ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶ್ಮಶಾನ ಕುರುಕ್ಷೇತ್ರ

ದ್ವಾಪರವು ಅಸ್ತಯಿಸಿ

ಕಲಿ ತಾನು ವಿಸ್ತರಿಸಿ

ಹೊಸಯುಗಕೆ ನಾಂದಿಯೂ…

ಕುರುಕ್ಷೇತ್ರವೇ ಬುನಾದಿಯೂ…..

(ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ರಿಂದ ಪ್ರೇರಿತ)

ಶ್ಮಶಾನ ಕುರುಕ್ಷೇತ್ರ Read Post »

ಕಾವ್ಯಯಾನ

ಅಳಿದ ಮೇಲಿನ ಭಯ!

ಕಾವ್ಯಯಾನ ಅಳಿದ ಮೇಲಿನ ಭಯ! ಅಳಿದ ಮೇಲಿನ ಭಯ! ನನಗೆ ಧರೆಯ ಮೇಲಿನಈ ಬದುಕಲ್ಲೆಬಗೆಬಗೆಯ ಭಯವಿದೆನನ್ನ ಸುತ್ತಮುತ್ತಲ ಜನಜಂಗುಳಿಮುಸುಕಿನೊಳಗೆ ನುಸುಳಿಥರಹಾವರಿ ಭಯೋತ್ಪಾದಕರಂಥಹಾವಳಿತುಳುಕಿದೆ ಎಡೆಬಿಡದೆ ನನ್ನೊಳಗೆ ನೆಮ್ಮದಿಯಲಿದ್ದವರಕಾಲಕೆರೆದು ಕೆಣಕುವವರುಇಂದು ಬೆಳ್ಳಬೆಳಗ್ಗೆ ತಾನೆಬಿಳಿಯ ನಗೆ ನಕ್ಕವರುನಾಳೆ ಅಟಮಟಿಸಿ ಚುಚ್ಚಿಕತ್ತಲೆಯಲಿ ಕರಗುವವರುಕೂತಲ್ಲೆ ನಿಂತಲ್ಲೆ ಇದ್ದದ್ದುದಿಢೀರನೆ ಇಲ್ಲವಾಗಿಸುವವರುನಾಯಿಗೂ ಸುಳ್ಳುಬೊಗಳು ಕಲೆಕಲಿಸುವವರು ಕಚ್ಚಿಸುವವರುಶುಭ್ರ ಸೂಟಿನಲ್ಲಿ ದೋಚುವವರುಅನ್ಯರ ಬೆವರಿಗೂ ಹೇಸದ‘ವಿದ್ಯಾವಂತ ಸಮಗ್ರ ಸಂಸಾರ’ಗಳುಬೀಭತ್ಸ ಅತ್ಯಾಚಾರಿಗಳುಬರ್ಬರ ಕೊಲೆಪಾತಕ ಭೀಷಣರುಹಗಲನ್ನೆ ರಾತ್ರಿ ಮಾಡುವಕರಾಳ ಕ್ರೌರ್ಯಾವತಾರಗಳತದೇಕ ಭಯವಿದೆಹಾಗಾಗಿ ರಾತ್ರಿಗಳಲಿ ಇನ್ನೂ ಭಯಅಥವ ರಾತ್ರಿಗಳದೆ ಭಯ! ನೊಣ ಸೊಳ್ಳೆ ಕ್ರಿಮಿಕೀಟವೈರಸ್ಸು ಬ್ಯಾಕ್ಟೀರಿಯಸಂಕ್ರಾಮಿಕಗಳ ಭಯವೂ ಇಲ್ಲದೆಬದುಕೆದ್ದು ನಿಲ್ಲುವ ನನಗೆನನ್ನ ಸಹ ಜೀವಾತ್ಮರಿಗೆಎಲ್ಲಕಿಂತ ಮಿಗಿಲಾಗಿನಮ್ಮ ಹೆಗಲ ಸಮಕ್ಕೇ ನಡೆವಈ ಇಂಥವರ ಭಯ!ದಟ್ಟಕಾನನದ ಅಂಧಕಾರದಲೂಇರದು ಇಂಥ ಭಯ ಈ ನಡವೆ ಈಗೀಗ ಸಾವಿಗಿಂತನಾನು ಸತ್ತ ನಂತರದ ಭೀತಸ್ಥಿತ! ಇಲ್ಲೇ ಈ ಭುವನದ ಮೇಲೆನನ್ನ ಬಳಗದವರುಗೆಳೆಯರುಸುತ್ತ ಗಿರಕಿ ಹೊಡೆವ ನನ್ನಂಥವರುನಂಬಿದವರುನೆಚ್ಟಿನ ನಾಯಿನಿಷ್ಠ ಚೈತನ್ಯಗಳುಎಲ್ಲರ ನಡುವೆ ಇದ್ದೂ ಇಂಥ ಭಯಅಂದಮೇಲೆ ಸತ್ತುಒಳಗಿಳಿದ ತರುವಾಯ… ನನ್ನ ಒಬ್ಬಂಟಿ ಆತ್ಮದ ಸುತ್ತಸದಾ ಇಂಥವರಭೂತ ದರ್ಶನದ ಭಯನೆಲದ ಮೇಲಿದ್ದೇ ನನ್ನನಡುಗಿಸಿದ್ದವರುಈಗ ಒಳಗಿಳಿದಿರುವವರುಈ ಪೈಶಾಚಕ ಪಿಶಾಚಿಗಳುಇಂಥವರ ನಡುವೆಸತ್ತ ಮೇಲೆಹೇಗೆ ಎಂಬ ಅಗಾಧ ಭಯಈಗಲೆ!

ಅಳಿದ ಮೇಲಿನ ಭಯ! Read Post »

ಕಾವ್ಯಯಾನ

ಗಾಂಧಿ

ಕಾವ್ಯಯಾನ ಗಾಂಧಿ ನಾಗರತ್ನ ಎಂ ಜಿ ಗಾಂಧಿನಡೆದ ಹಾದಿಸತ್ಯ ಅಹಿಂಸೆ ಎಂಬಕಲ್ಲು ಮುಳ್ಳುಗಳ ಗಾದಿ ನಗು ನಗುತ್ತಲೇಸವೆಸಿದರು ತುಂಡು ಬಟ್ಟೆಬಿದಿರು ಕೋಲಿನಲ್ಲಿಜೀವಿತಾವಧಿ ಬಿಡಿಸಿ ದಾಸ್ಯದಸಂಕಲೆಯಿಂದಭಾರತಾಂಬೆಯನುಹೊರಟರು ತಾ ತೊರೆದುಜಗದ ಬಂಧವನು ಮಹಾನ್ ಚೇತನದತ್ಯಾಗಮರೆತ ಜನಕೊನೆಗಾಣಿಸಿದರುರಾಷ್ಟ್ರಪಿತನ ಜೀವನ ನೆನೆಯೋಣ ವರ್ಷಕ್ಕೊಮ್ಮೆಯಾದರೂಮಹಾತ್ಮನನಡೆಯೋಣ ನಿಜದದಾರಿಯಲಿ ಒಂದು ದಿನ

ಗಾಂಧಿ Read Post »

ಕಾವ್ಯಯಾನ

ಮಧು ಮಗಳು

ಕಾವ್ಯಯಾನ ಮಧು ಮಗಳು ಡಾ.ನಿರ್ಮಲಾ ಬಟ್ಟಲ ಹಸಿರು ಹಂದರದಿಅರಿಶಿನ ಮೆತ್ತಿಕೊಂಡುಹಳದಿ ಸೀರೆಯುಟ್ಟುಹಸಿರುಬಳೆಗಳ ಸದ್ದು ಮಾಡುತ್ತಾನಾಚಿಕೆಯಿಂದಓಡಾಡುವ ಮಗಳಿಂದುತುಸು ಬೇರೆಯೇ ಎನಿಸುತ್ತಿದ್ದಾಳೆ…..!! ಪತಿಯ ಕಿರುಬೆರಳು ಹಿಡಿದುಹಿಂದೆ ಹೆಜ್ಜೆ ಹಾಕವವಳಕಣ್ಣುಗಳಲ್ಲಿ ನನ್ನ ಹುಡುಕಾಟ….!ನನ್ನ ಕಿರುಬೆರಳು ಬಿಡಿಸಿಕೊಂಡಳೆಜೋಪಾನ ಮಗಳೆ ಎನ್ನುವಮೂಕ ಭಾವ ಅರಿತವಳುತುಸು ಬೆರೆಯೇ ಎನಿಸುತ್ತಿದ್ದಾಳೆ….!! ರೇಷಿಮೆ ಸೀರೆ ಒಡವೆ ಒಡ್ಯಾಣದಿಹೊಳೆವ ಕಂಗಳ ಚೆಲುವಿಗೆದೃಷ್ಟಿ ತಾಗದಿರಲೆಂದು ದೃಷ್ಟಿಬೊಟ್ಟಿಡಬೇಕೆಂದರೆ ಬೆರಳೆಕೊಅವಳ ಕೆನ್ನೆಗೆ ತಾಗುತ್ತಿಲ್ಲ….!ಮಗಳು ತುಸು ಬೇರೆಯೇ ಎನಿಸುತ್ತಿದ್ದಾಳೆ….!! ಅಕ್ಷತೆ ಆರಕ್ಷತೆ ಹರಕೆ ಹಾರೈಕೆಸಾವಿರ ಸಾವಿರಹೊಸ ಕನಸುಗಳ ಹೊತ್ತುಹೊರಟಿದ್ದಾಳೆ ಹೊಸಬಾಳಗೆ‘ಮನಸಿಲ್ಲ ಮಗಳೆ ಕಳಿಸಲುನಿನ್ನ ‘ಎನ್ನುವ ಮಾತುಗಂಟಲೋಳಗೆ ಸಿಕ್ಕಿಕೊಂಡಿದೆ….!ಭಾರದ ಹೆಜ್ಜೆಯಲಿ ಹೋರಟವಳುತುಸು ಬೇರೆಯೇ ಎನಿಸುತ್ತಿದ್ದಾಳೆ…..!! ಹೃದಯ ಭಾರವಾದರುನಗುಮುಖದಿ ಹೋಗಿ ಬಾಮಗಳೆ ಎಂದು ಹಣೆಗೆಮುತ್ತಿಟ್ಟೆ…!ಅಪ್ಪಾ ಎಂದು ಬಿಗಿದಪ್ಪಿದಳುಕಣ್ಣಂಚಿನಲಿ ಉದುರುವ ಹನಿ ಒರೆಸಿ ಹಣೆಗೆ ಮುತ್ತಿಟ್ಟುಳು…!!ದೀಪ ಹಿಡಿದು ನಿಂತವಳುತುಸು ಬೇರೆ ಎನಿಸುತ್ತಿದ್ದಾಳೆ….!!

ಮಧು ಮಗಳು Read Post »

ಕಾವ್ಯಯಾನ

ಬಾಪು ಮತ್ತು ವೈರುಧ್ಯ

ಎಷ್ಟೇ ವೈರುಧ್ಯಗಳಿದ್ದರೂ
ಅವನ್ನೆಲ್ಲ ದಾಟಿ ಮಹಾಮಾನವನಾಗಿಬಿಟ್ಟರು
ಕೆಸರನಲ್ಲಿದ್ದರು ಕೆಸರಿನಂತಾಗದೆ
ಕಮಲದಂತೆ ಅರಳಿ ಬಿಟ್ಟರು ನಮ್ಮ ಬಾಪು

ಬಾಪು ಮತ್ತು ವೈರುಧ್ಯ Read Post »

You cannot copy content of this page

Scroll to Top