ಡಾ ಸಾವಿತ್ರಿ ಕಮಲಾಪೂರ “ಮಾರ್ಧನಿ”
ಕಾವ್ಯ ಸಂಗಾತಿ ಡಾ ಸಾವಿತ್ರಿ ಕಮಲಾಪೂರ “ಮಾರ್ಧನಿ” ಅಂದು ಇದೇ ಹಾದಿಯಲ್ಲಿಬೆಂದ ಕಾಲುಗಳುಬಸವಳಿದು ರೋಧಿಸಿದವುದಿಕ್ಕು ದಿಕ್ಕಿಗೂ ಕೂಗಿ ಕರೆದ ಧ್ವನಿಮರಳಿ ಬಂದಿತುನನ್ನದೇ ಕನಸುಗಳ ಹಾದಿಗೆಸಂತಸದ ದಿನಗಳನ್ನು ಮೆಲುಕು ಹಾಕುತ್ತಾ ಅಂತರಾತ್ಮದ ಅರಿವಿನ ಪ್ರಜ್ಞೆಗೆಮೂಕ ಸಾಕ್ಷಿಯಾಗಿಕಂಗಳಲ್ಲಿ ತುಂಬಿದ ಕನಸುಗಳಿಗೆಸೋತು ಹೋಗಿದ್ದೇನೆದುಡಿದು ಸವೆಸಿದ ಹಾದಿಗೆ ಹಸಿರುಕ್ರಾಂತಿಯ ಹರಿಕಾರಬಾಬು ಜಗಜ್ಜೀವನರಾಮ್ ನೆಹರು ಭೋಸರ ಅಂತರಾತ್ಮದಸ್ವಾತಂತ್ರ್ಯದ ಕಿಚ್ಚಿನ ರಕುತದಕಲೆಗಳು ಮಾಯವಾಗಿಲ್ಲ ಮಾಯದ ಜಿಂಕೆ ಬೆನ್ನತ್ತಿದರಾವಣನ ಅರಿ ರಾಮನರಾಮರಾಜ್ಯದ ಪರಿಕಲ್ಪನೆಮಹಾತ್ಮಾ ಗಾಂಧೀಜಿಯಕನಸು ನನಸಾಗಲೇ ಇಲ್ಲ ಸುಡುವ ಕಾಲು ನೆಲದಲ್ಲಿತಂಪು ತಂಗಾಳಿ ಸೂಸಿದಚಳಿ ಮಳೆ ಗಾಳಿ ಬಿಸಿಲಿಗೆಬೆವರು ಸುರಿಸಿದ ಕಂಗಳುಇನ್ನೂ ಸಂತಸ ಕಂಡಿಲ್ಲಸಂತರು ಶರಣರು ದಾಸರುಇದೆ ಹಾದಿಯಲ್ಲಿ ನಡೆದು ಹೋದಹೆಜ್ಜೆ ಗುರುತು ಪಾದಗಳ ಪೋಟೋನಮ್ಮ ನಮ್ಮ ಜಗುಲಿಯ ಮೇಲೆಹಾಗೇ ಕುಳಿತುಕೊಂಡುರಾರಾಜಿಸುತ್ತಿವೆ ನಮ್ಮದೇ ಕಟ್ಟೆಯೊಳಗೆ ಬಂಧಿಸಿ ಪರದೆಯೊಳಗೆ ಮಡಿ ಮಾಡಿ ಶೋಷಣೆಯ ಸುಲಿಗೆಯೊಳಗೆ ಬಂದಿಖಾನೆ ಆಗಿದ್ದಾವೆನಮ್ಮ ನಮ್ಮ ದೇವರುಗಳು ನಾಡು ಸಮತೆಯ ಗೂಡುಹುಡುಕುತ್ತಿರುವೆಅಲ್ಲಿ ಇಲ್ಲಿ ಬಸವಣ್ಣ ಬುದ್ಧ ಗಾಂಧಿಯ ಪೋಟೋಗಳ ಮೇಲೆಕುಳಿತ ಧೂಳು ವರೆಸುತ್ತ ಕಣ್ಣಗಲ ಮಾಡಿ ವರುಷಕ್ಕೊಮ್ಮೆತಳಿರು ತೋರಣ ಕಟ್ಟಿಸಿಂಗರಿಸಿ ಧ್ವಜವು ಹಾರಿಸಿಜೈಕಾರ ಕೂಗುವ ನಮ್ಮೆದೆಯಗಟ್ಟಿ ಕೂಗಿಗೆ ಎಚ್ಚರಗೊಳ್ಳಲಿಲ್ಲ ನಾಡು ತೆಂಗು ಬಾಳೆ ಶ್ರೀಗಂಧದ ಬೀಡುಅನೇಕ ಗುಡಿ ಗೋಪುರ ದೊಳಗೆಬಚ್ಚಿಕೊಂಡು ತಿರುಗುವಅಲೆಮಾರಿಯಂತೆನಮ್ಮ ನಮ್ಮ ಬದುಕುಎಲ್ಲಿಂದ ? ಬರಬೇಕುಸಮ ಸಮಾಜದ ಪರಿಕಲ್ಪನೆಇದು ನಮ್ಮ ಭ್ರಮೆ ಎನ್ನಲೇ? —————ಡಾ ಸಾವಿತ್ರಿ ಕಮಲಾಪೂರ
ಡಾ ಸಾವಿತ್ರಿ ಕಮಲಾಪೂರ “ಮಾರ್ಧನಿ” Read Post »









