ಕವಿತೆ ಅಂದಿಗೂ- ಇಂದಿಗೂ ನಾಗರೇಖಾ ಗಾಂವಕರ ನಾನು ಹುಟ್ಟಿದಾಗ ಇದೆಲ್ಲ ಇರಲೇ ಇಲ್ಲ,ಬಣ್ಣಬಣ್ಣದ ಅಂಗಿ ತೊಟ್ಟು,ಕೇಕು ಚಾಕಲೇಟುಗಳ ಹಂಚಿರಲೇ ಇಲ್ಲ. ಅಡಿಯಿಡಲು ಕಲಿತಂತೆ ಕೋಳ್ಗಂಬಕ್ಕೆ ಕಟ್ಟಿದಕಾಲಕುಣಿಕೆ ಬಿಚ್ಚಿ ಹೊರಗಡಿಯಿಟ್ಟಾಗಚೂಪುಕಲ್ಲೊಂದು ಕಾಲ ಬಗೆದಾಗಕಲ್ಲಿಗೆ ಎರಡೇಟು ಬಿಗಿದುಮತ್ತೆ ನಡೆದಾಗ ನನಗೆಭಯವಾಗಿರಲಿಲ್ಲ, ನೋವೂ.. ಅಮ್ಮನ ಕೈ ತೊಟ್ಟಿಲತೂಗಲೇ ಇಲ್ಲ.ಜೋಗುಳವ ಅವಳಿಗೆಂದೂಹಾಡಲಾಗಲೇ ಇಲ್ಲ,ಹಗಳಿರುಳು ದುಡಿದ ಮೈ ಹಾಸಿಗೆಕಂಡಾಗ ಬಿದ್ದದ್ದು, ಮರುದಿನ ಎದ್ದದ್ದು,ಮತ್ತೆ ಬಗಲಿಗೇರಿದ್ದು,ಅದೇ ಹರಕು ಬುಟ್ಟಿ, ಅದರಲ್ಲೆರಡು ರೊಟ್ಟಿತುತ್ತಿನ ಚೀಲ ತುಂಬಬೇಕಿತ್ತಲ್ಲಮತ್ತೆ ಗದ್ದೆ ಹಾಳೆಯ ಮೇಲೆ ಕಟ್ಟಿಟ್ಟಹುಲ್ಲಿನ ಹೊರೆ ಅವಳಿಗಾಗೇಕಾದಿರುತ್ತಿತ್ತಲ್ಲ,ಆದರವಳ ಪ್ರೀತಿಯ ಬೆಚ್ಚನೆಯ ನೆರಳುಸದಾ ನನ್ನ ತಡುವುತ್ತಲೇ ಇತ್ತಲ್ಲಾ.. ನಾ ದೊಡ್ಡವಳಾದಾಗ, ಎದೆ ಮೂಡಿ ನಕ್ಕಾಗಕೆನೆಮೊಸರು, ಬೆಲ್ಲ ಕೊಬ್ಬರಿ ಸಿಕ್ಕಲೇ ಇಲ್ಲ,ಕಣ್ಣು ಕಿಸಿದು ನೋಡುವ ಗಂಡುಗಳುನಮ್ಮ ಸುತ್ತಲೂ ಇರಲೇಇಲ್ಲ.ಅಣ್ಣಂದಿರು ಮಾವಂದಿರು ಎಂದೂಬಂಧಕ್ಕೆ ಹೊರತಾಗಿ ನಡೆದುಕೊಳ್ಳಲೇ ಇಲ್ಲ.ಪ್ರೀತಿಯ ಹಂಚುವುದರಲ್ಲಿಜಿಪುಣತೆ ಇರಲಿಲ್ಲ. ಗದ್ದೆ ಕೆಲಸದ ಹೆಣ್ಣಾಳುಮೇಲುದರಿ ಬಿಚ್ಚಿ ಸೊಂಟಕ್ಕೆ ಸುತ್ತಿ,ಮೀನಖಂಡದವರೆಗೂ ಸೀರೆ ಎತ್ತಿ ದುಡಿವಾಗಅವಳಂದವ ಯಾರೂ ಕದ್ದುನೋಡುತ್ತಿರಲಿಲ್ಲ ಕಾಣಬಾರದ್ದಕಾಣುವ ಕಣ್ಣುಗಳು ಇರಲೇ ಇಲ್ಲ. ಇಂದಿಗೆ ….ಹೀಗೆಲ್ಲ ಇತ್ತೆಂದರೆ ನಂಬಲಾಗುವುದೇ ಇಲ್ಲ