ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ,”ಮನದಾಳದ ಮೌನ”
ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಮನದಾಳದ ಮೌನ” ಕನಸುಗಳನ್ನು ಮಾರಿದ್ದೇನೆ ಆದರೆ ಕೊಳ್ಳುವವರಿಲ್ಲಮೂಕವಾಗಿ ರೋದಿಸುತ್ತಿದೆ ಮನ ಸಾಂತ್ವಾನ ಹೇಳುವವರಿಲ್ಲನನ್ನೊಡಲು ಬರಿದಾಗಿದೆ ಹೇಗೆಂದು ಅರ್ಥೈಸಲಾಗುತ್ತಿಲ್ಲ.ಜಗತ್ತಿನ ನಿಯತ್ತಿನ ಬಾಗಿಲು ತೆರೆಯುತ್ತಿದೆ ಯಾರಿಗೆ ಯಾರಿಲ್ಲ ಎಂಬುದು ಒಳ ಮನಸು ಕೇಳುತ್ತಿದೆ. ಎಲ್ಲವ ತಿಳಿಯುವುದು ತಡವಾಗಿದೆಆದರೂ ಬದುಕಲ್ಲಿ ಬದುಕುವ ಆಸೆ ಅವಮಾನಿಸಿದವರ ಮುಂದೆಅಭಿಮಾನದಿಂದ ಬೆಳೆವ ಬಯಕೆ ಚಿಗುರೋಡೆಯುತ್ತಿದೆ.ಕರ್ತವ್ಯ ನಿಭಾಯಿಸುವ ಭರದಲ್ಲಿ ದೇಹದ ಶಕ್ತಿ ಕುಂದುತ್ತಿದೆ ಆತ್ಮದಲ್ಲಿ ನೀನಿನ್ನು ಜೀವಂತ ವಾಗಿರುವೆ ಫಿನಿಕ್ಸ್ ಹಕ್ಕಿಯಂತೆಮರುಜನ್ಮ ಪಡೆಯುವ ಹೊಸ ಬಾಳಿನ ಹೊಂಗನಸಿನತ್ತ ವಾಸ್ತವತೆಯ ಲೋಕದಲಿನಿನ್ನ ಅಳಲು ಕೇಳುವವರಿಲ್ಲನಿನ್ನೊಲವು ಬೇಕಿಲ್ಲ ಯಾರಿಗೂಬರಡು ಭೂಮಿಯಂತಿರದೇಹೊಸತನದ ಹೊಸತರಲ್ಲಿ ಬದುಕಾಗಲಿ ಹಸನು ಹೊಸ ಹೂಗಳ ಚೆಲುವಂತೆ ಅರಳಲಿ ದಿಟ್ಟತನ ಸವೆಸಿದ ಕೆಟ್ಟ ಘಟನೆಗಳ ದಾರಿ ಮರೆತುಹೊಂಗಿರಣಗಳ ಬೆಳಕಾಗಲಿ ಮಧುರತೆಯ ಜೀವನ“ಓ ಹೃದಯವೇ ನೀ ಪರರಿಗಾಗಿ ಮಿಡಿದು ಸೋತಿರುವೆ ಕ್ಷಮಿಸಿ ಬಿಡು ನನ್ನನ್ನು “……. ನನಗಾಗಿ ನೀ ಮಿಡಿಯುತ್ತಿರು ಎಂದೆಂದಿಗೂ ನೀ ನಿಲ್ಲುವವರೆಗೂ……. ಲತಾ ಎ ಆರ್ ಬಾಳೆಹೊನ್ನೂರು
ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ,”ಮನದಾಳದ ಮೌನ” Read Post »









