ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಕಾವ್ಯ ಸಂಗಾತಿ ಗಝಲ್ ಶಂಕರಾನಂದ ಹೆಬ್ಬಾಳ ಅನ್ಯಾಯವ ದಿಕ್ಕರಿಸಿ ಎದೆಗೊಟ್ಟವರುಕೋಟಿ ಚನ್ನಯ್ಯಬಡವರ ನೋವುಗಳಿಗೆ ದನಿಯಾದವರುಕೋಟಿ ಚನ್ನಯ್ಯ ಮಲ್ಲಯ್ಯ ಬುದ್ಯಂತನ ಯಮಪುರಿಗೆಅಟ್ಟಿದರೇಕೆಕಿನ್ನಿದಾರುವಿನ ಆಶ್ರಯವ ಪಡೆದವರುಕೋಟಿ ಚನ್ನಯ್ಯ ತುಳುನಾಡಿನಲಿ ದಂತಕಥೆಯಾಗಿ ಉಳಿದಮಹಾಚೇತನರಿವರುಸಾಯಿನ ಬೈದ್ಯನ ಮಮಕಾರದಿ ಬೆಳೆದವರುಕೋಟಿ ಚನ್ನಯ್ಯ ಚಂದುಗಿಡಿಯ ಕುತಂತ್ರಕ್ಕೆ ಬಲಿಯಾಗಿಬಂಧಿತರಾದವರುಎಣ್ಮೂರಿನ ದೇವಬಲ್ಲಾಳನಲಿ ಇರುವವರುಕೋಟಿ ಚನ್ನಯ್ಯ ಪಂಜದ ಗಡಿಯಲ್ಲಿ ವಾಸಸ್ಥಳವನುಮಾಡಿಕೊಂಡರೇಕೆಸುಂಕದ ಕಟ್ಟೆಯ ಜೋಯಿಸರ ಕೇಳಿದವರುಕೋಟಿ ಚನ್ನಯ್ಯ ಪಡುಮಲೆಯ ಬಲ್ಲಾಳರ ಆಕ್ರಮಣಕೆತುತ್ತಾದವರುಹೋರಾಡುತ್ತ ವೀರಮರಣ ಅಪ್ಪಿದವರುಕೋಟಿಚನ್ನಯ್ಯ ಜನಪರ ಕಾರ್ಯದಿಂದಲೆ ದೈವತ್ವವನುಏರಿದವರಿವರುಅಭಿನವನ ಗಝಲಿನಲಿ ಮೆರೆದವರುಕೋಟಿ ಚನ್ನಯ್ಯ

ಗಝಲ್ Read Post »

ಕಾವ್ಯಯಾನ

ನೆನಪಾದವಳು

ಕಾವ್ಯ ಸಂಗಾತಿ ನೆನಪಾದವಳು ಶಾಲಿನಿ ರುದ್ರಮುನಿ ಕನಸ ತೇರಲಿದಣಿದ ತಣಿದಮನದ ಹಾದಿಯಲಿಸಿಹಿಲೇಪನದಮುಗುಳ ಹೊತ್ತುಜೀವ ಭಾವದಬಾಳು ಸಮರ್ಪಿಸುತನಿಂತವಳು ನೆನಪಾದಳುಕನ್ನಡಿಯ ಮುಂದೆ…, ಅಲ್ಲಲ್ಲಿ ಹಸಿಗಾಯಮಾತು ಮೌನಗಳತರಪರಚಿದ ಗೀಚುಒಸರಿದರು ಒಸರದಂತಿಹರಕ್ತದ ಕಲೆಯ ಬಲೆನೆಲೆ ಬಲೆಗೆ ಬಾಲೆಹಸಿರುಣಿಸಿ ಮತ್ತೆನೀರುಡಿಸುತಿಹಹಾಡಿನ ಜಾಡಿನಲಿಹಾಡು ತಾನಾಗಿ ನಲಿದುನಿಂತವಳು ನೆನಪಾದಳುಕನ್ನಡಿಯ ಮುಂದೆ…, ಕೊಲ್ಮಿಂಚಿನ ಬಿಸಿಲಿಗೆಚಂದ್ರಿಕೆಯ ಚೆಲುವಿಗೆಕಾಣುವ ಸೊಬಗನುಇರುಳ ನರಳಿಗೆಹೊರಳಿ ಜಾವಕೆಕಾಣದಿಹ ಸೊಬಗನುಹಸಿರ ತೋರಣ ಮಾಡಿಮನೆ ಮನ ಬಾಗಿಲಿಗೆಸಿಂಗರಿಸಿ ಸಡಗರದಿಬಾಳದಾಟ ಕೂಟಕೆಸುಮ್ಮನೆ ಆರಾಧಿಸುತನಿಂತವಳು ನೆನಪಾದಳುಕನ್ನಡಿಯ ಮುಂದೆ…, ಅರಿವಿನ ಪಯಣದಲಿಗುರು ತಾನಾಗಿಹಳುಬೆಳಕಿನ ಜಾಡಿನಲಿಏನನೋ ಅರಸುವಳುಹರಿಯುವ ಅರಿವಿನಹಸಿವ ಒಡಲಿಳಿಸಿಭವದ ಬಂಧನಗಳಒದೊಂದೆ ಕಳಚಿಕದಳಿಯ ಬನದಲಿನಿಂತವಳು ನೆನಪಾದಳುಕನ್ನಡಿಯ ಮುಂದೆ…, ಒಳ ಹೊರಗಣಅರಿದಲ್ಲದೆ ಹರಿಯದುಬಾಳ ಬಯಲುಧೇನು ಮನದಲಿಧ್ಯಾನ ಛಲದ ಬದುಕುಒಲಿದ ಕಾಯದಲಿಗೆಲಿದ ಮನದಲಿಅವನ ಅರಸುತಲಿಹಸಿರು ಗಿರಿ ವನದ ಮಧ್ಯೆನಿಂತವಳು ನೆನಪಾದಳುಕನ್ನಡಿಯ ಮುಂದೆ…

ನೆನಪಾದವಳು Read Post »

You cannot copy content of this page

Scroll to Top