ಸೇಹ ಗಜಲ್
ವ್ಯಾಪಾರವು ಬೇಕು ಕೊಡು-ಕೊಳ್ಳುವಿಕೆಯ ಬದುಕಿಗೆ
ವ್ಯವಹಾರದಿ ತಕ್ಕಡಿ ಹಿಡಿದು ಸೆಳೆಯುವುದು ಪ್ರೀತಿಯೆ…
ಕವಿತೆ ಹೊಸವರುಷದ ಸಂಜೆ ವೈ.ಎಂ.ಯಾಕೊಳ್ಳಿ ಆಡಿ ಬೆಳೆದ ಹೊಲತಿಂದ ಮುಟಿಗೆ ಉಂಡಿಕಾದ ದನ,ಹಿಂಡಿ ಕಾಸದೆ ಕುಡಿದ ಹಾಲುಕಳೆದ ಏಸೋ ಕಂಟಿ ಮರೆಯ ನೆನಪುಗಳುಆಗಾಗ ಕಾಡಿಅಣಕಿಸುತ್ತವೆ ಈ ಕೃತ್ರಿಮದ ಬದುಕನ್ನು ಜೋಳದ ಸಿಹಿತೆನಿ ತಿಂದ ಗಿಡಗಡಲೆಸುಟ್ಟ ಸೆಂಗಾ…ಒಂದೇ ಎರಡೇನೆನಪುಗಳ ಬೋರ್ಗರೆತಕಾಟಮಳ್ಳೇ ಕಪಾಟಮಳ್ಳೆಗುರ್ಜಿ ಆಟಗಳ ಗುಂಗುಕಿವಿಯಲ್ಲಿ ಗುಣುಗುಣಿಸಿ ಈಗಯಾವ ಚಾನಲ್ಕಿನ ಬಟನ್ನು ಒತ್ತಿದರೂಅದೇ ಅರೆಬರೆ ನಗ್ನತೆಯ ದರ್ಶನ ಬೇಸರವಾಗಿಆಗುತ್ತದೆ ಇಡಿ ಬದುಕಿನ ಬಟನ್ನೇ ಆಫ್ ಆದಂತೆ ಓಡುತ್ತಿದ್ದ ಬಂಡಿಯ ಬೆನ್ನು ಹತ್ತಿಹಿಡಿಯಲೆಳಸಿದ ಆದ ಮಂಡಿಗಾಯಕ್ಕೆಯಾವುದೊ ರಸದ ಎಲೆಯ ಹಿಂಡಿದ್ದುಪಕ್ಕದ ಬದುವಿನ ಎಳೆಯ ಸೆರಗುಕಿಸಕ್ಕನೆ ನಕ್ಕಿದ್ದುನೆನೆದುಜೀವ ರೋಮಾಂಚನಗೊಳ್ಳುತ್ತದೆ ಎಲ್ಲಿ ಹೋದಾವೊ ಗೆಳೆಯಾಕಾಡಿದ ಕವಿಯ ಸಾಲಿನ ಗುಂಗುಕಣ್ಣಿಗೆ ಕುಕ್ಕುವ ಬಣ್ಣಬಣ್ಣದಮಂದಬೆಳಕಿನ ನಡುವೆನೆನಪುಗಳ ಹಗೆಯೊಳಗೆಅನಂತ ದೀಪ ಮಿಣಕ್ ಮಿಣಕ್ಉರಿದು ಹಂಗಿಸುತ್ತದೆ ದಾರಿ ಕಾಣದ ನಾನು ಬಗೆಬಗೆಯ ಬಣ್ಣದದ್ರವಗಳಲಿತೇಲುವವರ ನಡುವೆಮೂಲೆ ಸೇರುತ್ತೇನೆಜೀವಯಾನದ ಮತ್ತೊಂದು ವರುಷಕಡಿತಗೊಂಡದ್ದಕ್ಕೆವಿಷಾದಿಸುತ್ತ *********************************
ಕಾವ್ಯ ದಿನಕ್ಕೊಂದು ಕವಿತೆ ರೇಷ್ಮಾ ಕಂದಕೂರ ಕವಿತೆ ಎಂದರೆ ಕವಿತೆ ಬರಿ ಕವಿತೆಯಲ್ಲಆಗು ಹೋಗುಗಳ ಭವಿತವ್ಯಒಳ ಹೊರಾಂಗಣದ ಆಟದ ಚೌಕಟ್ಟುತಳಮಳ ಬೇಗುದಿಯ ವಿಸ್ತಾರಹಿಂದಿನ ಮುಂದಿನ ಸ್ಥಿತಿ ಅವಲೋಕನವಾಸ್ತವ ಅನುಭವದ ಅನನ್ಯಭಾವನಾ ಲೋಕದ ವಿಹಾರಿಣಿಸೋಲು ಹತಾಶೆಯ ಕೆದುವಿಕೆಮರು ಪೂರಣಕೆ ಕರಂಡಿಕೆಅಕ್ಷರ ರೂಪದ ಹೊದಿಕೆಉಪಮೆ ಅಲಂಕಾರದ ಕುಶಲತೆಒಲುಮೆಯ ಸಾಂಗತ್ಯಬಯಲಲು ಚಿಗುರಿಗೆ ಸಾಧನಕಟು ಸತ್ಯದ ಆಕಾರತಿರುಳುಗಳಲಿ ಅಡಗಿದ ಸವಿ ರಸತಾಳ ಮೇಳದಿ ಝೇಂಕಾರಅಂತಃಕರಣ,ಆಕ್ರೋಶದ ಒಡನಾಟಮನದ ತುಮುಲದ ಹೊಮ್ಮುವಿಕೆಆನಂದ ಅಶೃತರ್ಪಣದ ಜೋಡಿಕಾವ್ಯವೆಂಬ ಕುಸುರಿಆತ್ಮಾನಂದದ ಸಾರಿಣಿಸೂಕ್ಷ್ಮತೆಗಳ ವ್ಯಾಖ್ಯಾನ ರೂಪತಮಂಧಕೆ ಬೆಳಕು ರೇಖೆಅಸಹನೆಗಳ ತೋರ್ಪಡುವಿಕೆತಿದ್ದಲು ಮರುಕುಟುಗನಿಟ್ಟುಸಿರ ಧಾವಂತಅಕ್ಷರ ರೂಪದ ಸಮುಚ್ಚಯಅರಳಿದ ಮೊಗ್ಗುಸಮರೋಪಾದಿಯಲಿ ಹರಿದುವಿಕಸನದ ನೀತಿ ಪಾಠಬಯಕೆಗಳ ಹಸೆಮಣೆಕಾವ್ಯ ಮನೋಹರಿ. **********************
ಕೃಷ್ಣನ ಮನೆಗೆ ಸುಧಾಮ ಹೋದರೆ ಕತೆ
ಸುಧಾಮನ ಮನೆಗೆ ಕೃಷ್ಣ ಬಂದರೆ ಕವಿತೆ
ವಾಸುದೇವ ನಾಡಿಗ್ ವಿಶೇಷ ಕವಿತೆ Read Post »
ಇದ್ದರೂ ನಮ್ಮೆಲ್ಲರಂತೆ
ಜಗವ ನೋಡುವ
ಅವನು ತಾನಂದುಕೊಂಡಂತೆ
ಕವಿತೆಯ ದಿನಕ್ಕೊಂದು ಕವಿತೆ Read Post »
ಕವಿತೆಯ ‘ದಿನ’ ಅಬ್ಳಿ ಹೆಗಡೆ. ಹುಟ್ಟಿದ್ದಕ್ಕೊಂದು-ಸತ್ತಿದ್ದಕ್ಕೊಂದು-ಪ್ರೀತಿಗೊಂದು-ನೀತಿಗೊಂದು-ಅಂತೇ….ಕವಿತೆಗೂ…ಒಂದು ‘ದಿನ’.ಬರೆಯುವ ವ್ಯಸನ-ಕ್ಕೆ ಬಿದ್ದು ಕತ್ತಲಲಿಹೊಳೆಯದೇ,ಶುಷ್ಕಪದಗಳ-ಮೂಟೆ ಹೊತ್ತು,ಬಯಲ ಬೆಳಕಿಗೆಬಂದರೆ…….ಅಲ್ಲೂ ಮಬ್ಬು,ಸಾವಿನ ನೆರಳು,ನರಳು..ಗಧ್ಗದಿತಕೊರಳು ಎಲ್ಲೆಲ್ಲೂ.ರಾಶಿ,ರಾಶಿ-ಕವಿತೆಯ ಹೆಣ,ಕಣ್ಣೆದುರು,ಈ…ದಿನ ನಿಜಕ್ಕೂ..ಕವಿತೆಯ ‘ದಿನ’ಎಲ್ಲೆಲ್ಲೂಬರೀ ‘ಕೊರೋನ’. **********************
ಕವಿತೆಯ ದಿನಕ್ಕೊಂದು ಕವಿತೆ Read Post »
ಕವಿತೆ ನಾನು-ಅವಳು ಮತ್ತು…! ಕೆ.ಶಿವು.ಲಕ್ಕಣ್ಣವರ ಹುಚ್ಚು ಮನದನುಚ್ಚು ನೂರು ನೆನಕೆಗಳಹುಚ್ಚು ಹೃದಯದಹತ್ತಾರು ಹರಿಕೆಗಳಹೃದಯದೊಳಗಣ ಮನದಮನದೊಳಗಣ ಮರೀಚಿಕೆಯಾದಮಮತೆಯ ಮಂದಿರದಪೂಜ್ಯ ದೇವತೆ ಅವಳಾದದ್ದುಎನ್ನ ಮನದೊಳಗಣಹೃದಯದ, ಹೃದಯದೊಳಗಣಮನದ ಮನವರಿಕೆಗೆ ನಿಲುಕದೇಇದ್ದದ್ದು ನನಗೀಗಸೋಜಿಗ..!ಭಯಮಿಶ್ರೀತ ಅಭಯದದುಃಖ ಸಹಿತ ಸಂತಸದಅಪರಿಮಿತ ಪರಮಾಶ್ಚರ್ಯ ಹೃದಯಂಗಣಕೆ ಲಗ್ಗೆಯಿಟ್ಡುನುಗ್ಗಿದ ಬಟ್ಡಲುಗಣ್ಣಿನ ಅವಳಕುಡಿನೋಟ ಮಾಯೇಓರಿಗೆಯ ಎನ್ನ ಕಂಗಳಓರೆನೋಟದ ಮುಖಾಮುಖಿಯೊಂದಿಗೆಶುರುವಾದದ್ದುಹೃದಯ–ಹೃದಯಗಳ ಅಪ್ಪುಗೆಗೆಮನ–ಮನದ ಬೆಸುಗೆಗೆನಾಂದಿಯಾದದ್ದುನನ್ನನ್ನು ನಾನು ಮತ್ತು ಅವಳನ್ನು ಅವಳುಕಳೆದುಕೊಂಡಿದೆಂದುಈಚೀಚೆಗೆ ತಿಳಿಯುತ್ತಿದ್ದದ್ದುಇನ್ನೂ ಮುಜಗರ..! ನಾನು ಅವಳಲ್ಲಿ, ಅವಳು ನನ್ನಲ್ಲಿಕೆದುಕಿ ಬೆದುಕ್ಕಿತ್ತಿರುವುದುಬೆದುಕುತ್ತಾ ಕೆದಕುತ್ತಿರುವುದುಇನ್ನೂ ಸೋಜಿಗಈ ಸೋಜಿಗದ ಸಂಗತಿಕೊನೆಗೆ ಪರಿಣಾಮಅವಳಿಗೆ ನಾ ಬೇಕು, ನನಗೆ ಅವಳು ಬೇಕುಎಂಬ ದಿಟ್ಟ ಹೆಜ್ಜೆಯಕಟ್ಟಕಡೆಯ ಸತ್ಯಾಸತ್ತ್ಯೆಯ ಸಾರಸಾಗುತ್ತಿದ್ದಂತೆಬೆಕ್ಕಸ ಬೆರಗಾಗಿಸಿತ್ತುಬಚ್ಚಲು ನೀರಿನ ಮನದಮನುಮಕ್ಕಳೇ ತುಂಬಿ ತೇಲಾಡುವಜಾತಿ ಹೊತ್ತು ಸತ್ತಿರುವ ಬುವಿಯಲಿ ****************************
You cannot copy content of this page