ ಬಾಹ್ಯಾಡಂಬರಮುಡಿಗೆ ಮಲ್ಲಿಗೆ ಹಾರಮಡಿಲಲಿ ಹಗೆಯ ಬುತ್ತಿಯ ಹೊತ್ತಿದೆ. ***************************************
ಕವಿತೆ ನಾವು ಹೀಗೆಯೆ ನಿರ್ಮಲಾ ಶೆಟ್ಟರ್ ಇಂದಿಲ್ಲವಾದರೆ ನಾಳೆಈಗ ಆಗ ಆಮೇಲೆ ಎಂದುಅಸಂಖ್ಯ ಹಗಲು ನಾನೇ ಬೇಯುತರಾತ್ರಿಗಳಲಿ ದೀಪದಂತೆ ಉರಿಯುತ ಕಾದಿದ್ದೇನೆನಿನ್ನ ಮಾತುಗಳ ಕೇಳಲುಆ ವಿಷಯದಲಿ ಜುಗ್ಗ ನೀನು ಮತ್ತುನಿನ್ನಂಥಹ ಎಲ್ಲರೂ ಇದೇ ಕಾರಣಅವ್ವ ಅಪ್ಪನೊಡನೆ ಸೆಟಗೊಂಡುನನ್ನ ಪಕ್ಕದಲಿ ಬಂದು ಮಲಗಿದಅದೆಷ್ಟೊ ರಾತ್ರಿಗಳ ಪ್ರಶ್ನಿಸುತ್ತಾ ಬೆಳದವಳು ನಾ ಮೊನ್ನೆ ವನಿತೆಊರ ಹೊರಗಿನ ನಡುರಸ್ತೆಯಲಿಬಿಟ್ಟು ತನ್ನವನನುಒಂಟಿಯಾಗಿನಡೆದು ಮನೆಸೇರಿ ಕ್ರಮಿಸಿದ್ದು ಸಮೀಪದ ಹಾದಿಯನ್ನಲ್ಲ ನಾವು ಹೀಗೆಯೆಇಂಥವರನ್ನು ಇಷ್ಟಪಡುವುದಿಲ್ಲ ಒಂದೇ ಗುಟುಕಿಗೆ ಚರಿಗೆ ನೀರು ಕುಡಿದಂತೆನಿಮ್ಮೆದೆಯ ಭಾವವನೆಲ್ಲ ನಮ್ಮೆದೆಗಿಳಿಸಿಕಣ್ಣರೆಪ್ಪೆಯಲಿ ತೂಗಾಡಿಸಿಕೊಂಡುತೊಟ್ಟಿಲು ಕಟ್ಟಿ ಹಾಡುವ ಜೋಗುಳಗಳತಲೆಮಾರಿಗೂ ದಾಟಿಸುತ್ತೇವೆ ನಿಮ್ಮ ಕೈ ಬೆರಳುತುಟಿಯ ಸೀಳು ಒರಟು ಗಲ್ಲಬಿರುಸು ಪಾದಗಳೊಡನೆಹಾ ಹುಂ ಹೋ ಗಳಲಿ ಮುಗಿಸುವ ಮಾತುನಿನ್ನೆ ಇಂದು ನಾಳೆಗ್ಯಾವತ್ತು ನಮಗೆ ಮುದವೆನಿಸುವುದಿಲ್ಲ ಇನ್ನಾದರೂಮುಖಕ್ಕೆ ಮುಖ ಕೊಟ್ಟುಕಣ್ಣಲಿ ಕಣ್ಣ ನೆಟ್ಟು ಮಾತಾಡುತ್ತಲಿರಿಹಗಲ ಬೆಳಕಿನಲಿ **************
ಕವಿತೆ ಸ್ಥಿತಿ ಸುರೇಖಾ. ಜಿ . ರಾಠೋಡ. ರಾಮ ಹುಟ್ಟಿದ್ದುಸೀತೆಯನ್ನು ಪರೀಕ್ಷಿಸಲುಅನಿಸುತ್ತದೆಸೀತೆ ಹುಟ್ಟಿದ್ದುರಾಮನ ಪರೀಕ್ಷೆಗೆಒಳಪಡಲು ಅನಿಸುತ್ತದೆ ಆದರೆ….ಇಂದಿನ ಸೀತೆಯರುಇಂದಿನ ರಾಮರಿಗೆಪ್ರಶ್ನಿಸಬೇಕಾಗಿದೆಪ್ರತಿಯೊಂದು ದೌರ್ಜನ್ಯದ ಕುರಿತು ವಿನಾಕಾರಣಸಹಿಸುವುದಿಲ್ಲಅಸಮಾನತೆ, ದೌರ್ಜನ್ಯವನೆಂದು ಕೇಳಬೇಕಿದೆ ಇಂದಿನಸೀತೆಯರುಸಮಾನತೆ, ಸ್ವಾತಂತ್ರ್ಯ ಇತ್ಯಾದಿನಮಗೂ ಬದುಕುವ,ಅನಿಸಿದ್ದು ಹೇಳುವಸ್ವಾತಂತ್ರ್ಯ ವಿದೆ ಎಂದು ಹೇಳಬೇಕಿದೆ ಇಂದಿನರಾಮರಿಗೆ‘ನೀವು ರೂಪಿಸಿ ಕೊಟ್ಟ ಸಿದ್ದ ಮಾದರಿ ಸೀತೆಯರಲ್ಲವೆಂದು’ ಹೇಳಬೇಕಿದೆ ಬಾಬಾ ಸಾಹೇಬ್ ಅಂಬೇಡ್ಕರ್ರೂಪಿಸಿದ ಸಂವಿಧಾನದಂತೆನಡೆಯುತ್ತೆವೆಂದುಹೇಳಬೇಕಿದೆ, ತಿಳಿಸಬೇಕಿದೆ,ಅರಿವು ಮೂಡಿಸಬೇಕಿದೆಇಂದಿನ ಸೀತೆಯರು. **********************
ಗಜಲ್ ಶ್ರೀಲಕ್ಷ್ಮೀ ಅದ್ಯಪಾಡಿ. ಪುಟಿಯುತ್ತಿದ್ದಪುಳಕಗಳೆಲ್ಲಾಎತ್ತಹೋದವೋಅರಳುತ್ತಿದ್ದಕನಸುಗಳೆಲ್ಲಾಎತ್ತಹೋದವೋ ಕಣ್ಣಂಚಿನಲ್ಲಿನೋವಿನಹನಿತುಳುಕುತ್ತಲೇಇದೆನಲಿಯುತ್ತಿದ್ದಭಾವನೆಗಳೆಲ್ಲಾಎತ್ತಹೋದವೋ ಸುಡುಸುಡುತ್ತಿದೆಅವ್ಯಕ್ತಬೇಗೆಒಡಲಾಳದಲ್ಲಿಅರಳುತ್ತಿದ್ದನವಿರುಹೂಗಳೆಲ್ಲಾಎತ್ತಹೋದವೋ ಹೃದಯವೀಣೆಯತಂತಿಯಾಕೋಮುರಿದಂತಿದೆಹಾಡುತ್ತಿದ್ದಮಧುರರಾಗಗಳೆಲ್ಲಾಎತ್ತಹೋದವೋ ಮೌನದಲಿರುವಬೆಳದಿಂಗಳೂಉರಿಬಿಸಿಲಾದಂತಿದೆಹರಡುತ್ತಿದ್ದತಂಪುಕಿರಣಗಳೆಲ್ಲಾಎತ್ತಹೋದವೋ ಹೆಪ್ಪುಗಟ್ಟಿದನೋವಿನಲ್ಲಿಅಳುತ್ತಿದೆಶ್ರೀಯಮನಸುರಿಯುತ್ತಿದ್ದಪ್ರೇಮದಹನಿಗಳೆಲ್ಲಾಎತ್ತಹೋದವೋ *********************************
ಕವಿತೆ ಮೌನ ಹನಿಗಳು ಸುಧಾ ಎನ್.ತೇಲ್ಕರ್ ೧ಹೊಂದಿಕೆಯಿರದ ಭಾವಗಳಲಿಮಾತು ಮದ್ದಳೆ ಬಾರಿಸಿತ್ತುಉಸಿರು ಬಿಗಿ ಹಿಡಿದ ಮೌನಸದ್ದಿಲ್ಲದೆ ಪಟ್ಟು ಬಿಗಿದಿತ್ತು ೨ಮೌನದ ಕಪ್ಪೆ ಚಿಪ್ಪಲ್ಲಿ ಅಡಗಿತ್ತುಮಾತಿನ ಸ್ವಾತಿ ಮುತ್ತುಕಣ್ರೆಪ್ಪೆಯಲಿ ಜಾರದೆ ಕುಳಿತಿತ್ತುಮಡುಗಟ್ಟಿದ ಹನಿ ಮುತ್ತು ೩ಮಾತಿನ ಚೂರಿ ಮೊನಚಿಗೆಹೃದಯ ರಕ್ತ ಒಸರಿತ್ತುನಿಟ್ಟುಸಿರಿನ ಮೌನವೇಗಾಯಕ್ಕೆ ಮುಲಾಮು ಸವರಿತ್ತು ೪ಮಾತು ಕಲಹದ ಹೊನಲಾಗಿಹರಿದಿತ್ತುಮೌನವೇ ಅದರ ರಭಸಕೆಆಣೆಕಟ್ಟು ಹಾಕಿತ್ತು ೫ಬೆಳ್ಳಿ ನುಡಿಗಳುತುಂಬಿದ್ದ ಖಜಾನೆಗೆಹಾಕಿತ್ತು ಚಿನ್ನದಮೌನದ ಬೀಗ ********************
ಕವಿತೆ ಇತಿಹಾಸ ಬರೆಯುತ್ತೇವೆ ನಾವು ಅಲ್ಲಾಗಿರಿರಾಜ್ ಕನಕಗಿರಿ ಇತಿಹಾಸ ಬರೆಯುತ್ತೇವೆ ನಾವುಇಂದಲ್ಲ ನಾಳೆ ಹೊಲ ಗದ್ದೆಗಳ ಸಾಲು ಸಾಲಿನಲ್ಲಿ.ಒಂದೊಂದು ಬೀಜದ ಹೆಸರಿನಲ್ಲಿ. ನೀವು ಸುಮ್ಮನೆ ಮುಳ್ಳಿನ ಕಥೆ ಹೇಳಬೇಡಿ.ಅಲ್ಲೊಂದು ನಗುವ ಹೂವಿನ ಬದುಕಿದೆ ಮರೆಯಬೇಡಿ.ಒಂದೇ ಒಂದು ಸಾರೆ ನಿಮ್ಮ ಮೈ ಮನಸ್ಸಿಗೊಮ್ಮೆ ಕೇಳಿನೋಡಿ.ನೀವು ಉಂಡ ಅನ್ನ ಯಾರದೆಂದು?ಅಸ್ಥಿಪಂಜರಗಳ ಕೈಯಿಂದ ಬರೆಸಿದ ಕಾಯ್ದೆ ಏನೆಂದು. ರಾಜಿಯಾಗದೆ ರಾಜಧಾನಿಯ ಗಡಿ ಮುಚ್ಚಿಕೊಂಡಿದ್ದೀರಿ.ಹೇಸಿಗೆ ಆಗುತ್ತಿದೆ ನಮಗೆ, ನಮ್ಮದೇ ಮತದಾನಕ್ಕೆ. ಸರ್ಕಾರ ಎಂದರೆ ನೋಟು ತಿಂದು ಮಲಗುವುದಿಲ್ಲ ನೆನಪಿರಲಿ.ರೈತರು ನಾವು ಇನ್ನೂ ನೇಗಿಲು ಹೊತ್ತಿದ್ದೇವೆ ಶಿಲುಬೆಯನ್ನಲ್ಲ. ನಾವು ಇಂದಲ್ಲ ನಾಳೆ ಇತಿಹಾಸ ಬರೆಯುತ್ತೇವೆ.ಹೊಲ ಗದ್ದೆಗಳನ್ನು ನೆತ್ತರಿನಿಂದ ಹಸಿಮಾಡಿ.ಸಾಲು ಸಾಲಿನಲ್ಲಿ ಒಂದೊಂದು ಬೀಜದ ಹೆಸರಿನಲ್ಲಿ.ನಮ್ಮ ಅನ್ನ ಉಂಡ ನಿಮ್ಮ ನಾಲಿಗೆ ಓದಿ ಪಾವನವಾಗಲಿ. ಇತಿಹಾಸ ಬರೆಯುತ್ತೇವೆ ನಾವುಇಂದಲ್ಲ ನಾಳೆ… ಇಂದಲ್ಲ ನಾಳೆ.ಆಗ ನಿಮಗೆ ಅರಿವಾಗಬಹುದು.ಅನ್ನದಾತನ ಸಂಕಟ ಸಾವು ಯಾಕೆಂದು! ****************************
ಇತಿಹಾಸ ಬರೆಯುತ್ತೇವೆ ನಾವು Read Post »
ಕವಿತೆ ಮೌನದೋಣಿಯಲಿ ಮನ್ಮಥನ ಹುಟ್ಟು ಬೆಂಶ್ರೀ ರವೀಂದ್ರ ಅವಳುನಸು ನಗುತ್ತಲೆ ಒಳಗೆ ಕರೆದುಕೊಂಡಳುನಸುಬೆಳಕಿನಲಿ ಮಂದಹಾಸದ ಚಿಮ್ಮುನವಿರಾಗಿ ಹರಡಿಕೊಂಡ ಸುಗಂಧಚೆಲ್ಲಿದ್ದ ಮಲ್ಲಿಗೆಯ ಮುಗುಳುತೆಳುಪರದೆಯ ಸುಂಯಾಟದ ನುಲಿವುಕಿರುಗೆಜ್ಜೆಯ ಕಿಣಕಿಣದಲಿ ಬೆರೆತಿತ್ತು ಅವಳುಕಣಕಣವ ಮುಚ್ಚಿಡದೆ ಎಲ್ಲವನೂ ತೆರೆದಳುಹಾಲು ಜೇನು ಚೆಲ್ಲಾಡಿ ಹೋಯಿತುಸಂಕೋಚ ಬಿಗುವಿಲ್ಲದ ಸಮ್ಮಾನ ಸುಮ್ಮಾನಮೌನದೋಣಿಯಲಿ ಮನ್ಮಥನ ಹುಟ್ಟುಸುಖಸಾಗರದಿ ಅನಂತ ಪಯಣ ಹಣೆಯಲಿ ಮಡುಗಟ್ಟಿದ ಬೆವರಬನಿಜಾರಿ ಕಣ್ಣೊಳಗೆ ಒಗರ ರುಚಿಪಟಪಟನೆ ಆಡಿದ ರೆಪ್ಪೆಯೊಳಗೆಬೆಳಕು ಮುದುಡಿದ ಮಂಜು ನಕ್ಷತ್ರಗಳು ಕಣ್ಣು ಹೊಡೆದವಲ್ಲಾ!ಬುವಿಗೇನು!!ಆದರೆ ಇಂದು ಹುಣ್ಣಿಮೆನಕ್ಷತ್ರಗಳು ಕಾಣುವುದಿಲ್ಲಅವುಗಳದು ಕಣ್ಣುಮುಚ್ಚಾಲೆಯಾಟ. ಸಮುದ್ರದ ಭರತವು ಏರುತ್ತಿದೆಇಂದು ಚಂದ್ರನಿಗೆ ಸೋಬಾನ ಗೀತದೇವತೆಗಳಿಗೆ ಸೋಮಪಾನ ; ಸವಿಯೂಟ ಹಿಂದೆಂದೂ ಅನುಭವಿಸದ ಅನುಭವಉದ್ರೇಕದೇರಿಳಿತ ತಣಿವಂತ ತಂಪುಉಚ್ವಾಸ ನಿಶ್ವಾಸ ಪ್ರಕೃತಿಯ ಜಾಲಬೆಸೆದಬಂಧ ಅವನಿಗೀಗ ಮಂಪರು ಮಂಪರುಸೆರಗಿನಲಿ ಬೀಸಿ ಗಾಳಿ ; ಮುಖವರಸಿಹೂ ಮುತ್ತನಿತ್ತವಳಿಗೆಕಣ್ಣಾಲಿಗಳು ತುಂಬಿದ್ದವು; ಕನಸು ಒಡೆದಿತ್ತುಬಿಕ್ಕು ಬಿಕ್ಕುಗಳು ಮರಮರಳಿದಾಗಅದೆ ಸೆರಗಿನಲಿ ಬಾಯಿ ಮುಚ್ಚಿಕೊಂಡಳುನಿದ್ದೆ ಕೆಡಬಾರದಲ್ಲ. ಅವಳಿಗೀಗ ಮಂಪರು ; ಯಾರೋ ಎದೆ ಬಗೆಯುತ್ತಿದ್ದಾರೆಹುದುಗಿದ ಚಿತ್ರಗಳ ಮರುಕಳಿಕೆಮುಸುಕು ಮಸುಕಾದ ಮೆರವಣಿಗೆಮತ್ತೆಲ್ಲೋಕನಸುಗಳು ಪಟಪಟನೆ ಒಡೆಯುತ್ತಿರುವ ಕ್ಷೀಣದನಿ…ಹತ್ತಿರ ಹತ್ತಿರ ಬಂದು ಆಸ್ಪೋಟಕಿವಿ ತಮಟೆ ಹರಿದುಇವಳುಬೆವರಿನ ಸಾಗರದಲಿ ತೇಲತೊಡಗಿದಳು. *************..
ಮೌನದೋಣಿಯಲಿ ಮನ್ಮಥನ ಹುಟ್ಟು Read Post »
You cannot copy content of this page