ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಜಲ್

ಗಜಲ್ ಶ್ರೀಲಕ್ಷ್ಮೀ ಅದ್ಯಪಾಡಿ. ಪುಟಿಯುತ್ತಿದ್ದಪುಳಕಗಳೆಲ್ಲಾಎತ್ತಹೋದವೋಅರಳುತ್ತಿದ್ದಕನಸುಗಳೆಲ್ಲಾಎತ್ತಹೋದವೋ ಕಣ್ಣಂಚಿನಲ್ಲಿನೋವಿನಹನಿತುಳುಕುತ್ತಲೇಇದೆನಲಿಯುತ್ತಿದ್ದಭಾವನೆಗಳೆಲ್ಲಾಎತ್ತಹೋದವೋ ಸುಡುಸುಡುತ್ತಿದೆಅವ್ಯಕ್ತಬೇಗೆಒಡಲಾಳದಲ್ಲಿಅರಳುತ್ತಿದ್ದನವಿರುಹೂಗಳೆಲ್ಲಾಎತ್ತಹೋದವೋ ಹೃದಯವೀಣೆಯತಂತಿಯಾಕೋಮುರಿದಂತಿದೆಹಾಡುತ್ತಿದ್ದಮಧುರರಾಗಗಳೆಲ್ಲಾಎತ್ತಹೋದವೋ ಮೌನದಲಿರುವಬೆಳದಿಂಗಳೂಉರಿಬಿಸಿಲಾದಂತಿದೆಹರಡುತ್ತಿದ್ದತಂಪುಕಿರಣಗಳೆಲ್ಲಾಎತ್ತಹೋದವೋ ಹೆಪ್ಪುಗಟ್ಟಿದನೋವಿನಲ್ಲಿಅಳುತ್ತಿದೆಶ್ರೀಯಮನಸುರಿಯುತ್ತಿದ್ದಪ್ರೇಮದಹನಿಗಳೆಲ್ಲಾಎತ್ತಹೋದವೋ *********************************

ಗಜಲ್ Read Post »

ಕಾವ್ಯಯಾನ, ನಿಮ್ಮೊಂದಿಗೆ

ಮೌನ ಹನಿಗಳು

ಕವಿತೆ ಮೌನ ಹನಿಗಳು ಸುಧಾ ಎನ್.ತೇಲ್ಕರ್ ೧ಹೊಂದಿಕೆಯಿರದ ಭಾವಗಳಲಿಮಾತು ಮದ್ದಳೆ ಬಾರಿಸಿತ್ತುಉಸಿರು ಬಿಗಿ ಹಿಡಿದ ಮೌನಸದ್ದಿಲ್ಲದೆ ಪಟ್ಟು ಬಿಗಿದಿತ್ತು ೨ಮೌನದ ಕಪ್ಪೆ ಚಿಪ್ಪಲ್ಲಿ ಅಡಗಿತ್ತುಮಾತಿನ ಸ್ವಾತಿ ಮುತ್ತುಕಣ್ರೆಪ್ಪೆಯಲಿ ಜಾರದೆ ಕುಳಿತಿತ್ತುಮಡುಗಟ್ಟಿದ ಹನಿ ಮುತ್ತು ೩ಮಾತಿನ ಚೂರಿ ಮೊನಚಿಗೆಹೃದಯ ರಕ್ತ ಒಸರಿತ್ತುನಿಟ್ಟುಸಿರಿನ ಮೌನವೇಗಾಯಕ್ಕೆ ಮುಲಾಮು ಸವರಿತ್ತು ೪ಮಾತು ಕಲಹದ ಹೊನಲಾಗಿಹರಿದಿತ್ತುಮೌನವೇ ಅದರ ರಭಸಕೆಆಣೆಕಟ್ಟು ಹಾಕಿತ್ತು ೫ಬೆಳ್ಳಿ ನುಡಿಗಳುತುಂಬಿದ್ದ ಖಜಾನೆಗೆಹಾಕಿತ್ತು ಚಿನ್ನದಮೌನದ ಬೀಗ ********************

ಮೌನ ಹನಿಗಳು Read Post »

ಕಾವ್ಯಯಾನ

ಇತಿಹಾಸ ಬರೆಯುತ್ತೇವೆ ನಾವು

ಕವಿತೆ ಇತಿಹಾಸ ಬರೆಯುತ್ತೇವೆ ನಾವು ಅಲ್ಲಾಗಿರಿರಾಜ್ ಕನಕಗಿರಿ ಇತಿಹಾಸ ಬರೆಯುತ್ತೇವೆ ನಾವುಇಂದಲ್ಲ ನಾಳೆ ಹೊಲ ಗದ್ದೆಗಳ ಸಾಲು ಸಾಲಿನಲ್ಲಿ.ಒಂದೊಂದು ಬೀಜದ ಹೆಸರಿನಲ್ಲಿ. ನೀವು ಸುಮ್ಮನೆ ಮುಳ್ಳಿನ ಕಥೆ ಹೇಳಬೇಡಿ.ಅಲ್ಲೊಂದು ನಗುವ ಹೂವಿನ ಬದುಕಿದೆ ಮರೆಯಬೇಡಿ.ಒಂದೇ ಒಂದು ಸಾರೆ ನಿಮ್ಮ ಮೈ ಮನಸ್ಸಿಗೊಮ್ಮೆ ಕೇಳಿನೋಡಿ.ನೀವು ಉಂಡ ಅನ್ನ ಯಾರದೆಂದು?ಅಸ್ಥಿಪಂಜರಗಳ ಕೈಯಿಂದ ಬರೆಸಿದ ಕಾಯ್ದೆ ಏನೆಂದು. ರಾಜಿಯಾಗದೆ ರಾಜಧಾನಿಯ ಗಡಿ ಮುಚ್ಚಿಕೊಂಡಿದ್ದೀರಿ.ಹೇಸಿಗೆ ಆಗುತ್ತಿದೆ ನಮಗೆ, ನಮ್ಮದೇ ಮತದಾನಕ್ಕೆ. ಸರ್ಕಾರ ಎಂದರೆ ನೋಟು ತಿಂದು ಮಲಗುವುದಿಲ್ಲ ನೆನಪಿರಲಿ.ರೈತರು ನಾವು ಇನ್ನೂ ನೇಗಿಲು ಹೊತ್ತಿದ್ದೇವೆ ಶಿಲುಬೆಯನ್ನಲ್ಲ. ನಾವು ಇಂದಲ್ಲ ನಾಳೆ ಇತಿಹಾಸ ಬರೆಯುತ್ತೇವೆ.ಹೊಲ ಗದ್ದೆಗಳನ್ನು ನೆತ್ತರಿನಿಂದ ಹಸಿಮಾಡಿ.ಸಾಲು ಸಾಲಿನಲ್ಲಿ ಒಂದೊಂದು ಬೀಜದ ಹೆಸರಿನಲ್ಲಿ.ನಮ್ಮ ಅನ್ನ ಉಂಡ ನಿಮ್ಮ ನಾಲಿಗೆ ಓದಿ ಪಾವನವಾಗಲಿ. ಇತಿಹಾಸ ಬರೆಯುತ್ತೇವೆ ನಾವುಇಂದಲ್ಲ ನಾಳೆ… ಇಂದಲ್ಲ ನಾಳೆ.ಆಗ ನಿಮಗೆ ಅರಿವಾಗಬಹುದು.ಅನ್ನದಾತನ ಸಂಕಟ ಸಾವು ಯಾಕೆಂದು! ****************************

ಇತಿಹಾಸ ಬರೆಯುತ್ತೇವೆ ನಾವು Read Post »

ಕಾವ್ಯಯಾನ

ಮೌನದೋಣಿಯಲಿ ಮನ್ಮಥನ ಹುಟ್ಟು

ಕವಿತೆ ಮೌನದೋಣಿಯಲಿ ಮನ್ಮಥನ ಹುಟ್ಟು ಬೆಂಶ್ರೀ ರವೀಂದ್ರ ಅವಳುನಸು ನಗುತ್ತಲೆ ಒಳಗೆ ಕರೆದುಕೊಂಡಳುನಸುಬೆಳಕಿನಲಿ ಮಂದಹಾಸದ ಚಿಮ್ಮುನವಿರಾಗಿ ಹರಡಿಕೊಂಡ ಸುಗಂಧಚೆಲ್ಲಿದ್ದ ಮಲ್ಲಿಗೆಯ ಮುಗುಳುತೆಳುಪರದೆಯ ಸುಂಯಾಟದ ನುಲಿವುಕಿರುಗೆಜ್ಜೆಯ ಕಿಣಕಿಣದಲಿ ಬೆರೆತಿತ್ತು ಅವಳುಕಣಕಣವ ಮುಚ್ಚಿಡದೆ ಎಲ್ಲವನೂ ತೆರೆದಳುಹಾಲು ಜೇನು ಚೆಲ್ಲಾಡಿ ಹೋಯಿತುಸಂಕೋಚ ಬಿಗುವಿಲ್ಲದ ಸಮ್ಮಾನ ಸುಮ್ಮಾನಮೌನದೋಣಿಯಲಿ ಮನ್ಮಥನ ಹುಟ್ಟುಸುಖಸಾಗರದಿ ಅನಂತ ಪಯಣ ಹಣೆಯಲಿ ಮಡುಗಟ್ಟಿದ ಬೆವರಬನಿಜಾರಿ ಕಣ್ಣೊಳಗೆ ಒಗರ ರುಚಿಪಟಪಟನೆ ಆಡಿದ ರೆಪ್ಪೆಯೊಳಗೆಬೆಳಕು ಮುದುಡಿದ ಮಂಜು ನಕ್ಷತ್ರಗಳು ಕಣ್ಣು ಹೊಡೆದವಲ್ಲಾ!ಬುವಿಗೇನು!!ಆದರೆ ಇಂದು ಹುಣ್ಣಿಮೆನಕ್ಷತ್ರಗಳು ಕಾಣುವುದಿಲ್ಲಅವುಗಳದು ಕಣ್ಣುಮುಚ್ಚಾಲೆಯಾಟ. ಸಮುದ್ರದ ಭರತವು ಏರುತ್ತಿದೆಇಂದು ಚಂದ್ರನಿಗೆ ಸೋಬಾನ ಗೀತದೇವತೆಗಳಿಗೆ ಸೋಮಪಾನ ; ಸವಿಯೂಟ ಹಿಂದೆಂದೂ ಅನುಭವಿಸದ ಅನುಭವಉದ್ರೇಕದೇರಿಳಿತ ತಣಿವಂತ ತಂಪುಉಚ್ವಾಸ ನಿಶ್ವಾಸ ಪ್ರಕೃತಿಯ ಜಾಲಬೆಸೆದಬಂಧ ಅವನಿಗೀಗ ಮಂಪರು ಮಂಪರುಸೆರಗಿನಲಿ ಬೀಸಿ ಗಾಳಿ ; ಮುಖವರಸಿಹೂ ಮುತ್ತನಿತ್ತವಳಿಗೆಕಣ್ಣಾಲಿಗಳು ತುಂಬಿದ್ದವು; ಕನಸು ಒಡೆದಿತ್ತುಬಿಕ್ಕು ಬಿಕ್ಕುಗಳು ಮರಮರಳಿದಾಗಅದೆ ಸೆರಗಿನಲಿ ಬಾಯಿ ಮುಚ್ಚಿಕೊಂಡಳುನಿದ್ದೆ ಕೆಡಬಾರದಲ್ಲ. ಅವಳಿಗೀಗ ಮಂಪರು ; ಯಾರೋ ಎದೆ ಬಗೆಯುತ್ತಿದ್ದಾರೆಹುದುಗಿದ ಚಿತ್ರಗಳ ಮರುಕಳಿಕೆಮುಸುಕು ಮಸುಕಾದ ಮೆರವಣಿಗೆಮತ್ತೆಲ್ಲೋಕನಸುಗಳು ಪಟಪಟನೆ ಒಡೆಯುತ್ತಿರುವ ಕ್ಷೀಣದನಿ…ಹತ್ತಿರ ಹತ್ತಿರ ಬಂದು ಆಸ್ಪೋಟಕಿವಿ ತಮಟೆ ಹರಿದುಇವಳುಬೆವರಿನ ಸಾಗರದಲಿ ತೇಲತೊಡಗಿದಳು. *************..

ಮೌನದೋಣಿಯಲಿ ಮನ್ಮಥನ ಹುಟ್ಟು Read Post »

ಕಾವ್ಯಯಾನ

ಪ್ರಿಯಂವದಾ

ಕವಿತೆ ಪ್ರಿಯಂವದಾ ರಘೋತ್ತಮ ಹೊ.ಬ ಗೆಳೆತಿಹೇಗಿದ್ದೀಯಇಂದು ನೀನು ಜಾರಿಗೊಂಡದಿನವಂತೆನಮ್ಮಿಬ್ಬರ ಭೇಟಿಯಮಧುರ ಕ್ಷಣವಂತೆಕ್ರಿ.ಪೂ.185ರಲ್ಲಿ ನಿನ್ನಹತ್ತಿಕ್ಕಿ ಸ್ಮೃತಿಜಾರಿಗೊಂಡಿತ್ತಂತೆಕ್ರಿ.ಶ 400ರ ಸಮಯದಲ್ಲಿನನ್ನ ವಿರುದ್ಧಅಸ್ಪೃಶ್ಯತೆಯೂಜಾರಿಗೊಂಡಿತಂತೆಅದೆಲ್ಲಿ ಅಡಗಿದ್ದೆನೀನುನಿನ್ನ ಮಧುರ ನೋಟವಚೆಲ್ಲಿಕರುಣೆಯ ಹೃದಯತುಂಬಿ ಸಮಾನತೆ, ಸ್ವಾತಂತ್ರ್ಯಸಹೋದರತೆ, ನ್ಯಾಯನಿನ್ನ ಹೃದಯದನಾಲ್ಕು ಕವಾಟಗಳಂತೆಅಲ್ಲೆಲ್ಲನನ್ನದೆ ಹೆಸರಿನಪ್ರೀತಿ ಕೆಂಬಣ್ಣವಂತೆ!ಮೂಲಭೂತ ಹಕ್ಕುಗಳಗುಲಾಬಿ ಹೂ ಹಿಡಿದುಅದೆಲ್ಲಿ ಅಡಗಿದ್ದೆಮೂಲಭೂತ ಕರ್ತವ್ಯಗಳಸವಿಜೇನ ನುಡಿಯತಅದೆಲ್ಲಿ ಕುಳಿತಿದ್ದೆಸಂಸತ್ತು, ಕಾರ್ಯಾಂಗನ್ಯಾಯಾಂಗ, ಶಾಸಕಾಂಗಏನೆಲ್ಲ ಅಂದ ನಿನ್ನಲಿ? ಮಹಿಳೆಯರು, ಮಕ್ಕಳುಪರಿಶಿಷ್ಟರು, ಬುಡಕಟ್ಟು ಮಂದಿಎಲ್ಲರಿಗೂ ಕಾನೂನಿನರಕ್ಷಣೆಯ ಬಿಂದಿದೌರ್ಜನ್ಯನಿನ್ನ ಮುಂದೆ ಚಿಂದಿಏನ ಹೇಳಿದರೂ ಕಡಿಮೆಯೇನಿನ್ನ ತಂದಜೈಭೀಮ ತಂದೆ-ಯ ಬಗ್ಗೆ ಆತಭಾರತಾಂಬೆಯ ವರಪುತ್ರಬರೆದು ಕುಳಿತನು ನಿನ್ನ ಆಶಯತಿಳಿಸುತ್ತ ನೂರಾರು ಜನರಿಗೆಪತ್ರ ಪತ್ರಕ್ಷಮಿಸು, ನಾನು ನಿನಗೆ ಬರೆದಇದುಪ್ರೇಮ ಪತ್ರ ನಿನ್ನ ಉತ್ತರಏನೇ ಬರಲಿ ಗೆಳತಿನಾಳೆ ನೀನುಜಾರಿಗೊಂಡ ದಿನ ಒಡತಿಗೆಳತಿಮರೆಯದಿರು ನಿನ್ನನೆನಪಲ್ಲಿ ಆಶ್ರಯದಲ್ಲಿನಾನು ಸದಾಕಾಪಾಡುತಿರು ನನ್ನಎಂದೆಂದಿಗೂ ಮುದ್ದುಪ್ರಿಯಂವದಾ… *************************

ಪ್ರಿಯಂವದಾ Read Post »

ಕಾವ್ಯಯಾನ

ಹೋದಾರೆ.. ಹೋದ್ಯಾರು..!

ಕವಿತೆ ಹೋದಾರೆ.. ಹೋದ್ಯಾರು..! ಆಶಾ ಆರ್ ಸುರಿಗೇನಹಳ್ಳಿ ಹೋದಾರೆ ಹೋದ್ಯಾರುತೊರೆದು ಹೋದವರು..ಕಣ್ಮರೆಯಾಗಿ ನಲಿವವರುಮರೆಮಾಚಿ ನಿಂತವರುಕಲ್ಲಾಗಿ ಮರೆತವರು ಹೋದಾರೆ ಹೋಗಲಿ..ಅವರವರ ಅನುಕೂಲ..ನೆನಪುಗಳ ಮೂಟೆಯೊರಿಸಿಮೌನತಳೆದು ಹೋದ್ಯಾರತ್ರಾಣವಿಲ್ಲದ ಮನವುಅಂಜುತಿದೆ ದಿನವೂ.. ಹೋದಾರೆ ಹೋದ್ಯಾರುಹೆಸರಿಲ್ಲದೆ, ಉಸಿರಿನ ಹಂಗಿಲ್ಲದೆಕಿರುನಗೆಯಲಿ ಬಿದ್ಯಾರ..ಎನಗೊಂದು ವಿಷಾದದನಗೆಯ ಉಳಿಸ್ಯಾರ..ಬೆಲೆಬಾಳುವಮುಗ್ಧನಗೆಯನೇ ಕದ್ದೊಯ್ದಾರ.. ಹೋದಾರು ಹೋದ್ಯಾರುನೆನಪುಗಳ ಹೊತ್ತೊಯ್ದುಉಪಕರಿಸಬೇಕಿತ್ತು..ಕನಸುಗಳ ಚಿವುಟಿಕ್ರೂರಿಗಳಾಗಬೇಕಿತ್ತು..ಮನಸನು ಕೊಂಚಕಲ್ಲಾಗಿಸಬೇಕಿತ್ತು..ತೊರೆದು ಮತ್ತೆ ಮತ್ತೆತೆರೆದುಕೊಳ್ಳುವುದ ಕಲಿಸಬೇಕಿತ್ತು.. ಹೋದಾರ ಹೋದ್ಯಾರುಮರೆತು ಬಾಳೋದನ್ನೇಕಲಿಸದೆ ಹೋದ್ಯಾರೆ?ಕಣ್ಣಹನಿಗಳನ್ನುಉಡುಗೊರೆಯಾಗಿ ಕೊಟ್ಯಾರಾ..!ನಗೆಯ ಪೊಳ್ಳು ಭರವಸೆಯನ್ನಮೊಗೆ ಮೊಗೆದು ಕೊಟ್ಯಾರಾ.. ಹೋದಾರೆ ಹೋಗಲಿಸುಮಧುರ ಭಾವಗಳುಗೆಜ್ಜೆಕಟ್ಟಿ ಕುಣಿದಾವಪದೇ ಪದೆಹಳೆಯ ರಾಗವ ನೆನಸುತಾಹಾಡ್ತಾವಾಮೂಕ ರಾಗದಿನೊಂದ ಮನವೂ ಕುಣಿದುಅಂತರವನ್ನ ಮರೆತಾವ..ಇರುವಿಕೆಯನ್ನೇ ಅಳೆದು ತೂಗ್ಯಾವಸ್ವಾರ್ಥವಿಲ್ಲದ ಮನವು,ಹರುಷದಿಂದ ನಲಿದು,ನೆನಪುಗಳ ಬರಸೆಳೆದ್ಯಪ್ಪಾವ..ಭಾರ ಹಗುರಾಗ್ಯಾವ..ಬದುಕಿಗೆ ಸ್ಪೂರ್ತಿ ಸಿಕ್ಯಾವ..ದುಗುಡಗಳೆಲ್ಲಾ ಮರೆಯಾಗಿನಿಂತ್ಯಾವ.. ಹೋದಾರೆ ಹೋದ್ಯಾರುಹೋದನೆಂಬ ಭ್ರಮೆಯಲ್ಲಿ ಬದುಕ್ಯಾರಇದ್ದೆನೆಂಬ ನಿಜವ ಮರೆತ್ಯಾರ?ಹೊಸತೊಂದು ಬದುಕಕಲಿಸಿಕೊಟ್ಯಾರಾ..!ಉಸಿರ ಕೊನೆಯವರೆಗೂಜೊತೆಯಾಗಿ ನಿಂತ್ಯಾರ..ನೆನಪುಗಳ ಮೆರವಣಿಗೆಯಲಿಸವಿಕನಸಿನ ತೇರನ್ನ ಎಳೆದ್ಯಾರ..ಹೆಸರಿಲ್ಲದ ಬದುಕಿಗೆಹೊಸ ಮುನ್ನುಡಿ ಬರೆದ್ಯಾರ.. ನೆನಪಿನ ನಕ್ಷತ್ರಗಳ ನಡುವಲಿನನ ನೋಡಿ ನಗತ್ಯಾರ..ನಗುವ ತಂಬೆಳಕೆನ್ನಕಂಗಳಲಿ ಪ್ರತಿಫಲಿಸ್ಯಾವ..ಬೆಳಕ ಪಲುಕಿಗೆಬಾಳು ಬೆಳಗ್ಯಾವ..! *********************************

ಹೋದಾರೆ.. ಹೋದ್ಯಾರು..! Read Post »

ಕಾವ್ಯಯಾನ

“ದೇವರ ಪಾದ”

ಕವಿತೆ “ದೇವರ ಪಾದ” ಲೋಕೇಶ ಬೆಕ್ಕಳಲೆ ಅಂದು ನೀನು ಇಟ್ಟ ಪಾದಧರ್ಮ ರಕ್ಷಣೆಗೋ?ಸ್ವಜನ ಹಿತಕೋ?ಅಂತೂ ಬಲಿಯ ದೂಡಿತು ಪಾತಳಕೆ ಇಂದು ನಿನ್ನ ಸುಪರ್ದಿ ಪಡೆದವರುಊರುತ್ತಿರುವ ಪಾದಗಳುದೂಡುತ್ತಿವೆ ಸಾಮಾನ್ಯರಅಂಧಕಾರಕೆ ಎತ್ತ ನೋಡಿದರೂನಿನ್ನದೇ ಪಾದ!ಗೆಜ್ಜೆ ಕಟ್ಟಿದ ಶ್ರೀ ಪಾದಎದುರು ಯಾರೇ ಸಿಕ್ಕರೂ ಅವರತಲೆಯ ಮೇಲೇರಿ ಕೂರುವವಿಕ್ರಮ ಪಾದ ಇಲ್ಲಿ ನಿನ್ನ ಕಾಯುವಮುಖವಾಡ ತೊಟ್ಟಬಲಿಗಳಿಂದ ನಿತ್ಯಹಿಂಸೆ ಅನುಭವಿಸುವಶ್ರೀಸಾಮಾನ್ಯರ ಕಾಪಿಡಲುಮತ್ತೇ ಬರುವೆಯಾ?ವಾಮನನಾಗಿ? ಅದೇಕೊಎಷ್ಟೇ ತೊಳೆದರೂನಿನ್ನ ಪಾದಕ್ಕಂಟಿದಕಳಂಕ ಹೋಗುತ್ತಿಲ್ಲ!ಕ್ಷಮಿಸು ದೇವಾ ************************

“ದೇವರ ಪಾದ” Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ. ನಲ್ಲ ಮನದಂಗಳ :ನಲ್ಲನ ಹೆಸರಿನ,ಹಸೆ ಮೂಡಿದೆ. ಲಜ್ಜೆ ಹಸೆಗೂ ಲಜ್ಜೆಅವನ ನೆನಪಲ್ಲಿ,ನಲ್ಲೆ ನಗಲು. ದುಂಬಿ ಹೂವಿನಮಲು.ದುಂಬಿಗೆ ಹೊಸಗಾನ,ಶೃಂಗಾರ ಕಥೆ. ತಾರೆ ಮಿಂಚಿನ ನೋಟ :ತಾರೆಗೂ ಕಚಗುಳಿ,ಮುನಿದ ಚಂದ್ರ. ನಗು ನಲ್ಲೆ ನಗುವು :ತಪ್ಪಿದ ಎದೆ ತಾಳ,ಮಧುರ ಗಾನ. ಲಾಂದ್ರ ಬಾನಂಚ ಲಾಂದ್ರ :ಹತ್ತಿದಾಗೆಲ್ಲ, ನಲ್ಲೆಮೊಗ ಕೆಂಪಗೆ. ರವಿತೇಜ ಮಧುರ ಹಾಡು :ಹಕ್ಕಿಯ ಸ್ವಾಗತವು,ರವಿತೇಜಗೆ. *****************************

ಹಾಯ್ಕುಗಳು Read Post »

ಕಾವ್ಯಯಾನ

ಕವಿತೆ, ಬುದ್ಧ ಮತ್ತು ನಾನು

ಕವಿತೆ ಕವಿತೆ, ಬುದ್ಧ ಮತ್ತು ನಾನು ಟಿ.ಪಿ.ಉಮೇಶ್ ಬುದ್ಧ ಕವಿತೆಯನ್ನು ಬರೆಯಲಿಲ್ಲಬದುಕೆಲ್ಲವನ್ನೂ ಕವಿತೆಯಾಗಿಸಿದಜಗದೆಲ್ಲ ಕವಿತೆಗಳನ್ನು ಬದುಕಿಸಿದಕವಿತೆಗಳಿಗೆ ಬುದ್ಧನೆಂದು ಒಲಿಯಲಿಲ್ಲಕವಿತೆಗಳೇ ಬುದ್ಧನ ತಬ್ಬಿಕೊಂಡವು ತುಂಬಿಕೊಂಡವು ತಡೆದುಕೊಂಡವುಬುದ್ಧ ಬರೆಯಬೇಕೆಂದಿದ್ದರೆಬದುಕಿನ ಕಾವ್ಯವಾಗಿ ಬಂದಂತ ಹೆಂಡತಿಯ ಬರೆಯುತ್ತಿದ್ದಬಹುಶಃ ತನ್ನ ಮೊದಲ ಜೀವಂತ ಕವಿತೆಯಾದ ಮಗನ ಬರೆಯುತ್ತಾ ಬೆಳೆಸುತ್ತಿದ್ದಅವ ನಮ್ಮಂತೆ ಕತ್ತಲ ಮಿಣುಕು ಹುಳದ ಮಿಂಚಲಿಬೆಳದಿಂಗಳ ಅಂಚಲಿ ತೇಲ್ಗಣ್ಣಲಿ ಕೂತು ಬರೆಯಲಿಲ್ಲಇರುವವರೆಗೆ ಧ್ಯಾನದಲಿಹಗಲಿರುಳುಗಳ ಮಧ್ಯವ ಮಾಡಿ ಬತ್ತದಂತ ಬೆಳಕಿನಲ್ಲಿ ಬರೆಸಿದಲೋಕವನ್ನೇ ಭಾರವಿಲ್ಲದಂತ ಬುದ್ಧ ಬದ್ಧತ್ವದ ಕವಿತೆಗಳಾಗಿಸಿದ ಅರಮನೆಯ ಬಂಧನದ ಉದ್ಯಾನದ ಪರಿಮಳಗಳ ಬರೆಯುವುದ ಬಿಟ್ಟು ಪ್ರೀತಿಯ ಬೀಜಗಳ ಬಿತ್ತುತ್ತ ಕವಿತೆಗಳ ಕಾಡನ್ನು ಬೆಳೆಸಿದಭೂಮಿಯ ಆಸೆಗಳ ಬಿಡಿಸಲು ಹೆಣಗಿಅವನೇ ಒಂದು ಎಂದೆಂದೂ ತೀರದ ಮಹದಾಸೆಯ ಕವಿತೆಯಾದಭೂಮಿಯಷ್ಟೋ ಅರಳಿಯಷ್ಟೋ ಆಯಸ್ಸಿದ್ದಿದ್ದರೆ ಕಾಡ ಕೂಸುಗಳೆಲ್ಲ ಬುದ್ಧ ಕವಿತೆಗಳಾಗುತ್ತಿದ್ದರುಇರುವುದೊಂದೆ ಚೂರು ವಯಸ್ಸು ಕಾಡ ಮಕ್ಕಳೆಲ್ಲ ಆಡಿ ಕೂಡಿ ನಿಲ್ಲದ ಕಡಲಾದರುಬುದ್ಧನ ಆನಂದ ಕಾವ್ಯದ ಒಡಲಾದರು ಬುದ್ಧ ಸ್ವತಃ ಒಂದಷ್ಟು ಕವಿತೆಗಳ ಬರೆಯಬೇಕಿತ್ತುನಮ್ಮನೆಲ್ಲ ಈ ಕಾವ್ಯದ ಉರುಳಿನಿಂದ ಕಾಪಾಡಬೇಕಿತ್ತುನಮ್ಮಗೆಲ್ಲ ಅವನನ್ನ ತಿಳಿಸಬೇಕಿತ್ತುನಿಮ್ಮ ನೀವು ತಿಳಿಯಿರೆಂದು ಹೇಳಿ ಹೇಳಿತಡೆಯಿಲ್ಲದ ನಿಷ್ಕಲ್ಮಶ ರೋಹಿಣಿ ನದಿಯಂತೆ ಹರಿದು ಹೋದ ಭೂಮಂಡಲದಿ ಚೆಲ್ಲಿ ಹೋದಇನ್ನು ಯುಗ ಯುಗಗಳು ಕಳೆದರೂನಮ್ಮ ನಾವು ತಿಳಿಯಲಾರೆವುಅವನನ್ನಂತೂ ಎಷ್ಟು ಹಾಡಿದರೂ ಸಿಗಲಾರನುನಾವು ಸುಮ್ಮನಿರಲಾರೆವುಬುದ್ಧನ ಮೇಲಿನ ಕವಿತೆಗಳ ನಿಲ್ಲಿಸಲಾರೆವುಬುದ್ಧನಂತು ಕವಿತೆಯಾದಬರೆವ ನಾವೆಂದು ಬುದ್ಧನಾಗಲಿಲ್ಲಕವಿತೆಯ ಬಿಟ್ಟರೆ ಆಗಬಹುದೇನೋಹೆಂಡತಿಯಿರುವ ನಾನಂತೂ ಕವಿತೆ ಬಿಡಲಾರೆಕವಿತೆ ಬಿಡದ ನಾನಂತೂ ಸದ್ಯ ಈ ಜನ್ಮದಿ ಬುದ್ಧನಾಗಲಾರೆ **********************************************

ಕವಿತೆ, ಬುದ್ಧ ಮತ್ತು ನಾನು Read Post »

ಕಾವ್ಯಯಾನ

ಮಗಳೆ ನಿನಗಾಗಿ

ಕವಿತೆ ಮಗಳೆ ನಿನಗಾಗಿ ಶಾಲಿನಿ ಆರ್. ಎದೆಗೆ ಹಾಲ ಬಿತ್ತಿಒಡಲ ಗುಡಿಯಕದವ  ತಟ್ಟಿಬಳಿಗೆ ಕರೆದುಅಂತರಂಗದಾಧುನಿಗೆ ಬೆಸೆದ  ನೀ’ಬಾಳಗೀತೆ ಮುನ್ನುಡಿ, ಪಡೆದ ಸುಖಕೆಪ್ರೀತಿ ಬೆರೆಸಿಹಡೆದ ಋಣಕೆತಾಯ್ತನದಾನಂದಬಡಿಸಿ ಬೆಸೆದ,ಸೊಬಗಿನೈಸಿರಿ ನೀ’ಬಾಳಗೀತೆ ಮುನ್ನುಡಿ, ನಿತ್ಯ ಹಸಿರಿದುಬಾಳ ನಂದನತೊದಲ ಮಾತು,ತಪ್ಪು ಹೆಜ್ಜೆಗೊಂದುಹೂಬನ ಚುಂಬನ,ನಲಿವ ಗೊಂಚಲಿನಕಿರುಗೆಜ್ಜೆ ನೀ’ಬಾಳಗೀತೆ ಮುನ್ನುಡಿ, ಬಿಡದೆ ಹನಿಸುಹೊಕ್ಕಿಹ ಮಮತೆಯನಾನಲ್ಲ ತಾಯಿಯು,ಮರುಜನ್ಮವಿತ್ತೆನೀ ಎನಗೆ ತಾಯೆಒಡಲತುಂಬಿದಹೊನಲ ಜೇನು ನೀ’ಬಾಳಗೀತೆ ಮುನ್ನುಡಿ, ಕಣ್ಣಂಚಿನ ಹನಿಯುನಿಂತಲ್ಲೆ ಕಡಲಾಯಿತುಆನಂದದಂಗಳದಿಅಮ್ಮ’ ಎನುವ ಕರೆಗೆಜಗದ ಸುಖಸೊನ್ನೆಯಾಯ್ತುತಾಯ್ತನದ ಭಾಷ್ಯ ನೀ’ಬಾಳಗೀತೆ ಮುನ್ನುಡಿ, ಕರುಳಬಳ್ಳಿ ಬೆಸೆದುಒಲವ ಕಡಲ ಸುತ್ತಿಅವನ ಪ್ರೀತಿಮೋಹ ಮಂತ್ರಕೆಓ! ಗುಟ್ಟು, ಸುಧೆಯಹರಿಸಿದ ಧೇನು ನೀ’ಬಾಳಗೀತೆ ಮುನ್ನುಡಿ…

ಮಗಳೆ ನಿನಗಾಗಿ Read Post »

You cannot copy content of this page

Scroll to Top