ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗುಪ್ತಗಾಮಿನಿ

ಕವಿತೆ ಗುಪ್ತಗಾಮಿನಿ ಸಂಗಮೇಶ್ವರ ಶಿ.ಕುಲಕರ್ಣಿ ನಿನಗೆ ನಾನ್ಯಾರು?ಕೇಳದಿರು ಹೇಳದಿರುಅಲ್ಲಿ ಕಾಡುವ ಒಗಟುಎದುರಾಗದಿರಲಿನಿನಗೆ ನನಗೆ ಇಬ್ಬರಿಗೂ…. ನನಗೆ ನೀನ್ಯಾರು?ಹೇಳುವೆ ಸಾರಿ ಸಾರಿಆತ್ಮದಲಿ ಆರೂಢವಾಗಿರುವಅಗೋಚರ ಆಕೃತಿ!ಪ್ರತಿಕ್ಷಣದ ಸ್ಮೃತಿ!! ಅಲ್ಲಿ ನೀನು ಇಲ್ಲಿ ನಾನುಅನ್ನುವ ಅಂತರದ ಮಾತೆಲ್ಲಿಆಣೆ ಮಾಡುವೆ ಬೇಕಾದರೆ;ಅಂತರಂಗ ಆಕ್ರಮಿಸಿದಮೊದಲ ದೊರೆಸಾನಿ ನೀನಿಲ್ಲಿ! ಉಬ್ಬುತಗ್ಗಿನ ಚರ್ಮದ-ಹೊದಿಕೆಯ ಮೋಹದಲ್ಲಿಮರೆತುಹೋಗುವ ಪಿಂಡವಲ್ಲ;ಎಲ್ಲ ದಾಟಿ ಅನಂತ ಹುಡುಕುವಅದಮ್ಯ ಚೇತನ! ನನಗೊಂದು ನಿನಗೊಂದುಬೇರೆಯದೇ ಕೋಳ,ಕಳಚಿ ಕೈಬಿಡುವ ಕೈಕಟ್ಟು ಅಲ್ಲ ಬಿಡು.ಇದರ ಮಧ್ಯೆ ನಮ್ಮದುಸಾವಿನಾಚೆಗೂ ಸಾಗುವ ಬಂಧ! ಈ ಜೀವಕ್ಕೆ ಅರ್ಧಜೀವ ನೀನು! ****************************

ಗುಪ್ತಗಾಮಿನಿ Read Post »

ಕಾವ್ಯಯಾನ

ಮಾಗಿಯ ಪದ್ಯಗಳು

ಕವಿತೆ ಮಾಗಿಯ ಪದ್ಯಗಳು ಪ್ರೇಮಲೀಲಾ ಕಲ್ಕೆರೆ ಕೌದಿ ಕವುಚಿಕಂಬಳಿ ಹುಳುವಾದರೂಅಡಗಲೊಲ್ಲದ ಚಳಿ ಬೆಳಗಾಗ ಬರುವಚುರುಕು ಬಿಸಿಲಿನ ನೆನಪೇಬಿಸಿ ಹುಟ್ಟಿಸಬಲ್ಲದುಒಳಗೆ ಉರಿಮುಖದ ಸೂರ್ಯ, ನಿನ್ನ ಆಗಮನಅದೆಷ್ಟು ಬೆಚ್ಚಗೆಜಡ ಮಾಗಿಗೆ !! 2 ತುಂಟ ಸೂರ್ಯ,ಎಲ್ಲಿ ಅಡಗಿದ್ದೆ ನೀನು ?ಇಷ್ಟೊಂದು ತಡವೇಕೆಮನೆಗೆ ಬರಲು ?? ಗುಟ್ಟೇನಿದೆ ,ಆ ನಿಶೆಯ ಜೊತೆನಿನ್ನ ಚೆಲ್ಲಾಟಜಗಕೇ ಗೊತ್ತು! ತರವಲ್ಲ ಬಿಡು,ತರವಲ್ಲ ಬಿಡು, ಆ ಕಪ್ಪುನಿಶೆಯಲಿಏನುಂಟು ಚೆಲುವು?ಬಿತ್ತಿದ್ದ ಬೆಳೆಯುವಇಳೆಗೆ ಮಿಗಿಲು?? ******************************************

ಮಾಗಿಯ ಪದ್ಯಗಳು Read Post »

ಕಾವ್ಯಯಾನ

“ಅಂತರ್ಬಹಿರಂಗ”

ಕವಿತೆ “ಅಂತರ್ಬಹಿರಂಗ“ ಉದಯ ಧರ್ಮಸ್ಥಳ ನಿದ್ದೆಯ ಮುಂಜಾವಿನಲ್ಲಿಮುಂಜಾವಿನ ನಿದ್ದೆಯಲ್ಲಿಮಂಪರು ಭಾವಗಳೊಂದಷ್ಟುಮತಿಯ ತೋಪಿನಲ್ಲಿಗತಿ ಲಯದ ಸಾಲು ತುರುಕಿದ ಕಾಡತೂಸುಗಳಂತೆಶಬ್ದಗಳಲ್ಲದೆಮೌನ ಅಕ್ಷರದುಂಡೆಗಳು ! ಎತ್ತೆತ್ತಲೋ ಎಸೆದೆರಗುವಂತಾಗಿಧಮಿಲ್ ಧಮಿಲ್ ಧಮಿಲ್ಹೊರಗುಗುಳುವಾಗಹಿಡಿದುದಾಖಲಾಗಿಸುವಾಗಅರೆಬಿರಿದ ಕಣ್ಣೆಡೆಯಿಂದದೃಷ್ಟಿ ಕಾಣುವ ಪಂಕ್ತಿ ಪದಅದೇನೋ ಅಪರೂಪದಆಗೀಗ ಬರುವ ಅತಿಥಿಯಂತೆನಕ್ಕಣರಳಿಸಿ ಬೀಸಿದ ಓರೆನೋಟ ! ಧಿಂಗಣ‌ ಕುಣಿದ ರಂಗದಂಗಳದವೇಶಗಳಾಗಿ ಬಣ್ಣಬಣ್ಣ ಕಟ್ಟಿದೊಗಲೆ ದೊಗಲೆಯೊಳಗೆಅಂಡು ಬಿಗಿದ ಹಳೆಬಟ್ಟೆಯ ಹಿಂಡುಮೇಲೆ ಮಿರಮಿರನೆ ಝಗಮಗಿಸುವರಾಜನುಡುವ ರಂಗುರಂಗಿನ ಪೋಷಾಕಿನೊಳಗಿಂದಜೀವ ಲಕಲಕ ಲಕಾ ಭಾಷೆಯುಚ್ಛಾರ ! ಅದೇನೋ ಮೊರದಗಲತಡ್ಪೆ ಕಿರೀಟದ ಬಣ್ಣದ ವೇಶಅರಚಿ ಅರಚಿ ಬೆದರಿಸಿಅರ್ಥವಾಗದಿದ್ದರೂಅರ್ಥ ಮಾತಾಡುವಂತೆ ಕಂಡರೆಅದು ಪ್ರಸಂಗದ ಮುಖ್ಯ ಅಧಿಕಪ್ರತಿನಾಯಕನ ಚಿಟ್ಟೆಯ ಮುಖದಒಳಗಿರುವ ನಿಜಮುಸುಡಿಬೆವರಿ ಬೆದರಿ ನಿಜವಲ್ಲದಕಥೆಗಳಿಗೆ ನಿಜವೆನಿಸುವ ಪದ ಉದುರಿಸಿಹಿಮ್ಮೇಳದ ಆರ್ಭಟಗಳಿಗೆಮುಮ್ಮೇಳವಾಗಿ ನಲಿಯುತ್ತದೆ ! ಬಾಲ್ಯಮುಖತನು ಸುಕ್ಕಾಗಿಮುದಿಯಾಗಿ‌ ಹಲವಾರುಪರಲೋಕ ಪಾತಾಳಗಳಮನಕನಸಲ್ಲಿ ಕಂಡಾಡಿದ ನಂತರವೂತಕತಕ ಕುಣಿವ ಪ್ರತಿಮಾಧ್ವನಿಸಂಕೇತಗಳೇ ಖುಷಿಕೊಟ್ಟುಶಿಸ್ತಿನ ಸಿಪಾಯಿಗಳಂತೆಸಾಲಾಗಿ‌ ಪಥಸಂಚಲನ ಗೈವಾಗಹಾಯಾಗಿ ಒಳತೋಟಿತಂಪಾದ ತೇಜಾಪು !ಅನುಭಾವವರಳಿ ತನುಭಾವ ಕೆರಳಿ ಕೆಂಡಸಂಪಿಗೆಯ ಘಮ್ಮನೆಯ ಕಂಪು ! ರಾಗ ತಾಳ ಆಲಾಪಗಳಹಂಗು ಗುಂಗಿಲ್ಲದಾಗಹೊರ ಚೆಲ್ವ ಅಗ್ನಿಪರ್ವತದತಲೆಯೊಡೆದು ಕಿಲೋಮೀಟರ್ಮೇಲ್ಚಿಮ್ಮಿದ ಲಾವಾರಸಸುಡುಸುಡುಸುಡುತಾ ಸಾಗಿಸಿಕ್ಕಿದಕ್ಕೆಲ್ಲಾ ತಾಗಿಕರಟಾಗಿಸಿ ಒಳಸೇರಿಸಿಒರಟೊರಟಗಿ ಹೊರಟುಸಾಗಿಸಾಗಿ ಸಾಗುವಜಗದಗಲ ಪ್ರಭಾವಿಸುವ ಪ್ರವಾಹ ! ಮುಗಿಲೆಂದರದೇಮುಗಿಯದ ಮಿಗಿಲುಅಳೆಯಲಾಗದ ಅಂತರಾತ್ಮಬಿಗಿದ ಸುಯಿಲುಅದ್ಯಾವುದೋ ಸನ್ನಿಧಿಗೆಸಲ್ಲಿಸಿದ ದೂರಿನುಯಿಲು !ಕಳೆದುಕೊಂಡ ಹಪಾಹಪಿಯನಡುವೆ ಮತ್ತೆ ದಕ್ಕಿಸಿಕೊಳ್ಳುವಾಸೆಯ ಅಮಲು ಕೊಯಿಲು !ಕೊರೆದು ಬರೆದವುಗಳಸೇರಿ ಸಿಟ್ಟು ಸೇರಿಸಿಟ್ಟುಸೇರಿಸಿಡುವ ಸೇರಿ ಸುಡುವಅನರ್ಥ ಅಪಾರ್ಥಗಳ ಯತಾರ್ಥ !ಹಾಂ ! ಯತಾರ್ಥಗಳ ಅಪಾರ್ಥ ಅಪಾತ್ರ ! ಹೇಳಬಾರದ್ದನ್ನುಹೇಳುವಾಗದರರ್ಥವಾಗದಹಾಗೆ ಭೋರೆಂದು ಸುರಿದು ಹರಿದಜೀವರಸದೊಳಗಿನದ್ರವದೊಳಗಣಕಣವೊಂದಿನ್ನೊಂದರಲ್ಸೇರಿಝಗ್ಗನೆ ಸೃಜಿಸಲ್ಪಟ್ಟ ಮಿಸುಕಾಟದಪಿಂಡದುಂಡೆ ಕೆಂಡಕುಸುಮದಮುಡಿಯಲಾಗದ ಹೂದಂಡೆ ! ಅನಿರತ ಅಮಿತರತವಿರಕ್ತನೇ ತಪ್ತಶಕ್ತವಾಗಿಅನುರಕ್ತ ಭಕ್ತಭಾವಲಹರಿಯ ಹರಿಯ ಬಿಟ್ಟಹರಿ ಬಿಟ್ಟ ನರ ಹರಿದ ಬದುಕತೇಪೆಹಾಕಲುಹೃತ್ಕುಂಜದಲಿ ಜೀವಕಾರಂಜಿಯಭವಿತ ಚಿಲುಮೆಯಾಗಿಸುವಚಲಿಸುವುದನುಚಲಿಸದಂತಾಗಿಸಲುಮುನಿಯುವುದನುಮುಗುಳಾಗಿಸಿಯರಳಿಸಲುಆಗಾಗ ಹೀಗಾಗುವಜೀವಾಕ್ಷರಗಳ ಸರಪಳಿಯಖಳ ಖಳ ಸದ್ದಿನ ನೆಯ್ಗೆಅಪಾರ ಮಂಕು ಕಡಲ ಹೊಯಿಗೆ !ಬಂಡೆಯೊಡೆಯದೆಸಡಿಲಸಡಿಲವಾಗಿಘನಕಣ ಮರುಳು ಮರಳಾಗೆದಡಕಟ್ಟಿ ದಡಗಟ್ಟಿಯಾಗಿಸಿಕೊಂಡುಗುಳುಗುಳಿಸಿ ಭೋರ್ಗರಿಸಿಬೊಬ್ಬಿರಿದು ತನ್ನಲೇ ತಾ ಮೊರೆದುತಳಕೊರೆದು ಒಳಗಿಳಿದುಘಮಲಿಸುವ ತಮಲಿಸುವತಳಮಳವ ಇಳಗಿಟ್ಟುಶಾಂತಿಕವಚವ ಹೊದೆವ ಈ ಗುಟ್ಟು ! ********************************

“ಅಂತರ್ಬಹಿರಂಗ” Read Post »

ಕಾವ್ಯಯಾನ

ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ

ಕವಿತೆ ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ ಪ್ರೇಮಶೇಖರ ಹೀಗೇಎತ್ತಲಿಂದಲೋ ಹಾರುತ್ತಾಇತ್ತ ಬಂದ ಗುರುತಿಲ್ಲದ ಹಕ್ಕಿ,ಇಲ್ಲೇ ಕೂತಿದೆ ಬೆಳಗಿನಿಂದಲೂ. ಲಲಿತೆ ಕಾಳು ಹಾಕಿದ್ದಾಳೆ,ಪುಟ್ಟಿ ನೀರಿಟ್ಟಿದ್ದಾಳೆ,ನಾನು ಕೋಲು ಹಿಡಿದುಪುಸ್ಸಿಯನ್ನು ಕಾಯುತ್ತಿದ್ದೇನೆ. ಪುಟ್ಟ ಹಕ್ಕಿಕಾಳು ತಿನ್ನುತ್ತಿಲ್ಲ,ನೀರು ಕುಡಿಯುತ್ತಿಲ್ಲ,ಬಾಯಿ ತೆರೆದು ಕೂಗುತ್ತಲೂ ಇಲ್ಲ. ಅಕ್ಕಪಕ್ಕದ ಮನೆಯವರು ಬಂದರು,ತಲೆಗೊಂದು ಮಾತು ಅಂದರು-ಅದು ಹಾರಿಬಂದ ದಿಕ್ಕುನೋಡಿದಿರಾ? ಮನೆಯೊಳಗೆ ನುಗ್ಗಿದಗಳಿಗೆ ಗಮನಿಸಿದಿರಾ? ಲಲಿತೆ ಅವರಿಗೆಲ್ಲ ಚಹ ಮಾಡುತ್ತಿದ್ದಾಳೆ,ಪುಟ್ಟಿ ವಾಷ್‍ಬೇಸಿನ್ ತೋರಿಸುತ್ತಿದ್ದಾಳೆ,ಪುಟ್ಟಹಕ್ಕಿ ಸುಮ್ಮನೆ ನೋಡುತ್ತಿದೆ,ನನ್ನ ಕೈಯಲ್ಲಿನ್ನೂ ಕೋಲು ಆಡುತ್ತಿದೆ.ಅವರು ಚಹಾ ಜತೆ ಹಕ್ಕಿಯನ್ನು ನೆಂಜಿಕೊಳ್ಳುತ್ತಿದ್ದಾರೆ. ಕಿವಿಚಿದರೆ ಕೂಸಿಗಾದರೂಒಂದೊತ್ತಿನ ಪಲ್ಯವೂ ಆಗದು.ತಿನ್ನುವ ಮಾತಾಢಬೇಡಜ್ಜೀ,ಅದಕ್ಕೆ ಜ್ವರ ಬಂದಿರಬೇಕು,ಅದೆಲ್ಲಿಯ ಗ್ರಹಚಾರ.ಅದಕ್ಯಾವ ಜ್ವರ? ಕಥೆಹೇಳಬೇಡ ಅಡುಗೂಲಜ್ಜೀ,ಕೊರೋನಾ ನರರಿಗಷ್ಟೇ. ಬಣ್ಣದ ಹಕ್ಕಿಗಳು ರುಚಿಇಲ್ಲವಂತೆ, ಸಾದಾ ಹಕ್ಕಿಗಳೇ ರುಚಿರುಚಿಯಂತೆ!ಹಾಗಂತ ಹೇಳು ಮಹಾರಾಣೀಕಾಲೇಜಿನ ಮುಂದೆ, ಅಯ್ಯೋ ಬಿಡೇ ಸಾಕು ಅದನ್ನುದಾಟಿಯೇ ಬಂದವರು ನಾವೆಲ್ಲಾ.ಈಗೆಲ್ಲಿ ಆ ವೈಭವ!ಕಳೆದುಹೋದದ್ದು ಬಿಟ್ಟು ಎದುರಿಗೆಕೂತದ್ದರ ಸುದ್ದಿ ಹೇಳು. ಬೇಸಗೆಗೆ ಬಳಲಿದೆ ಹಕ್ಕಿ,ಚಳಿ ದೇಶಕ್ಕೆ ಹಾರಿಹೋಗಲಾಗಲಿಲ್ಲವೇನೋ ಸಂಗಡಿಗರೊಡನೆ.ನಾವಾದರೂ ಬಿಟ್ಟುಬರೋಣವೆಂದರೆ ರೈಲು ವಿಮಾನಗಳಿಲ್ಲವಲ್ಲ! ಹ್ಞೂಂ, ಹಾಳು ಕೊರೋನಾ ಇವಳೇ.ಹೌದು ಆಂಟೀ, ನಮಗೂ, ಹಕ್ಕಿಗೂಅದರದೇ ಕಾಟ. ಅಂ! ಕೊರೋನಾ ಅಂದೆಯಾ?ಅರೆ ಆಂಟಿನನ್ನ ಮಾಸ್ಕ್ ಎಲ್ಲಿ?ನನ್ನದೂ ಕಾಣದು ಇವಳೇಓಹ್ ಅತ್ತೇ, ನನ್ನದೂ ಇಲ್ಲಟೀ ಕುಡಿವ ಮೊದಲು ಕಳಚಿಟ್ಟೆನಲ್ಲ… ಮಡಿಲಲ್ಲಡಗಿರಬೇಕು ನೋಡೋಣ.ಹಜಾರದ ತುಂಬಾ ಸೀರೆದುಪಟ್ಟಾಗಳ ಫಟ್‍ಫಟ್ ಫಟರವ. ಕಾಣ್ತಿಲ್ವೇ, ಹಾಳು ಹಕ್ಕಿಯಿಂದ ಹೀಗಾಯ್ತಲ್ಲ!ಗಾಳಿಯಲ್ಲಿ ಗಾಬರಿಯ ಲೊಚ್ ಲೊಚ್ ಲೊಚರವ, ಛೇ ಹಕ್ಕಿ,ಪುಟ್ಟ ಹಕ್ಕಿ, ಪುಟಾಣಿ ಹಕ್ಕಿ…ಅರೆ…!ಎಲ್ಲಿದೆ ಹಕ್ಕಿ? ಅದು ಹಾರಿಹೋಗಿದೆ,ಕೂತಿದ್ದೆಡೆ ಒಂದು ಗುಪ್ಪೆಹಿಕ್ಕೆ ಬಿದ್ದಿದೆ. ಪುಟ್ಟಿಯ ಮುಖ ಕಪ್ಪಿಟ್ಟಿದೆ,ಲಲಿತೆಯ ಕಣ್ಣಲ್ಲಿ ಹನಿ ನೀರಿದೆ,ಬಾಲ್ಕನಿಯಾಚೆಹದ್ದೊಂದು ರೆಕ್ಕೆ ಬಡಿದಿದೆ,ನೆರೆಯವರ ನಿರಿಗೆಗಳುಮೆಟ್ಟಲಸರಣಿಯಲ್ಲಿ ಆತುರದಲ್ಲಿ ಚಿಮ್ಮಿವೆ.ನನ್ನ ಕೈನ ಕೋಲು?. ಅದು ನೆಲವನ್ನು ಪಟಪಟ ಬಡಿಯುತ್ತಿದೆ. ಬಡಿಯುತ್ತಲೇ ಇದೆ. ***********************************************************************

ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ Read Post »

ಕಾವ್ಯಯಾನ

ವಿರಾಗಿ ತ್ಯಾಗಿ

ಕವಿತೆ ವಿರಾಗಿ ತ್ಯಾಗಿ ಡಾಲಿ ಕೊಡನವಳ್ಳಿ ಚಕ್ರವರ್ತಿ ಭರತ…ನಿನಗಿಂತವಿರಾಗಿ ತ್ಯಾಗಿ ಬಾಹುಬಲಿಗೆಈ ಕನ್ನಡ ನೆಲ ತಲೆಬಾಗಿತಲೆ ಎತ್ತಿ ನೋಡಿದರೂ ನಿಲುಕದ ಪ್ರತಿಮೆಯನ್ನೇಕಡೆದು ನಿಲ್ಲಿಸಿದ್ದು ಯುದ್ದ ಗೆದ್ದು ಸೋತವನಏನಿಲ್ಲವೆಂದು ಹೊರಟವನಕೈಬೀಸಿ ಕರೆದುಗಿರಿನೆತ್ತಿಯ ಮೇಲಿರಿಸಿಮಸ್ತಕಕೆ ಬೆಳ್ಮುಗಿಲ ಮುಕುಟವಿರಿಸಿತಾರೆಗಳ ನೇವಣಿಯನೇರಿಸಿಅಂಬರಕೆ ಚುಂಬಿಸಿದವನನ್ನೇಕರುನಾಡುದೊರೆಯಾಗಿ ಸ್ವೀಕರಿಸಿತು ಮುರಿದು ಬೀಳುವ ಮಹಲಿನಹಂಗು ತೊರೆದವಗೆಗಿರಿಶಿಖರಗಳೇ ಕಂಬವಾಗಿಮೋಡಗಳೇ ಮೇಲ್ಛಾವಣಿಯಾಗಿನಾಡ ಗರ್ಭಗುಡಿಯಲ್ಲಿಸದ್ಗತಿ ಸಂದವನಪ್ರಾಪಂಚಿಕ ಸುಖ ಗೆದ್ದವನಪ್ರಕೃತಿಯ ಕಣಕಣವೂಪಾಲಿಸಿತಿಲ್ಲಿ ಬೆಳಗುಳ ನಂದನಪ್ರತಿದಿನ ನಿನ್ನದೇಪ್ರತೀಕ್ಷೆ ಪೃಥ್ವಿಗೆ.ಎಳೆಸಂತೆ ಕಂಗೊಳಿಸುವ ನಿನ್ನೀನವಿರು ಭಾವ ಹೊತ್ತ ಕುಸುಮ.ಗಂಧವತಿ ವಸುಧೆಯ ಗಂಧ ಘಮಹೊನ್ನ ಹಣತೆಯಲಿಜ್ಯೊತಿ ಬೆಳಗುವ ಶಶಿ ಸೂರ್ಯಆದಿ ನಾಥ ಸುತನನ್ನೇ ಅರಸಿದಂತಿದೆಪ್ರತಿ ಕ್ಷಣದ ಆರಂಭಕೆ **************************

ವಿರಾಗಿ ತ್ಯಾಗಿ Read Post »

ಕಾವ್ಯಯಾನ

ಸ್ವಾತಿಮುತ್ತು

ಕವಿತೆ ಸ್ವಾತಿಮುತ್ತು ಅಕ್ಷತಾ ಜಗದೀಶ. ಎನಿತು ಸುಂದರ ನೋಡುತಿಳಿನೀಲ ಮುಗಿಲು….ಮುತ್ತು ನೀಡುವಂತಿದೆಬಾನಂಚಿನ ಕಡಲು.. ಕಡಲಿಗು‌ ಮುಗಿಲಿಗುಇದೆಂತಹ ಬಂಧ..ಅರಿಯಲಾರದಂತಹಅಂತರಂಗದ ಅನುಬಂಧ.. ಕಾಲಗಳು ಉರುಳಿದರುಯುಗಗಳೇ ಕಳೆದರುಕಾಣುವುದು ತಿಳಿನೀಲಿ ಬಿಂಬಮಾಸಿಹೋಗದ ಆ ಪ್ರತಿಬಿಂಬ.. ಭಾವದೊಳಗೆ ಸನಿಹ ಕಡಲುವಾಸ್ತವದೊಳು ದೂರ ‌ಮುಗಿಲುಸತ್ಯದ ಒಳಗಿನ ಮಿಥ್ಯ..ನೆನಪಿಸುತಿದೆ‌ ಅಲೆಗಳು‌ ನಿತ್ಯ.. ಬಾನಿಂದ ಜಾರಿದೆ ಮಳೆ ಹನಿಕೇಳುತಿದೆ ಮರಳಿ ಕಡಲ ದನಿಮತ್ತೆ ಪ್ರೀತಿ ಮೂಡುವ ಹೊತ್ತುಕಡಲಾಳದಲಿ ಎಲ್ಲೆಲ್ಲೂ ‌ಸ್ವಾತಿಮುತ್ತು…. ****************************

ಸ್ವಾತಿಮುತ್ತು Read Post »

ಕಾವ್ಯಯಾನ

ಹರಿದ ಬಟ್ಟೆ….

ಹರಿದ ಬಟ್ಟೆ…. ಸುಜಾತ ಕಂದ್ರವಳ್ಳಿ ನನ್ನದು ಅರ್ಧಂಬರ್ಧ ಹರಿದ ಬಟ್ಟೆಆಧುನಿಕತೆಯನ್ನು ವೈಭವೀಕರಿಸಲೆಂದೇಹರಿದುಕೊಂಡ ಬಟ್ಟೆ….!ಹರಕಲು ಬಟ್ಟೆ ಎನ್ನಲಾರೆ….!ಆದರೂ ಹರಿದ ಬಟ್ಟೆ….! ಆಧುನಿಕತೆಯನ್ನು ತೋರಿಸುವ ಭರದಲ್ಲಿ, ಸಾಂಪ್ರಾದಾಯಿಕತೆಯನ್ನು ಮುಚ್ಚಿಡಲೆಂದೇ ಹರಿದುಕೊಂಡ ಬಟ್ಟೆ……!ಅರ್ಧ ಹೊಟ್ಟೆಗೆ ತಾಗುವಂತ ಹಸಿದ ಬಟ್ಟೆ…ಅಂಬಲಿ ಊಟ ನನ್ನದಲ್ಲವೇ ಅಲ್ಲ…!ಮಾಲ್ಟ್ ಎಂದು ಹೆಸರು ಬದಲಿಸಿಕೊಂಡು ಮೆರೆವ ಹರಿದ ಬಟ್ಟೆ.ನನ್ನದು ಅರ್ಧಂಬರ್ಧ ಹರಿದ ಬಟ್ಟೆ. ಅಮ್ಮನ ಹಳೆ ಸೀರೆಗೆ ಹೊಸ ಮೆರುಗು ಕೊಟ್ಟ ಬಟ್ಟೆ,ಅಪ್ಪನ ಲುಂಗಿಗೆ ಅಲಂಕಾರ ಕೊಟ್ಟ ಬಟ್ಟೆ…,ಲುಂಗಿಯನ್ನೆ ಅಂಗಿಯಾಗಿಸಿದ ಬಟ್ಟೆ…ಸೀರೆಯನ್ನೆ ಹೊದಿಕೆಯಾಗಿ ಸಿಂಗರಿಸಿಕೊಂಡ ಬಟ್ಟೆ,ಆದರೇನಂತೆ ನಾ ಹರಕಲು ಬಟ್ಟೆ ಎಂದು ಅರಚಲಾರೆ,ಕಿರುಚಲಾರೆ ಆದರು ಹರಿದ ಬಟ್ಟೆ.ನನ್ನದು ಅರ್ಧಂಬರ್ಧ ಹರಿದ ಬಟ್ಟೆ. ಒಬ್ಬರು ಇನ್ನೊಬ್ಬರನ್ನು ನಂಬಲಾರದಂತ ಬಟ್ಟೆ.ತಳುಕು ಬಳುಕಿನ ವೈಯ್ಯಾರದ ಬಟ್ಟೆ.ಬಣ್ಣದ ಜಗದಲಿ ಮೆರೆಯಲೆಂದೆ ಹುಟ್ಟಿಕೊಂಡುಸಾಯಲಾಗದೆ ನರಳಾಡುತಿರುವ ಬಟ್ಟೆ.ಬಂಗಾರವಿಲ್ಲದ, ಸಿಂಗಾರ ಕಾಣದ ,ಮಲ್ಲಿಗೆ ಕಂಪು ತಾಗದ ಬಟ್ಟೆಬೊಟ್ಟನ್ನೆ ದಿಕ್ಕರಿಸಿ ಬೆಟ್ಟು ಮಾಡಿ ತೋರಿಸಿಕೊಳ್ಳುತಿರುವ ಬಟ್ಟೆ,ಆದರೂ ಹರಿದ ಬಟ್ಟೆ ಎನ್ನಲಾರೆ….!ಅರ್ಧಂಬರ್ಧ ಹರಿದ ಬಟ್ಟೆ….. ಎಂದು ಹೊಲಿಸಿಕೊಳ್ಳಲಾರದಷ್ಟು ದುಬಾರಿ ಈ ಬಟ್ಟೆ.ಅಲಂಕರಿಸಿಕೊಳ್ಳುವ ಸೊಬಗನ್ನು ಮರೆತ ಬಟ್ಟೆಇದರೊಳಗೆ ನಾನು ಪಟ್ಟದ ಗೊಂಬೆಯಂತೆ ಮೌನಳಾಗಿಬಿಟ್ಟೆ.********************************************

ಹರಿದ ಬಟ್ಟೆ…. Read Post »

ಕಾವ್ಯಯಾನ

ಕಾವ್ಯಯಾನ

ಬತ್ತಿದೆದೆ ರೇಷ್ಮಾ ಕಂದಕೂರ ಬತ್ತಿದೆದೆಯಲಿ ಬಿತ್ತದಿರು ಕನಸುಸುತ್ತಲೆಲ್ಲ ಕವಿದ ಕತ್ತಲೆಮುತ್ತಿದೆ ಭರವಸೆಯ ಬೆಳಕನುಕುತ್ತಾಗಿದೆ ಕಿತ್ತು ತಿನ್ನುವ ಹುಳುವಿನಂತೆ ಸತ್ಯದ ಹೊನಲಿಗೂ ಸಂಚಕಾರಮಿತ್ಯದ ಝೇಂಕಾರದ ಸಲಿಗೆಅಪತ್ಯದ ನಡೆ ನುಡಿಯುವವರೆ ಹೆಚ್ಚುನಿತ್ಯ ನೇಮವು ದೂರ ತೀರದಲಿ ತೇಲಿ ಕೋಪ ತಾಪದ ಆರ್ಭಟಕೂಪದಲಿ ಸೇರಿದೆ ಮಾನವೀಯತೆಊಹಾಪೋಹದ ಸುಳಿಗೆವಾಸ್ತವವ ಮರೆ ಮಾಚಿದೆ.

ಕಾವ್ಯಯಾನ Read Post »

ಕಾವ್ಯಯಾನ

ನಿರುತ್ತರ

ಕವಿತೆ ನಿರುತ್ತರ ಮಧುಸೂದನ ಮದ್ದೂರು ನಿನ್ನ ತುದಿ ಬೆರಳುಎದೆ ತಾಕಲುನೂರು ನವಿರು ಪುಳಕ ನಿನ್ನ ಮುಂಗುರುಳುಗಾಳಿ ಗಂಧ ತೀಡಲುಸಾವಿರದ ಸಂಭ್ರಮದ ಘಮಲು ನಿನ್ನ ಕೆಂದುಟಿಅರಳಿ ನಾಚಲುಲಕ್ಷದ ಲಕ್ಷ್ಯವುಅಲಕ್ಷ್ಯವು ನಿನ್ನ ಕಟಿಕುಲುಕಿ ಬಳಕಲುಕೋಟ್ಯನುಕೋಟಿಅಪ್ಸರೆಯರಿಗೂ ಮತ್ಸರ ನಾ…..ನಿರುತ್ತರನಿರಂತರ****************************************

ನಿರುತ್ತರ Read Post »

ಕಾವ್ಯಯಾನ

ದಂಡೆಯಲ್ಲಿ ಒಮ್ಮೆ ನಡೆದು..

ಕವಿತೆ ದಂಡೆಯಲ್ಲಿ ಒಮ್ಮೆ ನಡೆದು.. ಫಾಲ್ಗುಣ ಗೌಡ ಅಚವೆ ಕಾರವಾರದ ದಂಡೆಯೆಂದರೆ ನನಗೆಅದೆಂಥದೋ ಪ್ರೀತಿಸಂಜೆ ಮುಂಜಾವೆನ್ನದೇಸದಾ ಗಿಜುಗುಡುವ ಜನರುಈ ದಂಡೆಯಲ್ಲಿ ನಡೆದುಅದರ ಜೊತೆ ಒಬ್ಬೊಬ್ಬರೇಸಂಭಾಷಿಸಿಸುತ್ತಾರೆ ಮತ್ತುಹಗುರಾಗುತ್ತಾರೆ. ದಿಗಂತದಿಂದೋಡಿ ಬರುವ ಅಲೆಗಳುನಡೆವ ಪಾದಗಳ ತಂಪುಗೊಳಿಸಿಎಂತೆಂಥದೋ ಒತ್ತಡಗಳಿಂದ ವ್ಯಗ್ರವಾದವರಿಗೆಸಾಂತ್ವನ ನೀಡುತ್ತವೆ. ದಂಡೆಯಲ್ಲಿ ಸಿಗುವ ಪರಿಚಿತ ಕೊಂಕಣಿಗರು‘ ನಂಗೆ ಅಷ್ಟಾಗಿ ಕನ್ನಡ್ ಬರುದಿಲ್ಲ ಹಾಂ’ಎಂದು ಕನ್ನಡದಲ್ಲಿಯೇ ಮಾತಿಗಿಳಿಯುತ್ತಾರೆಕನ್ನಡ ದ್ವೇಶಿಸದ ಆ ಕೊಂಕಣಿಗರ ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ.ಯಾಕೆಂದರೆ, ಯಾರ ಸುದ್ದಿಗೂ ಹೋಗದ ಅವರು‘ತಾವಾಯಿತು ತಮ್ಮ ಕೆಲಸಾಯಿತು’ ಅಷ್ಟೇ! ನೀವು ಎಲ್ಲಿಂದಲೇ ಬಂದು ಕೆಲಸ ಮಾಡಿದರೆ ನೀವು ಅಲ್ಲೇ ನೆಲೆಗೊಳ್ಳುತ್ತೀರಿಅಲ್ಲಿಯವರೇ ಆಗಿಬಿಡುತ್ತೀರಿಅದಕ್ಕೆ ಕಾರಣ ಅವರ ಪ್ರೀತಿಪ್ರತಿ ಸಂಜೆ ಎದುರಾಗುವ ಈದಂಡೆಯ ಮಮತೆ! ದಂಡೆಯ ಉಸುಕು ಸದಾ ಗಾಳಿಯೊಂದಿಗೆಗಾಳಿ ಮರದ ಮೇಲೆ ಕೂತು ಪಿಸುಗುಡುವ ಬೆಳ್ಳಕ್ಕಿಗಳುಮೀನು ಕಂಡಲ್ಲಿ ತೇಲುವ ಕಡಲ ಹಕ್ಕಿಗಳುಆಗಾಗ ದಂಡೆಯ ಸಮೀಪ ಬಂದು ಪಾನಿಪುರಿಗೆ ಆಸೆಪಟ್ಟುಮುಳುಗೇಳುವ ಡಾಲ್ಫಿನ್ ಬಗ್ಗೆಯೇ ಗಂಟೆಗಟ್ಟಲೆಮಾತಾಡುತ್ತಿರುತ್ತವೆ. ಬೆಳದಿಂಗಳು ಬಂತೆಂದರೆ ಉಕ್ಕೇರುವ ಅಲೆಗಳುಬೇರೆ ಸಮಯದಲ್ಲಿ ಮಂದ್ರಸ್ಥಾಯಿಯಲ್ಲಿ ಮಿಂದಂತಿರುತ್ತದೆ. ಈ ದಂಡೆಯ ಉಸುಕಿನಲ್ಲಿ ಹಬ್ಬಿದ ಗಿಡಗಳು ಹೂ ಬಿಟ್ಟರೆಸಿಕ್ಕಾಪಟ್ಟೆ ಬಂಗಡೆ ಬೀಳುವುದಂತೆ! ಸಮುದ್ರದ ಮಧ್ಯೆ ನಿಂತ ಒಂಟಿ ದೀಪ ಸ್ಥಂಭಇಡೀ ಕಾರವಾರಿಗರ ಮನಸ್ಸನ್ನುಪ್ರತಿನಿಧಿಸುತ್ತದೆ!ಸಂಜೆ ಆರಾದರೆ ಕಿಲೋಮೀಟರುಗಳ ದೂರದ ಮೀನು ಹಡಗುಗಳ ಕಾಯುತ್ತಸುರಕ್ಷಿತ ದಡ ಸೇರಿಸುತ್ತದೆ.! ಸಂಜೆಯಾದರೆ ಮೀನ ಖಂಡಗಳ ಹೊಳೆಸುವಹುಡುಗಿಯರನ್ನು ಸಾಲು ಹೊರಟ ಬೆಳ್ಳಕ್ಕಿಗಳು ಒಮ್ಮೆ ಇಣುಕಿ ನಡುವ ಬಳಸಿದಂತೆಸುಳಿದು ಹೋಗುತ್ತವೆ. ಎಂದೋ ಈ ದಂಡೆಯಲ್ಲಿ ನಡೆದು ಹೋದ ಕವಿ ರವೀಂದ್ರರು ಈಗಲೂ ಇಲ್ಲೆಲ್ಲೋ ಸುತ್ತುತ್ತಿರುವಂತೆ ಭಾಸವಾಗುತ್ತದೆ.ಅವರು ಕಂಡ ಸಂಜೆ ಇನ್ನೂ ಎನೂ ಬದಲಾಗಿಲ್ಲ! ಲಂಗರು ಹಾಕಿದ ಹಡಗುಗಳು ಸಂಜೆಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ಚಿತ್ರಗೀತೆಗಳ ಆಲಿಸಿ ತಲೆಯಾಡಿಸುತ್ತಿವೆ! ಇಲ್ಲಿನ ಆಹ್ಲಾದಕರ ಸಂಜೆಅಲೆವ ಅಲೆಗಳ ಹೃದಯದ ಮಿಡಿತದಂಡೆಯ ಮರಳ ಮಧುರ ಸಂಗೀತಬೆಳ್ಳಕ್ಕಿ ಹೂ ಮುಡಿದ ಬೈತ್ಖೋಲಿನ ಮರ ನೋಡುತ್ತಲೆನನಗೂ ದಂಡೆಗೆ ಮತ್ತೆ ವಾಪಾಸಾಗಬೇಕೆಂಬ ಅಸೆ ಹುಟ್ಟುತ್ತದೆದಂಡೆಯ ವಿರಹ ನನ್ನೆದೆ ದಿಗಂತದಲ್ಲಿ ಮಡುಗಟ್ಟುತ್ತದೆ! *************************************

ದಂಡೆಯಲ್ಲಿ ಒಮ್ಮೆ ನಡೆದು.. Read Post »

You cannot copy content of this page

Scroll to Top