ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೇಗಿಲು ಹೆಗಲು ಬದಲಾಗಿ

ಕಾವ್ಯ ಸಂಗಾತಿ ನೇಗಿಲು ಹೆಗಲು ಬದಲಾಗಿ ಮೋಹನ.ವಿ.ಹೊಸೂರ ಯಾರ ಬೀಜವೊಇನ್ನಾರದೋ ಗರ್ಭದಲಿಬಿತ್ತಿದ ಪರಿಯಲಿ ಸೇರಿಎಲ್ಲೋ ಇದ್ದವರು ನಾವುಮೊಳೆತು ಹೂ ಮಗುವಾಗರಳಿ ಹುಟ್ಟಿಸಿದ ಕಾರಣಕೆತಂದೆ ತಾಯಿ ಎನಿಸಿದವರಮಗುವಾಗಿ ಬೆಳೆದು ಆರೈಕೆಯಲಿಅರ್ಥ ಪೂರ್ಣ ಬದುಕು ಎಲ್ಲ ಸೇರಿನಮ್ಮದು ಒಂದೇ ಸಂಸಾರವಾಗಿ ಎಲ್ಲವೂ ನಾನುನನ್ನದೆಂಬ ಅಪ್ಯಾಯಮಾನದಲಿಬೆಳೆದು ನಲಿ ನಲಿದುಬಲಿತು ಮತ್ತೆ ಬೀಜವಾಗಿಇನ್ನಾರದೋ ಗರ್ಭದಲಿ ಮೊಳೆತುಇನ್ನೊಂದು ಜೀವಕೆ ಜೀವ ತುಂಬಿಧಾರೆಯೆರೆದು ಹೆಗಲ ನೊಗನೇಗಿಲು ಹೆಗಲು ಬದಲಾಗಿ ಬ್ಯಾಟನ್ ಒಪ್ಪಿಸಿ ರಿಲೇ ಆಟದ ರೀತಿನಾನು ನನ್ನದೆಂಬೆಲ್ಲವನೂ ಕೊಟ್ಟು ಬಿಟ್ಟುಕೋ ಕೋ ಆಟದಲಿ ಮುಟ್ಟಿ ಓಡುವ ನೀತಿಓಟ ಕೀಳೋ ಪರಿ ವಿಸ್ಮಯದಂತೆ ಬದುಕು

ನೇಗಿಲು ಹೆಗಲು ಬದಲಾಗಿ Read Post »

ಕಾವ್ಯಯಾನ

ಜೇನು ನುಡಿ

ಕಾವ್ಯ ಸಂಗಾತಿ ಜೇನು ನುಡಿ ಶ್ರೀನಿವಾಸ ಜಾಲವಾದಿ ಜೇನು ನುಡಿಯಾ ಒಡತಿ ನಮ್ಮತಾಯಿ ನಾಡದೇವಿ ಕನ್ನಡಾಂಬೆ ! ಜಗದ ಸುಂದರ ನುಡಿಯು ಕನ್ನಡಚಂದ್ರನ ಬೆಳದಿಂಗಳ ಕಾಂತಿಯಿದಕೆನಗುವ ಸಿರಿಮೊಗವೀ ಚೆನ್ನುಡಿಯುತಾಯಿ ಮೊಗವ ಸಿರಿ ಈ ಹೊನ್ನುಡಿ! ಕಾವ್ಯ ಗದ್ಯ ಕಥೆ ನೀಳ್ಗತೆ ಜಡೆಯುಹಣೆ ಬೊಟ್ಟೇ ಇವಳ ಹನಿಗವನವುಬೆಳ್ಳನೆ ದಂತಪಂಕ್ತಿಯೇ ನಾಟ್ಯಶಾಸ್ತ್ರಅವಳ ಸುಂದರ ನಗೆ ಮಹಾಕಾವ್ಯ ! ಸರ್ವ ಜನಾಂಗದ ಶಾಂತಿ ಮಂತ್ರದಸಾಮರಸ್ಯದ ನಡೆಯ ಭುವನೇಶ್ವರಿಜೀವಜಲ ರಾಶಿಗಳ ಕಾಯ್ವ ದೇವಿನೀನೇ ನಮ್ಮ ನಿಜ ತಾಯಿ ಎಂದಿಗೂ ಕನ್ನಡವೇ ಹೊನ್ನುಡಿ ಕನ್ನಡವೇ ಸತ್ಯಕನ್ನಡವೇ ಚೆನ್ನುಡಿ ಕನ್ನಡಾಮೃತವು

ಜೇನು ನುಡಿ Read Post »

You cannot copy content of this page

Scroll to Top