ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾವು ಮತ್ತು ಅವರು

ಕವಿತೆ ನಾವು ಮತ್ತು ಅವರು ರೇಶ್ಮಾ ಗುಳೇದಗುಡ್ಡಾಕರ್ ಇಳೆಯಿದು ಬುದ್ದನುಬದುಕಿ ಬಾಳಿದ ಬೆಳಕಿರುವದು ಭುವಿಯಿದು ಅಲ್ಲಮನಬಯಲಿಗೆ ಬೆರಗಾದ ತಾಣವಿದು ಧರಣಿಯಿದು ಅಣ್ಣ ಬಸವಣ್ಣನಕ್ರಾಂತಿಗೆ ಸಾಕ್ಷಿಯಾದ ನೆಲವಿದು ಭಾರತವಿದು ಗಾಂಧಿಯಅಹಿಂಸೆಯ ಒಲುಮೆಯಲಿಮಿಂದೆದ್ದ ಸತ್ಯವಿದು ಕತ್ತಿಯ ಅಂಚಿಗೆ ಬಲಿಯಾಗುವವೆಇವರೆಲ್ಲ ಮಾರ್ಗಗಳು ?ಉಳಿದಿಲ್ಲವೆ ಅಥವಾ ಉಳಿಸುವದುಬೇಡವೇ ನೆಮ್ಮದಿಯ ನಾಳೆಗಳನು‌? ಹಸಿದ ಒಡಲಿಗೆ ದ್ವೇಷಅನ್ನ ನೀಡುವದೇ?ಸ್ನೇಹ ಬೆಸೆಯುವದೇ?ಬಾಳಿಗೆ ಹೆಗಲಾಗುವದೇ? ಸಾಮರಸ್ಯ ಅಲೆ ಇಲ್ಲದಸೌಹಾರ್ದದತೆಯ ಕಡಲು ಇರುವುದೇ?ಸಂಕೋಲೆಗಳ ಕಿತ್ತೊಸೆದುಸಂಬಂಧಗಳ ಹೊಸೆದುನಡೆಯುವ ಬನ್ನಿರಿನಮ್ಮ ಗಳ ದಾರಿಗೆ ನಾವೇಮುಳ್ಳಾಗಿ ಭಾವನೆಗಳುಕೃಷವಾಗಿ ಜೀವಿಸುವದು ಬೇಕೆ? *******************************************

ನಾವು ಮತ್ತು ಅವರು Read Post »

ಕಾವ್ಯಯಾನ

ಅಷ್ಟೇ ಸಾಕು.

ಕವಿತೆ ಅಷ್ಟೇ ಸಾಕು. ಅಬ್ಳಿ,ಹೆಗಡೆ ಈ…ನೀರವದೊಳಗೂಸಂತೆಯ ಗಿಜಿ,ಗಿಜಿ.ಈ ರೌರವದೊಳಗೂಏನಾದರೊಂದು ಖುಷಿ,ಸಂಭ್ರಮ ನನ್ನೊಟ್ಟಿಗೆ.ಒಂಟಿತನದ ನಂಟುಬಾದಿಸುವದಿಲ್ಲ ನನ್ನ ನನ್ನೊಟ್ಟಿಗಿನ ಸಂಜೆಬಂಜೆಯಾದರೂ..ಹಗಲ ನಗು ಮಾಸಿದರೂ,ಹಿಂಬಾಲಿಸಲೊಂದುನೆರಳು,ನೋಡಿಕೊಳ್ಳಲೊಂದುಕನ್ನಡಿ,ಇಷ್ಟಿದ್ದರೂ ಸಾಕು,ನನಗೆನಾ ಒಂಟಿಯೆನಿಸುವದಿಲ್ಲ ಸಾಲದ್ದಕ್ಕೆ……ಸಾವಿನಮನೆಯ ನಿಶ್ಶಬ್ಧಕತ್ತಲಲ್ಲಿ ಹಚ್ಚಿಟ್ಟ-ಮಿಣುಕು ದೀಪವೊಂದಿದೆಯಲ್ಲ ಮಸ್ತಕದಲ್ಲಿನೆನಪಿನ ಪುಸ್ತಕತೆರೆದೋದಲು.ಅಷ್ಟೇ ಸಾಕು,ನಾಒಂಟಿಯೆನಿಸುವದಿಲ್ಲ. ಹೊತ್ತಿನ ಹೊತ್ತಿಗೆಯಲ್ಲಿರಾಶಿ,ರಾಶಿ,ಸಂಭ್ರಮಗಳನೆನಪಿನ ಚಿತ್ತಾರಗಳಿವೆ,ಚಿತ್ತವನು ಸಂತೈಲು.ಬಾಲ್ಯದಲ್ಲಿ…..ಮರಿ-ಹಾಕಲಿಟ್ಟ ನವಿಲುಗರಿ,ಮರದ ಟೊಂಗೆಯಲ್ಲಿಸಿಕ್ಕಿಬಿದ್ದ ದಾರ ಹರಿದಬಣ್ಣದ ಗಾಳಿಪಟ,ಬದುಕಿನೆಲ್ಲ ಮೊದಲುಗಳಸವಿ,ಸವಿ ನೆನಪು,ಇದ್ದೇ ಇವೆಯಲ್ಲ..ನನ್ನೊಟ್ಟಿಗೆ..!ಅಸಹ್ಯದ ಕ಼ಣಗಳನ್ನೂಸಹ್ಯವಾಗಿಸಲು.ಒಂಟಿತನ ನೀಗಿಸಲು. ಯಾವುದಿಲ್ಲವಾದರೂಕೊನೇಪಕ಼ ನನ್ನೊಳಗಿನ‘ನಾನಂತೂ’….ಇದ್ದೇ ಇದೆಯಲ್ಲ,ನನ್ನೊಟ್ಟಿಗೆ.ಅಷ್ಟೇ ಸಾಕು ಬದುಕಿಗೆ. **********

ಅಷ್ಟೇ ಸಾಕು. Read Post »

ಕಾವ್ಯಯಾನ

ಈಗ

ಕವಿತೆ ಈಗ  ಆನಂದ ಆರ್.ಗೌಡ ತಾಳೇಬೈಲ್ ರವಿವಾರದ ಸಂಜೆಅಮಲು ಚೆಲ್ಲಿದ ಎಂಥೆಂಥಾದೋಕಸ ಪೌರ ಸೇವಕರ ಪೊರಕೆಶುಚಿಗೊಳಿಸುತ್ತಿತ್ತು ರಸ್ತೆಯ ಇಕ್ಕೆಲಗಳಲ್ಲಿಆಗ ತಾನೇ ಪ್ರಸವವಾದಹೊಂಗಿರಣ ಅವರ ವದನಕ್ಕೆಮುತ್ತನೀಯುತ್ತಿತ್ತು ಅಲ್ಲಿಯೇ ಸೃಷ್ಟಿಸಿದ ನೇರಳೆಲೆಗಳನೆರಳು ಬೆಳಕಿನಾಟ ಕಲೆಗಾರನಕುಂಚದ ಕಲೆಯ ನಾಚಿಸಿದೆ ಕಾರ್ಪೋರೇಟ್ ರಸ್ತೆ ನಡುವೆನೆಟ್ಟ ಪುಟ್ಟ ಗಿಡಗಳುಆರೈಕೆ ಮಾಡಲು ತೂಗು ಹಾಕಿದದೊಡ್ಡ ದೊಡ್ಡ ವ್ಯಕ್ತಿಗಳ ನಾಮಫಲಕರಾರಾಜಿಸುತ್ತಿದೆಚುನಾವಣೆ ಮುಗಿದರೂ ಅದರಂಚಿನಲಿ ಹಾಯ್ದುಹೋಗುವ ಚಿರಯೌವನೆಅಂಗೈ ಸೋಕಿದರೆ ಹಾಲುತೊಟ್ಟಿಕ್ಕುವ ಸೊಬಗುಇನ್ನೂ ಹೊಟ್ಟೆಕಿಚ್ಚು ತರಿಸುವತೊಟ್ಟುಡುಗೆಯ ಸಿರಿವಂತಿಕೆಮುಚ್ಚಿದೆದೆಯೊಡ್ನಿಅರಿವಿಲ್ಲದೇ ಇಳಿದುಚಿಗುರಿದೆಲೆಗಳ ಸವರಿಅಮಲೇರಿಸುವ ಆ ನೋಟಮನಸ ಕೊಲ್ಲುವ ಸಂಚಲತೆಪಡ್ಡೆ ಹೈಕಳ ಹೃದಯ ಬಡಿತಇಮ್ಮಡಿಸಿದೆ ಆ ರಸ್ತೆಕತ್ತಲೆಯಲಿ ಆಗಾಗ ಶವವಾಗಿಮಲಗಿದರೆಒಮ್ಮೊಮ್ಮೆ ಚಂದಮಾಮ ಇಣುಕಿಆಟವಾಡುತ್ತಾನೆ ರಸ್ತೆಯ ಹೃದಯ ಅಗೆದು ಬಗೆದುಈಗ ಅಲ್ಲಲ್ಲಿ ಟಾಕೀ ಕಟ್ಟುತ್ತಿದ್ದಾರೆಒಳಗೊಳಗೇ ಪೈಪ್ ಲೈನ್ಕಕ್ಕಸು ಕೊಳಚೆ ಹೊರಹಾಕಲು ಜನ ಹೈರಾಣಾಗಿದ್ದಾರೆಗಾಡಿಗಳು ನೀರಿನಲೆಗಳಮೇಲೆ ಸಾಗಿ ದಡ ಮುಟ್ಟುತ್ತಿವೆಧೂಳನ್ನು ನುಂಗಿ ಬದುಕುವಮಕ್ಕಳು ಮುದುಕರು ಮೂಕರಾಗಿಕೆಮ್ಮು ಸುಂಬಳ ಇಳಿಸುತ್ತಿದ್ದಾರೆಮನೆ ಒರೆಸುವ ಮನೆಯೊಡತಿಯಮೌನದ ಕಟ್ಟೆ ಒಡೆದಿದೆ ಆದರೂ ಕೋಟಿ ಕೋಟಿಗಳ ಟೆಂಡರ್ಪಡೆದ ಲೀಡರ್ ನೋಡುತ್ತಲೇ ಇದ್ದಾನೆಅಂಬುಲೆನ್ಸ್ ನ ತಿರುಗಾಟವನ್ನುಮಂದಿ ಮೂಗು ಮುರಿದು ಅವನ ಪ್ರತಿಕ್ರಿಯೆಗೆಕಾಯುತ್ತಿದ್ದಾರೆ ! **********************************************

ಈಗ Read Post »

ಕಾವ್ಯಯಾನ

ಇನ್ನೂ ಎಷ್ಟು ದೂರ?

ಕವಿತೆ ಇನ್ನೂ ಎಷ್ಟು ದೂರ? ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಕ್ಷತ್ರ ಕದಿಯಲುಹೊರಟಿರುವೆಮೈ ತುಂಬ ನಕ್ಷತ್ರ ಹೊಂದಿರುವಆಕಾಶದಿಂದಎರಡೇ ಎರಡು ನಾನು ಕದ್ದರೆಯಾರ ಅಪ್ಪನ ಮನೆ ಗಂಟುಹೋದೀತು ಹೇಳು?ಹೊರಟಿದ್ದೇನೆಕನ್ನ ಕೊರೆಯಲುಯಾರಿಗೆ ಗೊತ್ತು?ನಕ್ಷತ್ರಗಳು ಎನ್ನುವುದುನೀಲಿ ಗೋಡೆಯ ಅಚಿನಿಂದಇನ್ನಾರೋ ಕನ್ನ ಕೊರೆದುಇಣುಕಿದ ತೂತಿರಬಹುದುಆಚೆ ಮೂಡಿರಬಹುದುಈಚೆ ಮುಳುಗಿದ ಸೂಯ೯ತನ್ನ ಕಿರಣಗಳ ಕನ್ನದ ತೂತುಗಳಿಂದಈಚಿನ ಕತ್ತಲಿಗೆ ತೂರಿರಬಹುದುಅಬ್ಬಾ! ಅಗಣಿತ ನಕ್ಷತ್ರಗಳು!ಬಹುಶಃ ಅದು ಕಳ್ಳರದ್ದೇ ಲೋಕವಿರಬಹುದುನನ್ನಂತೆ ಎರಡೇ ಎರಡುನಕ್ಷತ್ರ ಕದಿಯಲು ಹೊರಟವರು ನಡೆಯುತ್ತಲೇ ಇದ್ದೇನೆಇನ್ನೂ ಎಷ್ಟು ದೂರ? *************************

ಇನ್ನೂ ಎಷ್ಟು ದೂರ? Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಗಝಲ್ ಕೆ.ಸುನಂದಾ. ಸುಂದರ ವದನಕೆ ಕುಂದಾಗುವ ಬಣ್ಣ ಬಳಿಯಬೇಡ ಗೆಳೆಯಅದೆಷ್ಟೋ ಅಂದದ ಕನಸುಗಳಿಗೆ ಕಲ್ಲು ಹೊಡೆಯಬೇಡ ಗೆಳೆಯ ಸಾಧಿಸಬೇಕೆಂಬ ಹಂಬಲದಿ ಆಸರೆಯ ಎಳೆ ಹಿಡಿದಿರುವೆನುಕಷ್ಟಗಳಮೆಟ್ಟಿ ಕಟ್ಟಿರುವ ಭಾವಗಳ ಭವನಕೆ ಕಿಚ್ಚಾಗಬೇಡ ಗೆಳೆಯ ಹೆಣ್ಮನ ಮೃದುವೆಂದು ಮಧುರವಾಗಿ ನುಡಿದುಮೋಸ ಮಾಡಿದಿರು ಹೃದಯ ಗೆದ್ದೆನೆಂಬ ಹಮ್ಮಿಂದ ಹದವಾದಮೇಲೆ ಒದೆಯಬೇಡ ಗೆಳೆಯ ಮುನಿಯುವ ಮೊದಲು ಒಲಿದು ಬರುವಳು ಹೆಣ್ಣು ಘಾಸಿಗೊಳಿಸದಿರುಕೂಸಿನಂತಾಕೆ ಪೊರೆದಿಹಳು ನಿನ್ನಾಸೆಗಳನು ಮನ ನೋಯಿಸಬೇಡ ಗೆಳೆಯ ತುಸು ಕಣ್ಣಲ್ಲಿ ಕಣ್ಣಾಗಿ ನೋಡು ಮಮತೆ ಹರಿದೀತು ನಿನ್ನೊಡಲೊಳುನಂದೆಯ ಆನಂದಕೆ ಮಂದಸ್ಮಿತ ಸಾಕು ನಕ್ಕು ಹಂಗಿಸಬೇಡ ಗೆಳೆಯ *********************************** ಕೆ.ಸುನಂದಾ

ಗಝಲ್ Read Post »

You cannot copy content of this page

Scroll to Top