ಹಾಯ್ಕುಗಳು
ಮೌನದ ತಾಣ
ಹೆಣ್ಣು ಜೀವದ ಕಣ್ಣು,
ತೀರದ ಋಣ
ಬಂಧನದಿಂದ ಬಿಡುಗಡೆಯೆಡೆಗೆ ನಡೆಸಿದೆ
ಮುಕ್ತಿ ಪಥವ ಪ್ರೀತಿಯಿಂದಲಿ ತೋರಿದೆ
ಪ್ರೀತಿ ಹೆಸರಲಿ ನೀನೆಂದೂ ಬಂಧಿಸಲಿಲ್ಲ…..
ನೀನೆಂದೂ ಬಂಧಿಸಲಿಲ್ಲ Read Post »
ಕವಿತೆ ದೊಂದಿ…. ಕಗ್ಗಲ್ಲನ್ನೂ ಮೃದುವಾಗಿಕೊರೆದು ಬೇರೂರಿ ನಿಂತುತೀಡುವ ತಂಗಾಳಿಯ ಸೆಳೆತಕೆಬಾಗಿ ಬಳುಕುವಬಳ್ಳಿಯ ಕುಡಿಯಲ್ಲಿನಿನ್ನ ನಡಿಗೆಯ ಸೆಳಕು ಕಂಡುನನ್ನ ಕಣ್ಣುಗಳು ಮಿನುಗುತ್ತವೆ…. ಬೆಳದಿಂಗಳಿಗೆ ಬೇಡವಾದಕಾಡಿಗೆ ಕಪ್ಪಿನ ರಾತ್ರಿಯಲಿದೂರದಿ ಮಿನುಗುವಕೋಟಿ ನಕ್ಷತ್ರಗಳ ವದನದಲಿನಿನ್ನ ನಗೆಯ ಬೆಳಕು ಚೆಲ್ಲಿದಂತಾಗಿನನ್ನ ಮನಸ್ಸು ಮುದಗೊಳ್ಳುತ್ತದೆ…. ಬಿಸಿಲ ಬೇಗೆಯಲಿಬಸವಳಿದವನಿಗೆ ಬಯಲಿನಲಿ ನಿಂತಒಂಟಿ ಮರದ ತಣ್ಣನೆಯ ನೆರಳಿನಂತೆಬಾಳ ಬೇಗೆಯಲಿ ಬಸವಳಿದವನಿಗೆನಿನ್ನ ಮಡಿಲು ನೆನಪಾಗಿನನ್ನ ಹೃದಯ ಪುಳಕಗೊಳ್ಳುತ್ತದೆ… ಹೀಗೇ….. ನೀ ಧಿಕ್ಕರಿಸಿಚೆಲ್ಲಿ ಹೋದ ಸುಡುಸುಡುವನೆನಪಿನ ಕಿಡಿಗಳನುಹೆಕ್ಕಿ ದೊಂದಿ ಮಾಡಿಕೊಳ್ಳುತ್ತಿದ್ದೇನೆಬದುಕಿನ ಕತ್ತಲೆಗಿರಲೆಂದು…! ಮತ್ತೆ ಕನಸು ಕಾಣುತ್ತಿರುವೆನಾವು ಅಪರಿಚಿತರಾಗಿದ್ದತಿರುವಿನಿಂದ ಯಾನ ಶುರುವಾದರೆಸುಂದರವಾಗಬಹುದು ಬದುಕು…! ಕಾಂತರಾಜು ಕನಕಪುರ
ಕವಿತೆ ತತ್ವಪದ ಲೀಲಾ ಕಲಕೋಟಿ ಅಡಿಗೆಯ ಮಾಡಿದೆಅಡಿಗೆಯ ಮಾಡಿದೆಅರಿವೆಂಬ ಅಂಗಳದಅಜ್ಞಾನವೆಂಬ ಕಟ್ಟಿಗೆತಂದು ಐದು ಗುಂಡಿನಒಲೆಯ ಹೂಡಿ …..ಅಡಿಗೆಯ ಮಾಡಿದೆಒಮ್ಮನದ ಅಕ್ಕಿಯತರಿಸಿ ಹಮ್ಮಿನ ಹೊಟ್ಟುತೂರಿ ಸುಜ್ಞಾನವೆಂಬನೀರಲಿ ತೊಳೆದು..ಕಾಮ ಕ್ರೋಧವೆಂಬಬೆಂಕಿಯಲಿ ನಯವಾದಪಾತ್ರೆಯ ಬಳಸಿ…ಅಡಿಗೆಯ ಮಾಡಿದೆಅಡಿಗಡಿಗೆ ಬಿಮ್ಮನೆಬಿಗಿದ ಅಗಳನು ಒತ್ತಿನೋಡಿ ಮೆತ್ತಗಾಗಿಸುತಅಡಿಗೆಯ ಮಾಡಿದೆನಾನು………….
ಅಕ್ಕ ಜಾಲವು ತೆರೆದು ತೋರಿತು
“ನಿಕ್ಕೆ” ಬೀಸಿದ ಗಾಳಿ ರಭಸಕೆ
ಸಿಕ್ಕಿಕೊಂಡಾ ” ಪ್ರೇಮ ಜಾಲವ ” ನೋಡಿ ವಿಶ್ಮಯದೀ…….!!
You cannot copy content of this page